ಕುದ್ಮಾರು ಶಾಲೆಗೆ ಬೋಳಾಸ್‌ ಸಂಸ್ಥೆಯಿಂದ ಬೋರ್‌ವೆಲ್‌ – ನೀರಿನ ಟ್ಯಾಂಕ್‌ ಕೊಡುಗೆ | 4 ಲಕ್ಷ ರೂ. ವೆಚ್ಚದ ಯೋಜನೆಗೆ ಅನುದಾನ

ಪುತ್ತೂರು : ಗೇರು ಹಾಗೂ ಡ್ರೈಫ್ರೂಟ್ಸ್‌ ಉದ್ಯಮದಲ್ಲಿ ಪ್ರಸಿದ್ಧಿ ಪಡೆದಿರುವ ಬೋಳಾಸ್‌ ಸಂಸ್ಥೆಯು ಕುದ್ಮಾರು ಹಿರಿಯ ಪ್ರಾಥಮಿಕ ಶಾಲೆಗೆ ಬೋರ್‌ವೆಲ್‌ ಹಾಗೂ ನೀರಿನ ಟ್ಯಾಂಕ್‌ ಅನ್ನು ಕೊಡುಗೆಯಾಗಿ ನೀಡಿದೆ. ಪತ್ರಕರ್ತ, ಕುದ್ಮಾರು ಶಾಲಾ ಹಿರಿಯ ವಿದ್ಯಾರ್ಥಿ ರಾಮಚಂದ್ರ ಬರೆಪ್ಪಾಡಿ ಅವರ ಮನವಿ ಮೇರೆಗೆ ಬೋಳಾಸ್‌ ಆಗ್ರೋ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯ ನಿರ್ದೇಶಕ ದಾಮೋದರ್‌ ಕಾಮತ್‌ ಅವರು ಬೋರ್‌ವೆಲ್‌ ಹಾಗೂ ನೀರಿನ ಟ್ಯಾಂಕ್‌ ನಿರ್ಮಾಣಕ್ಕಾಗಿ ಒಟ್ಟು 4 ಲಕ್ಷ ರೂ. ಅನುದಾನ ಒದಗಿಸಿರುತ್ತಾರೆ. ಬೋಳಾಸ್‌ ಬಗ್ಗೆ 1958ರಲ್ಲಿ ಕಾರ್ಕಳದಲ್ಲಿ […]

ಕುದ್ಮಾರು ಶಾಲೆಗೆ ಬೋಳಾಸ್‌ ಸಂಸ್ಥೆಯಿಂದ ಬೋರ್‌ವೆಲ್‌ – ನೀರಿನ ಟ್ಯಾಂಕ್‌ ಕೊಡುಗೆ | 4 ಲಕ್ಷ ರೂ. ವೆಚ್ಚದ ಯೋಜನೆಗೆ ಅನುದಾನ Read More »

ಸರಿಗಮಪ ಸೀಸನ್ 20ಕ್ಕೆ ಪುತ್ತೂರಿನ ಸಮನ್ವಿ ರೈ ಮದಕ ಆಯ್ಕೆ

ಪುತ್ತೂರು: ಝೀ ಕನ್ನಡ ವಾಹಿನಿಯ ಸರಿಗಮಪ ಸೀಸನ್ 20ಕ್ಕೆ ಪುತ್ತೂರಿನ ಸಮನ್ವಿ ರೈ ಮದಕ ಆಯ್ಕೆಯಾಗಿದ್ದಾರೆ. ಎಪಿಸೋಡ್ ಅಕ್ಟೋಬರ್ 7ರಿಂದ ರಾತ್ರಿ 7.30ಕ್ಕೆ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ರಾಜ್ಯದ ಪ್ರಸಿದ್ಧ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ ಸರಿಗಮಪದಲ್ಲಿ ಭಾಗವಹಿಸಲು ಹಲವಾರು ಪ್ರತಿಭಾನ್ವಿತರು ತುದಿಗಾಲಲ್ಲಿ ನಿಂತಿದ್ದಾರೆ. ಇತ್ತೀಚೆಗೆ ಸರಿಗಮಪ ಸೀಸನ್ 20ರ ಆಡಿಷನ್’ನಲ್ಲಿ ದೇಶ- ವಿದೇಶಗಳ ಲಕ್ಷಕ್ಕೂ ಮಿಕ್ಕಿ ಸ್ಪರ್ಧಿಗಳು ಭಾಗವಹಿಸಿದ್ದರು. ಇದರಲ್ಲಿ ಮೆಗಾ ಆಡಿಷನ್’ಗೆ 40 ಮಂದಿಯನ್ನು ಆಯ್ಕೆ ಮಾಡಲಾಗಿತ್ತು. 40 ಮಂದಿಯಲ್ಲಿ ಅಂತಿಮ ಸ್ಪರ್ಧೆಗೆ 20

ಸರಿಗಮಪ ಸೀಸನ್ 20ಕ್ಕೆ ಪುತ್ತೂರಿನ ಸಮನ್ವಿ ರೈ ಮದಕ ಆಯ್ಕೆ Read More »

ಮೂಡಬಿದ್ರೆ ಆಳ್ವಾಸ್ ನಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಪುತ್ತೂರಿನಿಂದ 350 ಮಂದಿ ಭಾಗಿ | ರೈ ಎಸ್ಟೇಟ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್’ನಿಂದ ಬಸ್ ವ್ಯವಸ್ಥೆ

ಪುತ್ತೂರು: ಮೂಡಬಿದ್ರೆ ಆಳ್ವಾಸ್‍ನಲ್ಲಿ ಶುಕ್ರವಾರ ನಡೆದ ಉದ್ಯೋಗ ಮೇಳಕ್ಕೆ ಪುತ್ತೂರಿನಿಂದ ಸುಮಾರು 350 ಮಂದಿ ಉದ್ಯೋಗಾಕಾಂಕ್ಷಿಗಳು ತೆರಳಿದ್ದಾರೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದ ಪುತ್ತೂರು ರೈ ಎಸ್ಟೇಟ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ಮೂಲಕ ಪುತ್ತೂರಿನ ಜನತೆಗೆ ಉದ್ಯೋಗ ಮೇಳಕ್ಕೆ ತೆರಳಲು ವಾಹನದ ವ್ಯವಸ್ಥೆ ಮಾಡಲಾಗಿತ್ತು. ಪುತ್ತೂರು ಶಾಸಕರ ಟ್ರಸ್ಟ್ ಮೂಲಕ ನಿರಂತರ ಉದ್ಯೋಗ ತರಬೇತಿ ಆಯೋಜನೆ; ಸುದೇಶ್ ಶೆಟ್ಟಿ ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ ಶಾಂತಿನಗರ ಮಾತನಾಡಿ, ರೈ ಎಸ್ಟೇಟ್ ಎಜುಕೇಶನಲ್ ಆಂಡ್

ಮೂಡಬಿದ್ರೆ ಆಳ್ವಾಸ್ ನಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಪುತ್ತೂರಿನಿಂದ 350 ಮಂದಿ ಭಾಗಿ | ರೈ ಎಸ್ಟೇಟ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್’ನಿಂದ ಬಸ್ ವ್ಯವಸ್ಥೆ Read More »

ಪ್ರಶಾಂತ್ ಭಟ್ ಮಾಣಿಲ ಪೊಲೀಸ್ ಕಸ್ಟಡಿಗೆ | ಲಾಡ್ಜ್’ಗೆ ಕರೆದೊಯ್ದು ಮಹಜರು ನಡೆಸಿದ ಪೊಲೀಸರು!

ಶಿರಸಿ: ಗೃಹಿಣಿಗೆ ಆಮಿಷವೊಡ್ಡಿ ಬಲಾತ್ಕಾರ ಮಾಡಿದ ಪ್ರಕರಣದಲ್ಲಿ ಬಂಧಿತನಾಗಿರುವ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಮಾಜಿ ಸದಸ್ಯ, ದೇವಸ್ಥಾನದ ಹಿತರಕ್ಷಣಾ ವೇದಿಕೆ ಸದಸ್ಯ ಪ್ರಶಾಂತ್ ಭಟ್ ಮಾಣಿಲ ಅವರನ್ನು ಗುರುವಾರ ಕಾರವಾರ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿತು. ನ್ಯಾಯಾಲಯದ ಆದೇಶ ಪಡೆದುಕೊಂಡ ಪೊಲೀಸರು, ಶಿರಸಿ ಅಲೇಖಾ ಗೇಟ್ ವೇ ಲಾಡ್ಜ್’ಗೆ ಕರೆದೊಯ್ದು ಪರಿಶೀಲನೆ ನಡೆಸಲಾಯಿತು. ಆರ್ಕೆಸ್ಟ್ರಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ, ವಿವಾಹಿತ ಮಹಿಳೆಯನ್ನು ಲಾಡ್ಜ್’ಗೆ ಕರೆಸಿಕೊಂಡು ಬಲಾತ್ಕಾರ ಮಾಡಿದ್ದ ಎಂದು

ಪ್ರಶಾಂತ್ ಭಟ್ ಮಾಣಿಲ ಪೊಲೀಸ್ ಕಸ್ಟಡಿಗೆ | ಲಾಡ್ಜ್’ಗೆ ಕರೆದೊಯ್ದು ಮಹಜರು ನಡೆಸಿದ ಪೊಲೀಸರು! Read More »

ಧರ್ಮಸ್ಥಳ ಅಕ್ಕಿ ಮಿಲ್’ನ ಸಿಬ್ಬಂದಿ ಸಾವು: ಆತ್ಮಹತ್ಯೆಯೆಂದು ವರದಿ | ಕೊಪ್ಪರಿಗೆಗೆ ಹಾರಿ ಆತ್ಮಹತ್ಯೆ ಸಾಧ್ಯವೇ? ಸ್ಥಳೀಯರ ಸಂಶಯ

ಧರ್ಮಸ್ಥಳ: ಧರ್ಮಸ್ಥಳ ನಿವಾಸಿ, ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಂಬಂಧಿಸಿದ ಅಕ್ಕಿ ಮಿಲ್ ಉದ್ಯೋಗಿ ಕೃಷ್ಣ ಗಾಣಿಗ (ಕಿಟ್ಟ) ಸೆಪ್ಟೆಂಬರ್ 3ರಂದು ಅಸಹಜವಾಗಿ ಮೃತಪಟ್ಟಿದ್ದು, ಒಂದು ತಿಂಗಳ ಬಳಿಕ ವರದಿ ಬಹಿರಂಗವಾಗಿದೆ. ಪಾತ್ರೆ ಮಾದರಿಯ ಕೊಪ್ಪರಿಗೆಗೆ ಮುಳುಗಿ ಕೃಷ್ಣ ಗಾಣಿಗ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಸೊಂಟದ ಮಟ್ಟಕ್ಕೆ ಇರುವ ಕೊಪ್ಪರಿಗೆಗೆ ಬಿದ್ದು ಸಾಯುವುದಾದರೂ ಹೇಗೆ ಎಂಬ ಪ್ರಶ್ನೆ ಇದೀಗ ಕೇಳಿಬರತೊಡಗಿದೆ. ಒಟ್ಟಿನಲ್ಲಿ ಕೃಷ್ಣ ಗಾಣಿಗ ಅವರ ಸಾವಿನ ಸುತ್ತ ಹಲವು ಸಂಶಯಗಳು ವ್ಯಕ್ತವಾಗತೊಡಗಿದೆ. ಘಟನೆ ನಡೆದ

ಧರ್ಮಸ್ಥಳ ಅಕ್ಕಿ ಮಿಲ್’ನ ಸಿಬ್ಬಂದಿ ಸಾವು: ಆತ್ಮಹತ್ಯೆಯೆಂದು ವರದಿ | ಕೊಪ್ಪರಿಗೆಗೆ ಹಾರಿ ಆತ್ಮಹತ್ಯೆ ಸಾಧ್ಯವೇ? ಸ್ಥಳೀಯರ ಸಂಶಯ Read More »

ರಾಗಿಗುಡ್ಡಕ್ಕೆ ಅರುಣ್ ಕುಮಾರ್ ಪುತ್ತಿಲ ತಂಡ ಭೇಟಿ: ಸಂತ್ರಸ್ತ ಕುಟುಂಬಗಳಿಗೆ ಸಾಂತ್ವಾನ

ತೀರ್ಥಹಳ್ಳಿ: ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಹಿಂಸಾಚಾರದ ಪ್ರದೇಶಗಳಿಗೆ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ನೇತೃತ್ವದ ತಂಡ ಭೇಟಿ ನೀಡಿತು. ಈದ್ ಮಿಲಾದ್ ಹಬ್ಬ ಆಚರಣೆ ಸಂದರ್ಭ ಕಲ್ಲುತೂರಾಟ ನಡೆಸಿ, ನೂರಾರು ಮನೆಗಳಿಗೆ ಹಾನಿ ಉಂಟು ಮಾಡಲಾಗಿತ್ತು. ಈ ಘಟನೆ ರಾಜ್ಯಾದ್ಯಂತ ಸುದ್ದಿಯಾಗಿದ್ದು, ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಪ್ರಕರಣದ ಹಿನ್ನೆಲೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಹಾಗೂ ಅವರ ತಂಡ ಭೇಟಿ ನೀಡಿ, ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಈ ಸಂದರ್ಭ ರಾಗಿಗುಡ್ಡದ ಲಕ್ಷ್ಮೀ ಎಂಬವರು ತನ್ನ ತಾಳಿ

ರಾಗಿಗುಡ್ಡಕ್ಕೆ ಅರುಣ್ ಕುಮಾರ್ ಪುತ್ತಿಲ ತಂಡ ಭೇಟಿ: ಸಂತ್ರಸ್ತ ಕುಟುಂಬಗಳಿಗೆ ಸಾಂತ್ವಾನ Read More »

ಜ್ವರ ಉಲ್ಭಣ: ರಿತೇಶ್ ಡಿಸೋಜ ಮೃತ್ಯು

ಪುಣಚ: ಜ್ವರ ಉಲ್ಬಣಗೊಂಡು ಪುಣಚ ಬೈಲುಪಾದೆಯ ಯುವಕನೋರ್ವ ಮೃತಪಟ್ಟ ಘಟನೆ ನಡೆದಿದೆ. ಬೈಲುಪಾದೆ ಲಿಯೋ ಡಿಸೋಜರವರ ಮಗ ರಿತೇಶ್ ಡಿಸೋಜ (31 ವ.) ಮೃತಪಟ್ಟ ಯುವಕ. ಅವಿವಾಹಿತರಾಗಿದ್ದ ರಿತೇಶ್ ಡಿಸೋಜ ಅವರಿಗೆ ಸೆ. 30ರಂದು ಸ್ವಲ್ಪ ಜ್ವರ ಕಾಣಿಸಿಕೊಂಡಿದ್ದರಿoದ ಸ್ಥಳಿಯ ಆಸ್ಪತ್ರೆಯಲ್ಲಿ ಮದ್ದು ಮಾಡಿದ್ದರು. ಆದರೂ ಜ್ವರ ಕಡಿಮೆಯಾಗಿರಲಿಲ್ಲ. ಅ. 4ರಂದು ಬೆಳಿಗ್ಗೆ 5 ಗಂಟೆಯ ಸಮಯಕ್ಕೆ ಅವರಿಗೆ ತೀವ್ರ ಜ್ವರ ಉಲ್ಬಣಗೊಂಡಿದ್ದು ಮಂಗಳೂರು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ರಿತೇಶ್

ಜ್ವರ ಉಲ್ಭಣ: ರಿತೇಶ್ ಡಿಸೋಜ ಮೃತ್ಯು Read More »

ಜೈಲಿನಲ್ಲಿ ಬಂಧಿಯಾಗಿರುವ ಇರಾನಿನ ನರ್ಗೆಸ್ ಮೊಹಮ್ಮದಿಗೆ ನೊಬೆಲ್ ಶಾಂತಿ ಪ್ರಶಸ್ತಿ!

ಸ್ಟಾಕ್ ಹೋಮ್: ಇರಾನ್‌ನಲ್ಲಿ ಮಹಿಳೆಯರ ಮೇಲಿನ ದಬ್ಬಾಳಿಕೆ, ಮಾನವ ಹಕ್ಕುಗಳು ಮತ್ತು ಎಲ್ಲರ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ನರ್ಗೆಸ್ ಮೊಹಮ್ಮದಿ ಅವರಿಗೆ 2023ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿದೆ. ನರ್ಗೆಸ್ ಮೊಹಮ್ಮದಿ ಮಹಿಳಾ ಮತ್ತು ಮಾನವ ಹಕ್ಕುಗಳ ಪರ ವಕೀಲೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾಗಿದ್ದಾರೆ. ಈ ವರ್ಷದ ಶಾಂತಿ ಪ್ರಶಸ್ತಿಯು ಮಹಿಳೆಯರನ್ನು ಗುರಿಯಾಗಿಸುವ ತಾರತಮ್ಯ ಮತ್ತು ದಬ್ಬಾಳಿಕೆಯ ಪ್ರಭುತ್ವದ ಆಡಳಿತದ ನೀತಿಗಳ ವಿರುದ್ಧ ಪ್ರದರ್ಶಿಸಿದ ಲಕ್ಷಾಂತರ ಜನರನ್ನು ಗುರುತಿಸುತ್ತದೆ ಎಂದು ನೊಬೆಲ್ ಸಮಿತಿಯು ಹೇಳಿದೆ. ಅಪಾರವಾದ ವೈಯಕ್ತಿಕ

ಜೈಲಿನಲ್ಲಿ ಬಂಧಿಯಾಗಿರುವ ಇರಾನಿನ ನರ್ಗೆಸ್ ಮೊಹಮ್ಮದಿಗೆ ನೊಬೆಲ್ ಶಾಂತಿ ಪ್ರಶಸ್ತಿ! Read More »

ಹಿಂದೂ ಶೌರ್ಯ ಸಂಗಮ: ವಾಹನ ಪಾರ್ಕಿಂಗ್ ವ್ಯವಸ್ಥೆ ಹೀಗಿರಲಿದೆ

ಪುತ್ತೂರು: ಹಿಂದೂ ಶೌರ್ಯ ಸಂಗಮ, ಹಿಂದೂ ಶೌರ್ಯ ಜಾಗರಣಾ ರಥಯಾತ್ರೆಗೆ ಆಗಮಿಸುವವರಿಗೆ ವಾಹನ ಪಾರ್ಕ್ ಮಾಡಲು ಸ್ಥಳ ಸೂಚಿಸಲಾಗಿದೆ. ಪಾಣಾಜೆ, ಕುಂಬ್ರ, ನರಿಮೊಗರು ಭಾಗದಿಂದ ಬರುವ ವಾಹನಗಳು ಮಹಾಲಿಂಗೇಶ್ವರ ದೇವಸ್ಥಾನ ಗದ್ದೆಯಲ್ಲಿ ಮತ್ತು ಉಪ್ಪಿನಂಗಡಿ, ಕಬಕ ಭಾಗದಿಂದ ಬರುವ ವಾಹನಗಳು ಹಾರಾಡಿ ರೈಲ್ವೇ ಸೇತುವೆ ಬಳಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಹಿಂದೂ ಶೌರ್ಯ ಜಾಗರಣ ರಥ ಯಾತ್ರೆ ಸ್ವಾಗತ ಸಮಿತಿ ವಿನಂತಿಸಿದೆ.ವಿಶ್ವ ಹಿಂದೂ ಪರಿಷತ್ 60ನೇ ಷಷ್ಟ್ಯಬ್ದದ ಅಂಗವಾಗಿ ನಾಳೆ ಪುತ್ತೂರಿನಲ್ಲಿ ಹಿಂದೂ ಶೌರ್ಯ ಜಾಗರಣ

ಹಿಂದೂ ಶೌರ್ಯ ಸಂಗಮ: ವಾಹನ ಪಾರ್ಕಿಂಗ್ ವ್ಯವಸ್ಥೆ ಹೀಗಿರಲಿದೆ Read More »

ರೆಪೊ ದರದಲ್ಲಿ ಯಥಾಸ್ಥಿತಿ | ಗೃಹ, ವಾಹನ ಸಾಲದ ಇಎಂಐ ಗ್ರಾಹಕರಿಗೆ ಸಿಹಿಸುದ್ದಿ

ಮುಂಬೈ: ಆರ್.ಬಿ.ಐ.ನ ಹಣಕಾಸು ನೀತಿ ಸಮಿತಿಯೂ ಸತತ ನಾಲ್ಕನೇ ತಿಂಗಳಿನಲ್ಲಿಯೂ ಶೇ. 6.5ರ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶುಕ್ರವಾರ ತಿಳಿಸಿದೆ. ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದ್ದರಿಂದ ಗೃಹ ಹಾಗೂ ವಾಹನ ಸಾಲದ ಇಎಂಐ ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ. ಮಧ್ಯಮ ಆರ್ಥಿಕ ಸ್ಥಿರತೆ ಮತ್ತು ಆರ್ಥಿಕ ಬೆಳವಣಿಗೆ ಬಗ್ಗೆ ನಿಗಾ ಇರಿಸಿದ್ದು, ಹಣದುಬ್ಬರವನ್ನು ಪರಿಶೀಲಿಸಲಾಗುತ್ತಿದೆ ಎಂದು ಆರ್.ಬಿ.ಐ. ಗವರ್ನರ್ ಶಕ್ತಿಕಾಂತ್ ದಾಸ್

ರೆಪೊ ದರದಲ್ಲಿ ಯಥಾಸ್ಥಿತಿ | ಗೃಹ, ವಾಹನ ಸಾಲದ ಇಎಂಐ ಗ್ರಾಹಕರಿಗೆ ಸಿಹಿಸುದ್ದಿ Read More »

error: Content is protected !!
Scroll to Top