ಅಧಿಕಾರ ಇಟ್ಟುಕೊಂಡು ದಿನ ದೂಡುವ ಕಾರ್ಯ ಸಲ್ಲದು | ಒಳಚರಂಡಿ, ಜಲಸಿರಿ ಯೋಜನೆ ಕುರಿತು ಅಧಿಕಾರಿಗಳ ಸಭೆಯಲ್ಲಿ ಶಾಸಕ ಅಶೋಕ್ ರೈ
ಪುತ್ತೂರು: ಪುತ್ತೂರಿನ ಅಭಿವೃದ್ಧಿ ದೃಷ್ಟಿಯಿಂದ ಭೂಸ್ವಾಧೀನ ಅಗತ್ಯವಿದ್ದರೆ ಅದರ ಮಾಹಿತಿಯನ್ನು ಅಧಿಕಾರಿಗಳು ನೀಡಬೇಕು. 100 ಕೋಟಿ ರೂ. ಹೆಚ್ಚುವರಿ ಅನುದಾನ ಇಡುವ ಕಾರ್ಯವನ್ನು ಸರಕಾರ ಮಾಡಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಅವರು ಶನಿವಾರ ಒಳಚರಂಡಿ ಹಾಗೂ ಜಲಸಿರಿ ಯೋಜನೆಯ ಕುರಿತು ನಗರಸಭೆ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಅಧಿಕಾರ ಇದ್ದೂ ದಿನ ದೂಡುವ ಹಾಗಾಗಬಾರದು. ಅದರ ಬದಲು ಅಭಿವೃದ್ಧಿ ಕಾರ್ಯವನ್ನು ಮಾಡಿ ತೋರಿಸಬೇಕು. ಪುತ್ತೂರಿನಲ್ಲಿ ಯುಜಿಡಿ ಇಲ್ಲದ ಕಾರಣ ಬಾವಿಗಳ ನೀರು […]










