ಐವರ ಸಾಮೂಹಿಕ ಆತ್ಮಹತ್ಯೆಯ ಹಿಂದೆ ಬಡ್ಡಿ ದಂಧೆಯ ನೆರಳು!! | “ಇವರ ಕಾಟಕ್ಕೆ ನಮ್ಮ ಪ್ರಾಣ ಕೊಟ್ಟಿದ್ದೇವೆ”- ಡೆತ್ ನೋಟ್’ನಲ್ಲಿವೆ ಇನ್ನೂ ಹಲವು ವಿಚಾರಗಳು!!
ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಶರಣಾದ ಘಟನೆ ಭಾನುವಾರ ತುಮಕೂರಿನ ಸದಾಶಿವ ನಗರದಲ್ಲಿ ನಡೆದಿದ್ದು, ಇದೀಗ ಆತ್ಮಹತ್ಯೆಯ ಹಿಂದಿನ ಒಂದೊಂದೇ ಘಟನೆಗಳು ಹೊರಬರುತ್ತಿದೆ. ಅಲ್ಲದೇ, ಆತ್ಮಹತ್ಯೆಯ ಹಿಂದೆ ಬಡ್ಡಿ ದಂಧೆಯ ಕರಾಳತೆಯೂ ಇದೆ ಎಂಬ ಅನುಮಾನಗಳು ಮೂಡಿವೆ. ಗರೀಬ್ ಸಾಬ್, ಸುಮಯ್ಯ, ಹಾಜಿರಾ, ಮೊಹಮ್ಮದ್ ಸುಭಾನ್, ಮೊಹಮ್ಮದ್ ಮುನೀರ್ ಆತ್ಮಹತ್ಯೆ ಮಾಡಿಕೊಂಡವರು ಎಂದು ತಿಳಿದು ಬಂದಿದೆ. ಸಾವಿಗೂ ಮುನ್ನ ಗರೀಬ್ ಸಾಬ್ ಅವರು ತನ್ನ ದೊಡ್ಡಮ್ಮನಿಗೆ ಡೆತ್ ನೋಟ್ ಬರೆದಿದ್ದಾರೆ. ದೊಡ್ಡಮ್ಮನಿಗೆ ನಮಸ್ಕಾರಗಳು. ನಮಗೆ ಸಾಲ ಹೆಚ್ಚಾಗಿದೆ. […]










