ಮುಸುಕುಧಾರಿಗಳಿಂದ ಆಭರಣ ಮಳಿಗೆಗೆ ನುಗ್ಗಲು ವಿಫಲ ಯತ್ನ!

ಕುಂದಾಪುರ: ಮುಸುಕುಧಾರಿ ದರೋಡೆಕೋರರ ತಂಡವೊಂದು ಶುಕ್ರವಾರ ತಡರಾತ್ರಿ ತೆಕ್ಕಟ್ಟೆ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರ ಶಾನುಭೋಗ್ ಕಾಂಪ್ಲೆಕ್ಸ್ ನಲ್ಲಿರುವ ಆಭರಣ ಮಳಿಗೆಗೆ ನುಗ್ಗಲು ವಿಫಲ ಯತ್ನಿಸಿದ ಘಟನೆ ನಡೆದಿದೆ. ಈ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಡಿ.21ರಂದು ತೆಕ್ಕಟ್ಟೆ ಕೆನರಾ ಬ್ಯಾಂಕ್ ಬಳಿಯ ಸಮೃದ್ಧಿ ಕಾಂಪ್ಲೆಕ್ಸ್ ನಲ್ಲಿರುವ ಮೀನಾಕ್ಷಿ ಫರ್ನಿಚರ್ ಶೋರೂಮ್, ಗೋಡೌನ್ ಮತ್ತು ಟೈಲರಿಂಗ್ ಅಂಗಡಿಯಲ್ಲಿ ಇತ್ತೀಚೆಗೆ ಕಳ್ಳತನಕ್ಕೆ ಯತ್ನಿಸಿದ ಬೆನ್ನಲ್ಲೇ ಈ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದರೂ, […]

ಮುಸುಕುಧಾರಿಗಳಿಂದ ಆಭರಣ ಮಳಿಗೆಗೆ ನುಗ್ಗಲು ವಿಫಲ ಯತ್ನ! Read More »

ಅಯೋಧ್ಯೆ ಟ್ರಸ್ಟ್ ಹೆಸರಿನಲ್ಲಿ ವಂಚಕರಿಂದ ಜನರಿಗೆ ಮೋಸ: ವಿ.ಹೆಚ್.ಪಿ.

ಅಯೋಧ್ಯೆ ರಾಮ ಮಂದಿರ ಟ್ರಸ್ಟ್ ನ ಹೆಸರಿನಲ್ಲಿ ಕೆಲವು ವ್ಯಕ್ತಿಗಳು ಜನರನ್ನು ವಂಚಿಸುತ್ತಿದ್ದಾರೆ ಎಂದು ವಿಶ್ವಹಿಂದೂ ಪರಿಷತ್ ಆರೋಪಿಸಿದೆ. ಟ್ರಸ್ಟ್ ನ ಅನುಮತಿ ಇಲ್ಲದೇ ದೇಣಿಗೆ ಸಂಗ್ರಹಿಸುವ ಮೂಲಕ ಹಲವು ವ್ಯಕ್ತಿಗಳು ವಂಚನೆ ಮಾಡುತ್ತಿದ್ದಾರೆ. ಈ ವಿಷಯವನ್ನು ಸಿಎಂ ಯೋಗಿ ಆದಿತ್ಯನಾಥ್, ಕೇಂದ್ರ ಗೃಹ ಸಚಿವಾಲಯದ ಗಮನಕ್ಕೂ ತರಲಾಗಿದ್ದು, ಕ್ರಮಕ್ಕೆ ಆಗ್ರಹಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಆರೋಪಿಸಿದೆ. ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ವಿಹೆಚ್ ಪಿಯ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್, ಮಂದಿರ ಟ್ರಸ್ಟ್ ಹೆಸರಿನಲ್ಲಿ

ಅಯೋಧ್ಯೆ ಟ್ರಸ್ಟ್ ಹೆಸರಿನಲ್ಲಿ ವಂಚಕರಿಂದ ಜನರಿಗೆ ಮೋಸ: ವಿ.ಹೆಚ್.ಪಿ. Read More »

ಇತಿಹಾಸ ಬರೆದ ಇಸ್ರೋ: ಎಕ್ಸ್‌ಪೋಸ್ಯಾಟ್‌ ಯಶಸ್ವಿ ಉಡಾವಣೆ

ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಹೊಸ ವರ್ಷದ ಮೊದಲ ದಿನವೇ ಐತಿಹಾಸಿಕ ಉಡಾವಣೆ ಮಾಡಿದ್ದು, ಎಕ್ಸ್‌ಪೋಸ್ಯಾಟ್‌ ಉಪಗ್ರಹವನ್ನು ಹೊತ್ತ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್‌ (PSLV) ಸಿ58 ನೌಕೆ ಯಶಸ್ವಿಯಾಗಿ ನಭಕ್ಕೆ ಹಾರಿದೆ. ಆಂಧ್ರಪ್ರದೇಶದ ಶ್ರೀಹರಿಕೋಟದಿಂದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್‌ ಮೂಲಕ ಉಪಗ್ರಹವನ್ನು ಉಡಾವಣೆ ಮಾಡಲಾಗಿದ್ದು, ಆ ಮೂಲಕ ಇಸ್ರೋ ಹೊಸ ವರ್ಷದ ದಿನವೇ ಇಸ್ರೋ ಇತಿಹಾಸ ಸೃಷ್ಟಿಸಿದೆ. ದೇಶದ ಮೊದಲ ಎಕ್ಸ್-ರೇ ಪೋಲರಿಮೀಟರ್ ಉಪಗ್ರಹ ಎಕ್ಸ್‌ಪೋಸ್ಯಾಟ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದ್ದು, ಇದರ ಜೊತೆಗೆ

ಇತಿಹಾಸ ಬರೆದ ಇಸ್ರೋ: ಎಕ್ಸ್‌ಪೋಸ್ಯಾಟ್‌ ಯಶಸ್ವಿ ಉಡಾವಣೆ Read More »

ನೂತನ ಸಹಾಯಕ ಆಯುಕ್ತರಿಗೆ ಸುಳ್ಯದಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಪರವಾಗಿ ಸ್ವಾಗತ

ಸುಳ್ಯ: ಪುತ್ತೂರು ಉಪವಿಭಾಗದ ನೂತನ ಸಹಾಯಕ ಆಯುಕ್ತರಾಗಿ ಹಾಗೂ ದಂಡಾಧಿಕಾರಿಯಾಗಿರುವ ಜುಬಿನ್ ಮೊಹಪಾತ್ರ ಅವರು ಸುಳ್ಯಕ್ಕೆ ಭೇಟಿ ನೀಡಿದ ಸಂಧರ್ಭ ಗ್ರಾಮ ಪಂಚಾಯತ್ ಜಿಲ್ಲಾ ಒಕ್ಕೂಟದ ವತಿಯಿಂದ ಸ್ವಾಗತಿಸಲಾಯಿತು. ಗ್ರಾಮ ಪಂಚಾಯತ್ ಜಿಲ್ಲಾ ಒಕ್ಕೂಟದ ಅಧ್ಯಕ್ಷರಾದ ಹರೀಶ್ ಉಬರಡ್ಕ ಅವರು ಸ್ಥಳೀಯ ಜನಪ್ರತಿನಿಧಿಗಳ ಪರವಾಗಿ ಸ್ವಾಗತಿಸಿದರು. ಪುತ್ತೂರು, ಕಡಬ, ಸುಳ್ಯ ಹಾಗೂ ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಾಗಿರುವ ಜುಬಿನ್ ಮೊಹಪಾತ್ರ ಅವರು 2021ರ ಬ್ಯಾಚಿನ ಐ.ಎ.ಎಸ್. ಅಧಿಕಾರಿ.

ನೂತನ ಸಹಾಯಕ ಆಯುಕ್ತರಿಗೆ ಸುಳ್ಯದಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಪರವಾಗಿ ಸ್ವಾಗತ Read More »

ಆಕ್ಟಿವಾ-ಕಾರು ಅಪಘಾತ !

ಪುತ್ತೂರು: ನಗರದ ಹೊರವಲಯದ ಮುಕ್ರಂಪಾಡಿಯಲ್ಲಿ ಆಕ್ಟಿವಾ ಹಾಗೂ ಕಾರು ಮುಖಾಮುಖಿ ಡಿಕ್ಕಿ ಹೊಡೆದುಕೊಂಡ ಘಟನೆ ನಡೆದಿದೆ. ಅಪಘಾತದ ಪರಿಣಾಮ ಕೆಲವರಿಗೆ ಗಾಯಗಳಾಗಿವೆ ಎಂದು ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ಪುತ್ತೂರು ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಆಕ್ಟಿವಾ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

ಆಕ್ಟಿವಾ-ಕಾರು ಅಪಘಾತ ! Read More »

ರಂಜಿತ್ –ಗಗನಶ್ರೀ (ಅಕ್ಷಯ ಟಿ.) ವಿವಾಹ ನಿಶ್ಚಿತಾರ್ಥ

ಪುತ್ತೂರು: ಪುತ್ತೂರು ತಾಲೂಕು ಶಾಂತಿಗೋಡು ಗ್ರಾಮದ ಗೋಳಿತ್ತಡಿ ವೆಂಕಪ್ಪ ಗೌಡರ ಪುತ್ರ ರಂಜಿತ್ ಅವರ ವಿವಾಹ ನಿಶ್ಚಿತಾರ್ಥ ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ ತಾಳಿಪಡ್ಪು ದಿ.ಬೆಳಿಯಪ್ಪ ಗೌಡರ ಪುತ್ರಿ ಗಗನಶ್ರೀ (ಅಕ್ಷಯ ಟಿ.) ಅವರೊಂದಿಗೆ ಭಾನುವಾರ ನಡೆಯಿತು. ನಿಶ್ಚಿತಾರ್ಥ ಸಮಾರಂಭಕ್ಕೆ ಹಲವಾರು ಗಣ್ಯರು ಆಗಮಿಸಿ ಶುಭ ಹಾರೈಸಿದರು.

ರಂಜಿತ್ –ಗಗನಶ್ರೀ (ಅಕ್ಷಯ ಟಿ.) ವಿವಾಹ ನಿಶ್ಚಿತಾರ್ಥ Read More »

ಸೌಜನ್ಯ ಹೋರಾಟದಲ್ಲಿ ನ್ಯಾಯ ಸಿಗುವ ವರೆಗೆ ವಿರಮಿಸಬಾರದು | ಸೌಜನ್ಯಾ ಪರ  ಪ್ರತಿಭಟನಾ ಸಭೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ | ನ್ಯಾಯ ಸಿಗದಿದ್ದಲ್ಲಿ ದಂಗೆ ಏಳುವ ಪರಿಸ್ಥಿತಿ ಬರಬಹುದು | ಸುರೇಶ್ ಬೈಲು

ಕಡಬ: ಅಮಾಯಕ ಬಾಲಕಿ ಸೌಜನ್ಯಾ ಅತ್ಯಾಚಾರಕ್ಕೊಳಪಟ್ಟು ಕೊಲೆಗೀಡಾಗಿ 11 ವರ್ಷಗಳೇ ಕಳೆದರೂ ನ್ಯಾಯ ಸಿಗದಿರುವುದು ನಾಗರಿಕ ಸಮಾಜದ ಎಲ್ಲರೂ ತಲೆ ತಗ್ಗಿಸುವಂತಹ ವಿಚಾರ. ಆ ನಿಟ್ಟಿನಲ್ಲಿ ಇಡೀ ಸಮಾಜ ಒಂದಾಗಿ ನ್ಯಾಯ ಸಿಗುವ ತನಕ ವಿರಮಿಸಬಾರದು ಎಂದು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸಂಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ ಕರೆ ನೀಡಿದರು. ಅವರು ರವಿವಾರ ಕಡಬ ತಾಲೂಕಿನ ಮರ್ದಾಳದಲ್ಲಿ  ಸೌಜನ್ಯಾ ಪರ ಹೋರಾಟ ಸಮಿತಿಯ ನೇತೃತ್ವದಲ್ಲಿ ಜರಗಿದ ಪ್ರತಿ‘ಟನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಒಂದು ನ್ಯಾಯವೂ ಕೂಡ

ಸೌಜನ್ಯ ಹೋರಾಟದಲ್ಲಿ ನ್ಯಾಯ ಸಿಗುವ ವರೆಗೆ ವಿರಮಿಸಬಾರದು | ಸೌಜನ್ಯಾ ಪರ  ಪ್ರತಿಭಟನಾ ಸಭೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ | ನ್ಯಾಯ ಸಿಗದಿದ್ದಲ್ಲಿ ದಂಗೆ ಏಳುವ ಪರಿಸ್ಥಿತಿ ಬರಬಹುದು | ಸುರೇಶ್ ಬೈಲು Read More »

ಪಯಸ್ವನಿ ನದಿಯಲ್ಲಿ ಕಣ್ಮರೆಯಾಗಿದ್ದ ವ್ಯಕ್ತಿಯ ಶವ ಪತ್ತೆ !

ಸುಳ್ಯ: ಸುಳ್ಯ ಕೆ.ವಿ.ಜಿ ಕ್ಯಾಂಪಸ್ ಬಳಿಯ ಬಸ್ಮಡ್ಕ ಎಂಬಲ್ಲಿ ಪಯಸ್ವಿನಿ ನದಿಯಲ್ಲಿ ಮುಳುಗಿ ಯುವಕ ಕಣ್ಮರೆಯಾದ ವ್ಯಕ್ತಿ ಶವ ಪತ್ತೆಯಾಗಿದೆ. ಬಟ್ಟೆ ಒಗೆಯಲು ಹಾಗೂ ಸ್ನಾನಕ್ಕೆಂದು ನದಿಗೆ ಬಂದ ಮೂವರು ಯುವಕರು ನೀರಿಗೆ ಇಳಿದಿದ್ದರು ಅದರಲ್ಲಿ ಒಬ್ಬರು ಕಣ್ಮರೆಯಾಗಿದ್ದರು. ಆ ವ್ಯಕ್ತಿಯ ಪತ್ತೆಗಾಗಿ ಸುಳ್ಯ ಆರಕ್ಷಕ ಠಾಣೆ ಸಿಬ್ಬಂದಿಗಳು ಅಗ್ನಿಶಾಮಕ ದಳ ಹಾಗೂ ಪೈಚಾರಿನ ಮುಳುಗು ತಜ್ಞರ ತಂಡ ಶೋಧ ಮುಂದುವರಿಸಿದ್ದರು. ಇದೀಗ ಮೃತ ದೇಹವನ್ನು ನೀರಿನಿಂದ ಮೇಲೇತ್ತಲಾಗಿದೆ ಎಂದು ತಿಳಿದು ಬಂದಿದೆ.

ಪಯಸ್ವನಿ ನದಿಯಲ್ಲಿ ಕಣ್ಮರೆಯಾಗಿದ್ದ ವ್ಯಕ್ತಿಯ ಶವ ಪತ್ತೆ ! Read More »

ತೀರಾ ಕುಗ್ರಾಮದಲ್ಲಿರುವ ಬಲೆರಾವು ಸೇತುವೆಗೆ ಹಲಗೆ ಜೋಡಣೆ ಕಾಮಗಾರಿಗೆ ಚಾಲನೆ | ಪುತ್ತೂರು-ಕಡಬ-ಸುಳ್ಯ ತಾಲೂಕಿನ ಕೊಂಡಿಯಾಗಿರುವ ಬಲೆರಾವು ಸೇತುವೆ

ಪುತ್ತೂರು: ಪುತ್ತೂರು-ಕಡಬ-ಸುಳ್ಯ ಈ ಮೂರು ತಾಲೂಕಿನ ಕೊಂಡಿಯಾಗಿರುವ ತೀರಾ ಕುಗ್ರಾಮದಲ್ಲಿರುವ ಬಲೆರಾವು ಸೇತುವೆ ಸಹಿತ ಕಿಂಡಿ ಅಣೆಕಟ್ಟಿಗೆ ಇದೀಗ ಹಲಗೆ ಜೋಡಣೆ ಕಾಮಗಾರಿ ಆರಂಭಗೊಂಡಿದೆ. ಹಿಂದಿನ ಬಾರಿ ಶಾಸಕರಾಗಿದ್ದ ಸಂಜೀವ ಮಠಂದೂರು ಅವರ ಮುಂದೆ ಕಿಂಡಿ ಅಣೆಕಟ್ಟಿನ ಪ್ರಸ್ತಾಪ ಇಡಲಾಯಿತು. ಕಿಂಡಿ ಅಣೆಕಟ್ಟಿನ ಅನಿವಾರ್ಯತೆಯನ್ನು ಶಾಸಕರಿಗೆ ತಿಳಿಸಿದಾಗ, ಈ ಪ್ರದೇಶಕ್ಕೊಂದು ರಸ್ತೆ, ಸೇತುವೆ ನಿರ್ಮಿಸಿದರೆ ಬಲೆರಾವು ಪ್ರದೇಶದ ಚಿತ್ರಣವೇ ಬದಲಾದೀತು ಎಂಬ ದೂರದೃಷ್ಟಿಯ ಚಿಂತನೆ ಶಾಸಕರಿಗೆ ಹೊಳೆಯಿತು. ಅಷ್ಟೇ, ಸೇತುವೆ ಸಹಿತ ಕಿಂಡಿಅಣೆಕಟ್ಟನ್ನು ಮಂಜೂರು ಮಾಡಿಯೇ ಬಿಟ್ಟರು.

ತೀರಾ ಕುಗ್ರಾಮದಲ್ಲಿರುವ ಬಲೆರಾವು ಸೇತುವೆಗೆ ಹಲಗೆ ಜೋಡಣೆ ಕಾಮಗಾರಿಗೆ ಚಾಲನೆ | ಪುತ್ತೂರು-ಕಡಬ-ಸುಳ್ಯ ತಾಲೂಕಿನ ಕೊಂಡಿಯಾಗಿರುವ ಬಲೆರಾವು ಸೇತುವೆ Read More »

ಸಮರ್ಪಣಾ ಟ್ರಸ್ಟ್‌ನ ಟ್ರಸ್ಟಿ ಸುಶಾಂತ್ ಕೆಡೆಂಜಿಯವರ ವಿವಾಹ ನಿಶ್ಚಿತಾರ್ಥ

ಪುತ್ತೂರು: ಸಮರ್ಪಣಾ ಟ್ರಸ್ಟ್‌ನ ಟ್ರಸ್ಟಿ ಸುಶಾಂತ್ ಕೆಡೆಂಜಿರವರ ವಿವಾಹ ನಿಶ್ಚಿತಾರ್ಥ ಕೃತಿಕಾರವರೊಂದಿಗೆ ಭಾನುವಾರ ತೆಂಕಿಲ ಬೈಪಾಸ್ ರಸ್ತೆಯಲ್ಲಿರುವ ದರ್ಶನ್ ಕಲಾಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಪಾಲ್ಗೊಂಡು ಶುಭ ಹಾರೈಸಿದರು.

ಸಮರ್ಪಣಾ ಟ್ರಸ್ಟ್‌ನ ಟ್ರಸ್ಟಿ ಸುಶಾಂತ್ ಕೆಡೆಂಜಿಯವರ ವಿವಾಹ ನಿಶ್ಚಿತಾರ್ಥ Read More »

error: Content is protected !!
Scroll to Top