ನಿಮ್ಮ ಮಕ್ಕಳು ಕೋರ್ಟು ಕೇಸಿಗೆ ಅಲೆದಾಡದಂತೆ ನೋಡಿಕೊಳ್ಳಿ | ಬೊಳ್ಳಾಣ ಶ್ರೀ ಆಂಜನೇಯ ಭಜನಾ ಮಂದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅಶೋಕ್ ರೈ

ಪುತ್ತೂರು: ರಾಜಕೀಯದವರು ತಮ್ಮ ಲಾಭಕ್ಕೋಸ್ಕರ ಯಾರದ್ದೋ ಮಕ್ಕಳನ್ನು ಬಲಿಪಶು ಮಾಡುವ ಚಾಲ್ತಿ ಇದ್ದು ಕೆಟ್ಟ ಚಟುವಟಿಕೆಯಲ್ಲಿ ನಿಮ್ಮ ಮಕ್ಕಳು ಭಾಗಿಗಳಾಗಿ ಅವರು ಜೀವನ ಪೂರ್ತಿ ಕೋರ್ಟು, ಕೇಸು ಅಲೆದಾಡದಂತೆ ನೋಡಿಕೊಳ್ಳಿ ಎಂದು ಪುತ್ತೂರು ಶಸಕರಾದ ಅಶೋಕ್ ರೈ ಹೇಳಿದರು. ಅವರು ಬೊಳ್ಳಾಣ ಆಂಜನೇಯ ಭಜನಾಮಂದಿರದ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜಕೀಯದವರು ತಮ್ಮ ಲಾಭಕ್ಕೆ ಏನು ಬೇಕಾದರೂ ಭಾಷಣ ಮಾಡಬಹುದು. ಅವರ ಭಾಷಣ ಕೇಳಿ ಯುವ ಸಮೂಹ ಹಾಳಾಗದಂತೆ ಎಚ್ಚರವಹಿಸಬೇಕು. ನೀವು ಒಂದು ಬಾರಿ ಕೇಸು ಮೈಮೇಲೆ ಹಾಕಿಕೊಂಡರೆ […]

ನಿಮ್ಮ ಮಕ್ಕಳು ಕೋರ್ಟು ಕೇಸಿಗೆ ಅಲೆದಾಡದಂತೆ ನೋಡಿಕೊಳ್ಳಿ | ಬೊಳ್ಳಾಣ ಶ್ರೀ ಆಂಜನೇಯ ಭಜನಾ ಮಂದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅಶೋಕ್ ರೈ Read More »

ರಾಷ್ಟ್ರ ಮಟ್ಟದ ಕರಾಟೆ ಓಪನ್ ಚಾಂಪಿಯನ್ ಶಿಪ್ | ವಿಟ್ಲ ಸೆನ್ಸಾಯಿ ಮಾಧವ ಅಳಿಕೆ ತಂಡಕ್ಕೆ ಪ್ರಶಸ್ತಿ

ವಿಟ್ಲ: ಬುಡೋಕನ್ ಕರಾಟೆ ಮತ್ತು ಸ್ಪೋರ್ಟ್ಸ್ ಅಸೋಸಿಯನ್ ಕರ್ನಾಟಕದ ನೇತೃತ್ವದಲ್ಲಿ ಕೊಪ್ಪದ ದಿವ್ಯ ಕ್ಷೇತ್ರ ಹರಿಹರಪುರದಲ್ಲಿ ನಡೆದ ರಾಷ್ಟ್ರ ಮಟ್ಟದ ಕರಾಟೆ ಓಪನ್ ಪಂದ್ಯಾವಳಿ ‘ಕೊಪ್ಪ ಟ್ರೋಫಿ’ ಯಲ್ಲಿ ಕರಾಟೆ ಶಿಕ್ಷಕ ಸೆನ್ಸಾಯಿ ಮಾಧವ ವಿಟ್ಲ ಹಲವು ಪ್ರಶಸ್ತಿಗಳನ್ನು  ಪಡೆದುಕೊಂಡಿದೆ. ಕುಮಿಟೆ ವಿಭಾಗದಲ್ಲಿ ಓಜಾಲು ಸರಕಾರಿ ಶಾಲೆಯ ಹಂಸಿಕ ಪಿ – ಪ್ರಥಮ, ವಿಠಲ ಪದವಿ ಪೂರ್ವ ಕಾಲೇಜಿನ ಭವಿಶ್ – ಪ್ರಥಮ, ಪುತ್ತೂರು ಬೆಥನಿ ಆಂಗ್ಲ ಮಾದ್ಯಮ ಶಾಲೆಯ ರಿಯೋನ್ ಲಸ್ರಾದೊ – ದ್ವಿತೀಯ, ವಿಟ್ಲ

ರಾಷ್ಟ್ರ ಮಟ್ಟದ ಕರಾಟೆ ಓಪನ್ ಚಾಂಪಿಯನ್ ಶಿಪ್ | ವಿಟ್ಲ ಸೆನ್ಸಾಯಿ ಮಾಧವ ಅಳಿಕೆ ತಂಡಕ್ಕೆ ಪ್ರಶಸ್ತಿ Read More »

ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ | ಎಲ್‍ ಇಡಿ ಸ್ಕ್ರೀನ್ ಮೂಲಕ ಶ್ರೀರಾಮ ಪ್ರಾಣಪ್ರತಿಷ್ಠೆ ವೀಕ್ಷಿಸಿದ ಭಕ್ತಾದಿಗಳು

ಪುತ್ತೂರು: ಅಯೋಧ್ಯೆ ಶ್ರೀ ರಾಮ ಮಂದಿರ ಲೋಕಾರ್ಪಣೆ ಪ್ರಯುಕ್ತ ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಭಜನಾ ಕಾರ್ಯಕ್ರಮ ಸೋಮವಾರ ನಡೆಯಿತು. ಬೆಳಿಗ್ಗೆಯಿಂದ ಎಲ್‍ ಇಡಿ ಸ್ಕ್ರೀನ್ ಮೂಲಕ ರಾಮಭಕ್ತರಿಗೆ ಶ್ರೀ ರಾಮನ ಪ್ರಾಣಪ್ರತಿಷ್ಠೆ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು. ನೂರಾರು ಭಕ್ತಾದಿಗಳು ಶ್ರೀ ರಾಮ ಪ್ರಾಣ ಪ್ರತಿಷ್ಠೆಯನ್ನು ವೀಕ್ಷಿಸುವ ಮೂಲಕ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು. ಪೂಜೆಯ ಬಳಿಕ ಅನ್ನಸಂತರ್ಪನೆ ಜರಗಿತು.

ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ | ಎಲ್‍ ಇಡಿ ಸ್ಕ್ರೀನ್ ಮೂಲಕ ಶ್ರೀರಾಮ ಪ್ರಾಣಪ್ರತಿಷ್ಠೆ ವೀಕ್ಷಿಸಿದ ಭಕ್ತಾದಿಗಳು Read More »

ಉಪ್ಪಿನಂಗಡಿ ದೇವಳಗಳಲ್ಲಿ ಭಜನೆ, ವಿಶೇಷ ಪೂಜಾ ಸೇವೆ

ಪುತ್ತೂರು: ಅಯೋಧ್ಯಾ ಶ್ರೀರಾಮನ ಪ್ರಾಣ ಪ್ರತಿಷ್ಠೆಯ ಅಂಗವಾಗಿ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ, ಲಕ್ಷ್ಮಿ ವೆಂಕಟರಮಣ ದೇವಾಲಯ ಸೇರಿದಂತೆ ಪರಿಸರದ ಬಹುತೇಕ ಎಲ್ಲಾ ದೇವಾಲಯಗಳಲ್ಲಿ ಭಜನಾ ಸೇವೆ ಮತ್ತು ವಿಶೇಷ ಪೂಜಾ ಸೇವೆಗಳು ನಡೆದವು. ಉಪ್ಪಿನಂಗಡಿ ಸಹಸ್ರಲಿಂಗೇಶ್ಚರ ದೇವಾಲಯದಲ್ಲಿ ಸ್ಥಳೀಯ ಸಹಸ್ರಲಿಂಗೇಶ್ವರ ಹಾಗೂ ಶಾರದಾ ವನಿತಾ ಭಜನಾ ಮಂಡಳಿಯ ನೇತೃತ್ವದಲ್ಲಿ ವಿವಿಧ ಭಜನಾ ತಂಡಗಳಿಂದ ದಿನವಿಡೀ ಭಜನಾ ಸೇವೆ ನಡೆಯಿತು. ಮುದ್ಯ ಪಂಚಲಿಂಗೇಶ್ವರ ದೇವಾಲಯ, ಪದಾಳ ಸುಬ್ರಹ್ಮಣ್ಯ ದೇವಾಲಯ, ಪೆರಿಯಡ್ಕ ದುರ್ಗಾಪರಮೆಶ್ವರಿ ಭಜನಾ ಮಂದಿರ, ನೆಕ್ಕಿಲಾಡಿಯ ರಾಮ ಭಜನಾ ಮಂದಿರ

ಉಪ್ಪಿನಂಗಡಿ ದೇವಳಗಳಲ್ಲಿ ಭಜನೆ, ವಿಶೇಷ ಪೂಜಾ ಸೇವೆ Read More »

ಅಯೋಧ್ಯೆಯ ಶ್ರೀರಾಮ ಪ್ರಾಣ ಪ್ರತಿಷ್ಠೆ ವಿಶ್ವಕ್ಕೆ ಶಾಂತಿ ನೆಮ್ಮದಿ ಕರುಣಿಸಲಿ: ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವರಿಗೆ ಪುಷ್ಪ ಸಮರ್ಪಿಸಿ ಶಾಸಕ ಅಶೋಕ್ ರೈ

ಪುತ್ತೂರು: ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠೆ ಪ್ರಯುಕ್ತ ಕೋಡಿಂಬಾಡಿ ಗ್ರಾಮಸ್ಥರ ಹಾಗೂ ಪುತ್ತೂರಿನ ಸಮಸ್ತ ನಾಗರಿಕರ ಪರವಾಗಿ ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಮಠಂತಬೆಟ್ಟು‌ಶ್ರೀ ಮಹಿಷ‌ಮರ್ಧಿನಿ ದೇವಿಗೆ ಪುಷ್ಪ ಸಮರ್ಪಿಸಿದರು. ಬಳಿಕ ಮಾತನಾಡಿದ ಶಾಸಕರು, ದೇಶದಲ್ಲಿ ಎಲ್ಲಾ ಧರ್ಮಿಯರು ಪರಸ್ಪರ ಸಹೋದರತೆಯಿಂದ ಬಾಳ್ವೆ ನಡೆಸುವ ಮೂಲಕ ದೇಶ ,ಜಗತ್ತಿನಲ್ಲಿ‌ ಶಾಂತಿ ನೆಲಸುವಂತಾಗಲಿ ಎಂದರು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನಿರಂಜನ್ ರೈ ರೈ ಮಠಂತಬೆಟ್ಡು, ಮುರಳೀಧರ್ ರೈ ಮಠಂತಬೆಟ್ಟು, ಯೋಗೀಶ್

ಅಯೋಧ್ಯೆಯ ಶ್ರೀರಾಮ ಪ್ರಾಣ ಪ್ರತಿಷ್ಠೆ ವಿಶ್ವಕ್ಕೆ ಶಾಂತಿ ನೆಮ್ಮದಿ ಕರುಣಿಸಲಿ: ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವರಿಗೆ ಪುಷ್ಪ ಸಮರ್ಪಿಸಿ ಶಾಸಕ ಅಶೋಕ್ ರೈ Read More »

ಶ್ರೀ ರಾಮನ ಪ್ರಾಣಪ್ರತಿಷ್ಠೆ ಕಣ್ತುಂಬಿಕೊಂಡಿರುವುದು ನಮ್ಮ ಬಾಳಿನ ಸೌಭಾಗ್ಯ | ಕೆಲಿಂಜ ಶ್ರೀನಿಕೇತನದಲ್ಲಿ ನಡೆದ ಶ್ರೀರಾಮ ಪೂಜಾ ಮಹೋತ್ಸವದಲ್ಲಿ ಜಯಶ್ಯಾಮ್ ನೀರ್ಕಜೆ

ಕೆಲಿಂಜ: ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ನಡೆದ ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠೆ ಅಂಗವಾಗಿ ಹಿಂದೂ ಧಾರ್ಮಿಕ ಸೇವಾ ಸಮಿತಿ ಕೆಲಿಂಜ ವತಿಯಿಂದ ಶ್ರೀರಾಮ ಪೂಜಾ ಮಹೋತ್ಸವ ಸೋಮವಾರ ಕೆಲಿಂಜ ಶ್ರೀನಿಕೇತನದಲ್ಲಿ ನಡೆಯಿತು. ಆರ್‍.ಎಸ್‍.ಎಸ್‍.ನ ಹಿರಿಯರಾದ, ಸಾಮಾಜಿಕ ಕಾರ್ಯಕರ್ತ ಜಯಶ್ಯಾಮ್ ನೀರ್ಕಜೆ ಧಾರ್ಮಿಕ ಉಪನ್ಯಾಸ ನೀಡಿ, ಬಾಲರಾಮನ ಪ್ರತಿಷ್ಠೆ ಆಗಿದೆ. ಈ ಸಂದರ್ಭದಲ್ಲಿ ಜೀವಂತ ಇದ್ದು ರಾಮಪ್ರತಿಷ್ಠೆಯನ್ನು ಕಣ್ತುಂಬಿಕೊಂಡಿರುವುದು ನಮ್ಮ ಬಾಳಿನ ಸೌಭಾಗ್ಯ. 1992 ರಲ್ಲಿ ನಡೆದ ಬೃಹತ್ ಜನಾಂದೋಲನದಿಂದ ಬಾಬರಿ ಮಸೀದಿ ತೆಗೆದು ಸುಂದರ ಭವ್ಯ ರಾಮ ಮಂದಿರ ನಿರ್ಮಾಣಗೊಂಡಿದೆ.

ಶ್ರೀ ರಾಮನ ಪ್ರಾಣಪ್ರತಿಷ್ಠೆ ಕಣ್ತುಂಬಿಕೊಂಡಿರುವುದು ನಮ್ಮ ಬಾಳಿನ ಸೌಭಾಗ್ಯ | ಕೆಲಿಂಜ ಶ್ರೀನಿಕೇತನದಲ್ಲಿ ನಡೆದ ಶ್ರೀರಾಮ ಪೂಜಾ ಮಹೋತ್ಸವದಲ್ಲಿ ಜಯಶ್ಯಾಮ್ ನೀರ್ಕಜೆ Read More »

ಮುಗೇರು ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ರಾಮೋತ್ಸವ | ನೇರ ಪ್ರಸಾರದ ಮೂಲಕ ಶ್ರೀರಾಮನ ಪ್ರಾಣಪ್ರತಿಷ್ಠೆ ವೀಕ್ಷಿಸಿದ ರಾಮಭಕ್ತರು

ಪುತ್ತೂರು: ಅಯೋಧ್ಯೆ ಶ್ರೀರಾಮ ಮಂದಿರ ಲೋಕಾರ್ಪಣೆ, ಶ್ರೀರಾಮ ದೇವರ ಪ್ರತಿಮೆ ಪ್ರಾಣ ಪ್ರತಿಷ್ಠೆ ಪ್ರಯುಕ್ತ ಮುಗೇರು ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜ.22 ರಂದು ಶ್ರೀ ರಾಮೋತ್ಸವ ನಡೆಯಿತು. ಬೆಳಿಗ್ಗೆ 6.00 ರಿಂದ  ಶ್ರೀರಾಮ ಜ್ಯೋತಿ ಪ್ರಜ್ವಲನೆ, ಭಜನೆ, ಸತ್ಸಂಗ ರಾಮ ನಾಮದ ಮಹತ್ವ,   ಇನ್ನಿತರ ಧಾರ್ಮಿಕ, ವೈಧಿಕ ಕಾರ್ಯಕ್ರಮಗಳು ಜರಗಿತು. ಕಾರ್ಯಕ್ರಮದಲ್ಲಿ ನೆರೆದಿದ್ದ ರಾಮ ಭಕ್ತರು ನೇರ ಪ್ರಸಾರದ ಮೂಲಕ ಅಯೋಧ್ಯೆ ಕಾರ್ಯಕ್ರಮವನ್ನು ವೀಕ್ಷಿಸಿದರು.  ಮಧ್ಯಾಹ್ನ ದೇವರ ಪ್ರಸಾದ ರೂಪದ ಅನ್ನಸಂತರ್ಪಣೆ ನಡೆಯಿತು.

ಮುಗೇರು ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ರಾಮೋತ್ಸವ | ನೇರ ಪ್ರಸಾರದ ಮೂಲಕ ಶ್ರೀರಾಮನ ಪ್ರಾಣಪ್ರತಿಷ್ಠೆ ವೀಕ್ಷಿಸಿದ ರಾಮಭಕ್ತರು Read More »

ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ 108 ರಾಮ ಮಂತ್ರ ಜಪಿಸಿ ರಾಮಸ್ತೋತ್ರ ಪಠಣ

ಬರೆಪ್ಪಾಡಿ : ಅಯೋಧ್ಯೆ ಶ್ರೀ ರಾಮಮಂದಿರದಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠೆ ಅಂಗವಾಗಿ ಶ್ರೀ ಕ್ಷೇತ್ರ ಬರೆಪ್ಪಾಡಿ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ 108 ರಾಮ ಮಂತ್ರ ಜಪಿಸಿ ರಾಮಸ್ತ್ರೋತ್ರ ನೆರವೇರಿಸಲಾಯಿತು. ರಾಮ ಭಕ್ತರು ಶ್ರೀರಾಮ ಫೋಟೊ ಇರುವ ಭಗವಾಧ್ವಜ ದೇವಸ್ಥಾನದ ವಠಾರದಲ್ಲಿ ಹಾಕಿ, ಶ್ರೀರಾಮನ ಫೋಟೊ ಇಟ್ಟು ಸಂಭ್ರಮದಿಂದ ಆಚರಿಸಿದರು, ನೂರಾರು ರಾಮಭಕ್ತರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.

ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ 108 ರಾಮ ಮಂತ್ರ ಜಪಿಸಿ ರಾಮಸ್ತೋತ್ರ ಪಠಣ Read More »

ಕಲ್ಲಾರೆ ಶ್ರೀ ಗುರು ರಾಘವೇಂದ್ರ ಮಠದಲ್ಲಿ ವಿಶೇಷ ಪೂಜೆ | ಎಲ್‍ ಇಡಿ ಪರದೆ ಮೂಲಕ ಶ್ರೀರಾಮನ ಪ್ರಾಣಪ್ರತಿಷ್ಠೆಯ ವೀಕ್ಷಣೆ

ಪುತ್ತೂರು: ಕಲ್ಲಾರೆ ಶ್ರೀಗುರು ರಾಘವೇಂದ್ರ ಮಠದಲ್ಲಿ ಶ್ರೀ ರಾಮಲಲ್ಲಾನ ಪ್ರತಿಷ್ಠಾಪನೆಯ ಸಂಭ್ರಮವನ್ನು ಶ್ರೀ ಗುರುಗಳ ವಿಶೇಷ ಪೂಜೆಯೊಂದಿಗೆ ನೆರವೇರಿಸಲಾಯಿತು. ಶ್ರೀ ಗುರುರಾಘವೇಂದ್ರ ಮಠದ ಆವರಣದಲ್ಲಿ ಎಲ್‍ ಇಡಿ ಸ್ಕ್ರೀನ್ ಅಳವಡಿಸಿ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಶ್ರೀರಾಮನ ಪ್ರತಿಷ್ಠಾಪನೆಯನ್ನು ನೇರ ಪ್ರಸಾರದ ಮೂಲಕ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭಲದಲ್ಲಿ ಸುಮಾರು 500 ಕ್ಕೂ ಮಿಕ್ಕಿ ಭಕ್ತಾದಿಗಳು ಪಾಲ್ಗೊಂಡಿದ್ದರು. ಬಳಿಕ ವಿಶೇಷ ಪೂಜೆ ನಡೆದ ಬಳಿಕ ಅನ್ನಸಂತರ್ಪಣೆ ನಡೆಯಿತು.

ಕಲ್ಲಾರೆ ಶ್ರೀ ಗುರು ರಾಘವೇಂದ್ರ ಮಠದಲ್ಲಿ ವಿಶೇಷ ಪೂಜೆ | ಎಲ್‍ ಇಡಿ ಪರದೆ ಮೂಲಕ ಶ್ರೀರಾಮನ ಪ್ರಾಣಪ್ರತಿಷ್ಠೆಯ ವೀಕ್ಷಣೆ Read More »

ಪುತ್ತಿಲ ಪರಿವಾರ ಕಚೇರಿಯಲ್ಲಿ ಶ್ರೀರಾಮ ದೇವರಿಗೆ ಪುಷ್ಪಾರ್ಚನೆ

ಪುತ್ತೂರು: ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾ ಪ್ರಾಣಪ್ರತಿಷ್ಠೆ ಆಗುತ್ತಿದ್ದಂತೆ ಪುತ್ತಿಲ ಪರಿವಾರ ಕಚೇರಿಯಲ್ಲಿ ಪ್ರಭು ಶ್ರೀರಾಮದೇವರಿಗೆ ಪುಷ್ಪಾರ್ಚನೆ ನೆರವೇರಿಸಿ ಪ್ರಾರ್ಥನೆ ನೆರವೇರಿತು. ಹಿಂದೂಗಳು ಶತಶತಮಾನಗಳಿಂದ ಕಾತರದಿಂದ ಕಾಯುತ್ತಿದ್ದ ಅಯೋಧ್ಯೆಯ ಪ್ರಭು ಶ್ರೀರಾಮಮಂದಿರ ಶುಭಮುಹೂರ್ತದಲ್ಲಿ ಲೋಕಾರ್ಪಣೆಗೊಂಡು ಶ್ರೀ ರಾಮಲಲ್ಲಾನ ಪ್ರಾಣಪ್ರತಿಷ್ಠೆಯೂ ನೆರವೇರಿತು. ಅರುಣ್ ಕುಮಾರ್ ಪುತ್ತಿಲ, ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಮಾರ್ತಾ, ಕಾರ್ಯದರ್ಶಿ  ಉಮೇಶ್ ಕೋಡಿಬೈಲು, ನಗರ ಅಧ್ಯಕ್ಷ ಅನಿಲ್ ತೆಂಕಿಲ ಪ್ರಮುಖರಾದ ರವಿ ರೈ ಕೆದಂಬಾಡಿ ಮಠ, ಭೀಮಯ್ಯ ಭಟ್ ಸಂಪ್ಯ, ಪ್ರವೀಣ್ ಭಂಡಾರಿ,  ರಾಜ್ ಶೆಟ್ಟಿ

ಪುತ್ತಿಲ ಪರಿವಾರ ಕಚೇರಿಯಲ್ಲಿ ಶ್ರೀರಾಮ ದೇವರಿಗೆ ಪುಷ್ಪಾರ್ಚನೆ Read More »

error: Content is protected !!
Scroll to Top