ಮಾ.3: ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಅರ್ಪಿಸುವ ‘ನರ್ತನಾವರ್ತನ’ ಭರತನಾಟ್ಯ ಕಾರ್ಯಕ್ರಮ

ಪುತ್ತೂರು: ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಅರ್ಪಿಸುವ 8ನೇ ವರ್ಷದ ‘ನರ್ತನಾವರ್ತನ’ ಭರತನಾಟ್ಯ ಕಾರ್ಯಕ್ರಮ ಮಾ.3 ಭಾನುವಾರ ಬಪ್ಪಳಿಗೆ ಜೈನಭವನದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ವಿದುಷಿ ಪ್ರೀತಿಕಲಾ ತಿಳಿಸಿದ್ದಾರೆ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಳೆದ ಏಳು ವರ್ಷಗಳಿಂದ ದೇಶ ವಿದೇಶದ ಹೆಸರಾಂತ ಕಲಾವಿದರನ್ನು ಕರೆಸಿ ‘ನರ್ತನಾವರ್ತನ’ ಕಾರ್ಯಕ್ರಮದ ಮೂಲಕ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ತಿಳಿಸಿದರು. ಈ ಬಾರಿ ಪಿ.ಪ್ರವೀಣ್ ಕುಮಾರ್ ಬೆಂಗಳೂರು ಅವರಿಂದ ಸಂಜೆ 5.30 ರಿಂದ ‘ಸಖ’ ಎಂಬ ಭರತನಾಟ್ಯ ಪ್ರಸ್ತುತಿಗೊಳ್ಳಲಿದೆ. […]

ಮಾ.3: ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಅರ್ಪಿಸುವ ‘ನರ್ತನಾವರ್ತನ’ ಭರತನಾಟ್ಯ ಕಾರ್ಯಕ್ರಮ Read More »

ಕಾಂಗ್ರೇಸ್‍ನ ಗ್ಯಾರಂಟಿ ಯೋಜನೆಯ ಸಮೀಕ್ಷೆಗೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರನ್ನು ಬಳಸಿಕೊಳ್ಳುವುದು ಖಂಡನೀಯ | ಹೋರಾಟಕ್ಕೆ ಪುತ್ತಿಲ ಪರಿವಾರ ಬೆಂಬಲ ಘೋಷಣೆ

ಪುತ್ತೂರು: ಕಾಂಗ್ರೇಸ್ ಸರ್ಕಾರದ ತನ್ನ ಪಕ್ಷದ 5 ಯೋಜನೆಯ ಸಮೀಕ್ಷೆಗೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರನ್ನು ಒತ್ತಡದ ಮೂಲಕ ಬಳಸಿಕೊಳ್ಳುತ್ತಿರುವುದನ್ನು ಪುತ್ತಿಲ ಪರಿವಾರ ತೀವ್ರವಾಗಿ ಖಂಡಿಸುತ್ತದೆ. ಈಗಾಗಲೇ ಅಂಗನವಾಡಿ ಕಾರ್ಯಕರ್ತೆಯರಿಗೆ ಚುನಾವಣೆಯ ಕೆಲಸ, ಮಕ್ಕಳಿಗೆ, ಬಾಣಂತಿ, ಗರ್ಭಿಣಿಯರಿಗೆ ಮನೆಗೆ ಆಹಾರ ಸಾಗಟ, ಪಲ್ಸ್ ಪೊಲೀಯೋ,  ಪೋಷಣ್ ಟ್ರ್ಯಾಕರ್,  ಮತದಾನ  ಸೇರ್ಪಡೆ-ರದ್ದು ತಿದ್ದುಪಡಿ ಮೊದಲಾದ ಕೆಲಸಗಳಿದ್ದು ಅದರ ತೀವ್ರ ಒತ್ತಡದ ನಡುವೆ ಪುಟಾಣಿ ಮಕ್ಕಳಿಗೆ ಪಾಠದ ಸಮಯವೇ ಇಲ್ಲದಂತಾಗಿದೆ. ಇದರ ನಡುವೆ ಕಳೆದ ಎರಡು ತಿಂಗಳಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ

ಕಾಂಗ್ರೇಸ್‍ನ ಗ್ಯಾರಂಟಿ ಯೋಜನೆಯ ಸಮೀಕ್ಷೆಗೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರನ್ನು ಬಳಸಿಕೊಳ್ಳುವುದು ಖಂಡನೀಯ | ಹೋರಾಟಕ್ಕೆ ಪುತ್ತಿಲ ಪರಿವಾರ ಬೆಂಬಲ ಘೋಷಣೆ Read More »

ಮಾ.4 : ಬೃಹತ್ ಆಧ್ಯಾತ್ಮಿಕ ಸಂಗಮ ‘ನೂರೇ ಅಜ್ಮೀರ್’ ಮತ್ತು ಶೈಖುನಾ ಶಂಸುಲ್ ಉಲಮಾ ‘ಆಂಡ್ ನೇರ್ಚೆ’

ಪುತ್ತೂರು: ಸುನ್ನಿ ಸಂಘಟನೆಗಳಾದ ಎಸ್‍ ಕೆ ಎಸ್‍ ಎಸ್‍ ಎಫ್ ಹಾಗೂ ಗಾಳಿಮುಖ ಎಸ್‍ ವೈ ಎಸ್ ಜಂಟಿ ಆಶ್ರಯದಲ್ಲಿ ಉಸ್ತಾದ್ ವಲಿಯುದ್ದೀನ್ ಫೈಝಿ ನೇತೃತ್ವದಲ್ಲಿ ಬೃಹತ್ ಆಧ್ಯಾತ್ಮಿಕ ಸಂಗಮ ‘ನೂರೇ ಅಜ್ಮೀರ್’ ಮತ್ತು ಶೈಖುನಾ ಶಂಸುಲ್ ಉಲಮಾ ‘ಆಂಡ್ ನೇರ್ಚೆ’ ಕಾರ್ಯಕ್ರಮ ಮಾ.4 ರಂದು ಗಾಳಿಮುಖ ಬದ್ರ್ ಜುಮ್ಮಾ ಮಸೀದಿಯ ಶಂಸುಲ್ ಉಲಮಾ ನಗರದಲ್ಲಿ ನಡೆಯಲಿದೆ ಎಂದು ದಾರಿಮೀಸ್ ಸೆಂಟ್ರಲ್ ಕಮಿಟಿ ಜತೆ ಕಾರ್ಯದರ್ಶಿ ಅಬ್ದುಲ್ ಕರೀಂ ದಾರಿಮಿ ತಿಳಿಸಿದ್ದಾರೆ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ,

ಮಾ.4 : ಬೃಹತ್ ಆಧ್ಯಾತ್ಮಿಕ ಸಂಗಮ ‘ನೂರೇ ಅಜ್ಮೀರ್’ ಮತ್ತು ಶೈಖುನಾ ಶಂಸುಲ್ ಉಲಮಾ ‘ಆಂಡ್ ನೇರ್ಚೆ’ Read More »

ಪೈಂಟರ್ ಬಾಲಕೃಷ್ಣ ಆತ್ಮಹತ್ಯೆ !

ಪುತ್ತೂರು: ಬೆದ್ರಾಳ ನಿವಾಸಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ. ವೃತ್ತಿಯಲ್ಲಿ ಪೈಂಟರ್ ಆಗಿರುವ ಬಾಲಕೃಷ್ಣ ಆತ್ಮಹತ್ಯೆ ಮಾಡಿಕೊಂಡವರು. ಬೆದ್ರಾಳ ರೈಲ್ವೇ ಸೇತುವೆ ಬಳಿ ವಾಸಿಸುತ್ತಿದ್ದ ಅವರು, ಕಳೆದ ಕೆಲ ಸಮಯಗಳಿಂದ ಸಾಮೆತ್ತಡ್ಕದಲ್ಲಿ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದರು ಎನ್ನಲಾಗಿದೆ. ಆತ್ಮಹತ್ಯೆಗೆ ಕಾರಣಗಳು ತಿಳಿದು ಬಂದಿಲ್ಲ.

ಪೈಂಟರ್ ಬಾಲಕೃಷ್ಣ ಆತ್ಮಹತ್ಯೆ ! Read More »

ಎನ್‍ಡಿಎಗೆ 377 ಸೀಟು | ಇಂಡಿಯಾ ಕೂಟಕ್ಕೆ 93 ಸ್ಥಾನ | ಕರ್ನಾಟಕದಲ್ಲಿ ಎನ್‍ಡಿಎ 23, ಕಾಂಗ್ರೆಸ್ 5 ಸ್ಥಾನ | ಸಮೀಕ್ಷೆ ನೀಡಿದ ಝೀ ನ್ಯೂಸ್

ನವದೆಹಲಿ: ಈಗ ಲೋಕಸಭೆ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್ ಡಿ ಎ ಗೆ 377 ಸೀಟು ಗೆಲ್ಲಲಿದೆ. ಇಂಡಿಯಾ ಕೂಟಕ್ಕೆ ಕೇವಲ 93 ಸೀಟು ಬರಲಿವೆ ಎಂದು ಝೀ ನ್ಯೂಸ್ – ಮ್ಯಾಟ್ರಿಜ್ ಚುನಾವಣಾ ಪೂರ್ವ ಸಮೀಕ್ಷೆ ಹೇಳಿದೆ. ಕಳೆದ ಚುನಾವಣೆಯಲ್ಲಿ ಎನ್ ಡಿ ಎ 351 ಹಾಗೂ ಯುಪಿಎ 90 ಸ್ಥಾನ ಗಳಿಸಿದ್ದವು. ಇದೇ ವೇಳೆ, ಕರ್ನಾಟಕದಲ್ಲಿ ಎನ್ ಡಿ ಎ 23 ಹಾಗೂ ಕಾಂಗ್ರೆಸ್ 5 ಸ್ಥಾನ ಗೆಲ್ಲಲ್ಲಿದೆ ಎಂದು ಸಮೀಕ್ಷೆ ಹೇಳಿದೆ.

ಎನ್‍ಡಿಎಗೆ 377 ಸೀಟು | ಇಂಡಿಯಾ ಕೂಟಕ್ಕೆ 93 ಸ್ಥಾನ | ಕರ್ನಾಟಕದಲ್ಲಿ ಎನ್‍ಡಿಎ 23, ಕಾಂಗ್ರೆಸ್ 5 ಸ್ಥಾನ | ಸಮೀಕ್ಷೆ ನೀಡಿದ ಝೀ ನ್ಯೂಸ್ Read More »

ಪಾದಚಾರಿಗೆ ಬೈಕ್ ಡಿಕ್ಕಿ | ಪ್ರಕರಣ ದಾಖಲು

ಪುತ್ತೂರು: ಬೈಕೊಂದು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಗಾಯಗೊಂಡ ಘಟನೆ ಕುಂಬ್ರದಲ್ಲಿ ನಡೆದಿದೆ. ಕೆದಂಬಾಡಿ ಗ್ರಾಮದ ಕುರಿಕ್ಕಾರ ನಿವಾಸಿ ಕೊರಗಪ್ಪ ಪೂಜಾರಿ ಗಾಯಗೊಂಡವರು. ಪತ್ನಿ ರೇವತಿ ಜೊತೆ ಕುಂಬ್ರ ಪೇಟೆಗೆ ಬಂದು ರಸ್ತೆ ಬದಿ ನಡೆದುಕೊಂಡು ಬರುತ್ತಿದ್ದ ವೇಳೆ ಹಿಂದಿನಿಂದ ಬಂದ ಬೈಕ್ ಡಿಕ್ಕಿಯಾಗಿದೆ. ಪರಿಣಾಮ ರಸ್ತೆಗೆ ಬಿದ್ದು ಗಾಯಗೊಂಡರು. ತಕ್ಷಣ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾದಚಾರಿಗೆ ಬೈಕ್ ಡಿಕ್ಕಿ | ಪ್ರಕರಣ ದಾಖಲು Read More »

ಸರಕಾರದ ರಿಯಾಯಿತಿ ದರದ ಸಾಲಗಳು ದ.ಕ., ಉಡುಪಿಯಲ್ಲಿ ಅನುಷ್ಠಾನವಾಗಿಲ್ಲ | ಅಧಿವೇಶನದಲ್ಲಿ ಸರಕಾರದ ಗಮನಸೆಳೆದ ಶಾಸಕ ಅಶೋಕ್ ಕುಮಾರ್ ರೈ

ಪುತ್ತೂರು: ರಾಜ್ಯ ಸರಕಾರ ಕೃಷಿಕರ, ರೈತರ ಪರವಾಗಿದೆ. ಈ ಕಾರಣಕ್ಕೆ ಸರಕಾರ ಕೃಷಿಕರಿಗೆ ಸಹಕಾರಿ ಸಂಘಗಳ ಮೂಲಕ ಶೂನ್ಯ ಬಡ್ಡಿದರದಲ್ಲಿ ನೀಡುತ್ತಿದ್ದ ಅಲ್ಪಾವಧಿ ಸಾಲದ ಮೊತ್ತ 3 ಲಕ್ಷದಿಂದ 5 ಲಕ್ಷಕ್ಕೆ ಏರಿಸಿತ್ತು. ಶೇ. 3 ಬಡ್ಡಿದರದಲ್ಲಿ ಕೃಷಿಕರಿಗೆ ದೊರೆಯುತ್ತಿದ್ದ ಸಾಲದ ಮೊತ್ತವನ್ನು 10 ರಿಂದ 15 ಲಕ್ಷಕ್ಕೆ ಏರಿಕೆ ಮಾಡಿದೆ. ಆದರೆ ಈ ಎರಡೂ ಯೋಜನೆಗಳು ದ ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಅನುಷ್ಠಾನವಾಗಿಲ್ಲ ಇದುವರೆಗೂ ಯಾವುದೇ ಕೃಷಿಕರಿಗೆ ಯೋಜನೆಯು ತಲುಪಿಲ್ಲ ಎಂದು ಪುತ್ತೂರು ಶಾಸಕರಾದ

ಸರಕಾರದ ರಿಯಾಯಿತಿ ದರದ ಸಾಲಗಳು ದ.ಕ., ಉಡುಪಿಯಲ್ಲಿ ಅನುಷ್ಠಾನವಾಗಿಲ್ಲ | ಅಧಿವೇಶನದಲ್ಲಿ ಸರಕಾರದ ಗಮನಸೆಳೆದ ಶಾಸಕ ಅಶೋಕ್ ಕುಮಾರ್ ರೈ Read More »

ಮಾ.3: ಆತ್ರೇಯ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್ ನಿಂದ ಉಚಿತ ಉದರ ಸಂಬಂಧಿ ರೋಗಗಳ ತಪಾಸಣಾ ಶಿಬಿರ

ಪುತ್ತೂರು: ಪುರುಷರಕಟ್ಟೆ ಆತ್ರೇಯ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್ ವತಿಯಿಂದ ಉಚಿತ ಉದರ ಸಂಬಂಧಿ ರೋಗಗಳ ತಪಾಸಣಾ ಶಿಬಿರ ಮಾ.3 ಭಾನುವಾರ ಬೆಳಿಗ್ಗೆ 10 ರಿಂದ ಸಂಜೆ 5 ರ ತನಕ ನಡೆಯಲಿದೆ. ಶಿಬಿರದಲ್ಲಿ ಗ್ಯಾಸ್ ಟ್ರಬಲ್, ಆಸಿಡಿಟಿ, ಮಲ ಬದ್ಧತೆ, ಹೊಟ್ಟೆ ನೋವು, ಎದೆ ಮತ್ತು ಹೊಟ್ಟೆ ಉರಿ, ಹುಳಿ ತೇಗು, ಹೊಟ್ಟೆ ಉಬ್ಬರ, ಕಿಡ್ನಿ ಹಾಗೂ ಲಿವರ್ ಸಂಬಂಧಿ ಮುಂತಾದ ಸಮಸ್ಯೆ ಇದ್ದವರು ಕೂಡಲೇ ತಪಾಸಣೆ ಮಾಡಿಕೊಂಡು ಮುಂದೆ ಆಗುವ ಅನೇಕ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಬಹುದು. ಆತ್ರೇಯ

ಮಾ.3: ಆತ್ರೇಯ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್ ನಿಂದ ಉಚಿತ ಉದರ ಸಂಬಂಧಿ ರೋಗಗಳ ತಪಾಸಣಾ ಶಿಬಿರ Read More »

ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ | ಕರ್ನಾಟಕ ರಾಜ್ಯಾದ್ಯಂತ 6,98,624 ಜನ ಪರೀಕ್ಷೆ ಬರೆಯಲಿದ್ದಾರೆ

ಬೆಂಗಳೂರು : ಇಂದಿನಿಂದ ಮಾ.22 ರವರೆಗೆ ರಾಜ್ಯಾದ್ಯಂತ ಈ ಸಾಲಿನ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಗಳು ನಡೆಯಲಿದ್ದು, ಬೆಳಿಗ್ಗೆ 10.30 ಗಂಟೆಯಿಂದ ಮಧ್ಯಾಹ್ನ 01.30 ಗಂಟೆಯವರೆಗೆ ಪರೀಕ್ಷೆಗಳು ನಡೆಯಲಿವೆ. .ಪರೀಕ್ಷೆಗಳನ್ನು ಸುಗಮ ಹಾಗೂ ಶಾಂತಿಯುತವಾಗಿ ನಡೆಸುವ ಉದ್ದೇಶದಿಂದ ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ಸಿ.ಆರ್.ಪಿ.ಸಿ 1973 ರ ಕಲಂ 144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಬಾರಿ ಕರ್ನಾಟಕ ರಾಜ್ಯಾದ್ಯಂತ 6,98,624 ಮಕ್ಕಳು ದ್ವೀತಿಯ ಪಿಯುಸಿ ಪರೀಕ್ಷೆ ಬರೆಯುತ್ತಿದ್ದಾರೆ. 2023-24 ಸಾಲಿನಿಂದ ದ್ವಿತೀಯ ಪಿಯುಸಿ

ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ | ಕರ್ನಾಟಕ ರಾಜ್ಯಾದ್ಯಂತ 6,98,624 ಜನ ಪರೀಕ್ಷೆ ಬರೆಯಲಿದ್ದಾರೆ Read More »

ಉದಯವಾಣಿ ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ನಿಧನ

ಮಂಗಳೂರು: ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಇಂದು ಮುಂಜಾನೆ ನಿಧನ ಹೊಂದಿದ್ದಾರೆ. ಮೂಲತಃ ಕಾರ್ಕಳ ತಾಲೂಕಿನ ಕರ್ವಾಲು ಗ್ರಾಮದವರಾದ ಮನೋಹರ ಪ್ರಸಾದ್ ಮಂಗಳೂರಿನಲ್ಲಿ ಕಾಲೇಜು ಪದವಿ ಶಿಕ್ಷಣ ಪೂರ್ತಿಗೊಳಿಸಿ ನವಭಾರತ ಪತ್ರಿಕೆಯಿಂದ ಪತ್ರಿಕಾ ವೃತ್ತಿ ಜೀವನ ಆರಂಭಿಸಿದ್ದರು. ಬಳಿಕ ಉದಯವಾಣಿ ಪತ್ರಿಕೆಯ ಮಂಗಳೂರು ವರದಿಗಾರರಾಗಿ ಸೇರ್ಪಡೆಗೊಂಡಿದ್ದರು. ಬಳಿಕ ಮುಖ್ಯ ವರದಿಗಾರರಾಗಿ, ಸ್ಥಾನೀಯ ಸಂಪಾದಕರಾಗಿದ್ದುಕೊಂಡು 36 ವರ್ಷಗಳ ಕಾಲ ಸೇವೆ ಸಲ್ಲಿಸಿ, ಕಳೆದ ಎರಡು ವರ್ಷಗಳ ಹಿಂದೆ ನಿವೃತ್ತರಾಗಿದ್ದರು.

ಉದಯವಾಣಿ ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ನಿಧನ Read More »

error: Content is protected !!
Scroll to Top