ಅಪಘಾತ

ಕೌಡಿಚ್ಚಾರಿನಲ್ಲಿ ಕಾರು ಪಲ್ಟಿ !

ಪುತ್ತೂರು: ಮಡಿಕೇರಿಯಿಂದ ಕಾರ್ಕಳಕ್ಕೆ ಹೋಗುತ್ತಿದ್ದ ಕಾರೊಂದು ಕೌಡಿಚ್ಚಾರಿನ ಮಡ್ಯಂಗಲ ಬಳಿ ಪಲ್ಟಿಯಾಗಿದೆ. ಮಡಿಕೇರಿಯ ನಾಗೇಶ್ ಎಂಬವರು ತನ್ನ ಸ್ನೇಹಿತನನ್ನು ಕರೆತರಲು ಮಡಿಕೇರಿಯಿಂದ ಬೆಳಗ್ಗಿನ ಜಾವ ಕಾರ್ಕಳಕ್ಕೆ ತೆರಳುತ್ತಿದ್ದ ವೇಳೆ ಕೌಡಿಚ್ಚಾರಿನ ಬಳಿ ಎದುರಿನಿಂದ ರಾಂಗ್ ಸೈಡಲ್ಲಿ ಬರುತ್ತಿದ್ದ ವಾಹನವೊಂದರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಕಾರು ಪಲ್ಟಿಯಾಗಿದೆ. ಕಾರನ್ನು ಸ್ವತಃ ನಾಗೇಶ್ ಅವರೇ ಚಲಾಯಿಸುತ್ತಿದ್ದು ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ.

ಕೌಡಿಚ್ಚಾರಿನಲ್ಲಿ ಕಾರು ಪಲ್ಟಿ ! Read More »

ಪಾದಚಾರಿಗೆ ಬೈಕ್ ಡಿಕ್ಕಿ ಹೊಡೆದು ಮೃತ್ಯು !

ಸುಳ್ಯ: ಬೈಕೊಂದು  ರಸ್ತೆ ದಾಟುತ್ತಿದ್ದ ಪಾದಚಾರಿಯೋರ್ವರಿಗೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಪಾದಚಾರಿ ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಜಾಲ್ಸೂರಿನಲ್ಲಿ ನಡೆದಿದೆ. ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿ ದೇವರಗುಂಡ ಪುರುಷೋತ್ತಮ ಗೌಡ (72) ಮೃತಪಟ್ಟ ಪಾದಚಾರಿ ಜಾಲ್ಸೂರಿನ ಅರಣ್ಯ ತಪಾಸಣಾ ಚೆಕ್ ಪೋಸ್ಟ್ ಬಳಿ ರಸ್ತೆದಾಟುತ್ತಿದ್ದ ಸಂದರ್ಭದಲ್ಲಿ ಪುತ್ತೂರು ಕಡೆಯಿಂದ ಹೋಗುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ತಲೆಗೆ ಗಂಭೀರ ಗಾಯಗೊಂಡ ಅವರನ್ನು ತಕ್ಷಣ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ

ಪಾದಚಾರಿಗೆ ಬೈಕ್ ಡಿಕ್ಕಿ ಹೊಡೆದು ಮೃತ್ಯು ! Read More »

ರಸ್ತೆ ಕಾಮಗಾರಿ ವೇಳೆ ಲಾರಿ ಮೇಲೆ ಬಿದ್ದ ಮರ !

ಉಪ್ಪಿನಂಗಡಿ: ಪುತ್ತೂರು-ಉಪ್ಪಿನಂಗಡಿ ಹೆದ್ದಾರಿಯಲ್ಲಿ ಕಾಮಗಾರಿ ಹಿನ್ನಲೆಯಲ್ಲಿ ಹಿಟಾಚಿಯಲ್ಲಿ ಮಣ್ಣು ತೆಗೆಯುತ್ತಿದ್ದ ವೇಳೆ ಸಂಚರಿಸುತ್ತಿದ್ದ ಲಾರಿಯೊಂದರ ಮೇಲೆ ಮರ ಬಿದ್ದ ಘಟನೆ  ಬೇರಿಕೆಯಲ್ಲಿ ನಡೆದಿದೆ. ಘಟನೆಯಿಂದ ಯಾವುದೇ ಅವಘಡಗಳಾಗದಿದ್ದರೂ, ಲಾರಿಗೆ ಹಾನಿಯಾಗಿದೆ. ಈ ಪರಿಣಾಮ ಸುಮಾರು 5 ವಿದ್ಯುತ್‍ ಕಂಬಗಳು ಧರೆಗುರುಳಿದ್ದು, ಕೆಲಸಹೊತ್ತು ಸಂಚಾರಕ್ಕೆ ತಡೆ ಉಂಟಾಯಿತು. ಘಟನೆಯಿಂದ ಹೆಚ್ಚಿನ ಅನಾಹುತ ತಪ್ಪಿದೆ.

ರಸ್ತೆ ಕಾಮಗಾರಿ ವೇಳೆ ಲಾರಿ ಮೇಲೆ ಬಿದ್ದ ಮರ ! Read More »

ಶಬರಿಮಲೆಯಿಂದ ವಾಪಾಸಾಗುತ್ತಿದ್ದಾಗ ಅಪಘಾತ | ಓರ್ವ ಮೃತ್ಯು

ಶಬರಿಮಲೆಗೆ ಕೊಡಗಿನಿಂದ ತೆರಳಿದ ತಂಡವೊಂದು ಮರಳಿ ಬರುವಾಗ ವಾಹನ ಮರಕ್ಕೆ ಡಿಕ್ಕಿಯಾದ ಅಪಘಾತಕ್ಕೀಡಾಗಿ ಓರ್ವ ಮೃತಪಟ್ಟ ಘಟನೆ ಕೇರಳದ ಅಂಗಮಾಲಿಯ ಪೇರಂಬೂರ್ ಬಳಿ ನಡೆದಿದೆ. ಕುಶಾಲನಗರ ಹಾರಂಗಿ ದೊಡ್ಡತ್ತೂರು ನಿವಾಸಿ ಕುಂಞರಾಮ ಎಂಬವರ ಪುತ್ರ ಆಟೋ ಚಂದ್ರ ಮೃತಪಟ್ಟವರು. ಕುಶಾಲನಗರದ ಲಿಂಗಂ ಹರೀಶ್, ಸಂತೋಷ್ ಗಾಯಗೊಂಡವರು. ಗಾಯಾಳುಗಳನ್ನು ಪೆರಂಬೂರಿನ ರಾಜಗಿರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಶಬರಿಮಲೆಯಿಂದ ವಾಪಾಸಾಗುತ್ತಿದ್ದಾಗ ಅಪಘಾತ | ಓರ್ವ ಮೃತ್ಯು Read More »

ಮನೆಯ ಮೇಲ್ಛಾವಣಿಯಿಂದ ಬಿದ್ದು ಯುವಕ ಮೃತ್ಯು !

ಕಡಬ: ಮನೆಯ ಮೇಲ್ಛಾವಣಿಯಿಂದ ಬಿದ್ದು ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಕಡಬದಲ್ಲಿ ನಡೆದಿದೆ. ಆಲಂಕಾರು ಗ್ರಾಮದ ಬಾರ್ಕುಲಿ ನಿವಾಸಿ ಉದಯ ಕುಮಾರ್ (27) ಮೃತಪಟ್ಟ ಯುವಕ. ಕಾಮಗಾರಿ ಸಂದರ್ಭ ನೂತನ ಮನೆಯ ಮೇಲ್ಛಾವಣಿಯಿಂದ ಇಳಿಯುತ್ತಿದ್ದ ಸಂದರ್ಭಆಯತಪ್ಪಿ ಕೆಳಗೆ ಬಿದ್ದ ಪರಿಣಾಮ ಕುತ್ತಿಗೆದೆ ಗಂಭೀರ ಗಾಯವಾಗಿತ್ತು. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಶಸ್ತ್ರ ಚಿಕಿತ್ಸೆಗೊಳಪಡಿಸಲಾಯಿತು. ಬಳಿಕ ಹೆಚ್ಚಿಕ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಮನೆಯ ಮೇಲ್ಛಾವಣಿಯಿಂದ ಬಿದ್ದು ಯುವಕ ಮೃತ್ಯು ! Read More »

ಗ್ಯಾಸ್ ಸೋರಿಕೆ : ಯುವತಿ ಮೃತ್ಯು !

ಬೆಂಗಳೂರು: ಸ್ನಾನ ಮಾಡಲು ಬಾತ್‍ ರೂಮ್‍ ಹೋಗಿದ್ದ ಯುವತಿಯೋರ್ವಳು ಗ್ಯಾಸ್ ಸೋರಿಕೆಯಿಂದ ಮೃತಪಟ್ಟ ಘಟನೆ ಬೆಂಗಳೂರಿನ ಕಾಮಾಕ್ಷಿಪಾಳ್ಯದ ಮೀನಾಕ್ಷಿನಗರದಲ್ಲಿ ನಡೆದಿದೆ. ರಾಜೇಶ್ವರಿ (23) ಮೃತ ದುರ್ದೈವಿ. ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡಿತ್ತಿದ್ದ ರಾಜೇಶ್ವರಿ ಅಣ್ಣನ ಮದುವೆ ಪ್ರಯುಕ್ತ ರಜೆ ಹಾಕಿದ್ದಳು. ಬೆಳಗ್ಗೆ ಸ್ನಾನ ಮಾಡಲು ಬಾತ್‍ ರೂಮ್‍ ಗೆ ಹೋಗಿದ್ದು, ಗ್ಯಾಸ್ ಗೀಸರ್‍ ಸೋರಿಕೆಯಾದಾಗ ವಿಷಾನಿಲದಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಎಷ್ಟು ಹೊತ್ತಾದರೂ ಹೊರಬಾರದಾಗ ಮನೆಯವರು ಬಾಗಿಲು ಬಡಿದಿದ್ದಾರೆ. ಬಳಿಕ ಬಾಗಿಲು ಒಡೆದು ಒಳಗೆ ಹೋದಾಗ ಪ್ರಜ್ಞೆ

ಗ್ಯಾಸ್ ಸೋರಿಕೆ : ಯುವತಿ ಮೃತ್ಯು ! Read More »

ಪಣಂಬೂರಿನಲ್ಲಿ ಕಾರ್ಮಿಕನ ಮೃತದೇಹ ಪತ್ತೆ !

ಪಣಂಬೂರು: ಉಡುಪಿಯಿಂದ ಮಂಗಳೂರಿಗೆ ತೆರಳುವ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕಾರ್ಮಿಕನ ಮೃತದೇಹ ಪತ್ತೆಯಾಗಿದೆ. ಒಡಿಶಾದ ರಶ್ಮಿ ರಂಜನ್ (44) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಎಪಿಎಂಸಿ ಯಾರ್ಡ್ ನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಅವರು ತಡರಾತ್ರಿ ರಸ್ತೆ ದಾಟುವ ಸಂದರ್ಭ ಅಪರಿಚಿತ ವಾಹನ ಡಿಕ್ಕಿ ಹೊಡೆದಿರುವ ಶಂಕೆ ವ್ಯಕ್ತವಾಗಿದೆ.

ಪಣಂಬೂರಿನಲ್ಲಿ ಕಾರ್ಮಿಕನ ಮೃತದೇಹ ಪತ್ತೆ ! Read More »

ಸ್ಕೂಟರ್ ಮೇಲೆ ಜಿಗಿದ ಕಡವೆ | ಇಬ್ಬರಿಗೆ ಗಾಯ

ಪುತ್ತೂರು: ಕಡವೆ ಜಿಗಿದ ಪರಿಣಾಮ ಚಲಿಸುತ್ತಿದ್ದ ಸ್ಕೂಟರ್ ಸವಾರರಿಬ್ಬರು ಗಾಯಗೊಂಡ ಘಟನೆ ಕಡಬ ತಾಲೂಕಿನ ಪಂಜ ಸಮೀಪ ನಡೆದಿದೆ. ಐವತ್ತೊಕ್ಲು ಗ್ರಾಮದ ನೇರಳ ಸುದರ್ಶನ ಹಾಗೂ ಪತ್ನಿ ಅಕ್ಷತಾ ಗಾಯಗೊಂಡವರು. ಸುಬ್ರಹ್ಮಣ್ಯದಿಂದ ತನ್ನ ಸ್ಕೂಟರ್‍ನಲ್ಲಿ ಪಂಜ ಕಡೆಗೆ ಬರುತ್ತಿದ್ದಾಗ ಎಡೋಣಿ ಎಂಬಲ್ಲಿ ಸ್ಕೂಟರ್ ಮೇಲೆ ಕಡವೆ ಜಿಗಿಯಿತು. ಪರಿಣಾಮ ಬಿದ್ದು ಸವಾರರಿಬ್ಬರು ಗಾಯಗೊಂಡರು ಎನ್ನಲಾಗಿದೆ. ಅಕ್ಷತಾ ಅವರ ತಲೆಗೆ ಗಾಯವಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.. ಸುದರ್ಶನ್‍ ಅವರಿಗೆ ಸಣ್ಣಪುಟ್ಟ ಗಾಯವಾಗಿದೆ. ಸ್ಥಳಕ್ಕೆ ಪಂಜ ಅರಣ್ಯ

ಸ್ಕೂಟರ್ ಮೇಲೆ ಜಿಗಿದ ಕಡವೆ | ಇಬ್ಬರಿಗೆ ಗಾಯ Read More »

ಉಪ್ಪಿನಂಗಡಿ ನೇತ್ರಾವತಿ ಸೇತುವೆಯಲ್ಲಿ ಸರಣಿ ಅಪಘಾತ !

ಪುತ್ತೂರು: ಉಪ್ಪಿನಂಗಡಿಯ ನೇತ್ರಾವತಿ ಸೇತುವೆಯ ಮೇಲೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಟ್ರಾಫಿಕ್ ದಟ್ಟಣಿ ಉಂಟಾದ ಘಟನೆ ಸೋಮವಾರ ನಡೆದಿದೆ. ಬೆಳ್ತಂಗಡಿ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ನಾಲ್ಕು ಕಾರುಗಳು ಉಪ್ಪಿನಂಗಡಿ ಸೇತುವೆಯ ಮೇಲೆ ಒಂದರ ಹಿಂದೆ ಒಂದರಂತೆ ಡಿಕ್ಕಿಯಾಗಿದೆ. ಅಪಘಾತದಿಂದ ಕಾರುಗಳಿಗೆ ಹಾನಿಯಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸೇತುವೆ ಮೇಲೆ ಈ ಘಟನೆ ನಡೆದ ಕಾರಣ ಎರಡು ದಿಕ್ಕುಗಳಲ್ಲಿಯೂ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನಗಳು ಸಾಲುಗಟ್ಟಿ ನಿಂತಿದೆ. ಉಪ್ಪಿನಂಗಡಿ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿದ್ದು ವಾಹನಗಳ ಸುಗಮ

ಉಪ್ಪಿನಂಗಡಿ ನೇತ್ರಾವತಿ ಸೇತುವೆಯಲ್ಲಿ ಸರಣಿ ಅಪಘಾತ ! Read More »

ಚಲಿಸುತ್ತಿದ್ದ ಬಸ್ಸಿನಿಂದ ಹೊರೆಕ್ಕೆಸೆಯಲ್ಪಟ್ಟು ಗಂಭಿರ ಗಾಯ !

ಪುತ್ತೂರು: ಕೆಎಸ್‍ಆರ್ ಟಿಸಿ ಬಸ್ಸಿನಿಂದ ಎಸೆಯಲ್ಪಟ್ಟ ವ್ಯಕ್ತಿಯೊಬ್ಬರು ಗಂಭೀರ ಗಾಯಗೊಂಡ ಘಟನೆ ಮಾಡನ್ನೂರು ಗ್ರಾಮದ ಕುಡ್ತಿನಡ್ಕದಲ್ಲಿ ನಡೆದಿದೆ. ಕಾಸರಗೋಡು ಜಿಲ್ಲೆಯ ದೇಲಂಪಾಡಿ ನಿವಾಸಿ ಪರಮೇಶ್ವರ (75) ಗಂಭೀರ ಗಾಯಗೊಂಡವರು. ತನ್ನ ಪತ್ನಿಯೊಂದಿಗೆ ಪುತ್ತೂರಿನಿಂದ ಸುಳ್ಯ ಕಡೆ ಕೆಎಸ್‍ ಆರ‍ ಟಿಸಿ ಬಸ್ಸಿನಲ್ಲಿ ತೆರಳುತ್ತಿದ್ದ ಸಂದರ್ಭ ಕುಡ್ತಿನಡ್ಕದಲ್ಲಿ ಬಸ್ಸಿನ ನಿರ್ವಾಹಕ ಹಿಂಬದಿ ಬಾಕಿಲನ್ನು ಹಾಕದ ಪರಿಣಾಮ ತಿರುವಿನಲ್ಲಿ ನಿರ್ಲಕ್ಷದ ಚಾಲನೆ ಮಾಡಿದ ಪರಿಣಾಮ ಹೊರೆಕ್ಕೆಸೆಯಲ್ಪಟ್ಟು ರಸ್ತೆ ಬದಿಯ ಚರಂಡಿಗೆ ಬಿದ್ದು ಗಂಭೀರ ಗಾಯುಗೊಂಡರು. ತಕ್ಷಣ ಅವರನ್ನು ಸುಳ್ಯ ಸರಕಾರಿ

ಚಲಿಸುತ್ತಿದ್ದ ಬಸ್ಸಿನಿಂದ ಹೊರೆಕ್ಕೆಸೆಯಲ್ಪಟ್ಟು ಗಂಭಿರ ಗಾಯ ! Read More »

error: Content is protected !!
Scroll to Top