ಅಪಘಾತ

ಹೂವಿನ ಸ್ಟಾಲ್‍ ಮೇಲೆ ಬಿದ್ದ ತೆರವಾದ ಕಟ್ಟಡದ ಗೋಡೆ : ಮಹಿಳೆಗೆ ಗಾಯ

ಪುತ್ತೂರು: ನಗರದ ಮಹಿಳಾ ಪೊಲೀಸ್ ಠಾಣೆಯ ಬಳಿ ಇತ್ತೇಚೆಗೆ ತೆರವಾದ ಕಟ್ಟಡದ ಪಕ್ಕದ ಕಟ್ಟಡದ ಗೋಡೆಯ ಭಾಗವೊಂದು ಜರಿದು ಬಿದ್ದ ಪರಿಣಾಮ ಹೂವಿನ ವ್ಯಾಪಾರಿ ಮಹಿಳೆಯೊಬ್ಬರು ಗಾಯಗೊಂಡ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಕಳೆದ ಕೆಲವು ಸಮಯದಿಂದ ವಿನಾಯಕ ಪ್ಲವರ್ ಸ್ಟಾಲ್ ನ ಮಾಲಕತ್ವದ ಹೂವಿನ ಅಂಗಡಿ ಮೇಲೆ ಗೋಡೆ ಜರಿದು ಬಿದ್ದಿದೆ. ಈ ಸಂದರ್ಭ ಗಾಯಗೊಂಡ ಮಹಿಳೆಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರು. ಸ್ಥಳಕ್ಕೆ ಅರುಣ್ ಕುಮಾರ್ ಪುತ್ತಿಲ, ಉಮೇಶ್ ಕೋಡಿಬೈಲು, ಪ್ರಜ್ವಲ್ ಘಾಟೆ ಭೇಟಿ ನೀಡಿದರು.

ಹೂವಿನ ಸ್ಟಾಲ್‍ ಮೇಲೆ ಬಿದ್ದ ತೆರವಾದ ಕಟ್ಟಡದ ಗೋಡೆ : ಮಹಿಳೆಗೆ ಗಾಯ Read More »

ಸಮುದ್ರದಲ್ಲಿ ಹಡಗು ಅವಘಡ : ನೀರುಪಾಲಾದ ಅಪಾಯಕಾರಿ ಬೃಹತ್‌ ಕಂಟೇನರ್‌ಗಳು

ಕರಾವಳಿ ಜನರಿಗೆ ಎಚ್ಚರಿಕೆ ನೀಡಿದ ನೈಸರ್ಗಿಕ ವಿಕೋಪ ನಿರ್ವಹಣೆ ಪ್ರಾಧಿಕಾರ ತಿರುನಂತಪುರಂ: ಕೊಚ್ಚಿಗೆ ಬರುತ್ತಿದ್ದ ಸರಕು ಸಾಗಣೆ ಹಡಗು ಅವಘಡಕ್ಕೀಡಾಗಿ ಅದರಲ್ಲಿದ್ದ ತೈಲ ತುಂಬಿದ ಕಂಟೇನರ್‌ಗಳು ಸಮುದ್ರ ಪಾಲಾಗಿದ ಘಟನೆ ಅರಬ್ಬಿ ಸಮುದ್ರದಲ್ಲಿ ಸಂಭವಿಸಿದ್ದು, ಈ ಕಂಟೇನರ್‌ಗಳು ದಡಕ್ಕೆ ಬಂದರೆ ಹತ್ತಿರ ಹೋಗದಂತೆ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಸುಮಾರು 10 ದೊಡ್ಡ ಕಂಟೇನರ್‌ಗಳು ಸಮುದ್ರ ಪಾಲಾಗಿದ್ದು, ಮೀನುಗಾರರಲ್ಲಿ ಆತಂಕ ಸೃಷ್ಟಿಯಾಗಿದೆ. ಕಂಟೇನರ್‌ಗಳು ದಡಕ್ಕೆ ಬಂದರೆ ಅವುಗಳ ಬಳಿ ತೆರಳದಂತೆ ಕೇರಳ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಪ್ರಾಧಿಕಾರ

ಸಮುದ್ರದಲ್ಲಿ ಹಡಗು ಅವಘಡ : ನೀರುಪಾಲಾದ ಅಪಾಯಕಾರಿ ಬೃಹತ್‌ ಕಂಟೇನರ್‌ಗಳು Read More »

ತೋಟಕ್ಕೆ ಉರುಳಿ ಬಿದ್ದ ಮಾರುತಿ ಎರ್ಟಿಗಾ ಕಾರು

ಪುತ್ತೂರು: ಪುತ್ತೂರಿನಿಂದ ಕಾಣಿಯೂರು ಕಡೆಗೆ ಸಂಚರಿಸುತ್ತಿದ್ದ ಮಾರುತಿ ಎರ್ಟಿಗಾ ಕಾರೊಂದು ಕಾಣಿಯೂರು ಸುಬ್ರಹ್ಮಣ್ಯ ಮುಖ್ಯರಸ್ತೆಯ ಗಡಿಪಿಲದಲ್ಲಿರುವ ಕರೆಮನೆ ಕಟ್ಟಿ ಎಂಬ ಸ್ಥಳದ ಸಮೀಪ ಅಪಘಾತಕ್ಕೀಡಾಗಿದೆ. ಚಾಲಕನು ಕಾರನ್ನು ಮುಖ್ಯ ರಸ್ತೆಯಿಂದ ಪಕ್ಕಕ್ಕೆ ಇಳಿಸುವ ಪ್ರಯತ್ನದಲ್ಲಿದ್ದಾಗ, ರಸ್ತೆಯ ಬದಿಯ ತೋಟಕ್ಕೆ ಉರುಳಿ ಬಿದ್ದಿದೆ. ಪುತ್ತೂರು ಕಡೆಯಿಂದ ಕಾಣಿಯೂರು ಮಾರ್ಗವಾಗಿ ಚಲಿಸುತ್ತಿದ್ದ ಮಾರುತಿ ಎರ್ಟಿಗಾ ಕಾರು, ಗಡಿಪಿಲ ಕರೆಮನೆ ಕಟ್ಟೆ ಬಳಿ ಬಂದಾಗ ಚಾಲಕನು ಎದುರಿನಿಂದ ಬರುತ್ತಿದ್ದ ವಾಹನಕ್ಕೆ ದಾರಿ ಮಾಡಿಕೊಡಲು ಕಾರನ್ನು ರಸ್ತೆಯ ಅಂಚಿಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಆದರೆ,

ತೋಟಕ್ಕೆ ಉರುಳಿ ಬಿದ್ದ ಮಾರುತಿ ಎರ್ಟಿಗಾ ಕಾರು Read More »

ಕಾಂಕ್ರಿಟ್‍  ಮಿಕ್ಸಿಂಗ್‍ ವಾಹನದಡಿ ಬಿದ್ದು ಮಹಿಳೆ ಮೃತ್ಯು | ಕೆಲಸ ಮಾಡುತ್ತಿದ್ದ ವೇಳೆ ಘಟನೆ

ಪುತ್ತೂರು: ಮಹಿಳೆಯೊಬ್ಬರು ರಸ್ತೆ ಕಾಂಕ್ರಿಟೀಕರಣ ಕಾಮಗಾರಿಯ ವೇಳೆ ಕಾಂಕ್ರೀಟ್ ಮಿಕ್ಸಿಂಗ್ ವಾಹನದಡಿಗೆ ಬಿದ್ದು ಮೃತಪಟ್ಟ ಘಟನೆ ಬೆಟ್ಟಂಪಾಡಿ ಗ್ರಾಮದ ಬಿಲ್ವಗಿರಿ ಸಮೀಪ ನಡೆದಿದೆ. ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಬೊಮ್ಮಾಳ ಗ್ರಾಮದ ಬಸವರಾಜರವರ ಪತ್ನಿ ಗೌರಮ್ಮ (28) ಮೃತಪಟ್ಟವರು. ಬೆಟ್ಟಂಪಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ರೆಂಜದಿಂದ ಬಿಲ್ವಗಿರಿ ಮೂಲಕ ಸಂಪರ್ಕ ಕಲ್ಪಿಸುವ ರಸ್ತೆಗೆ ಕೆಲ ದಿನಗಳಿಂದ ಕಾಮಗಾರಿ ನಡೆಯುತ್ತಿದ್ದು ರಾಯಚೂರು ಮೂಲದ ಒಂದೇ ಕುಟುಂಬದ ಹಲವು ಮಂದಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರು. ಶುಕ್ರವಾರ ಸಂಜೆ ಕೆಲಸ ಮಾಡುತ್ತಿರುವ

ಕಾಂಕ್ರಿಟ್‍  ಮಿಕ್ಸಿಂಗ್‍ ವಾಹನದಡಿ ಬಿದ್ದು ಮಹಿಳೆ ಮೃತ್ಯು | ಕೆಲಸ ಮಾಡುತ್ತಿದ್ದ ವೇಳೆ ಘಟನೆ Read More »

ಟೆಂಪೊ ಟ್ರಾವೆಲರ್‌  – ಕಾರು ನಡುವೆ   ಢಿಕ್ಕಿ | ಪ್ರಾಣಾಪಾಯದಿಂದ ಪಾರು

ಪುತ್ತೂರು : ಟೆಂಪೊ ಟ್ರಾವೆಲರ್‌ ವಾಹನ ಮತ್ತು ಕಾರಿನ ನಡುವೆ ಢಿಕ್ಕಿಯಾದ ಘಟನೆ ಪುತ್ತೂರಿನ ಬೈಪಾಸ್ ರಸ್ತೆಯ ಬೊಳುವಾರು ಸಮೀಪದಲ್ಲಿ ನಡೆದಿದೆ.  ಈ ಘಟನೆ ತಡ ರಾತ್ರಿ ವೇಳೆ ನಡೆದಿದ್ದು,  ಅದೃಷ್ಟವಶಾತ್‍ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಗಳೂರಿನಿಂದ ಮೈಸೂರು ಕಡೆಗೆ ಸಂಚರಿಸುತ್ತಿದ್ದ ಟೆಂಪೊ ಟ್ರಾವೆಲರ್‌ ಮತ್ತು ಪುತ್ತೂರಿನಿಂದ ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ಬಲೇನೋ ಕಾರು ನಡುವೆ ಡಿಕ್ಕಿಯಾಗಿದೆ. ಡಿಕ್ಕಿಯಾದ ಪರಿಣಾಮ ಹಲವು ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಆದರೆ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪುತ್ತೂರಿನ ಬೈಪಾಸ್‌ ರಸ್ತೆಯ ಅಪಾಯಕಾರಿ

ಟೆಂಪೊ ಟ್ರಾವೆಲರ್‌  – ಕಾರು ನಡುವೆ   ಢಿಕ್ಕಿ | ಪ್ರಾಣಾಪಾಯದಿಂದ ಪಾರು Read More »

ಹಿಟ್‍ ಆಂಡ್ ರನ್‍ | ಗಾಯಗೊಂಡ ಅರಿಯಡ್ಕ ಗ್ರಾಪಂ ಮಾಜಿ ಅಧ್ಯಕ್ಷೆ ಸವಿತಾ ಎಸ್‍.

ಪುತ್ತೂರು: ಹಿಟ್ ಆಂಡ್ ರನ್‌ ನಲ್ಲಿ ಅರಿಯಡ್ಕ ಗ್ರಾ. ಪಂ ಮಾಜಿ ಅಧ್ಯಕ್ಷೆ ಸವಿತಾ ಎಸ್.ರವರು ಗಾಯಗೊಂಡ ಘಟನೆ ಬುಧವಾರ ರಾಷ್ಟ್ರೀಯ ಹೆದ್ದಾರಿ 275 ರ ಕುಂಬ್ರ ಸಮೀಪದ ಶೇಖಮಲೆಯಲ್ಲಿ ನಡೆದಿದೆ. ಸವಿತಾರವರು ಚಲಾಯಿಸುತ್ತಿದ್ದ ಸ್ಕೂಟರ್‌ ಶೇಖಮಲೆ ಮಸೀದಿ ಹತ್ತಿರ ಟೆಂಪೋ ಟ್ರಾವೆಲ್ಲರ್‌ ವೊಂದು ಎದುರಿನಿಂದ ಬರುತ್ತಿದ್ದ ವಾಹನವನ್ನು ತಪ್ಪಿಸುವ ಭರದಲ್ಲಿ ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಡಿಕ್ಕಿಯ ರಭಸಕ್ಕೆ ಸ್ಕೂಟರ್ ಪಲ್ಟಿಯಾಗಿದ್ದು ಸವಾರ ರಸ್ತೆಗೆ ಎಸೆಯಲ್ಪಟ್ಟಿದ್ದರು. ಗಾಯಾಳುವನ್ನು ತಕ್ಷಣವೇ ಕುಂಬ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ನಿರ್ದೇಶಕ

ಹಿಟ್‍ ಆಂಡ್ ರನ್‍ | ಗಾಯಗೊಂಡ ಅರಿಯಡ್ಕ ಗ್ರಾಪಂ ಮಾಜಿ ಅಧ್ಯಕ್ಷೆ ಸವಿತಾ ಎಸ್‍. Read More »

ಭೀಕರ ಅಪಘಾತ : ಕೆನರಾ ಬ್ಯಾಂಕ್‌ ಮ್ಯಾನೇಜರ್‌ ಸಹಿತ ಆರು ಮಂದಿ ಸಾವು

ಡಿವೈಡರ್‌ ಹಾರಿದ ಕಾರಿನಿಂದಾಗಿ ಸಂಭವಿಸಿದ ಸರಣಿ ಅಪಘಾತ ಬೆಂಗಳೂರು: ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡಿದ್ದ ಬಸ್ ಚಾಲಕ ಕೂಡ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದಾರೆ. ಕಾರು, ಕಂಟೇನರ್​ ಮತ್ತು ಖಾಸಗಿ ಬಸ್​ ನಡುವೆ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಜಯಪುರದತ್ತ ಹೋಗುತ್ತಿದ್ದ ಮಹಿಂದ್ರಾ ಕಾರು ಡಿವೈಡರ್ ಹಾರಿ

ಭೀಕರ ಅಪಘಾತ : ಕೆನರಾ ಬ್ಯಾಂಕ್‌ ಮ್ಯಾನೇಜರ್‌ ಸಹಿತ ಆರು ಮಂದಿ ಸಾವು Read More »

ಆಟವಾಡಲು ಕಾರು ಹತ್ತಿದ ನಾಲ್ವರು ಪುಟ್ಟ ಕಂದಮ್ಮಗಳು | ಉಸಿರುಗಟ್ಟಿ ಮೃತ್ಯು

ಆಂಧ್ರ: ನಾಲ್ವರು ಪುಟ್ಟಮಕ್ಕಳು ಆಟ ಆಡಲು ಕಾರಿನೊಳಗೆ ಹೋಗಿ ಉಸಿರುಗಟ್ಟಿ ಮೃತಪಟ್ಟ ಘಟನೆ ಆಂಧ್ರ ಪ್ರದೇಶದ ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ. ಚಾರುಮತಿ (8), ಚರಿಷ್ಮಾ (6), ಮನಸ್ಸಿನಿ (6) ಹಾಗೂ ಉದಯ್ (8) ಮೃತ ಪುಟ್ಟ ಕಂದಮ್ಮಗಳು. ಬೆಳಗ್ಗೆಯೇ ಆಟ ಆಡೋದಕ್ಕೆ ಹೋದ ಮಕ್ಕಳು ಎಷ್ಟು ಹೊತ್ತಾದ್ರೂ ಮನೆಗೆ ವಾಪಸ್‌ ಬರಲಿಲ್ಲ. ತಕ್ಷಣ ಪೋಷಕರು ಮಕ್ಕಳನ್ನು ಹುಡುಕುವ ಪ್ರಯತ್ನ ಮಾಡಿದ್ರು. ಹುಡುಕುತ್ತಾ ಹೊರಟವರಿಗೆ ಸಿಕ್ಕ ಕಾರಿನಲ್ಲಿ ತಮ್ಮದೇ ಕಂದಮ್ಮಗಳ ಮೃತ ದೇಹ ಕಂಡಿದ್ದಾರೆ. ದ್ವಾರವೂಡಿಯ ಸರ್ಕಾರಿ ಕಛೇರಿ

ಆಟವಾಡಲು ಕಾರು ಹತ್ತಿದ ನಾಲ್ವರು ಪುಟ್ಟ ಕಂದಮ್ಮಗಳು | ಉಸಿರುಗಟ್ಟಿ ಮೃತ್ಯು Read More »

ಕೆಎಸ್‌ಆರ್‌ಟಿಸಿ ಬಸ್‍ – ಲಾರಿಯ ನಡುವೆ ಭೀಕರ ಅಪಘಾತ | ಬಸ್‍ ಚಾಲಕ ಸೇರಿ ನಾಲ್ವರಿಗೆ ಗಾಯ

ಗುಂಡ್ಯ:  ಕೆಎಸ್‌ಆರ್‌ಟಿಸಿ ಬಸ್‍ ಹಾಗೂ ಲಾರಿಯ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬಸ್ ಚಾಲಕ ಸೇರಿದಂತೆ ನಾಲ್ವರು ಗಾಯಗೊಂಡಿರುವ ಘಟನೆ ನಿನ್ನೆ ಸಂಜೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ಸಮೀಪದ ತಿರುವಿನಲ್ಲಿ ನಡೆದಿದೆ. ಬಸ್ಸು ಚಾಲಕ  ಧರ್ಮಸ್ಥಳ ಬೆಳಾಲು ನಿವಾಸಿ ಶ್ರೀನಿವಾಸ, ನೆಲಮಂಗಲ ನಿವಾಸಿ ಸಿದ್ದಲಿಂಗಪ್ಪ, ಉಜಿರೆ ತಾಕಿಬೆಟ್ಟು ನಿವಾಸಿ, ಪ್ರಣಯ್ ಮತ್ತು ಶನಕಪುರ ನಿವಾಸಿ ಮಂಜುನಾಥ ಗಾಯಗೊಂಡಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಗಂಟೆಗಳ ಕಾಲ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತ್ತು. ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪ್ರಯಾಣಿಕರನ್ನು ಕರೆದುಕೊಂಡು

ಕೆಎಸ್‌ಆರ್‌ಟಿಸಿ ಬಸ್‍ – ಲಾರಿಯ ನಡುವೆ ಭೀಕರ ಅಪಘಾತ | ಬಸ್‍ ಚಾಲಕ ಸೇರಿ ನಾಲ್ವರಿಗೆ ಗಾಯ Read More »

ಸರಕಾರಿ ಬಸ್‍ ಸ್ಕೂಟರ್ ಗೆ ಡಿಕ್ಕಿ : ಸ್ಕೂಟರ್ ಸವಾರ ಮೃತ್ಯು

ಬಂಟ್ವಾಳ : ಸರಕಾರಿ ಬಸ್‍ ಓವರ್ ಟೇಕ್‍ ಮಾಡುವ ಭರದಲ್ಲಿ ಸ್ಕೂಟರ್‍ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಮೃತಪಟ್ಟ ಘಟನೆ ಭಾನುವಾರ ತಡರಾತ್ರಿ  ಪಾಣೆಮಂಗಳೂರಿನ ನೆಹರೂನಗರದಲ್ಲಿ ನಡೆದಿದೆ. ಮಂಗಳೂರು ನಿವಾಸಿ ಅಲಿಸ್ಮರ್ ಡಿಸೋಜ (24) ಅಪಘಾತದಿಂದ ಮೃತಪಟ್ಟವರು. ವಿಟ್ಲದಲ್ಲಿ ನಡೆದ ಗೃಹಪ್ರವೇಶದಲ್ಲಿ ಪಾಲ್ಗೊಂಡು ಮತ್ತೊಂದು ಬೈಕಿನಲ್ಲಿದ್ದ ಸ್ನೇಹಿತರ ಜತೆ ಮಂಗಳೂರಿಗೆ ಹಿಂದಿರುಗುತ್ತಿದ್ದ ವೇಳೆ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆ.ಎಸ್.ಆರ್ ಟಿಸಿ ಅಂಬಾರಿ ಬಸ್ಸು ನೆಹರೂನಗರದಲ್ಲಿ ಟೆಂಪೊ ಟ್ರಾವೆಲರ್ ಅನ್ನು ಓವರ್ ಟೇಕ್‍ ಮಾಡುವ ಭರದಲ್ಲಿ,

ಸರಕಾರಿ ಬಸ್‍ ಸ್ಕೂಟರ್ ಗೆ ಡಿಕ್ಕಿ : ಸ್ಕೂಟರ್ ಸವಾರ ಮೃತ್ಯು Read More »

error: Content is protected !!
Scroll to Top