Uncategorized

ಧರ್ಮಸ್ಥಳ ಪ್ರಕರಣ: ಬಾಹುಬಲಿ ಬೆಟ್ಟದ ಕೆಳಭಾಗದ ಕಾಡಿನಲ್ಲಿ SIT ಕಾರ್ಯಾಚರಣೆ

ಧರ್ಮಸ್ಥಳ: ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣದಲ್ಲಿ SIT ಅಧಿಕಾರಿಗಳು ದೂರುದಾರ ಅನಾಮಿಕ ಗುರುತಿಸಿದ ಹೊಸ ಸ್ಥಳದಲ್ಲಿ ಶನಿವಾರ ಶೋಧ ಕಾರ್ಯ ನಡೆಸಿದ್ದಾರೆ. ಧರ್ಮಸ್ಥಳದ ಮುಖ್ಯದ್ವಾರದ ಹತ್ತಿರವಿರುವ ಬಾಹುಬಲಿ ಬೆಟ್ಟದ ಕೆಳಭಾಗದ ಅರಣ್ಯದಲ್ಲಿ ಶೋಧ ಕಾರ್ಯ ಆರಂಭ ಮಾಡಿದೆ. SIT ಅಧಿಕಾರಿಗಳು ಜೊತೆಗೆ ಅರಣ್ಯ ಇಲಾಖಾ ಅಧಿಕಾರಿಗಳು, ಎ.ಸಿ., ತಹಶೀಲ್ದಾರ್ ಮೊದಲಾದವರು ಸ್ಥಳದಲ್ಲಿ ಹಾಜರಿದ್ದಾರೆ. ಈಗಾಗಲೇ ಆರಂಭದಲ್ಲಿ ಗುರುತಿಸಿದ 13 ಸ್ಥಳಗಳ ಪೈಕಿ 12 ರಲ್ಲಿ ಮತ್ತು ಹೊಸ ಸ್ಥಳಗಳಲ್ಲಿ SIT ಅಧಿಕಾರಿಗಳು ಶವ ಹೂತಿಡಲಾಗಿದೆ ಎಂದು […]

ಧರ್ಮಸ್ಥಳ ಪ್ರಕರಣ: ಬಾಹುಬಲಿ ಬೆಟ್ಟದ ಕೆಳಭಾಗದ ಕಾಡಿನಲ್ಲಿ SIT ಕಾರ್ಯಾಚರಣೆ Read More »

ಭಾರತ ತನ್ನ ಹಿತಾಸಕ್ತಿ ಕಾಪಾಡಿಕೊಳ್ಳಬೇಕು: ಶಶಿ ತರೂರ್

ನವದೆಹಲಿ: ಅಮೆರಿಕಾವು ಭಾರತೀಯ ಸರಕುಗಳ ಮೇಲೆ ಸುಂಕ ಹೇರಿರುವ ಕ್ರಮಕ್ಕೆ ಸಂಬಂದಿಸಿದ ಹಾಗೆ ಕಾಂಗ್ರೆಸ್ ನಾಯಕ ಶಶಿ ತರೂರ್ ಮಾತನಾಡಿದ್ದು, ಭಾರತ ತನ್ನ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. ನಮ್ಮ ನಿಕಟವರ್ತಿ ‌ಮತ್ತು ಕಾರ್ಯತಂತ್ರದ ಪಾಲುದಾರನಾಗಿ ‌ಕಾರ್ಯ ನಿರ್ವಹಿಸುತ್ತಿದ್ದ ಅಮೆರಿಕಾ ಇಂದು ತನ್ನ ನಡವಳಿಕೆ ಬದಲಾಯಿಸಿದೆ ಎಂದರೆ ಭಾರತ ಹಲವಾರು ವಿಷಯಗಳ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ. ಮುಂದಿನ ಎರಡು ಮೂರು ವಾರಗಳಲ್ಲಿ ನಾವು ಮಾತುಕತೆ ಮೂಲಕ ದಾರಿ ಕಂಡುಕೊಳ್ಳಬಹುದು. ಆದರೆ ನಾವು ಹಲವು ವಿಷಯಗಳ ಬಗ್ಗೆ ಆಲೋಚಿಸಬೇಕಾಗುತ್ತದೆ,

ಭಾರತ ತನ್ನ ಹಿತಾಸಕ್ತಿ ಕಾಪಾಡಿಕೊಳ್ಳಬೇಕು: ಶಶಿ ತರೂರ್ Read More »

ಯುನಿಸೆಕ್ಸ್ ‌ಸಲೂನ್ ಮಾಲಕರಿಂದ ಹಲ್ಲೆ, ಅರೆಬೆತ್ತಲೆ ಫೋಟೋ ತೆಗೆದು ಹಿಂಸೆ: ದೂರು ದಾಖಲಿಸಿದ ಸಂತ್ರಸ್ತೆ

ಮಂಗಳೂರು: ಹಂಪನಕಟ್ಟೆಯ ಯೂನಿಸೆಕ್ಸ್ ಸಲೂನ್ ಒಂದರ ಮಾಲಕಿ ಅದೇ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದ ಬ್ಯೂಟಿಷಿಯನ್ ಒಬ್ಬರನ್ನು ಬೆದರಿಸಿ, ಅರೆ ಬೆತ್ತಲೆ ಫೋಟೋ ತೆಗೆಸಿ ಚಿತ್ರಹಿಂಸೆ ನೀಡಿದ್ದಾಗಿ ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ. ಸುಮಾರು ಒಂದೂವರೆ ತಿಂಗಳ ಹಿಂದೆ ಮಹಿಳೆ ಆ ಪಾರ್ಲರ್‌ನಲ್ಲಿ ಕೆಲಸಕ್ಕೆ ಸೇರಿದ್ದು, ಅಲ್ಲಿಗೆ ಬರುವ ಗ್ರಾಹಕರ ಜೊತೆಗೆ ಸಲುಗೆಯಿಂದ ‌ವರ್ತಿಸಿ ಅವರಿಂದ 500, 1000 ರೂ. ಪಡೆಯುವಂತೆ ತಿಳಿಸಿದ್ದರು. ಅಂತೆಯೇ ಅಲ್ಲಿಗೆ ಮಾಲಕರ ಪರಿಚಯದ ವ್ಯಕ್ತಿಯೊಬ್ಬ ಬಂದು ಮಸಾಜ್ ಮಾಡಿಸಿಕೊಂಡಿದ್ದು ಮಾತ್ರವಲ್ಲದೆ ಮಾತವಾಡಿರುವುದನ್ನು ರೆಕಾರ್ಡ್ ಮಾಡಿಕೊಂಡು

ಯುನಿಸೆಕ್ಸ್ ‌ಸಲೂನ್ ಮಾಲಕರಿಂದ ಹಲ್ಲೆ, ಅರೆಬೆತ್ತಲೆ ಫೋಟೋ ತೆಗೆದು ಹಿಂಸೆ: ದೂರು ದಾಖಲಿಸಿದ ಸಂತ್ರಸ್ತೆ Read More »

ಪೇಟೆಗೆ ಹೋಗುವುದಾಗಿ ಹೇಳಿ ಹೋದ ಯುವತಿ ನಾಪತ್ತೆ

ಮಂಗಳೂರು: ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋದ ಹೊಯ್ಗೆ ಬಜಾರ್ ನಿವಾಸಿ ಯುವತಿ ಮನೆಗೆ ಹಿಂದಿರುಗದೆ ‌ನಾಪತ್ತೆಯಾದ ಘಟನೆ ನಡೆದಿದೆ. ನಾಪತ್ತೆಯಾದ ಯುವತಿಯನ್ನು ಶಾಹಿನಾ ಬಾನು (23) ಎಂದು ಗುರುತಿಸಲಾಗಿದೆ. ಸ್ನೇಹಿತರ ಜೊತೆಗೆ ಪೇಟೆಗೆ ಹೋಗಿ ಸುತ್ತಾಡಿ ಬರುವುದಾಗಿ ‌ತಿಳಿಸಿ ಮನೆಯಿಂದ ಹೋಗಿದ್ದು, ಮನೆಗೆ ವಾಪಸ್ಸು ಹಿಂದಿರುಗಿಲ್ಲ. ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್ಡ್ ಆಫ್ ಮಾಡಲಾಗಿತ್ತು. ಆಕೆಯ ಸ್ನೇಹಿತೆಯ ಬಳಿ ವಿಚಾರಿಸಿದಾಗ ನಾಪತ್ತೆಯಾದ ಯುವತಿಯ ಜೊತೆ ಆಕೆ ಎಲ್ಲೂ ಹೋಗಿಲ್ಲ ಎಂಬುದು ಗೊತ್ತಾಗಿದೆ. ಯುವತಿ ಗೋಧಿ ಮೈಬಣ್ಣ,

ಪೇಟೆಗೆ ಹೋಗುವುದಾಗಿ ಹೇಳಿ ಹೋದ ಯುವತಿ ನಾಪತ್ತೆ Read More »

ರಕ್ಷಾ ಬಂಧನ: ದೇಶವಾಸಿಗಳಿಗೆ ಶುಭ ಕೋರಿದ ‌ಪ್ರಧಾನಿ ಮೋದಿ, ಅಮಿತ್ ಶಾ

ನವದೆಹಲಿ: ರಕ್ಷಾ ಬಂಧನ ಹಬ್ಬದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ದೇಶವಾಸಿಗಳಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಶುಭಾಶಯ ಕೋರಿ ಪೋಸ್ಟ್ ಮಾಡಿರುವ ಅವರು, ಒಡಹುಟ್ಟಿದವರ ನಡುವಿನ ಬಾಂಧವ್ಯವನ್ನು ಬಲಪಡಿಸುವಲ್ಲಿ ‌ಮಹತ್ವ ಪಡೆದಿದೆ ಎಂದು ಹೇಳಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಹ ಹಬ್ಬದ ಹಿನ್ನೆಲೆ ದೇಶದ ಜನರಿಗೆ ಶುಭಾಶಯಗಳನ್ನು ಕೋರಿದ್ದು, ಸಹೋದರ ಸಹೋದರಿಯರ ನಡುವಿನ ಪ್ರೀತಿ, ವಿಶ್ವಾಸ ಮತ್ತು ರಕ್ಷಣೆಯ ಬದ್ಧತೆಗೆ ಪವಿತ್ರವಾದ ದಿನ. ಈ ಸಂದರ್ಭದಲ್ಲಿ ಎಲ್ಲರ ಬದುಕು ಸಂತೋಷ,

ರಕ್ಷಾ ಬಂಧನ: ದೇಶವಾಸಿಗಳಿಗೆ ಶುಭ ಕೋರಿದ ‌ಪ್ರಧಾನಿ ಮೋದಿ, ಅಮಿತ್ ಶಾ Read More »

ಕಾಂತಾರದಲ್ಲಿ ಕಾಣಿಸಿಕೊಂಡಿದ್ದ ‘ಅಪ್ಪು’ ಇನ್ನಿಲ್ಲ

ಕುಂದಾಪುರ: ಕಾಂತಾರ ಚಿತ್ರದ ಆರಂಭದಲ್ಲಿನ ಕಂಬಳದ ಸನ್ನಿವೇಶದಲ್ಲಿ ಕಾಣಿಸಿಕೊಂಡಿದ್ದ ಕೋಣ ಅಪ್ಪು ವಿಧಿವಶವಾಗಿದೆ. ಬೋಳಂಬಳ್ಳಿ ಚೈತ್ರಾ ಪರಮೇಶ್ವರ ಭಟ್ ಅವರಿಗೆ ಸೇರಿದ ಕೋಣ ಇದಾಗಿದ್ದು, ದೇಶ‌ವಿದೇಶದಲ್ಲಿ ಸದ್ದು ಮಾಡಿದ್ದ ಕಾಂತಾರ ಚಿತ್ರದಲ್ಲಿ ಇನ್ನೊಂದು ಕೋಣದ ಜೊತೆಗೆ ಕಂಬಳದ ಸನ್ನಿವೇಶದಲ್ಲಿ ಇದನ್ನು ಬಳಕೆ ಮಾಡಲಾಗಿತ್ತು. ಮೃತ ಅಪ್ಪು ಕೋಣವು ಕಂಬಳದ ನೇಗಿಲು ಜೂನಿಯರ್ ವಿಭಾಗದಲ್ಲಿ ಎರಡು ಬಾರಿ ಸರಣಿ ಶ್ರೇಷ್ಟ ಪ್ರಶಸ್ತಿ ಪಡೆದಿತ್ತು. ಹಾಗೆಯೇ ಕುಂದಾಪುರದ ಸಾಂಪ್ರದಾಯಿಕ ಕಂಬಳಗಳಲ್ಲಿ ಐದು ವರ್ಷ ಚಾಂಪಿಯನ್ ಪಟ್ಟಕ್ಕೇರಿತ್ತು. 2023 ರಲ್ಲಿ ಬೆಂಗಳೂರಿನಲ್ಲಿ

ಕಾಂತಾರದಲ್ಲಿ ಕಾಣಿಸಿಕೊಂಡಿದ್ದ ‘ಅಪ್ಪು’ ಇನ್ನಿಲ್ಲ Read More »

ರಂಗಭೂಮಿ ಕಲಾವಿದ ಟಿ. ಪ್ರಭಾಕರ್ ನಿಧನ

ಉಡುಪಿ: ಕಾಂತಾರ ‌ಚಿತ್ರದಲ್ಲಿ ನಟಿಸಿದ್ದ ಹಿರಿಯ ರಂಗಭೂಮಿ ಕಲಾವಿದ ಟಿ. ಪ್ರಭಾಕರ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಹೆಬ್ರಿ ತಾಲೂಕಿನ ಪೆರ್ಡೂರಿನವರಾದ ಪ್ರಭಾಕರ್ ಅವರು ಬ್ಯಾಂಕ್ ಆಫ್ ಬರೋಡಾ‌ದಲ್ಲಿ ‌ಕಾರ್ಯ ನಿರ್ವಹಿಸಿ ನಿವೃತ್ತರಾದವರು. ರಂಗಭೂಮಿಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಇವರು ನಾಟಕಗಳಲ್ಲಿಯೂ ಅಭಿನಯಿಸಿದವರು. ಮೃತರು ಪತ್ನಿ ಮತ್ತು ಪುತ್ರನನ್ನು ಅಗಲಿದ್ದಾರೆ.

ರಂಗಭೂಮಿ ಕಲಾವಿದ ಟಿ. ಪ್ರಭಾಕರ್ ನಿಧನ Read More »

ಬಿಜೆಪಿ ಮಾತು ಕೇಳುವವರೇ ಚುನಾವಣಾ ಆಯೋಗದಲ್ಲಿರುವುದು: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಭಾರತೀಯ ಜನತಾ ಪಕ್ಷದ ಮಾತನ್ನು ಕೇಳುವವರೇ ಚುನಾವಣಾ ಆಯೋಗದಲ್ಲಿದ್ದಾರೆ. ಚು. ಆಯೋಗ ಬಿಜೆಪಿಯ ಬ್ರಾಂಚ್ ಆಫೀಸ್ ಎಂದು ಸಿಎಂ ‌ಸಿದ್ದರಾಮಯ್ಯ ಆರೋಪಿಸಿದ್ದಾರೆ. ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಈ ವಿಷಯಕ್ಕೆ ದೇಶದಲ್ಲಿ ಹೋರಾಟ ಮಾಡುತ್ತಿರುವವರು ರಾಹುಲ್ ಗಾಂಧಿ ಒಬ್ಬರೇ. ಬಿಜೆಪಿ ಅಧಿಕಾರಕ್ಕಾಗಿ ಆಸೆ ಪಡುವ ಪಕ್ಷ. ಅದು ತನಿಖಾ ಸಂಸ್ಥೆಗಳನ್ನು, ಹಿಂದುಳಿದವರನ್ನು ಬೆದರಿಸಿ ಅಧಿಕಾರ ಪಡೆಯುತ್ತದೆ ಎಂದು ಆರೋಪಿಸಿದ್ದಾರೆ. ಸಂವಿಧಾನ ಉಳಿಯಬೇಕಾದರೆ ಬಿಜೆಪಿ ಅಧಿಕಾರದಲ್ಲಿ ಇರಬಾರದು. ಸಂವಿಧಾನ ರಕ್ಷಣೆ ಮಾಡಿದರೆ ನಮ್ಮನ್ನು

ಬಿಜೆಪಿ ಮಾತು ಕೇಳುವವರೇ ಚುನಾವಣಾ ಆಯೋಗದಲ್ಲಿರುವುದು: ಸಿಎಂ ಸಿದ್ದರಾಮಯ್ಯ Read More »

ಧರ್ಮಸ್ಥಳ ಕೇಸ್: SIT ಗೆ ವಿಶೇಷ ಅಧಿಕಾರ ನೀಡಿದ ರಾಜ್ಯ ಸರ್ಕಾರ

ಧರ್ಮಸ್ಥಳ: ನೂರಾರು ಹೆಣಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ SIT ಗೆ ರಾಜ್ಯ ಸರ್ಕಾರ ಪೊಲೀಸ್ ಠಾಣೆಯ ಎಲ್ಲಾ ಅಧಿಕಾರಗಳನ್ನು ನೀಡಿದೆ. FIR ದಾಖಲಿಸುವುದು, ವಶಕ್ಕೆ ಪಡೆಯುವುದು, ಬಂಧನ, ನ್ಯಾಯಾಲಯಕ್ಕೆ ಪ್ರಾಥಮಿಕ ವರದಿ ಸಲ್ಲಿಕೆ, ಚಾರ್ಜ್‌ಶೀಟ್ ‌ಸಲ್ಲಿಕೆ ಸೇರಿದಂತೆ ಎಲ್ಲಾ ರೀತಿಯ ಸಂಪೂರ್ಣ ಅಧಿಕಾರವನ್ನು ನೀಡಿ ಆದೇಶ ಹೊರಡಿಸಿದೆ. ಸರ್ಕಾರದ ಅಧೀನ ಕಾರ್ಯದರ್ಶಿಯಿಂದ ಆದೇಶ ನೀಡಲಾಗಿದ್ದು, SIT ಕಚೇರಿಯನ್ನು ಪೊಲೀಸ್ ಠಾಣೆ ಎಂದು ಗುರುತಿಸಲಾಗಿದೆ. ಈ ತಂಡದಲ್ಲಿರುವ ಎಸ್‌ಐ ಅಥವಾ ಅದಕ್ಕಿಂತ ಮೇಲ್ದರ್ಜೆಯ ಅಧಿಕಾರಿಯನ್ನು ಠಾಣಾಧಿಕಾರಿ

ಧರ್ಮಸ್ಥಳ ಕೇಸ್: SIT ಗೆ ವಿಶೇಷ ಅಧಿಕಾರ ನೀಡಿದ ರಾಜ್ಯ ಸರ್ಕಾರ Read More »

ಮತಗಳ್ಳತನ ಆರೋಪಿಸಿ ಚು. ಆಯೋಗವನ್ನು ತರಾಟೆಗೆ ತೆಗೆದುಕೊಂಡ ರಾಗಾ

ಬೆಂಗಳೂರು: ಬಿಜೆಪಿ ಜೊತೆ ಸೇರಿ ಚುನಾವಣಾ ಆಯೋಗ ಮತದಾರರಿಗೆ ವಂಚಿಸಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚುನಾವಣಾ ಆಯೋಗದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂವಿಧಾನದ ಮೇಲೆ ದಾಳಿ ಮಾಡುವ ಮುನ್ನ ಎರಡು ಬಾರಿ ಆಲೋಚಿಸಿ ಎಂದು ಚು. ಆಯೋಗಕ್ಕೆ ಎಚ್ಚರಿಸಿದ್ದಾರೆ. ಕರ್ನಾಟಕ ಮತ್ತು ಇತರ ರಾಜ್ಯಗಳಲ್ಲಿ ಮತ ಕಳ್ಳತನದ ಬಗ್ಗೆ ಮಾತನಾಡಿದ ಅವರು, ಸಂವಿಧಾದ ಮೇಲೆ ದಾಳಿ

ಮತಗಳ್ಳತನ ಆರೋಪಿಸಿ ಚು. ಆಯೋಗವನ್ನು ತರಾಟೆಗೆ ತೆಗೆದುಕೊಂಡ ರಾಗಾ Read More »

error: Content is protected !!
Scroll to Top