ಗರಿಕತ್ತರಿಸಲು ತೆಂಗಿನಮರ ಏರಿದ ಯುವಕ ಪ್ರಜ್ಞೆ ತಪ್ಪಿ ಪಾರಾದ ಘಟನೆ
ಸಕಲೇಶಪುರ:ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಕೊಲ್ಲಹಳ್ಳಿ ಗ್ರಾಮದ ಮಂಜು ಎಂಬವರಿಗೆ ಸೇರಿದ ತೆಂಗಿನಮರದ ಗರಿಗಳನ್ನು ಕತ್ತರಿಸಲು ನವೀನ್ ಎಂಬಾತ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಮರವೇರಿದ್ದರು. ತೆಂಗಿನ ಗರಿಗಳನ್ನು ಕತ್ತರಿಸಿ ಕೆಳಗೆ ಇಳಿಯುತ್ತಿರಬೇಕಾದರೆ ಮರದಲ್ಲಿಯೇ ನವೀನ್ ಪ್ರಜ್ಞೆ ತಪ್ಪಿದ್ದಾನೆ. ಇದನ್ನು ಗಮನಿಸಿದ ಮಂಜು ಅವರು ಹಾಗೂ ಸ್ಥಳೀಯರು ಕೂಡಲೆ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಏಣಿ ಮೂಲಕ ಮರವೇರಿ, ಸೊಂಟಕ್ಕೆ ಹಗ್ಗ ಕಟ್ಟಿ ನವೀನ್ನನ್ನು ರಕ್ಷಿಸಿದ್ದಾರೆ.
ಗರಿಕತ್ತರಿಸಲು ತೆಂಗಿನಮರ ಏರಿದ ಯುವಕ ಪ್ರಜ್ಞೆ ತಪ್ಪಿ ಪಾರಾದ ಘಟನೆ Read More »










