ರಾಜ್ಯ

ರಾಜ್ಯದಲ್ಲಿ ದೊಡ್ಡದೊಂದು ಬದಲಾವಣೆಗೆ ಮುಹೂರ್ತವೆ ಈ ಭೇಟಿ?

ವಾಷಿಂಗ್ಟನ್‌ನಲ್ಲಿ ರಾಹುಲ್‌-ಡಿಕೆಶಿ ಭೇಟಿ ಬಳಿಕ ಗರಿಗೆದರಿದ ಕುತೂಹಲ ಬೆಂಗಳೂರು : ಕಾಂಗ್ರೆಸಿನೊಳಗೆಯೇ ಮುಖ್ಯಮಂತ್ರಿ ಬದಲಾವಣೆಯ ಕುರಿತು ತೀವ್ರ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಅಮೆರಿಕದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪಕ್ಷದ ವರಿಷ್ಠ ನಾಯಕ ರಾಹುಲ್‌ ಗಾಂಧಿಯನ್ನು ಭೇಟಿಯಾಗಿರುವುದು ಅನೇಕ ಊಹಾಪೋಹಗಳು ಹುಟ್ಟಿಕೊಳ್ಳಲು ಕಾರಣವಾಗಿದೆ. ತಾನು ಮತ್ತು ರಾಹುಲ್‌ ಗಾಂಧಿ ಏಕಕಾಲದಲ್ಲಿ ಅಮೆರಿಕ ಪ್ರವಾಸ ಕೈಗೊಂಡಿರುವುದು ಕಾಕತಾಳೀಯ, ಇದರ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದು ಡಿ.ಕೆ.ಶಿವಕುಮಾರ್‌ ಅಮೆರಿಕಕ್ಕೆ ಹೋಗುವ ಮೊದಲೇ ಸ್ಪಷ್ಟನೆ ನೀಡಿದ್ದರೂ ಹೀಗೆ ಕಾರಣವಿಲ್ಲದೆ ಯಾವುದೇ ನಡೆಯನ್ನು […]

ರಾಜ್ಯದಲ್ಲಿ ದೊಡ್ಡದೊಂದು ಬದಲಾವಣೆಗೆ ಮುಹೂರ್ತವೆ ಈ ಭೇಟಿ? Read More »

ಜೂನ್‌ ತಿಂಗಳ ಗೃಹಲಕ್ಷ್ಮೀ ಹಣ ಕೊನೆಗೂ ಖಾತೆಗೆ ಜಮೆ | ಜುಲೈ, ಆಗಸ್ಟ್‌ ತಿಂಗಳ ಕಂತು ಇನ್ನಷ್ಟು ವಿಳಂಬ

ಬೆಂಗಳೂರು: ಗೃಹಲಕ್ಷ್ಮೀ ಯೋಜನೆಯ ಜೂನ್ ತಿಂಗಳ ಕಂತಿನ ಹಣ ಇಂದು ಮಹಿಳೆಯರ ಖಾತೆಗಳಿಗೆ ಕೊನೆಗೂ ವರ್ಗಾವಣೆಯಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯದ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಯಾಗದ ವಿಚಾರ ಕಳೆದ ಕೆಲವು ತಿಂಗಳುಗಳಿಂದ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಗ್ಯಾರಂಟಿಗಳ ಹೆಸರಿನಲ್ಲಿ ಕಾಂಗ್ರೆಸ್ ಜನರನ್ನು ವಂಚಿಸುತ್ತಿದೆ ಎಂದು ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಟೀಕಿಸಿದ್ದವು. ತಾಂತ್ರಿಕ ಕಾರಣಗಳಿಂದ ಗೃಹಲಕ್ಷ್ಮಿ ಹಣ ವರ್ಗಾವಣೆ ಸ್ವಲ್ಪ ವಿಳಂಬವಾಗುತ್ತಿದೆ. ಖಂಡಿತವಾಗಿ ಸರ್ಕಾರ 2000 ರೂ. ವರ್ಗಾವಣೆ ಮಾಡಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ

ಜೂನ್‌ ತಿಂಗಳ ಗೃಹಲಕ್ಷ್ಮೀ ಹಣ ಕೊನೆಗೂ ಖಾತೆಗೆ ಜಮೆ | ಜುಲೈ, ಆಗಸ್ಟ್‌ ತಿಂಗಳ ಕಂತು ಇನ್ನಷ್ಟು ವಿಳಂಬ Read More »

ಎಚ್‌ಎಸ್‌ಆರ್‌ಪಿ ಡೆಡ್‌ಲೈನ್‌ ಸೆ.15ಕ್ಕೆ ಮುಕ್ತಾಯ | ಸೆ.16ರಿಂದ ಬೀಳಲಿದೆ 500 ರೂ. ದಂಡ

ಬೆಂಗಳೂರು: ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ ಅಳವಡಿಸಲು ಸರ್ಕಾರ ಮತ್ತು ಕೋರ್ಟ್ ನೀಡಿರುವ ಗಡುವು ಮುಗಿಯಲು ಇನ್ನು ಆರು ದಿನ ಮಾತ್ರ ಬಾಕಿ ಇದೆ. ಅಧಿಕ ಸುರಕ್ಷತೆ ಖಾತರಿಪಡಿಸುವ ನಂಬರ್‌ ಪ್ಲೇಟ್‌ ಅಳವಡಿಸುವ ಪ್ರಕ್ರಿಯೆ ಶುರುವಾಗಿ ಒಂದೂವರೆ ವರ್ಷವಾಗಿದ್ದು, ಪದೇಪದೆ ಗಡುವು ವಿಸ್ತರಣೆಯಾಗುತ್ತಾ ಬಂದಿತ್ತು. ಇನ್ನು ಸೆ.16 ಕೊನೆಯ ಗಡುವು ಎಂದು ಸರ್ಕಾರ ಹೇಳಿದೆ.ಸೆಪ್ಟೆಂಬರ್ 15ರ ಮಧ್ಯರಾತ್ರಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಕೊಟ್ಟಿರುವ ಡೆಡ್‌ಲೈನ್ ಮುಗಿಯಲಿದೆ. ರಾಜ್ಯದಲ್ಲಿ ಒಟ್ಟಾರೆ 2 ಕೋಟಿಯಷ್ಟು ವಾಹನಗಳಿದ್ದು, ಇದರಲ್ಲಿ ಇಲ್ಲಿಯವರೆಗೆ

ಎಚ್‌ಎಸ್‌ಆರ್‌ಪಿ ಡೆಡ್‌ಲೈನ್‌ ಸೆ.15ಕ್ಕೆ ಮುಕ್ತಾಯ | ಸೆ.16ರಿಂದ ಬೀಳಲಿದೆ 500 ರೂ. ದಂಡ Read More »

ಎಸ್‌ಎಸ್‌ಎಲ್‌ಸಿ ಅರ್ಧವಾರ್ಷಿಕ ಪರೀಕ್ಷೆಗೆ ಆನ್‌ಲೈನ್‌ ಪ್ರಶ್ನೆಪತ್ರಿಕೆ: ವ್ಯಾಪಕ ವಿರೋಧ | ಶಿಕ್ಷಕರೇ ಪ್ರಶ್ನೆ ಪತ್ರಿಕೆ ಮುದ್ರಿಸಬೇಕಾದ ಪರಿಸ್ಥಿತಿ

ಬೆಂಗಳೂರು : ಪ್ರಸಕ್ತ ಸಾಲಿನಲ್ಲಿ ಎಸ್​ಎಸ್​ಎಲ್​ಸಿ ಮಧ್ಯವಾರ್ಷಿಕ ಪರೀಕ್ಷೆಗೆ ಪ್ರಶ್ನೆ ಪತ್ರಿಕೆಗಳನ್ನು ರೂಪಿಸಿ ನೀಡಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಿರ್ಧರಿಸಿದೆ. ಈ ಹಿಂದೆ ಪೂರ್ವಸಿದ್ಧತಾ ಮತ್ತು ವಾರ್ಷಿಕ ಪರೀಕ್ಷೆಗಳಿಗೆ ಮಾತ್ರ ಪ್ರಶ್ನೆ ಪತ್ರಿಕೆ ರೂಪಿಸಿ ಕೊಡಲಾಗುತ್ತಿತ್ತು. ಈ ವರ್ಷದಿಂದ ಮಧ್ಯವಾರ್ಷಿಕ ಪರೀಕ್ಷೆಗೂ ಪ್ರಶ್ನೆ ಪತ್ರಿಕೆ ರೂಪಿಸಿ ಆನ್​ಲೈನ್​ ಮೂಲಕ ರವಾನಿಸುವ ಮಹತ್ವದ ನಿರ್ಧಾರ ಮಾಡಿದೆ. ಮಧ್ಯವಾರ್ಷಿಕ ಪರೀಕ್ಷೆಗಳಿಗೆ ಕೆಲವೇ ದಿನಗಳು ಬಾಕಿ ಇೃವಾಗ ಇಲಾಖೆ ಈ ನಿರ್ಧಾರಕ್ಕೆ ಕೈಗೊಂಡಿರುವುದು ವಿರೋಧಕ್ಕೆ ಕಾರಣವಾಗಿದೆ.

ಎಸ್‌ಎಸ್‌ಎಲ್‌ಸಿ ಅರ್ಧವಾರ್ಷಿಕ ಪರೀಕ್ಷೆಗೆ ಆನ್‌ಲೈನ್‌ ಪ್ರಶ್ನೆಪತ್ರಿಕೆ: ವ್ಯಾಪಕ ವಿರೋಧ | ಶಿಕ್ಷಕರೇ ಪ್ರಶ್ನೆ ಪತ್ರಿಕೆ ಮುದ್ರಿಸಬೇಕಾದ ಪರಿಸ್ಥಿತಿ Read More »

ಅಮ್ಮನನ್ನು ಉಳಿಸಲು ರಿಕ್ಷಾವನ್ನೇ ಎತ್ತಿದ ಬಾಲಕಿಗೆ ಸಿಎಂ ಪ್ರಶಂಸೆ | ಬಾಲಕಿಯ ಕಾರ್ಯ ಇಡೀ ಸಮಾಜಕ್ಕೊಂದು ಸಂದೇಶ ಎಂದ ಮುಖ್ಯಮಂತ್ರಿ

ಬೆಂಗಳೂರು : ಮುಲ್ಕಿ ಸಮೀಪ ಕಿನ್ನಿಗೋಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ರಿಕ್ಷಾ ಡಿಕ್ಕಿ ಹೊಡೆದಾಗ ತಾಯಿಯನ್ನು ಉಳಿಸಲು ಮಗಳು ಆಟೋರಿಕ್ಷಾವನ್ನೇ ಎತ್ತಿದ ವಿಡಿಯೋ ಬಹಳ ವೈರಲ್‌ ಆಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೂ ಬಂದಿದೆ. ಬಾಲಕಿಯ ಸಮಯಪ್ರಜ್ಞೆ ಮತ್ತು ಧೈರ್ಯವನ್ನು ಸಿದ್ದರಾಮಯ್ಯ ಹೊಗಳಿದ್ದಾರೆ.ತಾಯಿ ಮತ್ತು ಮಗಳು ರಸ್ತೆ ದಾಟುತ್ತಿದ್ದಾಗ ತಾಯಿ ಎದುರಿನಿಂದ ಬರುತ್ತಿದ್ದ ರಿಕ್ಷಾ ಗಮನಿಸದೆ ಮುಂದೆ ಹೋಗಿದ್ದಾರೆ. ಮಗಳು ಕೆಲವು ಹೆಜ್ಜೆ ಹಿಂದೆ ಉಳಿದಿದ್ದಳು. ವೇಗವಾಗಿ ಬಂದ ರಿಕ್ಷಾವೊಂದು ಮಹಿಳೆಗೆ ಡಿಕ್ಕಿಹೊಡೆದು ಪಲ್ಟಿಯಾಗಿದ್ದು, ಮಹಿಳೆ ಅದರಡಿ ಸಿಕ್ಕಿಬಿದ್ದಿದ್ದರು.

ಅಮ್ಮನನ್ನು ಉಳಿಸಲು ರಿಕ್ಷಾವನ್ನೇ ಎತ್ತಿದ ಬಾಲಕಿಗೆ ಸಿಎಂ ಪ್ರಶಂಸೆ | ಬಾಲಕಿಯ ಕಾರ್ಯ ಇಡೀ ಸಮಾಜಕ್ಕೊಂದು ಸಂದೇಶ ಎಂದ ಮುಖ್ಯಮಂತ್ರಿ Read More »

ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕ ಸಂಪಾದಕ ವಸಂತ ನಾಡಿಗೇರ ನಿಧನ

ಬೆಂಗಳೂರು: ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕ ಸಂಪಾದಕ ವಸಂತ ನಾಡಿಗೇರ ಸೋಮವಾರ ಮುಂಜಾನೆ ನಿದನರಾದರು. ಬೆಳಗಿನ ಜಾವ 3.13ಕ್ಕೇ ನಿಧನರಾದರು. ಮೃತರು ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧುಬಳಗದವರನ್ನು ಅಗಲಿದ್ದಾರೆ.

ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕ ಸಂಪಾದಕ ವಸಂತ ನಾಡಿಗೇರ ನಿಧನ Read More »

ಸ್ಯಾಂಡಲ್ ವುಡ್ ನಟಿ ರಮ್ಯಾಗೆ ಕಂಕಣ ಭಾಗ್ಯ | ಉದ್ಯಮಿಯನ್ನು ವರಿಸಲಿರುವ ರಮ್ಯಾ

ಬೆಂಗಳೂರು:  ಸ್ಯಾಂಡಲ್ ವುಡ್ ನಟಿ ರಮ್ಯಾಗೆ ಕಂಕಣ ಭಾಗ್ಯ ಕೂಡಿ ಬಂದಿದ್ದು, ಇದೇ ನವೆಂಬರ್‍ ನಲ್ಲಿ ಹಸೆಮಣೆ ಏರುವ ಸಾಧ್ಯತೆಯಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ನಿಶ್ಚಿತಾರ್ಥ ಕಾರ್ಯಕ್ರಮ ಕೂಡ ಶೀಘ್ರ ನಡೆಯಲಿದೆ ಎನ್ನಲಾಗಿದ್ದು, ಸದ್ಯದ ಮಾಹಿತಿ ಪ್ರಕಾರ ಚೌಧರಿ ಗಾರ್ಮೆಂಟ್ಸ್ ಮಾಲೀಕ ಪ್ರಭವ್ ಚೌಧರಿ ಅವರನ್ನು ರಮ್ಯಾ ವಿವಾಹ ಆಗಲಿದ್ದಾರೆ ಎನ್ನಲಾಗಿದೆ. ಸುಮಾರು 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ರಮ್ಯಾ ಕನ್ನಡ, ತೆಲುಗು ತಮಿಳು : ಚಿತ್ರರಂಗದಲ್ಲೂ ಮಿಂಚಿದ್ದಾರೆ. ಖಾಸಗಿ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿರುವ

ಸ್ಯಾಂಡಲ್ ವುಡ್ ನಟಿ ರಮ್ಯಾಗೆ ಕಂಕಣ ಭಾಗ್ಯ | ಉದ್ಯಮಿಯನ್ನು ವರಿಸಲಿರುವ ರಮ್ಯಾ Read More »

ಮುಡಾ ಹಗರಣ : ಇಂದು ಕೋರ್ಟಿನಲ್ಲಿ ಕೊನೆಯ ವಿಚಾರಣೆ

ಗೆಲ್ಲುವ ವಿಶ್ವಾಸದಲ್ಲಿ ಸಿದ್ದರಾಮಯ್ಯ ಪಾಳಯ ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸುತ್ತಿಕೊಂಡಿರುವ ಮುಡಾ ಹಗರಣ ಇಂದು ಹೈಕೋರ್ಟಿನಲ್ಲಿ ಮತ್ತೆ ವಿಚಾರಣೆಗೆ ಬರಲಿದೆ.ಇಂದು ಮಧ್ಯಾಹ್ನ 3.30ಕ್ಕೆ ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಮುಡಾ ಕೇಸ್ ಅರ್ಜಿ ವಿಚಾರಣೆ ನಡೆಯಲಿದೆ. ಸರ್ಕಾರದ ಪರ ಅಡ್ವೊಕೆಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಲಿದ್ದಾರೆ. ಈಗಾಗಲೇ ನಾಲ್ಕು ಸಿಟ್ಟಿಂಗ್‌ಗಲ್ಲಿ ಕೋರ್ಟ್‌ ಈ ಕೇಸಿನ ವಿಚಾರಣೆ ನಡೆಸಿದ್ದು, ಇಂದು ವಿಚಾರಣೆ ಮುಕ್ತಾಯವಾಗುವ ನಿರೀಕ್ಷೆಯಿದೆ. ಸೆ.9ರಂದು ಮುಕ್ತಾಯಗೊಳಿಸಬೇಕೆಂದು ಸ್ವತಹ ನ್ಯಾಯಾಧೀಶರೇ ಹೇಳಿದ್ದಾರೆ. ಆದರೆ ಇಂದೇ ತೀರ್ಪು ಹೊರಬೀಳಬಹುದಾ ಅಥವಾ

ಮುಡಾ ಹಗರಣ : ಇಂದು ಕೋರ್ಟಿನಲ್ಲಿ ಕೊನೆಯ ವಿಚಾರಣೆ Read More »

ಮುಡಾ ಹಗರಣ : ಇಂದು ಕೋರ್ಟಿನಲ್ಲಿ ಕೊನೆಯ ವಿಚಾರಣೆ

ಗೆಲ್ಲುವ ವಿಶ್ವಾಸದಲ್ಲಿ ಸಿದ್ದರಾಮಯ್ಯ ಪಾಳಯ ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸುತ್ತಿಕೊಂಡಿರುವ ಮುಡಾ ಹಗರಣ ಇಂದು ಹೈಕೋರ್ಟಿನಲ್ಲಿ ಮತ್ತೆ ವಿಚಾರಣೆಗೆ ಬರಲಿದೆ.ಇಂದು ಮಧ್ಯಾಹ್ನ 3.30ಕ್ಕೆ ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಮುಡಾ ಕೇಸ್ ಅರ್ಜಿ ವಿಚಾರಣೆ ನಡೆಯಲಿದೆ. ಸರ್ಕಾರದ ಪರ ಅಡ್ವೊಕೆಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಲಿದ್ದಾರೆ. ಈಗಾಗಲೇ ನಾಲ್ಕು ಸಿಟ್ಟಿಂಗ್‌ಗಲ್ಲಿ ಕೋರ್ಟ್‌ ಈ ಕೇಸಿನ ವಿಚಾರಣೆ ನಡೆಸಿದ್ದು, ಇಂದು ವಿಚಾರಣೆ ಮುಕ್ತಾಯವಾಗುವ ನಿರೀಕ್ಷೆಯಿದೆ. ಸೆ.9ರಂದು ಮುಕ್ತಾಯಗೊಳಿಸಬೇಕೆಂದು ಸ್ವತಹ ನ್ಯಾಯಾಧೀಶರೇ ಹೇಳಿದ್ದಾರೆ. ಆದರೆ ಇಂದೇ ತೀರ್ಪು ಹೊರಬೀಳಬಹುದಾ ಅಥವಾ

ಮುಡಾ ಹಗರಣ : ಇಂದು ಕೋರ್ಟಿನಲ್ಲಿ ಕೊನೆಯ ವಿಚಾರಣೆ Read More »

ಮುಡಾದ ಇನ್ನೊಂದು ಬೃಹತ್‌ ಹಗರಣ ಬಯಲು

ಒಂದೇ ದಿನ 848 ಸೈಟ್‌ಗಳ ಖಾತಾ ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನ ಹೆಂಡತಿ ಹೆಸರಿನಲ್ಲಿ ಅಕ್ರಮವಾಗಿ ಸೈಟ್‌ ಪಡೆದುಕೊಂಡಿದ್ದಾರೆ ಎನ್ನಲಾಗಿರುವ ವಿವಾದ ಹೊಗೆಯಾಡುತ್ತಿರುವಂತೆಯೇ ಇದಕ್ಕೂ ದೊಡ್ಡದಾದ ಇನ್ನೊಂದು ಹಗರಣ ಬಯಲಾಗಿದೆ.ಬದಲಿ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾಗಿರುವ ಹಗರಣ ರಾಜ್ಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಮುಡಾ ಮಾಜಿ ಅಧ್ಯಕ್ಷ ಎಚ್​.ವಿ.ರಾಜೀವ್ ನಡೆಸಿದ ಅಕ್ರಮ ಇದು ಎನ್ನಲಾಗಿದೆ. ಅನುಮತಿ ಇಲ್ಲದೇ ಎಚ್​.ವಿ.ರಾಜೀವ್ ಒಂದೇ ದಿನದಲ್ಲಿ 848 ನಿವೇಶನಗಳ ಖಾತಾ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಮೈಸೂರು ಜ್ಞಾನಗಂಗಾ ಗೃಹ

ಮುಡಾದ ಇನ್ನೊಂದು ಬೃಹತ್‌ ಹಗರಣ ಬಯಲು Read More »

error: Content is protected !!
Scroll to Top