ಧಾರ್ಮಿಕ

ಹಬ್ಬ, ಉತ್ಸವಗಳಿಗೆ ಪೊಲೀಸ್ ಇಲಾಖೆಯಿಂದ ಸಮಸ್ಯೆ ಆಗಿಲ್ಲ: ಸುಧೀರ್ ಕುಮಾರ್ ರೆಡ್ಡಿ

ಮಂಗಳೂರು: ಸಾರ್ವಜನಿಕವಾಗಿ ಆಚರಣೆ ಮಾಡುವ ಯಾವುದೇ ಹಬ್ಬಗಳಿಗೆ, ಮೆರವಣಿಗೆಗಳಿಗೆ ಪೊಲೀಸ್ ಇಲಾಖೆ ಅಡ್ಡಿ ಮಾಡಿಲ್ಲ. ಬೇರೆಯವರಿಗೆ ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದ ‘ಶಬ್ದದ ಮಿತಿ’ ನಿಗದಿ ಮಾಡಲಾಗಿದ್ದು, ಅದನ್ನು ಅನುಸರಿಸಿಕೊಂಡು ಕಾರ್ಯಕ್ರಮ ನಡೆಸುವಂತೆ ಸೂಚಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ಕಮಿಷನರೇಟ್ ವ್ಯಾಪ್ತಿಯಲ್ಲಿ ಹಲವಾರು ಗಣೇಶೋತ್ಸವ ಮೆರವಣಿಗೆಗಳು ತಂಡ ರಾತ್ರಿಯ ವರೆಗೆ ನಡೆದಿದ್ದು, ಅಲ್ಲಿ ಯಾವ ಸಮಸ್ಯೆಯೂ ಆಗಿಲ್ಲ. ಪೊಲೀಸರು ಸಮಸ್ಯೆ ಮಾಡಿಲ್ಲ. ಆದರೆ ಶಬ್ದ ಮಿತಿಯನ್ನು ಮಾತ್ರ ಹಾಕಲಾಗಿತ್ತು ಎಂದು ತಿಳಿಸಿದ್ದಾರೆ. […]

ಹಬ್ಬ, ಉತ್ಸವಗಳಿಗೆ ಪೊಲೀಸ್ ಇಲಾಖೆಯಿಂದ ಸಮಸ್ಯೆ ಆಗಿಲ್ಲ: ಸುಧೀರ್ ಕುಮಾರ್ ರೆಡ್ಡಿ Read More »

ಶ್ರೀ ಮಹಾಭಾರತ ಸರಣಿಯಲ್ಲಿ ಮಹಿಳಾ ಯಕ್ಷಕೂಟ ಕದ್ರಿ ಇವರಿಂದ ಗದಾಯುದ್ಧ ತಾಳಮದ್ದಳೆ

ಶ್ರೀ ಕಾಳಿಕಾಂಬ ಯಕ್ಷಕಲಾ ಸೇವಾ ಟ್ರಸ್ಟಿನ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯಲ್ಲಿ 95ನೇ ಕಾರ್ಯಕ್ರಮವಾಗಿ ಮಹಿಳಾ ಯಕ್ಷಕೂಟ ಕದ್ರಿಮಂಗಳೂರು ಬಳಗದಿಂದ ಎಲ್ಲೂರು ರಾಮಚಂದ್ರರಾವ್ ನಿರ್ದೇಶನದಲ್ಲಿ ಗದಾಯುದ್ಧ ತಾಳಮದ್ದಳೆ ಉಪ್ಪಿನಂಗಡಿ ರಾಮನಗರದ ಶಾರದಾ ಕಲಾಮಂಟಪದಲ್ಲಿ ಜರಗಿತು. ಭಾಗವತರಾಗಿ ಲಕ್ಷ್ಮೀನಾರಾಯಣ ಹೊಳ್ಳ, ಸ್ಕಂದ ಕೊನ್ನರ್,ಕೃಷ್ಣರಾವ್, ಚಕ್ರತಾಳದಲ್ಲಿ ರಾಮಚಂದ್ರ ಎಲ್ಲೂರು ಅರ್ಥಧಾರಿಗಳಾಗಿವನಿತಾ ಎಲ್ಲೂರು (ಕೌರವ 1) ರಂಜಿತಾ ಎಲ್ಲೂರು( ಕೌರವ 2) ವಿಶಾಲ ಕೇಶವ ಭಟ್ (ಭೀಮ) ಶೀಲಾ ಜಯಪ್ರಕಾಶ್ (ಅಶ್ವತ್ಥಾಮ) ರಮಾಮಣಿ ಭಟ್ (ಸಂಜಯ) ಸಂಧ್ಯಾ

ಶ್ರೀ ಮಹಾಭಾರತ ಸರಣಿಯಲ್ಲಿ ಮಹಿಳಾ ಯಕ್ಷಕೂಟ ಕದ್ರಿ ಇವರಿಂದ ಗದಾಯುದ್ಧ ತಾಳಮದ್ದಳೆ Read More »

ಮದ್ದೂರಿನಲ್ಲಿಂದು ಗಣೇಶ ವಿಸರ್ಜನೆ ಬೃಹತ್‌ ಮೆರವಣಿಗೆ

ವಿಜಯೇಂದ್ರ ಸಹಿತ ಹಲವು ಬಿಜೆಪಿ ನಾಯಕರು ಭಾಗಿ ಬೆಂಗಳೂರು: ಭಾನುವಾರ ಗಣೇಶ ಮೆರವಣಿಗೆ ಮೇಲೆ ಮಸೀದಿಯಿಂದ ಕಲ್ಲು ತೂರಿದ ಘಟನೆಯ ಬಳಿಕ ಬೂದಿ ಮುಚ್ಚಿದ ಕೆಂಡದಂತಿರುವ ಮಂಡ್ಯದ ಮದ್ದೂರಿನಲ್ಲಿ ಇಂದು ಮತ್ತೆ ಗಣೇಶ ವಿಸರ್ಜನೆಯ ಬೃಹತ್‌ ಮೆರವಣಿಗೆ ನಡೆಯಲಿದೆ. ಮದ್ದೂರಿನಲ್ಲಿಂದು ಸಾಮೂಹಿಕ ಗಣೇಶ ವಿಸರ್ಜನಾ ಮೆರವಣಿಗೆ ನಡೆಯಲಿದ್ದು, 28ಕ್ಕೂ ಹೆಚ್ಚು ಗಣೇಶ ಮೂರ್ತಿಗಳ ಮೆರವಣಿಗೆಯಲ್ಲಿ ಸಾಗಲಿವೆ. 20 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗುವ ಸಾಧ್ಯತೆಯಿದೆ. ಬೆಳಗ್ಗೆ 10.30ಕ್ಕೆ ಮದ್ದೂರು ಪಟ್ಟಣದಿಂದ ಮೆರವಣಿಗೆ ಆರಂಭವಾಗಿ ಮೂರು ಕಿ.ಮೀ ಸಾಗಿ

ಮದ್ದೂರಿನಲ್ಲಿಂದು ಗಣೇಶ ವಿಸರ್ಜನೆ ಬೃಹತ್‌ ಮೆರವಣಿಗೆ Read More »

ಹಿರಿಯರನ್ನು ಸ್ಮರಿಸುವುದು ನಮ್ಮ ಸಂಸ್ಕೃತಿ : ಭಾಸ್ಕರ ರೈ ಕುಕ್ಕುವಳ್ಳಿ

ಕಲೆ ಸಾಂಸ್ಕೃತಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ನಮ್ಮ ಹಿರಿಯರು ಮಾಡಿರುವ ಸಾಧನೆಗಳಿಂದ ನಾವು ಸಾಮಾಜಿಕವಾಗಿ ಒಗ್ಗೂಡುವಂತಾಗಿದೆ. ಹಿರಿಯರ ಸಂಸ್ಮರಣೆಯಿಂದ ಈ ವಿಚಾರಧಾರೆಯು ಮುಂದಿನ ಪೀಳಿಗೆಗೆ ಆದರ್ಶವಾಗಿ ದಾರಿದೀಪವಾಗುತ್ತದೆಯೆಂದು ಮಂಗಳೂರು ಯಕ್ಷಾಂಗಣದ ಅಧ್ಯಕ್ಷ, ಅರ್ಥದಾರಿ ಭಾಸ್ಕರ ರೈ ಕುಕ್ಕುವಳ್ಳಿ ತಿಳಿಸಿದರು. ಉಪ್ಪಿನಂಗಡಿ ರಾಮನಗರದ ಶ್ರೀ ಶಾರದಾ ಕಲಾಮಂಟಪದಲ್ಲಿ ಜರಗಿದ ಶ್ರೀ ಕಾಳಿಕಾಂಬಾ ಯಕ್ಷ ಕಲಾ ಟ್ರಸ್ಟಿನ 50ನೇ ವರ್ಷದ ನಿಮಿತ್ತ ನಡೆಸುತ್ತಿರುವ ಮಹಾಭಾರತ ಸರಣಿಯ ತಾಳ ಮದ್ದಳೆ, ಪ್ರಶಸ್ತಿ ಪ್ರದಾನ ಮತ್ತು ನುಡಿ ನಮನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ

ಹಿರಿಯರನ್ನು ಸ್ಮರಿಸುವುದು ನಮ್ಮ ಸಂಸ್ಕೃತಿ : ಭಾಸ್ಕರ ರೈ ಕುಕ್ಕುವಳ್ಳಿ Read More »

ಶ್ರೀ ಮಹಾಭಾರತ ಸರಣಿ ತಾಳಮದ್ದಳೆ

ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷ ಕಲಾ ಟ್ರಸ್ಟ್ 50 ನೇ ವರ್ಷದ ನಿಮಿತ್ತ ನಡೆಸುತ್ತಿರುವ ಮಹಾಭಾರತ ಸರಣಿಯ ನಾಲ್ಕನೇ ಹಂತದ ತಾಳಮದ್ದಳೆಯ ಉದ್ಘಾಟನಾ ಕಾರ್ಯಕ್ರಮವು ರಾಮನಗರದ ಶ್ರೀ ಶಾರದಾ ಕಲಾಮಂಟಪದಲ್ಲಿ ಜರಗಿತು. ಭಾರತೀಯ ಭೂಸೇನೆಯ ನಿವೃತ್ತ ಬಿಎಸ್ಎಫ್ ಕಮಾಂಡೆಂಟ್ ಡಿ. ಚಂದಪ್ಪ ಮೂಲ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವಲ್ಲಿ ತಾಳಮದ್ದಳೆಯಂತ ಕಲಾ ಪ್ರಕಾರಗಳು ಸಮರ್ಥ ಮಾಧ್ಯಮವಾಗಿದ್ದು ಇದನ್ನು ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಪುತ್ತೂರಿನ ಮಾಜಿ ಶಾಸಕರಾದ ಸಂಜೀವ ಮಠ0ದೂರು ಮಾತನಾಡಿ ಯಕ್ಷಗಾನ

ಶ್ರೀ ಮಹಾಭಾರತ ಸರಣಿ ತಾಳಮದ್ದಳೆ Read More »

ಬೆಂಗಳೂರಿನಲ್ಲಿ ಕಲಾಭಿಮಾನಿಗಳ ಮನಸೂರೆಗೊಂಡ ಡ್ಯಾನ್ಸ್ & ಬೀಟ್ಸ್ ತಂಡ ಬೆಳ್ಳಾರೆ

ಬೆಂಗಳೂರು: ತುಳುನಾಡ ಜವನೆರ್ (ರಿ), ಬೆಂಗಳೂರು ವತಿಯಿಂದ ವಿಜಯನಗರದ ಬಂಟರ ಸಂಘದ ಆವರಣದಲ್ಲಿ ನಡೆದ “ಅಷ್ಟಮಿದ ಐಸಿರ” 2025 ರ ತುಳುವ ಸಿರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜೀವನ್ ಟಿ.ಎನ್ ಬೆಳ್ಳಾರೆ ನಿರ್ದೇಶನದ ‘ಡ್ಯಾನ್ಸ್ ಅಂಡ್ ಬೀಟ್ಸ್’ ಬೆಳ್ಳಾರೆ. ಪಂಜ, ಸುಬ್ರಹ್ಮಣ್ಯ, ಕೈಕಂಬ ನೃತ್ಯ ಶಾಖೆಗಳ ಸುಮಾರು 60 ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಅತ್ಯುತ್ತಮ ನೃತ್ಯ ಪ್ರದರ್ಶನದ ಮೂಲಕ ನೆರೆದಿದ್ದ ಸಾವಿರಾರು ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿ ಸಂಘಟಕರ ಪ್ರಶಂಸೆ ಪಡೆಯಿತು. ತಂಡದ ಕಾರ್ಯಕ್ರಮದ ಸಂದರ್ಭದಲ್ಲಿ ಆಳ್ವಾಸ್ ಸಂಸ್ಥೆಯ ಡಾ|

ಬೆಂಗಳೂರಿನಲ್ಲಿ ಕಲಾಭಿಮಾನಿಗಳ ಮನಸೂರೆಗೊಂಡ ಡ್ಯಾನ್ಸ್ & ಬೀಟ್ಸ್ ತಂಡ ಬೆಳ್ಳಾರೆ Read More »

ಅಕ್ಷಯ ಕಾಲೇಜಿನಲ್ಲಿ  ಸಂಭ್ರಮದ ಓಣಂ ಹಬ್ಬ  ಆಚರಣೆ

ಪುತ್ತೂರು: ಸಂಪ್ಯ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ   ಸಂಭ್ರಮದ  ಓಣಂ ಹಬ್ಬವನ್ನು   ಶುಕ್ರವಾರ ಆಚರಿಸಲಾಯಿತು. ಕರ್ನಾಟಕ ರಾಜ್ಯ ಬ್ಯಾಂಕ್ ನೌಕರರ ಒಕ್ಕೂಟದ ಉಪಾಧ್ಯಕ್ಷ  ಬಿ.ಎಂ. ಮಾಧವ ಕಾರ್ಯಕ್ರಮ ಉದ್ಘಾಟಿಸಿ,  ಓಣಂ ಕೇರಳದ ಸಾಂಸ್ಕೃತಿಕ ಮತ್ತು ಸುಗ್ಗಿ ಹಬ್ಬ. ಮಾತ್ರವಲ್ಲ ಪ್ರಕೃತಿ ಜೊತೆಗಿನ ಅವಿನಾಭಾವ ಸಂಬಂಧವನ್ನು ಬೆಸೆಯುವ ಹಬ್ಬವಾಗಿದೆ. ಪ್ರಕೃತಿಯು ರಮಣೀಯತೆ  ಹಾಗೂ ಸಮೃದ್ಧ ಫಸಲಿನಿಂದ     ಕಂಗೊಳಿಸುವ   ಈ ಸಂದರ್ಭದಲ್ಲಿ ಜನರು ಐಕ್ಯತೆ, ಶಾಂತಿ ನೆಮ್ಮದಿಯ, ಸಮೃದ್ಧಿಯ ಪ್ರತೀಕವಾಗಿ   ಹಬ್ಬವನ್ನು ನಾಡಿನೆಲ್ಲೆಡೆ ವಿಜ್ರಂಭಣೆಯಿಂದ ಆಚರಿಸುತ್ತಾರೆ  ಎಂದರು.      ಮುಖ್ಯ ಅತಿಥಿಗಳಾಗಿ

ಅಕ್ಷಯ ಕಾಲೇಜಿನಲ್ಲಿ  ಸಂಭ್ರಮದ ಓಣಂ ಹಬ್ಬ  ಆಚರಣೆ Read More »

ನ.29-30 : ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನಿಂದ 3ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ : ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತೂರು: ಅಹಂಕಾರ ದೂರ ಸರಿದು ಮಮಕಾರ ಇರುವಲ್ಲಿ ಶ್ರೇಯಸ್ಸು ಖಂಡಿತ. ಪರಮಾತ್ಮ, ಜೀವತ್ಮ ಜತೆಯಾದಾಗ ಧರ್ಮ ಉಳಿಯುವ ಕಾರ್ಯ ಆಗುತ್ತಿದೆ. ಪುತ್ತೂರಿನಲ್ಲಿ ಶ್ರೀನಿವಾಸ ಕಲ್ಯಾಣೋತ್ಸವದ ಜತೆಗೆ ಧರ್ಮ ಕಾರ್ಯದ ಮೂಲಕ ಹಿಂದೂ ಸಮಾಜಕ್ಕೆ ಶಕ್ತಿ ತುಂಬುವ ಕಾರ್ಯ ಆಗಲಿ ಎಂದು ಒಡಿಯೂರು ಶ್ರೀ ಸಾಧ್ವಿ ಮಾತಾನಂದಮಯೀ ನುಡಿದರು. ಭಾನುವಾರ ಪುತ್ತಿಲ ಪರಿವಾರ ಸೇವಾ ಟ್ರಸ್ಟ್, ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯಿಂದ ನ.29 ಮತ್ತು 30 ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯುವ 3ನೇ ವರ್ಷದ ಶ್ರೀನಿವಾಸ

ನ.29-30 : ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನಿಂದ 3ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ : ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಬ್ರಹ್ಮಶ್ರೀ ನಾರಾಯಣ ಗುರುಗಳ 171 ನೇ ಜಯಂತಿ ಆಚರಣೆ | ಇಂದಿರಾಗಾಂದಿಯವರು ಉಳುವವನೇ ಒಡೆಯ ಕಾನೂನು ತರಲು ನಾರಾಯಣ ಗುರುಗಳೇ ಕಾರಣರಾಗಿದ್ದಾರೆ: ಶಾಸಕ ಅಶೋಕ್ ರೈ

ಪುತ್ತೂರು: ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ಬ್ರಹ್ಮಶ್ರೀ ನಾರಾಯಣ ಗುರುಗಳ ಶಿಷ್ಯರಾಗಿದ್ದರು, ಅವರ ಸಿದ್ದಾಂತಕ್ಕೆ ಮಾರು ಹೋಗಿದ್ದ ಮಾಜಿ ಪ್ರಧಾನಿಗಳು , ನಾರಾಯಣ ಗುರುಗಳ ತತ್ವ ಸಿದ್ದಾಂತವನ್ನು ದೇಶದಲ್ಲಿ ಜಾರಿಗೆ ತಂದಿದ್ದರು, ಉಳುವವನೇ ಭೂಮಿಯ ಒಡೆಯ ಎಂಬ ಬೂ ಮಸೂದೆ ಕಾನೂನನ್ನು ಜಾರಿ ಮಾಡಲು ನಾರಾಯಣ ಗುರುಗಳೇ ಕಾರಣರಾಗಿದ್ದರು ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು. ಅವರು ಭಾನುವಾರ ಶ್ರೀನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು, ನಾರಾಯಣ ಗುರು ಸ್ವಾಮಿ ಮಂದಿರದ ಜಂಟಿ ಆಶ್ರಯದಲ್ಲಿ ಬ್ರಹ್ಮಶ್ರೀ ಸಭಾಭವನದಲ್ಲಿ

ಬ್ರಹ್ಮಶ್ರೀ ನಾರಾಯಣ ಗುರುಗಳ 171 ನೇ ಜಯಂತಿ ಆಚರಣೆ | ಇಂದಿರಾಗಾಂದಿಯವರು ಉಳುವವನೇ ಒಡೆಯ ಕಾನೂನು ತರಲು ನಾರಾಯಣ ಗುರುಗಳೇ ಕಾರಣರಾಗಿದ್ದಾರೆ: ಶಾಸಕ ಅಶೋಕ್ ರೈ Read More »

ಸೆ. 7: ಪುತ್ತೂರಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಜಯಂತಿ ಆಚರಣೆ

ಪುತ್ತೂರು: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ(ರಿ) ಪುತ್ತೂರು ವತಿಯಿಂದ ಬ್ರಹ್ಮಶ್ರೀ ‌ನಾರಾಯಣ ಗುರುಸ್ವಾಮಿ ಅವರ 171 ನೇ ಜನ್ಮ ದಿನಾಚರಣೆ ಸೆ. 7 ರಂದು ಪುತ್ತೂರಿನ ಬ್ರಹ್ಮಶ್ರೀ ‌ನಾರಾಯಣ ಗುರುಸ್ವಾಮಿ ಕಲಾಮಂದಿರದಲ್ಲಿ ನಡೆಯಲಿದೆ. ಗಣ ಹೋಮ, ಗುರು ಪೂಜೆ, ಭಜನೆ, ಸಭಾ ಕಾರ್ಯಕ್ರಮ ನಡೆಯಲಿದ್ದು, ಭಗೀರಥ ಜಿ. (ಅಧ್ಯಕ್ಷರು ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ ನಿ. ಬೆಳ್ತಂಗಡಿ), ಸದಾನಂದ ಪೂಜಾರಿ (ಅಧ್ಯಕ್ಷರು ಸಂಸ್ಥಾಪಕರು, ನಂದಾದೀಪ ಫೌಂಡೇಶನ್ ಮತ್ತು ಬಿಲ್ಲವ ಬ್ರಿಗ್ರೇಡ್ (ರಿ.) ಕೇಂದ್ರಿಯ ಮಂಡಳಿ

ಸೆ. 7: ಪುತ್ತೂರಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಜಯಂತಿ ಆಚರಣೆ Read More »

error: Content is protected !!
Scroll to Top