ಧಾರ್ಮಿಕ

ಶ್ರೀಶೈಲಂ ‌ಮಲ್ಲಿಕಾರ್ಜುನ ಸ್ವಾಮಿ ದೇವರಿಗೆ ಪ್ರಧಾನಿ ಮೋದಿ ಪೂಜೆ

ಶ್ರೀಶೈಲಂ: ಆಂಧ್ರಪ್ರದೇಶ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಶ್ರೀಶೈಲಂ‌ನ ಶ್ರೀ ಭ್ರಮರಾಂಭ ಮಲ್ಲಿಕಾರ್ಜುನ ಸ್ವಾಮಿ ವರ್ಲ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಇದೇ ವೇಳೆ ಪ್ರಧಾನಿ ಅವರು ಹಸುವಿನ ಹಾಲು, ತುಪ್ಪ, ಸಕ್ಕರೆ, ಜೇನು ತುಪ್ಪ, ಮೊಸರು ಮಿಶ್ರಿತ ರುದ್ರಾಭಿಷೇಕವನ್ನು ಶ್ರೀ ದೇವರಿಗೆ ನೆರವೇರಿಸಿದರು‌. ಆ ಬಳಿಕ ದೇಗುಲದಲ್ಲಿ ಕೊಂಚ ಧ್ಯಾನ ನಡೆಸಿ, ಬಳಿಕ ಪ್ರಾರ್ಥಿಸಿದರು‌. ಒಂದೇ ದೇವಾಲಯದ ಸಂಕೀರ್ಣದಲ್ಲಿ ಜ್ಯೋತಿರ್ಲಿಂಗ ಮತ್ತು ಶಕ್ತಿ ಪೀಠಗಳೆರಡೂ ಇದ್ದು, ಇದು ವಿಶೇಷ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ.

ಶ್ರೀಶೈಲಂ ‌ಮಲ್ಲಿಕಾರ್ಜುನ ಸ್ವಾಮಿ ದೇವರಿಗೆ ಪ್ರಧಾನಿ ಮೋದಿ ಪೂಜೆ Read More »

ಅ. 18: ಪೆರುವಾಜೆಯ ಜೆ. ಡಿ. ಆಡಿಟೋರಿಯಂ‌ನಲ್ಲಿ ಮಕ್ಕಳ ‘ಗೊಂಬೆ ರಾವಣ’ ನಾಟಕ

ಪುತ್ತೂರು: ಯುವ ರಾಜ್ಯ ಪ್ರಶಸ್ತಿ ಪುರಸ್ಕೃತ ರಂಗ ನಿರ್ದೇಶಕ ವಿದ್ದು ಉಚ್ಚಿಲ ಅವರ ಮಾರ್ಗದರ್ಶನದಲ್ಲಿ, ಡ್ಯಾನ್ಸ್ & ಬೀಟ್ಸ್ ನೃತ್ಯ ಸಂಸ್ಥೆ ಬೆಳ್ಳಾರೆ ನೇತೃತ್ವದ ಗೊಂಬೆ ರಾವಣ ಎಂಬ ಮಕ್ಕಳ ರಂಗ ನಾಟಕ ಅ. 18 ಶನಿವಾರದಂದು ಪೆರುವಾಜೆಯ ಜೆ. ಡಿ. ಆಡಿಟೋರಿಯಂ‌ನಲ್ಲಿ ಚೊಚ್ಚಲ ಪ್ರದರ್ಶನ ಕಾಣಲಿದೆ. ಸಂಜೆ ನಡೆಯುವ ಸಭಾ ಕಾರ್ಯಕ್ರಮದ ಬಳಿಕ ವಿವಿಧ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 13 ಮಕ್ಕಳು ಈ ರಂಗನಾಟಕದಲ್ಲಿ ಅಭಿನಯಿಸಲಿದ್ದಾರೆ. ಕಲಾ ಪೋಷಕರ ಸಹಕಾರದ ಜೊತೆಗೆ ‘ಮುದ್ರಾರಂಗ’ – ಚಿಣ್ಣರ

ಅ. 18: ಪೆರುವಾಜೆಯ ಜೆ. ಡಿ. ಆಡಿಟೋರಿಯಂ‌ನಲ್ಲಿ ಮಕ್ಕಳ ‘ಗೊಂಬೆ ರಾವಣ’ ನಾಟಕ Read More »

ಗೇರುಕಟ್ಟೆ ಅರ್ಕುಳ ಪ್ರತಿಷ್ಠಾನದಿಂದ ತೀರ್ಥಹಳ್ಳಿ ಗೋಪಾಲಾಚಾರ್ಯರಿಗೆ ಅರ್ಕುಳ ಪ್ರಶಸ್ತಿ ಪ್ರದಾನ

ಗೇರುಕಟ್ಟೆ ಅರ್ಕುಳ ಪ್ರತಿಷ್ಠಾನದಿಂದ ತೀರ್ಥಹಳ್ಳಿ ಗೋಪಾಲಾಚಾರ್ಯರಿಗೆ ಅರ್ಕುಳ ಪ್ರಶಸ್ತಿ ಪ್ರದಾನ ಶ್ರೀ ಜಗದ್ಗುರು ಅಯ್ಯ ಸ್ವಾಮಿ ಮಠ ಆಲoಗಾರು ಮೂಡಬಿದಿರೆ ಪುನರ್ ನಿರ್ಮಾಣ ಜೀರ್ಣೋದ್ಧಾರದ ಪ್ರಯುಕ್ತ ನಡೆದ ಶ್ರೀ ಗುರು ಮತ್ತು ವಿಶ್ವಕರ್ಮ ಯಜ್ಞದ ಶುಭಾವಸರದಲ್ಲಿ ಅಲoಗಾರಿನ ಪಾಲ್ಕೆ ಬಾಬುರಾಯ ಆಚಾರ್ಯ ವೇದಿಕೆಯಲ್ಲಿ ಗೇರುಕಟ್ಟೆಯ ಅರ್ಕುಳ ಸುಬ್ರಾಯ ಆಚಾರ್ಯ ಪ್ರತಿಷ್ಠಾನದಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಡಗುತಿಟ್ಟಿನ ಪ್ರಸಿದ್ಧ ಕಲಾವಿದ ತೀರ್ಥಹಳ್ಳಿ ಗೋಪಾಲ ಆಚಾರ್ಯ ಇವರಿಗೆ ಅರ್ಕುಳ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನುವಹಿಸಿದ್ದ ಶ್ರೀಮಠದ ಜೀರ್ಣೋದ್ಧಾರ

ಗೇರುಕಟ್ಟೆ ಅರ್ಕುಳ ಪ್ರತಿಷ್ಠಾನದಿಂದ ತೀರ್ಥಹಳ್ಳಿ ಗೋಪಾಲಾಚಾರ್ಯರಿಗೆ ಅರ್ಕುಳ ಪ್ರಶಸ್ತಿ ಪ್ರದಾನ Read More »

ಋಷಿಕೇಶದಲ್ಲಿ ರಜನಿಕಾಂತ್‌ : ಫೋಟೊ ಭಾರಿ ವೈರಲ್‌

ರಸ್ತೆ ಬದಿ ನಿಂತು ಜನಸಾಮಾನ್ಯರಂತೆ ಊಟ ಮಾಡಿದ ಸೂಪರ್‌ಸ್ಟಾರ್‌ ಚೆನ್ನೈ : ಆಗಾಗ ಹಿಮಾಲಯದತ್ತ ಆಧ್ಯಾತ್ಮಿಕ ಪ್ರವಾಸ ಕೈಗೊಂಡು ಧ್ಯಾನ, ಪ್ರಾರ್ಥನೆ ಮಾಡಿ ಬರುವ ಹವ್ಯಾಸ ಇಟ್ಟುಕೊಂಡಿರುವ ಮೇರುನಟ ರಜನಿಕಾಂತ್‌ ಈ ಸಲ ಋಷಿಕೇಶಕ್ಕೆ ಹೋಗಿದ್ದಾರೆ. ರಜನಿಕಾಂತ್ ‘ಕೂಲಿ’ ಸಿನಿಮಾ ಬಳಿಕ ಆಧ್ಯಾತ್ಮಿಕ ವಿರಾಮಕ್ಕಾಗಿ ಋಷಿಕೇಶಕ್ಕೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿ ಅವರು ಸರಳವಾಗಿ ರಸ್ತೆ ಬದಿಯಲ್ಲಿ ಊಟ ಮಾಡುತ್ತಿರುವ ಫೋಟೋ ವೈರಲ್ ಆಗಿದೆ. ರಜನಿಕಾಂತ್‌ ದಯಾನಂದ ಆಶ್ರಮಕ್ಕೆ ಭೇಟಿ ನೀಡಿ, ಗಂಗಾ ನದಿಯಲ್ಲಿ ಧ್ಯಾನ ಮಾಡಿದ್ದಾರೆ.

ಋಷಿಕೇಶದಲ್ಲಿ ರಜನಿಕಾಂತ್‌ : ಫೋಟೊ ಭಾರಿ ವೈರಲ್‌ Read More »

ಕಟೀಲು ದೇವಳದಲ್ಲಿ ಮಹಿಳೆಯರಿಗೆ ದೇವರ ಶೇಷವಸ್ತ್ರ ವಿತರಣೆ

ನವರಾತ್ರಿ ಅಂಗವಾಗಿ 25 ಸಾವಿರಕ್ಕೂ ಅಧಿಕ ಮಹಿಳೆಯರಿಗೆ ಸೀರೆ ವಿತರಣೆ ಮಂಗಳೂರು : ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಶನಿವಾರ ಲಲಿತಾ ಪಂಚಮಿಯ ದಿನ ಮಹಿಳೆಯರಿಗೆ ಶೇಷವಸ್ತ್ರವಾಗಿ 25 ಸಾವಿರಕ್ಕೂ ಹೆಚ್ಚು ಸೀರೆಗಳನ್ನು ವಿತರಿಸಲಾಯಿತು. ಸಂಜೆ ಮೂರರಿಂದಲೇ ಭಕ್ತರು ಸರದಿಯಲ್ಲಿ ನಿಂತಿದ್ದು, ಸಂಜೆ 5 ಗಂಟೆಯಿಂದ ಆರಂಭವಾದ ವಿತರಣೆ ತಡರಾತ್ರಿವರೆಗೆ ನಡೆಯಿತು. ಈ ವರ್ಷದಲ್ಲಿ ಒಟ್ಟಾರೆ ಸುಮಾರು 44 ಸಾವಿರ ಸೀರೆಗಳನ್ನು ವಿತರಿಸಲು ದೇವಳ ಪೂರ್ವಸಿದ್ಧತೆ ಮಾಡಿಕೊಂಡಿತ್ತು. ಭಕ್ತರ ಸಾಲಿನಲ್ಲಿ ನೂಕುನುಗ್ಗಲು ತಪ್ಪಿಸಲು

ಕಟೀಲು ದೇವಳದಲ್ಲಿ ಮಹಿಳೆಯರಿಗೆ ದೇವರ ಶೇಷವಸ್ತ್ರ ವಿತರಣೆ Read More »

ಬಾರ್ಯ ದೇವಸ್ಥಾನದಲ್ಲಿ ತೆನೆ ಹಬ್ಬ

ಬಾರ್ಯ ದೇವಸ್ಥಾನದಲ್ಲಿ ತೆನೆ ಹಬ್ಬ.ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ 9 ದಿನಗಳ ಪರ್ಯಂತ ನವದುರ್ಗೆಯರ ಆರಾಧನೆ ಮತ್ತು ಭಕ್ತಾದಿಗಳಿಗೆ ಅನ್ನ ಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ಚಾಲನೆಯನ್ನು ದೇವಳದ ಮತ್ತು ಪರಿವಾರದೈವಗಳ ಆಡಳಿತ ಸೇವಾ ಟ್ರಸ್ಟಿನ ಅಧ್ಯಕ್ಷ ಭಾಸ್ಕರ ಬಾರ್ಯ ನೆರವೇರಿಸಿದರು. ನವರಾತ್ರಿ ಪ್ರಥಮ ದಿನದಂದು ಗ್ರಾಮಸ್ಥರಿಗೆ ತೆನೆಯನ್ನು ವಿತರಿಸಲಾಯಿತು. ದೇವಳದ ಅರ್ಚಕ ಗುರುಪ್ರಸಾದ್ ನೂರಿತ್ತಾಯ,, ಆಡಳಿತ ಟ್ರಸ್ಟ್ ಕಾರ್ಯದರ್ಶಿ ಪ್ರಶಾಂತ್ ಪೈ ಬಾರ್ಯ ಮತ್ತು ಟ್ರಸ್ಟಿಗಳು, ಊರ ಹತ್ತು

ಬಾರ್ಯ ದೇವಸ್ಥಾನದಲ್ಲಿ ತೆನೆ ಹಬ್ಬ Read More »

ಶ್ರೀ ನಾಳ ಕ್ಷೇತ್ರದಲ್ಲಿ ನವರಾತ್ರಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ

ನಾಳ ಶ್ರೀ ದುರ್ಗಾ ಪರಮೇಶ್ವರಿ ದೇವಾಸ್ತನದಲ್ಲಿ ನವರಾತ್ರಿ ಉತ್ಸವ ಮತ್ತು ಚಂಡಿಕಾಯಾಗದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ಕ್ಷೇತ್ರದ ಪ್ರಧಾನ ಅರ್ಚಕರಾದ ರಾಘವೇಂದ್ರ ಆಸ್ರನ್ನ ಉದ್ಘಾಟಿಸಿದರು. ಕ್ಷೇತ್ರದ ಪರಂಪರೆಯಿಂದ ಬೆಳೆದು ಬಂದಿರುವ ಯಕ್ಷಗಾನ ಸೇವೆ ಶ್ರೀ ದುರ್ಗಾಪರಮೇಶ್ವರಿಯ ಅನುಗ್ರಹದಿಂದ ನಿರಂತರವಾಗಿ ಈ ಕ್ಷೇತ್ರದಲ್ಲಿ ಮುಂದುವರೆಯಲಿ ಎಂದು ಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಹರೀಶ್ ವಹಿಸಿದ್ದು ಕ್ಷೇತ್ರದಲ್ಲಿ ನಡೆಯುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಕ್ತರು ಭಾಗವಹಿಸಿ ಶ್ರೀ ದುರ್ಗಾ ಮಾತೆಯ ಅನುಗ್ರಹ ಪಡೆಯುವಂತಾಗಲಿಯೆಂದರು.

ಶ್ರೀ ನಾಳ ಕ್ಷೇತ್ರದಲ್ಲಿ ನವರಾತ್ರಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ Read More »

ಕಟ್ಟಡ ಕಾರ್ಮಿಕ ಸಂಘದಿಂದ ಕುಂಜೂರು ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ್ನ

ಪುತ್ತೂರು: ನವ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘ ಮತ್ತು ಕರ್ಣಾಟಕ ವಿದ್ಯುತ್ ಕಂಬ ಅಳವಡಿಸುವ ಕಾರ್ಮಿಕರ ಸಂಘ ಅನುರಾಗ ವಠಾರ ಪುತ್ತೂರು ಇದರ ವತಿಯಿಂದ ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಪೂರ್ವಭಾವಿಯಾಗಿ ಸ್ವಚ್ಚತಾ ಶ್ರಮಸೇವೆ ನಡೆಸಲಾಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಜಗನ್ನಾಥ ರೈ ಶ್ರಮದಾನ ಸೇವೆಯಲ್ಲಿ ಭಾಗವಹಿಸಿದ ಎಲ್ಲಾ ಸದಸ್ಯರ ಪರವಾಗಿ ಸಂಘದ ಅಧ್ಯಕ್ಷರಿಗೆ ಹಾಗೂ ಕಾಯಾದ್ಯಕ್ಷರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ಶ್ರಮದಾನ ಸೇವೆಯಲ್ಲಿ

ಕಟ್ಟಡ ಕಾರ್ಮಿಕ ಸಂಘದಿಂದ ಕುಂಜೂರು ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ್ನ Read More »

ಧಾರ್ಮಿಕ ಕೇಂದ್ರಗಳು ನಮ್ಮನ್ನು ಒಗ್ಗೂಡಿಸುತ್ತದೆ : ಸಂಜೀವ ಮಠಂದೂರು

ಭಗವಂತನ ಅನುಗ್ರಹವನ್ನು ಪಡೆಯಲು ಭಕ್ತಿಯೇ ಮುಖ್ಯ. ಭಕ್ತಿಯ ಮೂಲಕವೇ ಧಾರ್ಮಿಕ ಕೇಂದ್ರಗಳಲ್ಲಿ ಭಕ್ತರೆಲ್ಲ ಒಗ್ಗೂಡಿ ಪೂಜೆ ಉತ್ಸವ ಸತ್ಸಂಗದಲ್ಲಿ ಭಾಗವಹಿಸುವ ಮೂಲಕ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಲು ಸಾಧ್ಯವೆಂದು ಪುತ್ತೂರು ಕ್ಷೇತ್ರದ ಮಾಜಿ ಶಾಸಕರಾದ ಸಂಜೀವ ಮಠಂದೂರು ತಿಳಿಸಿದರು. ಉಪ್ಪಿನಂಗಡಿಗೆ ಸಮೀಪದ ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ಭದ್ರತಾ ಕೋಶದ ಕೊಠಡಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕ್ಷೇತ್ರದಲ್ಲಿ ನಡೆಯುವ ನವರಾತ್ರಿ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತೆಯರು ನವದುರ್ಗೆಯರ ರೂಪದಲ್ಲಿ ಸಮಾಜಕ್ಕೆ ಬರುವ ಕಂಟಕಗಳನ್ನು ದೂರ ಪಡಿಸುವ ಶಕ್ತಿ ಸ್ವರೂಪಿಗಳಾಗಬೇಕೆಂದು

ಧಾರ್ಮಿಕ ಕೇಂದ್ರಗಳು ನಮ್ಮನ್ನು ಒಗ್ಗೂಡಿಸುತ್ತದೆ : ಸಂಜೀವ ಮಠಂದೂರು Read More »

ಸ್ಥಗಿತಗೊಂಡಿದ್ದ ವೈಷ್ಣೋದೇವಿ ಯಾತ್ರೆ ಪುನರಾರಂಭ

ಶ್ರೀನಗರ: ನಿರಂತರವಾದ ಮಳೆ, ಭೂಕುಸಿತ ಕಾರಣದಿಂದ ಸ್ಥಗಿತವಾಗಿದ್ದ ವೈಷ್ಣೋದೇವಿ ಯಾತ್ರೆಯನ್ನು 22 ದಿನಗಳ ಬಳಿಕ ಈಗ ಮತ್ತೆ ಆರಂಭ ಮಾಡಲಾಗಿದೆ. ಈ ಸಂಬಂಧ ಶ್ರೀ ಮಾತಾ ವೈಷ್ಣೋದೇವಿ ಯಾತ್ರಾ ಮಂಡಳಿಯು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದು, ಯಾತ್ರಾ ಪ್ರದೇಶದಲ್ಲಿ ಪರಿಸ್ಥಿತಿ ಸುಧಾರಣೆ ಕಂಡಲ್ಲಿ ಯಾತ್ರಾ ಮಾರ್ಗವನ್ನು ಮುಕ್ತಗೊಳಿಸುವುದಾಗಿಯೂ ಅಧಿಕಾರಿಗಳು ಹೇಳಿದ್ದಾರೆ. ಆ. 26 ರಂದು ಇಂದ್ರಪ್ರಸ್ಥದ ಭೋಜಶಾಲ ಬಳಿ ಭೂ ಕುಸಿತ ನಡೆದಿತ್ತು. ಆ ಬಳಿಕ ಯಾತ್ರೆಯನ್ನು ಮುಂದೂಡುತ್ತಲೇ ಬರಲಾಗುತ್ತಿತ್ತು. ಸುಮಾರು 34 ಜನರು ಭೂಕುಸಿತದಲ್ಲಿ ಮೃತಪಟ್ಟಿದ್ದರು.

ಸ್ಥಗಿತಗೊಂಡಿದ್ದ ವೈಷ್ಣೋದೇವಿ ಯಾತ್ರೆ ಪುನರಾರಂಭ Read More »

error: Content is protected !!
Scroll to Top