ಪುತ್ತೂರು

ಸಂತ ಫಿಲೋಮಿನಾ ಕಾಲೇಜಿನಲ್ಲಿ ಕ್ಯಾಂಪಸ್ ನೇಮಕಾತಿ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ವೃತ್ತಿ ಮಾರ್ಗದರ್ಶನ ಹಾಗೂ ನೇಮಕಾತಿ ಕೋಶ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶಗಳ ಆಶ್ರಯದಲ್ಲಿ ಯುನೈಟೆಡ್ ಸ್ಟೇಟ್ಸ್‍ ಮೂಲಕ ಬಹುರಾಷ್ಟ್ರೀಯ ಹೆಲ್ತ್ ಕೇರ್ ಮತ್ತು ಇನ್ಶೂರೆನ್ಸ್ ಕಂಪೆನಿ ಆಪ್ಟ್‍ ನ ಮೆಡಿಕಲ್ ಕೋಡರ್ ಹುದ್ದೆಗಳಿಗಾಗಿ ಡಿ. 11ರಂದು ಕ್ಯಾಂಪಸ್ ನೇಮಕಾತಿ ಕಾರ್ಯಕ್ರಮ ನಡೆಯಿತು. ಆಪ್ಟಮ್ ಕಂಪೆನಿಯು 125000 ಉದ್ಯೋಗಿಗಳಿರುವ ಬಹುರಾಷ್ಟ್ರೀಯ ಸಂಸ್ಥೆಯಾಗಿದ್ದು, ಪ್ರಸ್ತುತ ಬೆಂಗಳೂರಿನ ಉನ್ನತ ಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದೆ. ಪ್ರಸ್ತುತ ವರ್ಷದಲ್ಲಿ ಸಾವಿರಕ್ಕೂ ಹೆಚ್ಚು ಉದ್ಯೋಗಿಗಳ ಅವಶ್ಯಕತೆಯಿದ್ದು, ಲಿಖಿತ […]

ಸಂತ ಫಿಲೋಮಿನಾ ಕಾಲೇಜಿನಲ್ಲಿ ಕ್ಯಾಂಪಸ್ ನೇಮಕಾತಿ Read More »

ಸಮುದಾಯ ಸಮ್ಮಿಲನಕ್ಕಾಗಿ ಸುಳ್ಯಕ್ಕೆ ಆಗಮಿಸಿದ ಶ್ರೀ ಆದಿಚುಂಚನಗಿರಿ ಮಹಾಸ್ವಾಮೀಜಿಗಳಿಗೆ ಅದ್ಧೂರಿ ಸ್ವಾಗತ

ಪುತ್ತೂರು: ಶ್ರೀ ಆದಿಚುಂಚನಗಿರಿ ಕ್ಷೇತ್ರದ ಪೀಠಾಧ್ಯಕ್ಷ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ಸುಳ್ಯ ತಾಲೂಕಿನಾದ್ಯಂತ 3 ದಿನಗಳ ಸಮುದಾಯ ಸಮ್ಮಿಲನಕ್ಕಾಗಿ ಮಂಗಳವಾರ ಆಗಮಿಸಿದ್ದು, ಅವರಿಗೆ ನಿಂತಿಕಲ್ಲಿನಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು. ಸುಳ್ಯ ತಾಲೂಕಿಗೆ ಆಗಮಿಸಿದ ಸ್ವಾಮೀಜಿ ಅವರು ಡಿ. 20, 21, 22ರಂದು ಗೌಡ ಸಮುದಾಯದ ವಿವಿಧ ಮನೆಗಳಿಗೆ ತೆರಳಿ ಆಶೀರ್ವಚನ ನೀಡಲಿದ್ದಾರೆ. ಮಂಗಳವಾರವೂ ವಿವಿಧ ಮನೆಗಳಿಗೆ ತೆರಳಲಿದ್ದು, ನಿಂತಿಕಲ್ಲಿನಿಂದ ಅವರನ್ನು ವಾಹನ ಜಾಥದ ಮೂಲಕ ಹರಿಹರಪಲ್ಲತಡ್ಕ ಐನೆಕಿದು ಕಡೆಗೆ ಕರೆದೊಯ್ಯಲಾಯಿತು. ಮಂಗಳವಾರ ಕಿಶೋರ್ ಕುಮಾರ್

ಸಮುದಾಯ ಸಮ್ಮಿಲನಕ್ಕಾಗಿ ಸುಳ್ಯಕ್ಕೆ ಆಗಮಿಸಿದ ಶ್ರೀ ಆದಿಚುಂಚನಗಿರಿ ಮಹಾಸ್ವಾಮೀಜಿಗಳಿಗೆ ಅದ್ಧೂರಿ ಸ್ವಾಗತ Read More »

ಸದೃಢ ದೇಹ ಮತ್ತು ಆರೋಗ್ಯಕ್ಕೆ ಕ್ರೀಡೆ ಸಹಕಾರಿ: ವಿದ್ಯಾಶಂಕರ್ ದಂಬೆ

ಪುತ್ತೂರು: ಇಲ್ಲಿನ ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘದ ಶತಮಾನೋತ್ಸವದ ಸವಿನೆನಪಿಗಾಗಿ ಶತಸಂಭ್ರಮದ ಅಂಗವಾಗಿ ಆಯೋಜಿಸಿದ ಎರಡು ದಿನಗಳ ಸಾರಸ್ವತ ಕ್ರಿಕೆಟ್ ಪಂದ್ಯಾಟವು ವಿವೇಕಾನಂದ ವಿದ್ಯಾರ‍್ಧಕ ವಿದ್ಯಾಸಂಸ್ಥೆಗಳ ಕ್ರೀಡಾಂಗಣ ನೆಹರೂನಗರದಲ್ಲಿ ನಡೆಯಿತು. ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ದೈಹಿಕ ಶಿಕ್ಷಣ ಶಿಕ್ಷಕ, ರಾಷ್ಟ್ರೀಯ ಕಬಡ್ಡಿ ತರ‍್ಪುಗಾರ ವಿದ್ಯಾಶಂಕರ್ ದಂಬೆ, ಸದೃಢ ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ಕ್ರೀಡೆ ಸಹಕಾರಿ ಎಂದರು. ಪುತ್ತೂರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರಾಧಾಕೃಷ್ಣಬರ‍್ಕರ್ ಕತ್ತಲಕಾನ, ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ

ಸದೃಢ ದೇಹ ಮತ್ತು ಆರೋಗ್ಯಕ್ಕೆ ಕ್ರೀಡೆ ಸಹಕಾರಿ: ವಿದ್ಯಾಶಂಕರ್ ದಂಬೆ Read More »

ನೀವು ಪಿಯುಸಿ ಮೇಲ್ಪಟ್ಟ ವಿದ್ಯಾರ್ಹತೆಯುಳ್ಳವರೇ? ಹಾಗಾದರೆ ಮ್ಯಾನೇಜರ್, ಸೇಲ್ಸ್‍ ಎಕ್ಸಿಕ್ಯೂಟಿವ್, ಅಕೌಂಟೆಂಟ್ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ

ಪುತ್ತೂರು: ರಾಜ್ಯದ ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಮ್ಯಾನೇಜರ್, ಸೇಲ್ಸ್ ಎಕ್ಸಿಕ್ಯೂಟಿವ್, ಅಕೌಂಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.ಕರ್ನಾಟಕದಾದ್ಯಂತ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಕೆಲಸ ನಿರೀಕ್ಷೆಯಲ್ಲಿರುವ ಯುವಕರಿಗೆ ಇದು ಸುವರ್ಣಾವಕಾಶ. 21ರಿಂದ 27 ವರ್ಷದೊಳಗಿನ ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. 15 ಸಾವಿರ ರೂ. ಮೇಲ್ಪಟ್ಟ ವೇತನದೊಂದಿಗೆ ಆಹಾರ, ವಸತಿ ವ್ಯವಸ್ಥೆ ನೀಡಲಾಗುವುದು. ಮಾಹಿತಿಗಾಗಿ ಸಂಪರ್ಕಿಸಿ: 8904877721,7204977721

ನೀವು ಪಿಯುಸಿ ಮೇಲ್ಪಟ್ಟ ವಿದ್ಯಾರ್ಹತೆಯುಳ್ಳವರೇ? ಹಾಗಾದರೆ ಮ್ಯಾನೇಜರ್, ಸೇಲ್ಸ್‍ ಎಕ್ಸಿಕ್ಯೂಟಿವ್, ಅಕೌಂಟೆಂಟ್ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ Read More »

ಗ್ರಾ.ಪಂ. ನೌಕರರಿಂದ ಬೆಳಗಾವಿಯಲ್ಲಿ ಪ್ರತಿಭಟನೆ | ಸಂಘದ ಪುತ್ತೂರು ತಾಲೂಕು ಪದಾಧಿಕಾರಿಗಳು ಭಾಗಿ

ಪುತ್ತೂರು: ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘ ಬೆಳಗಾವಿಯ ಸುವರ್ಣ ಸೌಧದ ಮುಂಭಾಗ ಸೋಮವಾರ ಪ್ರತಿಭಟನೆ ಆರಂಭಿಸಿದ್ದು, ಪುತ್ತೂರು ಸೇರಿದಂತೆ ಕರಾವಳಿಯ ಗ್ರಾಮ ಪಂಚಾಯತ್ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಎನ್ನುತ್ತಿರುವಾಗಲೇ ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಧಾನಮಂಡಲ ಕಲಾಪ ಸೋಮವಾರದಿಂದ ಆರಂಭವಾಗಿದೆ. ಇದರ ನಡುವೆಯೇ, ಗ್ರಾ. ಪಂ. ನೌಕರರ ಶ್ರೇಯೋಭಿವೃದ್ಧಿ ಸಂಘ ಹೋರಾಟವನ್ನು ಕೈಗೆತ್ತಿಕೊಂಡಿದೆ. ಬೆಳಗ್ಗಿನಿಂದಲೇ ವಿವಿಧ ಘೋಷಣೆಗಳನ್ನು ಕೂಗುತ್ತಾ, ತಮ್ಮ ಬೇಡಿಕೆಗಳನ್ನು ಈಡೇರಿಸಿ ಎಂಬ ಆಗ್ರಹ

ಗ್ರಾ.ಪಂ. ನೌಕರರಿಂದ ಬೆಳಗಾವಿಯಲ್ಲಿ ಪ್ರತಿಭಟನೆ | ಸಂಘದ ಪುತ್ತೂರು ತಾಲೂಕು ಪದಾಧಿಕಾರಿಗಳು ಭಾಗಿ Read More »

ನವೀನ್ ಕಾಮಧೇನು ಅಪಹರಣ? | ದಿವ್ಯಪ್ರಭಾ ಚಿಲ್ತಡ್ಕ ತಂಡದಿಂದ ಕೃತ್ಯ ಶಂಕೆ

ಪುತ್ತೂರು: ಬೆಳ್ಳಾರೆಯ ಉದ್ಯಮಿ ನವೀನ್ ಕಾಮಧೇನು ಅವರನ್ನು ಅಪಹರಣ ಮಾಡಲಾಗಿದೆ ಎಂಬ ವದಂತಿ ಹರಡಿದೆ. ಬೆಳ್ಳಾರೆಯಲ್ಲಿ ಜ್ಯುವೆಲ್ಲರ್ಸ್ ಉದ್ಯಮ ನಡೆಸುತ್ತಿರುವ ನವೀನ್ ಕಾಮಧೇನು ಅವರನ್ನು, ಅವರ ಮನೆಯಿಂದಲೇ ಅಪಹರಣ ಮಾಡಲಾಗಿದೆ ಎಂಬ ಮಾಹಿತಿ ಹರಡಿದೆ. ಅಲ್ಲದೇ, ತಂಡದ ಕೃತ್ಯವನ್ನು ತಡೆಯಲು ಬಂದ ನವೀನ್ ಕಾಮಧೇನು ಅವರ ತಾಯಿಯ ಮೇಲೂ ಹಲ್ಲೆ ನಡೆಸಿದೆ. ಬಳಿಕ ನವೀನ್ ಕಾಮಧೇನು ಅವರನ್ನು ಬಲವಂತವಾಗಿ ಆ್ಯಂಬುಲೆನ್ಸಿನಲ್ಲಿ ಕುಳ್ಳಿರಿಸಿ, ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ. ಈ ಕೃತ್ಯದ ಬಗ್ಗೆ ಊಹಾಪೋಹಗಳು ಹರಿದಾಡುತ್ತಿದ್ದು, ದಿವ್ಯಪ್ರಭಾ ಅವರೇ ಈ

ನವೀನ್ ಕಾಮಧೇನು ಅಪಹರಣ? | ದಿವ್ಯಪ್ರಭಾ ಚಿಲ್ತಡ್ಕ ತಂಡದಿಂದ ಕೃತ್ಯ ಶಂಕೆ Read More »

ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಲೋಕಾಯುಕ್ತ ಪೊಲೀಸರು

ಪುತ್ತೂರು: ಲೋಕಾಯುಕ್ತ ಎಸ್ಪಿ ಡಿ. 19ರಂದು ಪುತ್ತೂರು ತಾಲೂಕು ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಪುತ್ತೂರು ತಹಸೀಲ್ದಾರ್ ಅವರ ನ್ಯಾಯಾಲಯ ಸಂಕೀರ್ಣದಲ್ಲಿ ಉಪಸ್ಥಿತರಿದ್ದ ಲೋಕಾಯುಕ್ತ ಅಧಿಕಾರಿಗಳು, ಒಟ್ಟು 21 ಅರ್ಜಿಗಳನ್ನು ಸಾರ್ವಜನಿಕರಿಂದ ಸ್ವೀಕರಿಸಿದರು. ಇವೆಲ್ಲವೂ ಕಂದಾಯ ಹಾಗೂ ಸರ್ವೇ ಇಲಾಖೆಗೆ ಸಂಬಂಧಪಟ್ಟ ಪ್ರಕರಣಗಳು. ಇವನ್ನು ಸ್ಥಳದಲ್ಲಿಯೇ ಇತ್ಯರ್ಥಪಡಿಸಲಾಯಿತು. ಸರ್ಕಾರಿ ಅಧಿಕಾರಿಗಳಿಂದ ಆಗಬೇಕಾದ ಕೆಲಸದಲ್ಲಿ ವಿಳಂಬ, ಅಧಿಕಾರಿಗಳು ನ್ಯಾಯಯುತವಾಗಿ ಮಾಡಿಕೊಡಬೇಕಾದ ಕೆಲಸಗಳಲ್ಲಿ ವೃಥಾ ತೊಂದರೆ ಕೊಡುವುದು, ಇನ್ಯಾವುದೇ ತರಹದ ದುರಾಡಳಿತದಲ್ಲಿ ತೊಡಗಿದ್ದರೆ ತೊಂದರೆಗೊಳಗಾದ ಸಾರ್ವಜನಿಕರು ದೂರು

ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಲೋಕಾಯುಕ್ತ ಪೊಲೀಸರು Read More »

ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿಯಿತ್ತ ಬಿ.ಎಲ್. ಸಂತೋಷ್

ಪುತ್ತೂರು: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರು ಭಾನುವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿಯಿತ್ತ ಬಿ.ಎಲ್. ಸಂತೋಷ್ Read More »

ಡಿ. 22, 23ರಂದು ವಿದ್ಯಾರಶ್ಮಿಯಲ್ಲಿ ಸನ್ಮಾನ ರಶ್ಮಿ, ಸಂಭ್ರಮ ರಶ್ಮಿ

ಪುತ್ತೂರು: ಸವಣೂರು ವಿದ್ಯಾಗಂಗೋತ್ರಿ ವಿದ್ಯಾರಶ್ಮಿ ವಿದ್ಯಾಲಯದ ಆಶ್ರಯದಲ್ಲಿ ಸನ್ಮಾನ ರಶ್ಮಿ ಹಾಗೂ ಸಂಭ್ರಮ ರಶ್ಮಿ ಡಿ. 22, 23ರಂದು ವಿದ್ಯಾಚೇತನ ಆಡಿಟೋರಿಯಂನಲ್ಲಿ ನಡೆಯಲಿದೆ. 22ರಂದು ಬೆಳಿಗ್ಗೆ 9.30ಕ್ಕೆ ನಡೆಯುವ ಸನ್ಮಾನ ರಶ್ಮಿ ಕಾರ್ಯಕ್ರಮದಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಬಂಡಾರಿ ಸಿ. ಮುಖ್ಯ ಅತಿಥಿಯಾಗಿರುವರು. ವಿದ್ದ್ಯಾರಶ್ಮಿ ಓಲ್ಡ್ ಸ್ಟೂಡೆಂಟ್ ಯೂನಿಯನ್ ಅಧ್ಯಕ್ಷ ದ್ರುವ ಮುಂದೋಡಿ ಗೌರವ ಅತಿಥಿಯಾಗಿರುವರು. ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ ಅಧ್ಯಕ್ಷತೆ ವಹಿಸುವರು. ಇದೇ ಸಂದರ್ಭ ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಸಂಚಾಲಕ

ಡಿ. 22, 23ರಂದು ವಿದ್ಯಾರಶ್ಮಿಯಲ್ಲಿ ಸನ್ಮಾನ ರಶ್ಮಿ, ಸಂಭ್ರಮ ರಶ್ಮಿ Read More »

ಶತಮಾನ ಕಳೆದರೂ ಪತ್ರಿಕೆಗಳು ವಿಶ್ವಾಸಪೂರ್ಣ: ಅಂಬಿಕಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಉಪನ್ಯಾಸದಲ್ಲಿ ಸುಧಾಕರ ಸುವರ್ಣ

ಪುತ್ತೂರು: ವರ್ಷಗಳು ಕಳೆದಂತೆ ಮಾಧ್ಯಮ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳು ಸಂಭವಿಸುತ್ತಿವೆ. ಸುದ್ದಿಗಳು ವೇಗವಾಗಿ ಜನರನ್ನು ತಲುಪುತ್ತಿವೆ. ಆದರೆ ಟಿ.ವಿ., ೨೪*೭ ನ್ಯೂಸ್,  ವೆಬ್ ನ್ಯೂಸ್, ಯೂಟ್ಯೂಬ್ ಚಾನಲ್, ಲೈವ್ ನ್ಯೂಸ್ ಯುಗದಲ್ಲೂ ದಿನಪತ್ರಿಕೆಗಳು ತಮ್ಮ ವಿಶ್ವಾಸಾರ್ಹತೆ ಉಳಿಸಿಕೊಂಡಿವೆ. ನಿಖರ ಸುದ್ದಿಗಳಿಗಾಗಿ ಜನತೆ ದಿನಪತ್ರಿಕೆಯನ್ನೇ ಅವಲಂಬಿಸಿದ್ದಾರೆ ಎಂದು ಪುತ್ತೂರಿನ ವಿಜಯ ಕರ್ನಾಟಕ ದಿನಪತ್ರಿಕೆ ಜಿಲ್ಲಾ ವರದಿಗಾರ ಸುಧಾಕರ ಸುವರ್ಣ ತಿಂಗಳಾಡಿ ಹೇಳಿದರು. ಅವರು ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗ ಹಾಗೂ ಐಕ್ಯೂಎಸಿ

ಶತಮಾನ ಕಳೆದರೂ ಪತ್ರಿಕೆಗಳು ವಿಶ್ವಾಸಪೂರ್ಣ: ಅಂಬಿಕಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಉಪನ್ಯಾಸದಲ್ಲಿ ಸುಧಾಕರ ಸುವರ್ಣ Read More »

error: Content is protected !!
Scroll to Top