ಪುತ್ತೂರು

ವ್ಯಕ್ತಿ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದು ಸ್ನಾತಕೋತ್ತರ ವಿದ್ಯಾರ್ಥಿಗಳ ಮುಖ್ಯಗುರಿ:ವಂ|ಡಾ|ಆ್ಯಂಟನಿ ಪ್ರಕಾಶ್ಮೊಂತೆರೋ

ಪುತ್ತೂರು: ಸಂತಫಿಲೋಮಿನಾ ಕಾಲೇಜಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ವಂ| ಡಾ| ಆಂಟನಿಪ್ರಕಾಶ್ ಮೊಂತೆರೊರವರು“ವಿದ್ಯಾರ್ಥಿಗಳು ತಮ್ಮ ವರ್ತನೆ, ವ್ಯಕ್ತಿತ್ವ ಮತ್ತು ಭಾಷೆಯ ಮೇಲೆ ಮುಖ್ಯವಾಗಿ ಗಮನ ಹರಿಸಬೇಕು. ವಿದ್ಯಾರ್ಥಿಗಳು ಮಾನಸಿಕ, ದೈಹಿಕ ಮತ್ತು ಆಧ್ಯಾತ್ಮಿಕ ದೃಷ್ಟಿಕೋನಗಳನ್ನು ಅರ್ಥಪೂರ್ಣವಾಗಿ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ, ವಿದ್ಯಾರ್ಥಿಗಳು ಪಠ್ಯ,ಸಹಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮ ಹೃದಯ, ಬುದ್ಧಿ ಮತ್ತು ದೇಹಕ್ಕೆ ತರಬೇತಿ ನೀಡುವತ್ತ ಗಮನ ಹರಿಸಬೇಕು” ಎಂದು ಹೇಳಿದರು. ಈ ಸಂರ್ಭದಲ್ಲಿ ಕಾಲೇಜಿನ […]

ವ್ಯಕ್ತಿ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದು ಸ್ನಾತಕೋತ್ತರ ವಿದ್ಯಾರ್ಥಿಗಳ ಮುಖ್ಯಗುರಿ:ವಂ|ಡಾ|ಆ್ಯಂಟನಿ ಪ್ರಕಾಶ್ಮೊಂತೆರೋ Read More »

ಅಂಗನವಾಡಿಗೆ ನೂತನ ಕಟ್ಟಡಭಾಗ್ಯ | ಶಾಸಕರ ಮುತುವರ್ಜಿಯಲ್ಲಿ ಹರಿದು ಬಂದ 1.44 ಕೋಟಿ ರೂ.

ಪುತ್ತೂರು: ಮಕ್ಕಳ ಭವಿಷ್ಯ ರೂಪಿಸುವ ಮೊದಲ ಶಾಲೆಯೇ ಅಂಗನವಾಡಿ. ಇಡೀಯ ಶಿಕ್ಷಣದ ಮೂಲಪಾಠವನ್ನು ನೀಡುವ ಅಂಗನವಾಡಿಗಳೇ ಪ್ರತಿಯೊಂದು ಮಗುವಿನ ಆರಂಭ. ಶಿಕ್ಷಣ ಮಾತ್ರವಲ್ಲ, ಪೌಷ್ಠಿಕ ಆಹಾರವೂ ಇಲ್ಲಿ ಲಭ್ಯ. ಹಾಗಿರುವಾಗ ಅಂಗನವಾಡಿ ಕಟ್ಟಡಗಳು ಹೇಗಿರಬೇಕು? ಸುವ್ಯವಸ್ಥಿತ ಕಟ್ಟಡ, ಮೂಲಸೌಕರ್ಯ, ಪೌಷ್ಠಿಕ ಆಹಾರ, ಪುಟಾಣಿಗಳ ಕಲಿಕೆಗೆ ಪೂರಕ ವ್ಯವಸ್ಥೆಗಳು ಮೂಲಭೂತವಾಗಿ ಬೇಕೇಬೇಕು. ಇವನ್ನು ಪೂರೈಸುವ ದೃಷ್ಟಿಯಿಂದ ಮೂಲಭೂತವಾಗಿ ಬೇಕಾಗಿರುವ ಕಟ್ಟಡ ವ್ಯವಸ್ಥೆಗೆ ಮೊದಲ ಆದ್ಯತೆ ನೀಡಿರುವ ಶಾಸಕ ಸಂಜೀವ ಮಠಂದೂರು ಅವರು, ತನ್ನ ಶಾಸಕತ್ವದ ಅವಧಿಯಲ್ಲಿ 12 ಅಂಗನವಾಡಿ

ಅಂಗನವಾಡಿಗೆ ನೂತನ ಕಟ್ಟಡಭಾಗ್ಯ | ಶಾಸಕರ ಮುತುವರ್ಜಿಯಲ್ಲಿ ಹರಿದು ಬಂದ 1.44 ಕೋಟಿ ರೂ. Read More »

ಸಂತ ಫಿಲೋಮಿನಾ ಕಾಲೇಜಿನ ಬಿಬಿಎ ವಿದ್ಯಾರ್ಥಿಗಳಿಂದ ಕೈಗಾರಿಕಾ ಸಂದರ್ಶನ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಬಿಬಿಎ ವಿಭಾಗದ ವಿದ್ಯಾರ್ಥಿಗಳು ನರಿಮೊಗರು ಶಂಕರ್ ಗ್ರೂಪ್ ಆಫ್ ಕಂಪನಿಯಲ್ಲಿ ಕೈಗಾರಿಕಾ ಸಂದರ್ಶನ ನಡೆಸಿದರು.ಪಠ್ಯ ವಿಷಯಗಳ ಜೊತೆಗೆ ಪ್ರಾಯೋಗಿಕ ಅನುಭವವನ್ನು ಪಡೆಯುವ ಉದ್ದೇಶದಿಂದ ವಿದ್ಯಾರ್ಥಿಗಳು ಕಂಪನಿಯ ವಿವಿಧ ಉತ್ಪಾದನಾ ಘಟಕಗಳಿಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಂಡರು. ಬಿಂದು ಉತ್ಪಾದನಾ ಘಟಕದ ಪ್ರಬಂಧಕರಾದ ಸುರೇಶ್ ಎಸ್.ಬಿ. ಹಾಗೂ ಧನ್ಯರಾಜ್ ಇವರು ವಿದ್ಯಾರ್ಥಿಗಳಿಗೆ ಅವಶ್ಯಕ ಮಾಹಿತಿ ನೀಡಿದರು. ಸಂತ ಫಿಲೋಮಿನಾ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರಶಾಂತ್ ರೈ, ಪುಷ್ಪಾಎನ್. ಹಾಗೂ

ಸಂತ ಫಿಲೋಮಿನಾ ಕಾಲೇಜಿನ ಬಿಬಿಎ ವಿದ್ಯಾರ್ಥಿಗಳಿಂದ ಕೈಗಾರಿಕಾ ಸಂದರ್ಶನ Read More »

ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ರಕ್ತದಾನ ಶಿಬಿರ

ರಕ್ತದಾನ ಮಾಡುವುದು ಆರೋಗ್ಯ ಸಹಕಾರಿ; ಡಾ. ರಾಮಚಂದ್ರ ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಯೂತ್ ರೆಡ್ ಕ್ರಾಸ್ ಘಟಕದ ನೇತೃತ್ವದಲ್ಲಿ ರೆಡ್ ಕ್ರಾಸ್ ಪುತ್ತೂರು ಘಟಕ, ರೋಟರಿ ಕ್ಲಬ್ ಪುತ್ತೂರು ಹಾಗೂ ಪುತ್ತೂರಿನ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ರಕ್ತದಾನ ಶಿಬಿರವು ಮಂಗಳವಾರ ನಡೆಯಿತು. ಕಾರ್ಯಕ್ರಮದಲ್ಲಿ ರಕ್ತದಾನದ ಕುರಿತು ವಿಶೇಷ ಉಪನ್ಯಾಸ ನೀಡಿದ ಪುತ್ತೂರಿನ ಬ್ಲಡ್ ಬ್ಯಾಂಕ್ ನ ವೈದ್ಯಾಧಿಕಾರಿ ಡಾ. ರಾಮಚಂದ್ರ ಭಟ್ ಮಾತನಾಡಿ, ಸರಿಯಾದ ಕಾಲಕ್ಕೆ ರಕ್ತ ಸಿಗದೇ ಸಾಕಷ್ಟು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ವಿಶೇಷ

ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ರಕ್ತದಾನ ಶಿಬಿರ Read More »

ಹೂಳು ತುಂಬಿ ಬೋರ್‍ವೆಲ್ ಡ್ರೈ: ತಕ್ಷಣ ಸ್ಪಂದಿಸಿದ ಆರ್ಯಾಪು ಗ್ರಾಮ ಪಂಚಾಯತ್

ಪುತ್ತೂರು: 5 ವರ್ಷಗಳಲ್ಲೇ ಮೊದಲ ಬಾರಿಗೆ ಅಂತರ್ಜಲ ಬರಿದಾಗಿ ಬೋರ್‍ವೆಲ್ ಕೈಕೊಟ್ಟ ಘಟನೆ ಆರ್ಯಾಪು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂಜೂರುಪಂಜದಲ್ಲಿ ನಡೆದಿದೆ. ಇದರಿಂದ ಕೆಲ ಮನೆಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ತಕ್ಷಣ ಆರ್ಯಾಪು ಗ್ರಾಮ ಪಂಚಾಯತ್ ಆಡಳಿತ ತಕ್ಷಣ ಕಾರ್ಯೋನ್ಮುಖವಾಗಿದೆ. ಬೇಸಿಗೆಯ ತಾಪ ಜನವರಿಯಿಂದಲೇ ಪ್ರಖರವಾಗಿದ್ದು, ಗ್ರಾಮೀಣ ಭಾಗಗಳಲ್ಲಿ ನೀರಿನ ಅಭಾವ ಕಾಡಲು ಶುರುವಾಗಿದೆ. ಶಾಸಕ ಸಂಜೀವ ಮಠಂದೂರು, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸಭೆಗಳಲ್ಲಿ ಈಗಾಗಲೇ ನೀರಿನ ಕೊರತೆ ಬಗ್ಗೆ ಚರ್ಚಿಸಿದ್ದು, ತಕ್ಷಣ ಸ್ಪಂದಿಸುವಂತೆ

ಹೂಳು ತುಂಬಿ ಬೋರ್‍ವೆಲ್ ಡ್ರೈ: ತಕ್ಷಣ ಸ್ಪಂದಿಸಿದ ಆರ್ಯಾಪು ಗ್ರಾಮ ಪಂಚಾಯತ್ Read More »

ಜ. 27: ಅರಸು ಕುರಿಯಾಡಿತ್ತಾಯ ಚಾವಡಿಯ ಪ್ರತಿಷ್ಠಾ ವರ್ಧಂತಿ

ಪುತ್ತೂರು: ಬೋಳಂತೂರು ಕೊಕ್ಕಪುಣಿ ಶ್ರೀ ಅರಸು ಕುರಿಯಾಡಿತ್ತಾಯ ಚಾವಡಿಯಲ್ಲಿ ಜ. 27ರಂದು ಚತುರ್ಥ ವರ್ಷದ ಪ್ರತಿಷ್ಠಾ ವರ್ಧಂತಿ ಜ. 27ರಂದು ನಡೆಯಲಿದೆ. ಸಂಜೆ 4ರಿಂದ ಭಜನಾ ಸಂಕೀರ್ತನೆ ನಡೆಯಲಿದ್ದು, ತುಳಸಿವನ ಸಿದ್ಧಿವಿನಾಯಕ ಭಜನಾ ಮಂಡಳಿ, ಸಂಜೆ 5ರಿಂದ 6ರವರೆಗೆ ಗುಂಡಿಮಜಲು ಶೃಂಗಗಿರಿ ಶಾರದಾಂಬಾ ಭಜನಾ ಮಂಡಳಿ, 5ರಿಂದ 6ರವರೆಗೆ ಬರಿಮಾರು ವಿನಾಯಕ ಶ್ರೀ ದೇವಿ ಭಜನಾ ಮಂಡಳಿಯಿಂದ ಭಜನೆ ನಡೆಯಲಿದೆ. ರಾತ್ರಿ 7-30ಕ್ಕೆ ದೈವಗಳ ತಂಬಿಲ, ಹೂವಿನ ಪೂಜೆ, ಮಹಾಪೂಜೆ, ರಾತ್ರಿ 8ಕ್ಕೆ ಮಹಾಮಂಗಳಾರತಿ, ಪ್ರಸಾದ ವಿತರಣೆ,

ಜ. 27: ಅರಸು ಕುರಿಯಾಡಿತ್ತಾಯ ಚಾವಡಿಯ ಪ್ರತಿಷ್ಠಾ ವರ್ಧಂತಿ Read More »

ಮಾಣಿ ಬ್ರಹ್ಮಕಲಶೋತ್ಸವ: ಸುವರ್ಣ ಮಂಟಪದಲ್ಲಿ ರಾಮದೇವರ ಪೂಜೆ

ಪುತ್ತೂರು: ಮಾಣಿ ಶ್ರೀ ರಾಮಚಂದ್ರಾಪುರ ಮಠದಲ್ಲಿ ನೂತನವಾಗಿ ನಿರ್ಮಿಸಿರುವ ಶಿಲಾಮಯ ಗರ್ಭಾಗಾರದಲ್ಲಿ ಸಪರಿವಾರ ಸಹಿತ ರಾಮದೇವರ ಪುನಃಪ್ರತಿಷ್ಠೆ ಬ್ರಹ್ಮಕಲಶೋತ್ಸವ ಅಂಗವಾಗಿ ಮಂಗಳವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಸಪರಿವಾರ ಸಹಿತ ಶ್ರೀ ಸೀತಾರಾಮಚಂದ್ರ, ಚಂದ್ರಮೌಳೀಶ್ವರ ಮತ್ತು ರಾಜರಾಜೇಶ್ವರಿ ದೇವರಿಗೆ ಸುವರ್ಣ ಮಂಟಪದಲ್ಲಿ ವಿಶೇಷ ಪೂಜೆ ಮತ್ತು ಅಷ್ಟಾವಧಾನ ಸೇವೆ ನಡೆಯಿತು. ಸೋಮವಾರ ಪುನಃಪ್ರತಿಷ್ಠೆಯ ಬಳಿಕ ಮಂಗಳವಾರ ಮಹಾಶಾಂತಿ ಹವನ, ಪ್ರಾಯಶ್ಚಿತ ಹವನ, ಸೂಕ್ತಹವನ, ನವಚಂಡೀಹವನ ಮತ್ತು ಐಕಮತ್ಯ ಹವನ ಗೋಕರ್ಣದ

ಮಾಣಿ ಬ್ರಹ್ಮಕಲಶೋತ್ಸವ: ಸುವರ್ಣ ಮಂಟಪದಲ್ಲಿ ರಾಮದೇವರ ಪೂಜೆ Read More »

ಎದುರ್ಕಲ ಕಿಂಡಿ ಅಣೆಕಟ್ಟು ಸ್ವಚ್ಛತೆ

ಪುತ್ತೂರು: ಶ್ರೀ ಕ್ಷೆತ್ರ ಧರ್ಮಸ್ಥಳ ಗ್ರಾಮಭಿವೃಧಿ ಯೋಜನೆ ಬಿ ಸಿ ಟ್ರಸ್ಟ್ ವಿಟ್ಲ, ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ನೇತೃತ್ವದಲ್ಲಿ ಕೆದಿಲ ಗ್ರಾಮದ ಎದುರ್ಕಲ ಕಿಂಡಿ ಅಣೆಕಟ್ಟನ್ನು ಶುಚಿಗೊಳಿಸಲಾಯಿತು. ಮಳೆಗೆ ಕೊಚ್ಚಿ ಬಂದು, ಕಿಂಡಿ ಅಣೆಕಟ್ಟಿನಲ್ಲಿ ಅಡ್ಡಲಾಗಿ ನಿಂತ ಮರ, ಬಿದಿರು, ಕಸ-ಕಡ್ಡಿಗಳನ್ನು ತೆಗೆದು ಸ್ವಚ್ಛಗೊಳಿಸಲಾಯಿತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಜಯಶ್ರೀ, ಸೇವಾಪ್ರತಿನಿಧಿಗಳಾದ ಶಾರದಾ, ಜಯಂತಿ, ಪೆರ್ನೆ ಶೌರ್ಯ ಘಟಕದ ಸಂಯೋಜಕಿ ಅಶ್ಮಿತಾ, ಗ್ರಾಮ ಪಂಚಾಯತ್ ಸದಸ್ಯ ಶ್ಯಾಮ್ ಪ್ರಸಾದ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ

ಎದುರ್ಕಲ ಕಿಂಡಿ ಅಣೆಕಟ್ಟು ಸ್ವಚ್ಛತೆ Read More »

ಸಂಸ್ಕಾರಯುತ ಶಿಕ್ಷಣದಲ್ಲಿ ಪೋಷಕರ ಪಾತ್ರ ವಿಚಾರಗೋಷ್ಠಿ | ಶ್ರೀ ಕ್ಷೇ.ಧ.ಗ್ರಾ. ಯೋಜನೆ ಬಿ.ಸಿ. ಟ್ರಸ್ಟ್, ಪ್ರಗತಿಬಂಧು ಒಕ್ಕೂಟ, ಮಹಿಳಾ ಜ್ಞಾನವಿಕಾಸ ಆಯೋಜನೆ

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಪುತ್ತೂರು ತಾಲೂಕು, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದ ಆಶ್ರಯದಲ್ಲಿ ಜ. 24ರಂದು ಪುತ್ತೂರು ನಟರಾಜ ವೇದಿಕೆಯಲ್ಲಿ ಸಂಸ್ಕಾರಯುತ ಶಿಕ್ಷಣದಲ್ಲಿ ಪೋಷಕರ ಪಾತ್ರ ವಿಷಯದಲ್ಲಿ ಮಹಿಳಾ ವಿಚಾರಗೋಷ್ಠಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಗತಿ ಆಸ್ಪತ್ರೆಯ ಆಯುರ್ವೇದ ತಜ್ಞೆ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯೆ ಡಾ. ಸುಧಾ ಶ್ರೀಪತಿ ರಾವ್, ಶಿಕ್ಷಣ ಮನಸ್ಸನ್ನು ಅರಳಿಸುವಂತಿರಬೇಕು. ಶಿಕ್ಷಣ ಕನಸನ್ನು

ಸಂಸ್ಕಾರಯುತ ಶಿಕ್ಷಣದಲ್ಲಿ ಪೋಷಕರ ಪಾತ್ರ ವಿಚಾರಗೋಷ್ಠಿ | ಶ್ರೀ ಕ್ಷೇ.ಧ.ಗ್ರಾ. ಯೋಜನೆ ಬಿ.ಸಿ. ಟ್ರಸ್ಟ್, ಪ್ರಗತಿಬಂಧು ಒಕ್ಕೂಟ, ಮಹಿಳಾ ಜ್ಞಾನವಿಕಾಸ ಆಯೋಜನೆ Read More »

ಪಾಣಾಜೆ ದೈವಸ್ಥಾನ ರಥಬೀದಿಯ ಇಂಟರ್ ಲಾಕ್ ರಸ್ತೆ ಉದ್ಘಾಟನೆ

ಪುತ್ತೂರು: ಶಾಸಕರ 10 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣಗೊಂಡ ಪಾಣಾಜೆ ಕಿನ್ನಿಮಾಣಿ ಪೂಮಾಣಿ ದೈವಸ್ಥಾನದ ರಥಬೀದಿಯ ಇಂಟರ್ ಲಾಕ್ ಕಾಮಗಾರಿಯನ್ನು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿದರು. ಬಿಜೆಪಿ ಮಂಡಲ ಅಧ್ಯಕ್ಷ ಸಾಜಾ ರಾಧಾಕೃಷ್ಣ ಅಳ್ವ, ಮಂಡಲ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ಸದಾಶಿವ ರೈ ಸುರಂಬೈಲ್, ಸುಭಾಸ್ ರೈ, ರಘುನಾಥ್ ಪಾಟಲಿ, ನಾರಾಯಣ ಪೂಜಾರಿ, ರವೀಂದ್ರ ಭಂಡಾರಿ ಉಪಸ್ಥಿತರಿದ್ದರು.

ಪಾಣಾಜೆ ದೈವಸ್ಥಾನ ರಥಬೀದಿಯ ಇಂಟರ್ ಲಾಕ್ ರಸ್ತೆ ಉದ್ಘಾಟನೆ Read More »

error: Content is protected !!
Scroll to Top