ಸಾಮರ್ಥ್ಯಕ್ಕಿಂತ ಅಧಿಕ ಮಕ್ಕಳನ್ನು ವಾಹನಗಳಲ್ಲಿ ಸಾಗಿಸುವುದು ಮಕ್ಕಳ ಭವಿಷ್ಯಕ್ಕೆ ಮಾರಕ | ಮಳೆಗಾಲದಲ್ಲಿ ಎಚ್ಚರಿಕೆ ಕರೆಗಂಟೆ
ಪುತ್ತೂರು: ಮಳೆ್ಗಾಲ ಆರಂಭವಾಗಿದ್ದು ಮುಂದಿನ ದಿನಗಳಲ್ಲಿ ನಿರಂತರ ಮಳೆ ಸುರಿಯಲಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು, ವಾಹನ ಚಾಲಕರು, ಸಾರ್ವಜನಿಕರು ಜಾಗ್ರತೆ ವಹಿಸುವುದು ಅತೀ ಅಗತ್ಯ. ಮಳೆಗಾಲ ಬಂತೆಂದರೆ ಸಾಕು. ರಸ್ತೆಗಳಲ್ಲಿ, ಚರಂಡಿಗಳಲ್ಲಿ ನೀರು ಹರಿಯುವುದು ಸಹಜ. ಹೀಗೆ ನಿಂತ ನೀರಿನ ಮೇಲೆ ವಾಹನಗಳು ಚಲಿಸುವುದರಿಂದ ರಸ್ತೆ ಬದಿಗಳಲ್ಲಿ ನಡೆದುಕೊಂಡು ಹೋಗುವ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ರಸ್ತೆಗಳಲ್ಲಿನ ಕೆಸರು ನೀರಿನ ಸಿಂಚನವಾಗುವುದನ್ನು ನಾವು ಕಾಣುತ್ತೇವೆ. ವಾಹನ ಸವಾರರು ನಿಂತ ನೀರಿನ ಬಳಿ ವಾಹನ ಚಲಾಯಿಸುವಾಗ ನಿಧಾನಕ್ಕೆ ಚಲಿಸುವುದರ ಜತೆ ಜಾಗೃತರಾಗುವುದು […]










