ಪುತ್ತೂರು

ಕಡಬ-ಅಲಂಕಾರು- ಶಾಂತಿಮೊಗರಿಗೆ ಹೆಚ್ಚುವರಿ ಬಸ್ ಸೌಲಭ್ಯ

ಪುತ್ತೂರು: ಕಡಬದಿಂದ ಆಲಂಕಾರು ಮಾರ್ಗವಾಗಿ ಶಾಂತಿಮೊಗರಿಗೆ ಬಸ್ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳು  ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದು ಈ ಕುರಿತು ವಿದ್ಯಾರ್ಥಿಗಳ ತಂಡವೊಂದು ಪುತ್ತೂರು ಶಾಸಕರಿಗೆ ಮನವಿ ಮಾಡಿ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದೆ. ವಿದ್ಯಾರ್ಥಿಗಳ ಸಂಕಷ್ಟವನ್ನು ಮನಗಂಡ ಪುತ್ತೂರು ಶಾಸಕ ಅಶೋಕ್ ರೈ, ಈ ಮಾರ್ಗವಾಗಿ ಹೆಚ್ಚುವರಿ ಬಸ್ ಓಡಿಸುವಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದರು. ಶಾಸಕರ ಸೂಚನೆಯಂತೆ ಕಡಬ-ಅಲಂಕಾರು ಮಾರ್ಗವಾಗಿ ಶಾಂತಿಮೊಗರಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳಾದ ಝೈನುದ್ದೀನ್ ಅಲಂಕಾರು, ಹರಿಶ್ಚಂದ್ರ […]

ಕಡಬ-ಅಲಂಕಾರು- ಶಾಂತಿಮೊಗರಿಗೆ ಹೆಚ್ಚುವರಿ ಬಸ್ ಸೌಲಭ್ಯ Read More »

‘ನಮ್ಮ ದೇಶ ನಮ್ಮ ಮಣ್ಣು’ ಕಾರ್ಯಕ್ರಮದ ಮಣ್ಣು ಹಸ್ತಾಂತರಕ್ಕೆ ಚಾಲನೆ | ದೆಹಲಿಗೆ ತೆರಳಲಿದ್ದಾರೆ ಐದು ವಿದ್ಯಾರ್ಥಿಗಳು

ಪುತ್ತೂರು: ದೇಶಕ್ಕೆ ಸ್ವಾತಂತ್ರ್ಯೋತ್ಸವ ಸಿಕ್ಕಿ 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ದೇಶಾದ್ಯಂತ ಹಮ್ಮಿಕೊಳ್ಳಲಾದ ‘ನಮ್ಮ ಮಣ್ಣು ನಮ್ಮ ದೇಶ” ಅಭಿಯಾನದಂಗವಾಗಿ ಪುತ್ತೂರಿನಲ್ಲಿ ಸಂಗ್ರಹಿಸಲಾದ ಮಣ್ಣನ್ನು ಶುಕ್ರವಾರ ಪುತ್ತೂರು ತಾಲೂಕು ಆಡಳಿತ ಸೌಧದ ಬಳಿ ಎನ್.ಎಸ್.ಎಸ್. ಘಟಕಕ್ಕೆ ಹಸ್ತಾಂತರಿಸಲಾಯಿತು. ಎನ್.ಎಸ್.ಎಸ್. ಘಟಕದ ಐವರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದ್ದು, ಅವರು ಈ ಮಣ್ಣನ್ನು ದೆಹಲಿಗೆ ತಲುಪಿಸಲಿದ್ದಾರೆ. ಸಂತ ಫಿಲೋಮಿನಾ ಕಾಲೇಜಿನ ಎನ್.ಎಸ್.ಎಸ್. ಘಟಕದ ವಿದ್ಯಾರ್ಥಿ ಮಣ್ಣು ಸ್ವೀಕರಿಸಿದರು. ಮಣ್ಣನ್ನು ಹಸ್ತಾಂತರಿಸಿ ಮಾತನಾಡಿದ ಸಹಾಯಕ ಆಯುಕ್ತ ಗಿರೀಶ್ ನಂದನ್, ನಾವು ಸ್ವಾತಂತ್ರ್ಯೋತ್ಸವದ

‘ನಮ್ಮ ದೇಶ ನಮ್ಮ ಮಣ್ಣು’ ಕಾರ್ಯಕ್ರಮದ ಮಣ್ಣು ಹಸ್ತಾಂತರಕ್ಕೆ ಚಾಲನೆ | ದೆಹಲಿಗೆ ತೆರಳಲಿದ್ದಾರೆ ಐದು ವಿದ್ಯಾರ್ಥಿಗಳು Read More »

ನ. 3: ರೈಲು ಖಾಸಗಿಕರಣದ ವಿರುದ್ಧ ಜೆಸಿಟಿಯು ಹೋರಾಟ

ಪುತ್ತೂರು: ರೈಲು ಖಾಸಗೀಕರಣದ ವಿರುದ್ದ ಅಖಿಲ ಭಾರತ ಜಂಟಿ ಕಿಸಾನ್ ಮೋರ್ಚಾ, ಸಿಐಟಿಯು, ಜೆಸಿಟಿಯು ವತಿಯಿಂದ ನ. 3ರಂದು ಪುತ್ತೂರು ರೈಲು ನಿಲ್ದಾಣ ಎದುರು ಪ್ರತಿಭಟನೆ ನಡೆಯಲಿದೆ. ಕೇಂದ್ರದ ನರೇಂದ್ರ ಮೋದಿ ಸರಕಾರ ಮಾಡಲುದ್ದೇಶಿಸಿದ ರೈಲು ಖಾಸಗೀಕರಣವನ್ನು ತಡೆಯವುದು ಭಾರತೀಯರಾದ ನಮ್ಮೆಲ್ಲರ ಪ್ರಥಮ ಕರ್ತವ್ಯ ಎಂದು ಸಿಐಟಿಯು ರಾಜ್ಯ ಸಮಿತಿ ಸದಸ್ಯ ಬಿ.ಎಂ. ಭಟ್ ಹೇಳಿದ್ದಾರೆ. ವಂದೇ ಮಾತರಂ ಅತಿ ವೇಗದ ರೈಲು ಈಗ ತಿರುವನಂತಪುರದಿಂದ ಕಾಸರಗೋಡು ತನಕ ಸಂಚರಿಸುತ್ತಿದೆ ಇದನ್ನು ಮುಂದುವರಿಸಿ ಮಂಗಳೂರು ತನಕ ವಿಸ್ತರಿಸಬೇಕು.

ನ. 3: ರೈಲು ಖಾಸಗಿಕರಣದ ವಿರುದ್ಧ ಜೆಸಿಟಿಯು ಹೋರಾಟ Read More »

ಬಡವರ ಬಾಳಿಗೆ ಅದೃಷ್ಟದ ಬೆಳಕು  ಧ್ಯೇಯ ವಾಕ್ಯದ ‘ಆದರ್ಶ ಇಲೆಕ್ಟ್ರಾನಿಕ್ಸ್ ಆಂಡ್ ಫರ್ನಿಚರ್’

ಸಂಪ್ಯ: ತಾಲೂಕಿನ ಆರ್ಯಾಪು ಗ್ರಾಮದ ಸಂಪ್ಯದಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ನೂತನ ಇಲೆಕ್ಟ್ರೋನಿಕ್ಸ್ ಹಾಗೂ ಗೃಹೋಪಕರಣ ಮಾರಾಟ ಮಳಿಗೆ “ಆದರ್ಶ ಇಲೆಕ್ಟ್ರಾನಿಕ್ಸ್ ಆಂಡ್ ಫರ್ನಿಚರ್”ನಲ್ಲಿ ಸೀಸನ್-3 ರ ಪ್ರಥಮ ಕಂತಿನ ಡ್ರಾ ಅ.31 ರಂದು ನಡೆಯಲಿದೆ. ಬಡವರ ಬಾಳಿಗೆ ಅದೃಷ್ಟದ ಬೆಳಕು ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯಾಚರಿಸುತ್ತಿರುವ ಈ ಮಳಿಗೆ ಆದರ್ಶ ಟೈಲ್ಸ್ ಆಂಡ್ ಗ್ರಾನೈಟ್ಸ್ ವಿಭಾಗವನ್ನೂ ಹೊಂದಿದೆ. ಇಲ್ಲಿಯ ಸ್ಕೀಂಗೆ ಸದಸ್ಯರಾದವರು 15 ದಿನಕ್ಕೊಮ್ಮೆ 500 ರೂ. ಪಾವತಿಸಿದರಾಯಿತು. ಪ್ರತೀ ತಿಂಗಳ 15ನೇ ಹಾಗೂ 30ನೇ ದಿನಾಂಕದಂದು

ಬಡವರ ಬಾಳಿಗೆ ಅದೃಷ್ಟದ ಬೆಳಕು  ಧ್ಯೇಯ ವಾಕ್ಯದ ‘ಆದರ್ಶ ಇಲೆಕ್ಟ್ರಾನಿಕ್ಸ್ ಆಂಡ್ ಫರ್ನಿಚರ್’ Read More »

89ನೇ ಪುತ್ತೂರು ಶಾರದೋತ್ಸವದ ಶೋಭಾಯಾತ್ರೆಗೆ 80 ಭಜನಾ ತಂಡಗಳ ಮೆರುಗು

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿರುವ ಶ್ರೀ ಶಾರದಾ ಭಜನಾ ಮಂದಿರದಲ್ಲಿ ಅ.15 ರಿಂದ 24ರ ತನಕ ನಡೆಯುವ 89ನೇ ವರ್ಷದ “ಪುತ್ತೂರು ಶಾರದೋತ್ಸವ” ಈ ಬಾರಿ ಅತ್ಯಂತ ವೈಭವದಿಂದ ನಡೆಯಲಿದ್ದು, ಇದಕ್ಕಾಗಿ ಸಿದ್ಧತೆಗಳು ಭರದಿಂದ ಸಾಗುತ್ತಿದೆ ಎಂದು ಶೋಭಾಯಾತ್ರೆ ಸಂಚಾಲಕ ಸೀತಾರಾಮ ರೈ ಕೆದಂಬಾಡಿಗುತ್ತು ತಿಳಿಸಿದರು. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಉತ್ಸವದ ವಿವರ ನೀಡಿದ ಅವರು, 9 ದಿನಗಳು ಶಾರದೋತ್ಸವ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಅ. 24ರಂದು ವೈಭವದ ಶೋಭಾಯಾತ್ರೆಗೆ ಬೊಳುವಾರು

89ನೇ ಪುತ್ತೂರು ಶಾರದೋತ್ಸವದ ಶೋಭಾಯಾತ್ರೆಗೆ 80 ಭಜನಾ ತಂಡಗಳ ಮೆರುಗು Read More »

ರಾಷ್ಟ್ರಮಟ್ಟದ ಇನ್‍ಸ್ಪೆಯರ್ ಅವಾರ್ಡ್ ಮನಕ್ ಸ್ಪರ್ಧೆಯಲ್ಲಿ ಪೃಥ್ವಿರಾಜ್ ಪ್ರಭು ಭಾಗಿ

ಪುತ್ತೂರು: ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಅ.9 ರಿಂದ 11ರ ವರೆಗೆ ನವದೆಹಲಿಯಲ್ಲಿ ನಡೆಸಿದ 2021-22ನೇ ಸಾಲಿನ ಇನ್‍ಸ್ಪೆಯರ್ ಅವಾರ್ಡ್ ಮನಕ್ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪೃಥ್ವಿರಾಜ್ ಪ್ರಭು ಭಾಗವಹಿಸಿ, ತಮ್ಮ “Medicinal wax from Kokum seeds” (Ko-Wax) ವಿಜ್ಞಾನ ಯೋಜನೆಯನ್ನು ಪ್ರಸ್ತುತಪಡಿಸಿದ್ದಾರೆ. ಪೃಥ್ವಿರಾಜ್ ಪ್ರಭು ಮುಕ್ರಂಪಾಡಿ ನಿವಾಸಿ ಪುಂಡಲೀಕ ಪ್ರಭು ಹಾಗೂ ನಾಗಮಣಿ ಪ್ರಭು ದಂಪತಿ ಪುತ್ರ. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿರುವಾಗ ವಿಜ್ಞಾನ ಯೋಜನೆಯನ್ನು ತಯಾರಿಸಿ, ಜಿಲ್ಲಾ

ರಾಷ್ಟ್ರಮಟ್ಟದ ಇನ್‍ಸ್ಪೆಯರ್ ಅವಾರ್ಡ್ ಮನಕ್ ಸ್ಪರ್ಧೆಯಲ್ಲಿ ಪೃಥ್ವಿರಾಜ್ ಪ್ರಭು ಭಾಗಿ Read More »

ಬೆಂಗಳೂರು ಕಂಬಳ: ಸಿ.ಎಂ. ಭೇಟಿಯಾದ ಶಾಸಕ ಅಶೋಕ್ ರೈ

ಪುತ್ತೂರು: ನ. 25 ಹಾಗೂ 26ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಬೆಂಗಳೂರು ಕಂಬಳದ ಕುರಿತು ಚರ್ಚಿಸಲು ಕಂಬಳ ಸಮಿತಿ ಅಧ್ಯಕ್ಷ, ಶಾಸಕ ಅಶೋಕ್ ರೈ ನೇತೃತ್ವದ ಕಂಬಳ ಸಮಿತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಕರಾವಳಿಯ ಜನಪದ ಕ್ರೀಡೆ ಕಂಬಳವನ್ನು ರಾಜಧಾನಿ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಅರಮನೆ ಮೈದಾನದಲ್ಲಿ ನಡೆಯಲಿರುವ ಕಂಬಳಕ್ಕೆ ಮುಖ್ಯಮಂತ್ರಿಯವರಿಗೆ ಆಹ್ವಾನ ನೀಡಿದರು. ಮುಖ್ಯಮಂತ್ರಿಯನ್ನು ಭೇಟಿಯಾದ ಅಶೋಕ್ ರೈ ಅವರು, ಚರ್ಚೆ ನಡೆಸಿ, ಕಂಬಳಕ್ಕೆ ವಿವಿಧ

ಬೆಂಗಳೂರು ಕಂಬಳ: ಸಿ.ಎಂ. ಭೇಟಿಯಾದ ಶಾಸಕ ಅಶೋಕ್ ರೈ Read More »

ಕೊಳ್ಯ, ಸಂಪ್ಯ ಪರಿಸರದಲ್ಲಿ ಸ್ವಚ್ಛತೆ

ಸಂಪ್ಯ: ಆರ್ಯಾಪು ಗ್ರಾಮ ಪಂಚಾಯಿತಿ ವತಿಯಿಂದ ಕೊಳ್ಯ ಮತ್ತು ಸಂಪ್ಯ ವ್ಯಾಪ್ತಿಯಲ್ಲಿ ಸ್ವಚ್ಚತೆ ನಡೆಸಲಾಯಿತು. ಸ್ವಚ್ಛತಾ ಹೀ ಸೇವಾ ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಆಂದೋಲನದ ಹಿನ್ನಲೆಯಲ್ಲಿ ಈ ಸ್ವಚ್ಚತಾ ಕಾರ್ಯಕ್ರಮ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಪಂ ನಿಕಟಪೂರ್ವ ಉಪಾಧ್ಯಕ್ಷೆ ಪೂರ್ಣಿಮಾ ರೈ, 3ನೇ ವಾರ್ಡಿನ ಸದಸ್ಯರಾದ ಪವಿತ್ರ ರೈ, ರತ್ನಾವತಿ, 5ನೇ ವಾರ್ಡಿನ ಸದಸ್ಯೆ ರಶೀದಾ, ಸ್ಥಳೀಯರು ಉಪಸ್ಥಿತರಿದ್ದರು.

ಕೊಳ್ಯ, ಸಂಪ್ಯ ಪರಿಸರದಲ್ಲಿ ಸ್ವಚ್ಛತೆ Read More »

ಅಪಘಾತ: ಮಾನವೀಯತೆ ಮೆರೆದ ಪುತ್ತಿಲ ಪರಿವಾರ

ಪುತ್ತೂರು: ಕಾರು ಡಿಕ್ಕಿಯಾಗಿ ಗಾಯಗೊಂಡ ವ್ಯಕ್ತಿಯೊಬ್ಬರನ್ನು ಪುತ್ತಿಲ ಪರಿವಾರ ಕಾರ್ಯಕರ್ತರು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ. ಗುರುವಾರ ಸಂಜೆ ಭಾರಿ ಮಳೆ ಸುರಿಯುತ್ತಿದ್ದ ಸಂದರ್ಭ ರಸ್ತೆ ದಾಟುತಿದ್ದ ವ್ಯಕ್ತಿಗೆ ಕುಂಬ್ರದಲ್ಲಿ ಕಾರು  ಅಪಘಾತಗೊಂಡಿದೆ. ಅಪಘಾತಗೊಂಡ ವ್ಯಕ್ತಿಯನ್ನು ತಕ್ಷಣ ಪುತ್ತಿಲ ಪರಿವಾರದ ಕಾರ್ಯಕರ್ತರು ಪುತ್ತೂರಿನ ಮಹಾವೀರ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.

ಅಪಘಾತ: ಮಾನವೀಯತೆ ಮೆರೆದ ಪುತ್ತಿಲ ಪರಿವಾರ Read More »

ಕ್ರಿಟಿಕಲ್ ಇಲ್ನೆಸ್ ಫಂಡ್ ಹಸ್ತಾಂತರ

ಪೆರ್ನೆ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪೆರ್ನೆ ವಲಯದ ಕೆದಿಲ ‘ಬಿ’ ಕಾರ್ಯಕ್ಷೇತ್ರದ ಶಬರಿ ಸ್ವ ಸಹಾಯ ಸಂಘದ ಸದಸ್ಯೆ ನಳಿನಿ ಅವರ ಪುತ್ರಿ ಕಾವ್ಯ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು ಅವರಿಗೆ ಧರ್ಮಸ್ಥಳ ಕ್ಷೇತ್ರದಿಂದ ಮಂಜೂರಾದ 25000 ರೂ. ಕ್ರಿಟಿಕಲ್ ಇಲ್ನೆಸ್ ಫಂಡನ್ನು ಹಸ್ತಾಂತರಿಸಲಾಯಿತು. ಯೋಜನಾಧಿಕಾರಿ ಚೆನ್ನಪ್ಪ ಗೌಡ ಅವರ ಶಿಫಾರಸ್ಸಿನ ಮೇರೆಗೆ ಪೆರ್ನೆ ವಲಯ ಮೇಲ್ವಿಚಾರಕಿ ಶಾರದ ವಿತರಿಸಿದರು. ಈ ಸಂದರ್ಭದಲ್ಲಿ ಸೇವಾಪ್ರತಿನಿಧಿಗಳಾದ ಜಯಂತಿ, ಶಾರದ, ಒಕ್ಕೂಟದ ಅಧ್ಯಕ್ಷೆ ಮೀನಾಕ್ಷಿ, ಕೆದಿಲ ಶೌರ್ಯ ವಿಪತ್ತು ನಿರ್ವಹಣಾ

ಕ್ರಿಟಿಕಲ್ ಇಲ್ನೆಸ್ ಫಂಡ್ ಹಸ್ತಾಂತರ Read More »

error: Content is protected !!
Scroll to Top