ಪುತ್ತೂರು

ನ.1: ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಅರ್ಥಪೂರ್ಣ ಆಚರಣೆ | ವಿವಿಧ ಸಂಘ ಸಂಸ್ಥೆಗಳ ಸಮಾಲೋಚನಾ ಸಭೆಯಲ್ಲಿ ನಿರ್ಧಾರ

ಪುತ್ತೂರು: ನ.1 ರಂದು ನಡೆಯಲಿರುವ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಕನ್ನಡ ಭುವನೇಶ್ವರಿಯ ಮೆರವಣಿಗೆ ನಡೆಸುವ ಬಗ್ಗೆ ಕುರಿತು ವಿವಿಧ ಸಂಘ ಸಂಸ್ಥೆಗಳ ಸಮಾಲೋಚನಾ ಸಭೆ ಶುಕ್ರವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆಯಿತು. ತಹಶೀಲ್ದಾರ್ ಜೆ.ಶಿವಶಂಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಮಾತನಾಡಿ,  ಕರ್ನಾಟಕ ರಾಜ್ಯ ಎಂದು ಮರು ನಾಮಕರಣಗೊಂಡು ಐವತ್ತು ವರ್ಷ ಪೂರ್ಣಗೊಂಡಿದ್ದು ಈ ಹಿನ್ನೆಲೆಯಲ್ಲಿ ನ.1 ರಂದು […]

ನ.1: ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಅರ್ಥಪೂರ್ಣ ಆಚರಣೆ | ವಿವಿಧ ಸಂಘ ಸಂಸ್ಥೆಗಳ ಸಮಾಲೋಚನಾ ಸಭೆಯಲ್ಲಿ ನಿರ್ಧಾರ Read More »

ಏಳ್ಮುಡಿ ಸೇತುವೆ ದಾಟಲು ಏಳು ಮುಡಿ ಹೊತ್ತ ಅನುಭವ!! | ಪಾದಚಾರಿಗಳಿಗೆ ಸಮಸ್ಯೆ ತಂದೊಡ್ಡುತ್ತಿವೆ ಬೆಳೆದು ನಿಂತ ಗಿಡಗಂಟಿ!!

ಪುತ್ತೂರು: ನಗರದ ಮಧ್ಯಭಾಗದಲ್ಲಿ ಅದೂ ಮುಖ್ಯರಸ್ತೆಯಲ್ಲಿರುವ ಸೇತುವೆಯೊಂದರ ಎರಡೂ ಬದಿಯಲ್ಲಿ ಗಿಡಗಂಟಿಗಳು ಬೆಳೆದ ಪರಿಣಾಮ ಸಾರ್ವಜನಿಕರಿಗೆ ನಡೆದಾಡಲೂ ಕಷ್ಟ ಪಡುವಂತಾಗಿದೆ. ಬಸ್ ನಿಲ್ದಾಣ – ದರ್ಬೆ ಸಂಪರ್ಕ ರಸ್ತೆಯ ಮಧ್ಯ ಭಾಗದ ಏಳ್ಮುಡಿ ಸೇತುವೆಯ ಎರಡೂ ಬದಿಯಲ್ಲಿ ಗಿಡಗಂಟಿಗಳು ಬೆಳೆದಿದ್ದು, ಪಾದಚಾರಿಗಳು ನಡೆದಾಡಲು ಹರಸಾಹಸ ಪಡುತ್ತಿದ್ದಾರೆ. ಹೇಳಿಕೇಳಿ ಈ ಸೇತುವೆ ಮೊದಲೇ ಇಕ್ಕಟಾದ ಸೇತುವೆ. ವಾಹನಗಳು ಅತ್ತಿಂದಿತ್ತ ಚಲಿಸುವ ಸಂದರ್ಭ ಪಾದಚಾರಿಗಳು ಸೇತುವೆಯ ಬದಿಗಳಲ್ಲಿ ನಡೆದುಕೊಂಡು ಹೋಗಬೇಕಾಗುತ್ತದೆ. ಗಿಡಗಂಟಿಗಳು ಬೆಳೆದ ಪರಿಣಾಮ ಸಮಸ್ಯೆ ಉಂಟಾಗಿದೆ. ತಕ್ಷಣ ನಗರಸಭೆ

ಏಳ್ಮುಡಿ ಸೇತುವೆ ದಾಟಲು ಏಳು ಮುಡಿ ಹೊತ್ತ ಅನುಭವ!! | ಪಾದಚಾರಿಗಳಿಗೆ ಸಮಸ್ಯೆ ತಂದೊಡ್ಡುತ್ತಿವೆ ಬೆಳೆದು ನಿಂತ ಗಿಡಗಂಟಿ!! Read More »

ಅಡ್ಯನಡ್ಕದಲ್ಲಿ ಮನಸೂರೆಗೊಂಡ ಸ್ವರ ಸಿಂಚನ ಸಂಗೀತದ ಝೇಂಕಾರ

ಅಡ್ಯನಡ್ಕ : ಶ್ರೀ ದುರ್ಗಾಪರಮೇಶ್ವರಿ ಮತ್ತು ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ಶ್ರೀ ಶಾರದೋತ್ಸವದ 34ನೇ ವರ್ಷದ ಉತ್ಸವದಂದು ವಿಟ್ಲ ಸ್ವರ ಸಿಂಚನ ಸಂಗೀತ ಶಾಲೆ ವತಿಯಿಂದ ಭಕ್ತಿಗಾನ ರಸಮಂಜರಿ ನಡೆಯಿತು. ಸಂಸ್ಥೆಯ ಸವಿತಾ ಕೋಡಂದೂರ್ ಮತ್ತು ವಿದ್ಯಾರ್ಥಿಗಳಿಂದ ನಡೆದ ಭಕ್ತಿ ಗಾನ ರಸಮಂಜರಿ ಕಾರ್ಯಕ್ರಮವನ್ನು ವೇ.ಮು ರಾಮಕೃಷ್ಣ ಭಟ್ ನೀರಮೂಲೆ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಭಕ್ತಿಗೀತೆ, ಭಾವಗೀತೆ, ಜನಪದ ಗೀತೆ, ದಾಸರ ಪದಗಳನ್ನು ಹಾಡಿ ಮನಸೂರೆಗೊಂಡ ಕಾರ್ಯಕ್ರಮವಾಗಿ ಸಂಗೀತದ ಝೇಂಕಾರ ಮೂಡಿಬಂತು. ತಾನು ಬೆಳೆಯುವುದಲ್ಲದೆ

ಅಡ್ಯನಡ್ಕದಲ್ಲಿ ಮನಸೂರೆಗೊಂಡ ಸ್ವರ ಸಿಂಚನ ಸಂಗೀತದ ಝೇಂಕಾರ Read More »

ರಾಜಕಾಲುವೆ, ಚರಂಡಿ ಹೂಳೆತ್ತುವ ಕಾಮಗಾರಿಯಲ್ಲಿ ಭಾರೀ ಅವ್ಯವಹಾರ | ತನಿಖೆಗೆ ಲೋಕಾಯುಕ್ತರಿಂದ ಆದೇಶ

ಪುತ್ತೂರು: ನಗರಸಭೆ ವ್ಯಾಪ್ತಿಯಲ್ಲಿ ರಾಜಕಾಲುವೆ ಹಾಗೂ ಚರಂಡಿಗಳ ಹೂಳೆತ್ತುವ ಕಾಮಗಾರಿಯಲ್ಲಿ ಭಾರೀ ಅವ್ಯವಹಾರ ನಡೆದಿದ್ದು, ಈ ಕುರಿತು ನಗರಸಭೆ ಹಿಂದಿನ ಪೌರಾಯುಕ್ತೆ ರೂಪಾ ಶೆಟ್ಟಿ, ಇಂಜಿನಿಯರ್ ದಿವಾಕರ್ ಹಾಗೂ ಅಕೌಂಟೆಂಟ್ ಚಂದ್ರರಾಮ ದೇವಾಡಿಗ ವಿರುದ್ಧ ತನಿಖೆ ನಡೆಸಲು ಲೋಕಾಯುಕ್ತಕ್ಕೆ ದೂರು ನೀಡಲಾಗಿದ್ದು, ತನಿಖೆಗೆ ಲೋಕಾಯುಕ್ತರಿಂದ ಆದೇಶಿಸಲಾಗಿದೆ ಎಂದು ನಗರಸಭೆ ಮಾಜಿ ವಿಪಕ್ಷ ನಾಯಕ ಮಹಮ್ಮದಾಲಿ ತಿಳಿಸಿದ್ದಾರೆ. ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2018-19 ಹಾಗೂ 2020-21 ರಲ್ಲಿ ನಗರಸಭೆ ವ್ಯಾಪ್ತಿಯಲ್ಲಿನ ರಸ್ತೆ ಬದಿಗಳಲ್ಲಿರುವ ಚರಂಡಿ ಹಾಗೂ ರಾಜಕಾಲುವೆಗಳ

ರಾಜಕಾಲುವೆ, ಚರಂಡಿ ಹೂಳೆತ್ತುವ ಕಾಮಗಾರಿಯಲ್ಲಿ ಭಾರೀ ಅವ್ಯವಹಾರ | ತನಿಖೆಗೆ ಲೋಕಾಯುಕ್ತರಿಂದ ಆದೇಶ Read More »

ಅ.30 ರಿಂದ ಬಿಸಿಯೂಟ ಬಂದ್ | ಬಿಸಿಯೂಟ ನೌಕರರಿಂದ ವಿಧಾನಸೌಧ ಚಲೋ

ಪುತ್ತೂರು: ಅಕ್ಷರ ದಾಸೋಹ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅ.30 ರಿಂದ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಹೋರಾಟ ನಡೆಯಲಿದ್ದು, ದ.ಕ.ಜಿಲ್ಲೆಯ ಅಕ್ಷರದಾಸೋಹ ನೌಕರರು ನ.7 ರಂದು ಅಡುಗೆ ಕೆಲಸ ಸ್ಥಗಿತಗೊಳಿಸಿ ಬೆಂಗಳೂರು ಹೋರಾಟದಲ್ಲಿ ಭಾಗವಹಿಸಲಿದ್ದಾರೆ ಎಂದು ಸಿಐಟಿಯು ರಾಜ್ಯ ಸಮಿತಿ ಸದಸ್ಯ ಬಿ.ಎಂ.ಭಟ್ ತಿಳಿಸಿದ್ದಾರೆ. ಶುಕ್ರವಾರ ಪತ್ರಿಕಾಗೊಷ್ಠಿಯಲ್ಲಿ ಅವರು ಮಾತನಾಡಿ, ಬೇಡಿಕೆ ಈಡೇರುವ ತನಕ ನಮ್ಮ ಹೋರಾಟ ನಡೆಯಲಿದೆ. ಈಗಾಗಲೇ ಮುಖ್ಯ ಅಡುಗೆಯವರ ವೇತನ ಗರಿಷ್ಠ 3700 ಇದ್ದು, ಸಹಾಯಕಿಯರ ವೇತನ 3600 ಇದೆ. ಇದನ್ನು ಕನಿಷ್ಠ

ಅ.30 ರಿಂದ ಬಿಸಿಯೂಟ ಬಂದ್ | ಬಿಸಿಯೂಟ ನೌಕರರಿಂದ ವಿಧಾನಸೌಧ ಚಲೋ Read More »

ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಅಡ್ಡಿಯಾಗಿದ್ದ ನ್ಯಾಯಾಲಯದ ತಡೆಯಾಜ್ಞೆ ತೆರವು | ಪುತ್ತೂರಿಗೆ 131 ಶಿಕ್ಷಕರ ನೇಮಕ

ಪುತ್ತೂರು: ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ವಿಚಾರದಲ್ಲಿ ನ್ಯಾಯಾಲಯದಲ್ಲಿದ್ದ ತಡೆಯಾಜ್ಞೆ ತೆರವುಗೊಂಡಿದ್ದು, ಸರಕಾರ ದ.ಕ. ಜಿಲ್ಲೆಗೆ 546 ಶಿಕ್ಷಕರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದು, ಈ ಪೈಕಿ ಪುತ್ತೂರಿಗೆ 131 ಶಿಕ್ಷಕರನ್ನು ನೇಮಿಸಲಾಗಿದೆ. ಪುತ್ತೂರು ಸೇರಿದಂತೆ  ದ ಕ ಜಿಲ್ಲೆಯ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದರೂ ಶಿಕ್ಷಕರನ್ನು ನೇಮಕ ಮಾಡುವಂತಿರಲಿಲ್ಲ. ಶಿಕ್ಷಕರ ನೇಮಕಾತಿ ವಿಚಾರದಲ್ಲಿ ನ್ಯಾಯಾಲಯದ ತಡೆಯಾಜ್ಞೆ ಇದ್ದ ಕಾರಣ ಕಳೆದ ಕೆಲವು ವರ್ಷಗಳಿಂದ ಅಲ್ಲಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗುತ್ತಿತ್ತು. ಇದೀಗ ನ್ಯಾಯಾಲಯವು

ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಅಡ್ಡಿಯಾಗಿದ್ದ ನ್ಯಾಯಾಲಯದ ತಡೆಯಾಜ್ಞೆ ತೆರವು | ಪುತ್ತೂರಿಗೆ 131 ಶಿಕ್ಷಕರ ನೇಮಕ Read More »

ರಬ್ಬರ್ ಕಾರ್ಮಿಕರ ಬಾಕಿ ಬೋನಸ್ ಶೀಘ್ರ ಬಿಡುಗಡೆ | ಅರಣ್ಯ ಸಚಿವ ಖಂಡ್ರೆ ಭರವಸೆ

ಪುತ್ತೂರು: ರಬ್ಬರ್ ಕಾರ್ಮಿಕರಿಗೆ ನೀಡಲು ಬಾಕಿ ಇರುವ ಬೋನಸನ್ನು ಶೀಘ್ರ ನೀಡುವುದಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ಪುತ್ತೂರು ಶಾಸಕ ಅಶೋಕ್ ರೈಯವರಿಗೆ ಭರವಸೆ ನೀಡಿದರು. ಕಾರ್ಮಿಕರ ಬೋನಸ್ ಬಾಕಿ ಇರುವ ಬಗ್ಗೆ ಕಾರ್ಮಿಕರು ಶಾಸಕರಿಗೆ ಮನವಿ ಮಾಡಿದ್ದರು. ಕಾರ್ಮಿಕರ ಸಮ್ಮುಖದಲ್ಲೇ ಸಚಿವರ ಜೊತೆ ಮಾತುಕತೆ ನಡೆಸಿದ್ದ ಶಾಸಕರು ಕಾರ್ಮಿಕರಿಗೆ ನೀಡಲು ಬಾಕಿ ಇರುವ ಬೋನಸ್ ನ್ನು ಅಗತ್ಯವಾಗಿ ನೀಡಬೇಕಾಗಿದೆ ಎಂದು ಸಚಿವರಲ್ಲಿ ವಿನಂತಿಸಿದ್ದರು. ಬೋನಸ್ ನೀಡಲು ಕೆಎಫ್‌ಡಿಸಿ ಮತ್ತು ಹಣಕಾಸು ಇಲಾಖೆಯ ಒಪ್ಪಿಗೆ ಸಿಗಲು ತಡವಾಗಿರುವ

ರಬ್ಬರ್ ಕಾರ್ಮಿಕರ ಬಾಕಿ ಬೋನಸ್ ಶೀಘ್ರ ಬಿಡುಗಡೆ | ಅರಣ್ಯ ಸಚಿವ ಖಂಡ್ರೆ ಭರವಸೆ Read More »

ಶೋಭಾಯಾತ್ರೆಯೊಂದಿಗೆ ಪುತ್ತೂರು ದಸರಾ ಉತ್ಸವ ಸಂಪನ್ನ

ಪುತ್ತೂರು: ಅ 15ರಂದು ಪುತ್ತೂರಿನ ಸಂಪ್ಯ ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಆರಂಭಗೊಂಡ ಪುತ್ತೂರು ದಸರಾ ಉತ್ಸವ ಗುರುವಾರ ಶೋಭಾಯಾತ್ರೆಯೊಂದಿಗೆ ಸಂಪನ್ನಗೊಂಡಿತು. ಗುರುವಾರ ಸಂಜೆ ನಡೆದ ದಸರಾ ಮರವಣಿಗೆ ಜನಮನ ಸೂರೆಗೊಂಡಿತು. ನವದುರ್ಗೆ ಮತ್ತು ಶಾರದೆ ಹಾಗೂ ಮಹಾ ಗಣಪತಿ ವಿಗ್ರಹಗಳ ಮೆರವಣಿಗೆಗೆ ವಿಶ್ವಹಿಂದೂ ಪರಿಷತ್ ಮುಖಂಡರಾದ ಯು. ಪೂವಪ್ಪ ಚಾಲನೆ ನೀಡಿದರು. ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರು ಕುಣಿತ ಭಜನಾ ಮೆರವಣಿಗೆಗೆ ಚಾಲನೆ ನೀಡಿದರು. ನವದುರ್ಗಾರಾಧನಾ ಸಮಿತಿಯ ಅಧ್ಯಕ್ಷರಾದ ಜಯಂತ ಶೆಟ್ಟಿ ಕಂಬಳದಡ್ಡ, ಸಂಚಾಲಕರಾದ

ಶೋಭಾಯಾತ್ರೆಯೊಂದಿಗೆ ಪುತ್ತೂರು ದಸರಾ ಉತ್ಸವ ಸಂಪನ್ನ Read More »

ನ.14 ರಿಂದ 22 : ಶ್ರೀ ರಾಧಾ ಸುರಭಿ ಗೋಮಂದಿರದಲ್ಲಿ ಗೋನವರಾತ್ರಿ ಉತ್ಸವ: ಪುತ್ತೂರಿಗೆ ಆಗಮಿಸಿದ ಗೋರಥ ಯಾತ್ರೆ

ಪುತ್ತೂರು: ಶ್ರೀ ರಾಧಾ ಸುರಭಿ ಗೋಮಂದಿರದಲ್ಲಿ ಅಷ್ಟೋತ್ತರ ಶತ ಶ್ರೀಮದ್ಭಾಗವತ ಕಥಾ ಪಾರಾಯಣ ಮಹಾಯಜ್ಞ ಹಾಗೂ ಗೋನವರಾತ್ರಿ ಉತ್ಸವ ನ.14 ರಿಂದ ಆರಂಭಗೊಂಡು ನ.22ರಂದು ಸಂಪನ್ನಗೊಳ್ಳಲಿದ್ದು, ಈ ಹಿನ್ನಲೆಯಲ್ಲಿ ಅಲ್ಲಿಂದ ಹೊರಟ ಗೋರಥ ಗುರುವಾರ ಸಂಜೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿತು. ಈ ಸಂದರ್ಭದಲ್ಲಿ ಗೋರಥವನ್ನು ಸ್ವಾಗತಿಸಿದ ಬಳಿಕ, ಪುತ್ತೂರು ನಗರರ ಸಂಚಾರಕ್ಕೆ ತೆರಳಿತು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಗೋಪುರದ ಬಳಿ ಗೋಮಾತೆಗೆ ಆರತಿ ಬೆಳಗಲಾಯಿತು. ಬಳಿಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಬಿ.ಐತ್ತಪ್ಪ

ನ.14 ರಿಂದ 22 : ಶ್ರೀ ರಾಧಾ ಸುರಭಿ ಗೋಮಂದಿರದಲ್ಲಿ ಗೋನವರಾತ್ರಿ ಉತ್ಸವ: ಪುತ್ತೂರಿಗೆ ಆಗಮಿಸಿದ ಗೋರಥ ಯಾತ್ರೆ Read More »

ಕಾಂಗ್ರೆಸ್ ವತಿಯಿಂದ ದಿವಂಗತ ಶಕ್ತಿಸಿನ್ಹರಿಗೆ ಶ್ರದ್ದಾಂಜಲಿ

ಪುತ್ತೂರು: ನಗರ ಕಾಂಗ್ರೆಸ್ ವತಿಯಿಂದ ದಿವಂಗತ ಶಕ್ತಿಸಿನ್ಹ ರವರಿಗೆ ಶ್ರದ್ಧಾಂಜಲಿ ಸಭೆ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಅಲಿ, 2007 ರ ಪುರಸಭಾ ಚುನಾವಣೆಯಲ್ಲಿ ಬಹಳ ಒತ್ತಾಯದಿಂದ ಶಕ್ತಿಸಿನ್ಹ ರನ್ನು ಅಭ್ಯರ್ಥಿಯಾಗಿ ನಿಲ್ಲಿಸಿದ್ದೆವು. ಆ ಚುನಾವಣೆಯಲ್ಲಿ ಭರ್ಜರಿ ಗೆಲುವಿನೊಂದಿಗೆ ಶಕ್ತಿ ಸಿನ್ಹರವರು ಪುರಸಭಾ ಸದಸ್ಯರಾದರು. ಆ ಬಳಿಕ ಮೂರು ಬಾರಿ ಕೌನ್ಸಿಲರ್ ಆಗಿ ಆಯ್ಕೆಯಾಗಿ ನೆಲ್ಲಿಕಟ್ಟೆ ವಾರ್ಡ್ ನ್ನು ಸಾಕಷ್ಟು ಅಭಿವೃದ್ಧಿ ಪಡಿಸಿರುತ್ತಾರೆ, ಶಕ್ತಿ ಸಿನ್ಹರವರು ತನ್ನ

ಕಾಂಗ್ರೆಸ್ ವತಿಯಿಂದ ದಿವಂಗತ ಶಕ್ತಿಸಿನ್ಹರಿಗೆ ಶ್ರದ್ದಾಂಜಲಿ Read More »

error: Content is protected !!
Scroll to Top