ಪುತ್ತೂರು

ಎಸ್‍.ಆರ್.ಕೆ. ಲ್ಯಾಡರ್ಸ್ ಸಂಸ್ಥೆಯ ಬೆಳ್ಳಿಹಬ್ಬದ ಸಂಭ್ರಮದ ಸರಣಿ ಕಾರ್ಯಕ್ರಮ | ವಿಶೇಷ ಚೇತನ ಮಕ್ಕಳೊಂದಿಗೆ ಸ್ನೇಹಕೂಟ ಸಮಾರಂಭ

ಪುತ್ತೂರು: ಎಸ್‍.ಆರ್.ಕೆ ಲ್ಯಾಡರ್ಸ್ ಸಂಸ್ಥೆಯನ್ನು ಆತ್ಮವಿಶ್ವಾಸದೊಂದಿಗೆ ಇಚ್ಛಾ ಶಕ್ತಿಯಿಂದ ಕಟ್ಟಿ ಬೆಳೆಸಿ ನೂರಾರು ಮಂದಿಗೆ ಉದ್ಯೋಗ ಕಲ್ಪಿಸಿರುವ ಸಂಸ್ಥೆಯ ಮಾಲಕರಾದ ಕೇಶವ ಅವರ ಕೆಲಸ ಕಾರ್ಯ ಶ್ಲಾಘನೀಯ ಎಂದು ಎಂ.ಬಿ.ಫೌಂಡೇಶನ್ ನ ಎಂ.ಬಿ.ಸದಾಶಿವ ಹೇಳಿದರು. ಅವರು ಶನಿವಾರ ಎಸ್‍.ಆರ್.ಕೆ. ಲ್ಯಾಡರ್ಸ್ ನ ಬೆಳ್ಳಿ ಹಬ್ಬದ ಸರಣಿ ಕಾರ್ಯಕ್ರಮದ ಮೂರನೇ ಕಾರ್ಯಕ್ರಮ ಅಂಗವಾಗಿ ಸುಳ್ಯ ಎಂ.ಬಿ.ಫೌಂಡೇಶನ್ ಪ್ರಾಯೋಜಕತ್ವದಲ್ಲಿ ನಡೆದ ಸುಳ್ಯ ಸಾಂದೀಪ ವಿಶೇಷ ಚೇತನ ಮಕ್ಕಳೊಂದಿಗೆ ಸ್ನೇಹಕೂಟ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕೇಶವರು ಆತ್ಮವಿಶ್ವಾಸದಿಂದ ತಾನು ಕೂಡಾ […]

ಎಸ್‍.ಆರ್.ಕೆ. ಲ್ಯಾಡರ್ಸ್ ಸಂಸ್ಥೆಯ ಬೆಳ್ಳಿಹಬ್ಬದ ಸಂಭ್ರಮದ ಸರಣಿ ಕಾರ್ಯಕ್ರಮ | ವಿಶೇಷ ಚೇತನ ಮಕ್ಕಳೊಂದಿಗೆ ಸ್ನೇಹಕೂಟ ಸಮಾರಂಭ Read More »

ಪುತ್ತೂರು ಮಿನಿವಿಧಾನಸೌಧಕ್ಕೆ ಎರಡೆರಡು ಬಾರಿ ಶಂಕುಸ್ಥಾಪನೆ ನೆರವೇರಿಸಿರುವವರಿಂದ ಈಗ ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನ!! | ಎರಡೆರಡು ಬಾರಿ ಶಿಲಾನ್ಯಾಸ ಎಂದು ಆರೋಪಿಸಿದ್ದ ಬಿಜೆಪಿಗೆ ಕಾಂಗ್ರೆಸ್ ತಿರುಗೇಟು!!

ಪುತ್ತೂರು: ಇಲ್ಲಿನ ಮಿನಿವಿಧಾನಸೌಧಕ್ಕೆ ಬಿಜೆಪಿ ಆಡಳಿತದ ಸಂದರ್ಭ ಎರಡೆರಡು ಬಾರಿ ಶಂಕುಸ್ಥಾಪನೆ ನೆರವೇರಿಸಿರುವವರಿಂದ ಈಗ ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನ ನಡೆಯುತ್ತಿದೆ. ಕಾಮಗಾರಿ ಆರಂಭವಾಗದ ಯೋಜನೆಗಳಿಗೆ ಮರುಜೀವ ನೀಡುವ ಪ್ರಯತ್ನದಲ್ಲಿರುವ ಹಾಲಿ ಶಾಸಕರು ಶಿಲಾನ್ಯಾಸ ನೆರವೇರಿಸಿರುವುದರಲ್ಲಿ ಏನು ತಪ್ಪಿದೆ ಎಂದು ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಪ್ರಶ್ನಿಸಿದರು. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರು ಶಿಲಾನ್ಯಾಸ ನೆರವೇರಿಸುವುದು ಸಹಜವಾದ ಪ್ರಕ್ರಿಯೆ. ಕಣಿಯೂರಿನಲ್ಲಿ, ಬನ್ನೂರಿನ ಎಸ್.ಸಿ. ಕಾಲನಿಗೆ 10 ಲಕ್ಷ ರೂ.ನಂತೆ ಕಾಮಗಾರಿ ನಡೆಸುವುದಾಗಿ ಹೇಳಿ ಶಿಲಾನ್ಯಾಸ ನೆರವೇರಿಸಿದ್ದರು.

ಪುತ್ತೂರು ಮಿನಿವಿಧಾನಸೌಧಕ್ಕೆ ಎರಡೆರಡು ಬಾರಿ ಶಂಕುಸ್ಥಾಪನೆ ನೆರವೇರಿಸಿರುವವರಿಂದ ಈಗ ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನ!! | ಎರಡೆರಡು ಬಾರಿ ಶಿಲಾನ್ಯಾಸ ಎಂದು ಆರೋಪಿಸಿದ್ದ ಬಿಜೆಪಿಗೆ ಕಾಂಗ್ರೆಸ್ ತಿರುಗೇಟು!! Read More »

ಅಂಬಿಕಾದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ

ಪುತ್ತೂರು: ಸನ್ಯಾಸಿಯಾದವನು ಸಮಾಜದಿಂದ ಬೇರೆ ಇರಬಾರದು. ಜನರ ಜೊತೆಗಿರಬೇಕು. ಜನರಿಗಾಗಿ ಸನ್ಯಾಸಿಯ ಜ್ಞಾನ, ಹಸಿದವರಿಗೆ ಅನ್ನ ಕೊಡುವುದೇ ನಿಜವಾದ ಧರ್ಮ ಎಂದು ಖ್ಯಾತವಾಗ್ಮಿ, ಅಂಕಣಕಾರ ಪ್ರಕಾಶ ಮಲ್ಪೆ ಹೇಳಿದರು. ಅವರು ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ನಡೆದ ವಿವೇಕಾನಂದ ಜಯಂತಿ ಆಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ನಟ್ಟೋಜ ಫೌಂಡೇಶನ್ ಟ್ರಸ್ಟಿನ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜರು ಮಾತನಾಡಿ,  ವಿವೇಕಾನಂದರು ಸ್ತ್ರೀಯರಿಗೆ ತುಂಬಾ ಗೌರವ ಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ನಾವೂ ಭಾರತೀಯತೆಯನ್ನು ಸಾಧಿಸಬೇಕಾಗಿದೆ. ಈ ಮೂಲಕ ಭಾರತೀಯತೆಯನ್ನು ಪ್ರಪಂಚದಲ್ಲೆಲ್ಲಾ

ಅಂಬಿಕಾದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ Read More »

ಬಿಜೆಪಿ ಗ್ರಾಮಾಂತರ ಮಂಡಲ ಪದಾಧಿಕಾರಿಗಳ ಸಭೆ

ಪುತ್ತೂರು: ಭಾರತೀಯ ಜನತಾ ಪಾರ್ಟಿ ಪುತ್ತೂರು ಗ್ರಾಮಾಂತರ ಮಂಡಲದ ಪದಾಧಿಕಾರಿಗಳ ಸಭೆ ಇಂದು ನಡೆಯಿತು. ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವಾ ಮುಂದಿನ ಅಯೋಧ್ಯ ರಾಮ ಮಂದಿರ ಪ್ರತಿಷ್ಠಾಪನೆ ಕಾರ್ಯಕ್ರಮ, ದೇವಸ್ಥಾನ ದೈವಸ್ಥಾನ ಮಂದಿರಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ, ವಿಕಸಿತಾ ಭಾರತ ಸಂಕಲ್ಪ ಯಾತ್ರೆ ಹಾಗೂ ವಿಶ್ವ ಕರ್ಮ ಯೋಜನೆಯನ್ನು ಯಶಸ್ವಿಗೊಳಿಸುವಂತೆ ಪದಾಧಿಕಾರಿಗಳಿಗೆ ಜವಾಬ್ದಾರಿ ನೀಡಿದರು. ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ ವಿಕಸಿತಾ ಭಾರತ ಸಂಕಲ್ಪ ಯಾತ್ರೆ ಬಗ್ಗೆ ಮಾಹಿತಿ ನೀಡಿದರು. ಪುರುಷೋತ್ತಮ ಮುಂಗ್ಲಿಮನೆ ಪದವಿಧರ ಕ್ಷೇತ್ರ

ಬಿಜೆಪಿ ಗ್ರಾಮಾಂತರ ಮಂಡಲ ಪದಾಧಿಕಾರಿಗಳ ಸಭೆ Read More »

ಕೋಳಿ ಫಾರಂ ಕುಸಿತ : ಸಾವನ್ನಪ್ಪಿದ ಸಾವಿರಾರು ಕೋಳಿಗಳು!

ವಿಟ್ಲ: ಕೋಳಿ ಫಾರಂ ಕುಸಿದು ಬಿದ್ದು ಸುಮಾರು ಐದು ಸಾವಿರಕ್ಕೂ ಮಿಕ್ಕಿ ಕೋಳಿಗಳು ಸಾವನ್ನಪ್ಪಿದ್ ಘಟನೆ ವಿಟ್ಲ ಕೊಳ್ಳಾಡು ಗ್ರಾಮದ ದೇವಸ್ಯ ಎಂಬಲ್ಲಿ ಶುಕ್ರವಾರ ನಡೆದಿದೆ. ಯಜ್ಞನಾಥ ಶೆಟ್ಟಿ ಮಾಲಿಕತ್ವದ ಕೋಳಿ ಫಾರಂ ಕಟ್ಟಡ ಶುಕ್ರವಾರ ಸಂಜೆ ದಿಢೀರನೆ ಕುಸಿದು ಬಿದ್ದಿದೆ. ಶಬ್ದ ಕೇಳಿ ಮಾಲಕರು ಮತ್ತು ಸ್ಥಳೀಯರು ಸ್ಥಳಕ್ಕೆ ಬರುವಷ್ಟರಲ್ಲಿ ಕಟ್ಟಡ ಕುಸಿದು ಐದು ಸಾವಿರಕ್ಕೂ ಅಧಿಕ ಕೋಳಿಗಳು ಸಾವನ್ನಪ್ಪಿದೆ. ಫಾರಂ ಕಟ್ಟಡ ದಿಢೀರನೆ ಕುಸಿದು ಬಿದ್ದ ಘಟನೆಯಿಂದ ಮಾಲಿಕರು ಆಘಾತಗೊಂಡಿದ್ದು, ಸ್ಥಳಕ್ಕೆ ಮಾಜಿ ತಾ.ಪಂ.ಸದಸ್ಯ

ಕೋಳಿ ಫಾರಂ ಕುಸಿತ : ಸಾವನ್ನಪ್ಪಿದ ಸಾವಿರಾರು ಕೋಳಿಗಳು! Read More »

ಅನಾರೋಗ್ಯದಿಂದ ಯುವತಿ ಮೃತ್ಯು !

ಕಡಬ: ಯುವತಿಯೋರ್ವರು ಅನಾರೋಗ್ಯದಿಂದ ಮೃತಪಟ್ಟ ಘಟನೆ ಕಡಬದಲ್ಲಿ ನಡೆದಿದೆ. ಎಡಮಂಗಲ ಗ್ರಾಮದ ಗಂಡಿತಡ್ಕ ರಾಮಚಂದ್ರ ನಾಯ್ಕ ಎಂಬವರ ಪುತ್ರಿ ತೃಪ್ತಿ ಮೃತಪಟ್ಟ ಯುವತಿ ಸುಬ್ರಹ್ಮಣ್ಯ ಪದವಿ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ತೃಪ್ತಿ ಎರಡು ದಿನಗಳಿಂದ ಅನಾರೋಗ್ಯದಿಂದಿದ್ದು, ಗುರುವಾರ ಪುತ್ತೂರು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಅನಾರೋಗ್ಯದಿಂದ ಯುವತಿ ಮೃತ್ಯು ! Read More »

ಕೆದಿಲ ಒಕ್ಕೂಟದಿಂದ ಸ್ವಚ್ಛತಾ ಕಾರ್ಯ

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪೆರ್ನೆ ವಲಯದ ಕೆದಿಲ “ಬಿ” ಒಕ್ಕೂಟದಿಂದ ದೇಂತಡ್ಕ ಶ್ರೀ ವನದುರ್ಗಾ ದೇವಸ್ಥಾನದ ಜಾತ್ರೋತ್ಸವದ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ದೇವಸ್ಥಾನದ ಸುತ್ತಮುತ್ತಲ ಕಸಕಡ್ಡಿಗಳನ್ನು ತೆರವುಗೊಳಿಸಲಾಯಿತು. ಈ ಸಂದರ್ಭದಲ್ಲಿ. ದೇವಸ್ಥಾನದ ಪ್ರಮುಖರಾದ ರಘುಅಜಿಲ ಮಿತ್ತಿಲ, ಗೋಪಾಕೃಷ್ಣ ಭಟ್ ವಳಂಗಜೆ, ವಿಶ್ವನಾಥ ಶೆಟ್ಟಿಕುಕ್ಕಾಜೆ, ಕಜೆ ಬಾಬು ಮೂಲ್ಯ, ಅನಂತಕೃಷ್ಣ ಮುರ್ಗಜೆ, ಸತೀಶ್ ಮುರುವ, ಪೆರ್ನೆ ವಲಯ ಮೇಲ್ವಿಚಾರಕಿ ಶಾರದ, ಸೇವಾಪ್ರತಿನಿದಿಗಳಾದ ಶಾರದಾ, ಜಯಂತಿ, ಒಕ್ಕೂಟದ ಅಧ್ಯಕ್ಷೆ ಮೀನಾಕ್ಷಿ, ಸ್ವಸಹಾಯ, ಪ್ರಗತಿ ಬಂದು

ಕೆದಿಲ ಒಕ್ಕೂಟದಿಂದ ಸ್ವಚ್ಛತಾ ಕಾರ್ಯ Read More »

ಜ.17: ನಗರಸಭೆ ಅಯವ್ಯಯ ತಯಾರಿಕೆ ಪೂರ್ವಭಾವಿ ಸಭೆ

ಪುತ್ತೂರು: ನಗರಸಭೆಯ 2024-25ನೇ ಸಾಲಿನ ಅಯವ್ಯಯ ತಯಾರಿಕೆ ಕುರಿತು ಪೂರ್ವಭಾವಿ ಸಭೆ ಜ.17 ರಂದು ನಡೆಯಲಿದೆ. ಎರಡನೇ ಸುತ್ತಿನ ಸಭೆ ಇದಾಗಿದ್ದು, ಮಧ್ಯಾಹ್ನ 3.30 ಕ್ಕೆ ನಗರಸಭೆ ಸಭಾಂಗಣದಲ್ಲಿ ನಡೆಯಲಿದೆ. ಸಭೆಯಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡು ಬಜೆಟ್ ತಯಾರಿಕೆ ಕುರಿತು ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕೆಂದು ನಗರಸಭೆ ಆಡಳಿತಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜ.17: ನಗರಸಭೆ ಅಯವ್ಯಯ ತಯಾರಿಕೆ ಪೂರ್ವಭಾವಿ ಸಭೆ Read More »

ಇತರ ಸನ್ಯಾಸಿಗಳಿಂದ ಸ್ವಾಮಿ ವಿವೇಕಾನಂದರು ಯಾಕೆ ಭಿನ್ನ: ಪ್ರಕಾಶ್ ಮಲ್ಪೆ ಮಾತು | ನಿರ್ವಿಕಲ್ಪ ಸಮಾಧಿ ಸ್ಥಿತಿಗಿಂತ ಸಮಾಜದ ಕಾರ್ಯವೇ ಶ್ರೇಷ್ಠ ಎಂದು ತೋರಿಸಿಕೊಟ್ಟವರು ವಿವೇಕಾನಂದರು | ವಿವೇಕಾನಂದ ಜಯಂತಿಯಲ್ಲಿ ಸೂತ್ರ ಮತ್ತು ಸಲಾಕೆ ಬೊಂಬೆಯಾಟ ಪ್ರದರ್ಶನ

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘಧ ಅಶ್ರಯದಲ್ಲಿ ನೆಹರುನಗರ ವಿವೇಕಾನಂದ ಕಾಲೇಜಿನ ಆವರಣದಲ್ಲಿ ವಿವೇಕಾನಂದ ಜಯಂತಿ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿದ್ದ ವಾಗ್ಮಿ, ಅಂಕಣಗಾರ ಪ್ರಕಾಶ್ ಮಲ್ಪೆ ಮಾತನಾಡಿ, ನಿರ್ವಿಕಲ್ಪ ಸಮಾಧಿ ಸ್ಥಿತಿಗೆ ತಲುಪಿದ ಬಳಿಕ ವಿವೇಕಾನಂದರು ಪರಮಹಂಸರ ಬಳಿ ಬರುತ್ತಾರೆ. ವಿವೇಕಾನಂದರ ಸ್ಥಿತಿಯನ್ನು ಅರಿತ ಪರಮಹಂಸರು, ನಿರ್ವಿಕಲ್ಪ ಸಮಾಧೀಗೆ ತಲುಪುದೆಯಾ. ಹಾಗೆಂದು ನಿನಂದುಕೊಂಡಂತೆ ಪದೇ ಪದೇ ಅಲ್ಲಿಗೆ ಹೋಗಿ ಬರುತ್ತೇನೆ ಎಂದರೆ ನಾನದಕ್ಕೆ ಬಿಡುವುದಿಲ್ಲ. ಯಾಕೆಂದರೆ ನೀನು ಬಂದಿರುವ ಉದ್ದೇಶವೇ, ಸಮಾಜ ಕಾರ್ಯಕ್ಕೆ ಎಂದು. ಮುಂದೆ ಸಮಾಜದ ಸುಖ

ಇತರ ಸನ್ಯಾಸಿಗಳಿಂದ ಸ್ವಾಮಿ ವಿವೇಕಾನಂದರು ಯಾಕೆ ಭಿನ್ನ: ಪ್ರಕಾಶ್ ಮಲ್ಪೆ ಮಾತು | ನಿರ್ವಿಕಲ್ಪ ಸಮಾಧಿ ಸ್ಥಿತಿಗಿಂತ ಸಮಾಜದ ಕಾರ್ಯವೇ ಶ್ರೇಷ್ಠ ಎಂದು ತೋರಿಸಿಕೊಟ್ಟವರು ವಿವೇಕಾನಂದರು | ವಿವೇಕಾನಂದ ಜಯಂತಿಯಲ್ಲಿ ಸೂತ್ರ ಮತ್ತು ಸಲಾಕೆ ಬೊಂಬೆಯಾಟ ಪ್ರದರ್ಶನ Read More »

ಎನ್.ಪಿ.ಎಸ್. ಸರಕಾರಿ ನೌಕರರು ಇನ್ನು ಓ.ಪಿ.ಎಸ್. ನೌಕರರು!! | ಶೀಘ್ರದಲ್ಲಿ ಹೊರಬೀಳಲಿದೆ ಆದೇಶ

ಪುತ್ತೂರು: ಸರಕಾರದ ಅಧಿಸೂಚನೆಯನ್ವಯ ನೇಮಕಾತಿ ಹೊಂದಿ 2006, ಏ.1 ರ ನಂತರ ಕೆಲಸಕ್ಕೆ ಹಾಜರಾಗಿ ಪ್ರಸ್ತುತ ಎನ್.ಪಿ.ಎಸ್. ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಸರಕಾರಿ ನೌಕರರಿಗೆ ಓ.ಪಿ.ಎಸ್. ನೌಕರರೆಂದು ಪರಿಗಣಿಸುವುದಕ್ಕೆ ಅನುಮೋದನೆ ದೊರೆತಿದ್ದು, ಶೀಘ್ರದಲ್ಲಿ ಆದೇಶ ಹೊರಬೀಳಲಿದೆ. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ನಿರಂತರ ಪ್ರಯತ್ನದ ಫಲವಾಗಿ ಜ.10 ರಂದು ಆರ್ಥಿಕ ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಅವರನ್ನು ಭೇಟಿ ಮಾಡಿ 2006 ರ ಪೂರ್ವದಲ್ಲಿ ನೇಮಕಾತಿ ಅಧಿಸೂಚನೆಗೆ ಒಳಪಟ್ಟ ಎನ್.ಪಿ.ಎಸ್. ನೌಕರರನ್ನು ಓ.ಪಿ.ಎಸ್.

ಎನ್.ಪಿ.ಎಸ್. ಸರಕಾರಿ ನೌಕರರು ಇನ್ನು ಓ.ಪಿ.ಎಸ್. ನೌಕರರು!! | ಶೀಘ್ರದಲ್ಲಿ ಹೊರಬೀಳಲಿದೆ ಆದೇಶ Read More »

error: Content is protected !!
Scroll to Top