ಪುತ್ತೂರು

ನಿಯಂತ್ರಣ ತಪ್ಪಿದ ರಿಕ್ಷಾ ಪಲ್ಟಿ :  ಚಾಲಕನಿಗೆ ಗಾಯ| ಮಾನವೀಯತೆ ಮೆರೆದ ಅಶ್ರಫ್ ಗೆ ಆಸ್ಪತ್ರೆಯ ಗೌರವ

ಪುತ್ತೂರು: ಮಿತ್ತೂರು ರೈಲ್ವೇ  ಓವ‌ರ್ ಬ್ರಿಡ್ಜ್ ಸಮೀಪ  ರಿಕ್ಷಾವೊಂದು ಪಲ್ಟಿಯಾಗಿ, ಚಾಲಕ ಗಾಯಗೊಂಡ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಆಟೋ ಚಾಲಕ, ಮಿತ್ತಪಡ್ಡು ಪಾಟ್ರಕೋಡಿ  ನಿವಾಸಿ ನೀಲಪ್ಪ ಮೂಲ್ಯ ಗಾಯಗೊಂಡವರು. ರಿಕ್ಷಾದಲ್ಲಿದ್ದ ಇಬ್ಬರು ಸವಾರರು ಪಾರಾಗಿದ್ದಾರೆ. ಕೆಎ 19 ಎಬಿ 3693 ನಂಬರಿನ   ರಿಕ್ಷಾ ಪುತ್ತೂರಿನಿಂದ  ಮಿತ್ತೂರು  ಕಡೆ ತೆರಳುತ್ತಿದ್ದಾಗ  ಘಟನೆ  ನಡೆದಿದೆ. ಅದೇ  ಮಾರ್ಗವಾಗಿ ತೆರಳುತ್ತಿದ್ದ ಭಾರತ್  ವೆಹಿಕಲ್  ಬಜಾರ್  ಮಾಲಕ ಅಶ್ರಫ್ ತಕ್ಷಣ ಗಾಯಾಳುವನ್ನು ಉಪಚರಿಸಿ, ಬೊಳುವಾರು ಪ್ರಗತಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿದರು. ಅಶ್ರಫ್ […]

ನಿಯಂತ್ರಣ ತಪ್ಪಿದ ರಿಕ್ಷಾ ಪಲ್ಟಿ :  ಚಾಲಕನಿಗೆ ಗಾಯ| ಮಾನವೀಯತೆ ಮೆರೆದ ಅಶ್ರಫ್ ಗೆ ಆಸ್ಪತ್ರೆಯ ಗೌರವ Read More »

ಸಂತ ಫಿಲೋಮಿನಾ ಕಾಲೇಜಿನಲ್ಲಿ “ಫೂಡಿ ಪ್ರೆನ್ಯೂರ್” ಫುಡ್ ಫೆಸ್ಟ್

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ವ್ಯವಹಾರ ಅಧ್ಯಯನ ವಿಭಾಗದ ವಿದ್ಯಾರ್ಥಿಗಳ ಕೌಶಲ್ಯ ಅಬಿವೃದ್ದಿ ಹೆಚ್ಚಿಸುವ ನಿಟ್ಟಿನಲ್ಲಿ ‘ಫೂಡಿ ಪ್ರೆನ್ಯೂರ್’ ಫುಡ್ ಫೆಸ್ಟ್ ನ್ನು ಗುರುವಾರ ಆಯೋಜಿಸಲಾಯಿತು. ವಿದ್ಯಾರ್ಥಿಗಳು ಸ್ಥಳದಲ್ಲೇ ತಯಾರಿಸಿದ ವಿವಿಧ ಬಗೆಯ ಮೊಜಿಟೋಗಳು, ಆರೋಗ್ಯಕರ ಪೇಯ ಹಾಗೂ ಆರೋಗ್ಯವರ್ಧಕ ತಿಂಡಿ ತಿನಸುಗಳ ಸ್ಟಾಲ್ ಗಳು, ಮನೆಯಲ್ಲಿ ತಯಾರಿಸಿದಂತಹ ಕರಾವಳಿಯ ವಿಶೇಷ ಖಾದ್ಯಗಳ ಸ್ಟಾಲ್ ಗಳು, ಬ್ರೌನಿಗಳ ಮತ್ತು ಚಾಟ್ ಸ್ಟಾಲ್ ಗಳಿದ್ದವು. ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ತಮ್ಮ ಬಿಡುವಿನ ಸಂದರ್ಭದಲ್ಲಿ ಹಾಗೂ ಮಧ್ಯಾಹ್ನದ ಭೋಜನ ವಿರಾಮದ

ಸಂತ ಫಿಲೋಮಿನಾ ಕಾಲೇಜಿನಲ್ಲಿ “ಫೂಡಿ ಪ್ರೆನ್ಯೂರ್” ಫುಡ್ ಫೆಸ್ಟ್ Read More »

ಉತ್ತಮ ಆಡಳಿತಗಾರನಾಗುವ ಜತೆಗೆ ಸಮಾಜಕ್ಕೆ ಮಾದರಿ ವ್ಯಕ್ತಿಯಾಗಿ ಬಸವಣ್ಣನವರು ಬದುಕಿದ್ದಾರೆ | ಶ್ರೀ ಬಸವೇಶ್ವರ ಜಯಂತಿ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ದಿನಾಚರಣೆಯಲ್ಲಿ ಕುಂಞಿ ಅಹಮ್ಮದ್

ಪುತ್ತೂರು: ಮೂಡನಂಬಿಕೆ, ಅಸ್ಪೃಶ್ಯತೆ ಸೇರಿ ಸಮಾಜದ ವಿವಿಧ ಪಿಡುಗುಗಳ ವಿರುದ್ಧ ಹೋರಾಟ ಮಾಡಿದ ಬಸವಣ್ಣನವರು ವಚನಗಳ ಮೂಲಕ ಸಮಾಜದಲ್ಲಿನ ವ್ಯವಸ್ಥೆಯನ್ನು ಎಚ್ಚರಿಸುವ ಕಾರ್ಯವನ್ನು ಮಾಡಿದ್ದಾರೆ. ಅವರ ಜೀವನ, ಆದರ್ಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳುವ ಅನಿವಾರ್ಯತೆಯಿದೆ ಎಂದು ಪುತ್ತೂರು ತಹಸೀಲ್ದಾರ್ ಕುಂಞ ಅಹಮ್ಮದ್ ಹೇಳಿದರು. ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶ್ರೀ ಬಸವೇಶ್ವರ ಜಯಂತಿ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾಯಕ ತತ್ವಕ್ಕೆ ಹೆಚ್ಚಿನ ಮಹತ್ವ ಕೊಟ್ಟ

ಉತ್ತಮ ಆಡಳಿತಗಾರನಾಗುವ ಜತೆಗೆ ಸಮಾಜಕ್ಕೆ ಮಾದರಿ ವ್ಯಕ್ತಿಯಾಗಿ ಬಸವಣ್ಣನವರು ಬದುಕಿದ್ದಾರೆ | ಶ್ರೀ ಬಸವೇಶ್ವರ ಜಯಂತಿ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ದಿನಾಚರಣೆಯಲ್ಲಿ ಕುಂಞಿ ಅಹಮ್ಮದ್ Read More »

ಹೆಣ್ಣೊಂದು ಕಲಿತರೆ  ಶಾಲೆಯೊಂದು ತೆರೆದಂತೆ

ಹೆಣ್ಣೊಂದು ಕಲಿತರೆ  ಶಾಲೆಯೊಂದು ತೆರೆದಂತೆ ಎನ್ನುವ ಮಾತು  ಅಕ್ಷರಶಃ ಸತ್ಯ. ಏಕೆಂದರೆ ಒಂದು ಮನೆಯಲ್ಲಿ ಹೆಣ್ಣು ಕಲಿತರೆ ಆ ಮನೆಗೆ ಬೆಳಕಾಗುವಳು. ಸಮಾಜದ ಎಲ್ಲ ಹೆಣ್ಣು ಮಕ್ಕಳು ಶಿಕ್ಷಣ ಪಡೆದರೆ ಸಮಾಜವನ್ನೇ ಉದ್ದರಿಸುವರು. ಸಮಾಜದ ಪ್ರಗತಿಯ ರಥ ಸಾಗಬೇಕಾದರೆ ಗಂಡು-ಹೆಣ್ಣು ಎಂಬ ಎರಡು ಚಕ್ರಗಳು ಇರಲೇಬೇಕು. ರಥಕ್ಕೆ ಹೇಗೆ ಒಂದು ಚಕ್ರ ಇಲ್ಲವಾದರೆ ಚಲಿಸಲು ಸಾಧ್ಯವಿಲ್ಲವೋ ಸಮಾಜವೂ ಹಾಗೆಯೇ, ಪ್ರಕೃತಿಯೇ ಗಂಡು, ಹೆಣ್ಣಿಗೂ ಸಮಾನವಾದ ಸ್ಥಾನಮಾನವನ್ನು ನೀಡಿಬಿಟ್ಟಿದೆ. ಯಾರೂ ಹೆಚ್ಚಲ್ಲ ಯಾರೂ ಕಡಿಮೆಯಲ್ಲ ದೈಹಿಕವಾಗಿ ಗಂಡು-ಹೆಣ್ಣು ಎರಡು

ಹೆಣ್ಣೊಂದು ಕಲಿತರೆ  ಶಾಲೆಯೊಂದು ತೆರೆದಂತೆ Read More »

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ : ಪ್ರಮುಖ ಆರೋಪಿ ಬಂಧನ

ಪುತ್ತೂರು: ಹಿಂದೂ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣದ ಪ್ರಮುಖ ಆರೋಪಿ ಮುಸ್ತಾಫಾ ಪೈಚಾರ್‌ ಎಂಬಾತನನ್ನು  ಪೊಲೀಸರು  ಬಂಧಿಸಿದ್ದಾರೆ  ಎಂಬ ಮಾಹಿತಿ ಲಭ್ಯವಾಗಿದೆ. ಆರೋಪಿ ಮುಸ್ತಫಾ  ಪೈಚಾರ್ ಗೆ ಎನ್‌ಐಎ ಲುಕ್ ಔಟ್ ನೋಟೀಸ್‌ನ್ನು ನೀಡಿದ್ದು ಮಾಹಿತಿ ಕೊಟ್ಟವರಿಗೆ 5 ಲಕ್ಷ ಬಹುಮಾನ ಕೂಡ ಈ ಹಿಂದೆ  ಘೋಷಿಸಿತ್ತು. ಇದೀಗ ಸಕಲೇಶಪುರದಲ್ಲಿ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಪ್ರಮುಖ ಆರೋಪಿ ಮುಸ್ತಾಫಾ ಪೈಚಾರ್ ನನ್ನು  ಬಂಧಿಸಿದ್ದಾರೆ  ಎಂಬ  ಮಾಹಿತಿ  ಲಭಿಸಿದೆ.

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ : ಪ್ರಮುಖ ಆರೋಪಿ ಬಂಧನ Read More »

ಬೈಕ್-ಕಾರು ಡಿಕ್ಕಿ : ಬೈಕ್ ಸವಾರ ಗಂಭೀರ

ಪುತ್ತೂರು: ಬೈಕ್ ಮತ್ತು ಕಾರು ಡಿಕ್ಕಿಯಾದ ಘಟನೆ ಇಂದು ಬೆಳಿಗ್ಗೆ ಕೊಡಿನೀರು ಎಂಬಲ್ಲಿ ನಡೆದಿದೆ. ಸವಣೂರಿನಿಂದ ಪುತ್ತೂರು ಕಡೆ ಬರುತ್ತಿದ್ದ ಬೈಕ್ ಸವಾರ ಬಾಲಕೃಷ್ಣ ಗೌಡ, ಪುತ್ತೂರಿನಿಂದ ಸುಬ್ರಹ್ಮಣ್ಯ ಕಡೆಗೆ ಬರುತ್ತಿದ್ದ ಕಾರು ನಡುವೆ ಡಿಕ್ಕಿ ಸಂಭವಿಸಿದೆ. ಅಪಘಾತದಿಂದ ಬೈಕ್ ಸವಾರನಿಗೆ ಗಂಭಿರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೈಕ್-ಕಾರು ಡಿಕ್ಕಿ : ಬೈಕ್ ಸವಾರ ಗಂಭೀರ Read More »

ಸಂತ ಫಿಲೋಮಿನಾ ಕಾಲೇಜಿನ ಎನ್ ಎಸ್ ಎಸ್ ವಾರ್ಷಿಕ ವಿಶೇಷ  ಶಿಬಿರದ ಸಮಾರೋಪ

ಪುತ್ತೂರು: ಸಂತ ಫಿಲೋಮಿನ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ  ಶಿಬಿರದ ಸಮಾರೋಪ ಸಮಾರಂಭ ಬಿಳಿಯೂರು  ದ.ಕ.ಜಿ.ಪ.ಹಿ.ಪ್ರಾ. ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದ  ಅಧ್ಯಕ್ಷತೆ  ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ವಂ. ಡಾ.ಆ್ಯಂಟನಿಪ್ರಕಾಶ್ ಮೊಂತೇರೊ ಮಾತನಾಡಿ, ಈ ರೀತಿಯ ಶಿಬಿರಗಳಲ್ಲಿ ದೊರೆಯುವ  ಜೀವನಾನುಭವ ಅಮೂಲ್ಯವಾದುದು. ನಾವು ಮಾಡುತ್ತಿರುವ ಕೆಲಸವು  ಎಷ್ಟೇ  ಚಿಕ್ಕದಾಗಿದ್ದರೂ  ಅದು  ಪ್ರತಿಫಲಾಪೇಕ್ಷೆಯಿಲ್ಲದೆ  ಮಾಡುವ ಕಾರ್ಯವಾಗಿದೆ. ಒಂದು ಪುಟ್ಟ ಸಹಾಯ ಇನ್ನೊಬ್ಬರಲ್ಲೆ ಸಕಾರಾತ್ಮಕ ಬದಲಾವಣೆಯನ್ನು ಉಂಟುಮಾಡಿದಲ್ಲಿ ನಮ್ಮ ಕರ್ತವ್ಯವನ್ನು ನಾವು ಯಶಸ್ವಿಯಾಗಿ ನೆರವೇರಿಸಿದ್ದೇವೆಂದು ಅರ್ಥ. ಈ ಶಿಬಿರದ

ಸಂತ ಫಿಲೋಮಿನಾ ಕಾಲೇಜಿನ ಎನ್ ಎಸ್ ಎಸ್ ವಾರ್ಷಿಕ ವಿಶೇಷ  ಶಿಬಿರದ ಸಮಾರೋಪ Read More »

ಮೇ 13: ಪುತ್ತೂರು  ಶ್ರೀ ಮಹಾಲಿಂಗೇಶ್ವರ ದೇವರ ಪ್ರತಿಷ್ಠಾ ವರ್ಧಂತ್ಯುತ್ಸವ

ಪುತ್ತೂರು: ಮಹತೋಭಾರ ಪುತ್ತೂರು  ಶ್ರೀ ಮಹಾಲಿಂಗೇಶ್ವರ  ದೇವಸ್ಥಾನದಲ್ಲಿ ಮೇ 13ರಂದು ಪ್ರತಿಷ್ಠಾ ವರ್ಧಂತ್ಯುತ್ಸವ  ನಡೆಯಲಿದೆ. ಕುಂಟಾರು  ರವೀಶ ತಂತ್ರಿಗಳ  ನೇತೃತ್ವದಲ್ಲಿ ವಿವಿಧ  ಧಾರ್ಮಿಕ  ಕಾರ್ಯಕ್ರಮ  ನಡೆಯಲಿದೆ. ರಾತ್ರಿ  7.30ಕ್ಕೆ  ದೇವರ ಬಲಿ ಹೊರಟು ಹೊರಾಂಗಣದಲ್ಲಿ ಉತ್ಸವ, ಪಲ್ಲಕ್ಕಿ ಉತ್ಸವ ಹಾಗೂ ಬಂಡಿ  ಉತ್ಸವ ಜರಗಲಿದೆ  ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

ಮೇ 13: ಪುತ್ತೂರು  ಶ್ರೀ ಮಹಾಲಿಂಗೇಶ್ವರ ದೇವರ ಪ್ರತಿಷ್ಠಾ ವರ್ಧಂತ್ಯುತ್ಸವ Read More »

ದಿ.ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ ಶ್ರದ್ಧಾಂಜಲಿ ಸಭೆ

ಪುತ್ತೂರು: ಹಿರಿಯ ಸಾಹಿತಿ ದಿ.ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರಿಗೆ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಅನುರಾಗ ವಠಾರದಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು. ಹಿರಿಯ ಸಾಹಿತಿ ಬಿ. ಪುರಂದರ್ ಭಟ್ ಅಗಲಿದ ದಿವ್ಯ ಚೇತನಕ್ಕೆ ನುಡಿ ನಮನ ಸಲ್ಲಿಸಿದರು. ನಿವೃತ್ತ ಶಿಕ್ಷಕರಾದ ಶ್ರೀಧರ್ ರೈ ಅಧ್ಯಕ್ಷತೆ ವಹಿಸಿದ್ದರು. ಡಾ ವರದರಾಜ ಚಂದ್ರಗಿರಿ, ನಾರಾಯಣ ರೈ ಕುಕ್ಕುವಳ್ಳಿ, ವಿಜಯಕುಮಾರ್, ಬಿ ವಿ ಸೂರ್ಯನಾರಾಯಣ, ಬಿ ಐತಪ್ಪ ನಾಯ್ಕ್ ಮುಂತಾದವರು ದಿ.ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರೊಂದಿಗೆನ ಒಡನಾಟದ ಅನುಭವವನ್ನು

ದಿ.ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ ಶ್ರದ್ಧಾಂಜಲಿ ಸಭೆ Read More »

ನಿರಂಜನ ಪ್ರಶಸ್ತಿಗೆ ಭಾಜನರಾದ ಪ್ರೊ ವಿ ಬಿ ಅರ್ತಿಕಜೆಯವರ ವ್ಯಕ್ತಿತ್ವ ಎಲ್ಲರಿಗೂ ಮಾದರಿ : ನಿರಂಜನ ಪ್ರಶಸ್ತಿ, ಶಂಕರ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ.ನಿರಂಜನ ವಾನಳ್ಳಿ

ಪುತ್ತೂರು: ನಿರಂಜನ ಪ್ರಶಸ್ತಿ ಹಾಗೂ ಶಂಕರ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ವಿವೇಕಾನಂದ ಕಾಲೇಜಿನಲ್ಲಿ ನಡೆಯಿತು. ಸಾಹಿತಿ ಹಾಗೂ ವಿಶ್ರಾಂತ ಪ್ರಾಧ್ಯಾಪಕ ಪ್ರೊ ವಿ ಬಿ ಅರ್ತಿಕಜೆಯವರಿಗೆ ನಿರಂಜನ ಪ್ರಶಸ್ತಿ ನೀಡಿ  ಮಾತನಾಡಿದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಡಾ. ನಿರಂಜನ ವಾನಳ್ಳಿ, ಪುತ್ತೂರು ವಿವೇಕಾನಂದ ಕಾಲೇಜು ನಿರಂಜನರನ್ನು ಸದಾ ನೆನಪಿನಲ್ಲಿಟ್ಟುಕೊಂಡು ಅವರ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡುತ್ತಿರುವುದು ಸಮರ್ಥನೀಯ. ನಿರಂಜನರ ಕಾದಂಬರಿಗಳಿಂದ, ಅಂಕಣಗಳಿಂದ ಅಂದು ಮಾತ್ರವಲ್ಲ ಇಂದಿಗೂ ಜನ ಮನದಲ್ಲಿ  ಜೀವಂತವಾಗಿರುವವರು, ಪ್ರಗತಿ ಶೀಲರಾಗಿ ಉಚ್ಚ ಮಟ್ಟದಲ್ಲಿ

ನಿರಂಜನ ಪ್ರಶಸ್ತಿಗೆ ಭಾಜನರಾದ ಪ್ರೊ ವಿ ಬಿ ಅರ್ತಿಕಜೆಯವರ ವ್ಯಕ್ತಿತ್ವ ಎಲ್ಲರಿಗೂ ಮಾದರಿ : ನಿರಂಜನ ಪ್ರಶಸ್ತಿ, ಶಂಕರ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ.ನಿರಂಜನ ವಾನಳ್ಳಿ Read More »

error: Content is protected !!
Scroll to Top