ಪುತ್ತೂರು

ಮೇ 24,25,26 : ಪುತ್ತೂರಿನಲ್ಲಿ ಮೇಳೈಸಲಿದೆ ಹಲಸು ಮತ್ತು ಹಣ್ಣುಗಳ ಮೇಳ

ಪುತ್ತೂರು: ನವತೇಜ ಟ್ರಸ್ಟ್, ಜಿ.ಎಲ್‍.ಆಚಾರ್ಯ ಜ್ಯುವೆಲ್ಲರ್ಸ್ ಹಾಗೂ ಪುತ್ತೂರು ಜೆಸಿಐ ಸಂಯುಕ್ತ ಆಶ್ರಯದಲ್ಲಿ 7ನೇ ವರ್ಷದ ಹಲಸು ಮತ್ತು ಹಣ್ಣುಗಳ ಮೇಳ ಮೇ. 24, 25 ಹಾಗೂ 26 ರಂದು ಜೈನ ಭವನದಲ್ಲಿ ನಡೆಯಲಿದೆ ಎಂದು ನವತೇಜ ಟ್ರಸ್ಟ್ ನ ಅನಂತ ಕುಮಾರ್ ನೈತಡ್ಕ ತಿಳಿಸಿದ್ದಾರೆ. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮೇಳದ ಮೂಲಕ ಯಾರಿಗೂ ಬೇಡವಾದ ಹಲಸಿನ ಹಣ್ಣು ಜತೆಗೆ ಮೌಲ್ಯವರ್ಧಿತ ಉತ್ಪನ್ನಗಳಿಗೆ ಬೇಡಿಕೆ ಬರಬೇಕು ಈ ಮೂಲಕ ಆರ್ಥಿಕ ಶಕ್ತಿಯಾಗಿ ದೇಶ-ವಿದೇಶಗಳಲ್ಲಿ ಹೊರಹೊಮ್ಮುವ ನಿಟ್ಟಿನಲ್ಲಿ […]

ಮೇ 24,25,26 : ಪುತ್ತೂರಿನಲ್ಲಿ ಮೇಳೈಸಲಿದೆ ಹಲಸು ಮತ್ತು ಹಣ್ಣುಗಳ ಮೇಳ Read More »

ಭಾರೀ ಮಳೆಗೆ ಕುಸಿದ ಹಟ್ಟಿ: ಹಸು, ಕರು ಮೃತ್ಯು

ಪುತ್ತೂರು: ಸೋಮವಾರ ರಾತ್ರಿ ಸುರಿದ ಭಾರೀ ಮಳೆಗೆ ಮನೆಯೊಂದರ ದನದ ಹಟ್ಟಿಯ ಗೋಡೆ ಕುಸಿದು ಹಸು, ಕರು ಮೃತಪಟ್ಟ ಘಟನೆ ಪಡೂರು ಗ್ರಾಮದ ನೆಲಪ್ಪಾಲು ಎಂಬಲ್ಲಿ ನಡೆದಿದೆ. ಪಡೂರು ಗ್ರಾಮದ ನೆಲಪ್ಪಾಲು ಎಂಬಲ್ಲಿ ವಸಂತ ಎಂಬವರ ಮನೆ ಸಮೀಪದ ಹಟ್ಟಿಯ ಗೋಡೆ ಮಳೆಗೆ ಬಿದ್ದು ಹಟ್ಟಿಯಲ್ಲಿದ್ದ ಹಸುಗಳ ಪೈಕಿ ಒಂದು ಹಸು ಮತ್ತು ಕರು ಮೃತಪಟ್ಟಿದೆ. ಸ್ಥಳಕ್ಕೆ ಪುತ್ತೂರು ತಹಸೀಲ್ದಾರ್ ಕುಂಞಿ ಅಹಮ್ಮದ್, ಉಪ್ಪಿನಂಗಡಿ ಕಂದಾಯ ನಿರೀಕ್ಷಕ ಚಂದ್ರು, ನಗರಸಭಾ ಸದಸ್ಯ ಕೆ ಜೀವಂಧರ್ ಜೈನ್ ಭೇಟಿ ನೀಡಿದ್ದಾರೆ.

ಭಾರೀ ಮಳೆಗೆ ಕುಸಿದ ಹಟ್ಟಿ: ಹಸು, ಕರು ಮೃತ್ಯು Read More »

ಸಂತ ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘ ಹಾಗೂ ರಕ್ಷಕ-ಶಿಕ್ಷಕ ಸಂಘದ ವಾರ್ಷಿಕೋತ್ಸವ

ಪುತ್ತೂರು : ಶಿಕ್ಷಣ ಶಿಲ್ಪಿ ಮೊ| ಪತ್ರಾವೋರವರ ದೂರದರ್ಶಿತ್ವದಿಂದ ಪುತ್ತೂರಿನಲ್ಲಿ ಅಂದು ಶಿಕ್ಷಣ ಸಂಸ್ಥೆಗಳು ಸ್ಥಾಪನೆಗೊಂಡು ಅನೇಕ ವಿದ್ಯಾರ್ಥಿಗಳಿಗೆ ದಾರಿದೀಪವಾಗಿ ಪರಿಣಮಿಸಿವೆ ಮಾತ್ರವಲ್ಲದೆ ಸಮಾಜದ ಪ್ರತಿಯೊಂದು ರಂಗದಲ್ಲೂ ಫಿಲೋಮಿನಾದ ವಿದ್ಯಾರ್ಥಿಗಳು ಪ್ರಜ್ವಲಿಸಿರುತ್ತಾರೆ. ಇದೇ ಸಂಪ್ರದಾಯ ಮುಂದಿನ ದಿನಗಳಲ್ಲೂ ಮುಂದುವರಿಯಲಿ ಎಂದು ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಜಿ ಎಲ್ ಸಮೂಹ ಸಂಸ್ಥೆಗಳ ಚೇರ್ ಮ್ಯಾನ್ ಜಿ ಬಲರಾಮ ಆಚಾರ್ಯ ಹೇಳಿದರು. ಫಿಲೋಮಿನಾ ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ಜರುಗಿದ ಹಿರಿಯ ವಿದ್ಯಾರ್ಥಿ ಸಂಘ ಹಾಗೂ ರಕ್ಷಕ-ಶಿಕ್ಷಕ ಸಂಘದ ವಾರ್ಷಿಕೋತ್ಸವದಲ್ಲಿ

ಸಂತ ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘ ಹಾಗೂ ರಕ್ಷಕ-ಶಿಕ್ಷಕ ಸಂಘದ ವಾರ್ಷಿಕೋತ್ಸವ Read More »

ಡಾ.ಪಾಲ್ತಾಡಿ ಅವರು ಅಧ್ಯಾಪಕನಾಗಿ ಸ್ವ ಪ್ರಯತ್ನದಿಂದ ಕಲಿಯುವುದು, ಕಲಿಸುವುದು, ಸಂಘಟಿಸುವ ಪ್ರಯತ್ನ ಮಾಡಿದ್ದರು : ಡಾ.ವಿವೇಕ್‍ ರೈ | ಅಧ್ಯಯನ ಮಾಡುವವರಿಗೆ ಡಾ.ಪಾಲ್ತಾಡಿ ಉತ್ತಮ ತಳಹದಿ ಹಾಕಿಕೊಟ್ಟಿದ್ದಾರೆ : ಡಾ.ಕೆ.ಚಿನ್ನಪ್ಪ ಗೌಡ | ಹಿರಿಯ ಜಾನಪದ ವಿದ್ವಾಂಸ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ, ನಿವೃತ್ತ ಉಪನ್ಯಾಸಕ ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ ಶ್ರದ್ಧಾಂಜಲಿ ಸಭೆ

ಪುತ್ತೂರು: ಪ್ರಾಥಮಿಕ ಶಾಲಾ ಅಧ್ಯಾಪಕನಾಗಿ ಸ್ವಪ್ರಯತ್ನದಿಂದ ಕಲಿಯುವುದು, ಕಲಿಸುವುದು ಹಾಗೂ ಸಂಘಟಿಸುವ ಪ್ರಯತ್ನವನ್ನು ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ ಮಾಡಿದ್ದರು. ಹಾಗಾಗಿ ಅವರಿಗೆ ಶಿಕ್ಷಣ, ಸಾಹಿತ್ಯ, ಸಂಸ್ಕೃತಿ, ಸಮುದಾಯ ನಾಲ್ಕು ಚಕ್ರವಿದ್ದಂತಿತ್ತು ಎಂದು ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಡಾ.ವಿವೇಕ್‍ ರೈ ಹೇಳಿದರು. ಅವರು ಇತ್ತೀಚೆಗೆ ನಿಧನರಾದ ಹಿರಿಯ ಜಾನಪದ ವಿದ್ವಾಂಸ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ, ನಿವೃತ್ತ ಉಪನ್ಯಾಸಕ ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರ ಶ್ರದ್ಧಾಂಜಲಿ ಸಭೆಯನ್ನು  ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ

ಡಾ.ಪಾಲ್ತಾಡಿ ಅವರು ಅಧ್ಯಾಪಕನಾಗಿ ಸ್ವ ಪ್ರಯತ್ನದಿಂದ ಕಲಿಯುವುದು, ಕಲಿಸುವುದು, ಸಂಘಟಿಸುವ ಪ್ರಯತ್ನ ಮಾಡಿದ್ದರು : ಡಾ.ವಿವೇಕ್‍ ರೈ | ಅಧ್ಯಯನ ಮಾಡುವವರಿಗೆ ಡಾ.ಪಾಲ್ತಾಡಿ ಉತ್ತಮ ತಳಹದಿ ಹಾಕಿಕೊಟ್ಟಿದ್ದಾರೆ : ಡಾ.ಕೆ.ಚಿನ್ನಪ್ಪ ಗೌಡ | ಹಿರಿಯ ಜಾನಪದ ವಿದ್ವಾಂಸ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ, ನಿವೃತ್ತ ಉಪನ್ಯಾಸಕ ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ ಶ್ರದ್ಧಾಂಜಲಿ ಸಭೆ Read More »

ಆಲಂಕಾರು ವಲಯ ಒಕ್ಕಲಿಗ ಗೌಡ ಸೇವಾ ಸಂಘದಿಂದ ಶ್ರೀ ಸತ್ಯನಾರಾಯಣ ಪೂಜೆ, ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ

ಆಲಂಕಾರು: ಆಲಂಕಾರು ವಲಯ ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ಶ್ರೀ ಸತ್ಯನಾರಾಯಣ ದೇವರ ಪೂಜೆ, ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಭಾನುವಾರ ಆಲಂಕಾರು ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಸುಬ್ರಹ್ಮಣ್ಯ ಬಳ್ಳಕ್ಕುರಾಯ ನೇತೃತ್ವದಲ್ಲಿ ಶ್ರೀ ಸತ್ಯನಾರಾಯಣ ಪೂಜೆ, ಮಹಾಪೂಜೆ ನಡೆದು ಪ್ರಸಾದ ವಿತರಣೆ ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಉಪನ್ಯಾಸಕ ಗುಡ್ಡಪ್ಪ ಗೌಡ ಬಲ್ಯ ಗೌಡ ಸಮಾಜದ ಕಟ್ಟುಪಾಡುಗಳ

ಆಲಂಕಾರು ವಲಯ ಒಕ್ಕಲಿಗ ಗೌಡ ಸೇವಾ ಸಂಘದಿಂದ ಶ್ರೀ ಸತ್ಯನಾರಾಯಣ ಪೂಜೆ, ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ Read More »

ಬೆಳ್ತಂಗಡಿ ಶಾಸಕ ಹರೀಶ್ ಪೂಂಜರ ಮೇಲೆ ಕೇಸು ದಾಖಲಿಸಿರುವುದು ಖಂಡನೀಯ : ಸಾಜ ರಾಧಾಕೃಷ್ಣ ಆಳ್ವ

ಪುತ್ತೂರು : ಬೆಳ್ತಂಗಡಿ ಮಂಡಲ ಯುವಮೋರ್ಚಾ ಅಧ್ಯಕ್ಷರನ್ನು ವಿನಾಕಾರಣ ಬಂಧಿಸಿದ ನಿಟ್ಟಿನಲ್ಲಿ ಬಿಡುಗಡೆಗಾಗಿ ಹೊರಟ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರ ಮೇಲೆ ಕೇಸು ದಾಖಲಿಸಿರುವುದು ಖಂಡನೀಯ ಎಂದು ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಕೃಷ್ಣ ಆಳ್ವ ತಿಳಿಸಿದ್ದಾರೆ. ಕಾಂಗ್ರೆಸ್ ಸರಕಾರ ಅಭಿವೃದ್ಧಿ ಕಾರ್ಯಗಳತ್ತ ಗಮನ ಹರಿಸುವುದನ್ನು ಬಿಟ್ಟು ಬಿಜೆಪಿ ನಾಯಕರ ಮತ್ತು ಹಿಂದೂ ಮುಖಂಡರುಗಳ ಮೇಲೆ ಕೇಸು ದಾಖಲಿಸುವುದಲ್ಲೇ ನಿರತವಾಗಿದೆ. ಈ ರೀತಿಯ ದಮನಕಾರಿ ರೀತಿಯನ್ನು ಕಾಂಗ್ರೆಸ್ ಸರಕಾರ ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ನಿಮಗೆ ಮುಳುವಾಗಲಿದೆ

ಬೆಳ್ತಂಗಡಿ ಶಾಸಕ ಹರೀಶ್ ಪೂಂಜರ ಮೇಲೆ ಕೇಸು ದಾಖಲಿಸಿರುವುದು ಖಂಡನೀಯ : ಸಾಜ ರಾಧಾಕೃಷ್ಣ ಆಳ್ವ Read More »

ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ನೇರವಾಗಿ ದ್ವಿತೀಯ ಪಿಯುಸಿ, ಎಸ್ ಎಸ್ ಎಲ್ ಸಿ ತರಗತಿಗಳು | ಎಸ್‍ ಎಸ್‍ ಎಲ್‍ ಸಿ, ಪ್ರಥಮ, ದ್ವಿತೀಯ ಪಿಯುಸಿ, ವಿಜ್ಞಾನ, ವಾಣಿಜ್ಯ ಹಾಗೂ ಕಲಾ ತರಗತಿಗಳು ಜೂ.3 ರಿಂದ ಆರಂಭ

ಪುತ್ತೂರು: ಪ್ರಗತಿ ಎಜುಕೇಶನಲ್ ಫೌಂಡೇಶನ್ ಅಧೀನದಲ್ಲಿ ಪುತ್ತೂರಿನ ಧರ್ಮಸ್ಥಳ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ಕಳೆದ 17 ವರ್ಷಗಳಿಂದ ಶಾಲಾ-ಕಾಲೇಜು ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ಎಸ್ ಎಸ್ ಎಲ್ ಸಿ, ಪ್ರಥಮ ಪಿಯುಸಿ, ದ್ವಿತೀಯ ಪಿಯುಸಿ, ವಿಜ್ಞಾನ, ವಾಣಿಜ್ಯ, ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಲು ಮತ್ತು ಫೇಲ್ ಆಗಿರುವ ವಿಷಯವನ್ನು ಪಾಸ್ ಮಾಡಿಕೊಳ್ಳಲು ಉತ್ತಮ ವಾತಾವರಣವನ್ನು ಕಲ್ಪಿಸಿಕೊಟ್ಟಿದೆ. ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ಮಾರ್ಚ್ 2025 ಕ್ಕೆ 15 ಅಥವಾ 17

ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ನೇರವಾಗಿ ದ್ವಿತೀಯ ಪಿಯುಸಿ, ಎಸ್ ಎಸ್ ಎಲ್ ಸಿ ತರಗತಿಗಳು | ಎಸ್‍ ಎಸ್‍ ಎಲ್‍ ಸಿ, ಪ್ರಥಮ, ದ್ವಿತೀಯ ಪಿಯುಸಿ, ವಿಜ್ಞಾನ, ವಾಣಿಜ್ಯ ಹಾಗೂ ಕಲಾ ತರಗತಿಗಳು ಜೂ.3 ರಿಂದ ಆರಂಭ Read More »

ವೈದಿಕ ಆಚರಣೆಯಲ್ಲಿ ಅಸಡ್ಡೆಯೇ ವಿಶ್ವಬ್ರಾಹ್ಮಣರು ಹಿಂದುಳಿಯಲು ಕಾರಣ : ವೇ. ಮೂ. ಲೋಲಾಕ್ಷ ಶರ್ಮ | ಕಾವಿನಲ್ಲಿ ಶ್ರೀ ವಿಶ್ವಕರ್ಮ ಪೂಜೆ

ಕಾವು : ವಿಶ್ವಕರ್ಮ ಕಾವು ಕೂಡೂವಳಿಕೆ ವತಿಯಿಂದ ವಿಶ್ವಕರ್ಮ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಕಾವು ಜನಮಂಗಲ ಸಭಾಭವನದಲ್ಲಿ ನಡೆಯಿತು. ಹರೀಶ್ ಆಚಾರ್ಯ ಕಂಟ್ರಮಜಲು ಅವರ ಪೌರೋಹಿತ್ಯದಲ್ಲಿ ವಿಶ್ವಕರ್ಮ ಪೂಜಾ ವೈದಿಕ ವಿಧಿವಿಧಾನ ನಡೆಯಿತು. ಪೂಜೆಯ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಪಡುಕುತ್ಯಾರ್ ಆನೆಗುಂದಿ ಗುರುಸೇವಾ ಪರಿಷತ್ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ವೇ.ಮೂ.ಶ್ರೀ ಲೋಲಾಕ್ಷ ಶರ್ಮ ಧಾರ್ಮಿಕ ಉಪನ್ಯಾಸ ನೀಡಿ, ಶಿಲ್ಪಕಲೆ ಸೇರಿದಂತೆ ಪ್ರಮುಖ ಕುಲಕಸುಬುಗಳಿಗೆ ಹೆಚ್ಚು ಒತ್ತು ಕೊಡುವ ಭರದಲ್ಲಿ ನಮ್ಮ ವೈದಿಕ

ವೈದಿಕ ಆಚರಣೆಯಲ್ಲಿ ಅಸಡ್ಡೆಯೇ ವಿಶ್ವಬ್ರಾಹ್ಮಣರು ಹಿಂದುಳಿಯಲು ಕಾರಣ : ವೇ. ಮೂ. ಲೋಲಾಕ್ಷ ಶರ್ಮ | ಕಾವಿನಲ್ಲಿ ಶ್ರೀ ವಿಶ್ವಕರ್ಮ ಪೂಜೆ Read More »

ಒಂದೇ ಪ್ರಯತ್ನದಲ್ಲಿ ಯುವಕನ ಸಾಧನೆಗೆ ಸಾಕ್ಷಿಯಾದ ಪ್ರಗತಿ ಸ್ಟಡಿ ಸೆಂಟರ್

ಪುತ್ತೂರು: ಕಾಸರಗೋಡಿನ ದೀಕ್ಷಿತ್ ಎಂ.ವಿ. ಬಿಬಿಎಯಲ್ಲಿ ಒಂದು, ಮೂರು ಹಾಗೂ ಐದನೇ ಸೆಮಿಸ್ಟರ್ನ 10 ವಿಷಯಗಳಲ್ಲಿ ಒಂದೇ ಪ್ರಯತ್ನದಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಗೊಳ್ಳುವ ಮೂಲಕ ಪ್ರಗತಿ ಸ್ಟಡಿ ಸೆಂಟರ್ ನಲ್ಲಿ ಕಲಿತ ಸಾಧನೆಗೆ ಸಾಕ್ಷಿಯಾಗಿದ್ದಾನೆ. ಕಾಸರಗೋಡಿನ ನೆಟ್ಟಣಿಗೆ ಗ್ರಾಮದ ವಿಠಲರಾವ್ ಮತ್ತು ಸುನಂದ ವಿರವು ದಂಪತಿ ಪುತ್ರ  ದೀಕ್ಷಿತ್ ಎಂ. ವಿ. 2019-22 ನೇ ಸಾಲಿನಲ್ಲಿ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಬಿ.ಎ ವ್ಯಾಸಂಗವನ್ನು ಮಾಡಿದ್ದು, ಪ್ರಥಮ ಸೆಮಿಸ್ಟರ್ನಲ್ಲಿ 1 ವಿಷಯ, ಮೂರನೇ ಸೆಮಿಸ್ಟರ್ನಲ್ಲಿ 5

ಒಂದೇ ಪ್ರಯತ್ನದಲ್ಲಿ ಯುವಕನ ಸಾಧನೆಗೆ ಸಾಕ್ಷಿಯಾದ ಪ್ರಗತಿ ಸ್ಟಡಿ ಸೆಂಟರ್ Read More »

ನಂಬುವ ಮುನ್ನ ಒಮ್ಮೆ ಯೋಚಿಸಿ…!

ನಂಬಿಕೆ ಎಂಬುದು ಕನ್ನಡಿಯಂತೆ. ಒಮ್ಮೆ ಕನ್ನಡಿ ಒಡೆದರೆ ಮತ್ತೆ ಕನ್ನಡಿಯನ್ನು ಸರಿ ಪಡಿಸಲು ಸಾಧ್ಯವಿಲ್ಲ. ನಂಬಿಕೆ ಕೂಡಾ ಹಾಗೆಯೇ. ಒಬ್ಬರ ಮೇಲೆ ಹುಟ್ಟಿ ಆ ನಂಬಿಕೆಯನ್ನು ಅವರೇ ಕೆಡಿಸಿದರೆ ಮತ್ತೆ ಅವರ ಮೇಲೆ ನಂಬಿಕೆ ಹುಟ್ಟಲು ಸಾಧ್ಯವಿಲ್ಲ. ನಂಬಿಕೆ ವ್ಯಕ್ತಿಯೊಬ್ಬನ ಮೇಲೆ ಇರಿಸುವ ಯೋಗ್ಯ ಭರವಸೆಯಾಗಿದೆ. ನಂಬಿಕೆ ಯಾರ ಮೇಲೆಯೂ ಸುಮ್ಮನೆ ಬರುವುದಲ್ಲ. ಬದಲಾಗಿ ಅವರ ನಡತೆಯಿಂದ ಹುಟ್ಟುವುದು . ಆದರೆ ಈ ನಂಬಿಕೆಗೆ ಧಕ್ಕೆ ತರುವ ಕಾರ್ಯಗಳು ಕೆಲವೊಮ್ಮೆ ನಡೆಯುತ್ತದೆ. ಗೊತ್ತಾಗಿಯೂ ಗೊತ್ತಿಲ್ಲದೆಯೂ ನಡೆಯುತ್ತದೆ. ನಂಬಿಕೆ

ನಂಬುವ ಮುನ್ನ ಒಮ್ಮೆ ಯೋಚಿಸಿ…! Read More »

error: Content is protected !!
Scroll to Top