ಪುತ್ತೂರು

ಅತೀ ಹೆಚ್ಚು ಅಡಿಕೆ ಖರೀದಿ ಮಾಡಿರುವ ಸಾಧನೆಗಾಗಿ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಸವಣೂರುಗೆ ಗೌರವಾರ್ಪಣೆ

ಪುತ್ತೂರು: ಅತೀ ಹೆಚ್ಚು ಅಡಿಕೆ ಖರೀದಿ ಮಾಡಿರುವ ಸಾಧನೆಗಾಗಿ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಸವಣೂರು ಗೆ ಮಂಗಳೂರಿನ ಬೈಕಂಪಾಡಿಯಲ್ಲಿ ಸೀತಾರಾಮ ರೈ ಸವಣೂರು ರವರ ಅಧ್ಯಕ್ಷತೆಯಲ್ಲಿ ಬರುಗಿದ ಮಾನ್ ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ಗೌರವಾರ್ಪಣೆ ಮಾಡಲಾಯಿತು. ಸವಣೂರು ಮಾನ್ ಅಡಿಕೆ ಖರೀದಿ ಕೇಂದ್ರಕ್ಕೆ ಅಡಿಕೆ ಮಾರಾಟ ಮಾಡಿ ಈ ಸಾಧನೆಗೆ ಕಾರಣಕರ್ತರಾಗಿರುವ ಅಡಿಕೆ ಬೆಳೆಗಾರರ ಪರವಾಗಿ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ್ ರವರಿಗೆ ಸನ್ಮಾನಿಸಲಾಯಿತು. ಸವಣೂರು ಪ್ರಾಥಮಿಕ ಕೃಷಿ […]

ಅತೀ ಹೆಚ್ಚು ಅಡಿಕೆ ಖರೀದಿ ಮಾಡಿರುವ ಸಾಧನೆಗಾಗಿ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಸವಣೂರುಗೆ ಗೌರವಾರ್ಪಣೆ Read More »

ಶಾಂತಿಗೋಡು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಮಹಾಸಭೆ

ರೂ 153’556.21 ನಿವ್ವಳ ಲೀ ಗೇ 74 ಪೈಸೆ ಬೋನಸ್ ಶೇಕಡ 10 ಡಿವಿಡೆಂಟ್ ಪುತ್ತೂರು : ಶಾಂತಿಗೋಡು ಹಾಲು ಉತ್ಪಾದಕರ ಸಹಕಾರ ಸಂಘದ ಮಹಾಸಭೆಯು ಸೆಪ್ಟೆಂಬರ್ 16ರಂದು ಸಂಘದ ಆವರಣದಲ್ಲಿ ನಡೆಯಿತ ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಪ್ರವೀಣ್ ಶೆಟ್ಟಿ ಮಾತನಾಡಿ ಸಂಘದಲ್ಲಿ 99118.78 ಲೀ ಹಾಲು ಖರೀದಿ ಹಾಗೂ 5831.50 ಲೀ ಸ್ಥಳೀಯವಾಗಿ ಹಾಲು ಮಾರಾಟ ಮಾಡಲಾಗಿದೆ ಸಂಘವು ರೂ 3,53,479.36 ಹಾಲು ವ್ಯಾಪಾರ ಲಾಭ ರೂ 25,496.42 ಪಶುಆಹಾರ ಮತ್ತು

ಶಾಂತಿಗೋಡು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಮಹಾಸಭೆ Read More »

ಪುತ್ತೂರಿನ ಪ್ರತಿಷ್ಠಿತ ಪ್ರೇರಣಾ ಸಂಸ್ಥೆ 4ನೇ ವರುಷಕ್ಕೆ ಪಾದಾರ್ಪಣೆ

ಪುತ್ತೂರು: ಸುಮಾರು ಮೂರು ವರುಷಗಳಿಂದ ಅನೇಕ ವಿದ್ಯಾರ್ಥಿಗಳಿಗೆ NEET /CET ಸ್ಪರ್ಧಾತ್ಮಕ ತರಬೇತಿ ನೀಡುವುದರ ಜೊತೆಗೆ ಉನ್ನತ ಶಿಕ್ಷಣದ ಮಾಹಿತಿ, ಭಾಷಣ ಮತ್ತು ನಿರ್ವಹಣೆ ತರಬೇತಿ, ವಿದ್ಯಾರ್ಥಿವೇತನ ಹಾಗೂ ಇನ್ನಿತರ ಕ್ಯಾಂಪ್ ಗಳನ್ನು ಮಾಡುತ್ತ ಬಂದಿರುವ ನಗರದ ಪ್ರತಿಷ್ಠಿತ ಪ್ರೇರಣಾ ಸಂಸ್ಥೆ ನಾಲ್ಕನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಧಾರ್ಮಿಕ ವಿಧಿ ವಿಧಾನದೊಂದಿಗೆ ಲಕ್ಷ್ಮಿ ಪೂಜೆಯನ್ನು ಕೇಕಣಾಜೆ ಕೇಶವ ಭಟ್ ತಂತ್ರಿಗಳು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಪ್ರೇರಣಾ ಸಂಸ್ಥೆಯ ಅಧ್ಯಕ್ಷರಾದ ಮುರಳೀಧರ ಕೆ ಎಲ್, ಕಾರ್ಯನಿರ್ವಾಹಕ ನಿರ್ದೇಶಕಿಯಾದ

ಪುತ್ತೂರಿನ ಪ್ರತಿಷ್ಠಿತ ಪ್ರೇರಣಾ ಸಂಸ್ಥೆ 4ನೇ ವರುಷಕ್ಕೆ ಪಾದಾರ್ಪಣೆ Read More »

ತಾಲೂಕು ಮಟ್ಟದ ಸ್ವಚ್ಛತಾ ಹೀ ಸೇವಾ- ಸ್ವಚ್ಛತೆಯೇ ಸೇವೆ -2025 ಪಾಕ್ಷಿಕಕ್ಕೆ ಚಾಲನೆ | ಕಸ ಎಸೆಯುವವರ ವಿರುದ್ಧ ದಂಡ‌‌ ಪ್ರಯೋಗ: ವಿಷ್ಣು ಪ್ರಸಾದ್

ಸ್ವಚ್ಛತೆ ಎಂದಾಕ್ಷಣ ಪ್ರತೀ ಬಾರಿ ಗ್ರಾಮ ಪಂಚಾಯತ್ ನಿಂದ ರಸ್ತೆ ಬದಿ ಅಥವಾ ಸುತ್ತಮುತ್ತಲಿನ ವಾತಾವರಣದಲ್ಲಿ ಬಿದ್ದಿರುವ‌ ಕಸ ಶುಚಿಗೊಳಿಸುವುದು ಒಂದೇ ಅಲ್ಲ. ಬದಲಾಗಿ ಸ್ವಚ್ಛತೆಯ ಬಗ್ಗೆ ಅರಿವು ಮೂಡುವಂತಾಗಬೇಕು. ಅದಕ್ಕೆ ಪ್ರಸ್ತುತ ಕಸ ಸುರಿಯುವವರಿಗೆ ದಂಡ ವಿಧಿಸುವ ಮೂಲಕ ಕಾನೂನುಕ್ರಮ ಜರಗಿಸುವುದು ಒಂದೇ ಮಾರ್ಗ ಎಂದು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಗ್ರಾ.ಪಂ. ನೋಡಲ್ ಅಧಿಕಾರಿ ವಿಷ್ಣು ಪ್ರಸಾದ್ ಅಭಿಪ್ರಾಯಪಟ್ಟರು. ಅವರು ಸೆ. 17 ರಂದು ಸ್ವಚ್ಛ ಭಾರತ ಮಿಷನ್ ಗ್ರಾಮೀಣ ದಕ್ಷಿಣ ಕನ್ನಡ ಜಿಲ್ಲಾ

ತಾಲೂಕು ಮಟ್ಟದ ಸ್ವಚ್ಛತಾ ಹೀ ಸೇವಾ- ಸ್ವಚ್ಛತೆಯೇ ಸೇವೆ -2025 ಪಾಕ್ಷಿಕಕ್ಕೆ ಚಾಲನೆ | ಕಸ ಎಸೆಯುವವರ ವಿರುದ್ಧ ದಂಡ‌‌ ಪ್ರಯೋಗ: ವಿಷ್ಣು ಪ್ರಸಾದ್ Read More »

ಬಸ್‌ನಲ್ಲಿ ಯುವತಿಗೆ ಕಿರುಕುಳ ನೀಡಿದ ಅಪರಾಧಿಗೆ ಜೈಲು, ದಂಡ

ಮಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಅಪರಾಧಿಗೆ ನಗರದ ಪ್ರಧಾನ ಹಿರಿಯ ಸಿವಿಲ್ ಮತ್ತು ಎಸಿಜೆಎಂ ನ್ಯಾಯಾಲಯ ನಾಲ್ಕು ತಿಂಗಳುಗಳ ಜೈಲು ಮತ್ತು 10,000 ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಆರೋಪಿ ದಂಡ ಪಾವತಿಸಲು ತಪ್ಪಿದಲ್ಲಿ ಒಂದು ತಿಂಗಳ ಕಾಲ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ತಿಳಿಸಿದ್ದಾರೆ. 2022ರ ಏ.25ರಂದು ಸುಳ್ಯದಿಂದ ಪುತ್ತೂರಿಗೆ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಆರೋಪಿ ಮಾಡ್ನೂರು ಗ್ರಾಮದ ನಿವಾಸಿ ಸತ್ತಾರ್ ಎಂಬಾತ ತನ್ನ ಪಕ್ಕದ

ಬಸ್‌ನಲ್ಲಿ ಯುವತಿಗೆ ಕಿರುಕುಳ ನೀಡಿದ ಅಪರಾಧಿಗೆ ಜೈಲು, ದಂಡ Read More »

ಬೆಥನಿ ಆಂಗ್ಲ ಮಾಧ್ಯಮ ಪ್ರೌಢಶಾಲಾ ಬಾಲಕಿಯರ ಕಬಡ್ಡಿ ತಂಡ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆ

ಪುತ್ತೂರು: ದರ್ಬೆಯ ಪಾಂಗ್ಲಾಯ್‌ನಲ್ಲಿರುವ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ಬಾಲಕಿಯರ ಕಬಡ್ಡಿ ತಂಡ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ. ಕರ್ನಾಟಕ ಸರಕಾರ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ ಹಾಗೂ ಪಿ.ಎಂ. ಶ್ರೀ. ಪ್ರೌಢಶಾಲೆ ಬಂಟ್ವಾಳ ನೇತೃತ್ವದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ 14 ರ ವಯೋಮಾನದ ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ಬೆಥನಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಇಲ್ಲಿನ ಬಾಲಕಿಯರ ತಂಡವು ಪ್ರಥಮ ಸ್ಥಾನದೊಂದಿಗೆ ಸತತ 5 ನೇ ಬಾರಿಗೆ ಮೈಸೂರು ವಿಭಾಗ

ಬೆಥನಿ ಆಂಗ್ಲ ಮಾಧ್ಯಮ ಪ್ರೌಢಶಾಲಾ ಬಾಲಕಿಯರ ಕಬಡ್ಡಿ ತಂಡ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆ Read More »

ಅಕ್ಷಯ  ಕಾಲೇಜಿನಲ್ಲಿ  ” ಗ್ಲಿಟ್ಟರ್ಸ್ ” ಫ್ರೆಶರ್ಸ್   ಡೇ        

ಪುತ್ತೂರು:  ಅಕ್ಷಯ ಎಜುಕೇಶನಲ್  ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ   2025- 2026 ನೇ ಶೈಕ್ಷಣಿಕ ಸಾಲಿಗೆ ಪ್ರವೇಶ ಪಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಫ್ರೆಶರ್ಸ್ ಡೇ   “ಗ್ಲಿಟ್ಟರ್ಸ್ ”  ನ್ನು  ಸಂಸ್ಥೆಯ   ದ್ವಿತೀಯ ಮತ್ತು  ತೃತೀಯ    ವರ್ಷದ  ವಿದ್ಯಾರ್ಥಿಗಳು  ಕಾಲೇಜಿನ  ವಿದ್ಯಾರ್ಥಿ ಒಕ್ಕೂಟದ  ಮೂಲಕ  ಮತ್ತು   ಐ.ಕ್ಯೂ.ಎ.ಸಿ  ಸಹಭಾಗಿತ್ವದಲ್ಲಿ  ಆಯೋಜಿಸಿದರು. ಕಾಣಿಯೂರು ಪ್ರಗತಿ ವಿದ್ಯಾ ಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೊಡಿ  ದೀಪ ಬೆಳಗಿಸುವುದರ  ಮೂಲಕ ಉದ್ಘಾಟಿಸಿ, ನಗರ ಪ್ರದೇಶದಲ್ಲಿ  ಪ್ರಚಲಿತವಿರುವ

ಅಕ್ಷಯ  ಕಾಲೇಜಿನಲ್ಲಿ  ” ಗ್ಲಿಟ್ಟರ್ಸ್ ” ಫ್ರೆಶರ್ಸ್   ಡೇ         Read More »

ಸೆ.23 ಪೌರ ಕಾರ್ಮಿಕರ ದಿನಾಚರಣೆ | ನಗರಸಭೆ ಸದಸ್ಯರು, ಸಿಬ್ಬಂದಿಗಳು, ಪೌರ ಕಾರ್ಮಿಕರಿಗೆ ಕ್ರೀಡಾಕೂಟ

ಪುತ್ತೂರು: ಸೆ.23 ರಂದು ನಡೆಯಲಿರುವ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಪುತ್ತೂರು ಪೌರ ಕಾರ್ಮಿಕರಿಗೆ ಕ್ರೀಡಾಕೂಟ ಭಾನುವಾರ ಮಂಜಲ್ಪಡ್ಪು ಸುದಾನ ವಸತಿಯುತ ಶಾಲಾ ಕ್ರೀಡಾಂಗಣದಲ್ಲಿ ನಡೆಯಿತು. ನಗರಸಭೆಯ ಸದಸ್ಯರು, ಸಿಬ್ಬಂದಿಗಳು ಹಾಗೂ ಪೌರ ಕಾರ್ಮಿಕರು ಕೆಲಸದ ಒತ್ತಡವನ್ನು ಬದಿಗೊತ್ತಿ ಭಾನುವಾರ ಕ್ರೀಡಾ ಕೂಟದಲ್ಲಿ ತಮ್ಮನ್ನು ಉತ್ಸಾಹದಿಂದ ತೊಡಗಿಸಿಕೊಂಡರು. ನಗರಸಭಾ ಸದಸ್ಯರಿಗೆ ಸಂಗೀತ ಕುರ್ಚಿ, ಪಾಸಿಂಗ್ ಬಾಲ್, ವೇಗ ನಡಿಗೆ, ಸದಸ್ಯರ ೫ ವರ್ಷದೊಳಗಿನ ಮಕ್ಕಳಿಗೆ ಪಾಸಿಂಗ್ ಬಾಲ್, ಓಟ, ಬಕೆಟ್ ಗೆ ಬಾಲ್ ಹಾಕುವುದು, 10 ವರ್ಷದೊಳಗಿನ

ಸೆ.23 ಪೌರ ಕಾರ್ಮಿಕರ ದಿನಾಚರಣೆ | ನಗರಸಭೆ ಸದಸ್ಯರು, ಸಿಬ್ಬಂದಿಗಳು, ಪೌರ ಕಾರ್ಮಿಕರಿಗೆ ಕ್ರೀಡಾಕೂಟ Read More »

ವಿಶ್ವ ಹಿಂದೂ ಪರಿಷತ್‍, ಬಜರಂಗದಳ ತಿಂಗಳಾಡಿ ಘಟಕದಿಂದ ರಕ್ತದಾನ ಶಿಬಿರ

ತಿಂಗಳಾಡಿ: ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ಗ್ರಾಮಾಂತರ ಪ್ರಖಂಡ ವೀರಾಂಜನೇಯ ಘಟಕ ತಿಂಗಳಾಡಿ ವತಿಯಿಂದ ರಕ್ತದಾನ ಶಿಬಿರ ಭಾನುವಾರ ಪುತ್ತೂರು ಬ್ಲಡ್‍ ಬ್ಯಾಂಕ್‍ ನಲ್ಲಿ ನಡೆಯಿತು. ತಿಂಗಳಾಡಿ ಘಟಕದ ಕಾರ್ಯಕರ್ತ ದಿ. ಕೀರ್ತನ್ ಗೌಡ ಎರಕ್ಕಳ ಅವರ ಸ್ಮರಣಾರ್ಥವಾಗಿ ನಡೆದ ರಕ್ತದಾನ ಶಿಬಿರದಲ್ಲಿ ಒಟ್ಟು 20 ಮಂದಿ ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್‍, ಬಜರಂಗದಳ ಪ್ರಮುಖರು, ಕಾರ್ಯಕರ್ತರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಶ್ವ ಹಿಂದೂ ಪರಿಷತ್‍, ಬಜರಂಗದಳ ತಿಂಗಳಾಡಿ ಘಟಕದಿಂದ ರಕ್ತದಾನ ಶಿಬಿರ Read More »

ಅ.20 : ರೈ ಎಸ್ಟೇಟ್ ಎಜುಕೇಶನಲ್ ಆಂಡ್ ಚಾರಿಟೇಬಲ್‌ ಟ್ರಸ್ಟ್ ನಿಂದ ದೀಪಾವಳಿ ಕಾರ್ಯಕ್ರಮ “ ಅಶೋಕ ಜನಮನ” | ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಉದ್ಘಾಟನೆ

ಪುತ್ತೂರು: ಅಕ್ಟೋಬರ್ 20 ರಂದು ರೈ ಎಸ್ಟೇಟ್ ಎಜುಕೇಶನಲ್ ಆಂಡ್ ಚಾರಿಟೇಬಲ್‌ ಟ್ರಸ್ಟ್ ವತಿಯಿಂದ ನಡೆಯುವ ದೀಪಾವಳಿ ಕಾರ್ಯಕ್ರಮ “ ಅಶೋಕ ಜನಮನ” ವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಲಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷ, ಶಾಸಕ ಅಶೋಕ್ ರೈ ತಿಳಿಸಿದರು. ಶಾಸಕರ ಕಚೇರಿ ಸಭಾಂಗಣದಲ್ಲಿ ನಡೆದ ಟ್ರಸ್ಟ್ ಸಭೆಯಲ್ಲಿ ಮಾತನಾಡಿದ ಅವರು, ಈ ಬಾರಿಯ ಕಾರ್ಯಕ್ರಮಕ್ಕೆ ಸುಮಾರು ಒಂದು ಲಕ್ಷಕ್ಕೂ ಮಿಕ್ಕಿ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆ ಇದ್ದು ಪ್ರತೀ ವರ್ಷದಂತೆ ಈ ಬಾರಿಯೂ ವಸ್ತ್ರದ ಜೊತೆ ಗಿಫ್ಟ್ ಉಡುಗೋರೆಯಾಗಿ

ಅ.20 : ರೈ ಎಸ್ಟೇಟ್ ಎಜುಕೇಶನಲ್ ಆಂಡ್ ಚಾರಿಟೇಬಲ್‌ ಟ್ರಸ್ಟ್ ನಿಂದ ದೀಪಾವಳಿ ಕಾರ್ಯಕ್ರಮ “ ಅಶೋಕ ಜನಮನ” | ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಉದ್ಘಾಟನೆ Read More »

error: Content is protected !!
Scroll to Top