ದೇಶ

ಮೊದಲ ಟಿ20 ಪಂದ್ಯದಲ್ಲಿ ಭರ್ಜರಿಯಾಗಿ ಗೆದ್ದ ಭಾರತ

ಅಭಿಷೇಕ್‌ ಶರ್ಮಾ, ರಿಂಕು ಸಿಂಗ್‌ ಸಿಡಿಲಬ್ಬರದ ಬ್ಯಾಟಿಂಗ್‌ ನಾಗಪುರ: ನ್ಯೂಜಿಲೇಂಡ್‌ ವಿರುದ್ಧದ ಮೂರು ದಿನಗಳ ಏಕದಿನಸರಣಿಯನ್ನು ಕಳೆದುಕೊಂಡಿರುವ ಟೀಂ ಇಂಡಿಯಾ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಅಭಿಷೇಕ್‌ ಶರ್ಮಾ ಮತ್ತು ರಿಂಕು ಸಿಂಗ್‌ ಅವರ ಸ್ಫೋಟಕ ಆಟದಿಂದ 48 ರನ್‌ಗಳಿಂದ ಗೆದ್ದುಕೊಂಡಿದೆ. ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ​​ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 239 ರನ್‌ಗಳ ಕಠಿಣ ಗುರಿ ಪಡೆದ ನ್ಯೂಜಿಲೆಂಡ್‌ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 190 ರನ್‌ ಹೊಡೆದು ಸೋಲು […]

ಮೊದಲ ಟಿ20 ಪಂದ್ಯದಲ್ಲಿ ಭರ್ಜರಿಯಾಗಿ ಗೆದ್ದ ಭಾರತ Read More »

ನಿವೃತ್ತಿ ಜೀವನಕ್ಕೆ ಸಾಧಕಿ ಗಗನಯಾತ್ರಿ ಸುನಿತಾ ವಿಲಿಯಮ್ಸ್

ನವದೆಹಲಿ: ಅಸಂಖ್ಯಾತ ದಾಖಲೆಗಳನ್ನು ಬಾಹ್ಯಾಕಾಶ ಕ್ಷೇತ್ರದಲ್ಲಿ ಬರೆದ ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರು ತಮ್ಮ 27 ವರ್ಷಗಳ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಡಿ. 27, 2025 ರಂದು ಅವರು ನಿವೃತ್ತರಾಗಿರುವುದಾಗಿ ನಾಸಾ ಘೋಷಿಸಿದೆ. ಸುನೀತಾ ಅವರ ಕೊನೆಯ ಬಾಹ್ಯಾಕಾಶ ಯಾನವು ಅತ್ಯಂತ ರೋಚಕವಾಗಿತ್ತು. ಕೇವಲ 10 ದಿನಗಳ ಮಿಷನ್ ಎಂದು ಜೂನ್ 2024ರಲ್ಲಿ ಬೋಯಿಂಗ್ ಸ್ಟಾರ್‌ಲೈನರ್ ಮೂಲಕ ತೆರಳಿದ್ದ ಅವರು, ತಾಂತ್ರಿಕ ಕಾರಣಗಳಿಂದಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಬರೋಬ್ಬರಿ ಒಂಬತ್ತುವರೆ ತಿಂಗಳುಗಳ

ನಿವೃತ್ತಿ ಜೀವನಕ್ಕೆ ಸಾಧಕಿ ಗಗನಯಾತ್ರಿ ಸುನಿತಾ ವಿಲಿಯಮ್ಸ್ Read More »

ಅಯೋಧ್ಯೆಯ ರಾಮ ಕಥಾ ವಸ್ತು ಸಂಗ್ರಹಾಲಯಕ್ಕೆ ರಾಮಾಯಣದ ಪುರಾತನ ಸಂಸ್ಕೃತ ಹಸ್ತಪ್ರತಿ

ನವದೆಹಲಿ: ಅಯೋಧ್ಯೆಯ ರಾಮ ಕಥಾ ವಸ್ತು ಸಂಗ್ರಹಾಲಯಕ್ಕೆ ಉಡುಗೊರೆಯಾಗಿ ರಾಮಾಯಣದ 233 ವರುಷಗಳಷ್ಟು ಹಳೆಯದಾದ‌ ಬಲು ಅಪರೂಪದ ಸಂಸ್ಕೃತ ಹಸ್ತಪ್ರತಿಯನ್ನು ಉಡುಗೊರೆಯಾಗಿ ನೀಡಲಾಗಿದೆ ಎಂದು ಕೇಂದ್ರ ಸಾಂಸ್ಕೃತಿಕ ಸಚಿವಾಲಯ ಮಾಹಿತಿ ನೀಡಿದೆ. ಕೇಂದ್ರ ಸಂಸ್ಕೃತ ವಿದ್ಯಾಲಯದ ಕುಲಪತಿ ಶ್ರೀನಿವಾಸ ವರಖೇಡಿ ಅವರು ಈ ಕೃತಿಯನ್ನು ಪ್ರಧಾನ ಮಂತ್ರಿಗಳ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯದ ಕಾರ್ಯಕಾರಿ ಮಂಡಳಿ ಅಧ್ಯಕ್ವ ನೃಪೇಂದ್ರ ಮಿಶ್ರಾ ಅವರಿಗೆ ಹಸ್ತಾಂತರ ಮಾಡಿದ್ದಾರೆ. ಈ ಹಸ್ತಪ್ರತಿಯು ಕ್ರಿ. ಶ. 1792 ಕ್ಕೆ ಸೇರಿದ್ದಾಗಿದೆ. ಆದಿಕವಿ ವಾಲ್ಮೀಕಿ

ಅಯೋಧ್ಯೆಯ ರಾಮ ಕಥಾ ವಸ್ತು ಸಂಗ್ರಹಾಲಯಕ್ಕೆ ರಾಮಾಯಣದ ಪುರಾತನ ಸಂಸ್ಕೃತ ಹಸ್ತಪ್ರತಿ Read More »

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್‌ ನಬಿನ್‌ ಅವಿರೋಧ ಆಯ್ಕೆ

ಕಿರಿಯ ವಯಸ್ಸಿನ ಮುಖಂಡನಿಗೆ ದೇಶದ ಅತಿದೊಡ್ಡ ಪಕ್ಷವನ್ನು ಮುನ್ನಡೆಸುವ ಹೊಣೆ ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ ಮತ್ತು ಚುನಾವಣಾಧಿಕಾರಿ ಕೆ.ಲಕ್ಷ್ಮಣ್ ಸೋಮವಾರ ಪ್ರಕಟಿಸಿದ್ದಾರೆ. ಇತ್ತೀಚಿಗಷ್ಟೇ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಬಿಹಾರd ಬಿಜೆಪಿ ಶಾಸಕ ನಿತಿನ್ ನಬಿನ್ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹುದ್ದೆಗೆ ನಿನ್ನೆ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಬಿನ್ ಅವರ ಪರವಾಗಿ 37 ಸೆಟ್ ನಾಮಪತ್ರಗಳು ಸಲ್ಲಿಕೆಯಾಗಿದ್ದವು ಮತ್ತು ಎಲ್ಲ ನಾಮಪತ್ರಗಳು

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್‌ ನಬಿನ್‌ ಅವಿರೋಧ ಆಯ್ಕೆ Read More »

ಲಿವ್ ಇನ್ ಪಾರ್ಟ್ನರ್‌ನನ್ನು ಕೊಂದು, ಸುಟ್ಟು, ಭಸ್ಮವನ್ನು ನದಿಗೆಸೆದ ಆರೋಪಿ ಪೊಲೀಸರ ಅತಿಥಿ

ಲಕ್ನೋ: ನಿವೃತ್ತ ರೈಲ್ವೆ ಉದ್ಯೋಗಿಯೊಬ್ಬ ತನ್ನ ಲಿವ್ ಇನ್ ಪಾರ್ಟ್ನರ್ ಅನ್ನು ಹತ್ಯೆ ಮಾಡಿ, ಆಕೆಯ ಶವವನ್ನು ಸುಟ್ಟು, ಸಾಕ್ಷ್ಯ ನಾಶದ ಉದ್ದೇಶದಿಂದ ಚಿತಾ ಭಸ್ಮವನ್ನು ನದಿಗೆಸೆದ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ. ಆರೋಪಿ ರಾಮ್ ಸಿಂಗ್ ಸದ್ಯ ಪೊಲೀಸರ ವಶದಲ್ಲಿದ್ದಾನೆ. ಈಗಾಗಲೇ ಇಬ್ಬರು ಪತ್ನಿಯರನ್ನು ಹೊಂದಿರುವ ಈ ಭೂಪ, ಮತ್ತೊಬ್ಬಳ ಜೊತೆಗೆ ಲಿವ್ ಇನ್ ಸಂಬಂಧ ಇಟ್ಟುಕೊಂಡಿದ್ದ. ಆಕೆಯ ಜೊತೆಗೆ ಹಣದ ವಿಚಾರವಾಗಿ ಜಗಳ ನಡೆದಿದ್ದು, ಆತ ಆಕೆಯನ್ನು ಕೊಲೆ ಮಾಡಿದ್ದ. ಬಳಿಕ ಶವವನ್ನು

ಲಿವ್ ಇನ್ ಪಾರ್ಟ್ನರ್‌ನನ್ನು ಕೊಂದು, ಸುಟ್ಟು, ಭಸ್ಮವನ್ನು ನದಿಗೆಸೆದ ಆರೋಪಿ ಪೊಲೀಸರ ಅತಿಥಿ Read More »

ಮಣಿಕರ್ಣಿಕಾ ಘಾಟ್ ನವೀಕರಣದ ಬಗ್ಗೆ ಸಿಎಂ ಆದಿತ್ಯನಾಥ್ ಹೇಳಿದ್ದೇನು?

ಲಕ್ನೋ: ವಾರಣಾಸಿಯಲ್ಲಿ ಯಾವುದೇ ರೀತಿಯ ದೇವಾಲಯವನ್ನಾಗಲಿ, ಐತಿಹಾಸಿಕ ಪ್ರತಿಮೆಯನ್ನಾಗಲಿ ಕೆಡವಿಲ್ಲ. ಕಾಶಿಯ ಗೌರವವನ್ನು ಹಾಳು ಮಾಡುವ ಉದ್ದೇಶದಿಂದ ಕಾಂಗ್ರೆಸ್ ವಿವಾದ ಸೃಷ್ಟಿ ಮಾಡುತ್ತಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಅವರು ತಿಳಿಸಿದ್ದಾರೆ. ಮಣಿಕರ್ಣಿಕಾ ಘಾಟ್ ನವೀಕರಣಕ್ಕೆ ಸಂಬಂಧಿಸಿದ ಹಾಗೆ ಎದ್ದಿರುವ ಪ್ರಶ್ನೆಗಳಿಗೆ ಅವರು ಸ್ಪಷ್ಟನೆ ‌ನೀಡಿರುವುದಾಗಿದೆ. ಘಾಟ್ ಅಭಿವೃದ್ಧಿ ಸಮಯದಲ್ಲಿ ಮರಾಠಾ ರಾಣಿ ಅಹಲ್ಯಾ ಬಾಯಿ ಹೋಳ್ಕರ್ ಪ್ರತಿಮೆಯನ್ನು ಧ್ವಂಸ ಮಾಡಲಾಗಿದೆ ಎಂಬ ಆರೋಪದ ಸುಳ್ಳು. ಆ ವಿಡಿಯೋವನ್ನು AI ಕೃತಕ ಬುದ್ಧಿಮತ್ತೆ ಆಧರಿಸಿ ಮಾಡಲಾಗಿದೆ. ಪ್ರತಿಮೆ

ಮಣಿಕರ್ಣಿಕಾ ಘಾಟ್ ನವೀಕರಣದ ಬಗ್ಗೆ ಸಿಎಂ ಆದಿತ್ಯನಾಥ್ ಹೇಳಿದ್ದೇನು? Read More »

ಉಗ್ರರ ಜೊತೆ ಭದ್ರತಾ ಪಡೆಯ ಭೀಕರ ಕಾಳಗ : 8 ಯೋಧರಿಗೆ ಗಾಯ

ಅಡಗಿ ಕುಳಿತ ಉಗ್ರರನ್ನು ಹೊರಗೆಳೆಯಲು ಕಾರ್ಯಾಚರಣೆ ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಸಿಂಗ್‌ಪೋರಾ ಪ್ರದೇಶದಲ್ಲಿ ಭಾರತೀಯ ಸೇನಾಪಡೆ ಎನ್ಕೌಂಟರ್ ಆರಂಭಿಸಿದ್ದು, ಸ್ಥಳದಲ್ಲಿ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ಭಾರಿ ಗುಂಡಿನ ಚಕಮಕಿ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಸ್ಥಳದಲ್ಲಿ ಪಾಕಿಸ್ತಾನದ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಮೂವರು ಭಯೋತ್ಪಾದಕರು ಅಡಗಿ ಕುಳಿತಿದ್ದು, ಉಗ್ರರನ್ನು ಭದ್ರತಾ ಪಡೆಗಳು ಸುತ್ತುವರಿದು ಕಾರ್ಯಾಚರಣೆ ನಡೆಸುತ್ತಿವೆ. ಈ ನಡುವೆ ಯೋಧರ ಮೇಲೆ ಉಗ್ರರು ಗ್ರೆನೇಡ್‌ಗಳನ್ನು ಎಸೆದಿದ್ದು, ಪರಿಣಾಮ 8 ಮಂದಿ ಸೈನಿಕರು

ಉಗ್ರರ ಜೊತೆ ಭದ್ರತಾ ಪಡೆಯ ಭೀಕರ ಕಾಳಗ : 8 ಯೋಧರಿಗೆ ಗಾಯ Read More »

ಭಾರತದಲ್ಲಿ ಮೊದಲ ಬಾರಿ ಏಕದಿನ ಸರಣಿ ಗೆದ್ದ ನ್ಯೂಜಿಲೆಂಡ್‌

ಕೊಹ್ಲಿಯ ಶತಕ ವ್ಯರ್ಥ; 41 ರನ್‌ಗಳಿಂದ ಸೋತ ಟೀಂ ಇಂಡಿಯಾ ಇಂದೋರ್‌: ಇಂದೋರ್‌ನ ಹೋಳ್ಕರ್‌ ಸ್ಟೇಡಿಯಂನಲ್ಲಿ ನಡೆದ 3ನೇ ತಥಾ ಕೊನೆಯ ಏಕದಿನ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್‌ ವಿರುದ್ಧ 41 ರನ್‌ಗಳ ಸೋಲು ಕಂಡು ಸರಣಿಯನ್ನು ಕಿವೀಸ್‌ಗೆ ಒಪ್ಪಿಸಿದೆ. ಭಾರತದ ನೆಲದಲ್ಲಿ ಮತ್ತೊಮ್ಮೆ ಇತಿಹಾಸ ನಿರ್ಮಿಸಿರುವ ನ್ಯೂಜಿಲೆಂಡ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ಇದೀಗ ಮೊದಲ ಬಾರಿಗೆ ಭಾರತೀಯ ನೆಲದಲ್ಲಿ ಏಕದಿನ ಸರಣಿಯನ್ನು ಗೆದ್ದಿದೆ. ಡ್ಯಾರಿಲ್ ಮಿಶೆಲ್ ಅವರ ಸತತ ಎರಡನೇ ಶತಕ ಮತ್ತು

ಭಾರತದಲ್ಲಿ ಮೊದಲ ಬಾರಿ ಏಕದಿನ ಸರಣಿ ಗೆದ್ದ ನ್ಯೂಜಿಲೆಂಡ್‌ Read More »

ನಿಮ್ಮಂತಹ ಪೂರ್ವಾಗ್ರಹ ಪೀಡಿತ, ದ್ವೇಷಪೂರಿತ ವ್ಯಕ್ತಿಯನ್ನು ನೋಡಿಲ್ಲ : ಎ.ಆರ್‌.ರೆಹಮಾನ್‌ಗೆ ಕಂಗನಾ ತಿರುಗೇಟು

ಬಾಲಿವುಡ್‌ನಲ್ಲಿ ಕೋಮುವಾದ ಇದೆ ಎಂದಿದ್ದ ಎ.ಆರ್‌.ರೆಹಮಾನ್‌ ಮುಂಬೈ: ಬಾಲಿವುಡ್‌ ಕೋಮುವಾದದತ್ತ ವಾಲಿರುವುದರಿಂದ ನನಗೆ ಎಂಟು ವರ್ಷಗಳಿಂದ ಹಿಂದಿ ಚಿತ್ರಗಳಲ್ಲಿ ಕೆಲಸ ಮಾಡಲು ಅವಕಾಶ ಸಿಗುತ್ತಿಲ್ಲ ಎಂದಿದ್ದ ಸಂಗೀತ ನಿರ್ದೇಶಕ ಎ.ಆರ್‌.ರೆಹಮಾನ್‌ ಅವರನ್ನು ನಟಿ ಹಾಗೂ ಸಂಸದೆ ಕಂಗನಾ ರಣಾವತ್‌ ಟೀಕಿಸಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಇತ್ತೀಚಿನ ಸಂದರ್ಶನವೊಂದರಲ್ಲಿ ಸಂಗೀತ ಉದ್ಯಮದ ಬದಲಾಗುತ್ತಿರುವ ಮುಖ ಮತ್ತು ಅದರೊಳಗಿನ ಧಾರ್ಮಿಕ ಪ್ರಭಾವಗಳ ಬಗ್ಗೆ ಮಾತನಾಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಚಿತ್ರೋದ್ಯಮದಲ್ಲಿ ಕೋಮುವಾದ ಹೆಚ್ಚಾಗಿದೆ ಎಂದು ರೆಹಮಾನ್

ನಿಮ್ಮಂತಹ ಪೂರ್ವಾಗ್ರಹ ಪೀಡಿತ, ದ್ವೇಷಪೂರಿತ ವ್ಯಕ್ತಿಯನ್ನು ನೋಡಿಲ್ಲ : ಎ.ಆರ್‌.ರೆಹಮಾನ್‌ಗೆ ಕಂಗನಾ ತಿರುಗೇಟು Read More »

ಫಾರಂ ಮಾಲೀಕರ ಮುಷ್ಕರದಿಂದಾಗಿ ಕೋಳಿ ಮಾಂಸ ಬೆಲೆ ತೀವ್ರ ಏರಿಕೆ

ಎರಡು ವಾರದಲ್ಲಿ ಕೆಜಿಗೆ 100 ರೂ. ಏರಿಕೆ ಕಂಡ ಕೋಳಿ ಬೆಲೆ ಬೆಂಗಳೂರು : ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಕೋಳಿ ಮಾಂಸ ಬೆಲೆ ತೀವ್ರವಾಗಿ ಏರಿಕೆಯಾಗಲು ತಮಿಳುನಾಡಿನಲ್ಲಿ ಕೋಳಿ ಫಾರಂ ಮಾಲೀಕರು ಮುಷ್ಕರ ಹೂಡಿರುವುದೇ ಕಾರಣ. ತಮಿಳುನಾಡಿನ ಕೋಳಿ ಸಾಕಾಣಿಕೆದಾರರು ಖಾಸಗಿ ಕಂಪನಿಗಳು ನೀಡುತ್ತಿರುವ ಕಡಿಮೆ ಸಾಕಾಣಿಕೆ ದರದ ವಿರುದ್ಧ ಸಿಡಿದೆದ್ದಿದ್ದು ಜನವರಿ 1ರಿಂದ ಉತ್ಪಾದನೆಯನ್ನು ಸ್ಥಗಿತಗೊಳಿಸಿ ಮುಷ್ಕರ ನಡೆಸುತ್ತಿದ್ದಾರೆ. ಬ್ರಾಯ್ಲರ್ ಕೋಳಿಗಳಿಗೆ ಪ್ರಸ್ತುತ ನೀಡುತ್ತಿರುವ 6.5 ರೂ. ದರವನ್ನು 20 ರೂ.ಗೆ ಹೆಚ್ಚಿಸಬೇಕು ಎಂಬುದು

ಫಾರಂ ಮಾಲೀಕರ ಮುಷ್ಕರದಿಂದಾಗಿ ಕೋಳಿ ಮಾಂಸ ಬೆಲೆ ತೀವ್ರ ಏರಿಕೆ Read More »

error: Content is protected !!
Scroll to Top