ದೇಶ

ಹಳೆ ಪಿಂಚಣಿ ವ್ಯವಸ್ಥೆಗೆ ಒತ್ತಾಯಿಸಿ ರ್‍ಯಾಲಿ | ರ್‍ಯಾಲಿಯಲ್ಲಿ ಭಾಗವಹಿಸದಂತೆ ಕೇಂದ್ರ ಸರಕಾರ ಎಚ್ಚರಿಕೆ

ದೆಹಲಿ: ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ತರುವಂತೆ ಒತ್ತಾಯಿಸಿ ನವದೆಹಲಿಯಲ್ಲಿ ಸರಕಾರಿ ನೌಕರರು ನಡೆಸುವ ರ್‍ಯಾಲಿ ಯಲ್ಲಿ ಸರಕಾರಿ ನೌಕರರು ಭಾಗವಹಿಸದಂತೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಪ್ರತಿಭಟನೆ ಸೇರಿದಂತೆ ಯಾವುದೇ ರೀತಿಯ ಮುಷ್ಕರದಲ್ಲಿ ಭಾಗಿಯಾದರೆ ಆ ನೌಕರರು ಮುಂದಿನ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಇದು ವೇತನ ಕಡಿತದ ಜೊತೆಗೆ, ಸೂಕ್ತ ಶಿಸ್ತು ಕ್ರಮವನ್ನು ಒಳಗೊಂಡಿರುತ್ತದೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ. ಹಳೆಯ ಪಿಂಚಣಿ ಯೋಜನೆ ಮರುಸ್ಥಾಪನೆಗಾಗಿ ಜಂಟಿ ವೇದಿಕೆ ಮತ್ತು ರಾಷ್ಟ್ರೀಯ […]

ಹಳೆ ಪಿಂಚಣಿ ವ್ಯವಸ್ಥೆಗೆ ಒತ್ತಾಯಿಸಿ ರ್‍ಯಾಲಿ | ರ್‍ಯಾಲಿಯಲ್ಲಿ ಭಾಗವಹಿಸದಂತೆ ಕೇಂದ್ರ ಸರಕಾರ ಎಚ್ಚರಿಕೆ Read More »

ಚಂದ್ರನ ಕಕ್ಷೆ ಸೇರಿದ ಚಂದ್ರಯಾನ ಗಗನ ನೌಕೆ | ಟ್ವಿಟರ್ ಖಾತೆಯಲ್ಲಿ  ಹಂಚಿಕೊಂಡ ಚಂದ್ರಯಾನ್-3 ಮಿಷನ್

ದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಚಂದ್ರಯಾನ-3 ನೌಕೆ ವೀಕ್ಷಿಸಿದ ಚಂದ್ರನ ಮೊದಲ ವೀಡಿಯೋ ತುಣುಕನ್ನು ಹಂಚಿಕೊಂಡಿದೆ. ಚಂದ್ರಯಾನ-3 ಗಗನ ನೌಕೆಯು ಭೂಮಿಯಿಂದ ಹಾರಿ 22 ದಿನಗಳ ಬಳಿಕ ಶನಿವಾರ ಚಂದ್ರನ ಕಕ್ಷೆ ಸೇರಿದ ನಂತರ ಚಿತ್ರಗಳನ್ನು ಸೆರೆಹಿಡಿದಿದೆ. ಈ ಕುರಿತ ವೀಡಿಯೋ ತುಣುಕನ್ನು ಚಂದ್ರಯಾನ್-3 ಮಿಷನ್ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಮೂನ್ ಮಿಷನ್ ಕಾರ್ಯಾಚರಣೆ ಇಲ್ಲಿಯವರೆಗೆ ಸುಗಮವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಆಗಸ್ಟ್ 23 ರಂದು ವಿಕ್ರಮ ಲ್ಯಾಂಡರ್ ಚಂದ್ರನ ಮೇಲೆ ಲ್ಯಾಂಡ್ ಆಗಲಿದೆ. ಚಂದ್ರಯಾನ-3

ಚಂದ್ರನ ಕಕ್ಷೆ ಸೇರಿದ ಚಂದ್ರಯಾನ ಗಗನ ನೌಕೆ | ಟ್ವಿಟರ್ ಖಾತೆಯಲ್ಲಿ  ಹಂಚಿಕೊಂಡ ಚಂದ್ರಯಾನ್-3 ಮಿಷನ್ Read More »

ಮಣಿಪುರದಲ್ಲಿ ಮತ್ತೆ ಹಿಂಸಾಚಾರ | ಗುಂಡಿನ ದಾಳಿಗೆ ಮೂವರು ಮೃತ್ಯು

ಇಂಫಾಲ್ : ಸ್ವಲ್ಪ ಮಟ್ಟಿಗೆ ಶಾಂತವಾಗಿದ್ದ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಶನಿವಾರ ಮುಂಜಾನೆ ಶಂಕಿತ ವ್ಯಕ್ತಿಗಳು ಬಿಷ್ಣುಪುರದ ಕ್ವಾಕ್ಕಾ ಬಳಿಯ ಉಖಾ ತಂಪಕ್ ಗ್ರಾಮದ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ ಪರಿಣಾಮ ತಂದೆ-ಮಗ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ದಾಳಿಕೋರರು ಕೇಂದ್ರ ಭದ್ರತಾ ಪಡೆಯ ನಿಯಂತ್ರಣಲ್ಲಿರುವ ಬೆಟ್ಟ-ಕಣಿವೆಗಳ ನಡುವಿನ ಬಫರ್ ವಲಯದಿಂದ ಕದ್ದುಮುಚ್ಚಿ ಬರುತ್ತಿದ್ದಾರೆ ಎನ್ನಲಾಗಿದ್ದು, ಅಲ್ಲಿಯ ಜನರ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮಣಿಪುರದಲ್ಲಿ ಮತ್ತೆ ಹಿಂಸಾಚಾರ | ಗುಂಡಿನ ದಾಳಿಗೆ ಮೂವರು ಮೃತ್ಯು Read More »

ಪ್ರಧಾನಿ ಭೇಟಿ ಮಾಡಿದ ಸಿ.ಎಂ.ಸಿದ್ಧರಾಮಯ್ಯ : ಅಂಬಾರಿ ನೀಡಿ ಸನ್ಮಾನ

ಪುತ್ತೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಗುರುವಾರ ಭೇಟಿ ಮಾಡಿ ಮಾತುಕತೆ ನಡೆಸಿದರು. ದೆಹಲಿ ಸಂಸತ್ ಭವನಕ್ಕೆ ಭೇಟಿ ನೀಡಿದ ಹಿನ್ನಲೆಯಲ್ಲಿ ಅವರು ಪ್ರಧಾನಿಯವರನ್ನು ಭೇಟಿ ಮಾಡಿ ಮೋದಿಯವರಿಗೆ ಗಂಧದ ಹಾರ ಹಾಕಿ, ಮೈಸೂರು ಪೇಟ ಧರಿಸಿ, ಅಂಬಾರಿ ಕೊಟ್ಟು ಸನ್ಮಾನಿಸಿದರು. ಎರಡನೇ ಬಾರಿ ಮುಖ್ಯಮಂತ್ರಿಯಾದ ಬಳಿಕ ಸಿದ್ಧರಾಮಯ್ಯ ಪ್ರಥಮ ಬಾರಿಗೆ ಪ್ರಧಾನಿಯವರನ್ನು ಭೇಟಿ ಮಾಡಿದರು. ವಿವಿಧ ಯೋಜನೆಗಳಡಿ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಬಾಕಿ ಅನುದಾನ ಬಿಡುಗಡೆ ಕುರಿತು ಮೋದಿಯವರ ಬಳಿ ಚರ್ಚೆ

ಪ್ರಧಾನಿ ಭೇಟಿ ಮಾಡಿದ ಸಿ.ಎಂ.ಸಿದ್ಧರಾಮಯ್ಯ : ಅಂಬಾರಿ ನೀಡಿ ಸನ್ಮಾನ Read More »

ದೇಶದ ಎಲ್ಲಾ ಶಾಲೆಗಳಲ್ಲಿ ಸಿಬಿಎಸ್‍ಇ ಪಠ್ಯಕ್ರಮ : ಪ್ರಧಾನಿ ಮೋದಿ

ನವದೆಹಲಿ: ಮುಂಬರುವ ದಿನಗಳಲ್ಲಿ ದೇಶದ ಎಲ್ಲಾ ಶಾಲೆಗಳಲ್ಲಿ ಸಿಬಿಎಸ್‌ಇ ಪಠ್ಯಕ್ರಮವನ್ನು ಜಾರಿಗೆ ತರಲಾಗುವುದು. ಇದಕ್ಕಾಗಿ 22 ಭಾಷೆಗಳಲ್ಲಿ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯ ಮೂರನೇ ವಾರ್ಷಿಕೋತ್ಸವದ ಅಂಗವಾಗಿ ಶನಿವಾರ ನವದೆಹಲಿಯ ಪ್ರಗತಿ ಮೈದಾನದ ಭಾರತ್ ಮಂಟಪದಲ್ಲಿ ಅಖಿಲ ಭಾರತೀಯ ಶಿಕ್ಷಾ ಸಮಾಗಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶವನ್ನು ಬದಲಾಯಿಸುವ ಶಕ್ತಿ ಶಿಕ್ಷಣಕ್ಕೆ ಮಾತ್ರ ಇದೆ. ದೇಶವು ಮುಂದುವರಿಯುತ್ತಿರುವ ಗುರಿಯಲ್ಲಿ ಶಿಕ್ಷಣವು ಪ್ರಮುಖ ಪಾತ್ರ ವಹಿಸುತ್ತದೆ. ಮಾತೃಭಾಷೆಯ ಅಧ್ಯಯನದೊಂದಿಗೆ, ಈಗ

ದೇಶದ ಎಲ್ಲಾ ಶಾಲೆಗಳಲ್ಲಿ ಸಿಬಿಎಸ್‍ಇ ಪಠ್ಯಕ್ರಮ : ಪ್ರಧಾನಿ ಮೋದಿ Read More »

ಮೊಬೈಲ್ ಖರೀದಿಗೆ 8 ತಿಂಗಳ ಮಗುವನ್ನೇ ಮಾರಿದ ದಂಪತಿ | ಪೊಲೀಸರ ಅತಿಥಿಯಾದ ದಂಪತಿ

ಕೋಲ್ಕತ್ತ : ಹೊಸ ಮೊಬೈಲ್ ಫೋನ್ ಖರೀದಿಸಲು ತಮ್ಮ 8 ತಿಂಗಳ ಮಗುವನ್ನೇ ಮಾರಿದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ನಡೆದಿರುವುದು ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯಲ್ಲಿ ಮಗುವನ್ನುಮಾರಿ ಹೊಸ ಫೋನ್ ಖರೀದಿಸಿದ್ದು ಮಾತ್ರವಲ್ಲದೆ ಈ ದಂಪತಿ ಜಾಲಿಟ್ರಿಪ್ ಕೂಡ ಮಾಡಿದ್ದರು. ಅವರ ಕೈಯಲ್ಲಿ ದುಬಾರಿ ಬೆಲೆಯ ಫೋನ್ ಕಂಡು ಸಂಶಯಗೊಂಡ ನೆರೆಹೊರೆಯವರು ಗುಸುಗುಸು ಮಾತನಾಡಲು ತೊಡಗಿದಾಗಲೇ ಖತರ್‌ನಾಕ್ ದಂಪತಿಯ ಗುಟ್ಟು ಬಯಲಾದದ್ದು. ದಂಪತಿಗೆ ಓರ್ವ ಪುತ್ರಿಯೂ ಇದ್ದು, 8 ತಿಂಗಳ ಹಿಂದೆ ಜನಿಸಿದ

ಮೊಬೈಲ್ ಖರೀದಿಗೆ 8 ತಿಂಗಳ ಮಗುವನ್ನೇ ಮಾರಿದ ದಂಪತಿ | ಪೊಲೀಸರ ಅತಿಥಿಯಾದ ದಂಪತಿ Read More »

ಲಾಟರಿ ಖರೀದಿಸಿದ ಮಹಿಳಾ ಮುನ್ಸಿಪಾಲಿಟಿ ಕಾರ್ಯಕರ್ತರ ತಂಡ | ತನ್ನದಾಗಿಸಿಕೊಂಡ 10 ಕೋಟಿ ಬಂಪರ್ ಬಹುಮಾನ

ಕೇರಳ : ಕೇರಳದ ಬಡ ಕುಟುಂಬಕ್ಕೆ ಸೇರಿದ 11 ಮಹಿಳಾ ಮುನ್ಸಿಪಾಲಿಟಿ ಕಾರ್ಯಕರ್ತರ ಗುಂಪೊಂದು ಲಾಟರಿ ಖರೀದಿಸಿ 10 ಕೋಟಿ ರೂ. ಬಂಪರ್ ಬಹುಮಾನವನ್ನು ತನ್ನದಾಗಿಸಿಕೊಂಡಿದೆ. ಕೇರಳದ ಮಲಪ್ಪುರಂ ಜಿಲ್ಲೆಯ ಈ ತಂಡದ ನಾಲ್ಕನೇ ಪ್ರಯತ್ನ ಇದಾಗಿದ್ದು, ಇದೀಗ ಭರ್ಜರಿ ಯಶಸ್ಸು ಗಳಿಸಿದ್ದಾರೆ. ತಂಡದ ಯಾರ ಬಳಿಯೂ ಸ್ವತಂತ ಟಿಕೇಟ್ ಖರೀದಿಗೆ ಹಣವಿರಲಿಲ್ಲ. ಹಾಗಾಗಿ ಗುಂಪಾಗಿ 250 ರೂ. ಪಾವತಿಸಿ ಟಿಕೇಟ್ ಖರೀದಿಸಿದ್ದರು. BR-92 ಲಕ್ಕಿ ಡ್ರಾದ ವಿಜೇತ ಟಿಕೇಟ್  Mb200261 ಆಗಿತ್ತು. ಈ ತಂಡ ಕೇರಳ

ಲಾಟರಿ ಖರೀದಿಸಿದ ಮಹಿಳಾ ಮುನ್ಸಿಪಾಲಿಟಿ ಕಾರ್ಯಕರ್ತರ ತಂಡ | ತನ್ನದಾಗಿಸಿಕೊಂಡ 10 ಕೋಟಿ ಬಂಪರ್ ಬಹುಮಾನ Read More »

ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಯಲ್ಲಿ ವಿಷಾಹಾರ ಸೇವಿಸಿ 38 ವಿದ್ಯಾರ್ಥಿಗಳು ಅಸ್ವಸ್ಥ

ಬೈಲಹೊಂಗಲ : ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮದ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಯಲ್ಲಿ ವಿಷಾಹಾರ ಸೇವಿಸಿ 38 ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ನಡೆದಿದೆ. ಅಸ್ವಸ್ಥ ವಿದ್ಯಾರ್ಥಿಗಳಿಗೆ ಸಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಂಡು ಮತ್ತೆ ಶಾಲೆಗೆ ತೆರಳಿದ್ದಾರೆ. ಗುರುವಾರ ರಾತ್ರಿ ಮಕ್ಕಳಿಗೆ ಚಿಕನ್, ಪನೀರ್ ನೀಡಲಾಗಿತ್ತು. ಊಟದ ಬಳಿಕ ಮಕ್ಕಳು ಅಸ್ವಸ್ಥರಾಗಿದ್ದರು. ವಿಷಯ ತಿಳಿದ ಉಪವಿಭಾಗಾಧಿಕಾರಿ ಪ್ರಭಾವತಿ ಫಕ್ಕೀರಪೂರ, ಪ್ರಭಾರಿ ತಹಶೀಲ್ದಾರ್ ಜೆ.ಸಿ.ಅಷ್ಟಗಿಮಠ, ಡಿವೈಎಸ್ ರವಿ ನಾಯ್ಕ, ಸಿಪಿಐ ಪಂಚಾಕ್ಷರಿ ಸಾಲಿಮಠ, ಕಂದಾಯ ನಿರೀಕ್ಷಕ

ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಯಲ್ಲಿ ವಿಷಾಹಾರ ಸೇವಿಸಿ 38 ವಿದ್ಯಾರ್ಥಿಗಳು ಅಸ್ವಸ್ಥ Read More »

ದೆಹಲಿ ಸೇರಿದಂತೆ ಉತ್ತರಭಾರತ ಜಲಾವೃತ | ನೀರಿನಲ್ಲಿ ತೇಲುತ್ತಿರುವ 200 ಕ್ಕೂ ಅಧಿಕ ಕಾರುಗಳು

ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತ ಮಳೆಯಿಂದ ಜಲಾವೃತವಾಗಿದ್ದು, ಪ್ರವಾಹದ ನೀರಿನಲ್ಲಿ 200 ಹೆಚ್ಚು ಕಾರುಗಳು ಮುಳುಗಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ ಗ್ರೇಟರ್ ನೋಯ್ಡಾದಲ್ಲಿ ಈ ಘಟನೆ ನಡೆದಿದ್ದು, ಹಿಂಡೋನ್ ನಲ್ಲಿ ನೀರಿನ ಮಟ್ಟ ಹೆಚ್ಚಾದ ಕಾರಣ ಸಮೀಪದ ಮನೆಯ ಜನರನ್ನು ಸ್ಥಳಾಂತರಿಸಲಾಗಿದೆ. ಪೀಡಿತ ಪ್ರದೇಶದಲ್ಲಿ ನೋಯ್ಡಾ ಸೆಕ್ಟರ್ 63 ರಲ್ಲಿ ಇಕೋಟೆಕ್  ಮತ್ತು ಚಿರ್ಜಾಸಿ ಸೇರಿವೆ. ಇಂದು ಮುಂಜಾನೆ ನೋಯ್ಡಾ ಮತ್ತು ದೆಹಲಿ ಪ್ರದೇಶದ ಇತರ ಭಾಗಗಳಲ್ಲಿ ಸಾಧಾರಣ

ದೆಹಲಿ ಸೇರಿದಂತೆ ಉತ್ತರಭಾರತ ಜಲಾವೃತ | ನೀರಿನಲ್ಲಿ ತೇಲುತ್ತಿರುವ 200 ಕ್ಕೂ ಅಧಿಕ ಕಾರುಗಳು Read More »

ಮಣಿಪುರ ಬೆತ್ತಲೆ ಮೆರವಣಿಗೆ | ಓರ್ವ ಆರೋಪಿ ಮನೆಗೆ ಬೆಂಕಿ ಇಟ್ಟ ಪ್ರತಿಭಟನಾಕಾರರು

ಹೊಸದಿಲ್ಲಿ : ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ವಿವಸ್ತವಾಗಿ ಮೆರವಣಿಗೆ ಮಾಡಿದ ಕರಾಳ ಪ್ರಕರಣದ ವೀಡಿಯೊ ವೈರಲ್ ಆದ ಎರಡು ದಿನಗಳ ನಂತರ, ಪ್ರಮುಖ ಆರೋಪಿ ಹುಯಿರೆಮ್ ಹೆರೋದಾಸ್ ಮೈತೆಯ್ ಎಂಬಾತನ ಮನೆಗೆ ಪ್ರತಿಭಟನಾಕಾರರ ಗುಂಪೊಂದು ಬೆಂಕಿ ಹಚ್ಚಿದೆ. ಹಿಂಸಾಚಾರ ಪೀಡಿತ ಮಣಿಪುರದ ಕಾಂಗ್‌ಪೊಕ್ಸಿ ಜಿಲ್ಲೆಯಲ್ಲಿ ಮೇ 4ರಂದು ಇಬ್ಬರು ಮಹಿಳೆಯರನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡಲಾಗಿತ್ತು. ಈ ವೇಳೆ ಮಹಿಳೆಯರ ಮೇಲೆ ಅತ್ಯಾಚಾರ ಕೂಡ ಮಾಡಲಾಗಿದೆ ಎನ್ನಲಾಗಿದೆ. ಈ ವಿಡಿಯೋ ಈಗ ವೈರಲ್ ಆಗಿ ತೀವ್ರ ಆಕ್ರೋಶಕ್ಕೆ

ಮಣಿಪುರ ಬೆತ್ತಲೆ ಮೆರವಣಿಗೆ | ಓರ್ವ ಆರೋಪಿ ಮನೆಗೆ ಬೆಂಕಿ ಇಟ್ಟ ಪ್ರತಿಭಟನಾಕಾರರು Read More »

error: Content is protected !!
Scroll to Top