ದೇಶ

ಇನ್ನು ಸಂಸತ್’ಗೆ ವೀಕ್ಷಕರ ಪಾಸ್ ಬ್ಯಾನ್!!

ಇದುವರೆಗೆ ಒಬ್ಬರು ಸಂಸದರ ಹೆಸರಿನಲ್ಲಿ ಇಬ್ಬರು ವೀಕ್ಷಕರು ತೆರಳಲು ಅವಕಾಶ ಇತ್ತು. ಆದರೆ ಇನ್ನು ಮುಂದೆ ಸಂಸತ್’ಗೆ ತೆರಳಲು ವೀಕ್ಷಕರ ಪಾಸ್ ಅನ್ನು ಬ್ಯಾನ್ ಮಾಡಲಾಗಿದೆ. ಈ ಬಗ್ಗೆ ಆದೇಶ ಹೊರಡಿಸಿರುವ ಸ್ಪೀಕರ್, ಇನ್ನು ಮುಂದೆ ಸಂಸತ್’ಗೆ ವೀಕ್ಷಕರ ಪಾಸ್ ಸಿಗಲ್ಲ ಎಂದು ತಿಳಿಸಿದ್ದಾರೆ. ಸಂಸತ್ತಿಗೆ ದಾಳಿ ನಡೆದು 22ನೇ ವರ್ಷದ ದಿನವಾದ ಬುಧವಾರ ಮತ್ತೆ ಸಂಸತ್ತಿಗೆ ದಾಳಿ ನಡೆಸುವ ಪ್ರಯತ್ನ ನಡೆದಿದೆ. ದುಷ್ಕರ್ಮಿಗಳು ಸಂಸತ್ತಿಗೆ ನುಗ್ಗಿ ಕೆಮಿಕಲ್ ಸ್ಪ್ರೇ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಪೀಕರ್ ಆದೇಶ […]

ಇನ್ನು ಸಂಸತ್’ಗೆ ವೀಕ್ಷಕರ ಪಾಸ್ ಬ್ಯಾನ್!! Read More »

ಗುರುತು ಪತ್ತೆ: ಸಂಸತ್ತಿಗೆ ನುಗ್ಗಿದವರು ಮೈಸೂರು ಮೂಲದವರು!!

ರಾಷ್ಟ್ರದ ಶಕ್ತಿ ಕೇಂದ್ರವಾಗಿರುವ ಸಂಸತ್ ಭವನದೊಳಗೆ ನುಗ್ಗಿದ ದುಷ್ಕರ್ಮಿಗಳ ಗುರುತು ಪತ್ತೆಯಾಗಿದ್ದು, ಮೂವರ ಪೈಕಿ ಇಬ್ಬರನ್ನು ಮೈಸೂರು ಮೂಲದವರು ಎಂದು ಹೇಳಲಾಗಿದೆ. ಒಟ್ಟು ಮೂವರು ನೂತನ ಸಂಸತ್ ಭವನದೊಳಗೆ ನುಗ್ಗಿದ್ದರು. ಅವರಲ್ಲಿ ಇಬ್ಬರು ಮೈಸೂರು ಮೂಲದ ಮನೋರಂಜನ್ ಹಾಗೂ ಸಾಗರ್ ಶರ್ಮಾ ಎಂದು ಗುರುತಿಸಲಾಗಿದೆ. ಮನೋರಂಜನ್ ಇಂಜಿನಿಯರ್ ಎಂದು ಹೇಳಲಾಗಿದೆ. ಘಟನೆ ತಕ್ಷಣವೇ ದುಷ್ಕರ್ಮಿಗಳನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು, ದುಷ್ಕರ್ಮಿಗಳ ವಿಚಾರಣೆ ನಡೆಸುತ್ತಿದ್ದಾರೆ.

ಗುರುತು ಪತ್ತೆ: ಸಂಸತ್ತಿಗೆ ನುಗ್ಗಿದವರು ಮೈಸೂರು ಮೂಲದವರು!! Read More »

ನೂತನ ಸಂಸತ್‌ ಭವನಕ್ಕೆ ನುಗ್ಗಿದ ಅಪರಿಚಿತ ವ್ಯಕಿಗಳು !! | ಸಂಸತ್‌ ಭವನದ ದಾಳಿಗೆ 22 ವರ್ಷದ ದಿನದಂದೆ ನಡೆದ ಘಟನೆ !!

ದೆಹಲಿ : ಕಲಾಪ ನಡೆಯುತ್ತಿರುವ ಸಂದರ್ಭದಲ್ಲಿ ಪ್ರಕ್ಷೇಕರ ಗ್ಯಾಲರಿಯಿಂದ ನುಗ್ಗಿದ ಇಬ್ಬರು ಅಪರಿಚಿತ ವ್ಯಕ್ತಿಗಳು ಸದನದೊಳಗೆ ಭಯದ ವಾತಾವರಣ ಸೃಷ್ಟಿಸಿದ ಘಟನೆ ಬುಧವಾರ ನಡೆದಿದೆ. ಇದೊಂದು ಭದ್ರತಾ ವೈಪಲ್ಯವಾಗಿದ್ದು, ನೂತನ ಸಂಸತ್‌ ಭವನದ ಒಳಗೆ ನುಗ್ಗಿದ ಯುವಕ ಹಾಗೂ ಯುವತಿ ಪ್ರೇಕ್ಷಕರ ಗ್ಯಾಲರಿಯಿಂದ ಕೆಳಗೆ ಹಾರಿದ್ದಾರೆ. ಕೆಮಿಕಲ್ ಸ್ಪ್ರೇ ಸಿಡಿಸಿದವರನ್ನು ಸಾಗರ್‌ ಶರ್ಮಾ ಹಾಗೂ ನೀಲಂ ಕೌರ್ ಎಂದು ಎಂದು ಗುರುತಿಸಲಾಗಿದೆ. ಶೂನ್ಯ ವೇಳೆಯಲ್ಲಿ ಒಬ್ಬ ವ್ಯಕ್ತಿ ಲೋಕಸಭೆಯ ಬೆಂಚುಗಳ ಮೇಲೆ ಜಿಗಿಯುತ್ತಿರುವುದನ್ನು ಕಂಡರೆ, ಮತ್ತೊಬ್ಬರು ಸಾರ್ವಜನಿಕ

ನೂತನ ಸಂಸತ್‌ ಭವನಕ್ಕೆ ನುಗ್ಗಿದ ಅಪರಿಚಿತ ವ್ಯಕಿಗಳು !! | ಸಂಸತ್‌ ಭವನದ ದಾಳಿಗೆ 22 ವರ್ಷದ ದಿನದಂದೆ ನಡೆದ ಘಟನೆ !! Read More »

ಶಬರಿಮಲೆ ಯಾತ್ರೆ ಬುಡಮೇಲುಗೊಳಿಸಲು ಕಮ್ಯುನಿಸ್ಟರ ಸಂಚು: ಕೇಂದ್ರ ಸಚಿವ | ದಕ್ಷಿಣ ಭಾರತದ ಅತಿ ದೊಡ್ಡ ತೀರ್ಥ ಕ್ಷೇತ್ರದಲ್ಲಿ ಭಕ್ತರಿಗೆ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರಕಾರ ವಿಫಲವಾಗಿದೆಯೆಂದ ಸಚಿವರು

ಶಬರಿಮಲೆ ಯಾತ್ರೆ ವ್ಯವಸ್ಥೆಯನ್ನು ಬುಡಮೇಲುಗೊಳಿಸಲು ಎಡರಂಗ ಸರಕಾರ ಶ್ರಮಿಸುತ್ತಿದೆ. ನಾಸ್ತಿಕರಾದ ಕಮ್ಯೂನಿಸ್ಟರು ಶಬರಿಮಲೆಗೆ ಭಕ್ತರು ಬರದಂತೆ ಸಂಚು ರೂಪಿಸಿದ್ದಾರೆ. ಇದು ಹಿಂದೂ ಸಂಪ್ರದಾಯದ ಮೇಲಿನ ಅತಿಕ್ರಮಣ ಎಂದು ಕೇಂದ್ರ ಸಚಿವ ವಿ. ಮುರಳೀಧರನ್ ಆರೋಪಿಸಿದ್ದಾರೆ. ಶಬರಿಮಲೆಯಲ್ಲಿ ಭಕ್ತರ ಸಂಕಷ್ಟದ ಬಗ್ಗೆ ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಅವರು, ಶಬರಿಮಲೆಯ ಪಾವಿತ್ರ್ಯವನ್ನು ಹಾಳು ಮಾಡುವುದು ಸಿಪಿಎಂ ಅಜೆಂಡಾ ಹಾಗೂ ಇದರ ಪ್ರಯತ್ನ ನಡೆಯುತ್ತಿದೆ. ಇದು ಸಂಪ್ರದಾಯದ ಉಲ್ಲಂಘನೆ ಎಂದು ವಿ. ಮುರಳೀಧರನ್ ಹೇಳಿದ್ದಾರೆ. ಶಬರಿಮಲೆ ಅಯ್ಯಪ್ಪ ಭಕ್ತರಿಗೆ ಕೇರಳ ಸರಕಾರ ಮಾಡುತ್ತಿರುವ

ಶಬರಿಮಲೆ ಯಾತ್ರೆ ಬುಡಮೇಲುಗೊಳಿಸಲು ಕಮ್ಯುನಿಸ್ಟರ ಸಂಚು: ಕೇಂದ್ರ ಸಚಿವ | ದಕ್ಷಿಣ ಭಾರತದ ಅತಿ ದೊಡ್ಡ ತೀರ್ಥ ಕ್ಷೇತ್ರದಲ್ಲಿ ಭಕ್ತರಿಗೆ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರಕಾರ ವಿಫಲವಾಗಿದೆಯೆಂದ ಸಚಿವರು Read More »

ಮೊದಲ ಬಾರಿ ಶಾಸಕರಾಗಿರುವ ಭಜನ್ ಲಾಲ್ ಶರ್ಮಾ ರಾಜಸ್ಥಾನ ಸಿಎಂ!

ನಿರೀಕ್ಷೆಯಂತೆಯೇ ಹೊಸ ಮುಖಗಳಿಗೆ ಆದ್ಯತೆ ನೀಡುತ್ತಾ ಬಂದಿರುವ ಬಿಜೆಪಿ, ಇದೀಗ ರಾಜಸ್ಥಾನದಲ್ಲೂ ಹೊಸ ಮುಖಕ್ಕೆ ಆದ್ಯತೆ ನೀಡಿದ್ದಾರೆ. ಇದರೊಂದಿಗೆ ಇಬ್ಬರು ಡಿಸಿಎಂಗಳನ್ನು ನೇಮಕ ಮಾಡಲಿದ್ದಾರೆ. ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಅಚ್ಚರಿಯ ಆಯ್ಕೆ ಮಾಡಲಾಗಿದೆ. ರಾಜಕೀಯದಲ್ಲಿ ಹೊಸ ಪರೀಕ್ಷೆ ನಡೆಸುವಂತೆ ಹೊಸ ಮುಖಗಳನ್ನೇ ಆಯ್ಕೆ ಮಾಡಲಾಗುತ್ತಿದೆ. ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಭಜನ್ ಲಾಲ್ ಶರ್ಮಾ ಅವರನ್ನು ಸಿಎಂ ಆಗಿ ಆಯ್ಕೆ ಮಾಡಿರುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಇವರು ಸಂಗಾನೇರ್ ಕ್ಷೇತ್ರದ ಶಾಸಕ. 4 ಬಾರಿ

ಮೊದಲ ಬಾರಿ ಶಾಸಕರಾಗಿರುವ ಭಜನ್ ಲಾಲ್ ಶರ್ಮಾ ರಾಜಸ್ಥಾನ ಸಿಎಂ! Read More »

ಕೆಜಿ ಶುಲ್ಕ – ಪೋಷಕರಿಗೆ ಬರೆ!! | ವೈರಲ್ ಆಯ್ತು ಶುಲ್ಕ ವಿವರದ ಪೋಸ್ಟರ್: ನೆಟ್ಟಿಗರಿಂದ ಭಾರೀ ಟ್ರೋಲ್

ಇವತ್ತಿನ ಉನ್ನತ ಶಿಕ್ಷಣಕ್ಕಿಂತಲೂ ಕೆಜಿ ತರಗತಿಯ ಶುಲ್ಕವೇ ಪೋಷಕರಿಗೆ ಹೊರೆಯಾಗಿ ಪರಿಣಮಿಸಿದೆ. ಶುಲ್ಕವಷ್ಟೇ ಅಲ್ಲ, ಅದರ ಜೊತೆಗೆ ಜವಾಬ್ದಾರಿಯನ್ನು ಪೋಷಕರ ಮೇಲೆ ಹೇರುವ ಪ್ರಯತ್ನ ಮಾಡಲಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ ಒಂದು ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಖಾಸಗಿ ಶಾಲೆಯೊಂದರ ಕೆಜಿ ತರಗತಿಯ ಶುಲ್ಕದ ವಿವರ ಅದಾಗಿದೆ. 2024-25ನೇ ಶೈಕ್ಷಣಿಕ ವರ್ಷದ ಜೂನಿಯರ್ ಕೆಜಿ ಬ್ಯಾಚ್‌ನ ಫೀಜ್ ಸ್ಟ್ರಕ್ಚರ್ ನೋಡಿ ಶಾಕ್ ಆದ ನೆಟ್ಟಿಗರು, ಅದರ ವಿರುದ್ಧ ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ. ಶಾಲೆಗಳು ಪೋಷಕರನ್ನು

ಕೆಜಿ ಶುಲ್ಕ – ಪೋಷಕರಿಗೆ ಬರೆ!! | ವೈರಲ್ ಆಯ್ತು ಶುಲ್ಕ ವಿವರದ ಪೋಸ್ಟರ್: ನೆಟ್ಟಿಗರಿಂದ ಭಾರೀ ಟ್ರೋಲ್ Read More »

ಒಂದೇ ಮಂಟಪ, ಒಬ್ಬನೇ ವರ ಆದರೆ ವಧು ಮಾತ್ರ ನಾಲ್ವರು!

ಮದುವೆಯ ಪರಿಕಲ್ಪನೆಯನ್ನೇ ಬದಲಿಸುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಒಳಗಾಗುತ್ತಿದೆ. ವರನೊಬ್ಬ ಒಂದೇ ಬಾರಿಗೆ ನಾಲ್ಕು ಯುವತಿಯರನ್ನು ಮದುವೆಯಾಗಿರುವ ವಿಡಿಯೋ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ವರನು ಬಿಳಿ ಬಟ್ಟೆ ಮತ್ತು ಪೇಟವನ್ನು ಧರಿಸಿ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದಾನೆ. ಅಲ್ಲದೇ ಸುಂದರವಾಗಿರುವ ನಾಲ್ವರು ಯುವತಿಯರನ್ನು (ವಧು) ಅಗ್ನಿಸಾಕ್ಷಿಯಾಗಿ ಮದುವೆಯಾಗುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಹೋಮಕುಂಡಕ್ಕೆ ಪ್ರದಕ್ಷಿಣೆ ಹಾಕಿದ ನಂತರ, ಈ ಹುಡುಗಿಯರು ತಮ್ಮ ಪತಿಯ ಪಾದಗಳಿಗೆ ನಮಸ್ಕರಿಸುವ ದೃಶ್ಯವೂ ವಿಡಿಯೋದಲ್ಲಿ ಸೆರೆಯಾಗಿದೆ. ಈ ಆಧುನಿಕ

ಒಂದೇ ಮಂಟಪ, ಒಬ್ಬನೇ ವರ ಆದರೆ ವಧು ಮಾತ್ರ ನಾಲ್ವರು! Read More »

ಮೋಹನ್ ಯಾದವ್‌ ಮಧ್ಯಪ್ರದೇಶ ಸಿಎಂ!

ಮಧ್ಯಪ್ರದೇಶ: ತೀವ್ರ ಕುತೂಹಲ ಕೆರಳಿಸಿದ್ದ ಮಧ್ಯಪ್ರದೇಶ ಸಿಎಂ ಆಯ್ಕೆ ಕಗ್ಗಂಟು ಕೊನೆಗೂ ಬಗೆಹರಿದಿದೆ. ಸಿಎಂ ರೇಸ್‌ನಲ್ಲಿದ್ದ ಎಲ್ಲರನ್ನೂ ಹಿಂದಿಕ್ಕಿ ಮೋಹನ್ ಯಾದವ್ ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಸೋಮವಾರ ಬಿಜೆಪಿ ಕೇಂದ್ರ ನಾಯಕರ ನೇತೃತ್ವದಲ್ಲಿ ಮಧ್ಯಪ್ರದೇಶ ಬಿಜೆಪಿ ಶಾಸಕಾಂಗ ಸಭೆ ನಡೆಯಿತು. ಸಭೆಯಲ್ಲಿ ವೀಕ್ಷಕರಾಗಿ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಒಬಿಸಿ ಮೋರ್ಚಾ ಮುಖ್ಯಸ್ಥ ಕೆ. ಲಕ್ಷ್ಮಣ್ ಮತ್ತು ಕಾರ್ಯದರ್ಶಿ ಆಶಾ ಲಾಕ್ರ ಭಾಗವಹಿಸಿದ್ದರು. ಸಭೆಯಲ್ಲಿ ಮೋಹನ್ ಯಾದವ್ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ. ಸಿಎಂ ರೇಸ್‌ನಲ್ಲಿ

ಮೋಹನ್ ಯಾದವ್‌ ಮಧ್ಯಪ್ರದೇಶ ಸಿಎಂ! Read More »

370 ವಿಧಿ: ಕೇಂದ್ರದ ನಿರ್ಧಾರ ಎತ್ತಿ ಹಿಡಿದ ಸುಪ್ರೀಂ | ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದ ಸುಪ್ರೀಂ ಸಾಂವಿಧಾನಿಕ ಪೀಠ!

ನವದೆಹಲಿ: 370 ವಿಧಿ ರದ್ದುಗೊಳಿಸಿದ ಕೇಂದ್ರ ಸರಕಾರದ ಆದೇಶದ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯನ್ನು ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್, ಮಹತ್ವದ ತೀರ್ಪು ನೀಡಿದೆ. ಕೇಂದ್ರದ ನಿರ್ಧಾರ ಸರಿಯಾಗಿಯೇ ಇದೆ. ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ನಿರ್ಧಾರ ಸರಿ ಇದೆ. ಹಾಗಾಗಿ 2024ರ ಸೆಪ್ಟೆಂಬರ್ 30ರೊಳಗೆ ಚುನಾವಣೆ ನಡೆಸಬೇಕು. ಯಾವುದೇ ಕಾರಣಕ್ಕೂ ಚುನಾವಣೆ ವಿಳಂಬ ಮಾಡಬಾರದು. ಆದಷ್ಟು ಶೀಘ್ರದಲ್ಲಿ ರಾಜ್ಯದ ಸ್ಥಾನಮಾನ ಮರುಸ್ಥಾಪಿಸುವಂತೆ ಸುಪ್ರೀಂ ಸಾಂವಿಧಾನಿಕ ಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ಕಾಶ್ಮೀರದ ಲಡಾಖ್ ಪ್ರತ್ಯೇಕಗೊಳಿಸಿದ ನರೇಂದ್ರ ಮೋದಿ

370 ವಿಧಿ: ಕೇಂದ್ರದ ನಿರ್ಧಾರ ಎತ್ತಿ ಹಿಡಿದ ಸುಪ್ರೀಂ | ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದ ಸುಪ್ರೀಂ ಸಾಂವಿಧಾನಿಕ ಪೀಠ! Read More »

ಪಾಕ್ ಜೊತೆ ಸಂಪರ್ಕ: ನಾಲ್ವರ ಬಂಧನ!

ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿರುವ ನಾಲ್ಕು ಮಂದಿಯನ್ನು ಜಿಲ್ಲೆಯಲ್ಲಿ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪಾಕಿನ ಸೈಬರ್‌ ಅಪರಾಧ ಜಾಲದೊಂದಿಗೆ ನಂಟು ಹೊಂದಿದ್ದ ಬಂಧಿತರು ಜಾರ್ಖಂಡಿನ ರಾಜಧಾನಿ ರಾಂಚಿಯಿಂದ 105 ಕಿ.ಮೀ ದೂರದಲ್ಲಿರುವ ಕೊರ್ರಾ ಪ್ರದೇಶದಲ್ಲಿ ಸೆರೆಯಾಗಿದ್ದಾರೆ. ಈ ಗುಂಪು ಪಂಜಾಬ್‌ನಲ್ಲಿ ವ್ಯಕ್ತಿಯೊಬ್ಬರಿಗೆ ₹ 1.63 ಲಕ್ಷ ವಂಚಿಸಿತ್ತು. ಆದರೆ, ಅದಕ್ಕಾಗಿ ಬಳಸಿದ್ದ ಮೊಬೈಲ್‌ ಸಂಖ್ಯೆಯು ಜಾರ್ಖಂಡ್‌ ಪ್ರದೇಶದೊಂದಿಗೆ ಸಂಪರ್ಕ ಹೊಂದಿರುವುದು ಕಂಡುಬಂದಿತ್ತು. ಕಾರ್ಯಾಚರಣೆ ನಡೆಸಿದ ತನಿಖಾ ತಂಡ, ಬಂಧಿತರಿಂದ ಒಂದು ಕಾರು, ಎರಡು ದ್ವಿಚಕ್ರ ವಾಹನ, 10 ಮೊಬೈಲ್‌

ಪಾಕ್ ಜೊತೆ ಸಂಪರ್ಕ: ನಾಲ್ವರ ಬಂಧನ! Read More »

error: Content is protected !!
Scroll to Top