ದೇಶ

ರಾಜಕೀಯದಲ್ಲೂ ಇದೆ ಲೈಂಗಿಕ ಶೋಷಣೆ : ಬಾಂಬ್‌ ಸಿಡಿಸಿದ ಕೇರಳದ ಕಾಂಗ್ರೆಸ್‌ ನಾಯಕಿ

ಹುದ್ದೆಗಳ, ಸ್ಥಾನಮಾನಗಳ ಆಮಿಷವೊಡ್ಡಿ ದೌರ್ಜನ್ಯ ಎಸಗುತ್ತಾರೆ ಎಂದ ನಾಯಕಿಯ ಉಚ್ಚಾಟನೆ ತಿರುವನಂತಪುರಂ: ಮಲಯಾಳಂ ಚಿತ್ರೋದ್ಯಮದಲ್ಲಿ ಲೈಂಗಿಕ ಕಿರುಕುಳದ ಆರೋಪ ಬಿರುಗಾಳಿ ಎಬ್ಬಿಸಿದ ಬೆನ್ನಿಗೆ ಈಗ ರಾಜಕೀಯದಲ್ಲೂ ಇದೇ ರೀತಿಯ ಆರೋಪ ಕೇಳಿಬಂದಿದೆ. ಕೇರಳದ ಕಾಂಗ್ರೆಸ್‌ ನಾಯಕಿಯೊಬ್ಬರು ಈ ಬಗ್ಗೆ ಮಾತನಾಡಿದ್ದು, ಕೈ ಪಡೆಯಲ್ಲಿ ಕಳವಳ ಉಂಟು ಮಾಡಿದೆ. ಕೇರಳ ರಾಜಕಾರಣದಲ್ಲೂ ಲೈಂಗಿಕ ಶೋಷಣೆ ಹಾಸುಹೊಕ್ಕಾಗಿದೆ. ಕೇರಳ ಕಾಂಗ್ರೆಸ್ ಘಟಕದಲ್ಲಿ ಕ್ಯಾಸ್ಟಿಂಗ್ ಕೌಚ್ ರೀತಿಯ ಪರಿಸ್ಥಿತಿಗಳಿವೆ ಎಂದು ಕಾಂಗ್ರೆಸ್ ನಾಯಕಿ ಸಿಮಿ ರೋಸ್‌ಬೆಲ್ ಜಾನ್ ಬಾಂಬ್‌ ಸಿಡಿಸಿದ್ದಾರೆ. ಈ […]

ರಾಜಕೀಯದಲ್ಲೂ ಇದೆ ಲೈಂಗಿಕ ಶೋಷಣೆ : ಬಾಂಬ್‌ ಸಿಡಿಸಿದ ಕೇರಳದ ಕಾಂಗ್ರೆಸ್‌ ನಾಯಕಿ Read More »

ಕರ್ನಾಟಕಕ್ಕೆ ರೈಲ್ವೆ ಅನುದಾನ 9 ಪಟ್ಟು ಹೆಚ್ಚಳ : ಮೋದಿ

ಈ ವರ್ಷದ ಬಜೆಟ್‌ನಲ್ಲಿ ರಾಜ್ಯಕ್ಕೆ 7,000 ಕೋ.ರೂ. ಅನುದಾನ ಹೊಸದಿಲ್ಲಿ: ರೈಲ್ವೆ ಬಜೆಟ್‌ನಲ್ಲಿ ಕರ್ನಾಟಕಕ್ಕೆ 7,000 ಕೋಟಿ ರೂ.ಗಿಂತ ಹೆಚ್ಚಿನ ಅನುದಾನ ಒದಗಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಶನಿವಾರ ಮೂರು ಹೊಸ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಉದ್ಘಾಟನೆ ವೇಳೆ ಮಾತನಾಡಿದ ಅವರು, ಈ ವರ್ಷದ ಬಜೆಟ್‌ನಲ್ಲಿ ಕರ್ನಾಟಕಕ್ಕೆ 7,000 ಕೋಟಿ ರೂ.ಗಿಂತ ಹೆಚ್ಚಿನ ಅನುದಾನ ನಿಗದಿಪಡಿಸಲಾಗಿದೆ. 2014ಕ್ಕೆ ಹೋಲಿಸಿದರೆ 9 ಪಟ್ಟು ಹೆಚ್ಚಾಗಿದೆ. ಒಟ್ಟು 8 ವಂದೇ ಭಾರತ್‌ ರೈಲುಗಳು ಕರ್ನಾಟಕವನ್ನು ಸಂಪರ್ಕಿಸಿವೆ

ಕರ್ನಾಟಕಕ್ಕೆ ರೈಲ್ವೆ ಅನುದಾನ 9 ಪಟ್ಟು ಹೆಚ್ಚಳ : ಮೋದಿ Read More »

ನಟಿಯರ ಕ್ಯಾರವಾನ್‌ಗಳಲ್ಲಿ ಇರುತ್ತಿತ್ತು ಹಿಡನ್‌ ಕ್ಯಾಮರಾ : ರಾಧಿಕಾ ಹೇಳಿಕೆಯಿಂದ ಬಿರುಗಾಳಿ

ಮಲಯಾಳಂ ಚಿತ್ರರಂಗದ ಇನ್ನೊಂದು ಕರಾಳ ಮುಖ ಬಯಲುಗೊಳಿಸಿದ ನಟಿ ಚೆನ್ನೈ : ಮಲಯಾಳಂ ಚಿತ್ರರಂಗದಲ್ಲಿ ನಟಿಯರ ಶೋಷಣೆ ಕುರಿತು ಹೇಮಾ ಸಮಿತಿ ಸಲ್ಲಿಸಿದ ತನಿಖಾ ವರದಿ ಬಹಿರಂಗಗೊಂಡ ಬಳಿಕ ಮಲಯಾಳಂ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲೇ ತಲ್ಲಣವುಂಟಾಗಿದೆ. ಅನೇಕ ನಟಿಯರು ನಟರು, ನಿರ್ದೇಶಕರು, ನಿರ್ಮಾಪಕರಿಂದ ತಮಗಾಗಿರುವ ಕಹಿ ಅನುಭವಗಳನ್ನು ಬಹಿರಂಗಗೊಳಿಸುತ್ತಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಂತೂ ಬಿರುಗಾಳಿಯೇ ಎದ್ದಿದ್ದು, ಹಲವು ಖ್ಯಾತ ನಟರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಈ ನಡುವೆ ಕನ್ನಡ, ಮಲಯಾಳಂ, ತಮಿಳು ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಜನಪ್ರಿಯ

ನಟಿಯರ ಕ್ಯಾರವಾನ್‌ಗಳಲ್ಲಿ ಇರುತ್ತಿತ್ತು ಹಿಡನ್‌ ಕ್ಯಾಮರಾ : ರಾಧಿಕಾ ಹೇಳಿಕೆಯಿಂದ ಬಿರುಗಾಳಿ Read More »

ಗ್ಯಾಸ್‌ ಸಿಲಿಂಡರ್‌ ಬೆಲೆ 39 ರೂ. ಹೆಚ್ಚಳ

ಹೊಸದಿಲ್ಲಿ: ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು 19 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯನ್ನು 39 ರೂ. ಹೆಚ್ಚಿಸಿವೆ. 14 ಕೆಜಿ ಗೃಹಬಳಕೆಯ ಗ್ಯಾಸ್​ ಸಿಲಿಂಡರ್​ನ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದೆ.ಭಾನುವಾರ ದಿಲ್ಲಿಯಲ್ಲಿ ವಾಣಿಜ್ಯ ಎಲ್​ಪಿಜಿ ಸಿಲಿಂಡರ್​ ಬೆಲೆ 39 ರೂ. ಹೆಚ್ಚಾಗಿದೆ. ಜುಲೈನಲ್ಲಿ ಪ್ರತಿ ಸಿಲಿಂಡರ್‌ಗೆ 30 ರೂ., ಜೂನ್‌ನಲ್ಲಿ 69.50 ಮತ್ತು ಮೇ ತಿಂಗಳಲ್ಲಿ 19 ರೂ. ಹೆಚ್ಚಳ ಮಾಡಲಾಗಿತ್ತು. ಎಲ್‌ಪಿಜಿ ಬೆಲೆಗಳಲ್ಲಿನ ಹೆಚ್ಚಳ ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳಿಂದ ಹಿಡಿದು ಸಣ್ಣ ಕೈಗಾರಿಕೆಗಳವರೆಗೆ ವಿವಿಧ ವಲಯಗಳ

ಗ್ಯಾಸ್‌ ಸಿಲಿಂಡರ್‌ ಬೆಲೆ 39 ರೂ. ಹೆಚ್ಚಳ Read More »

ಪತಂಜಲಿ ಹಲ್ಲಿನ ಪುಡಿಯಲ್ಲಿ ಮೀನಿನ ಅಂಶ : ಹೈಕೋರ್ಟ್‌ಗೆ ದೂರು

ಶುದ್ಧ ಶಾಖಾಹಾರಿ ಎಂದು ಮಾರ್ಕೆಟಿಂಗ್‌ ಮಾಡಿ ಮೋಸ ಎಂದು ಆರೋಪ ಹೊಸದಿಲ್ಲಿ: ಯೋಗಗುರು ಬಾಬಾ ರಾಮ್‌ದೇವ್‌ ಅವರ ಕಾನೂನು ಸಂಕಟ ಇನ್ನೂ ಮುಗಿದಿಲ್ಲ. ಅವರ ಪತಂಜಲಿ ಬ್ರ್ಯಾಂಡ್‌ನ ದಿವ್ಯ ದಂತ್‌ ಮಂಜನ್‌ ಎಂಬ ಗಿಡಮೂಲಿಕೆಯಿಂದ ತಯಾರಾಗುವ ಹಲ್ಲು ತಿಕ್ಕುವ ಪುಡಿಯಲ್ಲಿ ನಾನ್‌ ವೆಜಿಟೇರಿಯನ್‌ ಅಂಶವಿದೆ ಎಂದು ಆರೋಪಿಸಿ ದಿಲ್ಲಿ ಹೈಕೋರ್ಟಿನಲ್ಲಿ ದಾವೆ ಹೂಡಲಾಗಿದೆ. ಪತಂಜಲಿ ಕಂಪನಿ ದಿವ್ಯ ದಂತ್‌ ಮಂಜನ್‌ ದಂತ ಪುಡಿಯನ್ನು ಶುದ್ಧ ಶಾಕಾಹಾರಿ ಎಂದು ಹೇಳಿ ಮಾರ್ಕೆಟಿಂಗ್‌ ಮಾಡುತ್ತಿದೆ. ಆದರೆ ಅದರಲ್ಲಿ ನಾನ್‌ ವೆಜಿಟೇರಿಯನ್‌

ಪತಂಜಲಿ ಹಲ್ಲಿನ ಪುಡಿಯಲ್ಲಿ ಮೀನಿನ ಅಂಶ : ಹೈಕೋರ್ಟ್‌ಗೆ ದೂರು Read More »

ಬೆಂಗಳೂರು: ವಿಮಾನ ನಿಲ್ದಾಣದಲ್ಲಿ ಶಂಕಿತ ಉಗ್ರ ಸೆರೆ

ವಿದೇಶಕ್ಕೆ ಪಲಾಯನ ಮಾಡಲು ಯತ್ನಿಸುವಾಗ ಸಿಕ್ಕಿಬಿದ್ದ ಉಗ್ರ ಬೆಂಗಳೂರು : ಇಲ್ಲಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಶಂಕಿತ ಉಗ್ರನನ್ನು ಬಂಧಿಸಿದ್ದಾರೆ. ಅಜೀಜ್ ಅಹ್ಮದ್ ಬಂಧಿತ ಶಂಕಿತ ಉಗ್ರ. ಹಿಜ್ಬುಲ್ ತಹ್ರೀರ್ ಭಯೋತ್ಪಾದಕ ಸಂಘಟನೆಯ ಅಜೀಜ್​ ಅಹ್ಮದ್​ ಶುಕ್ರವಾರ ಬೆಳಗ್ಗೆ ಕೆಂಪೇಗೌಡ ವಿಮಾನ ನಿಲ್ದಾಣದ ಮೂಲಕ ಸೌದಿಯ ಜಿದ್ದಾಗೆ ಪಾರಾರಿಯಾಗುತ್ತಿದ್ದನು. ಈ ಮಾಹಿತಿಯನ್ನು ಇಮಿಗ್ರೇಷನ್ ಅಧಿಕಾರಿಗಳು ಎನ್​ಐಎಗೆ ನೀಡಿದ್ದಾರೆ. ಮಾಹಿತಿ ಆಧರಿಸಿ ಕೂಡಲೆ ಸ್ಥಳಕ್ಕೆ ತೆರಳಿದ ಎನ್ಐಎ ಅಧಿಕಾರಿಗಳು ಶಂಕಿತ ಉಗ್ರ

ಬೆಂಗಳೂರು: ವಿಮಾನ ನಿಲ್ದಾಣದಲ್ಲಿ ಶಂಕಿತ ಉಗ್ರ ಸೆರೆ Read More »

ತಿರುಪತಿ ಲಡ್ಡು ಬೇಕಾದರೆ ಆಧಾರ್‌ ತೋರಿಸಬೇಕು!

ಟೋಕನ್‌ ಇಲ್ಲದ ಭಕ್ತರಿಗಾಗಿ ಈ ನಿಯಮ ತಿರುಮಲ: ತಿರುಪತಿ ತಿಮ್ಮಪ್ಪನ ಲಡ್ಡು ಬೇಕಾದರೆ ಇನ್ನು ಆಧಾರ್‌ ಕಾರ್ಡ್‌ ತೋರಿಸಬೇಕು. ದರ್ಶನದ ಟೋಕನ್‌ ಇಲ್ಲದ ಭಕ್ತರು ತಿರುಪತಿಯ ಲಡ್ಡು ಪ್ರಸಾದ ಪಡೆಯುವಾಗ ಆಧಾರ್‌ ತೋರಿಸುವುದನ್ನು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಕಡ್ಡಾಯಗೊಳಿಸಿದೆ. ಕೆಲ ಮಧ್ಯವರ್ತಿಗಳು ಲಡ್ಡುಗಳನ್ನು ಕಾಳಸಂತೆಯಲ್ಲಿ ಮಾರುತ್ತಿದ್ದಾರೆ. ಇದನ್ನು ತಡೆದು ಪಾರದರ್ಶಕತೆ ತರಲು ಈ ಕ್ರಮ ಕೈಗೊಳ್ಳಲಾಗಿದ್ದು, ಟೋಕನ್‌ ಖರೀದಿಸದ ಭಕ್ತರು ಆಧಾರ್‌ ತೋರಿಸಿ 2 ಲಡ್ಡು ಪಡೆಯಬಹುದು. ಇದ್ಕಾಗಿ ಲಡ್ಡು ಕಾಂಪ್ಲೆಕ್ಸ್‌ನಲ್ಲಿ ವಿಶೇಷ ಕೌಂಟರ್‌ಗಳನ್ನು ಸ್ಥಾಪಿಸಲಾಗಿದೆ

ತಿರುಪತಿ ಲಡ್ಡು ಬೇಕಾದರೆ ಆಧಾರ್‌ ತೋರಿಸಬೇಕು! Read More »

ವಿದ್ಯಾರ್ಥಿನಿಯರ ಹಾಸ್ಟೆಲ್‌ನಲ್ಲಿ ರಹಸ್ಯ ಕ್ಯಾಮರ ಪತ್ತೆ : ಯುವಕ ಸೆರೆ

ಹಣ ಸಂಪಾದಿಸಲು ಅಡ್ಡದಾರಿ ಹಿಡಿದಿದ್ದ ಇಂಜಿನಿಯರಿಂಗ್‌ ವಿದ್ಯಾರ್ಥಿ ಅಮರಾವತಿ: ಆಂಧ್ರಪ್ರದೇಶದ ಇಂಜಿನಿಯರಿಂಗ್ ಕಾಲೇಜೊಂದರ ವಿದ್ಯಾರ್ಥಿನಿಯರ ಹಾಸ್ಟೆಲ್‍ನ ಶೌಚಾಲಯದಲ್ಲಿ ಕ್ಯಾಮೆರಾ ಪತ್ತೆಯಾದ ಬಳಿಕ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ಮಾಡಿದ್ದಾರೆ. ವಿಡಿಯೋ ಸೆರೆ ಹಿಡಿದು ಮಾರಾಟ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಕೃಷ್ಣಾ ಜಿಲ್ಲೆಯ ಇಂಜಿನಿಯರಿಂಗ್ ಕಾಲೇಜೊಂದರಲ್ಲಿ ಈ ಪ್ರಕರಣ ನಡೆದಿದೆ. ಗುರುವಾರ ಸಂಜೆ ವಾಶ್‍ರೂಮ್‍ನಲ್ಲಿ ಮುಚ್ಚಿಟ್ಟಿದ್ದ ವಸ್ತುವೊಂದನ್ನು ವಿದ್ಯಾರ್ಥಿನಿ ಗಮನಿಸಿದ್ದಾಳೆ. ನೋಡಿದಾಗ ಕ್ಯಾಮೆರಾ ಇರುವುದು ಪತ್ತೆಯಾಗಿದೆ. ಕ್ಯಾಮೆರಾ ಪರಿಶೀಲಿಸಿದಾಗ ವಿಡಿಯೋಗಳು ಸಿಕ್ಕಿವೆ. ಪ್ರಕರಣಕ್ಕೆ ಸಂಬಂಧ ವಿದ್ಯಾರ್ಥಿಗಳ ಹಾಸ್ಟೆಲ್‍ನ ಇಂಜಿನಿಯರಿಂಗ್ ಅಂತಿಮ

ವಿದ್ಯಾರ್ಥಿನಿಯರ ಹಾಸ್ಟೆಲ್‌ನಲ್ಲಿ ರಹಸ್ಯ ಕ್ಯಾಮರ ಪತ್ತೆ : ಯುವಕ ಸೆರೆ Read More »

ಗ್ಯಾರಂಟಿಗಳ ಹೊರೆ : ಶಾಸಕರು, ಕಾರ್ಯದರ್ಶಿಗಳ ಸಂಬಳ ಕಟ್‌

ಉಚಿತ ಕೊಡುಗೆಗಳಿಂದ ಬೊಕ್ಕಸ ಖಾಲಿ ಶಿಮ್ಲಾ: ಕಾಂಗ್ರೆಸ್‌ ಆಡಳಿತವಿರುವ ಹಿಮಾಚಲ ಪ್ರದೇಶದಲ್ಲಿ ಗ್ಯಾರಂಟಿ ಕೊಡುಗೆಗಳ ಹೊಡೆತದಿಂದ ರಾಜ್ಯದ ಬೊಕ್ಕಸ ಬರಿದಾಗಿದೆ. ಪರಿಸ್ಥಿತಿ ಎಲ್ಲಿಗೆ ತಲುಪಿದೆ ಎಂದರೆ ಅಲ್ಲಿ ಶಾಸಕರಿಗೆ ವೇತನ ನೀಡಲು ಹಣ ಇಲ್ಲದಂತಾಗಿದೆ. ಹೀಗಾಗಿ ಸರಕಾರ ಸಚಿವರೂ ಸೇರಿದಂತೆ ಎಲ್ಲ ಶಾಸಕರಿಗೆ ಎರಡು ತಿಂಗಳ ವೇತನ, ಭತ್ಯೆಗಳು ಸೇರಿದಂತೆ ಯಾವೊಂದು ಪಾವತಿಯೂ ಸಾಧ್ಯವಿಲ್ಲ ಎಂದು ಹೇಳಿದೆ.ಸಚಿವರು, ಮುಖ್ಯ ಸಂಸದೀಯ ಕಾರ್ಯದರ್ಶಿಗಳು ಮತ್ತು ಕ್ಯಾಬಿನೆಟ್ ದರ್ಜೆಯ ಸದಸ್ಯರಿಗೆ 2 ತಿಂಗಳವರೆಗೆ ಯಾವುದೇ ವೇತನ ಹಾಗೂ ಭತ್ಯೆ ನೀಡಲಾಗುವುದಿಲ್ಲ

ಗ್ಯಾರಂಟಿಗಳ ಹೊರೆ : ಶಾಸಕರು, ಕಾರ್ಯದರ್ಶಿಗಳ ಸಂಬಳ ಕಟ್‌ Read More »

ನಿವೃತ್ತ ಶಿಕ್ಷಕ ಕೊಲೆ ಪ್ರಕರಣ | ಕೊಲೆಗೆ ಬಳಸಿದ ಬೈಕ್‍, ಕತ್ತಿ, ಬಟ್ಟೆ ವಶಕ್ಕೆ ಪಡೆದ ಪೊಲೀಸರು

ಬೆಳ್ತಂಗಡಿ : ನಿವೃತ್ತ ಶಿಕ್ಷಕ ಬಾಲಕೃಷ್ಣ ಭಟ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಐದು ದಿನಗಳ ಪೊಲೀಸ್ ಕಸ್ಟಡಿಗೆ ಪಡೆದ ಬಳಿಕ ಮಧ್ಯಾಹ್ನ ಕಾಸರಗೋಡು ಮನೆಗೆ ತೆರಳಿದ ಧರ್ಮಸ್ಥಳ ಪೊಲೀಸರ ತಂಡ ಕೊಲೆಗೆ ಬಳಸಿದ ಬೈಕ್, ಕತ್ತಿ, ಬಟ್ಟೆಗಳನ್ನು ವಶಕ್ಕೆ ಪಡೆದುಕೊಂಡಿದೆ. ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ನಿವೃತ್ತ ಶಿಕ್ಷಕ ಬಾಲಕೃಷ್ಣ ಭಟ್(83) ಅವರನ್ನು ಕೊಲೆ ಮಾಡಿದ ಆರೋಪಿಗಳಾದ ಕಾಸರಗೋಡು ತಾಲೂಕಿನ ಕುಂಬ್ರಾಜಿ ಗ್ರಾಮದ ಒಡಬ್ಬಳ ನಿವಾಸಿಯಾಗಿರುವ ಆಳಿಯ ರಾಘವೇಂದ್ರ ಕೆದಿ ಲಾಯ ( 53)

ನಿವೃತ್ತ ಶಿಕ್ಷಕ ಕೊಲೆ ಪ್ರಕರಣ | ಕೊಲೆಗೆ ಬಳಸಿದ ಬೈಕ್‍, ಕತ್ತಿ, ಬಟ್ಟೆ ವಶಕ್ಕೆ ಪಡೆದ ಪೊಲೀಸರು Read More »

error: Content is protected !!
Scroll to Top