ಮನರಂಜನೆ

ಕಾಂತಾರ-1 ಶೂಟಿಂಗ್‌ನಲ್ಲಿ ಇನ್ನೊಂದು ಅವಘಡ : ಜಲಾಶಯದಲ್ಲಿ ದೋಣಿ ಪಲ್ಟಿ

ಶಿವಮೊಗ್ಗ: ಕಾಂತಾರ-1 ಚಿತ್ರತಂಡಕ್ಕೆ ಇನ್ನೊಂದು ಅವಘಡ ಎದುರಾದ ಕುರಿತು ವರದಿಯಾಗಿದೆ. ನಿನ್ನೆ ರಾತ್ರಿ ತೀರ್ಥಹಳ್ಳಿ ಸಮೀಪ ಶೂಟಿಂಗ್‌ ನಡೆಯುತ್ತಿದ್ದಾಗ ದೋಣಿ ಮಗುಚಿ ಬಿದ್ದು ಅವಘಡ ಸಂಭವಿಸಿದೆ. ಆದರೆ ಯಾವುದೇ ಸಾವುನೋವು ಸಂಭವಿಸಿಲ್ಲ. ಬೋಟ್‌ನಲ್ಲಿ ಚಿತ್ರದ ನಾಯಕ ಮತ್ತು ನಿರ್ದೇಶಕ ರಿಷಬ್‌ ಶೆಟ್ಟಿಯವರೂ ಇದ್ದರು ಎನ್ನಲಾಗಿದೆ. ಕಾಂತಾರ-1 ಸಿನಿಮಾದ ಚಿತ್ರೀಕರಣ ಆರಂಭ ಮಾಡಿದಾಗಿನಿಂದಲೂ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತಲೇ ಇವೆ. ಸಿನಿಮಾ ಶೂಟಿಂಗ್​​ನಲ್ಲಿ ಭಾಗಿ ಆಗಿದ್ದ ಮೂರು ಮಂದಿ ನಿಧನ ಹೊಂದಿದ್ದಾರೆ. ಇದೀಗ ಮತ್ತೊಂದು ಅಪಘಾತ ಸಿನಿಮಾ ಸೆಟ್​ನಲ್ಲಿ […]

ಕಾಂತಾರ-1 ಶೂಟಿಂಗ್‌ನಲ್ಲಿ ಇನ್ನೊಂದು ಅವಘಡ : ಜಲಾಶಯದಲ್ಲಿ ದೋಣಿ ಪಲ್ಟಿ Read More »

ವಾಗೀಶ್ ವಿ 68 ಆಫೀಷಿಯಲ್ ಅರ್ಪಿಸುವ ಸಸ್ಪೆನ್ಸ್ ಲವ್ ಸ್ಟೋರಿಯ ಪೋಸ್ಟರ್ ಮತ್ತು ಟ್ರೈಲರ್ ಬಿಡುಗಡೆ

ಬೆಳ್ತಂಗಡಿ: ವಾಗೀಶ್ ವಿ 68 ಅಫೀಷಿಯಲ್ ಅರ್ಪಿಸುವ ಸಸ್ಪೆನ್ಸ್ ಲವ್ ಸ್ಟೋರಿಯ ಪೋಸ್ಟರ್ ಮತ್ತು ಟ್ರೈಲರ್ ಜೂನ್ 8 ಭಾನುವಾರದಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬಿಡುಗಡೆಯಾಗಿದೆ. ಸಮಾಜ ಸೇವಕ ,ಆಪತ್ಬಾಂದವ ಈಶ್ವರ್ ಮಲ್ಪೆ ಇವರು ಮೋಕೆದ ತಿರ್ಲ್ ಕಿರು ಸಸ್ಪೆನ್ಸ್ ಲವ್ ಸ್ಟೋರಿಯ ಪೋಸ್ಟರ್ ಹಾಗೂ ಟ್ರೈಲರ್ ಬಿಡುಗಡೆ ಮಾಡಿದ್ದಾರೆ. ಹಾಗೆಯೇ ಮೋಕೆದ ತಿರ್ಲ್ [True love (Fake love) =? ಎಂಬ ಕುತೂಹಲಕಾರಿಯಾದ ಸಿನಿಮಾ ಇದಾಗಿದೆ. ಈ ಸಸ್ಪೆನ್ಸ್ ತುಳು ಲವ್ ಸ್ಟೋರಿಯ ಬಿಡುಗಡೆ ಯ

ವಾಗೀಶ್ ವಿ 68 ಆಫೀಷಿಯಲ್ ಅರ್ಪಿಸುವ ಸಸ್ಪೆನ್ಸ್ ಲವ್ ಸ್ಟೋರಿಯ ಪೋಸ್ಟರ್ ಮತ್ತು ಟ್ರೈಲರ್ ಬಿಡುಗಡೆ Read More »

ಈ ಸಲ ಕಪ್‌ ನಮ್ದೇ : ಆರ್‌ಸಿಬಿ ಚಾಂಪಿಯನ್‌ ಆಗಲು ಇನ್ನೊಂದೆ ಹೆಜ್ಜೆ ಬಾಕಿ

ನಾಳೆ ಅಹಮಬಾದಾದ್‌ನಲ್ಲಿ ಆರ್‌ಸಿಬಿ-ಪಂಜಾಬ್‌ ನಡುವೆ ಫೈನಲ್‌ ಪಂದ್ಯ ಅಹಮದಾಬಾದ್‌ : ಐಪಿಎಲ್‌ನಲ್ಲಿ ಆರ್‌ಸಿಬಿ ಚಾಂಪಿಯನ್‌ ಆಗಲು ಉಳಿದಿರುವುದು ಇನ್ನು ಒಂದೇ ಪಂದ್ಯ. ಮಂಗಳವಾರ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆಯುವ ಫೈನಲ್‌ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂಜಾಬ್‌ ಕಿಂಗ್ಸ್‌ ತಂಡವನ್ನು ಎದುರಿಸಲಿದ್ದು, ಆರ್‌ಸಿಬಿ ಕಪ್‌ ಎತ್ತಬೇಕೆಂಬ ಆರು ಕೋಟಿ ಕನ್ನಡಿಗರ ಹಾರೈಕೆ ಮುಗಿಲುಬಿಟ್ಟಿದೆ. ಈ ಸಲ ಯಾರೇ ಗೆದ್ದರೂ ಹೊಸ ಚಾಂಪಿಯನ್‌ ಮೂಡಿಬರುವುದು ಖಚಿತ. 2014ರ ನಂತರ ಮೊದಲ ಬಾರಿಗೆ ಪಂಜಾಬ್ ಕಿಂಗ್ಸ್ ಫೈನಲ್ ಪ್ರವೇಶಿಸಿದೆ. ಜೂನ್

ಈ ಸಲ ಕಪ್‌ ನಮ್ದೇ : ಆರ್‌ಸಿಬಿ ಚಾಂಪಿಯನ್‌ ಆಗಲು ಇನ್ನೊಂದೆ ಹೆಜ್ಜೆ ಬಾಕಿ Read More »

ಶ್ರೀ ಮಹಾಭಾರತ ಸರಣಿಯಲ್ಲಿ  ಉತ್ತರಾ ವಿವಾಹ ತಾಳಮದ್ದಳೆ

ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾಸೇವಾ ಸಂಘದ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯಲ್ಲಿ 77ನೇ ತಾಳಮದ್ದಳೆಯಾಗಿ ಉತ್ತರ ವಿವಾಹವು  ಮಂಗಳೂರು ಬೋಳಾರದ  ಮುಳಿಹಿತ್ಲಿನ ಶ್ರೀ ಮಾರಿಯಮ್ಮ ಕೃಪ ಮತ್ತು  ಶ್ರೀ ವಾಸುದೇವ ಕೃಷ್ಣ ನಿಲಯದ ಗೃಹಪ್ರವೇಶದ ಅಂಗವಾಗಿ ಜರಗಿತು. ಭಾಗವತರಾಗಿ ಪದ್ಮನಾಭ ಕುಲಾಲ್ ಇಳಂತಿಲ, ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ,ನಿತೀಶ್ ಮನೋಳಿತ್ತಾಯ ಹಿಮ್ಮೇಳದಲ್ಲಿ ಶಿವದಾಸ್ ಪ್ರಭು ಮಂಗಳೂರು, ಪರೀಕ್ಷಿತ್.ಯಚ್ ಅರ್ಥಧಾರಿಗಳಾಗಿ ಶ್ರೀಧರ ಎಸ್ಪಿ ಸುರತ್ಕಲ್ (ಕೌರವ, ಅಭಿಮನ್ಯು), ಸತೀಶ ಶಿರ್ಲಾಲು(ಸುಶರ್ಮ) ಶ್ರುತಿ ವಿಸ್ಮಿತ್(ಭೀಮ, ಉತ್ತರೆ),

ಶ್ರೀ ಮಹಾಭಾರತ ಸರಣಿಯಲ್ಲಿ  ಉತ್ತರಾ ವಿವಾಹ ತಾಳಮದ್ದಳೆ Read More »

ಮಾತೃಶ್ರೀ ಕ್ರಿಯೇಷನ್  ಅರ್ಪಿಸುವ  ವಿಭಿನ್ನ ಕಥಾಧಾರಿತ ಕಿರುಚಿತ್ರದ ಟ್ರೈಲರ್‌  ಬಿಡುಗಡೆ

ಪುತ್ತೂರು : ಮಾತೃಶ್ರೀ ಕ್ರಿಯೇಷನ್  ಅರ್ಪಿಸುವ  ಚಲನಚಿತ್ರ ನಟ ಆರ್ಯನ್ ಇವರ ಸಹಕಾರದಲ್ಲಿ ಅಶ್ವಥ್ ಎನ್ ಪುತ್ತೂರು  ಇವರ ಕಥೆ, ಚಿತ್ರಕಥೆ, ಸಂಭಾಷಣೆಯಲ್ಲಿ ಮೋಡಿಬಂದ ವಿಭಿನ್ನ ಕಥಾಧಾರಿತವಾದ  “ಅಸ್ಮಿತ” ಕಿರುಚಿತ್ರದ ಪೋಸ್ಟರನ್ನು ಅಭಿನಯ ಆರ್ಟ್ಸ್ ತಂಡದ  ನಿರ್ದೇಶಕರಾದ  ಜಿಲ್ಲಾ ಮತ್ತು ತಾಲೂಕು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕಲಾಚತುರ   ಕೇಶವ ಮಚ್ಚಿಮಲೆ ಬಿಡುಗಡೆ ಮಾಡಿದ್ದು, ಇದೀಗ ಕನ್ನಡ, ತುಳು ತೆನ್ಕಾಯಿ ಮಲೆ ಸಿನಿಮಾದ ಖ್ಯಾತ ನಿರ್ದೇಶಕರಾದ ರವೀಚಂದ್ರ ಮುಂಡೂರು  ಟ್ರೈಲರನ್ನು  ಬಿಡುಗಡೆ ಮಾಡಿದ್ದಾರೆ. “ಅಸ್ಮಿತ” ಕಿರುಚಿತ್ರ ಟ್ರೈಲರ್‌ ಮೂಲಕ

ಮಾತೃಶ್ರೀ ಕ್ರಿಯೇಷನ್  ಅರ್ಪಿಸುವ  ವಿಭಿನ್ನ ಕಥಾಧಾರಿತ ಕಿರುಚಿತ್ರದ ಟ್ರೈಲರ್‌  ಬಿಡುಗಡೆ Read More »

ಕಮಲಹಾಸನ್‌ರ ಥಗ್‌ಲೈಫ್‌ ಸಿನಿಮಾಕ್ಕೆ ಕನ್ನಡಿಗರ ಪ್ರತಿಭಟನೆಯ ಬಿಸಿ

ನಿಮ್ಮ ಕನ್ನಡ ನಮ್ಮಿಂದ ಬಂದಿದ್ದು ಎಂದು ಹೇಳಿ ಕನ್ನಡಿಗರನ್ನು ಕೆರಳಿಸಿರುವ ನಟ ಬೆಂಗಳೂರು: ಕಮಲಹಾಸನ್ ಅವರ ತಮಿಳಿನಿಂದಲೇ ಕನ್ನಡ ಹುಟ್ಟಿದೆ ಎಂಬ ಹೇಳಿಕೆ ಕನ್ನಡಿಗರ ಸ್ವಾಭಿಮಾನವನ್ನು ಕೆರಳಿಸಿದೆ. ನಿನ್ನೆಯಿಂದೀಚೆಗೆ ಮಾಧ್ಯಮಗಳಲ್ಲಿ ಮತ್ತು ಸೋಷಿಯಲ್‌ ಮೀಡಿಯಾಗಳಲ್ಲಿ ಕಮಲ ಹಾಸನ್‌ ಹೇಳಿಕೆ ವಿರುದ್ಧ ಭಾರಿ ಚರ್ಚೆ ನಡೆಯುತ್ತಿದೆ. ನಟನ ಮುಂಬರುವ ಥಗ್‌ಲೈಫ್‌ ಚಿತ್ರದ ಬಿಡುಗಡೆಯನ್ನು ತಡೆಯಬೇಕೆಂದು ಅನೇಕ ಕನ್ನಡ ಪರ ಹೋರಾಟಗಾರರು ಕರೆ ಕೊಟ್ಟಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಖ್ಯಾತ ಗಾಯಕ ಸೋನು ನಿಗಮ್ ಕನ್ನಡಿಗರನ್ನು ಕೆರಳಿಸುವ ಕೆಲಸ ಮಾಡಿದ್ದರು.

ಕಮಲಹಾಸನ್‌ರ ಥಗ್‌ಲೈಫ್‌ ಸಿನಿಮಾಕ್ಕೆ ಕನ್ನಡಿಗರ ಪ್ರತಿಭಟನೆಯ ಬಿಸಿ Read More »

ಇಷ್ಟಾರ್ಥ ಸಿದ್ಧಿಯ  ತಾಳಮದ್ದಳೆ ಸತ್ವ ಪರೀಕ್ಷೆ

ಶ್ರೀ ದುರ್ಗಾಂಬ ಕಲಾಸಂಗಮ ಶ್ರೀ ಕ್ಷೇತ್ರ ಶರವೂರು ಆಲಂಕಾರು ವತಿಯಿಂದ  ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ಸತ್ವ ಪರೀಕ್ಷೆ  ಯಕ್ಷಗಾನ ತಾಳಮದ್ದಳೆ ಸೇವೆ ನಡೆಯಿತು  ಭಾಗವತರಾಗಿ ಪದ್ಮನಾಭ ಕುಲಾಲ್,  ನಿತೀಶ್ ಮನೊಳಿತ್ತಾಯ,ಚೆಂಡೆ ಮತ್ತು ಮದ್ದಳೆಯಲ್ಲಿ  ಕೇಶವ ಬೈಪಡಿತ್ತಾಯ,ಚಂದ್ರ ದೇವಾಡಿಗ ನಗ್ರಿ,   ಶ್ರೀಹರಿ ನಗ್ರಿ,ಚಕ್ರತಾಳದಲ್ಲಿ ಸಂಜಯ ಕಡಬ ಅರ್ಥಧಾರಿಗಳಾಗಿ ಗಣರಾಜ ಕುಂಬ್ಳೆ ಮತ್ತು ದಿವಾಕರ ಆಚಾರ್ಯ ಗೇರುಕಟ್ಟೆ( ಶ್ರೀ ಕೃಷ್ಣ) ಅಂಬಾ ಪ್ರಸಾದ್ ಪಾತಾಳ (ಸುಭದ್ರೆ)ನಾರಾಯಣ ಭಟ್ ಆಲಂಕಾರು(ರುಕ್ಮಿಣಿ) ರಾಮ್ ಪ್ರಕಾಶ್ ಕೊಡಂಗೆ

ಇಷ್ಟಾರ್ಥ ಸಿದ್ಧಿಯ  ತಾಳಮದ್ದಳೆ ಸತ್ವ ಪರೀಕ್ಷೆ Read More »

ಶ್ರವಣರಂಗ ಸವಣೂರು ಇದರ ವತಿಯಿಂದ ಯಕ್ಷಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಯಕ್ಷಗಾನ ತಾಳಮದ್ದಳೆ

ವೀರಮಂಗಲ  : ಶ್ರವಣರಂಗ ಸವಣೂರು ಇದರ ವತಿಯಿಂದ ಯಕ್ಷಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಯಕ್ಷಗಾನ ತಾಳಮದ್ದಳೆಯು ಪಿಎಂಶ್ರೀ ವೀರಮಂಗಲ ಶಾಲೆಯಲ್ಲಿ ನಡೆಯಿತು. ದಿ.ರಾಮಚಂದ್ರ ಅರ್ಬಿತ್ತಾಯ ಸಂಸ್ಮರಣೆ ಹಾಗೂ ಸುಶ್ರಾವ್ಯ ಸ್ವರದ ಯಕ್ಷಗಾನ ಭಾಗವತರಾದ ಕು.ರಚನಾ ಚಿದ್ಗಲ್ ಇವರಿಗೆ  ಶ್ರವಣಸ್ವರ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿದ್ಯಾರ್ಥಿಯಾಗಿದ್ದುಕೊಂಡು ಯಕ್ಷಗಾನದಲ್ಲಿ ಸಾಧನೆ ಮಾಡುತ್ತಿರುವ ಕಲಾವಿದರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ಆ ಬಳಿಕ ನಡೆದ  ಜಾಂಬವತಿ‌ ಕಲ್ಯಾಣ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದ ಭಾಗವತರಾಗಿ ಆನಂದ ಸವಣೂರು,  ಕು.ರಚನಾ ಹಾಗೂ

ಶ್ರವಣರಂಗ ಸವಣೂರು ಇದರ ವತಿಯಿಂದ ಯಕ್ಷಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಯಕ್ಷಗಾನ ತಾಳಮದ್ದಳೆ Read More »

ವಾಗೀಶ್ ವಿ 68 ಅಫೀಷಿಯಲ್ ಅರ್ಪಿಸುವ ಸಸ್ಪೆನ್ಸ್ ಲವ್ ಸ್ಟೋರಿಯ  ಟೈಟಲ್ ಪೋಸ್ಟರ್  ಬಿಡುಗಡೆ

ಬೆಳ್ತಂಗಡಿ : ವಾಗೀಶ್ ವಿ 68 ಆಫೀಷಿಯಲ್ ಅರ್ಪಿಸುವ ಸಸ್ಪೆನ್ಸ್ ಲವ್ ಸ್ಟೋರಿಯ  ಟೈಟಲ್ ಪೋಸ್ಟರ್  ಮೇ. 25 ಭಾನುವಾರ ಬಿಡುಗಡೆಯಾಗಿದೆ. ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದ ವಿಶ್ವನಾಥ ಕೆ ವಿಟ್ಲ ಇವರು  ಮೋಕೆದ ತಿರ್ಲ್ ಕಿರು ಸಸ್ಪೆನ್ಸ್ ಲವ್ ಸ್ಟೋರಿಯ ಟೈಟಲ್ ಬಿಡುಗಡೆ ಮಾಡಿದ್ದಾರೆ.  ಹಾಗೆಯೆ ಮೋಕೆದ ತಿರ್ಲ್ [True love (Fake love) =? ಎಂಬ ಕುತೂಹಲಕಾರಿಯಾದ ಸಿನಿಮಾ ಇದಾಗಿದೆ. ಈ ಸಸ್ಪೆನ್ಸ್ ತುಳು ಲವ್ ಸ್ಟೋರಿಯ ಟ್ರೈಲರ್ ಅತಿ ಶೀಘ್ರದಲ್ಲಿ

ವಾಗೀಶ್ ವಿ 68 ಅಫೀಷಿಯಲ್ ಅರ್ಪಿಸುವ ಸಸ್ಪೆನ್ಸ್ ಲವ್ ಸ್ಟೋರಿಯ  ಟೈಟಲ್ ಪೋಸ್ಟರ್  ಬಿಡುಗಡೆ Read More »

ಪುತ್ತೂರಿನಲ್ಲಿ ವಿಜೃಂಭಿಸಿದ ಯುವ ಪ್ರತಿಭಾನ್ವೇಷಣಾ ಸ್ಪರ್ಧಾ ಕಾರ್ಯಕ್ರಮ ‘ಡೆನ್ನಾನ ಡೆನ್ನನ’

ಪುತ್ತೂರು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಮಂಗಳೂರು ಕೇಂದ್ರ ಸಮಿತಿ ಆಶ್ರಯದಲ್ಲಿ, ಪುತ್ತೂರು ಘಟಕದ ಆತಿಥ್ಯದಲ್ಲಿ ಪುತ್ತೂರು ಬ್ರಹ್ಮ ಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಸಹಕಾರದೊಂದಿಗೆ ಯುವ ಪ್ರತಿಭಾನ್ವೇಷಣಾ ಸ್ಪರ್ಧಾ ಕಾರ್ಯಕ್ರಮ ‘ಡೆನ್ನಾನ ಡೆನ್ನನ’ ಸುದಾನ ವಸತಿಯುತ ಶಾಲಾ ಆವರಣದಲ್ಲಿ ಭಾನುವಾರ ನಡೆಯಿತು. ಬೆಳಗ್ಗೆ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ್‍ ಬಿತ್ತಿಲ್‍ನ ಯಜಮಾನ ಶ್ರೀಧರ ಪೂಜಾರಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ಡೋಲು ಬಾರಿಸುವ ಮೂಲಕ ಡೆನ್ನಾನ ಡೆನ್ನನ ಸ್ಪರ್ಧಾ ಕಾರ್ಯಕ್ರಮವನ್ನು ಸಂಜೀವ ಪೂಜಾರಿ ಉದ್ಘಾಟಿಸಿದರು.

ಪುತ್ತೂರಿನಲ್ಲಿ ವಿಜೃಂಭಿಸಿದ ಯುವ ಪ್ರತಿಭಾನ್ವೇಷಣಾ ಸ್ಪರ್ಧಾ ಕಾರ್ಯಕ್ರಮ ‘ಡೆನ್ನಾನ ಡೆನ್ನನ’ Read More »

error: Content is protected !!
Scroll to Top