“ಯಕ್ಷವಾಹಿನಿ” ಸಾಂಸ್ಕೃತಿಕ ವಿಸ್ತರಣೆ ಕಾರ್ಯಕ್ರಮ | ಯಕ್ಷಕಲಾ ಕೇಂದ್ರ ಮತ್ತು ಎನ್ಎಸ್ಕಿಲ್ಲೆ ಪ್ರತಿಷ್ಠಾನ ತಿಳುವಳಿಕೆ ಜ್ಞಾಪಕ ಪತ್ರದ ಒಡಂಬಡಿಕೆ
ಪುತ್ತೂರು: ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಭಾರತೀಯ ಶಾಸ್ತ್ರೀಯ ಮತ್ತು ಜಾನಪದ ಕಲೆಗಳ ಅಧ್ಯಯನ ಕೇಂದ್ರ “ಯಕ್ಷ ಕಲಾಕೇಂದ್ರ” ಮತ್ತು ದೇಶಭಕ್ತ ಎನ್ಎಸ್ ಕಿಲ್ಲೆ ಪ್ರತಿಷ್ಠಾನದ ಸಹಯೋಗದಲ್ಲಿ ಮೋಕ್ಷ ಸಂಗ್ರಾಮ ಯಕ್ಷಗಾನ ಪ್ರದರ್ಶನ ಕೆದಂಬಾಡಿ ಸನ್ಯಾಸಿಗುಡ್ಡೆಯ ಸದ್ಗುರು ಗೋಪಾಲ ನಾಯರ್ಸ್ಸಭಾಭವನದಲ್ಲಿ ಇತ್ತೀಚೆಗೆ ಸಂಪನ್ನಗೊಂಡಿತು. ಯಕ್ಷಕಲಾ ಕೇಂದ್ರ ಮತ್ತು ಎನ್ಎಸ್ಕಿಲ್ಲೆ ಪ್ರತಿಷ್ಠಾನ ತಿಳುವಳಿಕೆ ಜ್ಞಾಪಕ ಪತ್ರದ ಒಡಂಬಡಿಕೆಯಂತೆ ಸಾಂಸ್ಕೃತಿಕ ವಿಸ್ತರಣೆ ಕಾರ್ಯಕ್ರಮ, ದತ್ತುಗ್ರಾಮ ಕೆದಂಬಾಡಿಯಲ್ಲಿ ವೈಭವದಿಂದ ಜರಗಿತು. ಮೋಕ್ಷ ಸಂಗ್ರಾಮ ಯಕ್ಷಗಾನ ಪ್ರಸಂಗವನ್ನುಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಮತ್ತು ಸಂಪನ್ಮೂಲ […]