ದಕ್ಷಿಣ ಕನ್ನಡ

ಸಮುದ್ರಕ್ಕೆ ಹಾರಿದ ವಿದ್ಯಾರ್ಥಿನಿ : ಈಜುಗಾರರಿಂದ ರಕ್ಷಣೆ

ಉಳ್ಳಾಲ: ಸಮುದ್ರಕ್ಕೆ ಹಾರಿದ ವಿದ್ಯಾರ್ಥಿನಿಯನ್ನು ಈಜುಗಾರರು ರಕ್ಷಿಸಿದ ಘಟನೆ ಉಳ್ಳಾಲದಲ್ಲಿ ನಡೆದಿದೆ. ಸೋಮೇಶ್ವರದ ರುದ್ರಬಂಡೆಯಿಂದ ಸಮುದ್ರಕ್ಕೆ ಹಾರಿದ ವಿದ್ಯಾರ್ಥಿನಿಯನ್ನು ಗಮನಿಸಿದ ಸ್ಥಳೀಯ ಮೀನುಗಾರರು ಸ್ಥಳದಲ್ಲಿ ಸಿಕ್ಕ ರಕ್ಷಣಾ ಸಾಮಗ್ರಿ ಬಳಸಿ ರಕ್ಷಿಸಿದ್ದಾರೆ. ಉಳ್ಳಾಲ ಸಮೀಪ ಮಾಡೂರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಮಂಗಳೂರಿನ ಕಾಲೇಜೊಂದರ ಪದವಿ ವಿದ್ಯಾರ್ಥಿನಿಯಾಗಿದ್ದಾಳೆ. ಯುವತಿ ಸುರಕ್ಷಿತವಾಗಿದ್ದು, ಮಂಗಳೂರಿನ ವೆಸ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ಸಮುದ್ರಕ್ಕೆ ಹಾರಿದ ವಿದ್ಯಾರ್ಥಿನಿ : ಈಜುಗಾರರಿಂದ ರಕ್ಷಣೆ Read More »

ಪುತ್ತೂರು ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ದಶಮಾನೋತ್ಸವ | ದಾಂಪತ್ಯ ಜೀವನದ ಐವತ್ತು ವರ್ಷ ಪೂರೈಸಿದ ಮಾದರಿ ದಂಪತಿಗಳಿಗೆ ಕುದ್ಮಾರು ಅನ್ಯಾಡಿ ತರವಾಡು ಮನೆಯಲ್ಲಿ ಸನ್ಮಾನ

ಕಾಣಿಯೂರು: ಪುತ್ತೂರು ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ದಶಮಾನೋತ್ಸವ ಸಮಿತಿಯ ಸಹಯೋಗದೊಂದಿಗೆ ಒಕ್ಕಲಿಗ ಸ್ವಸಹಾಯ ಒಕ್ಕೂಟ, ಯುವ ಸಂಘ, ಮಹಿಳಾ ಸಂಘ ಗ್ರಾಮ ಸಮಿತಿಗಳ  ಸಹಕಾರದೊಂದಿಗೆ  ಒಕ್ಕಲಿಗ ಟ್ರಸ್ಟ್ ನ ದಶಮಾನೋತ್ಸವದ ಸಂಭ್ರಮದ ಅಂಗವಾಗಿ ಒಕ್ಕಲಿಗ ಸ್ವ ಸಹಾಯ ಸಂಘಗಳಿರುವ ಎಲ್ಲಾ ಗ್ರಾಮಗಳಲ್ಲಿ ದಾಂಪತ್ಯ ಜೀವನದ ಐವತ್ತು ವರ್ಷ ಪೂರೈಸಿದ ಮಾದರಿ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ನ.23 ರಂದು ಕುದ್ಮಾರು ಅನ್ಯಾಡಿ ತರವಾಡು ಮನೆಯಲ್ಲಿ 6 ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ 50

ಪುತ್ತೂರು ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ದಶಮಾನೋತ್ಸವ | ದಾಂಪತ್ಯ ಜೀವನದ ಐವತ್ತು ವರ್ಷ ಪೂರೈಸಿದ ಮಾದರಿ ದಂಪತಿಗಳಿಗೆ ಕುದ್ಮಾರು ಅನ್ಯಾಡಿ ತರವಾಡು ಮನೆಯಲ್ಲಿ ಸನ್ಮಾನ Read More »

ಆಕಸ್ಮಿಕ ಬೆಂಕಿ ತಗುಲಿ ಗಾಯಗೊಂಡ ಜೀತು ನೇಲ್ಯಪಲ್ಕೆ | ವಿಶ್ವಹಿಂದೂ ಪರಿಷತ್ ಬಜರಂಗದಳ ಘಟಕದಿಂದ ಧನಸಹಾಯ ಹಸ್ತಾಂತರ

ಬಂಟ್ವಾಳ: ತೀರಾ ಕಡು ಬಡತನದಲ್ಲಿದ್ದ ಆದಿದ್ರಾವಿಡ ಸಮುದಾಯದ ಜೀತು ನೇಲ್ಯಪಲ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಗಾಯಗೊಂಡಿದ್ದು, ಜೀವನ ನಿರ್ವಹಣೆ ಕಷ್ಟದಲ್ಲಿದ್ದುದನ್ನು ಮನಗಂಡು ವಿಶ್ವ ಹಿಂದೂ ಪರಿಷದ್ ಬಜರಂಗದಳ ವೀರಕೇಸರಿ ಶಾಖೆ ಮೀಯಾರುಪಲ್ಕೆ ಸರಪಾಡಿ ಕಾರ್ಯಕರ್ತರು ಧನಸಹಾಯ ನೀಡಿದರು. ಬೆಂಕಿ ತಾಗಿದ ಪರಿಣಾಮ ಮುಖ, ಕಿವಿ ಹಾಗೂ ದೇಹದ ಭಾಗ ಸುಟ್ಟು ಹೋಗಿದ್ದು, ದಾನಿಗಳ ಮೂಲಕ ಸಂಗ್ರಹಿಸಲ್ಪಟ್ಟ 25,950 ರೂಪಾಯಿಗಳನ್ನು ಸಂತ್ರಸ್ತ ಕುಟುಂಬಕ್ಕೆ ಹಸ್ತಾಂತರ ಮಾಡಲಾಯಿತು. ಈ ಸಂದರ್ಭದಲ್ಲಿ ಬಜರಂಗದಳದ ಜಿಲ್ಲಾ ಸುರಕ್ಷಾ ಪ್ರಮುಖ್ ಸಂತೋಷ್ ಸರಪಾಡಿ, ಬಜರಂಗದಳ

ಆಕಸ್ಮಿಕ ಬೆಂಕಿ ತಗುಲಿ ಗಾಯಗೊಂಡ ಜೀತು ನೇಲ್ಯಪಲ್ಕೆ | ವಿಶ್ವಹಿಂದೂ ಪರಿಷತ್ ಬಜರಂಗದಳ ಘಟಕದಿಂದ ಧನಸಹಾಯ ಹಸ್ತಾಂತರ Read More »

3 ವರ್ಷದ ಮಗುವಿಗೆ 70ರ ವೃದ್ಧನಿಂದ ಲೈಂಗಿಕ ಕಿರುಕುಳ

ಮಂಗಳೂರು: ಉಳ್ಳಾಲ ತಾಲೂಕಿನ ಬಾಳೆಪುಣಿ ಎಂಬಲ್ಲಿ 70 ವರ್ಷದ ವೃದ್ಧ ಮೂರು ವರ್ಷದ ಹೆಣ್ಣು ಮಗುವಿಗೆ ಲೈಂಗಿಕ ಕಿರುಕುಳ ನೀಡಿದ ಆಘಾತಕಾರಿ ಘಟನೆ ಸಂಭವಿಸಿದೆ. ಅಡಿಕೆ ಅಂಗಡಿಯೊಂದರ ಬಳಿ ಆಟವಾಡುತ್ತಿದ್ದ ಬಾಲಕಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ ವೃದ್ಧ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮೂಲತಃ ಪುತ್ತೂರು ನಿವಾಸಿ, ಪ್ರಸ್ತುತ ಮುದುಂಗಾರುಕಟ್ಟೆಯಲ್ಲಿ ವಾಸವಾಗಿರುವ ಅಬ್ದುಲ್ಲಾ (70) ಆರೋಪಿ. ಮಗು ಆಟವಾಡುತ್ತಿದ್ದಾಗ ಆರೋಪಿ ಲೈಂಗಿಕ ಕಿರುಕುಳ ನೀಡಿದ್ದು, ಅಸ್ವಸ್ಥಗೊಂಡ ಮಗುವನ್ನು ಗಮನಿಸಿ ವೈದ್ಯಕೀಯ

3 ವರ್ಷದ ಮಗುವಿಗೆ 70ರ ವೃದ್ಧನಿಂದ ಲೈಂಗಿಕ ಕಿರುಕುಳ Read More »

ವಿದ್ಯಾರಶ್ಮಿ ಪ್ರಥಮದರ್ಜೆ ಕಾಲೇಜಿನಲ್ಲಿ “INFOTSAV 2K24” ಸಮಾರೋಪ ಸಮಾರಂಭ

ಸವಣೂರು:  ವಿದ್ಯಾರಶ್ಮಿ ಪ್ರಥಮದರ್ಜೆ ಕಾಲೇಜಿನಲ್ಲಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳ “INFOTSAV 2K24”  ಸಮಾರೋಪ ಸಮಾರಂಭ ಗುರುವಾರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಸಹಕಾರ ರತ್ನ ಸವಣೂರು ಕೆ.ಸೀತಾರಾಮ ರೈ ವಹಿಸಿ, ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಶುಭ ಹಾರೈಸಿ, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಸ್ಪರ್ಧಿಗಳಾಗಲು ಹೆಚ್ಚು ಜ್ಞಾನವನ್ನು ಸಂಪಾದಿಸಿಕೊಳ್ಳಬೇಕು. ಸ್ಪರ್ಧೆ ತರಬೇತಿಗಳು ನಮ್ಮನ್ನು ಉನ್ನತ ಮಟ್ಟಕ್ಕೆ ಕೊಂಡುಯ್ಯುತ್ತದೆ ಎಂದರು. ಮುಖ್ಯಅತಿಥಿಯಾಗಿ ಬೆಳ್ಳಾರೆ ಆರಕ್ಷಕ ಠಾಣೆಯ ಸಬ್‌ ಇನ್‌ ಸ್ಪೆಕ್ಟರ್

ವಿದ್ಯಾರಶ್ಮಿ ಪ್ರಥಮದರ್ಜೆ ಕಾಲೇಜಿನಲ್ಲಿ “INFOTSAV 2K24” ಸಮಾರೋಪ ಸಮಾರಂಭ Read More »

ಜಿಲ್ಲೆಯ ರೈತರ 14 ಕೋಟಿ ಸಾಲದ ಬಡ್ಡಿ, ಚಕ್ರಬಡ್ಡಿ ಮನ್ನಾಕ್ಕೆ ಆಗ್ರಹ | ಪತ್ರಿಕಾಗೋಷ್ಠಿಯಲ್ಲಿ ವಿಕ್ಟರ್ ಮಾರ್ಟಿನ್

ಪುತ್ತೂರು: ಸುಸ್ತಿಯಾದ ಬೆಳೆಸಾಲದ ಬಡ್ಡಿಯನ್ನು ಮನ್ನಾ ಮಾಡದಿರುವುದರಿಂದ ದ.ಕ.ಜಿಲ್ಲೆಯ 731 ಮಂದಿ ರೈತರು ಅವಕಾಶ ವಂಚಿತರಾಗಿದ್ದು, ಈ ರೈತರ ರೂ. 14 ಕೋಟಿಯಷ್ಟು ಬಡ್ಡಿ ಮತ್ತು ಚಕ್ರಬಡ್ಡಿಯನ್ನು ಮನ್ನಾ ಮಾಡಲು ಸರ್ಕಾರ ಗಮನ ಹರಿಸಬೇಕು. ಜಿಲ್ಲೆಯ ಶಾಸಕರುಗಳು ಬೆಳಗಾವಿ ಅಧಿವೇಶನದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ ರೈತರ ಧ್ವನಿಯಾಗಬೇಕು ಎಂದು ಎಸ್‍ಡಿಪಿಐ ಪಕ್ಷದ ಜಿಲ್ಲಾ ಉಪಾಧ್ಯಕ್ಷ ವಿಕ್ಟರ್ ಮಾರ್ಟಿನ್ ಅವರು ಆಗ್ರಹಿಸಿದರು. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು, ಮಾತನಾಡಿ, ರಾಜ್ಯದ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರು ಕಳೆದ ಫೆಬ್ರವರಿ ತಿಂಗಳಲ್ಲಿ

ಜಿಲ್ಲೆಯ ರೈತರ 14 ಕೋಟಿ ಸಾಲದ ಬಡ್ಡಿ, ಚಕ್ರಬಡ್ಡಿ ಮನ್ನಾಕ್ಕೆ ಆಗ್ರಹ | ಪತ್ರಿಕಾಗೋಷ್ಠಿಯಲ್ಲಿ ವಿಕ್ಟರ್ ಮಾರ್ಟಿನ್ Read More »

ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆಯಿಂದ  ಮಸಾಸನ ಕೈಪಿಡಿ ಹಸ್ತಾಂತರ

ಬೆಳ್ತಂಗಡಿ: ಬಂಟ್ವಾಳ ತಾಲೂಕು  ಕೆದಿಲ ಗ್ರಾಮದ  ಬೀಟಿಗೆ  ದಿವಂಗತ ಮೋನು ಅವರ ಧರ್ಮ ಪತ್ನಿ  ಸೇಲ್ಮ  ಒಂಟಿ  ವಾಸವಾಗಿದ್ದರಿಂದ  ಶ್ರೀ ಕ್ಷೇತ್ರದ ವತಿಯಿಂದ  ನಿರ್ಗತಿಕ  ಮಸಾಸನ  ಕೈಪಿಡಿಯನ್ನು ವಿತರಿಸಲಾಗಿದೆ.  ವಿಟ್ಲ ತಾಲೂಕು  ಕೃಷಿ ಅಧಿಕಾರಿ  ಚಿದಾನಂದ  ನಿರ್ಗತಿಕ  ಮಸಾಸನ  ಕೈಪಿಡಿಯನ್ನು ಸೇಲ್ಮರಿಗೆ  ನೀಡಿದ್ದಾರೆ. ಈ ಸಂದರ್ಭದಲ್ಲಿ  ಪೆರ್ನೆ ಮೇಲ್ವಿಚಾರಕಿ ಶಾರದಾ, ಜ್ಞಾನವಿಕಾಸ  ದೀಪಾ,  ಸೇವಾ ಪ್ರತಿನಿಧಿ  ಶಾರದಾ, ಕೆದಿಲ ಶೌರ್ಯ ವಿಪತ್ತು  ನಿರ್ವಹಣಾ ಸದಸ್ಯ  ಜಗದೀಶ, ಗಿರೀಶ, ವೆಂಕಪ್ಪ ಉಪಸ್ಥಿತರಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆಯಿಂದ  ಮಸಾಸನ ಕೈಪಿಡಿ ಹಸ್ತಾಂತರ Read More »

ಅಂತರ್ ಕಾಲೇಜು ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಎನ್ನೆಂಸಿಯ ಗಾನ ಬಿ. ಡಿ. ತೃತೀಯ

ಮಂಗಳೂರು :ಅಂತರ್‍ ಕಾಲೇಜು ಮಟ್ಟದ ಕನ್ನಡ ಭಾಷಣ ಸ್ಪರ್ಧೆಯಲ್ಲಿ  ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ತೃತೀಯ ಬಿ ಎ ವಿದ್ಯಾರ್ಥಿನಿ ಗಾನ ಬಿ. ಡಿ. ತೃತೀಯ ಸ್ಥಾನ ಪಡೆದಿದ್ದಾರೆ. ಮಂಗಳೂರು ಎಸ್ ಸಿ ಎಸ್ ಪದವಿ ಕಾಲೇಜಿನ ಕನ್ನಡ ರಾಜ್ಯೋತ್ಸವ ಪ್ರಯುಕ್ತ  ಅಂತರ್ ಕಾಲೇಜು ಮಟ್ಟದ ಕನ್ನಡ ಭಾಷಣ ಸ್ಪರ್ಧೆ ನಡೆದಿತ್ತು. ಗಾನ ಬಿ. ಡಿ. ಬಲ್ಕಾಡಿಯ ಧನಂಜಯ ಮತ್ತು ಜಲಜಾಕ್ಷಿ ದಂಪತಿ ಪುತ್ರಿ.

ಅಂತರ್ ಕಾಲೇಜು ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಎನ್ನೆಂಸಿಯ ಗಾನ ಬಿ. ಡಿ. ತೃತೀಯ Read More »

ಧರ್ಮಸ್ಥಳ ನೇತ್ರಾವತಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ  ಮೃತ ದೇಹ ಪತ್ತೆ

ಬೆಳ್ತಂಗಡಿ :  ಧರ್ಮಸ್ಥಳ ನೇತ್ರಾವತಿ ನದಿ ನೀರಿನಲ್ಲಿ ಸುಮಾರು 50-55 ವರ್ಷದ ಅಪರಿಚಿತ ಗಂಡಸಿನ ಮೃತ ದೇಹ ನ.21ರಂದು ಪತ್ತೆಯಾಗಿದೆ. ನದಿಯಲ್ಲಿದ್ದ ಮೃತದೇಹವನ್ನು ಎತ್ತುವಲ್ಲಿ ಶೌರ್ಯ ವಿಪತ್ತು ತಂಡ ಸಹಕರಿಸಿದೆ. ಕಪ್ಪು ಬಣ್ಣದ ಒಳಚಡ್ಡಿ ಮಾತ್ರ ಧರಿಸಿಕೊಂಡಿದ್ದು, ಎಡಕಾಲಿನ ಪಾದದ ಬಳಿ ಹಳೆಯ ಗಾಯವಿರುತ್ತದೆ. ಮೃತದೇಹನ್ನು ಮಂಗಳೂರು ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹವನ್ನು ಶವಗಾರದ ವಾರೀಸುದಾರರ ಪತ್ತೆಯ ಬಗ್ಗೆ ಇರಿಸಲಾಗಿದೆ, ಮೃತರ ವಾರೀಸುದಾರರು ಪತ್ತೆಯಾದಲ್ಲಿ ಪೋಲಿಸ್‍ ಠಾಣೆ: ೮೨೭೭೯೮೬೪೪೭ ಮತ್ತು ಬೆಳ್ತಂಗಡಿ ಗ್ರಾಮಾಂತರ ವೃತ್ತ

ಧರ್ಮಸ್ಥಳ ನೇತ್ರಾವತಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ  ಮೃತ ದೇಹ ಪತ್ತೆ Read More »

ಟ್ರಾಯ್‌ ಹೆಸರಿನಲ್ಲಿ ಐಟಿ ಉದ್ಯೋಗಿಯನ್ನು ಬೆದರಿಸಿ 1.71 ಕೋ. ರೂ. ಲಪಟಾಯಿಸಿದ ಸೈಬರ್‌ ವಂಚಕರು

ಅಮೆರಿಕದಲ್ಲಿ ದುಡಿದು ಗಳಿಸಿದ ಹಣವೆಲ್ಲ ಸೈಬರ್‌ ವಂಚಕರ ಪಾಲು ಮಂಗಳೂರು : ಸೈಬರ್‌ ವಂಚನೆಗಳ ಬಗ್ಗೆ ಎಷ್ಟೇ ಅರಿವು ಮೂಡಿಸಿದರೂ ಜನರು ಇನ್ನೂ ಮೋಸ ಹೋಗುವುದು ನಿಂತಿಲ್ಲ. ಅದರಲ್ಲೂ ಬ್ಯಾಂಕ್‌, ಐಟಿ ಉದ್ಯೋಗಿಗಳಂತ ವಿದ್ಯಾವಂತರೇ ಆನ್‌ಲೈನ್‌ ವಂಚಕರ ಬಲೆಗೆ ಬಿದ್ದು ಭಾರಿ ಮೊತ್ತದ ಹಣ ಕಳೆದುಕೊಳ್ಳುತ್ತಿರುವುದು ನಿತ್ಯ ಸಂಭವಿಸುತ್ತಿರುತ್ತದೆ. ಮಂಗಳೂರಿನಲ್ಲಿ ಇತ್ತೀಚೆಗೆ ಇದೇ ಮಾದರಿಯ ವಂಚನೆಯೊಂದು ನಡೆದಿದ್ದು, ಅಮೆರಿಕದಲ್ಲಿ ಐಟಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದ ಮೂಲತಃ ಮುಂಬಯಿಯ ವ್ಯಕ್ತಿಯೊಬ್ಬರು ಬರೋಬ್ಬರಿ 1.71 ಕೋ. ರೂ. ಕಳೆದುಕೊಂಡು ಪರಿತಪಿಸುತ್ತಿದ್ದಾರೆ. ನ.

ಟ್ರಾಯ್‌ ಹೆಸರಿನಲ್ಲಿ ಐಟಿ ಉದ್ಯೋಗಿಯನ್ನು ಬೆದರಿಸಿ 1.71 ಕೋ. ರೂ. ಲಪಟಾಯಿಸಿದ ಸೈಬರ್‌ ವಂಚಕರು Read More »

error: Content is protected !!
Scroll to Top