ದಕ್ಷಿಣ ಕನ್ನಡ

ಅಕ್ರಮ ಗೋಸಾಗಾಟ ಮಾಡುತ್ತಿದ್ದ ವಾಹನಕ್ಕೆ ಹಿಂದು ಸಂಘಟನೆಯಿಂದ ತಡೆ

ಬೆಳ್ತಂಗಡಿ: ಮಂಗಳೂರಿಗೆ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ವಾಹನವನ್ನು ಕಳಿಯ ನ್ಯಾಯತರ್ಪು ಸಮೀಪದ ಜಾರಿಗೆಬೈಲು ಎಂಬಲ್ಲಿ ತಡೆಹಿಡಿದ ಘಟನೆ ನಡೆದಿದೆ. ತರಕಾರಿ ಸಾಗಾಟದ ವಾಹನದಲ್ಲಿ ಸುಮಾರು 10 ರಿಂದ 15 ಗೋವುಗಳನ್ನು ವಧೆಗೆಂದು ಸಾಗಿಸಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಹಿಂದೂ ಸಂಘಟನೆ ಕಾರ್ಯಕರ್ತರು ವಾಹನವನ್ನು ಹಿಂಬಾಲಿಸಿ ತಡೆಹಿಡಿದಿದ್ದಾರೆ. ಘಟನೆಯಲ್ಲಿ ಚಾಲಕರು ವಾಹನ ಬಿಟ್ಟು ಪರಾರಿಯಾಗಿದ್ದ. ದೂರಿನ ಮೇರೆಗೆ ಬೆಳ್ತಂಗಡಿ ಪೊಲೀಸರು ಹೆಚ್ಚಿನ ತನಿಖೆ ಮತ್ತು ಕಾನೂನು ಕ್ರಮಕ್ಕಾಗಿ ವಾಹನ ಮತ್ತು 15 ಕ್ಕೂ ಹೆಚ್ಚು ಜಾನುವಾರುಗಳನ್ನು […]

ಅಕ್ರಮ ಗೋಸಾಗಾಟ ಮಾಡುತ್ತಿದ್ದ ವಾಹನಕ್ಕೆ ಹಿಂದು ಸಂಘಟನೆಯಿಂದ ತಡೆ Read More »

ಮರದ ಗೆಲ್ಲು ಕಡಿಯುತ್ತಿದ್ದಾಗ ವಿದ್ಯುತ್‍ ಶಾಕ್‍ ಹೊಡೆದು ಕಾರ್ಮಿಕ ಮೃತ್ಯು

ಬೆಳ್ತಂಗಡಿ: ಮರದ ಗೆಲ್ಲು ಕಡಿಯುತ್ತಿದ್ದಾಗ ವಿದ್ಯುತ್‍ ಶಾಕ್‍ ತಗುಲಿ ಕಾರ್ಮಿಕ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಹುಣ್ಸೆಕಟ್ಟೆ ಪುಂಡಿಕ್ಕು ಎಂಬಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕಸಬಾ ಗ್ರಾಮದ ಪುಂಡಿಕ್ಕು ನಿವಾಸಿ ಚನನ ಗೌಡ (69) ಮೃತಪಟ್ಟವರು. ಚನನ ಗೌಡರು ಇಂದು ಬೆಳಿಗ್ಗೆ ಮೆಸ್ಕಾಂ ಇಲಾಖೆಯ ಅನುಮತಿ ಪಡೆಯದೇ, ಖಾಸಗಿ ಜಮೀನಿನಲ್ಲಿ ಇರುವ ಮರದ ಗೆಲ್ಲು ಕಡಿಯುವಾಗ, ಗೆಲ್ಲು ಆಕಸ್ಮಿಕವಾಗಿ, ಅಲ್ಲಿಯೇ ರಸ್ತೆಯಲ್ಲಿ ಹಾದು ಹೋಗಿರುವ 11ಕೆವಿ ಕುವೆಟ್ಟು ಫೀಡರ್‌ನ ಹೆಚ್.ಟಿ ಲೈನ್‌ಗೆ ಬಿದ್ದು ಈ ಘಟನೆ ನಡೆದಿದೆ.

ಮರದ ಗೆಲ್ಲು ಕಡಿಯುತ್ತಿದ್ದಾಗ ವಿದ್ಯುತ್‍ ಶಾಕ್‍ ಹೊಡೆದು ಕಾರ್ಮಿಕ ಮೃತ್ಯು Read More »

ರಾಡ್‍ಗಳಿಂದ ಹೊಡೆದಾಡಿಕೊಂಡ ಬಸ್‍ ಸಿಬ್ಬಂದಿಯರು | ಇಬ್ಬರು ಅರೆಸ್ಟ್‍

ಮಣಿಪಾಲ: ಮಣಿಪಾಲದಲ್ಲಿ ಎರಡು ಬಸ್ ಸಿಬ್ಬಂದಿಗಳು ಉಕ್ಕಿನ ರಾಡ್‌ಗಳಿಂದ ಹೊಡೆದಾಡಿಕೊಂಡ ಘಟನೆ ನಡೆದಿದೆ. ರಾಡ್‍ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಜಗಳವಾಡಿದ ಇಬ್ಬರು ಬಸ್‍  ಸಿಬ್ಬಂದಿಯನ್ನು ಬಂಧಿಸಲಾಗಿದೆ. ಬುಧವಾರ ಸಂಜೆ ಮಣಿಪಾಲ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಬಸ್  ಸಿಬ್ಬಂದಿ ಬೀದಿ ಜಗಳದಲ್ಲಿ ತೊಡಗಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗಿದೆ. ವಾಗ್ವಾದದಲ್ಲಿ ಬಸ್ ಕಂಡಕ್ಷರ್‌ಗಳಾದ ಅಲ್ಪಾಜ್ ಮತ್ತು ವಿಜಯಕುಮಾ‌ರ್ ಅವರನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಎರಡೂ ಬಸ್‌ಗಳನ್ನು ಮಣಿಪಾಲ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಣಿಪಾಲ

ರಾಡ್‍ಗಳಿಂದ ಹೊಡೆದಾಡಿಕೊಂಡ ಬಸ್‍ ಸಿಬ್ಬಂದಿಯರು | ಇಬ್ಬರು ಅರೆಸ್ಟ್‍ Read More »

ಕಾಡಿನ ಮಧ್ಯೆ ಪತ್ತೆಯಾದ ಹೆಣ್ಣು ಮಗುವಿನ ಪ್ರಕರಣ | ಪೋಷಕರನ್ನು ಪತ್ತೆ ಹಚ್ಚಿದ  ಧರ್ಮಸ್ಥಳ ಪೋಲಿಸರು 

ಉಜಿರೆ :  ಸುಮಾರು ದಿನಗಳ ಹಿಂದೆ  ಬೆಳಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಡೋಳುಕೆರೆ ಕಾಡಿನ ಮಧ್ಯೆ ಪತ್ತೆಯಾದ ಹೆಣ್ಣು ಮಗುವಿನ ಪೋಷಕರನ್ನು ಧರ್ಮಸ್ಥಳ ಪೊಲೀಸರು ಪತ್ತೆ ಮಾಡಿದ್ದಾರೆ. ಕಾಡಿನಲ್ಲಿ ಮಗು ಸಿಕ್ಕಿದ ತಕ್ಷಣ ಗ್ರಾಮದ ಜನರು ಈ ಕುರಿತು ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗ್ರಾಮಸ್ಥರ  ಸಹಕಾರದೊಂದಿಗೆ ಮಗುವಿನ ತಂದೆ ತಾಯಿಯ ವಿವರಗಳು ಲಭಿಸಿದೆ. ಧರ್ಮಸ್ಥಳ ಪೊಲೀಸ್ ಠಾಣಾ ಸಬ್ ಇನ್ಸೆಕ್ಟರ್ ಸಮರ್ಥ ಆರ್. ಗಾಣಿಗೇರಾ ನೇತೃತ್ವದ ತಂಡವು ಮಗುವಿನ ತಂದೆ ರಂಜಿತ್ ಗೌಡನನ್ನು ಎ.2 ರಂದು

ಕಾಡಿನ ಮಧ್ಯೆ ಪತ್ತೆಯಾದ ಹೆಣ್ಣು ಮಗುವಿನ ಪ್ರಕರಣ | ಪೋಷಕರನ್ನು ಪತ್ತೆ ಹಚ್ಚಿದ  ಧರ್ಮಸ್ಥಳ ಪೋಲಿಸರು  Read More »

ಕೋಟ್ಯಂತರ  ಮೌಲ್ಯದ ಚಿನ್ನಾಭರಣ ಕಳವು ಪ್ರಕರಣ |  ಚುರುಕಿನ ತನಿಖೆಗಾಗಿ ವಿಶೇಷ ತಂಡ ರಚನೆ

ಬಜಪೆ: ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಮುದೆ ಪೇಟೆಯ ಮನೆಯೊಂದರಲ್ಲಿ ಸೋಮವಾರ ಮಧ್ಯರಾತ್ರಿ ಬಳಿಕ ನಡೆದಿರುವ ಕಳವು ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತಂಡಗಳ ತನಿಖೆ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬಿಗುಭದ್ರತೆಯಲ್ಲಿ ಮನೆಯೊಳಗಿದ್ದ ಲಾಕರ್ ಒಡೆದು ಸುಮಾರು 80 ಲಕ್ಷ ರೂ. ಮೌಲ್ಯದ ಅಂದಾಜು 1ಕೆ.ಜಿಯಷ್ಟು ಚಿನ್ನಾಭರಣಗಳನ್ನು ಲೂಟಿಗೈದಿರುವ ಬಗ್ಗೆ ಪೊಲೀಸ್ ಮೂಲಗಳು ಈಗಾಗಲೇ ಧೃಡಪಡಿಸಿವೆ. ಪ್ರಕರಣದ ಸಮಗ್ರ ಮಾಹಿತಿ ಹಾಗೂ ಆರೋಪಿಗಳ ಪತ್ತೆಗಾಗಿ ಮನೆಯ ಪರಿಸರದಲ್ಲಿ ಶೋಧಕಾರ್ಯ ನಡೆಸಲಾಗಿದ್ದು ಮನೆಗೆ‌‌‌ ಸಂಬಂಧಿಸಿದ ವ್ಯಕ್ರಿಗಳನ್ನು ವಿಚಾರಣೆಗೆ

ಕೋಟ್ಯಂತರ  ಮೌಲ್ಯದ ಚಿನ್ನಾಭರಣ ಕಳವು ಪ್ರಕರಣ |  ಚುರುಕಿನ ತನಿಖೆಗಾಗಿ ವಿಶೇಷ ತಂಡ ರಚನೆ Read More »

ಮುಂಡಾಜೆಯಲ್ಲಿ ಗುಡ್ಡಕ್ಕೆ ಆಕಸ್ಮಿಕ ಬೆಂಕಿ ಅವಘಡ

ಮುಂಡಾಜೆ : ಗ್ರಾಮದ ಕೊಟ್ಟೂಟ್ಟುವಿನ ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ ಗುಡ್ಡಕ್ಕೆ ಆಕಸ್ಮಿಕವಾಗಿ ಬೆಂಕಿ ಬಿದ್ದ ಘಟನೆ ಇಂದು ಬೆಳಗ್ಗೆ  ನಡೆಯಿತು. ಘಟನೆಯಿಂದ ಸುಮಾರು ಒಂದೂವರೆ ಎಕರೆಯಷ್ಟು ಸ್ಥಳ ಸುಟ್ಟೋಗಿದೆ.  ಸ್ಥಳೀಯ ಪರಿಸರದಲ್ಲಿ ಮನೆಗಳಿದ್ದು,  ಜನರಲ್ಲಿ ಆತಂಕಕ್ಕೆ ಗುರಿಯಾಗಿದೆ. ಗ್ರಾಮ ಪಂಚಾಯತ್‍ ಅಧ್ಯಕ್ಷ ಗಣೇಶ ಬಂಗೇರ , ಸಿಬ್ಬಂದಿಗಳು ಹಾಗೂ ಸ್ಥಳೀಯರು ಬೆಂಕಿ ಮನೆಗಳತ್ತ ಹರಡದಂತೆ ಮುನ್ನೆಚ್ಚರಿಕೆ ವಹಿಸಿದರು. ಬೆಳ್ತಂಗಡಿ ತಾಲೂಕಿನಲ್ಲಿ ಅಗ್ನಿಶಾಮಕ ವಾಹನದ ವ್ಯವಸ್ಥೆ ಇಲ್ಲದೆ ಬೆಂಕಿಯನ್ನು ನಂದಿಸಲು  ನೀರಿನ ಟ್ಯಾಂಕ‌ರ್ ಹುಡುಕುವುದೇ ದೊಡ್ಡ ಸಮಸ್ಯೆಯಾಗಿದೆ. ಬಳಿಕ

ಮುಂಡಾಜೆಯಲ್ಲಿ ಗುಡ್ಡಕ್ಕೆ ಆಕಸ್ಮಿಕ ಬೆಂಕಿ ಅವಘಡ Read More »

ಮಹಿಳೆಯೊಂದಿಗೆ ಅನ್ಯಕೋಮಿನ ವೃದ್ದ ಪತ್ತೆ

ಉಪ್ಪಿನಂಗಡಿ : ಗುಡ್ಡೆಯೊಂದರಲ್ಲಿ ಹಿಂದೂ ಮಹಿಳೆಯೊಂದಿಗೆ ಅನ್ಯಕೋಮಿನ ವೃದ್ಧನೋರ್ವ ಸಿಕ್ಕಿ ಬಿದ್ದ ಘಟನೆ ಉಪ್ಪಿನಂಗಡಿಯ ಇಳಂತಿಲದಲ್ಲಿ ನಡೆದಿದೆ. ಕಾರ್ವೆಲ್ ನಿವಾಸಿಯಾದ ವೃದ್ದ ಹಿಂದೂ ಮಹಿಳೆಯೊಂದಿಗೆ ಇದ್ದುದನ್ನು ಕಂಡ ಸ್ಥಳೀಯರು ಇಬ್ಬರನ್ನು ಹಿಡಿದು ಬೆನ್ನಟ್ಟಿದ್ದಾರೆ. ವೃದ್ಧನಿಗೆ 65 ವರ್ಷ ವಯಸ್ಸಾಗಿದ್ದು ಏಳು ಜನ ಮಕ್ಕಳಿದ್ದಾರೆ ಆದರೂ ಈ ರೀತಿ ಮಾಡುತ್ತಿದ್ದಾನೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಮಹಿಳೆಯೊಂದಿಗೆ ಅನ್ಯಕೋಮಿನ ವೃದ್ದ ಪತ್ತೆ Read More »

ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ರಿಕ್ಷಾ

ಬಂಟ್ವಾಳ : ಆಟೋರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ  ರಿಕ್ಷಾ ಮಗುಚಿ ಬಿದ್ದ ಘಟನೆ ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ದೈಕಿನಕಟ್ಟೆ ಎಂಬಲ್ಲಿ ನಡೆದಿದೆ,  ಈ ಘಟನೆಯಿಂದ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಗಾಯಾಳು ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾರೆ. ಮಂಗಳೂರು ದೇರೇಬೈಲ್ ಸಮೀಪದ ನೆಕ್ಕಿಲಗುಡ್ಡೆ ಮಾಲೆಮಾರ್ ನಿವಾಸಿ ರಾಮಣ್ಣ ನಾಯ್ಕ (63) ಮೃತಪಟ್ಟವರೆಂದು ಗುರುತಿಸಲಾಗಿದೆ. ಇವರು ಸಂಬಂಧಿಕರ ಆಟೋರಿಕ್ಷಾವೊಂದರಲ್ಲಿ  ಬೆಳ್ತಂಗಡಿ ತಾಲೂಕಿನ ಹತ್ಯಡ್ಕ ಗ್ರಾಮದ ಅಳಕೆಬೈಲುವಿನಲ್ಲಿರುವ ಸಂಬಂಧಿಕರ ಮನೆಗೆ ತೆರಳಿ ರಾತ್ರಿಯೇ ವಾಪಾಸ್ ಮಂಗಳೂರಿನತ್ತ ಬರುತ್ತಿದ್ದಾಗ

ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ರಿಕ್ಷಾ Read More »

ಶ್ರೀ ಮಹಾವಿಷ್ಣುಯಾಗದ ಆಮಂತ್ರಣ ಪತ್ರಿಕೆ ಬಿಡುಗಡೆ

ಉಪ್ಪಿನಂಗಡಿ ಸಮೀಪದ‌ ಬಾರ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ  ಏ. ‌13 ಭಾನುವಾರದಂದು ನಡೆಯಲಿರುವ ಶ್ರೀ ಮಹಾವಿಷ್ಣು ಯಾಗ ಮತ್ತು ಧಾರ್ಮಿಕ ಸಂಭೆಯ ಆಮಂತ್ರಣ ಪತ್ರಿಕೆ ಬಿಡುಗಡೆಯಾಯಿತು. ಶ್ರೀ ದೇವಳದ ಅರ್ಚಕ ಗುರುಪ್ರಸಾದ್ ನೂರಿತ್ತಾಯರ ಪ್ರಾರ್ಥನೆಯೊಂದಿಗೆ ಆಡಳಿತ ಟ್ರಸ್ಟ್ ಉಪಾಧ್ಯಕ್ಷ ನಾರಾಯಣ ಗೌಡರು  ಬಿಡುಗಡೆಗೊಳಿಸಿದರು . ಈ ಸಂದರ್ಭದಲ್ಲಿ ಟ್ರಸ್ಟ್ ಕಾರ್ಯದರ್ಶಿ ಪ್ರಶಾಂತ್ ಪೈ  ಟ್ರಸ್ಟಿಗಳಾದ  ಮನೋಹರ ಶೆಟ್ಟಿ, ನವೀನ , ರಾಮಣ್ಣಗೌಡ  ಮೊದಲಾದವರು ಉಪಸ್ಥಿತರಿದ್ದರು.

ಶ್ರೀ ಮಹಾವಿಷ್ಣುಯಾಗದ ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಗೇರುಕಟ್ಟೆ: ಅಪೂರ್ವವಾಗಿ ನಡೆದ  ಮಾತೃ ವಂದನಾ ಕಾರ್ಯಕ್ರಮ

 ಗೇರುಕಟ್ಟೆ : ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ರಿ. ಕರ್ನಾಟಕ ಕೇಂದ್ರ ಕಚೇರಿ ತುಮಕೂರು, ನೇತ್ರಾವತಿ ವಲಯ ಮಂಗಳೂರು ವತಿಯಿಂದ ಗೇರುಕಟ್ಟೆಯ  ಕ್ಷೀರ ಸಂಗಮ ಸಭಾಭವನದಲ್ಲಿ  48 ದಿನ ನಡೆದ ಯೋಗ ತರಬೇತಿ ಶಿಬಿರದ ಸಮಾರೋಪವು ಮಾತೃ ವಂದನಾ, ಮಾತೃ ಧ್ಯಾನ, ಮಾತೃ ಭೋಜನ ಕಾರ್ಯಕ್ರಮದೊಂದಿಗೆ ಹೊಸ ವರ್ಷದ ಆರಂಭದ ದಿನವಾದ ಯುಗಾದಿಯಂದು   ಬಹಳ ಅರ್ಥಪೂರ್ಣವಾಗಿ ಜರಗಿತು. ಸನಾತನ ಧರ್ಮದಲ್ಲಿ  ಮಹಿಳೆಯರಿಗೆ ಬಹಳ ಗೌರವವಿದೆ.  ಮನೆಯಲ್ಲಿ ಮಕ್ಕಳನ್ನು ವಾತ್ಸಲ್ಯದಿಂದ ಕಾಣುವ ತಾಯಿ, ಪತಿಗೆ ಪತ್ನಿಯಾಗಿ,  ಮಗಳಾಗಿ, 

ಗೇರುಕಟ್ಟೆ: ಅಪೂರ್ವವಾಗಿ ನಡೆದ  ಮಾತೃ ವಂದನಾ ಕಾರ್ಯಕ್ರಮ Read More »

error: Content is protected !!
Scroll to Top