ಅಪರಾಧ

ನಾಪತ್ತೆಯಾಗಿದ್ದ ಗ್ರಾಪಂ ಸದಸ್ಯೆ ಪ್ರಿಯಕರನೊಂದಿಗೆ ಪತ್ತೆ

ಪೊಲೀಸ್‌ ಠಾಣೆಗೆ ಬಂದು ಪ್ರಿಯಕರನ ಜತೆ ಬದುಕುವುದಾಗಿ ಹೇಳಿಕೆ ಸುಬ್ರಹ್ಮಣ್ಯ : ಎರಡು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್‌ ಸದಸ್ಯೆ ವಿವಾಹಿತೆ ಭಾರತಿ ಮೂಕಮೂಲೆ ಪ್ರಿಯಕರನೊಂದಿಗೆ ಪತ್ತೆಯಾಗಿದ್ದಾರೆ. ಜ.5ರಂದು ಪ್ರಿಯಕರನೊಂದಿಗೆ ಸುಬ್ರಹ್ಮಣ್ಯ ಪೊಲೀಸ್‌ ಠಾಣೆಗೆ ಬಂದಿರುವ ಭಾರತಿ ತಾನು ಆತನೊಂದಿಗೆ ಬದುಕಲು ಇಚ್ಚಿಸಿರುವುದಾಗಿ ಹೇಳಿ ತೆರಳಿದ್ದಾರೆ. ಭಾರತಿ ಮೂಕಮೂಲೆ ಮತ್ತು ಪ್ರಿಯಕರ ನಂದನ್‌ ನ್ಯಾಯವಾದಿಯೊಂದಿಗೆ ಠಾಣೆಗೆ ಬಂದಿದ್ದರು. ಪ್ರಿಯಕರ ನಂದನ್‌ ಜತೆ ಮುಂದಿನ ಜೀವನ ಕಳೆಯುವುದಾಗಿ ಆಕೆ ಲಿಖಿತವಾಗಿ ಹೇಳಿಕೆ ಕೊಟ್ಟು ತೆರಳಿದ್ದಾರೆ. ಭಾರತಿ […]

ನಾಪತ್ತೆಯಾಗಿದ್ದ ಗ್ರಾಪಂ ಸದಸ್ಯೆ ಪ್ರಿಯಕರನೊಂದಿಗೆ ಪತ್ತೆ Read More »

ಚಳಿ ತಡೆಯಲು ಹಾಕಿದ ಹೀಟರ್‌ಗೆ ಕುಟುಂಬವೇ ಬಲಿ

ವಿಷಕಾರಿ ಅನಿಲ ಸೇವಿಸಿ ಒಂದೇ ಕುಟುಂಬದ ನಾಲ್ವರು ಸಾವು ಲಖನೌ: ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಬಿಸ್ವಾನ್ ಎಂಬಲ್ಲಿ ಚಳಿ ತಡೆಯಲು ಹಾಕಿಕೊಂಡ ಹೀಟರ್ ಒಂದಿಡೀ ಕುಟುಂಬವನ್ನು ಬಲಿತೆಗೆದುಕೊಂಡಿದೆ. ಹೀಟರ್‌ನ ವಿಷಕಾರಿ ಅನಿಲ ಸೇವಿಸಿ ಮದ್ರಸಾ ಶಿಕ್ಷಕ ಆಸಿಫ್ (32) , ಅವರ ಪತ್ನಿ ಶಗುಫ್ತಾ (30) ಮತ್ತು ಮಕ್ಕಳಾದ 3 ವರ್ಷದ ಝೈದ್ ಮತ್ತು 2 ವರ್ಷದ ಮೈರಾ ಮೃತಪಟ್ಟಿದ್ದಾರೆ.ಶನಿವಾರ ರಾತ್ರಿ ಆಸಿಫ್ ಕುಟುಂಬ ತೀವ್ರ ಚಳಿಯನ್ನು ತಡೆಯಲು ಗ್ಯಾಸ್ ಪೆಟ್ರೋಮ್ಯಾಕ್ಸ್ ಹಚ್ಚಿ ಕೊಠಡಿಯಲ್ಲಿ ಮಲಗಿತ್ತು.

ಚಳಿ ತಡೆಯಲು ಹಾಕಿದ ಹೀಟರ್‌ಗೆ ಕುಟುಂಬವೇ ಬಲಿ Read More »

ಶ್ರೀ ರಾಮಸೇನೆ ನಾಯಕನ ಮೇಲೆ ಗುಂಡಿನ ದಾಳಿ

ರಸ್ತೆ ಹಂಪ್‌ನಲ್ಲಿ ಕಾರು ನಿಧಾನವಾದಾಗ ದಾಳಿ ಬೆಳಗಾವಿ : ಶ್ರೀ ರಾಮ ಸೇನೆಯ ಬೆಳಗಾವಿ ಜಿಲ್ಲಾಧ್ಯಕ್ಷ ರವಿ ಕೋಕಿತಕರ್ ಮೇಲೆ ಹಿಂಡಲಗಾ ಗ್ರಾಮದ ಬಳಿ ಬೈಕ್‌ನಲ್ಲಿ ಬಂದ ಇಬ್ಬರು ಗುಂಡಿನ ದಾಳಿ ನಡೆಸಿದ್ದು ರವಿ ಕೋಕಿತಕರ್ ಮತ್ತು ಅವರ ಕಾರು ಚಾಲಕ ಗಾಯಗೊಂಡಿದ್ದಾರೆ. ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಹಿಂಡಲಗಾ ಗ್ರಾಮದ ಬಳಿ ರೋಡ್ ಹಂಪ್‌ನಲ್ಲಿ ಕಾರು ನಿಧಾನ ಮಾಡಿದಾಗ ದುಷ್ಕರ್ಮಿಗಳು ಗುಂಡು ಹಾರಿಸಿದ್ದರು. ಗುಂಡು ರವಿ ಗದ್ದಕ್ಕೆ ತಗುಲಿ ನಂತರ ಚಾಲಕನ ಕೈಗೆ ತಗಲಿದೆ. ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಶ್ರೀ ರಾಮಸೇನೆ ನಾಯಕನ ಮೇಲೆ ಗುಂಡಿನ ದಾಳಿ Read More »

ಮಹಿಳೆ ಮೇಲೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪಿ ಬೆಂಗಳೂರಿನಲ್ಲಿ ಸೆರೆ

ತಲೆಮರೆಸಿಕೊಳ್ಳಲು ಬೆಂಗಳೂರಿಗೆ ಬಂದಿದ್ದ ಶಂಕರ್‌ ಮಿಶ್ರಾ

ಮಹಿಳೆ ಮೇಲೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪಿ ಬೆಂಗಳೂರಿನಲ್ಲಿ ಸೆರೆ Read More »

ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿ ಮುಂಬಯಿಯ ಉದ್ಯಮಿ

ವಾರಂಟ್‌ ಜಾರಿಯಾದ ಬಳಿಕ ನಾಪತ್ತೆ ಹೊಸದಿಲ್ಲಿ : ನ್ಯೂಯಾರ್ಕ್- ದೆಹಲಿ ವಿಮಾನದಲ್ಲಿ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿ ಅಸಭ್ಯವಾಗಿ ವರ್ತಿಸಿದ್ದ ವ್ಯಕ್ತಿ ಮುಂಬೈ ಮೂಲದ ಶಂಕರ್‌ ಮಿಶ್ರಾ ಎಂಬ ಉದ್ಯಮಿ ಎಂದು ಬೆಳಕಿಗೆ ಬಂದಿದೆ. ದಿಲ್ಲಿ ಪೊಲೀಸರು ಗುರುವಾರ ಮುಂಬಯಿಯ ಹಲವು ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ. ಆದರೆ ಈ ವೇಳೆ ಎಲ್ಲೂ ಮಿಶ್ರಾ ಪತ್ತೆಯಾಗಿಲ್ಲ. ಹೀಗಾಗಿ ಆತ ಬೇರೆ ರಾಜ್ಯಕ್ಕೆ ಪರಾರಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಶಂಕರ್‌ ಮಿಶ್ರಾ ವಿರುದ್ಧ ಪೊಲೀಸರು ಲೈಂಗಿಕ

ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿ ಮುಂಬಯಿಯ ಉದ್ಯಮಿ Read More »

ಸ್ಯಾಂಟ್ರೊ ರವಿ ವಿರುದ್ಧ ಪತ್ನಿಯಿಂದಲೇ ಅತ್ಯಾಚಾರ ಆರೋಪ

ದಲಿತ ಸಂಘಟನೆಯಿಂದ ಬಂಧಿಸದಿದ್ದರೆ ಹೋರಾಟದ ಎಚ್ಚರಿಕೆ ಬೆಂಗಳೂರು : ಕೆಲವು ಬಿಜೆಪಿ ನಾಯಕರ ಜತೆ ನಂಟು ಇಟ್ಟುಕೊಂಡಿದ್ದಾನೆ ಎಂದು ಎಚ್‌ .ಡಿ. ಕುಮಾರಸ್ವಾಮಿ ಆರೊಪಿಸಿರುವ ಸ್ಯಾಂಟ್ರೊ ರವಿ ವಿರುದ್ಧ ಇದೀಗ ಆತನ ಪತ್ನಿಯೇ ಆತ್ಯಾಚಾರದ ಆರೋಪ ಹೊರಿಸಿದ್ದಾರೆ. ಇದರ ಬೆನ್ನಿಗೆ ದಲಿತ ಸಂಘಟನೆಗಳು ಸ್ಯಾಂಟ್ರೊ ರವಿಯನ್ನು ಬಿಜೆಪಿ ರಕ್ಷಿಸುತ್ತಿದೆ ಎಂದು ಆರೋಪಿಸಿ ಹೋರಾಟದ ಎಚ್ಚರಿಕೆ ನೀಡಿವೆ.ಇಂಜಿನಿಯರಿಂಗ್ ಪದವೀಧರೆಯಾಗಿರುವ ಸಂತ್ರಸ್ತೆ ಬುಧವಾರ ಮೈಸೂರು ನಗರದ ವಿಜಯನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ಕೆ.ಎಸ್. ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ವಿರುದ್ಧ

ಸ್ಯಾಂಟ್ರೊ ರವಿ ವಿರುದ್ಧ ಪತ್ನಿಯಿಂದಲೇ ಅತ್ಯಾಚಾರ ಆರೋಪ Read More »

ಮರಕ್ಕೆ ಡಿಕ್ಕಿಯಾದ ಬೊಲೆರೊ : 6 ಮಂದಿ ಸಾವು

ದೇವಸ್ಥಾನಕ್ಕೆ ಹೊರಟವರ ದುರಂತ ಅಂತ್ಯ ಬೆಳಗಾವಿ : ಬೆಳಗಾವಿ ಜಿಲ್ಲೆಯಲ್ಲಿ ಗುರುವಾರ ನಸುಕಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 6 ಮಂದಿ ಮೃತಪಟ್ಟಿದ್ದಾರೆ. ರಾಮದುರ್ಗ ತಾಲೂಕಿನ ಚುಂಚನೂರ ಗ್ರಾಮದ ಬಳಿ ತಿರುವಿನಲ್ಲಿ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಆಲದ ಮರಕ್ಕೆ ಬೊಲೆರೊ ವಾಹನ ಡಿಕ್ಕಿಹೊಡೆದು ಅಪಘಾತ ಸಂಬವಿಸಿದೆ.ಹುಲಕುಂದ ಗ್ರಾಮದಿಂದ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ದುರ್ಘಟನೆ ನಡೆದಿದೆ. ಪಿಕ್‌ಅಪ್ ಬೊಲೆರೊ ವಾಹನದಲ್ಲಿ 23 ಜನ ಪ್ರಯಾಣಿಸುತ್ತಿದ್ದರು. ಈ ಪೈಕಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದು, ಆಸ್ಪತ್ರೆಗೆ ಸಾಗಿಸುವ

ಮರಕ್ಕೆ ಡಿಕ್ಕಿಯಾದ ಬೊಲೆರೊ : 6 ಮಂದಿ ಸಾವು Read More »

ಪ್ಲಾಟ್‌ಫಾರ್ಮ್‌ನ ಡ್ರಮ್‌ನಲ್ಲಿ ಯುವತಿಯ ಕೊಳೆತ ಶವ ಪತ್ತೆ

ಯಶವಂತಪುರ ರೈಲು ನಿಲ್ದಾಣದಲ್ಲಿ ಸಂಭವಿಸಿದ ಘಟನೆ ಬೆಂಗಳೂರು: ಯಶವಂತಪುರ ರೈಲು ನಿಲ್ದಾಣದ ಹಳಿಯ ಬಳಿಯಲ್ಲಿದ್ದ ಪ್ಲಾಸ್ಟಿಕ್‌ ಡ್ರಮ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಯುವತಿಯ ಶವ ಪತ್ತೆಯಾಗಿದೆ. ತುಂಬಾ ದಿನಗಳ ಹಿಂದೆಯೇ ಇದನ್ನು ಇಲ್ಲಿಡಲಾಗಿದ್ದು, ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಸ್ವಚ್ಛತಾ ಸಿಬ್ಬಂದಿ ಅದನ್ನು ತೆರವುಗೊಳಿಸುವ ವೇಳೆ ಡ್ರಮ್‌ನಲ್ಲಿ ಮಹಿಳೆ ಶವ ಇರುವುದು ಪತ್ತೆಯಾಗಿದೆ. ಡ್ರಮ್‌ ಮೇಲೆ ಬಟ್ಟೆಗಳನ್ನು ಸುತ್ತಿ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ. ಯಶವಂತಪುರ ರೈಲು ನಿಲ್ದಾಣದ ಗೂಡ್ಸ್ ಪ್ಲಾಟ್‌ಫಾರ್ಮ್‌ನ ಡ್ರಮ್‌ ಒಂದರಲ್ಲಿ ಶವ ಪತ್ತೆಯಾಗಿದೆ. ಅಂದಾಜು 23

ಪ್ಲಾಟ್‌ಫಾರ್ಮ್‌ನ ಡ್ರಮ್‌ನಲ್ಲಿ ಯುವತಿಯ ಕೊಳೆತ ಶವ ಪತ್ತೆ Read More »

ಕೆಮ್ಮಾಯಿ ನಿವಾಸಿ, ಕೃಷಿಕ ಗಂಗಾಧರ ಗೌಡ ನಿಧನ

ಪುತ್ತೂರು: ಕೆಮ್ಮಾಯಿ ನಿವಾಸಿ, ಕೃಷಿಕ ಗಂಗಾಧರ ಗೌಡ (65) ಅವರು ಅನಾರೋಗ್ಯದಿಂದ ಮಂಗಳವಾರ ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು. ಶಾಸಕ ಸಂಜೀವ ಮಠಂದೂರು ಅವರ ಪತ್ನಿಯ ಸಹೋದರಿ ದಿ. ಪುಷ್ಪಲತಾ ಅವರ ಪತಿ ಗಂಗಾಧರ ಗೌಡ ಅವರು ಕೆಲ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕೇಂದ್ರದ ಮಾಜಿ ಸಚಿವ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಶಾಸಕ ಸಂಜೀವ ಮಠಂದೂರು ಸಹಿತ ಅನೇಕ ಗಣ್ಯರು ಮೃತರ ಮನೆಗೆ ಭೇಟಿ ನೀಡಿದ್ದಾರೆ.ಮೃತರು ಪುತ್ರ, ಕೆಪಿಟಿ ಉದ್ಯೋಗಿ ಧನುಷ್ ಹಾಗೂ ಪುತ್ರಿ ಲಿಖಿತ

ಕೆಮ್ಮಾಯಿ ನಿವಾಸಿ, ಕೃಷಿಕ ಗಂಗಾಧರ ಗೌಡ ನಿಧನ Read More »

ರಿಷಭ್‌ ಪಂತ್‌ ಚಿಕಿತ್ಸೆ ಹೊಣೆ ಬಿಸಿಸಿಯದ್ದು

ತಲೆಗೆ ಗಾಯ, ಕಾಲು, ಬೆನ್ನುಮೂಳೆ ಮುರಿತ ಮುಂಬಯಿ : ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಟೀಂ ಇಂಡಿಯಾ ಕ್ರಿಕೆಟಿಗ ರಿಷಬ್ ಪಂತ್ ಸ್ಥಿತಿಯ ಬಗ್ಗೆ ಊಹಾಪೋಹಗಳು ಹರಿದಾಡುತ್ತಿರುವಂತೆಯೇ ಪಂತ್ ಆರೋಗ್ಯ ಕುರಿತು ಬಿಸಿಸಿಐ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ರಿಷಬ್ ಪಂತ್ ಉತ್ತರಖಂಡದ ರೂರ್ಕಿ ಬಳಿ ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ. ಸದ್ಯ ಪಂತ್ ಆರೋಗ್ಯ ಸ್ಥಿರವಾಗಿದೆ. ಗಾಯದ ಪ್ರಮಾಣ ಹೆಚ್ಚಿದೆ. ಇದೀಗ ರಿಷಬ್ ಪಂತ್ ಅವರನ್ನು ಡೆಹ್ರಡೂನ್‌ನ ಮ್ಯಾಕ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪಂತ್ ಕುಟುಂಬದ

ರಿಷಭ್‌ ಪಂತ್‌ ಚಿಕಿತ್ಸೆ ಹೊಣೆ ಬಿಸಿಸಿಯದ್ದು Read More »

error: Content is protected !!
Scroll to Top