ಅಪರಾಧ

ಫೊಟೋ ಎಡಿಟ್ ಮಾಡಿ ವೈರಲ್: ಠಾಣೆಗೆ ದೂರು

ಪುತ್ತೂರು: ಫೊಟೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತಿರುವ ವಿಚಾರದ ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಪನಡ್ಕ ನಿವಾಸಿ ನವೀನ್ ರೈ ಕೈಕಾರ ಎಂಬವರು ದಿನೇಶ್ ಪುತ್ತೂರು ಎಂಬವರ ವಿರುದ್ಧ ದೂರು ನೀಡಿದ್ದಾರೆ. ತನ್ನ ಫೊಟೋದ ಜೊತೆ ಇನ್ನೊಂದು ಹುಡುಗಿಯ ಫೊಟೋವನ್ನು ಸೇರಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತಿದ್ದಾರೆ. ಈ ಫೊಟೋವನ್ನು ಪುತ್ತಿಲ ಪರಿವಾರ – 1 ವಾಟ್ಸಆ್ಯಪ್ ಗ್ರೂಪಿನಲ್ಲಿ ಹರಿಯಬಿಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಫೊಟೋ ಎಡಿಟ್ ಮಾಡಿ ವೈರಲ್: ಠಾಣೆಗೆ ದೂರು Read More »

ಮಾನಹಾನಿಕರ ಸುದ್ದಿ ಬಿತ್ತರ: ನಗರ ಠಾಣೆಗೆ ದೂರು

ಪುತ್ತೂರು: ಬನ್ನೂರು ನಿವಾಸಿ ಶೇಖರ್ ಎನ್‍.ಪಿ. ಎಂಬವರು ತನ್ನ ಮೇಲೆ ಮಾನಹಾನಿಕರ ಸುಳ್ಳು ಸುದ್ದಿ ಬಿತ್ತರಿಸಿರುವುದಾಗಿ ಆರೋಪಿಸಿ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ. ಪತ್ರಿಕೆ ಮತ್ತು ಖಾಸಗಿ ಚಾನೆಲ್ ನಲ್ಲಿ ಇಲ್ಲ ಸಲ್ಲದ ಆರೋಪ ಮಾಡಿ, ತೇಜೋವಧೆ ಮಾಡಿ, ಮಾನಹಾನಿಕರವಾದ ಸುಳ್ಳು ಸುದ್ದಿಯನ್ನು ಬಿತ್ತರಿಸಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಉದ್ಯಮಿಯಾಗಿರುವ ನಾನು ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಜನಪರ ಸೇವೆಗಳಲ್ಲಿ ಭಾಗಿಯಾಗಿರುತ್ತೇನೆ. ಈ ಸಂದರ್ಭ ರಾಜಕೀಯ ಕೆಸರೆರಚಾಟಗಳು ಸಾಮಾನ್ಯವಾಗಿದ್ದು, ಈ ಹಿನ್ನೆಲೆ ತೋಜೋವಧೆ ಮಾಡುವ ಉದ್ದೇಶದಿಂದ

ಮಾನಹಾನಿಕರ ಸುದ್ದಿ ಬಿತ್ತರ: ನಗರ ಠಾಣೆಗೆ ದೂರು Read More »

ಪೆರೋಲ್’ನಲ್ಲಿ ಹೊರಬಂದು ದರೋಡೆ ಎಸಗಿದ, ಪೊಲೀಸರ ಕೈಗೆ ಸಿಗುವ ಮೊದಲೇ ಜೈಲು ಸೇರಿದ!! | ಪಡುವನ್ನೂರು ಗುರುಪ್ರಸಾದ್ ರೈ ಮನೆ ದರೋಡೆ ಪ್ರಕರಣದ ಎಲ್ಲಾ 7 ಆರೋಪಿಗಳ ಬಂಧನ | ಪತ್ರಿಕಾಗೋಷ್ಠಿಯಲ್ಲಿ ಪ್ರಕರಣದ ವಿವರ ಬಿಚ್ಚಿಟ್ಟ ಎಸ್ಪಿ ಸಿ.ಬಿ. ರಿಷ್ಯಂತ್

ಪುತ್ತೂರು: ತಾಲೂಕಿನ ಪಡುವನ್ನೂರು ಗ್ರಾಮದಲ್ಲಿ ಸೆ.9ರಂದು ಮನೆಯೊಂದಕ್ಕೆ ನುಗ್ಗಿದ ದರೋಡೆಕೋರರ ತಂಡ ತಾಯಿ-ಮಗನನ್ನು ಕಟ್ಟಿ ಹಾಕಿ ಚಿನ್ನ ಹಾಗೂ ನಗದು ದರೋಡೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಏಳನೇ ಪ್ರಮುಖ ಆರೋಪಿ ರವಿ ಪೆರೋಲ್ನಲ್ಲಿ ಹೊರಗೆ ಬಂದು ಈ ಕೃತ್ಯದಲ್ಲಿ ಭಾಗಿಯಾಗಿ ಮತ್ತೆ ಜೈಲಿನಲ್ಲಿದ್ದಾನೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ರಿಷ್ಯಂತ್ ಸಿ.ಬಿ. ತಿಳಿಸಿದರು. ಶುಕ್ರವಾರ ಪುತ್ತೂರು ಡಿವೈಎಸ್ಪಿ ಕಚೇರಿಯಲ್ಲಿ ಪತ್ರಿಕಾಗೊಷ್ಠಿಯಲ್ಲಿ ಪ್ರಕರಣದ ವಿವರ ನೀಡಿದ ಅವರು, ಸೆ. 7ರಂದು ಬೆಳಗ್ಗಿನ ಜಾವ 2

ಪೆರೋಲ್’ನಲ್ಲಿ ಹೊರಬಂದು ದರೋಡೆ ಎಸಗಿದ, ಪೊಲೀಸರ ಕೈಗೆ ಸಿಗುವ ಮೊದಲೇ ಜೈಲು ಸೇರಿದ!! | ಪಡುವನ್ನೂರು ಗುರುಪ್ರಸಾದ್ ರೈ ಮನೆ ದರೋಡೆ ಪ್ರಕರಣದ ಎಲ್ಲಾ 7 ಆರೋಪಿಗಳ ಬಂಧನ | ಪತ್ರಿಕಾಗೋಷ್ಠಿಯಲ್ಲಿ ಪ್ರಕರಣದ ವಿವರ ಬಿಚ್ಚಿಟ್ಟ ಎಸ್ಪಿ ಸಿ.ಬಿ. ರಿಷ್ಯಂತ್ Read More »

ಪಾಕಿನಲ್ಲಿ ಪ್ರಬಲ ಬಾಂಬ್ ಸ್ಫೋಟ: ಸತ್ತವರೆಷ್ಟು? ಗಾಯಾಳುಗಳೆಷ್ಟು?

ಕರಾಚಿ: ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಕನಿಷ್ಠ 34 ಜನರು ಮೃತಪಟ್ಟಿದ್ದು ಮತ್ತು 100ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಕುರಿತು ವರದಿಯಾಗಿದೆ. ಪ್ರವಾದಿ ಮುಹಮ್ಮದ್ ಅವರ ಜನ್ಮ ವಾರ್ಷಿಕೋತ್ಸವ ಆಚರಿಸಲು ಜನರು ಸೇರುತ್ತಿದ್ದ ಬಲೂಚಿಸ್ತಾನ್ ಮಸ್ತುಂಗ್ ಜಿಲ್ಲೆಯ ಮಸೀದಿಯ ಬಳಿ ಭಾರೀ ಸ್ಫೋಟ ಸಂಭವಿಸಿದೆ. ಅಧಿಕಾರಿಗಳ ಮಾಹಿತಿ ಪ್ರಕಾರ, ಮೃತಪಟ್ಟವರಲ್ಲಿ ಮಸ್ತುಂಗ್‌ನ ಡಿಎಸ್‌ಪಿ ನವಾಜ್ ಗಶ್ಕೋರಿ ಕೂಡ ಸೇರಿದ್ದಾರೆ ಎನ್ನಲಾಗಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ರವಾನಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಸ್ಫೋಟದ ಹೊಣೆಯನ್ನು

ಪಾಕಿನಲ್ಲಿ ಪ್ರಬಲ ಬಾಂಬ್ ಸ್ಫೋಟ: ಸತ್ತವರೆಷ್ಟು? ಗಾಯಾಳುಗಳೆಷ್ಟು? Read More »

ಆರ್ಕೆಸ್ಟ್ರಾದ ಆಸೆ ತೋರಿಸಿ ವಿವಾಹಿತ ಮಹಿಳೆಯ ಬ್ಲ್ಯಾಕ್ ಮೇಲ್, ಬಲಾತ್ಕಾರ, ಜೀವ ಬೆದರಿಕೆ | ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪ್ರಶಾಂತ್ ಭಟ್ ಮಾಣಿಲ ಬಂಧನ | ಪ್ರಕರಣದ ಫುಲ್ ಡೀಟೈಲ್ ಇಲ್ಲಿದೆ

ಕಾರವಾರ: ಆರ್ಕೆಸ್ಟ್ರಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ, ವಿವಾಹಿತ ಮಹಿಳೆಯನ್ನು ಬ್ಲ್ಯಾಕ್ ಮೇಲ್ ಮಾಡಿ, ಅತ್ಯಾಚಾರ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಮಾಜಿ ಸದಸ್ಯ, ದೇವಾಲಯ ಹಿತರಕ್ಷಣಾ ವೇದಿಕೆಯ ಸದಸ್ಯ ಪ್ರಶಾಂತ್ ಭಟ್ ಮಾಣಿಲ ಎಂಬಾತನನ್ನು ಕಾರವಾರ ಪೋಲಿಸರು ಬಂಧಿಸಿದ್ದಾರೆ. ವಿವಾಹಿತ ಮಹಿಳೆಯ ಜೊತೆ ಸಲುಗೆ ಬೆಳೆಸಿ, ಆಕೆಗೆ ಆರ್ಕೆಸ್ಟ್ರಾದಲ್ಲಿ ಹಾಡುವ ಅವಕಾಶ ನೀಡುವುದಾಗಿ ನಂಬಿಸಿ, ಅತ್ಯಾಚಾರ ಮಾಡಿದ್ದ. ಮಾತ್ರವಲ್ಲ, ವಿವಾಹಿತ ಮಹಿಳೆಯರ ನಗ್ನ ಚಿತ್ರ ಸೆರೆಹಿಡಿದು ಹಲವರಿಗೆ ಶೇರ್ ಮಾಡಿದ್ದು, ಲಕ್ಷಾಂತರ ರೂಪಾಯಿ ಹಣ

ಆರ್ಕೆಸ್ಟ್ರಾದ ಆಸೆ ತೋರಿಸಿ ವಿವಾಹಿತ ಮಹಿಳೆಯ ಬ್ಲ್ಯಾಕ್ ಮೇಲ್, ಬಲಾತ್ಕಾರ, ಜೀವ ಬೆದರಿಕೆ | ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪ್ರಶಾಂತ್ ಭಟ್ ಮಾಣಿಲ ಬಂಧನ | ಪ್ರಕರಣದ ಫುಲ್ ಡೀಟೈಲ್ ಇಲ್ಲಿದೆ Read More »

ಕೆವಿಜಿ ಪ್ರಾಂಶುಪಾಲ ಕೊಲೆ ಪ್ರಕರಣ: 6 ಮಂದಿ ಅಪರಾಧಿಗಳು

ಬೆಂಗಳೂರು: ಕರಾವಳಿಯನ್ನು ಬೆಚ್ಚಿಬೀಳಿಸಿದ್ದ 12 ವರ್ಷದ ಹಿಂದಿನ ಕೊಲೆ ಪ್ರಕರಣಕ್ಕೆ ಮತ್ತೆ ಜೀವ ಲಭಿಸಿದ್ದು, ಪ್ರಕರಣದ ಆರೋಪಿಗಳನ್ನು ದೋಷಮುಕ್ತಗೊಳಿಸಿದ್ದ ಕೆಳಗಿನ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್‌ ರದ್ದುಮಾಡಿದೆ. ಸುಳ್ಯದ ಕೆವಿಜಿ ಪಾಲಿಟೆಕ್ನಿಕ್‌ ಕಾಲೇಜಿನ ಪ್ರಾಂಶುಪಾಲ ಎ.ಎಸ್‌. ರಾಮಕೃಷ್ಣ ಕೊಲೆ ಪ್ರಕರಣದ ಆರೋಪಿಗಳಾದ ಡಾ. ರೇಣುಕಾ ಪ್ರಸಾದ್‌ ಸೇರಿದಂತೆ 7 ಮಂದಿಯನ್ನು ಖುಲಾಸೆಗೊಳಿಸಿ ಅಧೀನ ನ್ಯಾಯಾಲಯ ನೀಡಿದ್ದ ತೀರ್ಪನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿ 6 ಮಂದಿಯನ್ನು ದೋಷಿಗಳಾಗಿ ತೀರ್ಮಾನಿದೆ. ರೇಣುಕಾ ಪ್ರಸಾದ್‌ ಸೇರಿದಂತೆ 7 ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ ಪುತ್ತೂರಿನ

ಕೆವಿಜಿ ಪ್ರಾಂಶುಪಾಲ ಕೊಲೆ ಪ್ರಕರಣ: 6 ಮಂದಿ ಅಪರಾಧಿಗಳು Read More »

‘ಕೆನಡಾ ಖಲಿಸ್ತಾನಿ ಉಗ್ರರ ಸ್ವರ್ಗ’: ಮತ್ತೊಮ್ಮೆ ಬಯಲು ಮಾಡಿದ ಎನ್.ಐ.ಎ. | ಖಲಿಸ್ತಾನಿ- ಪಾಕ್ ನಂಟಿನ ಮಾಹಿತಿಯೂ ಬಹಿರಂಗ!!

ಹೊಸದಿಲ್ಲಿ: ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜಾರ್‌ ಹತ್ಯೆ ವಿಚಾರದಲ್ಲಿ ಭಾರತ ಮತ್ತು ಕೆನಡಾ ‘ರಾಜತಾಂತ್ರಿಕ ಸಮರ’ ಮುಂದುವರಿದಿರುವ ಹೊತ್ತಿನಲ್ಲಿಯೇ ‘ಕೆನಡಾ ಖಲಿಸ್ತಾನಿ ಉಗ್ರರ ಸ್ವರ್ಗ’ ಎಂಬ ವಾದ ಎನ್‌ಐಎ ತನಿಖೆಯಿಂದ ಇನ್ನಷ್ಟು ಬಲಗೊಂಡಿದೆ. ಖಲಿಸ್ತಾನ್- ಗ್ಯಾಂಗ್‌ಸ್ಟರ್‌ಗಳ ನಂಟನ್ನು ಕತ್ತರಿಸಲು ಹೊರಟಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ಪಂಜಾಬ್, ಹರ್ಯಾಣ, ದಿಲ್ಲಿ- ಎನ್‌ಸಿಆರ್, ರಾಜಸ್ಥಾನ, ಉತ್ತರಾಖಂಡ ಮತ್ತು ಉತ್ತರ ಪ್ರದೇಶಗಳ 50ಕ್ಕೂ ಹೆಚ್ಚು ಸ್ಥಳಗಳ ಮೇಲೆ ಬುಧವಾರ ದಾಳಿ ನಡೆಸಿದೆ. ಖಲಿಸ್ತಾನಿ- ಪಾಕಿಸ್ತಾನದ ಐಎಸ್‌ಐ ಮತ್ತು ಗ್ಯಾಂಗ್‌ಸ್ಟರ್‌ಗಳ

‘ಕೆನಡಾ ಖಲಿಸ್ತಾನಿ ಉಗ್ರರ ಸ್ವರ್ಗ’: ಮತ್ತೊಮ್ಮೆ ಬಯಲು ಮಾಡಿದ ಎನ್.ಐ.ಎ. | ಖಲಿಸ್ತಾನಿ- ಪಾಕ್ ನಂಟಿನ ಮಾಹಿತಿಯೂ ಬಹಿರಂಗ!! Read More »

ಚುನಾವಣಾಧಿಕಾರಿ ಕಾರು ತಡೆದು ದಾಖಲೆಗಳನ್ನು ದೋಚಿದ ದುಷ್ಕರ್ಮಿಗಳು!!

ರಾಮನಗರ: ಹಾಲು ಉತ್ಪಾದಕ ಸಂಘದ ಚುನಾವಣೆ ನಡೆಸಲು ಬರುತ್ತಿದ್ದ ಚುನಾವಣಾಧಿಕಾರಿಗಳ ಕಾರನ್ನು ತಡೆದು ದಾಖಲೆಗಳನ್ನು ದೋಚಿದ ಘಟನೆ ಹೊಸಪಾಳ್ಯ ಹಾಗೂ ಕೆಂಚನಹಳ್ಳಿಯಲ್ಲಿ ಬುಧವಾರ ನಡೆದಿದೆ. ರಾಮನಗರ ಜಿಲ್ಲೆ ಮಾಗಡಿ ತಾಲೂಕು ತಿಪ್ಪಸಂದ್ರ ಹೋಬಳಿಯ ಹುಳ್ಳೇನಹಳ್ಳಿ ಹಾಲು ಉತ್ಪಾದಕ ಸಂಘದ ಚುನಾವಣೆ ನಡೆಸಲು ದಿನಾಂಕ ನಿಗದಿಯಾಗಿತ್ತು. ಅದರಂತೆ ಬುಧವಾರ ಅಧಿಕಾರಿಗಳು ಕಾರಿನಲ್ಲಿ ಬರುತ್ತಿದ್ದ ವೇಳೆ ಚುನಾವಣಾಧಿಕಾರಿಗಳ ಕಾರನ್ನು ಹೊಸಪಾಳ್ಯ ಹಾಗೂ ಕೆಂಚನಹಳ್ಳಿ ರಸ್ತೆ ಮಧ್ಯದಲ್ಲೇ ಅಡ್ಡಕಟ್ಟಿದ ತಂಡ ಚುನಾವಣಾಧಿಕಾರಿಗಳ ಬಳಿ ಇದ್ದ ಮೊಬೈಲ್ ಹಾಗೂ ಚುನಾವಣೆಗೆ ಸಂಬಂಧಪಟ್ಟ ನಾಮಪತ್ರ

ಚುನಾವಣಾಧಿಕಾರಿ ಕಾರು ತಡೆದು ದಾಖಲೆಗಳನ್ನು ದೋಚಿದ ದುಷ್ಕರ್ಮಿಗಳು!! Read More »

ಒಂದೂವರೆ ವರ್ಷದ ಮಗುವಿನ ಕ್ರೂರ ಹತ್ಯೆಗೆ ಯತ್ನ! | ಮಂಗಳೂರು ಪೊಲೀಸ್ ಠಾಣೆ ಮುಂಭಾಗವೇ ತಂದೆಯಿಂದ ಕೃತ್ಯ!!

ಮಂಗಳೂರು: ಇಲ್ಲಿನ ಪೊಲೀಸ್ ಠಾಣೆಯೊಂದರ ಮುಂಭಾಗವೇ ಒಂದೂವರೆ ವರ್ಷದ ಎಳೆ ಮಗುವಿನ ಕುತ್ತಿಗೆ ಹಿಡಿದು, ಎತ್ತಿ ನೆಲಕ್ಕೆಸೆದು ಕೊಲೆ ಮಾಡಲು ಯತ್ನಿಸಿದ ಘಟನೆ ನಡೆದಿದೆ. ಆರೋಪಿಯನ್ನು ವ್ಯಾಸನಗರದ ನಿವಾಸಿ ಮಹೇಶ್ ಎಂದು ಗುರುತಿಸಲಾಗಿದೆ. ಕಿರುಕುಳದಿಂದ ಬೇಸತ್ತ ಆರೋಪಿ ಮಹೇಶ್’ನ ಪತ್ನಿ ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದ ವೇಳೆ ಘಟನೆ ನಡೆದಿದೆ ಎಂದು ಹೇಳಲಾಗಿದೆ. ತನ್ನ ಪತಿ ಮಹೇಶ್ ಎಂಬಾತ ತನ್ನ ಇಬ್ಬರು ಮಕ್ಕಳನ್ನು ಹಾಗೂ ತನ್ನನ್ನು ಬೆಂಕಿ ಹಾಕಿ ಸುಟ್ಟು ಹಾಕುತ್ತೇನೆ ಎಂದು ಬೆದರಿಕೆ ಹಾಕಿ,

ಒಂದೂವರೆ ವರ್ಷದ ಮಗುವಿನ ಕ್ರೂರ ಹತ್ಯೆಗೆ ಯತ್ನ! | ಮಂಗಳೂರು ಪೊಲೀಸ್ ಠಾಣೆ ಮುಂಭಾಗವೇ ತಂದೆಯಿಂದ ಕೃತ್ಯ!! Read More »

ಮನೆಯವರನ್ನು ಕೂಡಿ ಹಾಕಿ ದರೋಡೆ ಪ್ರಕರಣ | ಕೇರಳದಲ್ಲಿ ಮಹತ್ವದ ಸಾಧನೆ ಮೆರೆದ ಕರ್ನಾಟಕ ಪೊಲೀಸರು!!

ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ ಕುದ್ಕಾಡಿ ತೋಟದಮೂಲೆಯನ್ನು ಇತ್ತೀಚೆಗೆ ತಾಯಿ-ಮಗನನ್ನು ಕಟ್ಟಿ ಹಾಕಿ ದರೋಡೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಾಸರಗೋಡು ಜಿಲ್ಲೆಯ ಸೀತಾಂಗೋಳಿ ಸಮೀಪದ ಬಾಡೂರು ನಿವಾಸಿಯೋರ್ವನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ದರೋಡೆಗೈದು ಕೇರಳದಲ್ಲಿ ಅವಿತಿರುವ ಕುರಿತು ಮಾಹಿತಿ ಕಲೆ ಹಾಕಿದ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಬಾಡೂರು ಬಳಿ ಸಂಸ್ಥೆಯೊಂದರಲ್ಲಿ ಅವಿತು ಕುಳಿತಿದ್ದ ವೇಳೆ ಕರ್ನಾಟಕ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಕೇರಳ ಮಾಧ್ಯಮಗಳಲ್ಲಿ ವರದಿ ಪ್ರಕವಾಗಿತ್ತು ಎನ್ನಲಾಗಿದೆ. ಕಳೆದ ಕೆಲವು ದಿನಗಳ ಹಿಂದೆ ತಡ ರಾತ್ರಿ

ಮನೆಯವರನ್ನು ಕೂಡಿ ಹಾಕಿ ದರೋಡೆ ಪ್ರಕರಣ | ಕೇರಳದಲ್ಲಿ ಮಹತ್ವದ ಸಾಧನೆ ಮೆರೆದ ಕರ್ನಾಟಕ ಪೊಲೀಸರು!! Read More »

error: Content is protected !!
Scroll to Top