ಅಪರಾಧ

ಸ್ನೇಹಮಯಿ ಕೃಷ್ಣ ಮೇಲೆ ವಾಮಾಚಾರ : ಇನ್ನಿಬ್ಬರು ಸೆರೆ

ಬೆಂಗಳೂರಿನ ಅಶೋಕ್ ನಗರದ ಸ್ಮಶಾನದ ಕಾಳಿಕಾಂಬ ಗುಡಿಯಲ್ಲಿ ರಕ್ತಾಭಿಷೇಕ ಮಂಗಳೂರು: ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ ಮತ್ತು ಗೋವಿಂದರಾಜು ಸೇರಿ ಹಲವರ ಮೇಲೆ ವಾಮಾಚಾರ ಮಾಡಿಸಿದ್ದಾರೆ ಎಂಬ ಆರೋಪದ ಮೇಲೆ ಮಂಗಳೂರು ಪೊಲೀಸರು ಬೆಂಗಳೂರಿನಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಸ್ನೇಹಮಯಿ ಕೃಷ್ಣ ಮೇಲೆ ಬೆಂಗಳೂರಿನ ಅಶೋಕ್ ನಗರದ ಸ್ಮಶಾನದಲ್ಲಿ ಕಾಳಿಕಾಂಬ ಗುಡಿಯ ಅರ್ಚಕರಿಗೆ ವಿಚಾರ ತಿಳಿಸದೆ ಈ ಇಬ್ಬರು ಆರೋಪಿಗಳು ಕುರಿಗಳನ್ನು ಬಲಿ ನೀಡಿ ವಾಮಾಚಾರ ಮಾಡಿದ್ದಾರೆ ಎಂದು ತನಿಖೆಯಲ್ಲಿ ಪತ್ತೆಯಾಗಿದೆ.ಸ್ನೇಹಮಯಿ ಕೃಷ್ಣ, ಗಂಗರಾಜು, […]

ಸ್ನೇಹಮಯಿ ಕೃಷ್ಣ ಮೇಲೆ ವಾಮಾಚಾರ : ಇನ್ನಿಬ್ಬರು ಸೆರೆ Read More »

ಪತ್ನಿಗೆ ಪತಿ ಹಾಗೂ ಇತರ ಮೂವರಿಂದ ಹಲ್ಲೆ ನಡೆಸಿ ಜೀವ ಬೆದರಿಕೆ | ಪುತ್ತೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲು

ಪುತ್ತೂರು: ಪತ್ನಿಯ ಮೇಲೆ ಆಕೆಯ ಪತಿ ಹಾಗೂ ಇತರ ಮೂವರು ಸೇರಿಕೊಂಡು ಹಲ್ಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುವ ಕುರಿತು ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಕೊಡಿಪ್ಪಾಡಿಯ ಎಚ್.ಅಮೀನಾ ಅವರು ಈ ಬಗ್ಗೆ ದೂರು ನೀಡಿದ್ದು, ತನ್ನ ಪತಿ ಕೆ.ಎಂ. ಅಬ್ದುಲ್ಲಾ, ಝಾರಾ, ಗಝಾಲಿ ಹಾಗೂ ರೈಸ್ ಎಂಬವರು ಹಲ್ಲೆ ನಡೆಸಿದ್ದಾರೆ. ಅಕ್ರಮವಾಗಿ ತನ್ನ ಮನೆಗೆ ಪ್ರವೇಶಿಸಿ ಜೀವ ಬೆದರಿಕೆ ಒಡ್ಡಿದ್ದಾರೆ. ಮನೆಯ ಸಾಮಾನುಗಳನ್ನು ಬೀಸಾಡಿದ್ದಾರೆ. ಮನೆಯಿಂದ ಹೊರಗೆ ಹೋಗುವಂತೆ ಬೆದರಿಕೆ ಹಾಕಿದ್ದಾರೆ. ಮಾನಭಂಗಕ್ಕೆ

ಪತ್ನಿಗೆ ಪತಿ ಹಾಗೂ ಇತರ ಮೂವರಿಂದ ಹಲ್ಲೆ ನಡೆಸಿ ಜೀವ ಬೆದರಿಕೆ | ಪುತ್ತೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲು Read More »

ಕ್ವಾರ್ಟ್‌ರ್ಸ್‌ಲ್ಲಿ ಜಿಎಸ್‌ಟಿ ಅಧಿಕಾರಿ ಕುಟುಂಬ ಆತ್ಮಹತ್ಯೆ

ಮೂರು ಶವಗಳು ಕೊಳೆತ ವಾಸನೆ ಬಂದ ಬಳಿಕ ಹೊರ ಜಗತ್ತಿಗೆ ತಿಳಿಯಿತು ಕೊಚ್ಚಿ : ಕೇರಳದ ಕೊಚ್ಚಿಯಲ್ಲಿರುವ ಕೇಂದ್ರ ಜಿಎಸ್‌ಟಿ ಅಧಿಕಾರಿಗಳ ವಸತಿ ಸಮುಚ್ಚಯದಲ್ಲಿ ಮೂರು ಕೊಳೆತ ಶವಗಳು ಪತ್ತೆಯಾಗಿವೆ. ಕೊಚ್ಚಿಯ ಕಕ್ಕನಾಡ್​ನಲ್ಲಿರುವ ಸಮುಚ್ಚಯದಲ್ಲಿ ಶವ ಸಿಕ್ಕಿದ್ದು, ಮೃತರನ್ನು ಹಿರಿಯ ಜಿಎಸ್‌ಟಿ ಅಧಿಕಾರಿ ಮನೀಷ್‌ ವಿಜಯ್‌, ಅವರ ಸಹೋದರಿ ಶಾಲಿನಿ ವಿಜಯ್‌ ಮತ್ತು ತಾಯಿ ಶಕುಂತಲಾ ಅಗರ್‌ವಾಲ್‌ ಎಂದು ಗುರುತಿಸಾಗಿದೆ. ಇವರು ಮೂಲತಃ ಜಾರ್ಖಂಡ್‌ನವರು. ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಭಾವಿಸಲಾಗಿದೆ. ಶವಗಳ ತೀವ್ರವಾಗಿ ಕೊಳೆತ ಸ್ಥಿತಿಯಲ್ಲಿರುವುದುರಿಂದ

ಕ್ವಾರ್ಟ್‌ರ್ಸ್‌ಲ್ಲಿ ಜಿಎಸ್‌ಟಿ ಅಧಿಕಾರಿ ಕುಟುಂಬ ಆತ್ಮಹತ್ಯೆ Read More »

ಹಣಕ್ಕಾಗಿ ದೈವನರ್ತಕಗೆ ಪೀಡನೆ, ಬೆದರಿಕೆ | ವಿಟ್ಲದ ದಲಿತ ಮುಖಂಡ ಸೇಸಪ್ಪ ಬೆದ್ರಕಾಡು ವಿರುದ್ಧ ಪ್ರಕರಣ ದಾಖಲಿಸುವಂತೆ ವಿಟ್ಲ ಪೊಲೀಸರಿಗೆ ಬಂಟ್ವಾಳ ನ್ಯಾಯಾಲಯ ಆದೇಶ

ವಿಟ್ಲ: ಹಣಕ್ಕಾಗಿ ದೈವನರ್ತಕಗೆ ಪೀಡನೆ, ಬೆದರಿಕೆ ನೀಡಿದ ಆರೋಪದಲ್ಲಿ ವಿಟ್ಲದ ದಲಿತ ಮುಖಂಡ ಸೇಸಪ್ಪ ಬೆದ್ರಕಾಡು ವಿರುದ್ಧ ಪ್ರಕರಣ ದಾಖಲಿಸುವಂತೆ ವಿಟ್ಲ ಪೊಲೀಸರಿಗೆ ಬಂಟ್ವಾಳ ನ್ಯಾಯಾಲಯ ಆದೇಶ ನೀಡಿದೆ. ವಿಟ್ಲದ ದಲಿತ ಸೇವಾ ಸಮಿತಿಯ ಮುಖಂಡ ಸೇಸಪ್ಪ ಬೆದ್ರಕಾಡು ವಿರುದ್ಧ ಕಸಬಾ ಗ್ರಾಮದ ಸುರುಳಿಮೂಲೆ ನಿವಾಸಿ ದೈವನರ್ತಕ ಆನಂದ ಎಸ್. ಎಂಬವರು ಬಂಟ್ವಾಳ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು‌. ನಾಟಿ ವೈದ್ಯ, ಜ್ಯೋತಿಷ್ಯದ ಜೊತೆಗೆ ದೈವನರ್ತಕರಾಗಿರುವ ಆನಂದ ಅವರು ವಿಟ್ಲದ ನೆಕ್ಕರೆ ಕಾಡು ನಿವಾಸಿ ಕಮಲಾ ಎಂಬವರ

ಹಣಕ್ಕಾಗಿ ದೈವನರ್ತಕಗೆ ಪೀಡನೆ, ಬೆದರಿಕೆ | ವಿಟ್ಲದ ದಲಿತ ಮುಖಂಡ ಸೇಸಪ್ಪ ಬೆದ್ರಕಾಡು ವಿರುದ್ಧ ಪ್ರಕರಣ ದಾಖಲಿಸುವಂತೆ ವಿಟ್ಲ ಪೊಲೀಸರಿಗೆ ಬಂಟ್ವಾಳ ನ್ಯಾಯಾಲಯ ಆದೇಶ Read More »

ಕಥೆ ಕದ್ದ ಆರೋಪ : ರಜನಿಕಾಂತ್‌ ನಟಿಸಿದ ರೋಬೊ ಸಿನೆಮಾ ನಿರ್ದೇಶಕನ 10 ಕೋ.ರೂ. ಆಸ್ತಿ ಮುಟ್ಟುಗೋಲು

ಚೆನ್ನೈ : ರಜನೀಕಾಂತ್ ಮತ್ತು ಐಶ್ವರ್ಯಾ ರೈ ನಟಿಸಿದ ರೋಬೊ ಸಿನಿಮಾದ ಕತೆ ಕದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದ ನಿರ್ದೇಶಕ ಶಂಕರ್‌ ಆಸ್ತಿಗಳನ್ನು ತನಿಖಾಧಿಅಕರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಶಂಕರ್ ನಿರ್ದೇಶನ ಮಾಡಿದ್ದ ರೋಬೊ ಸಿನಿಮಾ 2010ರಲ್ಲಿ ಬಿಡುಗಡೆ ಆಗಿತ್ತು. ಆಗಿನ ಕಾಲಕ್ಕೆ ಆ ಸಿನಿಮಾ ಭಾರತದಲ್ಲಿಯೇ ಭಾರಿ ಬಜೆಟ್ ಸಿನಿಮಾ. ಬಿಡುಗಡೆ ಆದ ಬಳಿಕ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ‘ರೋಬೊ’ ಸಿನಿಮಾ ಗ್ರಾಫಿಕ್ಸ್ ಪ್ರೇಕ್ಷಕರ ಮೈನವಿರೇಳಿಸಿತ್ತು. ಆಗಿನ ಕಾಲಕ್ಕೆ ‘ರೋಬೊ’ ಸಿನಿಮಾ ಸುಮಾರು 500 ಕೋಟಿಗೂ

ಕಥೆ ಕದ್ದ ಆರೋಪ : ರಜನಿಕಾಂತ್‌ ನಟಿಸಿದ ರೋಬೊ ಸಿನೆಮಾ ನಿರ್ದೇಶಕನ 10 ಕೋ.ರೂ. ಆಸ್ತಿ ಮುಟ್ಟುಗೋಲು Read More »

ಪೊಲೀಸ್‌ ಠಾಣೆ ಮೇಲೆ ಕಲ್ಲು ತೂರಲು ಕುಮ್ಮಕ್ಕು ನೀಡಿದ್ದ ಮೌಲ್ವಿ ಕೊನೆಗೂ ಬಂಧನ

ಪ್ರಚೋದನಕಾರಿ ಭಾಷಣ ಮಾಡಿ ಜನರನ್ನು ಕೆರಳಿಸಿದ್ದ ಮೌಲ್ವಿ ಮೈಸೂರು : ಮೈಸೂರಿನ ಉದಯಗಿರಿ ಪೊಲೀಸ್‌ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣ ಸಂಬಂಧ ಗಲಾಟೆಗೆ ಪ್ರಚೋದನೆ ನೀಡಿದ್ದ ಆರೋಪದಲ್ಲಿ ಮೌಲ್ವಿ ಮುಫ್ತಿ ಮುಸ್ತಾಕ್‌ನನ್ನು ಬಂಧಿಸಲಾಗಿದೆ. ಸಿಸಿಬಿ ಪೊಲೀಸರು ಗುರುವಾರ ಮೌಲ್ವಿ ಮುಫ್ತಿಯನ್ನು ಬಂಧಿಸಿದ್ದಾರೆ. ಇದರೊಂದಿಗೆ, ಗಲಾಟೆ ನಡೆದು 11 ದಿನಗಳ ಬಳಿಕ ಆರೋಪಿ ಮೌಲ್ವಿಯನ್ನು ಬಂಧಿಸಿದಂತಾಗಿದೆ. ಮೌಲ್ವಿಯನ್ನು ಬಂಧಿಸುವ ವಿಚಾರದಲ್ಲಿ ಸಾರ್ವಜನಿಕರ ಹಾಗೂ ಪ್ರತಿಪಕ್ಷಗಳ ಒತ್ತಡ ಹೆಚ್ಚಾಗಿತ್ತು. ಇದೀಗ ಕೊನೆಗೂ ಆತನನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಪೊಲೀಸ್‌ ಠಾಣೆ ಮೇಲೆ ಕಲ್ಲು ತೂರಲು ಕುಮ್ಮಕ್ಕು ನೀಡಿದ್ದ ಮೌಲ್ವಿ ಕೊನೆಗೂ ಬಂಧನ Read More »

ಕಾಡಿನಂಚಿನಲ್ಲಿ ಯುವಕ-ಯುವತಿ ನಿಗೂಢ ಸಾವು

ಸಾವಿನ ಸುತ್ತ ಹಲವು ಅನುಮಾನ ಚಿಕ್ಕಮಗಳೂರು: ಬೆಂಗಳೂರು ಮೂಲದ ಯುವಕ ಹಾಗೂ ಯುವತಿಯ ಶವಗಳು ಚಿಕ್ಕಮಗಳೂರು ತಾಲೂಕಿನ ದಾಸರಹಳ್ಳಿ ಗ್ರಾಮದಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾಗಿವೆ. ಯುವತಿ ಕಾರಿನೊಳಗೆ ಸಾವನ್ನಪ್ಪಿದ್ದಾಳೆ. ಯುವಕನ ಮೃತದೇಹ ಕಾರು ನಿಂತ ಜಾಗದ ಪಕ್ಕದ ಮರದಲ್ಲಿ ನೇತಾಡುತ್ತಿತ್ತು. ಇಬ್ಬರ ವಯಸ್ಸು ಅಂದಾಜು 25-30ರ ಒಳಗಿದ್ದು, ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ. ಯುವತಿಯ ಕುತ್ತಿಗೆಯಲ್ಲಿ ಕತ್ತು ಹಿಸುಕಿರುವ ಗುರುತು ಇದೆ. ಯುವಕ ಕಾರು ನಿಂತ ಜಾಗದ ಪಕ್ಕದ ಮರಕ್ಕೆ ವೇಲ್‌ನಿಂದ ನೇಣು ಹಾಕಿಕೊಂಡಿದ್ದಾನೆ. ನೇಣು ಹಾಕಿಕೊಂಡಿರುವ

ಕಾಡಿನಂಚಿನಲ್ಲಿ ಯುವಕ-ಯುವತಿ ನಿಗೂಢ ಸಾವು Read More »

ಪತಿ, ಅತ್ತೆ ನಾದಿನಿಯಿಂದ ದೈಹಿಕ, ಮಾನಸಿಕ ಹಿಂಸೆ | ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪತ್ನಿ

ಬೆಳ್ತಂಗಡಿ : ಪತ್ನಿಗೆ ಪತಿ ಹಾಗೂ ಅತ್ತೆ, ನಾದಿನಿಯ ನಿರಂತರ ಮಾನಸಿಕ ಕಿರುಕುಳದಿಂದ ಬೇಸತ್ತ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಎರ್ಮಾಳಪಳಿಕೆ ಎಂಬಲ್ಲಿ ನಡೆದಿದೆ. ಮಿತ್ತಬಾಗಿಲು ಜಿ.ನಗರ ನಿವಾಸಿ ಕೂಲಿ ಕಾರ್ಮಿಕ ಹಮೀದ್ ಎಂಬವರ ಪುತ್ರಿಯನ್ನು ಬೆಳ್ತಂಗಡಿ ತಾಲೂಕು ಮಿತ್ತಬಾಗಿಲು ಗ್ರಾಮದ ಎರ್ಮಾಳ್‌ಪಲ್ಕೆ ನಿವಾಸಿ ಫಾರೂಕ್ ಎಂಬಾತನಿಗೆ ಎರಡು ವರ್ಷಗಳ ಹಿಂದೆ ವಿವಾಹ ಮಾಡಿಕೊಡಲಾಗಿತ್ತು. ಹಲವಾರು ಕನಸುಗಳನ್ನು ಹೊತ್ತು ಪತಿ ಮನೆ ಸೇರಿದ ಆಕೆಗೆ ಅಲ್ಲಿ ಪತಿಯ ನಿರಂತರ ಮಾನಸಿಕ ದೈಹಿಕ ಕಿರುಕುಳ, ಅತ್ತೆ

ಪತಿ, ಅತ್ತೆ ನಾದಿನಿಯಿಂದ ದೈಹಿಕ, ಮಾನಸಿಕ ಹಿಂಸೆ | ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪತ್ನಿ Read More »

ಕರು ಮೇಲೆ ಮಚ್ಚಿನಿಂದ ದಾಳಿ |  ರಕ್ತದಿಂದ ನರಳಾಡುತ್ತಿರುವ ಕರು

ಹಾಸನ : ಕೊಟ್ಟಿಗೆಯಲ್ಲಿ ಕಟ್ಟಿದ ಕರುವಿಗೆಮನಸೋ ಇಚ್ಚೆ ಬಂದಂತೆ  ಮಚ್ಚಿನಿಂದ ಕೊಚ್ಚಿರುವ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ, ಅರೆಕೆರೆ ಗ್ರಾಮದಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ಕರು ರಕ್ತದ ಮಡುವಿಲ್ಲಿ ನರಳಾಡುತ್ತಿದೆ. ನವೀನ್ ಎಂಬುವವರಿಗೆ ಸೇರಿದ ಕರು ಇದಾಗಿದೆ. ನೋವಿನಿಂದ ಬಳಲುತ್ತಿದ್ದ  ಕರುವಿಗೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ.

ಕರು ಮೇಲೆ ಮಚ್ಚಿನಿಂದ ದಾಳಿ |  ರಕ್ತದಿಂದ ನರಳಾಡುತ್ತಿರುವ ಕರು Read More »

119 ಕೆಜಿ ಗಾಂಜಾ, ಕಾರು, ಟೆಂಪೋ ವಶ: ನಾಲ್ವರ ಬಂಧನ

ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ ಮಂಗಳೂರು: ಮಂಗಳೂರು ಸಿಸಿಬಿ ಪೊಲೀಸರು 119 ಕೆಜಿ ಗಾಂಜಾ ವಶಕ್ಕೆ ಪಡೆದು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಕಾಸರಗೋಡಿನ ಮೊಹಿಯುದ್ದೀನ್ ಶಬ್ಬೀರ್ (38), ಮಹಾರಾಷ್ಟ್ರದ ಥಾಣೆಯ ಮಹೇಶ್ ದ್ವಾರಕಾನಾಥ್ ಪಾಂಡೆ (30), ಕೇರಳದ ಅಜಯ್ ಕೃಷ್ಣನ್ (30) ಮತ್ತು ಹರಿಯಾಣದ ಜೀವನ್ ಸಿಂಗ್ (35) ಸೆರೆಯಾಗಿರುವ ಆರೋಪಿಗಳು. ಆರೋಪಿಗಳಿಂದ ಆಲ್ಟೋ ಕಾರು ಹಾಗೂ ಟೆಂಪೋ ವಶಪಡಿಸಿಕೊಳ್ಳಲಾಗಿದೆ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು

119 ಕೆಜಿ ಗಾಂಜಾ, ಕಾರು, ಟೆಂಪೋ ವಶ: ನಾಲ್ವರ ಬಂಧನ Read More »

error: Content is protected !!
Scroll to Top