ಅಪರಾಧ

ನ.1ರಿಂದ 19ರ ನಡುವೆ ಏರ್‌ ಇಂಡಿಯಾದಲ್ಲಿ ಪ್ರಯಾಣಿಸಬೇಡಿ : ಖಲಿಸ್ಥಾನಿ ಉಗ್ರರ ಬೆದರಿಕೆ

ಹೊಸದಿಲ್ಲಿ : ವಿಮಾನಗಳಿಗೆ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಬೆದರಿಕೆ ಕರೆಗಳನ್ನು ಮಾಡಿ ಸಂಚಾರವನ್ನು ಅಸ್ತವ್ಯಸ್ತಗೊಳಿಸುತ್ತಿರುವಾಗಲೇ ಈಗ ಖಲಿಸ್ಥಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನುನ್‌ ಏರ್​ ಇಂಡಿಯಾ ವಿಮಾನದಲ್ಲಿ ನವೆಂಬರ್ 1ರಿಂದ 19ರವರೆಗೆ ಪ್ರಯಾಣಿಸಬೇಡಿ ಎಂದು ಬೆದರಿಕೆ ಹಾಕಿದ್ದಾನೆ. ಸಿಖ್ ನರಮೇಧದ 40ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಏರ್ ಇಂಡಿಯಾ ವಿಮಾನದ ಮೇಲೆ ದಾಳಿ ಸಂಭವಿಸಬಹುದು ಏಂದು ಪನ್ನುನ್‌ ಬೆದರಿಕೆ ಸಂದೇಶದಲ್ಲಿ ಹೇಳಿದ್ದಾನೆ.ಕಳೆದ ವರ್ಷವೂ ಖಲಿಸ್ಥಾನಿ ಉಗ್ರರು ಏರ್‌ ಇಂಡಿಯಾಕ್ಕೆ ಇದೇ ರೀತಿಯ ಬೆದರಿಕೆ ಹಾಕಿದ್ದರು. ದಿಲ್ಲಿಯ ಇಂದಿರಾ […]

ನ.1ರಿಂದ 19ರ ನಡುವೆ ಏರ್‌ ಇಂಡಿಯಾದಲ್ಲಿ ಪ್ರಯಾಣಿಸಬೇಡಿ : ಖಲಿಸ್ಥಾನಿ ಉಗ್ರರ ಬೆದರಿಕೆ Read More »

ಅಕ್ರಮ ಆಸ್ತಿ ಗಳಿಕೆ ಪ್ರಕರಣ : ಡಿಕೆಶಿ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಸಿಬಿಐ ಅರ್ಜಿ

ಹೊಸದಿಲ್ಲಿ: ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಿರುದ್ಧವಿರುವಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸದೆ. ಇದೇ ಪ್ರಕರಣದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು. ಇದೀಗ ಯತ್ನಾಳ್ ಬೆನ್ನಲ್ಲೆ ಸಿಬಿಐ ಕೂಡ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದ ಸಿಬಿಐ ತನಿಖೆಯನ್ನು ವಾಪಸ್ ಪಡೆಯುವ ರಾಜ್ಯ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್​​​ಗೆ ಅರ್ಜಿ

ಅಕ್ರಮ ಆಸ್ತಿ ಗಳಿಕೆ ಪ್ರಕರಣ : ಡಿಕೆಶಿ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಸಿಬಿಐ ಅರ್ಜಿ Read More »

ಕಾಶ್ಮೀರ : ವೈದ್ಯ, 6 ಕಾರ್ಮಿಕರನ್ನು ಗುಂಡಿಕ್ಕಿ ಸಾಯಿಸಿದ ಉಗ್ರರು

ಶ್ರೀನಗರ: ಕೆಲ ದಿನಗಳಿಂದ ಶಾಂತಿಯುತವಾಗಿದ್ದ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಭಯೋತ್ಪಾದಕರ ಅಟ್ಟಹಾಸ ಮುಂದುವರಿದಿದೆ.ಭಾನುವಾರ ಸಂಜೆ ಜಮ್ಮು ಮತ್ತು ಕಾಶ್ಮೀರದ ಗಂದರ್‌ಬಾಲ್ ಜಿಲ್ಲೆಯ ಸೋನಾಮಾರ್ಗ್ ಪ್ರದೇಶದಲ್ಲಿ ಓರ್ವ ವೈದ್ಯ ಮತ್ತು ಆರು ಮಂದಿ ಕಾರ್ಮಿಕರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿರ್ಮಾಣ ಹಂತದಲ್ಲಿರುವ ಸುರಂಗದ ಬಳಿ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುಂಡಿನ ದಾಳಿ ನಡೆದ ಸ್ಥಳಕ್ಕೆ ಭದ್ರತಾ ಪಡೆಗಳು ತಲುಪಿದ್ದು, ಪ್ರದೇಶವನ್ನು ಸುತ್ತುವರಿದಿವೆ. ಭಯೋತ್ಪಾದಕರಿಗಾಗಿ ಹುಡುಕಾಟ ನಡೆಸಿವೆ. ದಾಳಿಗೊಳಗಾದ ಕಾರ್ಮಿಕರು ಝಡ್

ಕಾಶ್ಮೀರ : ವೈದ್ಯ, 6 ಕಾರ್ಮಿಕರನ್ನು ಗುಂಡಿಕ್ಕಿ ಸಾಯಿಸಿದ ಉಗ್ರರು Read More »

ಬಳ್ಪ ಮನೆಯೊಂದಕ್ಕೆ ನುಗ್ಗಿದ ಕಳ್ಳರು : ಚಿನ್ನಾಭರಣ ಕಳವು

ಸುಬ್ರಹ್ಮಣ್ಯ: ಬಳ್ಪ ಗ್ರಾಮದ ಅಕ್ಕೇಣಿ ಸುಂದರ ಗೌಡ ಎಂಬವರ ಮನೆಯಿಂದ ಅಪಾರ ಪ್ರಮಾಣದ ಚಿನ್ನ ಮತ್ತು ಹಣ ಕಳವು ಮಾಡಿದ ಘಟನೆ ನಡದಿದೆ. 12 ಲಕ್ಷ ರೂಪಾಯಿ ನಗದು ಮತ್ತು 28 ಪವನ್ ಚಿನ್ನ ಕಳ್ಳತನವಾಗಿರುವುದು ಭಾನುವಾರ  ಬೆಳಕಿಗೆ ಬಂದಿದೆ. ಅಕ್ಕೇಣಿ ಸುಂದರ ಗೌಡ ಅವರು ತಮ್ಮ ಕುಟುಂಬದೊಂದಿಗೆ ಅ. 17ರಂದು ಸಂಜೆ ಮನೆಗೆ ಬೀಗ ಹಾಕಿ ತಮ್ಮ ಮಗಳ ಮನೆ ಪೆರಿಗೇರಿಗೆ ಹೋಗಿದ್ದರು. ಭಾನುವಾರ ಮಧ್ಯಾಹ್ನ ಮನೆಗೆ ಹಿಂತಿರುಗಿ ಬಂದಾಗ ಮನೆಯ ಎದುರು ಬಾಗಿಲಿನ ಬೀಗ

ಬಳ್ಪ ಮನೆಯೊಂದಕ್ಕೆ ನುಗ್ಗಿದ ಕಳ್ಳರು : ಚಿನ್ನಾಭರಣ ಕಳವು Read More »

ಕಾಂಗ್ರೆಸ್ ಮುಖಂಡನಿಗೆ ಗಂಭೀರ ಹಲ್ಲೆ | ಆರೋಪಿಗಳು ಪೊಲೀಸ್ ವಶಕ್ಕೆ,, ವಿಚಾರಣೆ

ಪುತ್ತೂರು: ತಾಲೂಕಿನ ಕೆದಂಬಾಡಿ ಗ್ರಾಮದ ತಿಂಗಳಾಡಿ ಜಂಕ್ಷನ್ ನಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರೊಬ್ಬರಿಗೆ ಇಬ್ಬರು ಸೇರಿಕೊಂಡು ಗಂಭೀರ ಹಲ್ಲೆ ನಡೆಸಿದ ಘಟನೆ ಭಾನುವಾರ ಸಂಜೆ ಸಂಭವಿಸಿದೆ. ಸ್ಥಳೀಯ ನಿವಾಸಿ, ಕಾಂಗ್ರೆಸ್ ಮುಖಂಡರಾದ  ರಘುನಾಥ ರೈ ಎಂಬವರ ಮೇಲೆ ಗಂಭೀರ ಹಲ್ಲೆ ನಡೆಸಲಾಗಿದೆ. ತಿಂಗಳಾಡಿಯ ಅಂಗಡಿಯೊಂದರ ಬಳಿ ರಘುನಾಥ ರೈ ಅವರು ನಿಂತಿದ್ದಾಗ ಅಲ್ಲಿಗೆ ಬಂದ ಯುವಕರಿಬ್ಬರು ಮಾತಿಗೆ ಮಾತು ಬೆಳೆಸಿ ಹಲ್ಲೆ ಮಾಡಿದ್ದಾರೆ. ತಲೆಯನ್ನು ಹಿಡಿದು ಗೋಡೆಗೆ ಜಜ್ಜಿದ್ದು ಗಂಭೀರ ಗಾಯಗೊಂಡ ರಘುನಾಥ ರೈ ಅವರನ್ನು ಆಸ್ಪತ್ರೆಗೆ

ಕಾಂಗ್ರೆಸ್ ಮುಖಂಡನಿಗೆ ಗಂಭೀರ ಹಲ್ಲೆ | ಆರೋಪಿಗಳು ಪೊಲೀಸ್ ವಶಕ್ಕೆ,, ವಿಚಾರಣೆ Read More »

ಮುಡಾ ಹಗರಣ : ಇ.ಡಿ. ಪರಿಶೀಲನೆ ಮುಕ್ತಾಯ

ಎರಡು ಬಾಕ್ಸ್‌ ದಾಖಲೆ ಒಯ್ದ ತನಿಖಾಧಿಕಾರಿಗಳು ಮೈಸೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಎರಡು ದಿನಗಳ ಇ.ಡಿ ದಾಳಿ ಅಂತ್ಯಗೊಂಡಿದೆ. ಮೊದಲ ದಿನ ಬರೋಬ್ಬರಿ 12 ಗಂಟೆ ಮುಡಾದಲ್ಲಿ ಬೀಡುಬಿಟ್ಟು ತಪಾಸಣೆ ವಿಚಾರಣೆ ಪರಿಶೀಲನೆ ನಡೆಸಿದ್ದ ಇ.ಡಿ ಅಧಿಕಾರಿಗಳು ಎರಡನೇ ದಿನವೂ 17 ಗಂಟೆಗಳ ಕಾಲ ಮಾಹಿತಿ ಕಲೆಹಾಕಿದ್ದಾರೆ. ಕೆಲ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದರೆ, ಇನ್ನು ಕೆಲ ದಾಖಲೆಗಳನ್ನು ಹಾರ್ಡ್ ಡಿಸ್ಕ್‌ನಲ್ಲಿ ಸಂಗ್ರಹಿಸಿಕೊಂಡು ಹೋಗಿದ್ದಾರೆ.ಮುಡಾದಿಂದ ಸಾವಿರಾರು ಪುಟಗಳ ದಾಖಲೆಗಳನ್ನು ಇಡಿ ವಶಕ್ಕೆ ಪಡೆದಿದೆ. ಎಲ್ಲ ಹಂತದ ಅಧಿಕಾರಿಗಳ

ಮುಡಾ ಹಗರಣ : ಇ.ಡಿ. ಪರಿಶೀಲನೆ ಮುಕ್ತಾಯ Read More »

ಉಳ್ಳಾಲ ಸಮೀಪ ರೈಲು ಹಳಿತಪ್ಪಿಸುವ ಯತ್ನ?

ರಾತ್ರಿ ಹಳಿ ಮೇಲೆ ಜಲ್ಲಿಕಲ್ಲು ಸುರಿದ ದುಷ್ಕರ್ಮಿಗಳು ಮಂಗಳೂರು : ಕಳೆದ ಕೆಲ ದಿನಗಳಿಂದ ದೇಶದ ಅಲ್ಲಲ್ಲಿ ದುಷ್ಕರ್ಮಿಗಳು ಹಳಿಯ ಮೇಲೆ ಗ್ಯಾಸ್‌ ಸಿಲಿಂಡರ್‌, ಮರದ ತುಂಡು, ಕಬ್ಬಿಣದ ಸರಳು ಇತ್ಯಾದಿಗಳನ್ನು ಇಟ್ಟು ರೈಲುಗಳ ಹಳಿ ತಪ್ಪಿಸಲು ಯತ್ನಿಸಿದ ಹಲವು ಘಟನೆಗಳು ವರದಿಯಾಗಿವೆ. ಬಹುತೇಕ ಘಟನೆಗಳಲ್ಲಿ ಚಾಲಕರ ಸಮಯ ಪ್ರಜ್ಞೆಯಿಂದಾಗಿ ದುರಂತಗಳು ಕೂದಲೆಳೆಯ ಅಂತರದಲ್ಲಿ ತಪ್ಪಿವೆ. ಈಗ ಇದೇ ಮಾದರಿಯ ಪ್ರಯತ್ನವೊಂದು ಮಂಗಳೂರು ಸಮೀಪ ತೊಕ್ಕೊಟ್ಟುವಿನಲ್ಲಿ ನಡದಿರುವ ಅನುಮಾನ ಉಂಟಾಗಿದೆ. ಮಂಗಳೂರಿನಿಂದ ಕೇರಳಕ್ಕೆ ಹೋಗುವ ಮಾರ್ಗದಲ್ಲಿ ಉಳ್ಳಾಲದ

ಉಳ್ಳಾಲ ಸಮೀಪ ರೈಲು ಹಳಿತಪ್ಪಿಸುವ ಯತ್ನ? Read More »

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ : ಮೂಡುಬಿದಿರೆಯ ಶಿಕ್ಷಕನಿಗೆ 5 ವರ್ಷ ಜೈಲು

ಹೋಮ್‌ವರ್ಕ್‌ ಪರೀಕ್ಷಿಸುವ ನೆಪದಲ್ಲಿ ಕಿರುಕುಳ ನೀಡುತ್ತಿದ್ದ ಹೈಸ್ಕೂಲ್‌ ಶಿಕ್ಷಕ ಬೆಂಗಳೂರು: ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ ಮೂಡುಬಿದಿರೆ ಪ್ರೌಢಶಾಲೆಯೊಂದರ ಶಿಕ್ಷಕನಿಗೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಬೆಳ್ತಂಗಡಿ ಮೂಲದ ಗುರುವ ಮೊಗೇರ (49) ಶಿಕ್ಷೆಗೊಳಗಾದ ವ್ಯಕ್ತಿ. ಕಳೆದ ಫೆಬ್ರವರಿಯಲ್ಲಿ 10ನೇ ತರಗತಿಯ ಕೆಲವು ವಿದ್ಯಾರ್ಥಿಗಳು ಶಿಕ್ಷಕ ಅನುಚಿತವಾಗಿ ಸ್ಪರ್ಶಿಸಿದ ಬಗ್ಗೆ ಶಾಲೆಯ ಮುಖ್ಯೋಪಾಧ್ಯಾಯರಿಗೆ ದೂರು ನೀಡಿದಾಗ ಈ ಘಟನೆ ಬೆಳಕಿಗೆ ಬಂದಿತ್ತು.ಇಬ್ಬರು ಹೆಣ್ಣು ಮಕ್ಕಳ ತಂದೆಯಾಗಿರುವ ಆರೋಪಿ ವಿದ್ಯಾರ್ಥಿನಿಯರನ್ನು ಸ್ಟಾಫ್‌ರೂಮ್ ಹೊರತುಪಡಿಸಿ ಬೇರೆ ಬೇರೆ

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ : ಮೂಡುಬಿದಿರೆಯ ಶಿಕ್ಷಕನಿಗೆ 5 ವರ್ಷ ಜೈಲು Read More »

ಭೀಕರ ಅಪಘಾತ : 12 ಮಂದಿ ಸಾವು

ಜೈಪುರ : ರಾಜಸ್ಥಾನದ ಧೋಲ್ಪುರದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ 12 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕರೌಲಿ-ಧೋಲ್ಪುರ್ ಹೆದ್ದಾರಿಯಲ್ಲಿ ಸುನಿಪುರ್ ಎಂಬ ಗ್ರಾಮದ ಬಳಿ ನಿನ್ನೆ ತಡರಾತ್ರಿ ಆಟೋರಿಕ್ಷಾ ಮತ್ತು ಬಸ್ ನಡುವೆ ಈ ಭೀಕರ ಅಪಘಾತ ಸಂಭವಿಸಿದೆ.ಮೃತರಲ್ಲಿ ಐವರು ಮಕ್ಕಳು, ಮೂವರು ಬಾಲಕಿಯರು, ಇಬ್ಬರು ಮಹಿಳೆಯರು ಹಾಗೂ ಇಬ್ಬರು ಪುರುಷರು ಸೇರಿದ್ದಾರೆ. ಅಪಘಾತದ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ, ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.ಬರೌಲಿ ಗ್ರಾಮದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಆಟೋರಿಕ್ಷಾದಲ್ಲಿ ಹಿಂತಿರುಗುತ್ತಿದ್ದಾಗ

ಭೀಕರ ಅಪಘಾತ : 12 ಮಂದಿ ಸಾವು Read More »

ಗರಿಷ್ಠ ಭದ್ರತೆಯ ಅನಂತಪದ್ಮನಾಭ ದೇವಳದಲ್ಲಿ ಕಳ್ಳತನ

ಐದು ಹಂತದ ಭದ್ರತೆ ದಾಟಿ ಹೋಗಿ ಕದ್ದ ಮೂವರು ಮಹಿಳೆಯರು ತಿರುವನಂತಪುರ : ಕೋಟಿಗಟ್ಟಲೆ ಸಂಪತ್ತು ಇರುವ, ಬಿಗು ಭದ್ರತೆಯ ತಿರುವಂತಪುರದ ಶ್ರೀ ಅನಂತಪದ್ಮನಾಭ ದೇವಳದಲ್ಲಿ ಕಳೆದ ವಾರ ಸಂಭವಿಸಿದ ಕಳ್ಳತನ ಬೆಚ್ಚಿಬೀಳಿಸಿದೆ. ದೇವಳದ ಸಂಪತ್ತಿಗೆ ಐದು ಹಂತಗಳ ಸರ್ಪಗಾವಲು ಇದೆ. ಇದನ್ನು ಬೇಧಿಸಿ ಕಳ್ಳರು ಒಳ ನುಗ್ಗಿರುವುದು ಆಶ್ಚರ್ಯವುಂಟು ಮಾಡಿದೆ. ಪೂಜೆಗೆ ಬಳಸುವ ಒಂದು ಕಂಚಿನ ಉರುಳಿ (ಪಾತ್ರೆ) ಬಿಟ್ಟರೆ ಬೇರೇನನ್ನೂ ಒಯ್ಯಲು ಕಳ್ಳರಿಂದ ಸಾಧ್ಯವಾಗಿಲ್ಲ.ಈ ಕಳ್ಳರನ್ನು ಕೇರಳ ಪೊಲೀಸರು ಹರ್ಯಾಣದಿಂದ ಬಂಧಿಸಿದ್ದಾರೆ. ಕಳ್ಳರ ಪೈಕಿ

ಗರಿಷ್ಠ ಭದ್ರತೆಯ ಅನಂತಪದ್ಮನಾಭ ದೇವಳದಲ್ಲಿ ಕಳ್ಳತನ Read More »

error: Content is protected !!
Scroll to Top