ಸೌಜನ್ಯ ಕೊಲೆ ನೈಜ ಆರೋಪಿಗಳ ಪತ್ತೆಗೆ ಹಕ್ಕೊತ್ತಾಯ | ಸವಣೂರು ಯುವಕ ಮಂಡಲ, ಸಮಾನ ಮನಸ್ಕರ ವೇದಿಕೆ ವತಿಯಿಂದ ಸವಣೂರಿನಲ್ಲಿ ಸಾರ್ವಜನಿಕ ಮೌನ ಪ್ರತಿಭಟನೆ
ಪುತ್ತೂರು: ಸವಣೂರು ಯುವ ಮಂಡಲ ಹಾಗೂ ಸಮಾನ ಮನಸ್ಕರ ವೇದಿಕೆ ವತಿಯಿಂದ ಸೌಜನ್ಯ ಕೊಲೆಯ ನೈಜ ಆರೋಪಿಗಳ ಪತ್ತೆಗೆ ಹಕ್ಕೊತ್ತಾಯದ ಕುರಿತು ಸಾರ್ವಜನಿಕ ಮೌನ ಪ್ರತಿಭಟನೆ ಸವಣೂರಿನಲ್ಲಿ ಸೋಮವಾರ ನಡೆಯಿತು. ಸವಣೂರು ಪದ್ಮಾವತಿ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಗಿರಿಶಂಕರ ಸುಲಾಯ ಮೌನ ಮೆರವಣಿಗೆಗೆ ಚಾಲನೆ ನೀಡಿದರು. ರಾಕೇಶ್ ರೈ ಕೆಡೆಂಜಿ ಸಂದರ್ಭೋಚಿತವಾಗಿ ಮಾತನಾಡಿದರು. ಬಳಿಕ ಮೌನ ಮೆರವಣಿಗೆ ಸಾಗಿ ಸವಣೂರು ವೃತ್ತದಲ್ಲಿ ಸಮಾಪನಗೊಂಡು ಬಳಿಕ ಯುವಕ ಮಂಡಲದ ಕಾರ್ಯದರ್ಶಿ ಕೀರ್ತನ್ ಕೋಡಿಂಬೈಲು ಅವರು ಸವಣೂರು ಗ್ರಾಮ […]