ಕೆದಿಲ ವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಚುನಾವಣೆ | ಅಧ್ಯಕ್ಷರಾಗಿ ಪದ್ಮನಾಭ ಭಟ್, ಉಪಾಧ್ಯಕ್ಷರಾಗಿ ಧನಂಜಯ ನಾಯ್ಕ ಮುದ್ರಜೆ ಅವಿರೋಧವಾಗಿ ಆಯ್ಕೆ
ಕೆದಿಲ: ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪದ್ಮನಾಭ ಭಟ್ ಬಿ. ಪೆರ್ನಾಜೆ ಸತತ ಮೂರನೇ ಅವಧಿಗೆ, ಉಪಾಧ್ಯಕ್ಷರಾಗಿ ಧನಂಜಯ ನಾಯ್ಕ ಮುದ್ರಜೆ ಅವಿರೋಧವಾಗಿ ಆಯ್ಕೆಯಾದರು. ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ ನೇತೃತ್ವದ ಮೈತ್ರಿ ಕೂಟವು ಎಲ್ಲ 12 ಸ್ಥಾನಗಳನ್ನೂ ತನ್ನದಾಗಿಸಿಕೊಂಡಿತ್ತು. 3 ನಿರ್ದೇಶಕರು ಅವಿರೋಧ ಆಯ್ಕೆಯಾದರು, 9 ನಿರ್ದೇಶಕರು ಚುನಾವಣೆಯಲ್ಲಿ 60%ಕ್ಕಿಂತಲೂ ಅಧಿಕ ಮತಗಳನ್ನು ಪಡೆದು ವಿಜಯಿಗಳಾದರು. ಸಾಲಗಾರ ಕ್ಷೇತ್ರದಲ್ಲಿ ಸಹಕಾರಭಾರತಿ, ಬಿಜೆಪಿ ಬೆಂಬಲಿತ ಸತೀಶ ಕುಕ್ಕಕುಮೇರಿ (ಪ. ಜಾತಿ ಮೀಸಲು), […]