ಸ್ಥಳೀಯ ಸುದ್ದಿ

ಸ್ವಚ್ಛತೆ ಮತ್ತು ಆರೋಗ್ಯ ಸೇವಾ ಕಾರ್ಯಗಳಿಗೆ ಮಹತ್ವ: ಕೆಯ್ಯೂರು ನಾರಾಯಣ ಭಟ್

ಪುತ್ತೂರು: ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ರಿ. ಮೆಲ್ಕಾರ್ ಇದರ ಕೇಂದ್ರ ಸಮಿತಿಯ ಸಭೆಯನ್ನುಬೊಳುವಾರು ಬೈಲಿನ ಸೌಭರಿ ನಿವಾಸದಲ್ಲಿ ಸದಾನಂದ ರಾವ್ ಮತ್ತು ವನಿತಾ ಎಸ್ ರಾವ್ ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆಯ್ಯೂರು ನಾರಾಯಣ ಭಟ್ ಮಾತನಾಡಿ, ಅನಾರೋಗ್ಯದ ಸಂದರ್ಭಗಳಲ್ಲಿ ಚಿಕಿತ್ಸೆ ಪಡೆಯಲು ನಾನಾ ಸೌಲಭ್ಯಗಳಿದ್ದರೂ ಅದನ್ನು ಪಡೆಯುವಲ್ಲಿ ಎದುರಾಗುವ ಸಮಸ್ಯೆಗಳು, ಆಸ್ಪತ್ರೆಯಿಂದ ಆಸ್ಪತ್ರೆಗೆ ಸುತ್ತಾಟ, ರೋಗಿಯ ಜೀವ ಉಳಿಸಲು ಕುಟುಂಬದ ಸದಸ್ಯರು ಎದುರಿಸುವ ಸಮಸ್ಯೆಗಳನ್ನು ನೋಡಿದಾಗ […]

ಸ್ವಚ್ಛತೆ ಮತ್ತು ಆರೋಗ್ಯ ಸೇವಾ ಕಾರ್ಯಗಳಿಗೆ ಮಹತ್ವ: ಕೆಯ್ಯೂರು ನಾರಾಯಣ ಭಟ್ Read More »

ನೇಣು ಬಿಗಿದು ಯುವಕ ಆತ್ಮಹತ್ಯೆ

ಪುತ್ತೂರು: ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಪುರುಷರಕಟ್ಟೆಯ ಇಂದಿರಾನಗರದ ಯುವಕನೊಬ್ಬ ನೇಣು ಬಿಗಿದು‌ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತನನ್ನು ಪ್ರತೀಕ್ ಜೋಗಿ (23) ಎಂದು ಗುರುತಿಸಲಾಗಿದೆ. ಈತ ಬೆಂಗಳೂರಿನ ಶೋ ರೂಮ್ ವರ್ಕ್ ಶಾಪ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಇತ್ತೀಚೆಗಷ್ಟೇ ಊರಿಗೆ ಬಂದಿದ್ದ. ನ. 21 ರಂದು ಮಧ್ಯಾಹ್ನ ಮನೆಯಲ್ಲಿ ಮೊಬೈಲ್ ನೋಡುತ್ತಿದ್ದ, ಬಳಿಕ ಕಾಣೆಯಾಗಿದ್ದ. ಅನುಮಾನಗೊಂಡ ಮನೆ ಮಂದಿ ಆತನನ್ನು ಹುಡುಕಾಡಿದ್ದು, ಈ ವೇಳೆ ಮನೆಯ ಕೋಣೆಯೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಈತನ

ನೇಣು ಬಿಗಿದು ಯುವಕ ಆತ್ಮಹತ್ಯೆ Read More »

ಯೋಗ್ಯತೆಗಿಂತ ಯೋಗ ಮುಖ್ಯ. ಜನ್ಮ ದಿನದ ಸ್ವರ್ಣ ಸಂಭ್ರಮದಲ್ಲಿ SRK ಕೇಶವ ಅಮೈ

ಕೊಯ್ಲ: ಇಲ್ಲಿನ ಕಲಾಯಿಗುತ್ತು ಮನೆಯಲ್ಲಿ SRK Laddersನ ಕೇಶವ ಅಮೈ ಅವರ 50ನೇ ಹುಟ್ಟುಹಬ್ಬ ಅದ್ದೂರಿಯಾಗಿ ನಡೆಯಿತು. ಚಿತ್ರದೊಳಗೆ ಕೇಶವಮೈಸೂರಿನಲ್ಲಿ ಚಿತ್ರಕಲಾ ಶಿಕ್ಷಕರಾದ ಲಕ್ಷ್ಮೀನಾರಾಯಣ ಅವರು ಕೇಶವರನ್ನು ವೇದಿಕೆಯಲ್ಲಿ ಕುಳ್ಳಿರಿಸಿ ಹಾಡೊಂದು ಸಾಗಿಬಂದ ಆರೆಂಟು ನಿಮಿಷಗಳಲ್ಲಿ ಕೇಶವರ ಕ್ಯಾನ್ವಾಸ್ ಚಿತ್ರ ರಚಿಸಿದ್ದು ವಿಶೇಷವಾಗಿತ್ತು. AI touchಈಗಿನ ಆಪ್ತ ತಾಂತ್ರಿಕತೆಯಾಗಿರುವ ಕೃತಕ ಬುದ್ಧಿಮತ್ತೆ (Artificial Intelligence) ವಿಶೇಷ ರೀತಿಯಲ್ಲಿ ಪ್ರಕಟಗೊಂಡದ್ದು ವಿಶೇಷವಾಗಿತ್ತು. ಕೇಶವರ ಜೀವಮಾನದ ಸಾಧನೆಯ ಕುರಿತಾಗಿ ರಚನೆಯಾಗಿದ್ದ ಹಾಡಿಗೆ AI ಮೂಲಕ ರಾಗ, ಗಾಯನ ಮತ್ತು ಸಂಗೀತ

ಯೋಗ್ಯತೆಗಿಂತ ಯೋಗ ಮುಖ್ಯ. ಜನ್ಮ ದಿನದ ಸ್ವರ್ಣ ಸಂಭ್ರಮದಲ್ಲಿ SRK ಕೇಶವ ಅಮೈ Read More »

ನ.9: ಮಾಹಿ ಕಿರುಚಿತ್ರ ಬಿಡುಗಡೆ

ಕಾವು: ಕೀರ್ತನ್ ಶೆಟ್ಟಿ ಸುಳ್ಯ ನಿರ್ದೇಶನದ, ಅಜಿತ್ ಬಿ.ಟಿ. ನಿರ್ಮಾಣದ ಕಿರು ಚಿತ್ರ ಮಾಹಿ ಇದೇ ತಿಂಗಳ 9 ರಂದು ಪುತ್ತೂರಿನ ಭಾರತ್ ಸಿನಿಮಾಸ್ ನಲ್ಲಿ ಪ್ರಥಮ ಪ್ರೀಮಿಯರ್ ಶೋ ರಿಲೀಸ್ ಆಗಲಿದೆ ಎಂದು ಚಿತ್ರದ ನಿರ್ದೇಶಕ ಕೀರ್ತನ್ ಶೆಟ್ಟಿಯವರು ಮಾಹಿತಿ ನೀಡಿದ್ದಾರೆ. ಹಲವು ಗಣ್ಯರ ಸಮ್ಮುಖದಲ್ಲಿ ತೆರೆ ಕಾಣಲಿರುವ, ಮಕ್ಕಳು ನಟಿಸಿರುವ ಮಾಹಿ ಚಿತ್ರದ 4 ಶೋ ಭಾನುವಾರ ಪ್ರದರ್ಶನಗೊಳ್ಳಲಿದೆ. ಚಿತ್ರದ ಎಲ್ಲ ಟಿಕೆಟ್‌ಗಳು ಮುಗಿದಿದ್ದು ಈಗಲೇ ಹೌಸ್ ಫುಲ್ ಆಗಿರುವುದಾಗಿ ಅವರು ಹೇಳಿದ್ದಾರೆ.

ನ.9: ಮಾಹಿ ಕಿರುಚಿತ್ರ ಬಿಡುಗಡೆ Read More »

ನ.8ರಿಂದ ಜಿ. ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ಕರಿಮಣಿ ಮೇಳ

ಪುತ್ತೂರು: ನಗರದ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಜಿ. ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ನ.8 ರಿಂದ ಕರಿಮಣಿ ಮೇಳ‌ ‌ನಡೆಯಲಿದೆ ಎಂದು ಸಂಸ್ಥೆ ತಿಳಿಸಿದೆ. ಈ ಮೇಳದಲ್ಲಿ ಹಳೆಯ ಕರಿಮಣಿಯನ್ನು ಹೊಸತರ ಜೊತೆಗೆ ಬದಲಾವಣೆ ಮಾಡುವ ಅವಕಾಶ ಇದ್ದು, ಹಳೆಯ ಚಿನ್ನದ ಪ್ರತಿ ಗ್ರಾಂ ಗೆ ಹೆಚ್ಚುವರಿಯಾಗಿ ರೂ. 100 ದೊರೆಯಲಿದೆ. ಸಂಸ್ಥೆಯಲ್ಲಿ ಕರಿಮಣಿ ಸರಗಳ ವಿನೂತನ ಕಲೆಕ್ಷನ್ ಇದ್ದು, ಅಚ್ಚರಿಯ ಕೊಡುಗೆ ಮತ್ತು ಉಡುಗೊರೆಗಳನ್ನು ಸಹ ನೀಡಲಾಗುತ್ತದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ನ.8ರಿಂದ ಜಿ. ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ಕರಿಮಣಿ ಮೇಳ Read More »

ರಾಜ್ಯೋತ್ಸವದಂದು ಒಂದು ಹೃದಯೋತ್ಸವ

ಪುತ್ತೂರು: ಇಡೀ ಕರ್ನಾಟಕದಂತೆ ಪುತ್ತೂರು ಸಹ ರಾಜ್ಯೋತ್ಸವದ ಗುಂಗಿನಲ್ಲಿತ್ತು, ನವೆಂಬರ್ 1ನೇ ಶನಿವಾರದಂದು. ಆದರೆ ನತದೃಷ್ಟ ಕುಟುಂಬವೊಂದು ವಾಹನಾಪಘಾತದಲ್ಲಿ ಸಿಲುಕಿ ನೆರವಿಗಾಗಿ ರೋದಿಸುತ್ತಿತ್ತು. ಹೌದು, ಪರ್ಪುಂಜದ Abroad Auditorium ಬಳಿ ವೇಗವಾಗಿ ಬರುತ್ತಿದ್ದ ಕಾರೊಂದು ಆಟೋರಿಕ್ಷಾವೊಂದಕ್ಕೆ ಢಿಕ್ಕಿ ಹೊಡೆದ ಪರಿಣಾಮವಾಗಿ ಹೃದಯವಿದ್ರಾವಕ ದೃಶ್ಯ ನಡುರಸ್ತೆಯಲ್ಲಿ ಮೂಡಿತ್ತು.ಆಟೋರಿಕ್ಷಾ ಚಲಾಯಿಸುತ್ತಿದ್ದ ಬನ್ನೂರಿನ ಹನೀಫ್ ತನ್ನ ಕುಟುಂಬ ಸದಸ್ಯರನ್ನು ಕರೆದೊಯ್ಯುತ್ತಿದ್ದರು. ಕಾರು ಮತ್ತು ಆಟೋಗಳ ಮುಖಾಮುಖಿ ಡಿಕ್ಕಿಯ ರಭಸಕ್ಕೆ ಆಟೋ ಸಂಪೂರ್ಣ ನಜ್ಜುಗುಜ್ಜಾಗಿದೆ. ಅನ್ನು ಓವರ್‌ಟೇಕ್ ಮಾಡುವ ವೇಳೆ ನಿಯಂತ್ರಣ ತಪ್ಪಿ

ರಾಜ್ಯೋತ್ಸವದಂದು ಒಂದು ಹೃದಯೋತ್ಸವ Read More »

ಎವಿಜಿ ಸ್ಕೂಲ್’ನಲ್ಲಿ ಗಾಂಧೀಜಿ ಮತ್ತು ಶಾಸ್ತ್ರೀಜಿ ಜನ್ಮ ದಿನಾಚರಣೆ

ಪುತ್ತೂರು: ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನಲ್ಲಿ ರಾಷ್ಟ್ರಪಿತ ಗಾಂಧೀಜಿಯವರ 156ನೇ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ 121ನೇ ಜನ್ಮದಿನಾಚರಣೆಗಳ ಪ್ರಯುಕ್ತ ಸರಳ ಮತ್ತು ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶಾಲಾಡಳಿತ ಮಂಡಳಿಯ ನಿರ್ದೇಶಕ ಸೀತಾರಾಮ ಕೇವಳ ದೀಪ ಪ್ರಜ್ವಲಿಸಿ, ಗಾಂಧಿ ಮತ್ತು ಶಾಸ್ತ್ರಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯ್ಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿ ರಾಷ್ಟ್ರಪಿತ ಗಾಂಧೀಜಿ ಮತ್ತು ಪೂರ್ವ ಪ್ರಧಾನಿ ಶಾಸ್ತ್ರೀಜಿಯವರ ಬದುಕಿನ ಆದರ್ಶಗಳನ್ನು ಅನುಸರಿಸುವ ಮೂಲಕ ರಾಷ್ಟ್ರಪ್ರೇಮವನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿ ಈ ನಮ್ಮ ಎವಿಜಿ

ಎವಿಜಿ ಸ್ಕೂಲ್’ನಲ್ಲಿ ಗಾಂಧೀಜಿ ಮತ್ತು ಶಾಸ್ತ್ರೀಜಿ ಜನ್ಮ ದಿನಾಚರಣೆ Read More »

ಎ.ವಿ.ಜಿ. ಸೌಹಾರ್ದ ಸೊಸೈಟಿ ಲೋಕಾರ್ಪಣೆ

ಪುತ್ತೂರು: ಎವಿಜಿ ಸಮೂಹ ಸಂಸ್ಥೆಗಳಿಂದ ಪ್ರವರ್ತಿತ ಎ.ವಿ.ಜಿ. ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಇದರ ಲೋಕಾರ್ಪಣೆ ಕಾರ್ಯಕ್ರಮ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ‘ನಟರಾಜ’ ವೇದಿಕೆಯಲ್ಲಿ ಅತ್ಯಂತ ವ್ಯವಸ್ಥಿತವಾಗಿ ಜರುಗಿತು. ಪೂರ್ವಾಹ್ನ ಗಂಟೆ 9.30ಕ್ಕೆ ಖಾಸಗಿ ಬಸ್ ನಿಲ್ದಾಣದ ಎದುರಿನ ಕಚೇರಿಯಲ್ಲಿ ಉದ್ಘಾಟನ ಕಾರ್ಯಗಳು ನಡೆದಾಗ ಬೆಂಗಳೂರಿನ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಸಿ.ಜೆ. ಗಂಗಾಧರ ಅವರು ಕಚೇರಿಯ ಉದ್ಘಾಟನೆ, ಮಂಗಳೂರಿನ ದ.ಕ. ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿ ನಿಯಮಿತ ಇದರ ಅಧ್ಯಕ್ಷರಾದ ಭಾಸ್ಕರ ದೇವಸ್ಯ

ಎ.ವಿ.ಜಿ. ಸೌಹಾರ್ದ ಸೊಸೈಟಿ ಲೋಕಾರ್ಪಣೆ Read More »

ಪುತ್ತೂರುದ ಪಿಲಿಗೊಬ್ಬು ಸೀಸನ್ 3ರ ಫುಡ್ ಫೆಸ್ಟ್’ಗೆ ಚಾಲನೆ

ಪುತ್ತೂರು: ಪುತ್ತೂರುದ ಪಿಲಿಗೊಬ್ಬು ಸೀಸನ್ 3ರ ಫುಡ್ ಫೆಸ್ಟ್’ಗೆ ಶನಿವಾರ ಸಂಜೆ ಚಾಲನೆ ನೀಡಲಾಯಿತು.ಮುಳಿಯ ಜ್ಯುವೆಲ್ಸ್ ಸಿಎಂಡಿ ಕೇಶವ ಪ್ರಸಾದ್ ಮುಳಿಯ ಅವರು ಚಾಲನೆ ನೀಡಿ, ಶುಭಹಾರೈಸಿದರುಮುಖ್ಯ ಅತಿಥಿಯಾಗಿದ್ದ ಭಟ್ & ಭಟ್ ಪ್ರೊಡಕ್ಟ್ಸ್’ನ ಸುದರ್ಶನ್ ಭಟ್ ಬೆದ್ರಾಡಿ ಅವರು ಶುಭಹಾರೈಸಿದರು. ವಿಜಯ ಸಾಮ್ರಾಟ್ ಸಂಸ್ಥಾಪಕಾಧ್ಯಕ್ಷ, ಪಿಲಿಗೊಬ್ಬು ಸಮಿತಿ ಗೌರವಾಧ್ಯಕ್ಷ ಸಹಜ್ ಜೆ. ರೈ ಬಳಜ್ಜ, ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಸಂಚಾಲಕ ನಾಗರಾಜ್ ನಡುವಡ್ಕ, ಕಾರ್ಯಾಧ್ಯಕ್ಷ ಸುಜಿತ್ ರೈ ಪಾಲ್ತಾಡ್, ಪ್ರಧಾನ ಕಾರ್ಯದರ್ಶಿ ಶರತ್ ಆಳ್ವ

ಪುತ್ತೂರುದ ಪಿಲಿಗೊಬ್ಬು ಸೀಸನ್ 3ರ ಫುಡ್ ಫೆಸ್ಟ್’ಗೆ ಚಾಲನೆ Read More »

ಪುತ್ತೂರು ಶಾಸಕರಿಗೆ ಮನವಿ ನೀಡಲು ಹೋದದ್ದು ಹೊರತು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಲ್ಲ’-ಪುತ್ತೂರು ತಾಲೂಕು ಒಳಮೊಗ್ರು ಬಿಜೆಪಿ ಕಾರ್ಯಕರ್ತರಿಂದ ಸ್ಪಷ್ಟನೆ.

ಪುತ್ತೂರು: ರಸ್ತೆ ಅಭಿವೃದ್ಧಿಯ ಕುರಿತು ಮನವಿ ನೀಡಲು ಹೋದ ವೇಳೆ ಕಾಂಗ್ರೆಸ್ ಪಕ್ಷದ ಶಲ್ಯವನ್ನು ಹಾಕಿ ಫೋಟೋ ತೆಗೆದು ಪತ್ರಿಕೆಗೆ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ ಎಂದು ಬಿಂಬಿಸಿದ್ದಾರೆ ಹೊರತು ನಾವು ಕಾಂಗ್ರೆಸ್‌ ಪಕ್ಷಕ್ಕೆ ಸೇರಿಲ್ಲ ಎಂದು ಒಳಮೊಗ್ರು ಗ್ರಾಮದ ಮುಡಾಲಮೂಲೆಯ ಬಿಜೆಪಿ ಕಾರ್ಯಕರ್ತರು ಸೆ.20ರಂದು ಸಂಜೆ ಬಿಜೆಪಿ ಕಚೇರಿಗೆ ಆಗಮಿಸಿ ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರುರವರಲ್ಲಿ ವಿಷಯ ತಿಳಿಸಿ ನಾವು ಎಂದೆಂದೂ ಬಿಜೆಪಿಗರೇ ಎಂದು ಸ್ಪಷ್ಟಪಡಿಸಿದ್ದಾರೆ. ಒಳಮೊಗ್ರು ಗ್ರಾಮದ ಮುಡಾಲಮೂಲೆ ಬಿಜೆಪಿ ಕಾರ್ಯಕರ್ತರಾದ ಬಾಳಪ್ಪ

ಪುತ್ತೂರು ಶಾಸಕರಿಗೆ ಮನವಿ ನೀಡಲು ಹೋದದ್ದು ಹೊರತು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಲ್ಲ’-ಪುತ್ತೂರು ತಾಲೂಕು ಒಳಮೊಗ್ರು ಬಿಜೆಪಿ ಕಾರ್ಯಕರ್ತರಿಂದ ಸ್ಪಷ್ಟನೆ. Read More »

error: Content is protected !!
Scroll to Top