ಸುದ್ದಿ

ಐಪಿಎಲ್‌ ಪಂದ್ಯಗಳು ರದ್ದು

ಯುದ್ಧದ ಹಿನ್ನೆಲೆಯಲ್ಲಿ ಬಿಸಿಸಿಐ ನಿರ್ಧಾರ ನವದೆಹಲಿ: ಭಾರತ ಮತ್ತು ಪಾಕಿಸ್ಥಾನ ನಡುವೆ ಸಮರ ನಡೆಯುತ್ತಿರುವ ಹಿನ್ನೆಲೆಯಲ್ಲಿ ಐಪಿಎಲ್‌ ಕೂಟದ ಇನ್ನುಳಿದ ಪಂದ್ಯಗಳನ್ನು ರದ್ದು ಮಾಡಲಾಗಿದೆ. ಯುದ್ಧದ ಭೀತಿ ಹೆಚ್ಚಾಗಿದೆ, ಹೀಗಾಗಿ ಪ್ಲೇ ಆಫ್ಸ್‌ ಸೇರಿ ಇನ್ನೂ 16 ಪಂದ್ಯಗಳು ಬಾಕಿ ಇರುವಾಗಲೇ 2025ರ ಐಪಿಎಲ್‌ ಟೂರ್ನಿಯನ್ನು ರದ್ದುಗೊಳಿಸಲಾಗಿದೆ ಎಂದು ಬಿಸಿಸಿಐ ಮೂಲಗಳು ಘೋಷಿಸಿವೆ. ಈ ಹಿಂದೆ 2021ರ ಕೋವಿಡ್‌ ಸಂದರ್ಭದಲ್ಲಿಯೂ ಐಪಿಎಲ್‌ ಟೂರ್ನಿಯನ್ನು ರದ್ದುಗೊಳಿಸಲಾಗಿತ್ತು. ಇಂದು ನಡೆದ ಬಿಸಿಸಿಐಯ ಮಹತ್ವದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ನತದೃಷ್ಟ […]

ಐಪಿಎಲ್‌ ಪಂದ್ಯಗಳು ರದ್ದು Read More »

ದೇಶದ ವಿರೋಧವಾಗಿ ಪೋಸ್ಟ್ ಹಂಚಿಕೊಂಡ ಮಂಗಳೂರಿನ ವಿದ್ಯಾರ್ಥಿ | ವಿದ್ಯಾರ್ಥಿನಿಯ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯ

ಮಂಗಳೂರು : ಪಹಲ್ಗಾಮ್ ದಾಳಿಯ ನಂತರ  ಭಾರತ ಪ್ರತಿಕಾರವಾಗಿ ಆಪರೇಷನ್‍ ಸಿಂಧೂರ್‍ ಮೂಲಕ ಪಾಕಿಸ್ಥಾನವನ್ನು ದಾಳಿ ಮಾಡಿ ಭಾರತ ಹಾಗೂ ಪಾಕ್‍ ನಡುವೆ ಉದ್ವಿಗ್ನತೆಯ  ಪರಿಸ್ಥಿತಿ ಉಂಟಾಗಿದೆ. ಪಹಲ್ಗಾಮ್‍ ದಾಳಿಯಲ್ಲಿ ಅಮಾಯಕರ ಬಲಿಯನ್ನು ತೆಗೆದುಕೊಂಡ ಮಾಕಿಸ್ತಾನವನ್ನು  ಸಹಿಸದ ಬಾರತ ಪ್ರತಿಕಾರವಾಗಿ ‘ಆಪರೇಷನ್ ಸಿಂಧೂರ್’ ಮೂಲಕ ಪ್ರತಿಕಾರ ಯುದ್ಧಗಳು ನಡೆಯುತ್ತಿತ್ತಲೇ ಇವೆ. ಈ ಹಿನ್ನಲೇ ಇಡೀ ದೇಶವೇ ನಮ್ಮ ಸೈನ್ಯಕ್ಕೆ ಬೆನ್ನೆಲುಬಾಗಿ ನಿಂತು ಪ್ರಾರ್ಥಿಸುತ್ತಿರುವ ವೇಳೆ ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ದೇಶವಿರೋಧಿ ಪೋಸ್ಟ್ ಒಂದನ್ನು ತನ್ನ ಇನ್ಸಾಗ್ರಾಂಮ್‍

ದೇಶದ ವಿರೋಧವಾಗಿ ಪೋಸ್ಟ್ ಹಂಚಿಕೊಂಡ ಮಂಗಳೂರಿನ ವಿದ್ಯಾರ್ಥಿ | ವಿದ್ಯಾರ್ಥಿನಿಯ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯ Read More »

ಪಾಕಿಸ್ಥಾನದ 50ಕ್ಕೂ ಹೆಚ್ಚು ಡ್ರೋನ್‌ಗಳ ನಾಶ

ಬಂಕರ್‌ನಲ್ಲಿ ಅಡಗಿ ಕುಳಿತ ಪಾಕ್‌ ಪ್ರಧಾನಿ ನವದೆಹಲಿ: ಭಾರತ ಆಪರೇಷನ್‌ ಸಿಂದೂರ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿರುವುದರಿಂದ ಪಾಕಿಸ್ಥಾನದ ಜನತೆ ತತ್ತರಿಸಿದೆ. ಇಷ್ಟಾಗಿಯೂ ಕಿತಾಪತಿ ಬಿಡದ ಪಾಕಿಸ್ಥಾನ ಮತ್ತೆ ಭಾರತದ ಜಮ್ಮುವಿನ ಮೇಲೆ ದಾಳಿಗೆ ವಿಫಲಯತ್ನ ನಡೆಸಿದೆ. ಜಮ್ಮುವಿನ ಮೇಲೆ ಪಾಕ್‌ 100 ಕ್ಷಿಪಣಿ ದಾಳಿ ನಡೆಸಿದ ಬೆನ್ನಲ್ಲೇ ಕೌಂಟರ್‌ ಅಟ್ಯಾಕ್‌ ಮಾಡಿರುವ ಭಾರತ ಲಾಹೋರ್‌ ಮೇಲೆ ಮಿಸೈಲ್‌ಗಳ ಸುರಿಮಳೆಗರೆದಿದೆ. ಜಮ್ಮುವಿನಲ್ಲಿ ಇದುವರೆಗೆ ಪಾಕಿಸ್ಥಾನದ 50ಕ್ಕೂ ಹೆಚ್ಚು ಡ್ರೋನ್‌ ದಾಳಿಯನ್ನು ಭಾರತೀಯ ವಿಫಲಗೊಳಿಸಿದೆ. ಭಾರತೀಯ ಗಡಿ ನಿಯಂತ್ರಣ ರೇಖೆ

ಪಾಕಿಸ್ಥಾನದ 50ಕ್ಕೂ ಹೆಚ್ಚು ಡ್ರೋನ್‌ಗಳ ನಾಶ Read More »

ಆಹಾರ ಧಾನ್ಯ ಖರೀದಿಸಲು ಮುಗಿಬೀಳುವ ಅಗತ್ಯವಿಲ್ಲ : ಕೇಂದ್ರ ಸೂಚನೆ

ಅಗತ್ಯ ವಸ್ತುಗಳ ಕೊರತೆ ಕಿಡಿಗೇಡಿಗಳು ಹಬ್ಬಿಸಿದ ವದಂತಿ ಎಂದು ಪ್ರಹ್ಲಾದ ಜೋಶಿ ಸ್ಪಷ್ಟನೆ ನವದೆಹಲಿ : ಯುದ್ಧ ಶುರುವಾಗಿದ್ದರೂ ದೇಶದಲ್ಲಿ ಆಹಾರ ಧಾನ್ಯ ಕೊರತೆಯಾಗುವುದಿಲ್ಲ. ಅಗತ್ಯವಿರುವುದಕ್ಕಿಂತಲೂ ಹೆಚ್ಚಿನ ಆಹಾರ ಧಾನ್ಯ ಸಂಗ್ರಹವಿದ್ದು, ಜನರು ಧಾವಂತದಲ್ಲಿ ಖರೀದಿ ಮಾಡುವ ಅಗತ್ಯವಿಲ್ಲ ಎಂದು ಕೇಂದ್ರ ಸರಕಾರ ಹೇಳಿದೆ. ಯುದ್ಧದಿಂದಾಗಿ ದೇಶದಲ್ಲಿ ಆಹಾರ ಧಾನ್ಯಗಳ ಕೊರತೆ ಉಂಟಾಗಿದೆ ಎಂಬ ವದಂತಿ ಹಬ್ಬಿಸುತ್ತಿದ್ದಾರೆ. ಇಂಥ ಪರಿಸ್ಥಿತಿ ಉದ್ಭವಿಸಿಲ್ಲ. ದೇಶದಲ್ಲಿ ಧಾರಾಳ ಆಹಾರ ಮತ್ತು ಅಗತ್ಯ ವಸ್ತುಗಳ ಸಂಗ್ರಹ ಇದೆ. ಕೊರತೆ ಉಂಟಾಗಿದೆ ಎಂಬುದು

ಆಹಾರ ಧಾನ್ಯ ಖರೀದಿಸಲು ಮುಗಿಬೀಳುವ ಅಗತ್ಯವಿಲ್ಲ : ಕೇಂದ್ರ ಸೂಚನೆ Read More »

ತೀವ್ರಗೊಂಡ ಸಮರ : ಐಪಿಎಲ್‌ ಕೂಟ ಅತಂತ್ರ

ನಿನ್ನೆ ಧರ್ಮಶಾಲಾದ ಪಂದ್ಯಕ್ಕೆ ಅರ್ಧಕ್ಕೆ ಮೊಟಕು ವಿಮಾನ ಸಂಚಾರ ಇಲ್ಲದೆ ಆಟಗಾರರನ್ನು ಸಾಗಿಸುವುದಕ್ಕೆ ಪ್ರಯಾಸ ನವದೆಹಲಿ: ಯುದ್ಧದಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಅತಂತ್ರಗೊಂಡಿದೆ. ಗುರುವಾರ ರಾತ್ರಿ ಧರ್ಮಶಾಲಾ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ರಾತ್ರಿ 9.35ಕ್ಕೆ ನಿಲ್ಲಿಸಲಾಗಿತ್ತು. ಹಿಮಾಚಲ ಪ್ರದೇಶದ ಧರ್ಮಶಾಲಾ ಪಠಾಣ್‌ಕೋಟ್‌ನಿಂದ ಸುಮಾರು 90 ಕಿಲೋಮೀಟರ್ ದೂರದಲ್ಲಿದ್ದು, ಪಠಾಣ್‌ಕೋಟ್‌ನಲ್ಲಿ ಗಡಿಯಾಚೆಯಿಂದ ವಾಯುದಾಳಿಗಳು ನಡೆದ ಹಿನ್ನೆಲೆಯಲ್ಲಿ 10.1 ಓವರ್‌ ಆಗಿದ್ದಾಗೆ ಡಿಧೀರ್‌ ಪಂದ್ಯ ರದ್ದುಮಾಡಿ ಜನರನ್ನು ಹೊರಕಳುಹಿಸಲಾಯಿತು. ಇದೀಗ ಉಳಿದ

ತೀವ್ರಗೊಂಡ ಸಮರ : ಐಪಿಎಲ್‌ ಕೂಟ ಅತಂತ್ರ Read More »

ದೇಶದ 24 ವಿಮಾನ ನಿಲ್ದಾಣಗಳು ಬಂದ್‌

ಕಟ್ಟೆಚ್ಚರದಿಂದಿರಲು ಎಲ್ಲ ವಿಮಾನ ನಿಲ್ದಾಣಗಳಿಗೆ ಸೂಚನೆ ನವದೆಹಲಿ: ಆಪರೇಷನ್‌ ಸಿಂದೂರ ಕಾರ್ಯಾಚರಣೆ ಬಳಿಕ ಭಾರತ ಮತ್ತು ಪಾಕಿಸ್ಥಾನದ ನಡುವೆ ಪೂರ್ಣ ಪ್ರಮಾಣದ ಯುದ್ಧ ಶುರುವಾಗಿರುವ ಹಿನ್ನೆಲೆಯಲ್ಲಿ ಭಾರತ ತನ್ನ 24 ವಿಮಾನ ನಿಲ್ದಾಣಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಮುಚ್ಚಿದೆ. ಪಾಕಿಸ್ತಾನ ವಿಮಾನ ನಿಲ್ದಾಣಗಳನ್ನು ಗುರಿ ಮಾಡಿಕೊಂಡು ಭಾರತದ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿದ್ದು, ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆ ಭಾರತದ 24 ವಿಮಾನ ನಿಲ್ದಾಣಗಳನ್ನು ಬಂದ್‌ ಮಾಡಲಾಗಿದೆ. ಉಳಿದ ವಿಮಾನ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿಸಲು ರಾಜ್ಯಗಳಿಗೆ ಕೇಂದ್ರ ಸೂಚನೆ ರವಾನಿಸಿದೆ.

ದೇಶದ 24 ವಿಮಾನ ನಿಲ್ದಾಣಗಳು ಬಂದ್‌ Read More »

ಜನಾರ್ದನ ರೆಡ್ಡಿ ಶಾಸಕ ಸ್ಥಾನ ರದ್ದು

ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಜನಾರ್ದನ ರೆಡ್ಡಿ ಬೆಂಗಳೂರು : ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಗಂಗಾವತಿ ಶಾಸಕ ಜನಾರ್ದನ ರೆಡ್ಡಿಯವರ ಶಾಸಕ ಸ್ಥಾನ ರದ್ದಾಗಿದೆ. ಸಿಬಿಐ ಕೋರ್ಟ್ 7 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದ ಬೆನ್ನಿಗೆ ಜನಾರ್ದನ ರೆಡ್ಡಿಯವರನ್ನು ಜೈಲಿಗೆ ಕಳುಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಜನಾರ್ದನ ರೆಡ್ಡಿ ಶಾಸಕ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಜನಾರ್ದನ ರೆಡ್ಡಿ ಆಂಧ್ರದ ಚಂಚಲಗುಡ ಜೈಲಿನಲ್ಲಿದ್ದಾರೆ. ಗಣಿಗಾರಿಕೆ ಪ್ರಕರಣ ಸುದೀರ್ಘ ವಿಚಾರಣೆ ನಡೆಸಿದ್ದ ಹೈದರಾಬಾದ್ ಸಿಬಿಐ ಕೋರ್ಟ್ ಏಳು

ಜನಾರ್ದನ ರೆಡ್ಡಿ ಶಾಸಕ ಸ್ಥಾನ ರದ್ದು Read More »

ಘನಘೋರ ಸಮರ : ಕರಾಚಿ ಬಂದರು ಧ್ವಂಸ

1971ರ ಬಳಿಕ ಕರಾಚಿ ಬಂದರು ಆಕ್ರಮಣ ಮಾಡಿದ ಭಾರತ ಐಎನ್‌ಎಸ್‌ ವಿಕ್ರಾಂತ್‌ ಮೂಲಕ ನೌಕಾಪಡೆ ದಾಳಿ ನವದೆಹಲಿ: ಆಪರೇಷನ್‌ ಸಿಂದೂರದ ಬಳಿಕ ಭಾರತ ಮತ್ತು ಪಾಕಿಸ್ಥಾನದ ನಡುವೆ ಪೂರ್ಣ ಪ್ರಮಾಣದ ಯುದ್ಧ ಆರಂಭವಾಗಿದ್ದು, ಭಾರತ ವಾಯುಪಡೆ ಪಾಕಿಸ್ಥಾನದ ಹಲವು ನಗರಗಳಿಗೆ ನುಗ್ಗಿ ಹೊಡೆಯುತ್ತಿದೆ. ಇಸ್ಲಾಂಮಬಾದ್, ಲಾಹೋರ್, ರಾವಲ್ಪಿಂಡಿ ಸೇರಿದಂತೆ ಹಲವು ಪಾಕ್​ ನಗರಗಳ ಮೇಲೆ ದಾಳಿ ನಡೆಸಿದೆ. ಭಾರತೀಯ ನೌಕಾಪಡೆ ಐಎನ್‌ಎಸ್‌ ವಿಕ್ರಾಂತ್ ಮೂಲಕ ಆಕ್ರಮಣ ಶುರು ಮಾಡಿದೆ. ಪಾಕಿಸ್ಥಾನದ ಕರಾಚಿ ಬಂದರಿನ ಮೇಲೆ ಭಾರತ 1971ರ

ಘನಘೋರ ಸಮರ : ಕರಾಚಿ ಬಂದರು ಧ್ವಂಸ Read More »

ಕಲಾವಿದ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ ಗೆ ಸನ್ಮಾನ

ನಾಳ :  ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಮೇಳದಿಂದ  ಜರಗಿದ ಸಾಕೇತ ಸಾಮ್ರಾಜ್ನಿ ಯಕ್ಷಗಾನ ಪ್ರದರ್ಶನದಲ್ಲಿ ಬಣ್ಣದ ವೇಷಧಾರಿ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ ಇವರನ್ನು ಯಕ್ಷ ಕಲಾಭಿಮಾನಿಗಳು ನಾಳ- ಗೇರುಕಟ್ಟೆ ವತಿಯಿಂದ ಗೌರವಿಸಲಾಯಿತು . 60ರ ಹರೆಯದ  ಕಲಾವಿದ ಶೆಟ್ಟಿಗಾರ್  ಅನಾರೋಗ್ಯದಿಂದಿದ್ದು ಅವರಿಗೆ ಧೈರ್ಯ ತುಂಬುವುದಕ್ಕಾಗಿ ಯಕ್ಷ ಕಲಾಭಿಮಾನಿಗಳ ನೆರವನ್ನು ಈ ಮೂಲಕ ನೀಡಲಾಯಿತು. ಗೌರವ ಸ್ವೀಕರಿಸಿದ ಶೆಟ್ಟಿಗಾರ್ ಕೃತಜ್ಞತೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮೇಳದ ಭಾಗವತರಾದ ರವಿಚಂದ್ರ

ಕಲಾವಿದ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ ಗೆ ಸನ್ಮಾನ Read More »

ಸುಹಾಸ್ ಶೆಟ್ಟಿ ಮನೆಗೆ ಭೇಟಿ ನೀಡಿದ ನೂತನ ಪ್ರವೀಣ್ ನೆಟ್ಟಾರು | ಸುಹಾಸ್ ಹೆತ್ತವರಿಗೆ ಸಾಂತ್ವನದ ಮಾತು

ಮಂಗಳೂರು : ದುಷ್ಕರ್ಮಿಗಳಿಂದ ಹತ್ಯೆಯಾದ ಸುಹಾಸ್‍ ಶೆಟ್ಟಿ ಮನೆಗೆ ಅನೇಕ ಹಿಂದೂ ಮುಖಂಡರು ಭೇಟಿ ನೀಡಿ ಸಾಂತ್ವನವನ್ನು ಹೇಳಿದ್ದಾರೆ. ಇದೀಗ ಹತ್ಯೆಗೀಡಾದ ಸುಹಾನ್ ಶೆಟ್ಟಿ ಅವರ ಬಂಟ್ವಾಳ ತಾಲೂಕಿನ ಕಾರಿಂಜಬೈಲು ಪುಳಿಮಜಲಿನ ಮನೆಗೆ  ಮೂರು ವರ್ಷಗಳ ಹಿಂದೆ ಹತ್ಯೆಯಾದ ಪ್ರವೀಣ್‍ ನೆಟ್ಟಾರು ಅವರ ಪತ್ನಿ ನೂತನ ಮಂಗಳವಾರ ಭೇಟಿ ನೀಡಿ ಸುಹಾಸ್ ಹೆತ್ತವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.

ಸುಹಾಸ್ ಶೆಟ್ಟಿ ಮನೆಗೆ ಭೇಟಿ ನೀಡಿದ ನೂತನ ಪ್ರವೀಣ್ ನೆಟ್ಟಾರು | ಸುಹಾಸ್ ಹೆತ್ತವರಿಗೆ ಸಾಂತ್ವನದ ಮಾತು Read More »

error: Content is protected !!
Scroll to Top