ಯುವಕ ಆತ್ಮ ಹತ್ಯೆಗೆ ಶರಣು
ಬೆಳ್ತಂಗಡಿ : ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮ ಹತ್ಯೆಗೆ ಶರಣಾಗಿರುವ ಘಟನೆ ಪುಂಜಾಲಕಟ್ಟೆಯಲ್ಲಿ ನಡೆದಿದೆ. ಪುಂಜಾಲಕಟ್ಟೆ ರಾಯಿ ಗ್ರಾಮದ ಮಾಬೆಟ್ಟ ನಿವಾಸಿ ಸುದರ್ಶನ್ ಶೆಟ್ಟಿ (26) ಆತ್ಮ ಹತ್ಯೆ ಮಾಡಿಕೊಂಡವರು. ಪಿತ್ತಜನಕಾಂಗದಿಂದ ಬಳಲುತ್ತಿದ್ದ ಸುದರ್ಶನ್ ಶೆಟ್ಟಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಪಿತ್ತಜನಕಾಂಗ ಖಾಯಿಲೆ ಕಡಿಮೆಯಾಗದೆ ಇದ್ದರಿಂದ ಮನನೊಂದು ಸುದರ್ಶನ್ ಶೆಟ್ಟಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಯುವಕ ಆತ್ಮ ಹತ್ಯೆಗೆ ಶರಣು Read More »