ಮದುವೆ ಕಾರು ಸಹಿತ ಸರಣಿ ಅಪಘಾತ : ವ್ಯಕ್ತಿಯೋರ್ವನಿಗೆ ಗಾಯ
ಪುತ್ತೂರು: ಶ್ವಾನ ಅಡ್ಡಲಾಗಿ ಬಂದಿದರಿಂದ ಸರಣಿ ಅಪಘಾತ ಕಲ್ಲರ್ಪೆಯ ಕಾರ್ಪಾಡಿ ಬಳಿ ಭಾನುವಾರ ನಡೆದಿದೆ. ಕಟೀಲಿನಲ್ಲಿ ಮದುವೆ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಕಾರು ಇದಾಗಿತ್ತು. ಇದರೊಂದಿಗೆ ಇನ್ನೆರಡು ಕಾರು ಹಾಗೂ ಬೈಕ್ ಅಪಘಾತಕ್ಕೀಡಾಗಿದೆ. ಬೈಕ್ ಸವಾರರು ಸ್ವಲ್ಪ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ವಾನವೊಂದು ಅಡ್ಡ ಬಂದ ಪರಿಣಾಮ ಬ್ರೇಕ್ ಹಾಕಿದ್ದೇ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ.
ಮದುವೆ ಕಾರು ಸಹಿತ ಸರಣಿ ಅಪಘಾತ : ವ್ಯಕ್ತಿಯೋರ್ವನಿಗೆ ಗಾಯ Read More »