ಅಪಘಾತ

ಮದುವೆ ಕಾರು ಸಹಿತ ಸರಣಿ ಅಪಘಾತ : ವ್ಯಕ್ತಿಯೋರ್ವನಿಗೆ ಗಾಯ

ಪುತ್ತೂರು: ಶ್ವಾನ ಅಡ್ಡಲಾಗಿ ಬಂದಿದರಿಂದ ಸರಣಿ ಅಪಘಾತ ಕಲ್ಲರ್ಪೆಯ ಕಾರ್ಪಾಡಿ ಬಳಿ ಭಾನುವಾರ ನಡೆದಿದೆ. ಕಟೀಲಿನಲ್ಲಿ ಮದುವೆ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಕಾರು ಇದಾಗಿತ್ತು. ಇದರೊಂದಿಗೆ ಇನ್ನೆರಡು ಕಾರು ಹಾಗೂ ಬೈಕ್ ಅಪಘಾತಕ್ಕೀಡಾಗಿದೆ. ಬೈಕ್ ಸವಾರರು ಸ್ವಲ್ಪ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ವಾನವೊಂದು ಅಡ್ಡ ಬಂದ ಪರಿಣಾಮ ಬ್ರೇಕ್ ಹಾಕಿದ್ದೇ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ.

ಮದುವೆ ಕಾರು ಸಹಿತ ಸರಣಿ ಅಪಘಾತ : ವ್ಯಕ್ತಿಯೋರ್ವನಿಗೆ ಗಾಯ Read More »

ಜೀಪು ಹಾಗೂ ಗೂಡ್ಸ್ ಟೆಂಪೋ ನಡುವೆ ಡಿಕ್ಕಿ | ಪ್ರಾಣಾಪಾಯದಿಂದ ಪಾರು

ಬೆಳ್ತಂಗಡಿ : ಪಟ್ರಮೆಯ ಪಟ್ಟೂರು ಸಮೀಪ ತಿರುವಿನಲ್ಲಿ ಜೀಪು ಹಾಗೂ ಗೂಡ್ಸ್ ಟೆಂಪೋ ನಡುವೆ ಡಿಕ್ಕಿಯಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ವಾಹನ ಚಾಲಕರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಜೀಪು ಹಾಗೂ ಗೂಡ್ಸ್ ಟೆಂಪೋ ನಡುವೆ ಡಿಕ್ಕಿ | ಪ್ರಾಣಾಪಾಯದಿಂದ ಪಾರು Read More »

ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ | ವ್ಯಕ್ತಿಯೋರ್ವನಿಗೆ ಗಂಭೀರ ಗಾಯ

ಪುತ್ತೂರು : ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿಯಾದ ಘಟನೆ ನಿನ್ನೆ ಬೊಳ್ವಾರಿನಲ್ಲಿ ನಡೆದಿದೆ. ಘಟನೆ ಪರಿಣಾಮ ಆಕ್ಟಿವಾ ಮತ್ತು ಡಿಯೋ ವಾಹನಕ್ಕೆ ಹಾನಿಯಾಗಿದ್ದು ಅಕ್ಟಿವಾ ಸವಾರನ ತಲೆಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ | ವ್ಯಕ್ತಿಯೋರ್ವನಿಗೆ ಗಂಭೀರ ಗಾಯ Read More »

ಮರ ಬಿದ್ದು ತಂತಿಗೆ  ಹಾನಿ | ಅದೃಷ್ಟವಶಾತ್ ವಾಹನ ಅಪಾಯದಿಂದ ಪಾರು

ಪುತ್ತೂರು: ಮರ ಬಿದ್ದು ವಿದ್ಯುತ್ ತಂತಿಗೆ ಗೆ ಹಾನಿಯಾದ ಘಟನೆ ಪುತ್ತೂರಿನ ಕಲ್ಲರ್ಪೆ ಬಳಿ ನಡೆದಿದೆ. ಮರ ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಸಂಚಾರಕ್ಕೆ ಅಡಚಣೆ ಉಂಟಾಗಿದೆ ಎನ್ನಲಾಗಿದೆ. ಅದೃಷ್ಟವಶಾತ್ ವಾಹನವೊಂದು ಕೂದಲೆಲೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದೆ ಎಂದು ತಿಳಿದು ಬಂದಿದೆ.

ಮರ ಬಿದ್ದು ತಂತಿಗೆ  ಹಾನಿ | ಅದೃಷ್ಟವಶಾತ್ ವಾಹನ ಅಪಾಯದಿಂದ ಪಾರು Read More »

ಕಾರು – ರಿಕ್ಷಾ ಡಿಕ್ಕಿ | ವೃದ್ಧೆಯೋರ್ವರಿಗೆ ಗಾಯ

ಪುತ್ತೂರು: ಕಾರು – ಆಟೋ ರಿಕ್ಷಾ ನಡುವೆ ಅಪಘಾತವಾದ ಘಟನೆ ಪುತ್ತೂರಿನ ದರ್ಬೆಯಲ್ಲಿ ನಡೆದಿದೆ. ಯು ಟರ್ನ್ ಮಾಡಲು ಮುಂದಾದ ಕಾರು ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ. ಆಟೋ ರಿಕ್ಷಾದಲ್ಲಿದ್ದ ವೃದ್ಧೆಗೆ ಗಾಯಗಳಾಗಿದ್ದು, ಅವರನ್ನು  ಆಸ್ಪತ್ರೆಗೆ ಸಾಗಿಸಲಾಗಿದೆ ಎನ್ನಲಾಗಿದೆ.

ಕಾರು – ರಿಕ್ಷಾ ಡಿಕ್ಕಿ | ವೃದ್ಧೆಯೋರ್ವರಿಗೆ ಗಾಯ Read More »

ಲಾರಿ-ಕಾರು ಮುಖಾಮುಖಿ ಡಿಕ್ಕಿ : ಐವರು ಸ್ಥಳದಲ್ಲೇ ಸಾವು

ಬೆಂಗಳೂರು: ಲಾರಿ ಮತ್ತು ಕಾರು ಮುಖಾಮುಖಿ ದಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಕಿರೇಸೂರು ಕ್ರಾಸ್ ಬಳಿ ಈಂದು ಬೆಳಗ್ಗೆ ನಡೆದಿದೆ. ಮೃತರನ್ನು ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದವರು ಎಂದು ಗುರುತಿಸಲಾಗಿದೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಲಾರಿ-ಕಾರು ಮುಖಾಮುಖಿ ಡಿಕ್ಕಿ : ಐವರು ಸ್ಥಳದಲ್ಲೇ ಸಾವು Read More »

ಜೀಪೊಂದು ಬೈಕ್‍ ಹಾಗೂ ಸ್ಕೂಟರ್ ಗೆ ಡಿಕ್ಕಿ | ಓರ್ವ ವ್ಯಕ್ತಿಗೆ ಗಾಯ

ಪುತ್ತೂರು : ಜೀಪೊಂದು ಬೈಕ್‍ ಹಾಗೂ ಸ್ಕೂಟರ್‍ ಗೆ ಡಿಕ್ಕಿ ಹೊಡೆದ ಘಟನೆ ಪುತ್ತೂರು ಎಪಿಎಂಸಿ ರಸ್ತೆಯ ಆದರ್ಶ ಆಸ್ಪತ್ರೆಯ ಎದುರು ನಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ ಗಂಭೀರ ಗಾಯಗೊಂಡಿದ್ದಾರೆ.  ಜೀಪು ಡಿಕ್ಕಿ ಹೊಡೆದುದರಿಂದ ಸ್ಕೂಟರ್ ಹಾಗೂ ಬೈಕನ್ನು 15 ಮೀಟರ್ ನಷ್ಟು ದೂರ ಎಳೆದೊಯ್ದಿದೆ. ಬೈಕ್ ನಲ್ಲಿದ್ದ ಬಾಲಕನ ಕೈಗೆ ಗಂಭೀರ ಗಾಯವಾಗಿದ್ದು, ಬೈಕ್ ಸವಾರ ಬೈಕ್ ನಿಂದ ಹಾರಿದ ಕಾರಣ ಪ್ರಾಣಾಪಾಯದಿಂದ ಪಾರಗಿದ್ದಾರೆ. ಸ್ಕೂಟರ್ ನಲ್ಲಿದ್ದ ಮಹಿಳೆಗೂ ಗಾಯವಾಗಿದೆ.

ಜೀಪೊಂದು ಬೈಕ್‍ ಹಾಗೂ ಸ್ಕೂಟರ್ ಗೆ ಡಿಕ್ಕಿ | ಓರ್ವ ವ್ಯಕ್ತಿಗೆ ಗಾಯ Read More »

ಪುತ್ತೂರು: ವಿದ್ಯುತ್‍ ತಗುಲಿ ಮಹಿಳೆ ಮೃತ್ಯು

ಪುತ್ತೂರು: ವಿದ್ಯುತ್ ಶಾಕ್‌ ಹೊಡೆದು ಮಹಿಳೆಯೋರ್ವರು ಮೃತಪಟ್ಟ ಘಟನೆ ಪುತ್ತೂರಿನ ಅರಿಯಡ್ಕ ಗ್ರಾಮದ ಬೇಂಗತ್ತಡ್ಕದಲ್ಲಿ ನಡೆದಿದೆ. ಮೃತಪಟ್ಟ ಮಹಿಳೆಯನ್ನು ದೇವಪ್ಪ ನಾಯ್ಕ ಅವರ ಪತ್ನಿ ಭಾಗೀರಥಿ (59) ಎಂದು ಗುರುತಿಸಲಾಗಿದೆ. ಮಧ್ಯಾಹ್ನ ಮನೆಯ ಟೇರಸ್ ಮೇಲೆ ತೆರಳಿದ ಸಂದರ್ಭದಲ್ಲಿ ಪಂಪ್‌ಗೆ ಸೇರಿಸಲಾಗಿದ್ದ ವಯರ್ ಮೇಲೆ ಕಾಲಿಟ್ಟಾಗ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತರು ಪತಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.

ಪುತ್ತೂರು: ವಿದ್ಯುತ್‍ ತಗುಲಿ ಮಹಿಳೆ ಮೃತ್ಯು Read More »

ಸಂಟ್ಯಾರ್ ಜಂಕ್ಷನ್‍ ಬಳಿ ಸರಣಿ ಅಪಘಾತ | ಅದೃಷ್ಟವಶಾತ್‍ ಪ್ರಾಣಪಾಯದಿಂದ ಪಾರು

ಪುತ್ತೂರು: ಸಂಟ್ಯಾರ್ ಜಂಕ್ಷನ್ ನಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್, ಮಾರುತಿ ಕಾರು ಹಾಗೂ ಎರಡು ದ್ವಿಚಕ್ರ ವಾಹನಗಳ ನಡುವೆ ಸರಣಿ ಅಪಘಾತ ನಡೆದಿದೆ. ಪುತ್ತೂರಿನಿಂದ ಸುಳ್ಯ ಕಡೆಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಸಂಟ್ಯಾರ್ ಜಂಕ್ಷನ್ ನಲ್ಲಿ ರಸ್ತೆ ಬದಿ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸುತ್ತಿದ್ದ ವೇಳೆ ಪಾಣಾಜೆ ಕಡೆಯಿಂದ ಬಂದ ಮಾರುತಿ (ಕೆಎಂ3ಎಂ.ಬಿ6672) ಎದುರಿನಿಂದ ಬಂದ ಸುಝುಕಿ ಎಕ್ಸಸ್(ಕೆಎ21 ಇಬಿ4576) ಡಿಕ್ಕಿ ಹೊಡೆದು ಎದುರಿನಿಂದ ಬಂದ ಬಜಾಜ್ ಪಲ್ಸರ್(ಕೆಎ21ವಿ5950) ಬೈಕ್ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದಿಂದ

ಸಂಟ್ಯಾರ್ ಜಂಕ್ಷನ್‍ ಬಳಿ ಸರಣಿ ಅಪಘಾತ | ಅದೃಷ್ಟವಶಾತ್‍ ಪ್ರಾಣಪಾಯದಿಂದ ಪಾರು Read More »

ಹೊಳೆಗೆ ಬಿದ್ದು ಮಹಿಳೆ ಮೃತ್ಯು

ಸುಳ್ಯ : ಸುಳ್ಯದ ಸಂಪಾಜೆ ಗ್ರಾಮದ ಕೊಯನಾಡಿನಲ್ಲಿ ಹೊಳೆಗೆ ಬಿದ್ದು ಮಹಿಳೆ ಸಾವನ್ನಪ್ಪಿದ ಘಟನೆ ಏ.29 ರಂದು ಮಧ್ಯಾಹ್ನ ನಡೆದಿದೆ. ಮೃತ ಮಹಿಳೆಯನ್ನು ದಿ. ಅಣ್ಣು ದಾಸ್ ಅವರ ಧರ್ಮ ಪತ್ನಿ ಯಶೋದ ದಾಸ್ (60) ಎಂದು ಗುರುತಿಸಲಾಗಿದೆ. ಯಶೋದ ಅವರು ಕೆಲವು ವರ್ಷಗಳ ಹಿಂದೆ ಸ್ಪೋಕ್ ಮತ್ತು ಹೃದಯ ಖಾಯಿಲೆಯಿಂದ  ಬಳಲುತ್ತಿದ್ದು,  ಮಂಗಳೂರಿನ ಯೂನಿಟಿ ಆಸ್ಪತ್ರೆಯಲ್ಲಿ ಅಪರೇಶನ್ ಮಾಡಿ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಮನೆಗೆ ಕರೆದುಕೊಂಡು ಬರಲಾಗಿತ್ತು. ಪುತ್ರನಲ್ಲಿ ಅಡುಗೆ ಮಾಡಲು ಕೋಳಿ ತರಲು ಹೇಳಿದ್ದರೆನ್ನಲಾಗಿದ್ದು,

ಹೊಳೆಗೆ ಬಿದ್ದು ಮಹಿಳೆ ಮೃತ್ಯು Read More »

error: Content is protected !!
Scroll to Top