ಮೊಟ್ಟೆತ್ತಡ್ಕ ಶ್ರೀ ಚಾಮುಂಡೇಶ್ವರಿ ಯುವಕ ಮಂಡಲದಿಂದ ಶ್ರಮದಾನ | ಸೋರುತ್ತಿರುವ ಮನೆಗೆ ಟರ್ಪಾಲ್ ಕೊಡುಗೆ
ಪುತ್ತೂರು: ಮೊಟ್ಟೆತ್ತಡ್ಕ ಆಶ್ರಯ ಕಾಲೋನಿಯ ನಿವಾಸಿ ನಾಗವೇಣಿಯವರ ಹಂಚಿನ ಮನೆಯು ಸೋರುತ್ತಿದ್ದು, ಈ ಹಿನ್ನಲೆಯಲ್ಲಿ ಮೊಟ್ಟೆತ್ತಡ್ಕ ಶ್ರೀ ಚಾಮುಂಡೇಶ್ವರಿ ಯುವಕ ಮಂಡಲದವರು ಮನೆಗೆ ಟಾರ್ಪಲ್ ಒದಗಿಸಿ ಕಟ್ಟಿಕೊಡುವ ವ್ಯವಸ್ಥೆ ಮಾಡಿದರು. ಜತೆಗೆ ಕಳೆದ ಒಂದು ವಾರದಿಂದ ಸುರಿದ ಭಾರೀ ಮಳೆಯಿಂದ ಮಾರ್ಗದಲ್ಲಿ ಮಣ್ಣಿನ ರಾಶಿ ತುಂಬಿದ್ದು ಮಾತ್ರವಲ್ಲ ರಸ್ತೆ ಮಧ್ಯೆಯೇ ನೀರು ತುಂಬಿಕೊಂಡು ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ಅಡಚಣೆ ಉಂಟಾಗಿತ್ತು. ಯುವಕ ಮಂಡಲದ ಯುವಕರು ಸೇರಿಕೊಂಡು ರಸ್ತೆಯಲ್ಲಿದ್ದ ಮಣ್ಣಿನ ರಾಶಿಯನ್ನು ತೆರವುಗೊಳಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. […]
ಮೊಟ್ಟೆತ್ತಡ್ಕ ಶ್ರೀ ಚಾಮುಂಡೇಶ್ವರಿ ಯುವಕ ಮಂಡಲದಿಂದ ಶ್ರಮದಾನ | ಸೋರುತ್ತಿರುವ ಮನೆಗೆ ಟರ್ಪಾಲ್ ಕೊಡುಗೆ Read More »










