ಮೋದಿ ಹುಟ್ಟುಹಬ್ಬ | ಪುತ್ತೂರು ಬಿಜೆಪಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ

ಪುತ್ತೂರು: ಮೋದಿ ಹುಟ್ಟುಹಬ್ಬದ ಪ್ರಯುಕ್ತ ಪುತ್ತೂರು ಬಿಜೆಪಿ ವತಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಇಂದು ವಿಶೇಷ ಪೂಜೆ ನಡೆಯಿತು. ಬಿಜೆಪಿ ಮುಖಂಡರು ಸಹಿತ ಕಾರ್ಯಕರ್ತರು ಶ್ರೀ ದೇವಸ್ಥಾನದ ಗರ್ಭಗುಡಿಯಲ್ಲಿ ಪ್ರಾರ್ಥನೆ ನೆರವೇರಿಸಿ ಬಳಿಕ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಸಹಿತ ಬಿಜೆಪಿ ಮುಖಂಡರು, ಕಾರ್ಯಕರ್ತರು, ಗಣ್ಯರು ಉಪಸ್ಥಿತರಿದ್ದರು.

ಮೋದಿ ಹುಟ್ಟುಹಬ್ಬ | ಪುತ್ತೂರು ಬಿಜೆಪಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ Read More »

ಕರಾವಳಿಗೆ ಅನುದಾನ ಬಿಡುಗಡೆ ಮಾಡದೆ ತಾರತಮ್ಯ: ಸುನಿಲ್‌ ಕುಮಾರ್‌ ಆರೋಪ

10 ದಿನಗಳೊಳಗೆ ಅನುದಾನ ಬಿಡುಗಡೆಯಾಗದಿದ್ದರೆ ಸಿಎಂ ಮನೆ ಮುಂದೆ ಧರಣಿ ಉಡುಪಿ: ಕರಾವಳಿಯ ಮೂರು ಜಿಲ್ಲೆಗಳನ್ನು ಕಾಂಗ್ರೆಸ್ ಸರಕಾರ ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದು, ಒಂದು ರೂಪಾಯಿ ಅನುದಾನ ಬಿಡುಗಡೆ ಮಾಡಿಲ್ಲ. ಬಿಜೆಪಿ ಶಾಸಕರು ಇದ್ದಾರೆ ಎಂಬ ಕಾರಣಕ್ಕೆ ಜಿಲ್ಲಾಡಳಿತ ನಿರಂತರ ಅಸಹಕಾರ ನೀಡುತ್ತಿದೆ ಎಂದು ಬಿಜೆಪಿ ಕಾರ್ಯದರ್ಶಿ, ಕಾರ್ಳದ ಶಾಸಕ ಸುನಿಲ್‌ ಕುಮಾರ್‌ ಆರೋಪಿಸಿದ್ದಾರೆ.ಉಡುಪಿ ಜಿಲ್ಲೆಯ ಐದು ಕ್ಷೇತ್ರಗಳಿಗೆ ಕಾಂಗ್ರೆಸ್ ಸರಕಾರ ಅನುದಾನ ನೀಡದೆ ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಕರಾವಳಿಗೆ ಮಾಡುತ್ತಿರುವ ತಾರತಮ್ಯವನ್ನು 10 ದಿನದೊಳಗೆ ಸರಿಪಡಿಸದಿದ್ದರೆ, ಅನುದಾನಕ್ಕೆ

ಕರಾವಳಿಗೆ ಅನುದಾನ ಬಿಡುಗಡೆ ಮಾಡದೆ ತಾರತಮ್ಯ: ಸುನಿಲ್‌ ಕುಮಾರ್‌ ಆರೋಪ Read More »

ಭಾರತೀಯ ರೈಲ್ವೆಯೊಂದಿಗೆ ಕೊಂಕಣ ರೈಲ್ವೆ ವಿಲೀನ ಪರಿಗಣನೆ : ವಿ.ಸೋಮಣ್ಣ

ವಿಲೀನಗೊಳಿಸಿ ರೈಲ್ವೆ ಸೇವೆ ಸುಧಾರಿಸಲು ಕರಾವಳಿ ಜನರ ಬೇಡಿಕೆ ಬೆಂಗಳೂರು: ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಬೇಕೆಂಬ ಕರಾವಳಿ ಭಾಗದ ಜನರ ಬಹುಕಾಲದ ಬೇಡಿಕೆ ಈಡೇರಲಿದೆ. ರೈಲ್ವೆ ಖಾತೆಯ ಸಹಾಯಕ ಸಚಿವ ವಿ.ಸೋಮಣ್ಣ ಅವರು ಈ ಕುರಿತು ಸುಳಿವು ನೀಡಿದ್ದಾರೆ.ಜನರಿಗೆ ನೀಡುವ ಸೇವೆಗಳನ್ನು ಸುಧಾರಿಸುವುದಕ್ಕಾಗಿ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ವಿ.ಸೋಮಣ್ಣ ಹೇಳಿದ್ದಾರೆ. ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ ಪುಣೆ-ಹುಬ್ಬಳ್ಳಿ ನಡುವಣ ವಂದೇ ಭಾರತ್

ಭಾರತೀಯ ರೈಲ್ವೆಯೊಂದಿಗೆ ಕೊಂಕಣ ರೈಲ್ವೆ ವಿಲೀನ ಪರಿಗಣನೆ : ವಿ.ಸೋಮಣ್ಣ Read More »

ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಮಹಿಳೆ ಮೃತ್ಯು

ವಿಟ್ಲ: ಸಾಲೆತ್ತೂರು ರಸ್ತೆಯ ಕೊಳ್ನಾಡು ಗ್ರಾಮ  ಪಂಚಾಯತಿ ವ್ಯಾಪ್ತಿಯಲ್ಲಿ ನಡೆದ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಮೃತಪಟ್ಟಿದ್ದಾರೆ. ಕೋಡಿಂಬಾಡಿ ದಾರಂದಕುಕ್ಕು ನಿವಾಸಿ ಧರ್ಮಪಾಲ ಗೌಡರ ಪತ್ನಿ ಸುಂದರಿ (48) ಮೃತಪಟ್ಟವರು. ಸೆ.10 ರಂದು ಮಂಗಳವಾರ ರಾತ್ರಿ ಅಪಘಾತ ಸಂಭವಿಸಿದ್ದು, ಸುಂದರಿ ಅವರು ಸಾಲೆತ್ತೂರಿನಲ್ಲಿರುವ ಪ್ರಸಿದ್ಧ ವೈದ್ಯರ ಬಳಿ ಪುತ್ತೂರಿನಿಂದ ಸಂಬಂಧಿಕನ ಜೊತೆ ಆಕ್ಟಿವಾದಲ್ಲಿ ಬರುತ್ತಿದ್ದ ವೇಳೆ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಸ್ಥಳೀಯರು ಅಂಬ್ಯುಲೆನ್ಸ್ ಮೂಲಕ ಗಾಯಾಳುವನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ

ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಮಹಿಳೆ ಮೃತ್ಯು Read More »

ರಾಪಿಡ್ ಏಕ್ಷನ್ ಫೋರ್ಸ್ ನ ಗೂಡ್ಸ್ ಲಾರಿ ಪಲ್ಟಿ

ಬಿ.ಸಿ.ರೋಡ್ : ರಾಪಿಡ್ ಏಕ್ಷನ್ ಫೋರ್ಸ್ ನ ಗೂಡ್ಸ್ ಲಾರಿಯೊಂದು ಮಗುಚಿ ಬಿದ್ದ ಘಟನೆ ಬಂಟ್ವಾಳ ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯ ಮೂರ್ಜೆ ಸಮೀಪದ ಕುದ್ರೋಟಿಕಟ್ಟೆ ಎಂಬಲ್ಲಿ ಸಂಭವಿಸಿದೆ. ಆರ್ ಎ ಎಫ್ ನ ಲಗೇಜು ತುಂಬಿದ ಲಾರಿ ಭದ್ರಾವತಿಯಿಂದ ಬಿ.ಸಿ.ರೋಡ್ ಗೆ ಹೋಗುತ್ತಿರುವಾಗ ಕುದ್ರೋಟಿಕಟ್ಟೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಅಪಘಾತದಿಂದ ಚಾಲಕ ಸಣ್ಣ ಪುಟ್ಟ ಗಾಯಗೊಂಡಿದ್ದು, ಮತ್ತೋರ್ವ ಪ್ರಯಾಣಿಕ ಸಾಂತಪ್ಪ ನಾಯಕ್ ಅವರನ್ನು ಚಿಕಿತ್ಸೆಗೆ ಮಂಗಳೂರು ಸರಕಾರಿ ಆಸ್ಪತ್ರೆ ಗೆ ದಾಖಲಿಸಲಾಗಿದೆ.

ರಾಪಿಡ್ ಏಕ್ಷನ್ ಫೋರ್ಸ್ ನ ಗೂಡ್ಸ್ ಲಾರಿ ಪಲ್ಟಿ Read More »

ಬೈಂದೂರು ಬಿಜೆಪಿ ಹಿಂದುಳಿದ ಮೋರ್ಚಾದಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿ

ಉಡುಪಿ: ಬಿಜೆಪಿ ಬೈಂದೂರು ಮಂಡಲ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಆಯೋಜಿಸಿದ್ದ “ಬ್ರಹ್ಮಶ್ರೀ ನಾರಾಯಣ ಗುರು” ಗಳ 170ನೇ ವರ್ಷದ ಜಯಂತಿ ಜಿಲ್ಲೆಯ ಬೈಂದೂರು ತಾಲ್ಲೂಕಿನ ನಾಗೂರುನಲ್ಲಿರುವ ಮಹಾಲಸಾ ಕಲ್ಚರಲ್ ಹಾಲ್ ಸಭಾಂಗಣದಲ್ಲಿ ಅದ್ದೂರಿಯಿಂದ ಜರಗಿತು. ಸಮಾರಂಭದಲ್ಲಿ ರಾಜಕೀಯ ಕ್ಷೇತ್ರದ ಗಣ್ಯರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಿವಮೊಗ್ಗ ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ಗುರುರಾಜ್ ಗಂಟಿಹೊಳೆ, ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್, ಬಿಜೆಪಿ ಒಬಿಸಿ ಮೋರ್ಚದ

ಬೈಂದೂರು ಬಿಜೆಪಿ ಹಿಂದುಳಿದ ಮೋರ್ಚಾದಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿ Read More »

ಪ್ರಧಾನಿ ನರೇಂದ್ರ ಮೋದಿಗಿಂದು ಹುಟ್ಟುಹಬ್ಬ ಸಂಭ್ರಮ

ದೇಶಾದ್ಯಂತ ಸೇವಾ ಕಾರ್ಯಗಳು, ಬಡವರಿಗೆ ನೆರವು ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಗೆ ಇಂದು 74ನೇ ಹುಟ್ಟುಹಬ್ಬದ ಸಂಭ್ರಮ. ಬಿಜೆಪಿ ನಾಯಕರು, ಹಿತೈಷಿಗಳು ಬೆಳಗ್ಗಿನಿಂದಲೇ ಮೋದಿಗೆ ಹುಟ್ಟುಹಬ್ಬದ ಶುಭಾಶಯ ಕೋರಲು ಪ್ರಾರಂಭಿಸಿದ್ದಾರೆ. ಹುಟ್ಟುಹಬ್ಬದಂದು ಮೋದಿ ಯಾವುದೇ ಆಚರಣೆ ಅಥವಾ ವಿಶೇಷ ಕಾರ್ಯಕ್ರಮಗಳನ್ನು ಮಾಡುವುದಿಲ್ಲ. ಆದರೆ ದೇಶಾದ್ಯಂತ ಬಿಜೆಪಿ ಕಾರ್ಯಕರ್ತರು ಮತ್ತು ಮೋದಿ ಅಭಿಮಾನಿಗಳು ವಿವಿಧ ಸೇವಾ ಕಾರ್ಯಗಳ ಮೂಲಕ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿಸುತ್ತಾರೆ. ಸೇವಾ ಪಾಕ್ಷಿಕ, ಸೇವಾ ಪರ್ವ, ಸ್ವಚ್ಛತೆ, ಬಡವರಿಗೆ ನೆರವು, ರಕ್ತದಾನ ಮುಂತಾದ ಸಾಮಾಜಿಕ ಸೇವೆಗಳು ಮೋದಿ

ಪ್ರಧಾನಿ ನರೇಂದ್ರ ಮೋದಿಗಿಂದು ಹುಟ್ಟುಹಬ್ಬ ಸಂಭ್ರಮ Read More »

ರೇಷ್ಮೆ ಹುಳ ಮತ್ತು ನಾವು ಸೃಷ್ಟಿಸಿಕೊಂಡ ಕಂಫರ್ಟ್ ಝೋನ್‌

ನಮ್ಮ ಕನಸುಗಳನ್ನು ಯಾರದ್ದೋ ಉದ್ಧಾರಕ್ಕಾಗಿ ಮಾರುವುದು ಬುದ್ಧಿವಂತಿಕೆ ಅಲ್ಲ ಯುವ ಗೆಳೆಯನೊಬ್ಬ ನನ್ನ ಬಳಿ ಬಂದು ನನಗೆ ನಿಮ್ಮ ಸಲಹೆ ಬೇಕು ಎಂದ. ಯಾವುದರ ಬಗ್ಗೆ? ಎಂದು ಕೇಳಿದೆ.ಅವನು ನನ್ನ ಕೆರಿಯರ್ ಕಟ್ಟುವ ಬಗ್ಗೆ ಗೊಂದಲ ಇದೆ. ನೀವೇ ಪರಿಹಾರ ಮಾಡಬೇಕು ಅಂದ. ಏನು ಗೊಂದಲ? ಎಂದು ಕೇಳಿದೆ. ಅವನು ತನ್ನ ಕತೆಯನ್ನು ಹೇಳುತ್ತಾ ಹೋದ. ಸರ್, ನಾನು MBA ಮಾಡಿದ್ದೇನೆ. ಒಳ್ಳೆ ಮಾರ್ಕ್ಸ್‌ ಇದೆ. ನನಗೆ ಹಲವು ಕಂಪನಿಗಳ ಆಫರ್ ಇದೆ. ಒಳ್ಳೆ ಪ್ಯಾಕೆಜ್ ಕೂಡ

ರೇಷ್ಮೆ ಹುಳ ಮತ್ತು ನಾವು ಸೃಷ್ಟಿಸಿಕೊಂಡ ಕಂಫರ್ಟ್ ಝೋನ್‌ Read More »

ಎಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್  ಇಂಜಿನಿಯರ್ಸ್ ಪುತ್ತೂರು ಸೆಂಟರ್ ಆಶ್ರಯದಲ್ಲಿ ಇಂಜನಿಯರ್ ದಿನಾಚರಣೆ | ಆಕರ್ಷಕ ವಾಕಥಾನ್ ಜಾಥ

ಪುತ್ತೂರು: ಎಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್  ಇಂಜಿನಿಯರ್ಸ್ (ಇಂಡಿಯಾ) ಪುತ್ತೂರು ಸೆಂಟರ್ ಆಶ್ರಯದಲ್ಲಿ ಇಂಜನಿಯರ್ ದಿನಾಚರಣೆ ಪ್ರಯುಕ್ತ ಸೋಮವಾರ ಸಂಜೆ ಪುತ್ತೂರಿನಲ್ಲಿ ಆಕರ್ಷಕ ವಾಕಥಾನ್ ನಡೆಯಿತು. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬಳಿಯ ಗಾಂಧಿ ಕಟ್ಟೆಯ ಎದುರು ಪುತ್ತೂರು ಡಿವೈಎಸ್‌ಪಿ  ಅರುಣ್ ನಾಗೇಗೌಡ ವಾಕಥಾನ್‌ಗೆ ಎಸಿಸಿಇ(ಐ) ಲಾಂಛನವಿರುವ ಧ್ವಜ ಹಿಡಿದು ಚಾಲನೆ ನೀಡಿದರು. ಬಳಿಕ ಎಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್  ಇಂಜಿನಿಯರ್ಸ್ (ಇಂಡಿಯಾ) ಪುತ್ತೂರು ಸೆಂಟರ್‌ನ ಸದಸ್ಯ ಎಂಜಿನಿಯರ್‌ಗಳು ಕಾಲ್ನಡಿಗೆಯಲ್ಲಿ ಮುಖ್ಯರಸ್ತೆಯಲ್ಲಿ ಸಾಗಿದರು. ಬಸ್ ನಿಲ್ದಾಣದಿಂದ ಹೊರಟ ವಾಕಥಾನ್

ಎಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್  ಇಂಜಿನಿಯರ್ಸ್ ಪುತ್ತೂರು ಸೆಂಟರ್ ಆಶ್ರಯದಲ್ಲಿ ಇಂಜನಿಯರ್ ದಿನಾಚರಣೆ | ಆಕರ್ಷಕ ವಾಕಥಾನ್ ಜಾಥ Read More »

ಮ್ಯಾಕ್ಸ್ ಲೈಫ್ ಇನ್ಸುರೆನ್ಸ್ ಹಾಗೂ ಆಕ್ಸಿಸ್ ಬ್ಯಾಂಕ್ ನೀಡುವ ಸೇವಾ ರತ್ನ ಅವಾರ್ಡ್ ಗೆ ಉದ್ಯಮಿ ದಯಾನಂದ ಡಿ.ಕೆ. ಭಾಜನ

ಸುಳ್ಯ: ಮ್ಯಾಕ್ಸ್ ಲೈಫ್ ಇನ್ಸುರೆನ್ಸ್ ಹಾಗೂ ಆಕ್ಸಿಸ್ ಬ್ಯಾಂಕ್ ಸಹಭಾಗಿತ್ವದಲ್ಲಿ ಕೊಡಮಾಡುವ ಸೇವಾ ರತ್ನ ಅವಾರ್ಡ್ ಗೆ ಅಜ್ಞಾವರ ಗ್ರಾಮದ ದೊಡ್ಡೇರಿ ನಿವಾಸಿ, ಉದ್ಯಮಿ ದಯಾನಂದ ಡಿ.ಕೆ. ಭಾಜನರಾಗಿದ್ದು, ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಜ್ಞಾವರ ಗ್ರಾಮದ ದೊಡ್ಡೇರಿ ಮುಳ್ಳ ಕ್ರಾಸ್ ಬಳಿ ಆರ್.ಕೆ. ಇಂಟರ್ನ್ಯಾಷನಲ್ ಹೋಲಿಡೆ ಆನ್ ಪಾಸ್ ಪೋರ್ಟ್, ವೀಸಾ ಆಂಡ್ ಏರ್ ಲೈನ್ ಟಿಕೆಟ್ ಬುಕ್ಕಿಂಗ್ ಉದ್ಯಮ ಸಂಸ್ಥೆಯನ್ನು ಇವರು ನಡೆಸುತ್ತಿದ್ದಾರೆ. ದೊಡ್ಡೇರಿ ಕಿರಿಯ ಪ್ರಾಥಮಿಕ ಶಾಲಾ ಎಸ್.ಡಿ.ಎಂ.ಸಿ. ಶಾಲೆಯ

ಮ್ಯಾಕ್ಸ್ ಲೈಫ್ ಇನ್ಸುರೆನ್ಸ್ ಹಾಗೂ ಆಕ್ಸಿಸ್ ಬ್ಯಾಂಕ್ ನೀಡುವ ಸೇವಾ ರತ್ನ ಅವಾರ್ಡ್ ಗೆ ಉದ್ಯಮಿ ದಯಾನಂದ ಡಿ.ಕೆ. ಭಾಜನ Read More »

error: Content is protected !!
Scroll to Top