ತ್ರಿವರ್ಣ ಧ್ವಜ ಕೆಳಗಿಳಿಸಿ ಖಲಿಸ್ತಾನ್ ಪರ ಪ್ರತಿಭಟನೆ: ಭಾರತ ತೀವ್ರ ಖಂಡನೆ

ದೆಹಲಿ : ಲಂಡನ್‌ನ ಭಾರತದ ಹೈಕಮಿಷನರ್ ಕಚೇರಿಯಲ್ಲಿ ಖಲಿಸ್ಥಾನಿ ಬೆಂಬಲಿಗರು ತ್ರಿವರ್ಣ ಧ್ವಜವನ್ನು ಕಿತ್ತೆಸೆದಿರುವ ಕೃತ್ಯಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಖಲಿಸ್ಥಾನಿ ಮುಖಂಡ ಅಮೃತಪಾಲ್‌ ಸಿಂಗ್‌ ಬಂಧನಕ್ಕೆ ಭಾರತದಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯನ್ನು ವಿರೋಧಿಸಿ ಕೆಲವು ಖಲಿಸ್ಥಾನಿ ಬೆಂಬಲಿಗರು ಲಂಡನ್‌ನಲ್ಲಿರುವ ಭಾರತದ ದೂತವಾಸದ ಎದುರು ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಓರ್ವ ಯುವಕ ಹೈಕಮಿಷನ್‌ ಕಚೇರಿ ಇರುವ ಕಟ್ಟಡ ಹತ್ತಿ ಭಾರತದ ಧ್ವಜವನ್ನು ಕಿತ್ತು ಹಾಕಿದ್ದಾನೆ. ಈ ವೀಡಿಯೊ ನಿನ್ನೆಯಿಂದ ವೈರಲ್‌ ಆಗಿದ್ದು, ಖಲಿಸ್ಥಾನಿ ಬೆಂಬಲಿಗರ ಪುಂಡಾಟಕ್ಕೆ ಭಾರತ […]

ತ್ರಿವರ್ಣ ಧ್ವಜ ಕೆಳಗಿಳಿಸಿ ಖಲಿಸ್ತಾನ್ ಪರ ಪ್ರತಿಭಟನೆ: ಭಾರತ ತೀವ್ರ ಖಂಡನೆ Read More »

ಯೋಜನೆಗೆ ನಿಷ್ಠೆ ಜತೆಯಾದಾಗ ಭವಿಷ್ಯ ಉಜ್ವಲ | ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ವಾರ್ಷಿಕ ಕ್ರೀಡಾಕೂಟದಲ್ಲಿ ಶ್ರೀಕಾಂತ್ ಬಿರಾವು

ಪುತ್ತೂರು: ಗುರಿಯನ್ನು ನಿರ್ಧರಿಸಿ ಕಾರ್ಯಯೋಜನೆಯನ್ನು ತಯಾರಿಸಿದ ಮೇಲೆ ಪ್ರತಿದಿನ ನಿಷ್ಠೆಯಿಂದ ಶ್ರಮವಹಿಸಿ ಅಭ್ಯಾಸ ಮಾಡಿದರೆ ನಮ್ಮ ನಾಳೆಗಳು ಉಜ್ವಲವಾಗುವುದರಲ್ಲಿ ಸಂದೇಹವಿಲ್ಲ ಎಂದು ಪುತ್ತೂರಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ಶ್ರೀಕಾಂತ್ ಪೂಜಾರಿ ಬಿರಾವು ಹೇಳಿದರು. ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ಆಧುನಿಕ ಯುಗದಲ್ಲಿ ಎಲ್ಲರೂ ತ್ವರಿತಗತಿಯ ಫಲಿತಾಂಶವನ್ನೇ ಬಯಸುತ್ತಾರೆ. ಆದರೆ ಅಭ್ಯಾಸವಿಲ್ಲದ ಸಾಧನೆಗಳು ಕ್ಷಣಿಕ ಫಲಿತಾಂಶವನ್ನು ನೀಡಬಲ್ಲದೇ ಹೊರತು ಭವಿಷ್ಯಕ್ಕೆ ಸಹಕಾರಿಯಾಗಲಾರದು ಎಂದರು. ಧ್ವಜಾರೋಹಣ ನೆರವೇರಿಸಿ ಮಾತನಾಡಿದ

ಯೋಜನೆಗೆ ನಿಷ್ಠೆ ಜತೆಯಾದಾಗ ಭವಿಷ್ಯ ಉಜ್ವಲ | ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ವಾರ್ಷಿಕ ಕ್ರೀಡಾಕೂಟದಲ್ಲಿ ಶ್ರೀಕಾಂತ್ ಬಿರಾವು Read More »

ಕಗ್ಗದ ಸಂದೇಶ-

ಮಾನವ ಶಾಶ್ವತವಲ್ಲ ಮಾನವೀಯತೆ ಶಾಶ್ವತ… ದೇವರ್ಕಳುದಿಸಿ ಮರೆಯಹರು; ದೇವತ್ವ ಚಿರ|ಜಾವ ದಿನ ಬಂದು ಪೋಗುವುವು; ಕಾಲ ಚಿರ||ಜೀವದ ವ್ಯಕ್ತಿ ಸಾಯ್ವುದು; ಜೀವಸತ್ತ್ವ ಚಿರ|ಭಾವಿಸಾ ಕೇವಲವ – ಮಂಕುತಿಮ್ಮ||ಒಂದೊಂದು ಕಾಲದಲ್ಲಿ ನಾವು ಒಂದೊಂದು ದೇವರಿಗೆ ಪೂಜೆ ಸಲ್ಲಿಸುತ್ತಿರುವುದು ಚರಿತ್ರೆಯಿಂದ ನಮಗೆ ತಿಳಿಯುತ್ತದೆ. ಒಂದು ಕಾಲದಲ್ಲಿದ್ದ ದೇವರು ಇನ್ನೊಂದು ಕಾಲದಲ್ಲಿ ಮರೆಯಾಗಿ ಹೋಗಿರುವುದನ್ನು ನಾವು ಕಾಣಬಹುದು. ದೇವರುಗಳು ಕಾಲಕಾಲಕ್ಕೆ ಬದಲಾಗಬಹುದು ಆದರೆ ಮನುಷ್ಯ ಶಕ್ತಿಗಿಂತ ಮಿಗಿಲಾದ ನಾವು ಹಿಂದಿನಿಂದ ನಂಬಿಕೊಂಡು ಬಂದ ಒಂದು ದೈವಿಕ ಶಕ್ತಿ ಅಥವಾ ದೇವತ್ವ‌ ಎನ್ನುವುದು

ಕಗ್ಗದ ಸಂದೇಶ- Read More »

ನ್ಯಾಯಾಂಗದ ಹೆಮ್ಮೆ ಜಸ್ಟೀಸ್ ಕೌಡೂರು ಸದಾನಂದ ಹೆಗ್ಡೆ

ಲೋಕಸಭೆಯ ಸ್ಪೀಕರ್ ಆಗಿ ಅನನ್ಯ ಮಾದರಿ 1973ರ ಇಸವಿಯ ಹೊತ್ತಿಗೆ ಸುಪ್ರೀಂ ಕೋರ್ಟಿನ ಒಬ್ಬ ನ್ಯಾಯಾಧೀಶರು ತಮ್ಮ ನ್ಯಾಯಾಂಗ ಬದ್ಧತೆಗೆ ಭಾರಿ ಹೆಸರು ಮಾಡಿದ್ದರು. ಯಾವ ಮುಲಾಜು ಇಲ್ಲದೆ ಅವರು ನೇರ ಮತ್ತು ದಿಟ್ಟ ತೀರ್ಪನ್ನು ಕೊಡುತ್ತಿದ್ದರು. ಒಮ್ಮೆ ದೇಶದ ಪವರಫುಲ್ ಪ್ರಧಾನಿ ಆಗಿದ್ದ ಇಂದಿರಾ ಗಾಂಧಿಯವರ ಒಂದು ಕೇಸ್ ವಿಚಾರಣೆಗೆ ಕೋರ್ಟಿಗೆ ಬಂದಾಗಲೂ ಯಾವ ಮುಲಾಜಿಗೆ ಬಗ್ಗದೆ ತೀರ್ಪು ನೀಡಿ ಭಾರಿ ಹೆಸರು ಮಾಡಿದ್ದರು. ಅವರೇ ಜಸ್ಟೀಸ್ ಕೆ. ಎಸ್. ಹೆಗ್ಡೆ.ಅದೇ ಹೊತ್ತಿಗೆ ಕೇಶವಾನಂದ ಭಾರತಿ

ನ್ಯಾಯಾಂಗದ ಹೆಮ್ಮೆ ಜಸ್ಟೀಸ್ ಕೌಡೂರು ಸದಾನಂದ ಹೆಗ್ಡೆ Read More »

1.80 ಕೋಟಿ ವೆಚ್ಚದಲ್ಲಿ ಅಂದ್ರಟ್ಟದಲ್ಲಿ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ | ಶಂಕುಸ್ಥಾಪನೆ ನೆರವೇರಿಸಿದ ಶಾಸಕ ಮಠಂದೂರು

ಪುತ್ತೂರು: ಬನ್ನೂರು ಗ್ರಾಪಂ ವ್ಯಾಪ್ತಿಯ ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ಲು-ರಾಗಿದಕುಮೇರು-ಅಂದ್ರಟ್ಟ-ಪುರುಷರಕಟ್ಟೆ ಸಂಪರ್ಕ ರಸ್ತೆಗೆ ಸುಮಾರು 1.80 ಕೋಟಿ ವೆಚ್ಚದ ಸೇತುವೆ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಭಾನುವಾರ ಸಂಜೆ ನಡೆಯಿತು. ಶಾಸಕ ಸಂಜೀವ ಮಠಂದೂರು ತೆಂಗಿನಕಾಯಿ ಒಡೆಯುವ ಮೂಲ ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ನಾವು ಸರ್ವ ಸ್ವತಂತ್ರರಾದರೂ ನಮ್ಮ ಬೇಡಿಕೆಗಳು ಮುಗಿಯುವುದಿಲ್ಲ. ಇದಕ್ಕೆ ಇತಿಶ್ರೀ ಹಾಕಲು ಪ್ರಧಾನಿ ಮೋದಿಯವರು ಎಲ್ಲರಿಗೂ ಎಲ್ಲವನ್ನೂ ನೀಡುತ್ತಿದ್ದಾರೆ. ಅದನ್ನು ಸಾಕಾರಗೊಳಿಸಲು ನಮ್ಮಂತ ಜನಪ್ರತಿನಿಧಿಗಳಿಗೆ ಅವಕಾಶ ಸಿಕ್ಕಿದೆ ಎಂದ ಅವರು, ರೈತಾಪಿ ವರ್ಗಕ್ಕೆ ಕಿಸಾನ್ ಸಮ್ಮಾನ್

1.80 ಕೋಟಿ ವೆಚ್ಚದಲ್ಲಿ ಅಂದ್ರಟ್ಟದಲ್ಲಿ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ | ಶಂಕುಸ್ಥಾಪನೆ ನೆರವೇರಿಸಿದ ಶಾಸಕ ಮಠಂದೂರು Read More »

ಕಡಿದ ಹಾವು: ಮಗಳ ಧೈರ್ಯಕ್ಕೆ ಗುಡ್ ಬೈ ಹೇಳಿತು ಸಾವು | ತಾಯಿಯ ಉಳಿಸಿದ ದಿಟ್ಟೆಗೆ ಶಾಸಕರಿಂದ ಶಹಬ್ಬಾಶ್ ಗಿರಿ

ಪುತ್ತೂರು: ಹಾವು ಕಚ್ಚಿತು ಎಂದಾಕ್ಷಣ ಎಲ್ಲರೂ ಭಯಗೊಳ್ಳುವುದು ಸಾಮಾನ್ಯ. ಆದರೆ ಇಲ್ಲೊಬ್ಬಾಕೆ ದಿಟ್ಟೆ, ತನ್ನ ಬಾಯಿಯಿಂದಲೇ ವಿಷವನ್ನು‌ ಕಚ್ಚಿ ತೆಗೆದು ತಾಯಿಯ ಪ್ರಾಣ ಉಳಿಸಿದ್ದಾಳೆ. ಕೆಯ್ಯೂರು ಗ್ರಾಮ ಪಂಚಾಯತ್ ಸದಸ್ಯೆ ಮಮತಾ ರೈ ಅವರು ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಹಾವು ಕಚ್ಚಿತ್ತು. ತಕ್ಷಣ ಓಡಿ ಬಂದ ಮಗಳು ಶ್ರಮ್ಯ ರೈ, ತಾಯಿಗೆ ಧೈರ್ಯ ತುಂಬಿ, ತನ್ನ ಬಾಯಿಯಿಂದಲೇ ವಿಷವನ್ನು ಕಚ್ಚಿ ತೆಗೆದು ಪ್ರಥಮ ಚಿಕಿತ್ಸೆ ನೀಡಿದ್ದಾಳೆ. ನಂತರ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಯಿತು. ಮಮತಾ ರೈ

ಕಡಿದ ಹಾವು: ಮಗಳ ಧೈರ್ಯಕ್ಕೆ ಗುಡ್ ಬೈ ಹೇಳಿತು ಸಾವು | ತಾಯಿಯ ಉಳಿಸಿದ ದಿಟ್ಟೆಗೆ ಶಾಸಕರಿಂದ ಶಹಬ್ಬಾಶ್ ಗಿರಿ Read More »

ಕಬಕ ಒಕ್ಕೂಟದ ವಿದ್ಯಾಪುರ ಶ್ರೀ ನಾಗ ಮತ್ತು ಪಂಚದೈವಗಳ ಸನ್ನಿಧಿಯಲ್ಲಿ  ನಮ್ಮ ಶೌರ್ಯ ತಂಡದ ಯೋಧರಿಂದ ಶ್ರಮದಾನ

ಪುತ್ತೂರು: ಕಬಕ  ವಿದ್ಯಾಪುರ  ಶ್ರೀ ನಾಗ ಮತ್ತು ಪಂಚ ದೈವಗಳ  ಸಾನಿದ್ಯದ ಜೀರ್ಣೋದ್ದಾರ ಪ್ರಯುಕ್ತ ಬಲ್ನಾಡು ಶೌರ್ಯ ವಿಪತ್ತು ನಿರ್ವಹಣಾ ಘಟಕ ಒಂದು ದಿನದ ಶ್ರಮದಾನ ನಡೆಯಿತು. ಶ್ರಮದಾನದಲ್ಲಿ  ಘಟಕದ  ಪ್ರತಿನಿಧಿ ವಿನಯ ನಾಯ್ಕ, ಜಗದೀಶ, ಲೋಕೇಶ್, ವಿನೋದ್ ಬಂಗಾರಡ್ಕ, ಹರಿಪ್ರಸಾದ್, ಚಂದ್ರಶೇಕರ, ಸುನೀಲ್ ಡಿಸೋಜ, ರೋಷನ್ ಡಿಸೋಜ, ಅಜಯ್, ಶಂಭು ಪೂಜಾರಿ, ಬಾಲಕೃಷ್ಣ, ಕಾರ್ತಿಕ್ ಸ್ವಾತಿ ಭಾಗವಹಿಸಿದ್ದರು, ದೈವಸ್ಥಾನದ  ಸಮಿತಿಯವರು  ಸೇವೆ ಸಲ್ಲಿಸಿದ  ಎಲ್ಲರಿಗೂ  ಅಭಿನಂದನೆ  ಸಲ್ಲಿಸಿದರು, ಬಳಿಕ  ಮಾಸಿಕ  ಸಭೆ  ನಡೆಸಲಾಯಿತು, ಸಂಯೋಜಕಿ  ಆಶಾಲತಾ 

ಕಬಕ ಒಕ್ಕೂಟದ ವಿದ್ಯಾಪುರ ಶ್ರೀ ನಾಗ ಮತ್ತು ಪಂಚದೈವಗಳ ಸನ್ನಿಧಿಯಲ್ಲಿ  ನಮ್ಮ ಶೌರ್ಯ ತಂಡದ ಯೋಧರಿಂದ ಶ್ರಮದಾನ Read More »

ಆರ್‌ಬಿಐ ಡೆಪ್ಯೂಟಿ ಗವರ್ನರ್ ಹುದ್ದೆಗೆ ಕೇಂದ್ರ ಸರ್ಕಾರದಿಂದ ಅರ್ಜಿ ಆಹ್ವಾನ

ದೆಹಲಿ: ಎಂಕೆ ಜೈನ್ ಅವರ ವಿಸ್ತೃತ ಅಧಿಕಾರ ಅವಧಿ ಜೂನ್ ನಲ್ಲಿ ಅಂತ್ಯವಾಗಲಿದ್ದು, ಹೊಸ ರಿಸರ್ವ್ ಬ್ಯಾಂಕ್ ಉಪ ಗವರ್ನರ್ ಹುದ್ದೆಗೆ ಕೇಂದ್ರ ಹಣಕಾಸು ಸಚಿವಾಲಯ ಅರ್ಜಿಯನ್ನು ಆಹ್ವಾನಿಸಿದೆ. ಅರ್ಜಿದಾರರು ಬ್ಯಾಂಕಿಂಗ್ ಮತ್ತು ಹಣಕಾಸು ಮಾರುಕಟ್ಟೆ ಕಾರ್ಯಾಚರಣೆಗಳಲ್ಲಿ 15 ವರ್ಷಗಳ ಅನುಭವವನ್ನು ಹೊಂದಿರಬೇಕು, ಖಾಸಗಿ ವಲಯದ ಅಭ್ಯರ್ಥಿಗಳನ್ನು ಸಹ ನೇಮಕಾತಿಗೆ ಪರಿಗಣಿಸಲಾಗುವುದು ಎಂದು ಸಾರ್ವಜನಿಕ ಪ್ರಕಟಣೆ ತಿಳಿಸಿದೆ. ಸಾಂಪ್ರದಾಯಿಕವಾಗಿ, ನಾಲ್ಕು ಉಪ ಗವರ್ನರ್‌ಗಳಲ್ಲಿ ಒಬ್ಬರು ಸಾರ್ವಜನಿಕ ವಲಯದ ಬ್ಯಾಂಕಿಂಗ್ ಉದ್ಯಮದಿಂದ ಬಂದವರಾಗಿರುತ್ತಾರೆ. ಖಾಸಗಿ ವಲಯದಿಂದ ಯಾರನ್ನಾದರೂ ನೇಮಿಸಲು

ಆರ್‌ಬಿಐ ಡೆಪ್ಯೂಟಿ ಗವರ್ನರ್ ಹುದ್ದೆಗೆ ಕೇಂದ್ರ ಸರ್ಕಾರದಿಂದ ಅರ್ಜಿ ಆಹ್ವಾನ Read More »

ವಿಟ್ಲ ಪಟ್ಟಣ ಪಂಚಾಯಿತಿಯ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕು ಸ್ಥಾಪನೆ, 94 ಸಿಸಿ ಹಕ್ಕುಪತ್ರ ವಿತರಣೆ | ವಿಟ್ಲದ ಸರ್ವತೋಮುಖ ಅಭಿವೃದ್ಧಿ: ಶಾಸಕ ಮಠಂದೂರು

ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕು ಸ್ಥಾಪನೆ ಮತ್ತು 94 ಸಿಸಿ ಹಕ್ಕುಪತ್ರ ವಿತರಣೆ ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಭಾನುವಾರ ಚಂದಳಿಕೆ ಭಾರತ ಅಡಿಟೂರಿಯಂ ನಡೆಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಮಾತನಾಡಿ, ವಿಟ್ಲದ ಸರ್ವತೋಮುಖ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಲಾಗಿದೆ. ವಿವಿಧ ಕಾಮಗಾರಿಗಳ ಉದ್ಘಾಟನೆಯೂ ನಡೆದಿದೆ. 94 ಸಿಸಿ ಹಕ್ಕುಪತ್ರ ವಿತರಿಸುವ ಮೂಲಕ ವಾಸದ ಜಮೀನಿಗೆ ತಾವೇ ಮಾಲಕರಾಗಿದ್ದೀರಿ ಎಂದ

ವಿಟ್ಲ ಪಟ್ಟಣ ಪಂಚಾಯಿತಿಯ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕು ಸ್ಥಾಪನೆ, 94 ಸಿಸಿ ಹಕ್ಕುಪತ್ರ ವಿತರಣೆ | ವಿಟ್ಲದ ಸರ್ವತೋಮುಖ ಅಭಿವೃದ್ಧಿ: ಶಾಸಕ ಮಠಂದೂರು Read More »

ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿಯನ್ನು ನಿರ್ಧರಿಸುವ ಅಧಿಕಾರ ನನಗಿಲ್ಲ ಎಂದ ಅಣ್ಣಾಮಲೈ

ಚೆನ್ನೈ: ಮುಂಬರುವ ಲೋಕಸಭಾ ಚುನಾವಣೆ ವೇಳೆ ತಮಿಳುನಾಡಿನಲ್ಲಿ ಎಐಎಡಿಎಂಕೆ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡರೆ ನಾನು ಬಿಜೆಪಿಯಿಂದ ಹೊರಹೋಗುವುದಾಗಿ ತಮಿಳುನಾಡು ಬಿಜೆಪಿ ಘಟಕದ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಹೇಳಿದ್ದಾರೆ ಎಂಬ ಮಾತು ಬಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿದ ಅಣ್ಣಾಮಲೈ, ಮೈತ್ರಿ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ನನಗಿಲ್ಲ, ಇದರ ಬಗ್ಗೆ ಪಕ್ಷದ ನಾಯಕತ್ವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ. ನಾನು ರಾಜಕೀಯಕ್ಕೆ ಬಂದಿರುವುದು ರಾಜ್ಯದಲ್ಲಿ ಬದಲಾವಣೆ ತರುವ ಉದ್ದೇಶಕ್ಕಾಗಿಯೇ ಹೊರತೂ, ಎಐಎಡಿಎಂಕೆಯ ಕಿರಿಯ ಮಿತ್ರನಾಗಿ ಇರಲು

ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿಯನ್ನು ನಿರ್ಧರಿಸುವ ಅಧಿಕಾರ ನನಗಿಲ್ಲ ಎಂದ ಅಣ್ಣಾಮಲೈ Read More »

error: Content is protected !!
Scroll to Top