ರೈತರ ಕುಮ್ಕಿ ಜಮೀನನ್ನು ಗುತ್ತಿಗೆ ನೀಡಲು ಆಕ್ಷೇಪ | ಲೀಸಿಗೆ ಅರ್ಜಿ ಹಾಕುವುದು ಅಕ್ರಮ : ಪತ್ರಿಕಾಗೋಷ್ಠಿಯಲ್ಲಿ ರೈತರಿಗೆ ಯಂ.ಜಿ.ಸತ್ಯನಾರಾಯಣ ಭಟ್ ಸಲಹೆ.
ಪುತ್ತೂರು: ಕರ್ನಾಟಕ ಸರಕಾರ ಮಾ.12, 2024ರ ಸುತ್ತೋಲೆ ಸಂಖ್ಯೆ ಆರ್ಡಿ07 ಎಲ್ಜಿಪಿ 2023 ರಂತೆ 30 ವರ್ಷಗಳ ಗೇಣಿ ಮೌಲ್ಯವನ್ನು ಏಕಗಂಟಿನಲ್ಲಿ ಸರಕಾರಕ್ಕೆ ಪಾವತಿ ಮಾಡಿ ಅನುಭವಿಸಬಹುದು ಎಂಬ ವಿಚಾರಕ್ಕೆ ಸಂಬಂಧಿಸಿರುವ ಸುತ್ತೋಲೆ ಬೆಳಕಿಗೆ ಬಂದಿದ್ದು, ಈ ಸುತ್ತೋಲೆಯಿಂದ ರೈತರು ಭಯ ಪಡುವ ಅವಶ್ಯಕತೆಯಿಲ್ಲ.ಕುಮ್ಕಿದಾರರು ದಾಖಲೆಯನ್ನು ಸರಿ ಮಾಡಿ ಇಟ್ಟುಕೊಳ್ಳಿ. ಮೂಲ ದಾಖಲೆಯನ್ನು ಅದಕ್ಕೆ ಸಂಬಂಧಿಸಿ ಇಟ್ಟುಕೊಂಡರೆ ಲೀಸ್ ಅಗತ್ಯವಿಲ್ಲ. ಲೀಸಿಗೆ ಅರ್ಜಿ ಹಾಕುವುದು ಅಕ್ರಮ ಎಂದು ಕುಮ್ಕಿ ಹಕ್ಕು ಹೋರಾಟದ ಸಂಚಾಲಕ ಯಂ.ಜಿ.ಸತ್ಯನಾರಾಯಣ ಭಟ್ ಹೇಳಿದ್ದಾರೆ. […]










