ಶೈಕ್ಷಣಿಕ

ಸವಣೂರು ವಿದ್ಯಾರಶ್ಮಿಯಲ್ಲಿ ವಾರ್ಷಿಕ ಕ್ರೀಡಾಕೂಟ ‘ಕ್ರೀಡಾರಶ್ಮಿ’

 ಸವಣೂರು: ವಿದ್ಯಾರಶ್ಮಿ ವಿದ್ಯಾಲಯದಲ್ಲಿ ವಾರ್ಷಿಕ ಕ್ರೀಡಾಕೂಟ ‘ಕ್ರೀಡಾರಶ್ಮಿ’ ಶನಿವಾರ ನಡೆಯಿತು. ಪುತ್ತೂರು ನಗರ ಠಾಣಾ ಪೋಲೀಸ್ ಉಪ ನಿರೀಕ್ಷಕ ಅಂಜನೇಯ ರೆಡ್ಡಿ ಪಾರಿವಾಳ ಹಾರಿಬಿಡುವ ಮೂಲಕ ಉದ್ಘಾಟಿಸಿ ಮಾತನಾಡಿ, ಇಂದು ಶಿಸ್ತು ಮತ್ತು ಸಮಯ ಪಾಲನೆಗಳೇ ಬದುಕಿನ ಪ್ರಮುಖ ಅಸ್ತ್ರಗಳಾಗಿದ್ದು ಅವುಗಳನ್ನು ರೂಢಿಸಿಕೊಳ್ಳಲು ಕ್ರೀಡಾ ಚಟುವಟಿಕೆಗಳು ಸಹಕಾರಿ. ಸಹಕಾರ ರತ್ನ ಸವಣೂರು ಸೀತಾರಾಮ ರೈಯವರ ಸಂಚಾಲಕತ್ವದಲ್ಲಿ ನಡೆಯುತ್ತಿರುವ ವಿದ್ಯಾರಶ್ಮಿ ಸಂಸ್ಥೆಗಳು ಅವರ ವ್ಯಕ್ತಿತ್ವದಂತೆಯೇ ಶಿಸ್ತುಬದ್ಧವಾಗಿದೆ ಮತ್ತು ಇಲ್ಲಿನ ವಿದ್ಯಾರ್ಥಿಗಳು ಬೌದ್ಧಿಕವಾಗಿ ಬಹು ಎತ್ತರದಲ್ಲಿದ್ದಾರೆ ಎಂದರು. ಮುಖ್ಯ ಅತಿಥಿಯಾಗಿ […]

ಸವಣೂರು ವಿದ್ಯಾರಶ್ಮಿಯಲ್ಲಿ ವಾರ್ಷಿಕ ಕ್ರೀಡಾಕೂಟ ‘ಕ್ರೀಡಾರಶ್ಮಿ’ Read More »

ಮಾಜಿ ಮುಖ್ಯಮಂತ್ರಿ ಎಸ್‍ ಎಂ ಕೃಷ್ಣ ನಿಧನದ ಹಿನ್ನಲೆ ಮಂಗಳೂರು ವಿವಿ ಪರೀಕ್ಷೆ ಮುಂದೂಡಿಕೆ

ಮಂಗಳೂರು:  ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಎಸ್‍ ಎಂ ಕೃಷ್ಣ ನಿಧನದ ಹಿನ್ನಲೆ ಸರ್ಕಾರ ಡಿ.11 ರಂದು  ರಜೆ ಘೋಷಿಸಿದೆ. ಈ ಹಿನ್ನಲೆ  ದಿನಾಂಕ 11-12-2024 ರಂದು ನಿಗದಿಪಡಿಸಿದ್ದ ಎಲ್ಲಾ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಬದಲಾದ ಪರಿಷ್ಕ್ರತ ಪರೀಕ್ಷಾ ದಿನಾಂಕವನ್ನು ಶೀಘ್ರದಲ್ಲಿ  ತಿಳಿಸಲಾಗುವುದು ಎಂದು ಮಂಗಳೂರು ವಿವಿ ಪರೀಕ್ಷಾಂಗ ಕುಲಸಚಿವರು  ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಸ್‍ ಎಂ ಕೃಷ್ಣ ನಿಧನದ ಹಿನ್ನಲೆ ಮಂಗಳೂರು ವಿವಿ ಪರೀಕ್ಷೆ ಮುಂದೂಡಿಕೆ Read More »

ನಮ್ಮನ್ನು ಬೊಳುವಾರಿನಲ್ಲಿ ಇಳಿಸುತ್ತಾರೆ: ವಿದ್ಯಾರ್ಥಿಗಳಿಂದ ಶಾಸಕರಿಗೆ ದೂರು

ಪುತ್ತೂರು: ನಾವು ಉಪ್ಪಿನಂಗಡಿಯಿಂದ ವಿಟ್ಲ ಐಟಿಐ ಕಾಲೇಜಿಗೆ ವ್ಯಾಸಂಗಕ್ಕೆ ಬರುತ್ತಿದ್ದೇವೆ, ನಮಗೆ ಬೊಳುವಾರಿನಿಂದ ವಿಟ್ಲ ಎಂದು ಬಸ್ ಪಾಸ್ ಕೊಟ್ಟಿದ್ದಾರೆ. ಮನೆಯಿಂದ ಕಾಲೇಜಿಗೆ ಬರುವಾಗ ನಾವು ಬೊಳುವಾರಿನ ಇಳಿಯಬೇಕು ಕಾಲೇಜು ಮುಗಿಸಿ ಬರುವಾಗಲೂ ನಾವು ಬೊಳುವಾರಿನಲ್ಲೇ ಇಳಿಯಬೇಕು. ಬೊಳುವಾರಿನಲ್ಲಿ ಇಳಿದರೆ ನಮಗೆ ಬಸ್ ಸಿಗುವುದಿಲ್ಲ ನಮಗೆ ಬಸ್ ಸ್ಟ್ಯಾಂಡ್ ವರೆಗೆ ತೆರಳಲು ಅವಕಾಶ ಮಾಡಿಕೊಡಬೇಕು ಎಂದು ವಿಟ್ಲ ಐಟಿಐ ಕಾಲೇಜಿನ ವಿದ್ಯಾರ್ಥಿಗಳು ಶಾಸಕ ಅಶೋಕ್ ರೈ ಅವರಿಗೆ ಮನವಿ ಸಲಿ ಸಿದ್ದಾರೆ. ವಿಟ್ಲದ ಐಟಿಐ ಕಾಲೇಜಿನಲ್ಲಿ ಕಾಮಗಾರಿ

ನಮ್ಮನ್ನು ಬೊಳುವಾರಿನಲ್ಲಿ ಇಳಿಸುತ್ತಾರೆ: ವಿದ್ಯಾರ್ಥಿಗಳಿಂದ ಶಾಸಕರಿಗೆ ದೂರು Read More »

ರಾಜ್ಯ ಕಾನೂನು ವಿವಿ ಅಂತರ್ ಕಾಲೇಜು ಮಟ್ಟದ ಚದುರಂಗ ಸ್ಪರ್ಧೆ | ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಮಹಿಳಾ ತಂಡಕ್ಕೆ ದ್ವಿತೀಯ ಸ್ಥಾನ

ಪುತ್ತೂರು: ನೆಹರೂ ನಗರದಲ್ಲಿರುವ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ವಿದ್ಯಾರ್ಥಿಗಳು ಓದಿನ ಜೊತೆಗೆ ಕ್ರೀಡಾ ಕ್ಷೇತ್ರದಲ್ಲಿಯೂ ವಿಶಿಷ್ಟ ಸಾಧನೆಯನ್ನು ಮಾಡುತ್ತಿದ್ದಾರೆ. ಇದೀಗ ಅದಕ್ಕೆ ಉದಾಹರಣೆ ಎಂಬಂತೆ ಚದರಂಗ ಸ್ಪರ್ಧೆಯಲ್ಲಿ ಸಾಧನೆ ಮಾಡುವ ಮೂಲಕ ಗುರುತಿಸಿಕೊಂಡಿದ್ದಾರೆ. ಚಿತ್ರದುರ್ಗದ ಎಸ್ ಜೆ ಎಂ ಕಾನೂನು ಮಹಾವಿದ್ಯಾಲಯ ಮತ್ತು ಕರ್ನಾಟಕ ಕಾನೂನು ವಿಶ್ವ ವಿದ್ಯಾಲಯ ಆಯೋಜಿಸಿದ ಕರ್ನಾಟಕ ಕಾನೂನು ವಿವಿ ಅಂತರ್ ಕಾಲೇಜು ಪುರುಷ ಹಾಗೂ ಮಹಿಳೆಯರ ಚದರಂಗ ಸ್ಪರ್ಧೆಯಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಮಹಿಳೆಯರ ತಂಡವು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ರಾಜ್ಯ ಕಾನೂನು ವಿವಿ ಅಂತರ್ ಕಾಲೇಜು ಮಟ್ಟದ ಚದುರಂಗ ಸ್ಪರ್ಧೆ | ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಮಹಿಳಾ ತಂಡಕ್ಕೆ ದ್ವಿತೀಯ ಸ್ಥಾನ Read More »

ಮಲೇಶಿಯಾದ ಕೌಲಲಾಂಪುರದಲ್ಲಿ  ಏಷ್ಯನ್ ಪೆಸಿಫಿಕ್ ಡೆಫ್ ಚೆಸ್   ಸ್ಪರ್ಧೆ | ಯಶಸ್ವಿ ಕುದುಮಾನಿಗೆ  ಕಂಚಿನ ಪದಕ

ಬಂಟ್ವಾಳ : ಮಲೇಶಿಯಾದ ಕೌಲಲಾಂಪುರದಲ್ಲಿ  ನಡೆದ ಏಷ್ಯನ್ ಪೆಸಿಫಿಕ್ ಡೆಫ್ ಚೆಸ್   ಸ್ಪರ್ಧೆಯಲ್ಲಿ ಯಶಶ್ವಿ ಕುದುಮಾನು  ಕಂಚಿನ ಪದಕ  ಪಡೆದಿದ್ದಾರೆ. ಇವರು ಮಂಗಳೂರು  ಶ್ರೀನಿವಾಸ ಕಾಲೇಜಿನಲ್ಲಿ  MCA ಪ್ರಥಮ ವರ್ಷ ವ್ಯಾಸಂಗ ಮಾಡುತ್ತಿದ್ದಾರೆ.    ಯಶಶ್ವಿ ಕುದುಮಾನು ಬಂಟ್ವಾಳ ತಾಲೂಕು  ಕೆದಿಲ ಗ್ರಾಮದ ಕುದುಮಾನು ತಿಮ್ಮಪ್ಪ, ಯೋಶೋಧ  ದಂಪತಿ ಪುತ್ರಿ

ಮಲೇಶಿಯಾದ ಕೌಲಲಾಂಪುರದಲ್ಲಿ  ಏಷ್ಯನ್ ಪೆಸಿಫಿಕ್ ಡೆಫ್ ಚೆಸ್   ಸ್ಪರ್ಧೆ | ಯಶಸ್ವಿ ಕುದುಮಾನಿಗೆ  ಕಂಚಿನ ಪದಕ Read More »

ಅಕ್ಷಯ ಕಾಲೇಜಿನಲ್ಲಿ ಪ್ರಿನ್ಸ್ ಆ್ಯಂಡ್‍ ಪ್ರಿನ್ಸಸ್, ಪತ್ತೂರು ಫ್ಯಾಷನ್‍ ಶೋ ಆಡಿಷನ್ ಉದ್ಘಾಟನೆ | 200 ಕ್ಕೂ ಮಿಕ್ಕಿ ಸ್ಪರ್ಧಾಳುಗಳು ಭಾಗಿ

ಪುತ್ತೂರು: ಅಕ್ಷಯ ಎಜ್ಯುಕೇಶನಲ್ ಆ್ಯಂಡ್‍ ಚಾರಿಟೇಬಲ್‍ ಟ್ರಸ್ಟ್‍ ನಡಿ ಸಂಪ್ಯದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನ ಫ್ಯಾಷನ್ ಡಿಸೈನಿಂಗ್‍್ ವಿಭಾಗ  ಫಸೇರಾ ಹಾಗೂ ಸಾಂಸ್ಕೃತಿಕ  ಲಲಿತಾ ಕಲಾ ಸಂಘದ ವತಿಯಿಂದ ಪ್ರಿನ್ಸ್ ಆ್ಯಂಡ್‍ ಪ್ರಿನ್ಸಸ್ ಫ್ಯಾಷನ್‍ ಶೋ ಅಡಿಷನ್ ಕಾರ್ಯಕ್ರಮದ ಉದ್ಘಾಟನೆ ಕಾಲೇಜಿನ ಸಭಾಭವನದಲ್ಲಿ  ನಡೆಯಿತು. ರೋಟರಿ ಕ್ಲಬ್ ಪುತ್ತೂರು ಸ್ವರ್ಣದ ಮಾಜಿ ಅಧ್ಯಕ್ಷ, ಬನ್ನೂರು ಎ.ವಿ.ಜಿ ಸ್ಕೂಲ್ ಸಂಚಾಲಕ ವೆಂಕಟ್ರಮಣ ಗೌಡ ಕಳುವಾಜೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಕನಸುಕಾಣಬೇಕು. ಆದರೆ ಆ ಕನಸು

ಅಕ್ಷಯ ಕಾಲೇಜಿನಲ್ಲಿ ಪ್ರಿನ್ಸ್ ಆ್ಯಂಡ್‍ ಪ್ರಿನ್ಸಸ್, ಪತ್ತೂರು ಫ್ಯಾಷನ್‍ ಶೋ ಆಡಿಷನ್ ಉದ್ಘಾಟನೆ | 200 ಕ್ಕೂ ಮಿಕ್ಕಿ ಸ್ಪರ್ಧಾಳುಗಳು ಭಾಗಿ Read More »

ಪ್ರತಿಭಾ ಕಾರಂಜಿ ಲಿಟ್ಲ್ ಫ್ಲವರ್ ಶಾಲಾ ವಿದ್ಯಾರ್ಥಿ ಚಂದನ್ ಕೃಷ್ಣ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಪುತ್ತೂರು : ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಮತ್ತು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ನೇತೃತ್ವದಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಲಿಟ್ಲ್ ಫ್ಲವರ್ ಶಾಲಾ ವಿದ್ಯಾರ್ಥಿ ಚಂದನ್ ಕೃಷ್ಣ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯ ಧಾರ್ಮಿಕ ಪಠಣ ಸಂಸ್ಕೃತದಲ್ಲಿ ಪ್ರಥಮ ಸ್ಥಾನ ಪಡೆದು ಹೋಲಿ ರಿಮೆಂಡೀರ್ ಶಾಲೆ, ಬೆಳ್ತಂಗಡಿಯಲ್ಲಿ ನಡೆಯುವ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಚಂದನ್ ಕೃಷ್ಣ ಲಿಟ್ಲ್ ಫ್ಲವರ್ ಶಾಲಾ ರಕ್ಷಕ ಶಿಕ್ಷಕ ಸಂಘದ

ಪ್ರತಿಭಾ ಕಾರಂಜಿ ಲಿಟ್ಲ್ ಫ್ಲವರ್ ಶಾಲಾ ವಿದ್ಯಾರ್ಥಿ ಚಂದನ್ ಕೃಷ್ಣ ಜಿಲ್ಲಾ ಮಟ್ಟಕ್ಕೆ ಆಯ್ಕೆ Read More »

ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಅಧ್ಯಾಪನಾ ಅಭಿವೃದ್ಧಿ ಕಾರ್ಯಕ್ರಮ ನಡೆಯಿತು.

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೃಷ್ಣ ಭಟ್ ಕೆ. ಎಂ. ದೀಪ ಬೆಳಗುವ ಮೂಲಕ ಚಾಲನೆ ನೀಡಿ, ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಗುರು, ಶಿಕ್ಷಕ ಅಥವಾ ಉಪನ್ಯಾಸಕ ವೃತ್ತಿಯನ್ನು ಶ್ರೇಷ್ಟ ಹಾಗೂ ಪವಿತ್ರವಾದ ಹುದ್ದಯೆಂದು ಪರಿಗಣಿಸಲಾಗಿದೆ. ಉಪನ್ಯಾಸಕರಾದವರು ಪ್ರತಿಕ್ಷಣ ಕಲಿಯುತ್ತಿರಬೇಕು. ಈ ವೃತ್ತಿಯಲ್ಲಿ ತೊಡಗಿಸಿಕೊಂಡವರಿಗೆ ಇಂದಿನ ಆಧುನಿಕ ಯುಗದಲ್ಲಿ ಉತ್ತಮ ಉಪನ್ಯಾಸಕ ಎಂದು ಕರೆಸಿಕೊಳ್ಳಲು ವಿಷಯ ಜ್ಞಾನ ಮತ್ತು ಬುದ್ಧಿವಂತಿಕೆಯ ಜೊತೆಗೆ ನಿರ್ದಿಷ್ಟ ಕೌಶಲ್ಯಗಳನ್ನು ಹೊಂದಿರಬೇಕು. ಅದನ್ನು ಇಂತಹ ಅಧ್ಯಾಪನಾ ಅಭಿವೃದ್ಧಿ ಕಾರ್ಯಕ್ರಮಗಳು ತಿಳಿಸಿಕೊಡುತ್ತದೆ

ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಅಧ್ಯಾಪನಾ ಅಭಿವೃದ್ಧಿ ಕಾರ್ಯಕ್ರಮ ನಡೆಯಿತು. Read More »

ಪ್ರತಿಷ್ಠಿತ “ಪ್ರೇರಣಾ” ಸಂಸ್ಥೆಗೆ ಶಿಕ್ಷಕರು ಬೇಕಾಗಿದ್ದಾರೆ

ಪುತ್ತೂರು: ಪ್ರತಿಷ್ಠಿತ “ಪ್ರೇರಣಾ” ಸಂಸ್ಥೆಗೆ ‘ಟ್ಯೂಷನ್’ ಶಿಕ್ಷಕರು ಬೇಕಾಗಿದ್ದಾರೆ. ಯಾವುದೇ ಪದವಿ ಹೊಂದಿರುವ, ಅನುಭವಿ ಹಾಗೂ ಉತ್ತಮ ಭಾಷಾ ಕೌಶಲ್ಯ ಹೊಂದಿರುವ ಎಲ್ ಕೆಜಿಯಿಂದ 7ನೇ ತರಗತಿ ವರೆಗೆ ಬೋಧನೆ ಮಾಡಲು ಶಿಕ್ಷಕರು ಬೇಕಾಗಿದ್ದಾರೆ. ಆಸಕ್ತರು info@myprerana.in ಮೇಲ್ ಐಡಿಗೆ ತಮ್ಮ ಬಯೋಡಾಟವನ್ನು ಕಳುಹಿಸಬಹುದು. ವಿಳಾಸ : “ಪ್ರೇರಣಾ” , ಮೊದಲ ಮಹಡಿ, ಪ್ರಭು ಬಿಲ್ಡಿಂಗ್, ಕೆನರಾ ಬ್ಯಾಂಕ್ ಹತ್ತಿರ, ಅರುಣಾ ಕಲಾಮಂದಿರದ ಎದುರು, ಮುಖ್ಯ ರಸ್ತೆ ಪುತ್ತೂರು. ಹೆಚ್ಚಿನ ಮಾಹಿತಿಗಾಗಿ +918904877721, +917204977721 ಸಂರ್ಕಿಸಬಹುದು.

ಪ್ರತಿಷ್ಠಿತ “ಪ್ರೇರಣಾ” ಸಂಸ್ಥೆಗೆ ಶಿಕ್ಷಕರು ಬೇಕಾಗಿದ್ದಾರೆ Read More »

ಈ ಸಲ ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆ ಸ್ವರೂಪ ಬದಲಾವಣೆಯಿಲ್ಲ

ಕಳೆದ ವರ್ಷದಂತೆಯೇ ಪ್ರಶ್ನೆ ಪತ್ರಿಕೆ ಇರಲಿದೆ ಎಂದು ಸ್ಪಷ್ಟನೆ ಬೆಂಗಳೂರು: 2024-25ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ ಪ್ರಶ್ನೆಪತ್ರಿಕೆಯ ಸ್ವರೂಪದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ, ಕಳೆದ ವರ್ಷದ ಮಾದರಿಯಲ್ಲೇ ಪ್ರಶ್ನೆಪತ್ರಿಕೆ ಇರುತ್ತದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸ್ಪಷ್ಟಪಡಿಸಿದೆ.ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪ್ರಶ್ನೆ ಪತ್ರಿಕೆಯಲ್ಲಿ ಮಹತ್ವದ ಬದಲಾವಣೆ ಮಾಡಿರುವುದಾಗಿ ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿರುರುವ ಸುದ್ದಿ ಸುಳ್ಳು. 2024-25ನೇ ಸಾಲಿನ ಪ್ರಶ್ನೆಪತ್ರಿಕೆಯ ವಿನ್ಯಾಸದಲ್ಲಿ ಮಂಡಳಿ ಯಾವುದೇ ಬದಲಾವಣೆ ಮಾಡಿರುವುದಿಲ್ಲ ಎಂದು ಕರ್ನಾಟಕ

ಈ ಸಲ ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆ ಸ್ವರೂಪ ಬದಲಾವಣೆಯಿಲ್ಲ Read More »

error: Content is protected !!
Scroll to Top