Uncategorized

ನಿವೃತ್ತಿ ಬಗ್ಗೆ RSS ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು?

ನವದೆಹಲಿ: 75 ವರ್ಷಗಳನ್ನು ಪೂರೈಸಿದ ಬಳಿಕ ನಾನು ನಿವೃತ್ತಿ ಹೊಂದಬೇಕು ಅಥವಾ ನಿವೃತ್ತಿ ಹೊಂದುವುದಾಗಿ ಎಲ್ಲಿಯೂ ಹೇಳಿಲ್ಲ ಎಂದು RSS ಮುಖ್ಯಸ್ಥ ಮೋಹನ್ ಭಾಗವತ್ ಅವರು ಸ್ಪಷ್ಚನೆ ನೀಡಿದ್ದಾರೆ. ಮುಂದಿನ ತಿಂಗಳು ಪ್ರಧಾನಿ ಮೋದಿ ಮತ್ತು ಮೋಹನ್ ಭಾಗ್ವತ್ ಅವರಿಬ್ಬರೂ 75 ವರ್ಷಕ್ಕೆ ಕಾಲಿಡಲಿದ್ದು, ಈ‌ ಸಂದರ್ಭದಲ್ಲಿಯೇ ಅವರು ಈ ಸ್ಪಷ್ಟನೆ ‌ನೀಡಿರುವುದಾಗಿದೆ. 75 ವರ್ಷಕ್ಕೆ ನಿವೃತ್ತಿ ಹೊಂದುವ ವಿಷಯದಲ್ಲಿ ವಿರೋಧಿಗಳು ಭಾಗ್ವತ್ ಅವರ ಈ ಹಿಂದಿನ ಹೇಳಿಕೆಯೊಂದನ್ನು ವ್ಯಂಗ್ಯ ಮಾಡುತ್ತಿದ್ದು, ಆ ಕಾರಣಕ್ಕೆ ಈ ಸ್ಪಷ್ಟೀಕರಣ […]

ನಿವೃತ್ತಿ ಬಗ್ಗೆ RSS ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು? Read More »

ಭರತನಾಟ್ಯದಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಬರೆದ ಉಡುಪಿಯ ವಿದುಷಿ ದೀಕ್ಷಾ

ಉಡುಪಿ: 216 ಗಂಟೆಗಳ ಕಾಲ ಭರತನಾಟ್ಯ ಮಾಡುವ ಗುರಿಯೊಂದಿಗೆ ಆ.21 ರಂದು ನೃತ್ಯ ಆರಂಭ ಮಾಡಿದ್ದ ಉಡುಪಿಯ ವಿದುಷಿ ದೀಕ್ಷಾ ಅವರ ಹೆಸರು ಸದ್ಯ ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್’ ನಲ್ಲಿ ಅಚ್ಚಾಗಿದೆ. ಕೆಲ ದಿನಗಳ ಹಿಂದಷ್ಟೇ ಭರತನಾಟ್ಯ 170 ಗಂಟೆಗಳ ಕಾಲ ಭರತನಾಟ್ಯ ಮಾಡಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ನಲ್ಲಿ ತಮ್ಮ ಹೆಸರು ದಾಖಲಾಗುವಂತೆ ಮಾಡಿದ್ದ ಮಂಗಳೂರಿನ ರೆಮೊನಾ ಪಿರೇರಾ ಅವರ ದಾಖಲೆ ಮುರಿದು, ಹೊಸ ದಾಖಲೆ ಬರೆದಿದ್ದಾರೆ. ದೀಕ್ಷಾ ಅವರು 170 ಗಂಟೆಗಳ

ಭರತನಾಟ್ಯದಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಬರೆದ ಉಡುಪಿಯ ವಿದುಷಿ ದೀಕ್ಷಾ Read More »

ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಮಾತು: ಕಾಂಗ್ರೆಸ್ ಕ್ಷಮೆ ಯಾಚನೆಗೆ ಬಿಜೆಪಿ ಆಗ್ರಹ

ಪಾಟ್ನಾ: ಬಿಹಾರದಲ್ಲಿ ನಡೆಯುತ್ತಿರುವ ರಾಹುಲ್ ಗಾಂಧಿ ಅವರ ವೋಟರ್ ಅಧಿಕಾರ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕರು ಪ್ರಧಾನಿ ಮೋದಿ ಮತ್ತು ಅವರ ತಾಯಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಈ ಬಗ್ಗೆ ಕಾಂಗ್ರೆಸ್ ಕ್ಷಮೆ ಕೇಳಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಈ ಸಂಬಂಧ ವಿಡಿಯೋ ವೈರಲ್ ಆಗಿದ್ದು ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಮತ್ತು ತೇಜಸ್ವಿ ಯಾದವ್ ಅವರ ಬ್ಯಾನರ್ ಹೊಂದಿದ್ದ ವೇದಿಕೆಯಲ್ಲಿ ಕಾಂಗ್ರೆಸ್ ನಾಯಕರು ಪ್ರಧಾನಿ ಮೋದಿ ವಿರುದ್ಧ ಅವಾಚ್ಯ ಶಬ್ದ ಬಳಸಿ ನಿಂದಿಸಿರುವುದಾಗಿದೆ. ಹಾಗೆಯೇ ಅಲ್ಲಿನ ಟಿಕೆಟ್

ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಮಾತು: ಕಾಂಗ್ರೆಸ್ ಕ್ಷಮೆ ಯಾಚನೆಗೆ ಬಿಜೆಪಿ ಆಗ್ರಹ Read More »

ನನ್ನ ಮಾತುಗಳಲ್ಲಿ ತಪ್ಪು ಹುಡುಕುವುದೇ ಕೆಲವರ ಕೆಲಸವಾಗಿದೆ: ಡಿ.ಕೆ. ಶಿವಕುಮಾರ್

ಬೆಂಗಳೂರು: ಸತ್ಯ ಹೇಳಿದರೆ ಅದನ್ನು ಸಹಿಸುವ ‌ಶಕ್ತಿ ಕೆಲವರಿಗೆ ಇರುವುದಿಲ್ಲ. ಆದ್ದರಿಂದ ನಾನು ಮಾತನಾಡದೆ ಇರುವುದೇ ಉತ್ತಮ ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ. ಸದನವೂ ಸೇರಿದಂತೆ ನಾನು ಎಲ್ಲಿ ಏನೇ ಮಾತನಾಡಲಿ, ಅದರಲ್ಲಿ ಕೇವಲ ತಪ್ಪು ಕಂಡು ಹಿಡಿಯುವುದೇ ಬೇರೆಯವರ ಕೆಲಸವಾಗಿದೆ. ರಾಜಕೀಯದವರು, ಪ್ರಮೋದ ದೇವಿಯವರು, ಯದುವೀರ್ ಅವರು, ವಿಧಾನಸಭೆಯಲ್ಲಿ ಹೀಗೆ ನನ್ನ ಮಾತುಗಳನ್ನು ತಪ್ಪು ಹುಡುಕುವುದೇ ‌ಆಗಿದೆ ಎಂದಿದ್ದಾರೆ. ಈ ಕಾರಣದಿಂದ ನಾನು ಮಾತನಾಡದೆ ಇರುವುದೇ ಉತ್ತಮ ಎಂದು ಕಾಣುತ್ತದೆ. ಈ ವಿಚಾರಗಳನ್ನು

ನನ್ನ ಮಾತುಗಳಲ್ಲಿ ತಪ್ಪು ಹುಡುಕುವುದೇ ಕೆಲವರ ಕೆಲಸವಾಗಿದೆ: ಡಿ.ಕೆ. ಶಿವಕುಮಾರ್ Read More »

RSS ಸೇವಾ ಮನೋಭಾವ ಎಲ್ಲರಿಗೂ ಸ್ಪೂರ್ತಿ: ವಿವೇಕ್ ಅಗ್ನಿಹೋತ್ರಿ

ನವದೆಹಲಿ: RSS ಸಾಧನೆಗಳು, ಸೇವಾ ಮನೋಭಾವದಿಂದ ನಾವೆಲ್ಲರೂ ಸ್ಪೂರ್ತಿ ಪಡೆಯಬೇಕು ಎಂದು ಚಲನಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. RSS ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೇವೆಯ ಭಾಷೆ ಮೌನ, ಇದನ್ನು ನಾನು RSS ನಿಂದ ಕಲಿತಿದ್ದೇನೆ. ಮೌನದಿಂದಲೇ ದೇಶ ಸೇವೆ ಮಾಡುವುದು, ಜನ ಸೇವೆ ಮಾಡುವುದಕ್ಕಿಂತ ದೊಡ್ಡ ಪವಿತ್ರವಾದ ಕಾರ್ಯ ಬೇರೊಂದಿಲ್ಲ. ಈ ವೇದಿಕೆಗೆ ನಾನು ಒಬ್ಬ ಭಾರತೀಯನಾಗಿ, ಕಲಾವಿದನಾಗಿ ಬಂದಿದ್ದೇನೆ ಎಂದು ತಿಳಿಸಿದ್ದಾರೆ. ಅಗ್ನಿಹೋತ್ರಿ ಅವರು ‘ದಿ ಕಾಶ್ಮೀರ್ ಫೈಲ್ಸ್’, ‘ದಿ ತಾಷ್ಕೆಂಟ್

RSS ಸೇವಾ ಮನೋಭಾವ ಎಲ್ಲರಿಗೂ ಸ್ಪೂರ್ತಿ: ವಿವೇಕ್ ಅಗ್ನಿಹೋತ್ರಿ Read More »

ದೂರು ಹಿಂಪಡೆಯಲು ಮುಂದಾದ ಸುಜಾತ ಭಟ್: ಸಮ್ಮತಿ ನೀಡದ SIT

ಧರ್ಮಸ್ಥಳ: ತನ್ನ ಮಗಳು ಅನನ್ಯ ಭಟ್ ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ ಸುಜಾತ ಭಟ್ ಅವರು ಇಂದು SIT ತನಿಖೆಗೆ ಹಾಜರಾಗಿದ್ದಾರೆ‌. ಆ. 27 ರಂದು ಸುಜಾತ ಭಟ್ ಅವರನ್ನು SIT ಅಧಿಕಾರಿಗಳು ಬೆಳಗ್ಗೆ 10 ಗಂಟೆಯಿಂದ ರಾತ್ರಿ 9.30 ರ ವರೆಗೆ ವಿಚಾರಣೆ ನಡೆಸಿದ್ದರು. SIT ಅಧಿಕಾರಿಗಳು ಕಳೆದ ಮೂರು ದಿನಗಳಿಂದಲೂ ಸುಜಾತ ಭಟ್ ಅವರನ್ನು ವಿಚಾರಣೆ ನಡೆಸುತ್ತಿದ್ದು, ಇದರಿಂದ ಬೇಸತ್ತ ಅವರು ತಾವು ನೀಡಿರುವ ದೂರನ್ನು ಹಿಂಪಡೆಯುವುದಾಗಿಯೂ ಹೇಳಿದ್ದಾರೆ. ಆದರೆ SIT ಅಧಿಕಾರಿಗಳು

ದೂರು ಹಿಂಪಡೆಯಲು ಮುಂದಾದ ಸುಜಾತ ಭಟ್: ಸಮ್ಮತಿ ನೀಡದ SIT Read More »

ಹೆಲ್ಮೆಟ್ ಇಲ್ಲ, ಇಂಧನ ಇಲ್ಲ: ಯೋಗಿ ಸರ್ಕಾರದ ವಿಭಿನ್ನ ರಸ್ತೆ ಸುರಕ್ಷತಾ ಸಪ್ತಾಹ

ಲಕ್ನೋ: ಉತ್ತರ ಪ್ರದೇಶದ ಸಿ ಎಂ ಯೋಗಿ ಆದಿತ್ಯನಾಥ್ ಸರ್ಕಾರವು ಸೆ. 1 ರಿಂದ 30 ರ ವರೆಗೆ ರಾಜ್ಯಾದ್ಯಂತ ರಸ್ತೆ ಸುರಕ್ಷತಾ ಅಭಿಯಾನ ನಡೆಸಲಿದ್ದು, ಇದಕ್ಕೆ ಅನುಗುಣವಾಗಿ ‘ಹೆಲ್ಮೆಟ್ ಇಲ್ಲ, ಇಂಧನ ಇಲ್ಲ’ ಅಭಿಯಾನ ನಡೆಸಲು ಸರ್ಕಾರ ನಿರ್ಧರಿಸಿದೆ. ಈ ಅಭಿಯಾನದ ಅಡಿಯಲ್ಲಿ ಜಿಲ್ಲಾಧಿಕಾರಿಗಳು ರಸ್ತೆ ಸುರಕ್ಷತಾ ಸಮಿತಿಯ ಸಮನ್ವಯದಲ್ಲಿ ಪೊಲೀಸ್, ಸಾರಿಗೆ, ಕಂದಾಯ ಅಧಿಕಾರಿಗಳು ಮೋಟರ್ ವಾಹನ ಕಾಯ್ದೆಯಡಿ ದ್ವಿಚಕ್ರ ಸವಾರರು ಹೆಲ್ಮೆಟ್ ಕಡ್ಡಾಯ ನಿಯಮಗಳನ್ನು ಪಾಲನೆ ಮಾಡುವ ನಿಟ್ಟಿನಲ್ಲಿ ಜಂಟಿಯಾಗಿ ಕೆಲಸ ಮಾಡಲಿದ್ದಾರೆ.

ಹೆಲ್ಮೆಟ್ ಇಲ್ಲ, ಇಂಧನ ಇಲ್ಲ: ಯೋಗಿ ಸರ್ಕಾರದ ವಿಭಿನ್ನ ರಸ್ತೆ ಸುರಕ್ಷತಾ ಸಪ್ತಾಹ Read More »

ದೇವರಿಗೆ ಯಾವುದೇ ಧರ್ಮ ವಿ ಎಲ್ಲ: ಡಿ.ಕೆ. ಶಿವಕುಮಾರ್

ಬೆಂಗಳೂರು: ಗಾಳಿ, ಬೆಳಕು, ನೀರಿಗೆ ಹೇಗೆ ಯಾವುದೇ ಜಾತಿ ಧರ್ಮ ಇಲ್ಲವೋ ಹಾಗೆಯೇ ಯಾವುದೇ ದೇವರಿಗೂ ಸಹ ಧರ್ಮವಿಲ್ಲ. ಪ್ರಾರ್ಥನೆ ಯಾರೊಬ್ಬರ ‌ಸೊತ್ತು ಅಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ನಾನು ನಂಬಿದ ಗುರುಗಳು ಮಾನವ ಧರ್ಮದ ಮೂಲಕ ಜಗತ್ತಿಗೆ ಶಾಂತಿ ಎಂದು ಹೇಳಿದ್ದಾಗಿ ಅವರು ತಿಳಿಸಿದ್ದಾರೆ. ಚಾಮುಂಡೇಶ್ವರಿ ಎಲ್ಲಾ ಧರ್ಮದವರಿಗೂ ಆಶೀರ್ವಾದ ಮಾಡುವ ದೇವರು. ರಾಜವಂಶಸ್ಥರು ಮತ್ತು ಆಮೇಲೆ ಬಂದ ಸರ್ಕಾರ ಚಾಮುಂಡೇಶ್ವರಿಯನ್ನು ನಾಡ ದೇವಿ ಎಂದು ಕರೆದಿದ್ದಾರೆ. ಈ ದೇವಾಲಯ ಸಾರ್ವಜನಿಕರ ಆಸ್ತಿ.

ದೇವರಿಗೆ ಯಾವುದೇ ಧರ್ಮ ವಿ ಎಲ್ಲ: ಡಿ.ಕೆ. ಶಿವಕುಮಾರ್ Read More »

ಡಿ.ಕೆ. ಶಿವಕುಮಾರ್ ಕ್ಷಮೆ ಯಾಚನೆ: ಜೆಡಿಎಸ್ ಲೇವಡಿ

ಬೆಂಗಳೂರು: ಸದನದಲ್ಲಿ RSS ಗೀತೆ ಹಾಡಿ ಕಾಂಗ್ರೆಸ್ ಕೆಂಗಣ್ಣಿಗೆ ಗುರಿಯಾದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕ್ಷಮೆ ಕೇಳಿದ್ದು, ಅವರ ಈ ನಡೆಯನ್ನು JDS ಟೀಕಿಸಿದೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಲೇವಡಿ ಮಾಡಿ ಪೋಸ್ಟ್ ಮಾಡಿರುವ JDS, ಉಚ್ಛಾಟನೆಗೆ ಹೆದರಿ ಕ್ಷಮೆ ಯಾಚನೆ ಮಾಡಿದ ಉಪಮುಖ್ಯಮಂತ್ರಿ ಎಂದು ಕಾಲೆಳೆದಿದೆ. ಸದನದಲ್ಲಿ ಹುಲಿ, ಹೈಕಮಾಂಡ್ ಮುಂದೆ ಇಲಿ. ವಿಧಾನ ಸಭೆಯಲ್ಲಿ RSS ಗೀತೆ ಹಾಡಿ ಇಟಲಿ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದ ರಣಹೇಡಿ ಡಿಕೆಶಿ ಅಧಿಕಾರ ಉಳಿಸಿಕೊಳ್ಳಲು,

ಡಿ.ಕೆ. ಶಿವಕುಮಾರ್ ಕ್ಷಮೆ ಯಾಚನೆ: ಜೆಡಿಎಸ್ ಲೇವಡಿ Read More »

ಕಣಿವೆ ರಾಜ್ಯದಲ್ಲಿ ಮತ್ತೆ ಮೇಘಸ್ಪೋಟ: 4 ಸಾವು

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಧೋಡಾ ಜಿಲ್ಲೆಯಲ್ಲಿ ಭಾರೀ ಮೇಘಸ್ಪೋಟ ನಡೆದಿದ್ದು, ದಿಢೀರ್ ಪ್ರವಾಹದಲ್ಲಿ 4 ಮಂದಿ ಸಾವನ್ನಪ್ಪಿದ್ದಾರೆ. ಪ್ರವಾಹ ಕಾರಣದಿಂದ ಚೆನಾಬ್ ನದಿ ಉಕ್ಕಿ ಹರಿಯುತ್ತಿದ್ದು, ಭಾರೀ ಮಳೆಯ ಕಾರಣಕ್ಕೆ 10 ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. ಕಥುವಾ ಮತ್ತು ಕಿಶ್ತ್ವಾರ್‌ನಲ್ಲಿ ಇದೇ ರೀತಿಯ ಘಟನೆ ಸಂಭವಿಸಿದ ನಂತರ ಈಗ ಧೋಡಾ‌ದಲ್ಲಿಯೂ ಮೇಘಸ್ಪೋಟ ಸಂಭವಿಸಿರುವುದಾಗಿದೆ. ಜಮ್ಮು ಕಾಶ್ಮೀರದ ಹಲವಾರು ಪ್ರದೇಶಗಳಲ್ಲಿ ಭಾರೀ ಮಳೆಯಾಗಿವ ಸಾಧ್ಯತೆಯನ್ನು ಹವಾಮಾನ ಇಲಾಖೆ ನೀಡಿದ್ದು, ಆ ಬಳಿಕ ಈ ಘಟನೆ

ಕಣಿವೆ ರಾಜ್ಯದಲ್ಲಿ ಮತ್ತೆ ಮೇಘಸ್ಪೋಟ: 4 ಸಾವು Read More »

error: Content is protected !!
Scroll to Top