Uncategorized

ಯುಪಿಐ ಬಳಕೆಗೆ ಹೊಸ ರೂಲ್ಸ್

ನವದೆಹಲಿ: UPI ಬಳಕೆಯನ್ನು ಮತ್ತಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ತರಲಾಗಿದೆ. ಬ್ಯಾಂಕ್ ಖಾತೆಯಲ್ಲಿ ಬಾಕಿ ಉಳಿದ ಮೊತ್ತ ಪರಿಶೀಲನೆಗೆ ಮಿತಿ ಹಾಕಲಾಗಿದ್ದು, ನಿತ್ಯ 50 ಬಾರಿ ಮಾತ್ರವೇ ಪರಿಶೀಲನೆ ಮಾಡಬಹುದಾಗಿದೆ. ಆಫ್ ಪೀಕ್ ಅವರ್ ಅಥವಾ ಕಡಿಮೆ ವಹಿವಾಟಿನ ವೇಳೆ ಸ್ವಯಂ ಪಾವತಿಗಳು ನಡೆಯಲಿವೆ. ಯುಪಿಐ ಪಾವತಿ ವಿಫಲ ಅಥವಾ ಸ್ಥಗಿತವಾದ ಸಂದರ್ಭದಲ್ಲಿ ಈ ಪ್ರಕ್ರಿಯೆ ಯಾವ ಹಂತದಲ್ಲಿದೆ ಎಂದು ತಿಳಿಯಲು ಮೂರು ಮಿತಿಗಳನ್ನು ನೀಡಲಾಗಿದ್ದು, ಒಂದು ಮಿತಿ ರಿಂದ ಇನ್ನೊಂದಕ್ಕೆ 90 ನಿಮಿಷ […]

ಯುಪಿಐ ಬಳಕೆಗೆ ಹೊಸ ರೂಲ್ಸ್ Read More »

ಬಾಲಕನ ಅಪಹರಣ, ಕೊಲೆ: ಆರೋಪಿಗಳು ಪೊಲೀಸ್‌ ವಶಕ್ಕೆ

ಬನ್ನೇರುಘಟ್ಟ: ಬಾಲಕ ನಿಶ್ಚಿತ್‌ನನ್ನು ಅಪಹರಿಸಿ, ಪೆಟ್ರೋಲ್ ಹಾಕಿ ಸುಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಇಬ್ಬರು ಆರೋಪಿಗಳು ಪೊಲೀಸ್ ಬಲೆಗೆ ಬಿದ್ದಿದ್ದಾರೆ. ಆರೋಪಿಗಳಾದ ಗುರುಮೂರ್ತಿ ಮತ್ತು ಗೋಪಾಲಕೃಷ್ಣ ಅವರ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ. ಬನ್ನೇರುಘಟ್ಟದ ಕಗ್ಗಲಿಪುರದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿರುವ ಸ್ಥಳದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಬಂಧಿಸಲು ತೆರಳಿದ್ದು, ಈ ಸಂದರ್ಭ ಆರೋಪಿಗಳು ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ಈ ವೇಳೆ ಪೊಲೀಸರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿರುವುದಾಗಿದೆ. ಬಂಧಿತ ಆರೋಪಿಗಳಿಗೆ

ಬಾಲಕನ ಅಪಹರಣ, ಕೊಲೆ: ಆರೋಪಿಗಳು ಪೊಲೀಸ್‌ ವಶಕ್ಕೆ Read More »

ಹತ್ತು ಗಂಟೆಗಳ ಕಾಲ ಕೆಲಸ ಮಾಡಲು ಕಾರ್ಮಿಕರಿಗೆ ಒತ್ತಡ ಹೇರದಂತೆ ರಾಜ್ಯ ಸರ್ಕಾರದಿಂದ ಖಡಕ್ ಸೂಚನೆ

ಬೆಂಗಳೂರು: ಕೆಲಸಗಾರರನ್ನು ಹತ್ತು ಗಂಟೆಗಳ ಕಾಲ ಕೆಲಸ ಮಾಡುವಂತೆ ಯಾವುದೇ ರೀತಿಯಲ್ಲಿ ಒತ್ತಡ ಹೇರದಂತೆ ಕಂಪೆನಿಗಳಿಗೆ ಸರ್ಕಾರ ಎಚ್ಚರಿಕೆ ನೀಡಿದೆ. ಕೇಂದ್ರ ಸರ್ಕಾರ ಕಾರ್ಮಿಕರ ಕೆಲಸದ ಅವಧಿಯನ್ನು 10 ಗಂಟೆಗೆ ವಿಸ್ತರಿಸುವಂತೆ ಸೂಚಿಸಿ ಎಲ್ಲಾ ರಾಜ್ಯಗಳಿಗೂ ಪ್ರಸ್ತಾವನೆ ಕಳುಹಿಸಿತ್ತು. ಇದಕ್ಕೆ ಕರ್ನಾಟಕದಲ್ಲಿ ಕಾರ್ಮಿಕ ಸಂಘಗಳು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದವು. ಈ ಸಂಬಂಧ ರಾಜ್ಯ ಸರ್ಕಾರ ಮತ್ತು ಕಾರ್ಮಿಕ ಸಂಘಟನೆಗಳು ಸಾಕಷ್ಟು ಚರ್ಚೆ ನಡೆಸಿದ್ದವು. ಕಾರ್ಮಿಕರು ಈ ನೀತಿಗೆ ವಿರೋಧ ವ್ಯಕ್ತಪಡಿಸಿದರೂ, ಕೈಗಾರಿಕೋದ್ಯಮಿಗಳು ಮಾತ್ರ ಈ ನೀತಿಗೆ ವಿರೋಧ

ಹತ್ತು ಗಂಟೆಗಳ ಕಾಲ ಕೆಲಸ ಮಾಡಲು ಕಾರ್ಮಿಕರಿಗೆ ಒತ್ತಡ ಹೇರದಂತೆ ರಾಜ್ಯ ಸರ್ಕಾರದಿಂದ ಖಡಕ್ ಸೂಚನೆ Read More »

ತಿರುಪತಿ ದೇಗುಲದ ಆವರಣದಲ್ಲಿ ರೀಲ್ಸ್ ಮಾಡಿದರೆ ಕಾನೂನು ಕ್ರಮ: TTD ಸೂಚನೆ

ತಿರುಪತಿ: TTDಆಡಳಿತ ಮಂಡಳಿಯು ತಿರುಪತಿ ತಿರುಮಲ ಶ್ರೀ ವೆಂಕಟೇಶ್ವರ ದೇಗುಲದ ಆವರಣ ಮತ್ತು ಅದಕ್ಕೆ ಸಂಬಂಧಿಸಿದ ಸ್ಥಳಗಳಲ್ಲಿ ರೀಲ್ಸ್‌ಗಳನ್ನು ‌ಮಾಡದಂತೆ ಭಕ್ತರಿಗೆ ಸೂಚನೆ ನೀಡಿದೆ. ಕೆಲವು ವ್ಯಕ್ತಿಗಳು ದೇವಾಲಯದ ಆವರಣದಲ್ಲಿ ಕಿಡಿಗೇಡಿತನ, ಅನುಚಿತ ವರ್ತನೆಗಳ ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳ ಮೂಲಕ ಹರಿಯ ಬಿಡುತ್ತಿದ್ದಾರೆ. ಇದರಿಂದ ಆಧ್ಯಾತ್ಮಿಕ ವಾತಾವರಣವನ್ನು ಕಾಪಾಡಿಕೊಳ್ಳುವುದು ಸವಾಲಿನ ಕೆಲಸವಾಗುತ್ತಿದೆ ಎಂದು TTD ಪ್ರಕಟಣೆಯಲ್ಲಿ ತಿಳಿಸಿದೆ. ದೇವಾಲಯದ ಆವರಣದಲ್ಲಿ ಆಕ್ಷೇಪಾರ್ಹ ರೀತಿಯಲ್ಲಿ ನಡೆದುಕೊಳ್ಳುವವರ ‌ವಿರುದ್ಧ ಭದ್ರತಾ ಸಿಬ್ಬಂದಿ ಕಣ್ಗಾವಲು ಇರಲಿದ್ದು, ನಿಯಮ ಮುರಿದರೆ

ತಿರುಪತಿ ದೇಗುಲದ ಆವರಣದಲ್ಲಿ ರೀಲ್ಸ್ ಮಾಡಿದರೆ ಕಾನೂನು ಕ್ರಮ: TTD ಸೂಚನೆ Read More »

ಪಿಎಂ ಕಿಸಾನ್ ‌ಸಂಪದ ಯೋಜನೆಗೆ 6520 ಕೋ. ರೂ.: ಕೇಂದ್ರ ಸಚಿವ ಸಂಪುಟ ಅನುಮೋದನೆ

ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಂಪದ ಯೋಜನೆಗಾಗಿ ಹೆಚ್ಚುವರಿ 1920 ಕೋಟಿ ರೂ. ಗಳ ಜೊತೆಗೆ ಒಟ್ಟು 6520 ಕೋಟಿ ರೂ. ವೆಚ್ಚಕ್ಕೆ ಪ್ರಧಾನ ಮಂತ್ರಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆ ಅನುಮೋದನೆ ನೀಡಿದೆ. ಇಂಟಿಗ್ರೇಟೆಡ್ ಕೋಲ್ಡ್ ಚೈನ್ ಮತ್ತು ಮೌಲ್ಯವರ್ಧನ ಮೂಲಸೌಕರ್ಯ (ICCVAI) ಅಡಿಯಲ್ಲಿ 50 ಬಹು ಉತ್ಪನ್ನ ಆಹಾರ ವಿಕಿರಣ ಘಟಕಗಳ ಸ್ಥಾಪನೆಗೆ ಬೆಂಬಲ ನೀಡಲು 1000 ಕೋಟಿ ರೂ. ಗಳು ಮತ್ತು ಪ್ರಧಾನ ಮಂತ್ರಿ ಕಿಸಾನ್ ಸಂಪದ ಯೋಜನೆಯ (PMKSY) ಆಹಾರ

ಪಿಎಂ ಕಿಸಾನ್ ‌ಸಂಪದ ಯೋಜನೆಗೆ 6520 ಕೋ. ರೂ.: ಕೇಂದ್ರ ಸಚಿವ ಸಂಪುಟ ಅನುಮೋದನೆ Read More »

ಪತಿ, ಅತ್ತೆಯಿಂದ ಕಿರುಕುಳ: ಗರ್ಭಿಣಿ ಆತ್ಮಹತ್ಯೆ

ತ್ರಿಶೂರ್: ಪತಿಯ ಮನೆಯವರ ಕಿರುಕುಳಕ್ಕೆ ನೊಂದು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದ ವೆಲ್ಲಂಗುಲರ್‌ನಲ್ಲಿ ‌ನಡೆದಿದೆ. ಫಸೀಲಾ(23) ಮೃತ ದುರ್ದೈವಿ. ಕಳೆದ ಜುಲೈ 29 ರಂದು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಫಸೀಲಾ ಮೃತದೇಹ ‌ಪತ್ತೆಯಾಗಿತ್ತು.‌ ಈ ಬಗ್ಗೆ ಫಸೀಲಾ ಕುಟುಂಬದವರು ಆಕೆಯ ಪತಿ‌ ನೌಫಲ್ ಮತ್ತು ಅತ್ತೆ ರಮ್ಲಾ ‌ವಿರುದ್ಧ ಪ್ರಕರಣ ದಾಖಲು ಮಾಡಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಫಸೀಲಾ ತನ್ನ ತವರು ಮನೆಯವರಿಗೆ ಸಂದೇಶ ಕಳುಹಿಸಿದ್ದು, ನಾನು ಎರಡನೇ ಬಾರಿ ಗರ್ಭಿಣಿಯಾಗಿದ್ದೇನೆ. ನನ್ನ ಪತಿ

ಪತಿ, ಅತ್ತೆಯಿಂದ ಕಿರುಕುಳ: ಗರ್ಭಿಣಿ ಆತ್ಮಹತ್ಯೆ Read More »

ಧರ್ಮಸ್ಥಳ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆ ಇಲ್ಲ: ಡಾ. ಜಿ. ಪರಮೇಶ್ವರ್

ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ತಪ್ಪಿತಸ್ಥರು ಯಾರೇ ಆಗಿದ್ದರೂ ಅವರನ್ನು ರಕ್ಷಿಸುವ ಪ್ರಶ್ನೆ ಇಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ. ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸದ್ಯ SIT ತಂಡದ ಮುಖ್ಯಸ್ಥರಾಗಿರುವ ಡಾ. ಪ್ರಣವ್ ಮೊಹಂತಿ ಅವರನ್ನು ಕೇಂದ್ರ ಸೇವೆಗೆ ಕರೆಸಿಕೊಳ್ಳುವುದು ಮತ್ತು ಧರ್ಮಸ್ಥಳ ಪ್ರಕರಣ ಇವೆರಡರ ನಡುವೆ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಧರ್ಮಸ್ಥಳ ಪ್ರಕರಣದಲ್ಲಿ ಸತ್ಯ ಏನಿದೆಯೋ‌ ಅದು ಹೊರಕ್ಕೆ ಬರಬೇಕು. ಹಾಗೆಯೇ ಇದರಲ್ಲಿ ಯಾರೇ ತಪ್ಪು ಮಾಡಿರಲಿ, ಅವರನ್ನು

ಧರ್ಮಸ್ಥಳ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆ ಇಲ್ಲ: ಡಾ. ಜಿ. ಪರಮೇಶ್ವರ್ Read More »

ಹೆತ್ತಮ್ಮನನ್ನೇ ಅಮಾನವೀಯವಾಗಿ ಕೊಂದು ಸುಟ್ಟು ಹಾಕಿದ ಪಾಪಿ ಕುಡುಕ ಪುತ್ರ

ಚಿಕ್ಕಮಗಳೂರು: ಹಕ್ಕಿಮಕ್ಕಿ ಗ್ರಾಮದಲ್ಲಿ ಹೆತ್ತ ತಾಯಿಯನ್ನೇ ಕುಡುಕ ಪುತ್ರನೊಬ್ಬ ಕೊಂದು ಸುಟ್ಟು ಹಾಕಿದ ಅಮಾನವೀಯ ಘಟನೆ ನಡೆದಿದೆ. ಆರೋಪಿಯನ್ನು ಪವನ್ ಎಂದು ಗುರುತಿಸಲಾಗಿದೆ. ಮೃತರನ್ನು ಭವಾನಿ ಎಂದು ಗುರುತಿಸಲಾಗಿದೆ. ಕೂಲಿ ಕೆಲಸ ಮಾಡಿ ತಾಯಿಯ ಜೊತೆಗೆ ವಾಸಿಸುತ್ತಿದ್ದ ಈತ ಕಳೆದ ರಾತ್ರಿ ಹೆತ್ತಮ್ಮ ನನ್ನು ಕೊಂದು ಬೆಂಕಿ ಹಾಕಿದ್ದಾನೆ. ಬಳಿಕ ಅಲ್ಲೇ ಪ್ರಜ್ಞೆ ಇಲ್ಲದವನಂತೆ ಮಲಗಿ ನಿದ್ರಿಸಿದ್ದಾನೆ. ಮೃತ ಭವಾನಿ ಅವರ ದೇಹ ಸಂಪೂರ್ಣ ಸುಟ್ಟು ಹೋಗಿದ್ದು ಕೇವಲ ಕೈ ಮತ್ತು ಕಾಲುಗಳಷ್ಟೇ ಉಳಿದಿವೆ. ಸ್ಥಳೀಯರ ಮಾಹಿತಿಯ

ಹೆತ್ತಮ್ಮನನ್ನೇ ಅಮಾನವೀಯವಾಗಿ ಕೊಂದು ಸುಟ್ಟು ಹಾಕಿದ ಪಾಪಿ ಕುಡುಕ ಪುತ್ರ Read More »

ಸಿಂಧೂ ಒಪ್ಪಂದ ಮುರಿಯುವ ಮೂಲಕ ನೆಹರೂ ನೀತಿಗಳ ತಪ್ಪನ್ನು ತಿದ್ದಲಾಗಿದೆ: ಎಸ್. ಜೈಶಂಕರ್

ನವದೆಹಲಿ: ಆಪರೇಷನ್ ಸಿಂಧೂರ್‌ಗೆ ‌ಸಂಬಂಧಿಸಿದ ಹಾಗೆ ಕೇಂದ್ರ ಸಚಿವ ಎಸ್. ಜೈಶಂಕರ್ ಅವರು ರಾಜ್ಯಸಭೆಯಲ್ಲಿ ಮಾತನಾಡಿದ್ದಾರೆ. ಗಡಿಯಾಚೆಗಿನ ಭಯೋತ್ಪಾದನೆಯನ್ನು ಭಾರತ 1947 ರಿಂದಲೂ ಎದುರಿಸುತ್ತಲೇ ಬಂದಿದೆ. ಪ್ರಸ್ತುತ ಪ್ರಧಾನಿ ಮೋದಿ ಸರ್ಕಾರ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತ ಮಾಡುವ ಮೂಲಕ ನೆಹರೂ ಅವರ ತಪ್ಪನ್ನು ಸರಿ ಮಾಡಿದ್ದಾರೆ. ಅಂದು ಪ್ರಧಾನಿ ನೆಹರೂ ಪಾಕ್ ಜೊತೆ ಒಪ್ಪಂದ ಮಾಡಿಕೊಂಡದ್ದು ತುಷ್ಠೀಕರಣಕ್ಕಾಗಿ, ಶಾಂತಿಗಾಗಿ ಅಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ. ಸಿಂಧೂ ಜಲ ಒಪ್ಪಂದವೇ ಒಂದು ವಿಶಿಷ್ಟ ಒಪ್ಪಂದ. ಒಂದು ದೇಶದ

ಸಿಂಧೂ ಒಪ್ಪಂದ ಮುರಿಯುವ ಮೂಲಕ ನೆಹರೂ ನೀತಿಗಳ ತಪ್ಪನ್ನು ತಿದ್ದಲಾಗಿದೆ: ಎಸ್. ಜೈಶಂಕರ್ Read More »

ಪಾಕಿಸ್ತಾನ ಗುಂಡು ಹೊಡೆಯಿತು, ನಾವು ಬಿರಿಯಾನಿ ಕೊಟ್ಟೆವು: ಕಾಂಗ್ರೆಸ್ ವಿರುದ್ಧ ನಡ್ಡಾ ವ್ಯಂಗ್ಯ

ನವದೆಹಲಿ: ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಭಯೋತ್ಪಾದಕ ದಾಳಿಗಳ ಮೇಲೆ ನಿರಂತರ ನಿಷ್ಕ್ರಿಯತೆ ಹೊಂದಿತ್ತು ಎಂದು ಕೇಂದ್ರ ಸಚಿವ ಜೆ.ಪಿ. ನಡ್ಡಾ ಆರೋಪಿಸಿದ್ದಾರೆ. ರಾಜ್ಯಸಭೆಯಲ್ಲಿ ಆಪರೇಷನ್ ಸಿಂಧೂರ್ ಕುರಿತಂತೆ ಮಾತನಾಡಿದ ಅವರು, ಪಾಕ್ ಪದೇ ಪದೇ ಭಯೋತ್ಪಾದಕ ದಾಳಿಗಳನ್ನು ನಡೆಸಿತು. ಆದರೆ ಕಾಂಗ್ರೆಸ್ ಅವರಿಗೆ ವಿಶ್ವಾಸ ವೃದ್ಧಿಸುವ ಕೆಲಸಗಳನ್ನು ಮಾಡಿತು. ಪಾಕ್ ನಮ್ಮ ಮೇಲೆ ಬಾಂಬ್‌ಗಳನ್ನು ಹಾಕುತ್ತಿದ್ದರೆ, ಕಾಂಗ್ರೆಸ್ ಪಾಕಿಸ್ತಾನಕ್ಕೆ ಬಿರಿಯಾನಿ ‌ತಿನ್ನಿಸುವ ಕೆಲಸದಲ್ಲಿ ತೊಡಗಿತ್ತು ಎಂದು ವ್ಯಂಗ್ಯವಾಡಿದ್ದಾರೆ. ಇಂಡಿಯನ್ ಮುಜಾಹಿದ್ದೀನ್ 2008 ರಲ್ಲಿ ನಡೆಸಿದ

ಪಾಕಿಸ್ತಾನ ಗುಂಡು ಹೊಡೆಯಿತು, ನಾವು ಬಿರಿಯಾನಿ ಕೊಟ್ಟೆವು: ಕಾಂಗ್ರೆಸ್ ವಿರುದ್ಧ ನಡ್ಡಾ ವ್ಯಂಗ್ಯ Read More »

error: Content is protected !!
Scroll to Top