Uncategorized

RCB ವಿಜಯೋತ್ಸವದಲ್ಲಿ ಕಾಲ್ತುಳಿತ: ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಆರ್. ಅಶೋಕ್

ಬೆಂಗಳೂರು: ಸರ್ಕಾರ ಆಯೋಜಿಸಿದ RCB ವಿಜಯೋತ್ಸವ ಕಾರ್ಯಕ್ರಮದಲ್ಲಿ 11 ಮಂದಿ ಮೃತಪಟ್ಚಿದ್ದಾರೆ. ಸರ್ಕಾರದಿಂದ ತಪ್ಪು ನಡೆದಿದ್ದು, ಕ್ಷಮಾಪಣೆ ಕೇಳುವಂತೆ ವಿಪಕ್ಷ ‌ನಾಯಕ R. ಅಶೋಕ್ ಅವರು ಆಗ್ರಹಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದ ಹಾಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಉತ್ತರ ನೀಡಿದ್ದು, ಈ ಸಂದರ್ಭದಲ್ಲಿ ಅಶೋಕ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವುದಾಗಿದೆ. ಈ ದುರಂತದಲ್ಲಿ ಸರ್ಕಾರದಿಂದ ತಪ್ಪಾಗಿದೆ‌. ಕ್ಷಮೆಯನ್ನೂ ನೀವು ಕೇಳಿಲ್ಲ. ವರದಿಯಲ್ಲಿ ಎಲ್ಲಾ ತಪ್ಪುಗಳನ್ನು ಪೊಲೀಸ್ ಆಯುಕ್ತರ ಮೇಲೆಯೇ ಹಾಕಲಾಗಿದೆ. ಅವರನ್ನು ಅಮಾನತು ಮಾಡಿ‌ […]

RCB ವಿಜಯೋತ್ಸವದಲ್ಲಿ ಕಾಲ್ತುಳಿತ: ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಆರ್. ಅಶೋಕ್ Read More »

ತಿಮರೋಡಿ ಬಂಧನದ ಬಗ್ಗೆ ಬಿ.ವೈ. ವಿಜಯೇಂದ್ರ ಹೇಳಿದ್ದೇನು?

ಬೆಂಗಳೂರು: ಮಹೇಶ್ ಶೆಟ್ಟಿ ತಿಮರೋಡಿ ಬಂಧನ ವಿಚಾರಕ್ಕೆ ಸಂಬಂಧಿಸಿದ ಹಾಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ತಿಮರೋಡಿ ಬಂಧನದ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆಯನ್ನು ನಾವು ನೀಡುವುದಿಲ್ಲ. ಸರ್ಕಾರ ಕಾನೂನಿನನ್ವಯ ಕ್ರಮ ಕೈಗೊಂಡಿದ್ದು, ಇದರಲ್ಲಿ ನಾವು ಮಧ್ಯಪ್ರವೇಶ ಮಾಡುವ ಮಾತಿಲ್ಲ ಎಂದು ಹೇಳಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ತಿಮರೋಡಿಯನ್ನು ಬ್ರಹ್ಮಾವರದ ಪೊಲೀಸರು ಬಂಧಿಸಿರುವುದಾಗಿದೆ‌.

ತಿಮರೋಡಿ ಬಂಧನದ ಬಗ್ಗೆ ಬಿ.ವೈ. ವಿಜಯೇಂದ್ರ ಹೇಳಿದ್ದೇನು? Read More »

ವಿಪಕ್ಷಗಳ ಪ್ರತಿಭಾನ್ವಿತ ನಾಯಕರ ಉಪಸ್ಥಿತಿಯಿಂದ ರಾಹುಲ್ ಗಾಂಧಿ ಕಂಗಾಲಾಗಿದ್ದಾರೆ: ಪ್ರಧಾನಿ ಮೋದಿ

ನವದೆಹಲಿ: ವಿರೋಧ ಪಕ್ಷಗಳ ಪ್ರತಿಭಾನ್ವಿತ ಯುವ ನಾಯಕರ ಉಪಸ್ಥಿತಿ ರಾಹುಲ್ ಗಾಂಧಿಗೆ ಅಸುರಕ್ಷಿತ ಮತ್ತು ಆತಂಕ ಸೃಷ್ಟಿ ಮಾಡುತ್ತಿದೆ ಎಂದು ಪ್ರಧಾನಿ ಮೋದಿ ಅವರು ವ್ಯಂಗ್ಯ ಮಾಡಿದ್ದಾರೆ. ಎನ್‌ಡಿಎ ಸದಸ್ಯರ ಉಪಹಾರ ಸಭೆಯಲ್ಲಿ ಮಾತನಾಡಿದ ಅವರು, ವಿಪಕ್ಷದಲ್ಲಿ ಹಲವಾರು ಪ್ರತಿಭಾನ್ವಿತ ನಾಯಕರಿದ್ದರೂ ಅವರಿಗೆ ಕೌಟುಂಬಿಕ ಅಭದ್ರತೆಯ ಕಾರಣಕ್ಕೆ ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಹಾಗೆಯೇ, ಇತ್ತೀಚೆಗೆ ಅಂತ್ಯವಾದ ಸಂಸತ್ ಅಧಿವೇಶನ ಉತ್ತಮವಾಗಿತ್ತು. ಅದರಲ್ಲಿ ಹಲವಾರು ಪ್ರಮುಖ ಮಸೂದೆಗಳು ಅಂಗೀಕಾರಗೊಂಡಿವೆ ಎಂದರು. ಹಾಗೆಯೇ‌ ಪ್ರಮುಖ ಮಸೂದೆಗಳ ‌ಮೇಲಿನ ಚರ್ಚೆಯಿಂದ ಹೊರಗುಳಿದ

ವಿಪಕ್ಷಗಳ ಪ್ರತಿಭಾನ್ವಿತ ನಾಯಕರ ಉಪಸ್ಥಿತಿಯಿಂದ ರಾಹುಲ್ ಗಾಂಧಿ ಕಂಗಾಲಾಗಿದ್ದಾರೆ: ಪ್ರಧಾನಿ ಮೋದಿ Read More »

ಧರ್ಮಸ್ಥಳ ಪ್ರಕರಣ: AI ವಿಡಿಯೋ ಮೂಲಕ ಸಾಮಾಜಿಕ ಸ್ವಾಸ್ಥ್ಯ ಕದಡಿದ ಯೂಟ್ಯೂಬರ್ ಬಂಧನ ಸಾಧ್ಯತೆ

ಮಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ AI ವಿಡಿಯೋ ಮೂಲಕ ವಿವಾದ ಸೃಷ್ಟಿ ಮಾಡಿದ್ದ ಯೂಟ್ಯೂಬರ್ ಸಮೀರ್ ಬಂಧನಕ್ಕೆ ಧರ್ಮಸ್ಥಳ ಪೊಲೀಸರು ಮುಂದಾಗಿದ್ದಾರೆ. ಈ ಬಗ್ಗೆ ಹಲವು ಬಾರಿ ಸಮೀರ್‌ಗೆ ನೊ ಟೀ ಸ್ ನೀಡಲಾಗಿದ್ದರೂ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಆತನ ವಿರುದ್ಧ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿರುವುದಾಗಿದೆ. ಈ ಹಿನ್ನೆಲೆಯಲ್ಲಿ ಧರ್ಮಸ್ಥಳ ಪೊಲೀಸರು ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ಸಮೀರ್‌ನ ಬಾಡಿಗೆ ಮನೆಯನ್ನು ಸುತ್ತುವರೆದಿದೆ ಒಂದು ಮೂಲಗಳು ತಿಳಿಸಿವೆ. ಆತನನ್ನು ಬಂಧಿಸಿ ಧರ್ಮಸ್ಥಳಕ್ಕೆ ಕರೆದು ತರುವ ಸಾಧ್ಯತೆ ಇದೆ.

ಧರ್ಮಸ್ಥಳ ಪ್ರಕರಣ: AI ವಿಡಿಯೋ ಮೂಲಕ ಸಾಮಾಜಿಕ ಸ್ವಾಸ್ಥ್ಯ ಕದಡಿದ ಯೂಟ್ಯೂಬರ್ ಬಂಧನ ಸಾಧ್ಯತೆ Read More »

ಕದನದಲ್ಲಿ ವಿಪಕ್ಷಗಳ ಕೋಲಾಹಲ: ಅನಿರ್ಧಿಷ್ಟಾವಧಿಗೆ ಕಲಾಪ ‌ಮುಂದೂಡಿಕೆ

ನವದೆಹಲಿ: ಮುಂಗಾರು ಅಧಿವೇಶನವು ವಿರೋಧ ಪಕ್ಷಗಳ ಪ್ರತಿಭಟನೆ, ಕಲಾಪಕ್ಕೆ ಅಡ್ಡಿ, ಸಭಾತ್ಯಾಗ ಮೊದಲಾದ ಘಟನೆಗಳ ಜೊತೆಗೆ ಮುಕ್ತಾಯವಾಗಿದ್ದು, ಲೋಕಸಭಾ ಅಧಿವೇಶನವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆಯ ಬಗ್ಗೆ ವಿಪಕ್ಷಗಳು ಕೋಲಾಹಲ ಸೃಷ್ಟಿ ಮಾಡಿದ್ದು, ಇದರಿಂದಾಗಿ ಮಧ್ಯಾಹ್ನ 12 ರ ವರೆಗೆ ಕಲಾಪವನ್ನು ‌ಸ್ಪೀಕರ್ ಮುಂದೂಡಿ ಆದೇಶ ನೀಡಿದ್ದರು. ಇಂದು ಅಧಿವೇಶನದ ಕೊನೆಯ ದಿನವಾಗಿದ್ದು ಈ ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿ ಕದನದಲ್ಲಿ ಗದ್ದಲ ಎಬ್ಬಿಸುವವರಿಗೆ ಸ್ಪೀಕರ್ ಓಂ ಬಿರ್ಲಾ ಅವರು ತಿರುಗೇಟು ನೀಡಿದ್ದಾರೆ. ವಿಪಕ್ಷಗಳ ಗದ್ದಲದ ನಡುವೆಯೂ

ಕದನದಲ್ಲಿ ವಿಪಕ್ಷಗಳ ಕೋಲಾಹಲ: ಅನಿರ್ಧಿಷ್ಟಾವಧಿಗೆ ಕಲಾಪ ‌ಮುಂದೂಡಿಕೆ Read More »

ಮಾಜಿ ಉಪರಾಷ್ಟ್ರಪತಿ ಧನ್ಕರ್ ಮೌನದ ಕಾರಣವೇನು?: ರಾಗಾ ಪ್ರಶ್ನೆ

ನವದೆಹಲಿ: ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರು ತಮ್ಮ ರಾಜೀನಾಮೆಯ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇ ಇದ್ದು, ಈ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನೆ ಎತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಧನ್ಕರ್ ರಾಜೀನಾಮೆ ನೀಡಿದ ಬಳಿಕ ಕೆ.ಸಿ.‌ ವೇಣುಗೋಪಾಲ್ ಅವರು ತನಗೆ ಕರೆ ಮಾಡಿ ಈ ವಿಷಯವನ್ನು ತಿಳಿಸಿದರು. ಅವರ ರಾಜೀನಾಮೆಯ ಹಿಂದೆ ದೊಡ್ಡ ಕಥೆ ಇದೆ. ಆ‌ಕಥೆ ಏನು ಎಂಬುದು ನಮ್ಮಲ್ಲಿ ಹಲವರಿಗೆ ತಿಳಿದಿರಬಹುದು ಎಂದಿದ್ದಾರೆ. ವಿಪಕ್ಷಗಳ ಉಪರಾಷ್ಟ್ರಪತಿ ಅಭ್ಯರ್ಥಿ ಬಿ.‌ ಸುದರ್ಶನ್

ಮಾಜಿ ಉಪರಾಷ್ಟ್ರಪತಿ ಧನ್ಕರ್ ಮೌನದ ಕಾರಣವೇನು?: ರಾಗಾ ಪ್ರಶ್ನೆ Read More »

ಪ್ರಧಾನಿ ಮೋದಿ ಸರ್ಕಾರದ ಮಸೂದೆಗೆ ಬೆಂಬಲ ಸೂಚಿಸಿದ ಶಶಿ ತರೂರ್

ಮತ್ತೆ ಕಾಂಗ್ರೆಸ್ ಕೆಂಗಣ್ಣಿಗೆ ಗುರಿಯಾದ ತರೂರ್ ನವದೆಹಲಿ: ಕಾಂಗ್ರೆಸ್ ಪಕ್ಷಕ್ಕೆ ಮಜುಗರವಾಗುವಂತೆ ಈ ಹಿಂದೆಯೂ ಹಲವಾರು ಬಾರಿ ನಡೆದುಕೊಂಡಿರುವ ಶಶಿ ತರೂರ್ ಈಗ ಮತ್ತೊಮ್ಮೆ ಸ್ವಪಕ್ಷದ ‌ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕೇಂದ್ರದ ಪ್ರಧಾನಿ ಮೋದಿ ಸರ್ಕಾರ ಮಂಡನೆ ಮಾಡಿದ ಕ್ರಿಮಿನಲ್ ಪ್ರಕರಣಗಳಲ್ಲಿ ಸತತ ಮೂವತ್ತು ದಿನಗಳ ವರೆಗೆ ಬಂಧನಕ್ಕೆ ಒಳಗಾಗುವ ಪ್ರಧಾನಿ, ಮುಖ್ಯಮಂತ್ರಿಗಳು ಸೇರಿದಂತೆ ಕೇಂದ್ರ ಮತ್ತು ರಾಜ್ಯಗಳ ಸಚಿವರನ್ನು ಸಾಂವಿಧಾನಿಕ ಸ್ಥಾನದಿಂದ ಪದಚ್ಯುತಿ ಮಾಡುವ ಮಸೂದೆಯನ್ನು ಕಾಂಗ್ರೆಸ್ ಸೇರಿದಂತೆ ಇತರ ವಿರೋಧ ಪಕ್ಷಗಳು ವಿರೋಧಿಸಿವೆ. ಆದರೆ ಕಾಂಗ್ರೆಸ್

ಪ್ರಧಾನಿ ಮೋದಿ ಸರ್ಕಾರದ ಮಸೂದೆಗೆ ಬೆಂಬಲ ಸೂಚಿಸಿದ ಶಶಿ ತರೂರ್ Read More »

ಪ್ರಧಾನಿ ಸಮ್ಮುಖದಲ್ಲಿ ಉಪರಾಷ್ಟ್ರಪತಿ ಸ್ಥಾನಕ್ಕೆ ನಾಮಪತ್ರ ‌ಸಲ್ಲಿಸಿದ ಸಿ.ಪಿ. ರಾಧಾಕೃಷ್ಣನ್

ನವದೆಹಲಿ: NDA ಒಕ್ಕೂಟದ ಉಪರಾಷ್ಟ್ರಪತಿ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಅವರ ನಾಮನಿರ್ದೇಶನದ ಬಳಿಕ ಮಾತನಾಡಿದ ಪ್ರಧಾನಿ ಮೋದಿ ಅವರು, ಇವರು ಅತ್ಯುತ್ತಮ ಉಪರಾಷ್ಟ್ರಪತಿ ಆಗುತ್ತಾರೆ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಉಪರಾಷ್ಟ್ರಪತಿ ಸ್ಥಾನಕ್ಕೆ ಅಭ್ಯರ್ಥಿಯಾಗಿ ಸಿ.ಪಿ. ರಾಧಾಕೃಷ್ಣನ್ ಅವರು ನಾಮಪತ್ರ ಸಲ್ಲಿಕೆ ಮಾಡುವಾಗ ಅವರ ಜೊತೆ ಸಚಿವರು, ಪಕ್ಷದ ಸಹೊದ್ಯೋಗಿಗಳು, NDA ನಾಯಕರು ಇದ್ದರು. ಅವರು ಅತ್ಯುತ್ತಮ ಉಪರಾಷ್ಟ್ರಪತಿ ಆಗುತ್ತಾರೆ ಮತ್ತು ದೇಶದ ಪ್ರಗತಿಯತ್ತ ‌ನಮ್ಮ ಪ್ರಯಾಣವನ್ನು

ಪ್ರಧಾನಿ ಸಮ್ಮುಖದಲ್ಲಿ ಉಪರಾಷ್ಟ್ರಪತಿ ಸ್ಥಾನಕ್ಕೆ ನಾಮಪತ್ರ ‌ಸಲ್ಲಿಸಿದ ಸಿ.ಪಿ. ರಾಧಾಕೃಷ್ಣನ್ Read More »

ಪ್ರಧಾನಿ, ಮುಖ್ಯಮಂತ್ರಿ ಪದಚ್ಯುತಿ ಮಸೂದೆ ಮಂಡನೆ: ವಿಪಕ್ಷಗಳಿಂದ ‌ಸದನದ ಬಾವಿಗಿಳಿದು ಪ್ರತಿಭಟನೆ

ನವದೆಹಲಿ: ಪ್ರಧಾನಿ, ಮುಖ್ಯಮಂತ್ರಿಗಳು, ಸಚಿವರು ಯಾರೇ ಆಗಿರಲಿ‌, ಅವರು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಲ್ಲಿ ಅಥವಾ ಮೂವತ್ತು ದಿನಗಳಿಗಿಂತ ಹೆಚ್ಚು ಸಮಯ ಜೈಲು ಶಿಕ್ಷೆ ಅನುಭವಿಸಿದ್ದಲ್ಲಿ ಅಂತಹವರನ್ನು ಪದಚ್ಯುತಗೊಳಿಸುವ ನಿಬಂಧನೆಯೊಂದಿಗೆ ಹೊಸ ಮಸೂದೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಡನೆ ಮಾಡಿದ್ದಾರೆ. ಈ ಮಸೂದೆ ಮಂಡನೆಯಾಗುತ್ತಿದ್ದಂತೆ ವಿಪಕ್ಷ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟಿಸಿದ್ದು, ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಇನ್ನೂ ಕೆಲವು ಮಂದಿ ಮಸೂದೆಯ ಪ್ರತಿಯನ್ನು ಹರಿದು ಅಮಿತ್ ಶಾ

ಪ್ರಧಾನಿ, ಮುಖ್ಯಮಂತ್ರಿ ಪದಚ್ಯುತಿ ಮಸೂದೆ ಮಂಡನೆ: ವಿಪಕ್ಷಗಳಿಂದ ‌ಸದನದ ಬಾವಿಗಿಳಿದು ಪ್ರತಿಭಟನೆ Read More »

ಪುನರ್ವಸತಿ ಕಾರ್ಯಕರ್ತರ ಗೌರವಧನ ಮೊತ್ತ ಹೆಚ್ಚಳ: ಲಕ್ಷ್ಮೀ ಹೆಬ್ಬಾಳ್ಕರ್

ಬೆಂಗಳೂರು: ಗ್ರಾಮೀಣ ಪುನರ್ವಸತಿ ಯೋಜನೆಯಡಿ ನಿಯಮಾನುಸಾರವಾಗಿ ಪುನರ್ವಸತಿ ಕಾರ್ಯಕರ್ತರನ್ನು ಗೌರವಧನದ ಆಧಾರದಲ್ಲಿ ನೇಮಕ ಮಾಡಲಾಗಿದ್ದು, ಅವರನ್ನು ಖಾಯಂಗೊಳಿಸಲು ಅವಕಾಶ ಇಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಮುಂಗಾರು ಅಧಿವೇಶನದ ಏಳನೇ ದಿನದ ಮುಂಗಾರು ಅಧಿವೇಶನದಲ್ಲಿ ಮಾತನಾಡಿದ ಅವರು, ಗ್ರಾಮೀಣ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರ ಮಾಸಿಕ ಗೌರವ ಧನವನ್ನು 9000 ರೂ. ಗಳಿಂದ 10000 ಮತ್ತು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರ ಮಾಸಿಕ ಗೌರವ ಧನವನ್ನು 15000 ರೂ. ಗಳಿಂದ 16000 ರೂ. ಗಳಿಗೆ ಏರಿಕೆ ಮಾಡಲಾಗಿದೆ

ಪುನರ್ವಸತಿ ಕಾರ್ಯಕರ್ತರ ಗೌರವಧನ ಮೊತ್ತ ಹೆಚ್ಚಳ: ಲಕ್ಷ್ಮೀ ಹೆಬ್ಬಾಳ್ಕರ್ Read More »

error: Content is protected !!
Scroll to Top