Uncategorized

ಭಾರತ ಯಾವುದೇ ಶತ್ರುಗಳನ್ನು ಶಿಕ್ಷಿಸದೆ ಬಿಡುವುದಿಲ್ಲ: ಪ್ರಧಾನಿ ಮೋದಿ

ನವದೆಹಲಿ: ಪಾಕಿಸ್ತಾನದ ವಿರುದ್ಧ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ದೇಶದ ರಕ್ಷಣಾ ನೀತಿಯಲ್ಲಿ ಹೊಸ ರೇಖೆಯನ್ನು ಎಳೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ. ಈ ಕಾರ್ಯಾಚರಣೆಯ ಮೂಲಕ ಭಾರತ ಯಾವುದೇ ಶತ್ರುಗಳನ್ನು ಶಿಕ್ಷಿಸದೆ ಬಿಡುವುದಿಲ್ಲ. ಹಾಗೆಯೇ ಉಗ್ರರು ಯಾವುದೇ ನರಕದಲ್ಲಿ ಅವಿತಿದ್ದರೂ ಭಾರತದ ಕ್ಷಿಪಣಿಗಳು ಅವರನ್ನು ಹೊಡೆದುರುಳಿಸುತ್ತವೆ ಎನ್ನುವ ಸ್ಪಷ್ಟ ಸಂದೇಶವನ್ನು ರವಾನೆ ಮಾಡಿದೆ ಎಂದು ಹೇಳಿದ್ದಾರೆ. ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ನಡೆದ ಭಯೋತ್ಪಾದಕ ದಾಳಿಯ ಸಮಯದಲ್ಲಿ ಉಗ್ರರನ್ನು ಭೂಮಿಯಿಂದ ಧೂಳೀಪಟ ಮಾಡುವ ಪ್ರತಿಜ್ಞೆ […]

ಭಾರತ ಯಾವುದೇ ಶತ್ರುಗಳನ್ನು ಶಿಕ್ಷಿಸದೆ ಬಿಡುವುದಿಲ್ಲ: ಪ್ರಧಾನಿ ಮೋದಿ Read More »

ಈ ಬಾರಿಯ ದಸಾರದಲ್ಲಿ ‌ರಾರಾಜಿಸಲಿದೆಯೇ ಏರ್ ಶೋ?

ಮೈಸೂರು: ಈ ಬಾರಿಯ ನಾಡ ಹಬ್ಬ ದಸರಾ ಹಬ್ಬದ ಮೆರುಗು ಹೆಚ್ಚಿಸುವ ಸಲುವಾಗಿ ವೈಮಾನಿಕ ಪ್ರದರ್ಶನ (ಏರ್ ಶೋ) ಆಯೋಜನೆ ಮಾಡಲಾಗುತ್ತಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಬರೆದಿರುವ ಧನ್ಯವಾದ ಪತ್ರದಲ್ಲಿ ಈ ಮಾಹಿತಿ ಲಭ್ಯವಾಗಿದೆ. ಆದರೆ ಈ ಏರ್ ಶೋ ಎಲ್ಲಿ ಮತ್ತು ಯಾವಾಗ ಆಯೋಜನೆ ಮಾಡಲಾಗುತ್ತದೆ ಎನ್ನುವ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ‌. ಎರಡು ತಿಂಗಳ ಹಿಂದೆ ಈ ವಿಷಯಕ್ಕೆ ಸಂಬಂಧಿಸಿದ ಹಾಗೆ ಸಿಎಂ ಸಿದ್ದರಾಮಯ್ಯ

ಈ ಬಾರಿಯ ದಸಾರದಲ್ಲಿ ‌ರಾರಾಜಿಸಲಿದೆಯೇ ಏರ್ ಶೋ? Read More »

ಪಿಒಪಿ ಗಣೇಶನ ಮೂರ್ತಿ ಬಳಸದಂತೆ ಈಶ್ವರ ಖಂಡ್ರೆ ಸೂಚನೆ

ಬೆಂಗಳೂರು: ಈ ಬಾರಿಯ ಗಣೇಶೋತ್ಸವಕ್ಕೆ ಪರಿಸರ ಸ್ನೇಹಿ ಗಣೇಶನ ಮೂರ್ತಿಗಳನ್ನೇ ಬಳಕೆ ಮಾಡುವಂತೆ ಸಚಿವ ಈಶ್ವರ ಖಂಡ್ರೆ ಅವರು ಮನವಿ ಮಾಡಿದ್ದು, ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿಗಳ ಬಳಕೆ ಮಾಡುವುದಿಲ್ಲ ಎಂದು ಗಣೇಶ ಕೂರಿಸುವವರಿಂದ ಮುಚ್ಚಳಿಕೆ ಬರೆಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮೊದಲಾದ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಣ್ಣಿನ ಗಣಪತಿಯನ್ನೇ ‌ಪೂಜೆಗೆ ಕೂರಿಸುತ್ತಾರೆ. ಹಾಗಿರುವಾಗ ಇದು ಉಳಿದ ಜಿಲ್ಲೆಗಳಲ್ಲಿ ಏಕೆ ಸಾಧ್ಯವಿಲ್ಲ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಆಡಳಿತ

ಪಿಒಪಿ ಗಣೇಶನ ಮೂರ್ತಿ ಬಳಸದಂತೆ ಈಶ್ವರ ಖಂಡ್ರೆ ಸೂಚನೆ Read More »

RCB ವಿಜಯೋತ್ಸವದಲ್ಲಿ ಕಾಲ್ತುಳಿತ: ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಆರ್. ಅಶೋಕ್

ಬೆಂಗಳೂರು: ಸರ್ಕಾರ ಆಯೋಜಿಸಿದ RCB ವಿಜಯೋತ್ಸವ ಕಾರ್ಯಕ್ರಮದಲ್ಲಿ 11 ಮಂದಿ ಮೃತಪಟ್ಚಿದ್ದಾರೆ. ಸರ್ಕಾರದಿಂದ ತಪ್ಪು ನಡೆದಿದ್ದು, ಕ್ಷಮಾಪಣೆ ಕೇಳುವಂತೆ ವಿಪಕ್ಷ ‌ನಾಯಕ R. ಅಶೋಕ್ ಅವರು ಆಗ್ರಹಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದ ಹಾಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಉತ್ತರ ನೀಡಿದ್ದು, ಈ ಸಂದರ್ಭದಲ್ಲಿ ಅಶೋಕ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವುದಾಗಿದೆ. ಈ ದುರಂತದಲ್ಲಿ ಸರ್ಕಾರದಿಂದ ತಪ್ಪಾಗಿದೆ‌. ಕ್ಷಮೆಯನ್ನೂ ನೀವು ಕೇಳಿಲ್ಲ. ವರದಿಯಲ್ಲಿ ಎಲ್ಲಾ ತಪ್ಪುಗಳನ್ನು ಪೊಲೀಸ್ ಆಯುಕ್ತರ ಮೇಲೆಯೇ ಹಾಕಲಾಗಿದೆ. ಅವರನ್ನು ಅಮಾನತು ಮಾಡಿ‌

RCB ವಿಜಯೋತ್ಸವದಲ್ಲಿ ಕಾಲ್ತುಳಿತ: ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಆರ್. ಅಶೋಕ್ Read More »

ತಿಮರೋಡಿ ಬಂಧನದ ಬಗ್ಗೆ ಬಿ.ವೈ. ವಿಜಯೇಂದ್ರ ಹೇಳಿದ್ದೇನು?

ಬೆಂಗಳೂರು: ಮಹೇಶ್ ಶೆಟ್ಟಿ ತಿಮರೋಡಿ ಬಂಧನ ವಿಚಾರಕ್ಕೆ ಸಂಬಂಧಿಸಿದ ಹಾಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ತಿಮರೋಡಿ ಬಂಧನದ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆಯನ್ನು ನಾವು ನೀಡುವುದಿಲ್ಲ. ಸರ್ಕಾರ ಕಾನೂನಿನನ್ವಯ ಕ್ರಮ ಕೈಗೊಂಡಿದ್ದು, ಇದರಲ್ಲಿ ನಾವು ಮಧ್ಯಪ್ರವೇಶ ಮಾಡುವ ಮಾತಿಲ್ಲ ಎಂದು ಹೇಳಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ತಿಮರೋಡಿಯನ್ನು ಬ್ರಹ್ಮಾವರದ ಪೊಲೀಸರು ಬಂಧಿಸಿರುವುದಾಗಿದೆ‌.

ತಿಮರೋಡಿ ಬಂಧನದ ಬಗ್ಗೆ ಬಿ.ವೈ. ವಿಜಯೇಂದ್ರ ಹೇಳಿದ್ದೇನು? Read More »

ವಿಪಕ್ಷಗಳ ಪ್ರತಿಭಾನ್ವಿತ ನಾಯಕರ ಉಪಸ್ಥಿತಿಯಿಂದ ರಾಹುಲ್ ಗಾಂಧಿ ಕಂಗಾಲಾಗಿದ್ದಾರೆ: ಪ್ರಧಾನಿ ಮೋದಿ

ನವದೆಹಲಿ: ವಿರೋಧ ಪಕ್ಷಗಳ ಪ್ರತಿಭಾನ್ವಿತ ಯುವ ನಾಯಕರ ಉಪಸ್ಥಿತಿ ರಾಹುಲ್ ಗಾಂಧಿಗೆ ಅಸುರಕ್ಷಿತ ಮತ್ತು ಆತಂಕ ಸೃಷ್ಟಿ ಮಾಡುತ್ತಿದೆ ಎಂದು ಪ್ರಧಾನಿ ಮೋದಿ ಅವರು ವ್ಯಂಗ್ಯ ಮಾಡಿದ್ದಾರೆ. ಎನ್‌ಡಿಎ ಸದಸ್ಯರ ಉಪಹಾರ ಸಭೆಯಲ್ಲಿ ಮಾತನಾಡಿದ ಅವರು, ವಿಪಕ್ಷದಲ್ಲಿ ಹಲವಾರು ಪ್ರತಿಭಾನ್ವಿತ ನಾಯಕರಿದ್ದರೂ ಅವರಿಗೆ ಕೌಟುಂಬಿಕ ಅಭದ್ರತೆಯ ಕಾರಣಕ್ಕೆ ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಹಾಗೆಯೇ, ಇತ್ತೀಚೆಗೆ ಅಂತ್ಯವಾದ ಸಂಸತ್ ಅಧಿವೇಶನ ಉತ್ತಮವಾಗಿತ್ತು. ಅದರಲ್ಲಿ ಹಲವಾರು ಪ್ರಮುಖ ಮಸೂದೆಗಳು ಅಂಗೀಕಾರಗೊಂಡಿವೆ ಎಂದರು. ಹಾಗೆಯೇ‌ ಪ್ರಮುಖ ಮಸೂದೆಗಳ ‌ಮೇಲಿನ ಚರ್ಚೆಯಿಂದ ಹೊರಗುಳಿದ

ವಿಪಕ್ಷಗಳ ಪ್ರತಿಭಾನ್ವಿತ ನಾಯಕರ ಉಪಸ್ಥಿತಿಯಿಂದ ರಾಹುಲ್ ಗಾಂಧಿ ಕಂಗಾಲಾಗಿದ್ದಾರೆ: ಪ್ರಧಾನಿ ಮೋದಿ Read More »

ಧರ್ಮಸ್ಥಳ ಪ್ರಕರಣ: AI ವಿಡಿಯೋ ಮೂಲಕ ಸಾಮಾಜಿಕ ಸ್ವಾಸ್ಥ್ಯ ಕದಡಿದ ಯೂಟ್ಯೂಬರ್ ಬಂಧನ ಸಾಧ್ಯತೆ

ಮಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ AI ವಿಡಿಯೋ ಮೂಲಕ ವಿವಾದ ಸೃಷ್ಟಿ ಮಾಡಿದ್ದ ಯೂಟ್ಯೂಬರ್ ಸಮೀರ್ ಬಂಧನಕ್ಕೆ ಧರ್ಮಸ್ಥಳ ಪೊಲೀಸರು ಮುಂದಾಗಿದ್ದಾರೆ. ಈ ಬಗ್ಗೆ ಹಲವು ಬಾರಿ ಸಮೀರ್‌ಗೆ ನೊ ಟೀ ಸ್ ನೀಡಲಾಗಿದ್ದರೂ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಆತನ ವಿರುದ್ಧ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿರುವುದಾಗಿದೆ. ಈ ಹಿನ್ನೆಲೆಯಲ್ಲಿ ಧರ್ಮಸ್ಥಳ ಪೊಲೀಸರು ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ಸಮೀರ್‌ನ ಬಾಡಿಗೆ ಮನೆಯನ್ನು ಸುತ್ತುವರೆದಿದೆ ಒಂದು ಮೂಲಗಳು ತಿಳಿಸಿವೆ. ಆತನನ್ನು ಬಂಧಿಸಿ ಧರ್ಮಸ್ಥಳಕ್ಕೆ ಕರೆದು ತರುವ ಸಾಧ್ಯತೆ ಇದೆ.

ಧರ್ಮಸ್ಥಳ ಪ್ರಕರಣ: AI ವಿಡಿಯೋ ಮೂಲಕ ಸಾಮಾಜಿಕ ಸ್ವಾಸ್ಥ್ಯ ಕದಡಿದ ಯೂಟ್ಯೂಬರ್ ಬಂಧನ ಸಾಧ್ಯತೆ Read More »

ಕದನದಲ್ಲಿ ವಿಪಕ್ಷಗಳ ಕೋಲಾಹಲ: ಅನಿರ್ಧಿಷ್ಟಾವಧಿಗೆ ಕಲಾಪ ‌ಮುಂದೂಡಿಕೆ

ನವದೆಹಲಿ: ಮುಂಗಾರು ಅಧಿವೇಶನವು ವಿರೋಧ ಪಕ್ಷಗಳ ಪ್ರತಿಭಟನೆ, ಕಲಾಪಕ್ಕೆ ಅಡ್ಡಿ, ಸಭಾತ್ಯಾಗ ಮೊದಲಾದ ಘಟನೆಗಳ ಜೊತೆಗೆ ಮುಕ್ತಾಯವಾಗಿದ್ದು, ಲೋಕಸಭಾ ಅಧಿವೇಶನವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆಯ ಬಗ್ಗೆ ವಿಪಕ್ಷಗಳು ಕೋಲಾಹಲ ಸೃಷ್ಟಿ ಮಾಡಿದ್ದು, ಇದರಿಂದಾಗಿ ಮಧ್ಯಾಹ್ನ 12 ರ ವರೆಗೆ ಕಲಾಪವನ್ನು ‌ಸ್ಪೀಕರ್ ಮುಂದೂಡಿ ಆದೇಶ ನೀಡಿದ್ದರು. ಇಂದು ಅಧಿವೇಶನದ ಕೊನೆಯ ದಿನವಾಗಿದ್ದು ಈ ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿ ಕದನದಲ್ಲಿ ಗದ್ದಲ ಎಬ್ಬಿಸುವವರಿಗೆ ಸ್ಪೀಕರ್ ಓಂ ಬಿರ್ಲಾ ಅವರು ತಿರುಗೇಟು ನೀಡಿದ್ದಾರೆ. ವಿಪಕ್ಷಗಳ ಗದ್ದಲದ ನಡುವೆಯೂ

ಕದನದಲ್ಲಿ ವಿಪಕ್ಷಗಳ ಕೋಲಾಹಲ: ಅನಿರ್ಧಿಷ್ಟಾವಧಿಗೆ ಕಲಾಪ ‌ಮುಂದೂಡಿಕೆ Read More »

ಮಾಜಿ ಉಪರಾಷ್ಟ್ರಪತಿ ಧನ್ಕರ್ ಮೌನದ ಕಾರಣವೇನು?: ರಾಗಾ ಪ್ರಶ್ನೆ

ನವದೆಹಲಿ: ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರು ತಮ್ಮ ರಾಜೀನಾಮೆಯ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇ ಇದ್ದು, ಈ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನೆ ಎತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಧನ್ಕರ್ ರಾಜೀನಾಮೆ ನೀಡಿದ ಬಳಿಕ ಕೆ.ಸಿ.‌ ವೇಣುಗೋಪಾಲ್ ಅವರು ತನಗೆ ಕರೆ ಮಾಡಿ ಈ ವಿಷಯವನ್ನು ತಿಳಿಸಿದರು. ಅವರ ರಾಜೀನಾಮೆಯ ಹಿಂದೆ ದೊಡ್ಡ ಕಥೆ ಇದೆ. ಆ‌ಕಥೆ ಏನು ಎಂಬುದು ನಮ್ಮಲ್ಲಿ ಹಲವರಿಗೆ ತಿಳಿದಿರಬಹುದು ಎಂದಿದ್ದಾರೆ. ವಿಪಕ್ಷಗಳ ಉಪರಾಷ್ಟ್ರಪತಿ ಅಭ್ಯರ್ಥಿ ಬಿ.‌ ಸುದರ್ಶನ್

ಮಾಜಿ ಉಪರಾಷ್ಟ್ರಪತಿ ಧನ್ಕರ್ ಮೌನದ ಕಾರಣವೇನು?: ರಾಗಾ ಪ್ರಶ್ನೆ Read More »

ಪ್ರಧಾನಿ ಮೋದಿ ಸರ್ಕಾರದ ಮಸೂದೆಗೆ ಬೆಂಬಲ ಸೂಚಿಸಿದ ಶಶಿ ತರೂರ್

ಮತ್ತೆ ಕಾಂಗ್ರೆಸ್ ಕೆಂಗಣ್ಣಿಗೆ ಗುರಿಯಾದ ತರೂರ್ ನವದೆಹಲಿ: ಕಾಂಗ್ರೆಸ್ ಪಕ್ಷಕ್ಕೆ ಮಜುಗರವಾಗುವಂತೆ ಈ ಹಿಂದೆಯೂ ಹಲವಾರು ಬಾರಿ ನಡೆದುಕೊಂಡಿರುವ ಶಶಿ ತರೂರ್ ಈಗ ಮತ್ತೊಮ್ಮೆ ಸ್ವಪಕ್ಷದ ‌ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕೇಂದ್ರದ ಪ್ರಧಾನಿ ಮೋದಿ ಸರ್ಕಾರ ಮಂಡನೆ ಮಾಡಿದ ಕ್ರಿಮಿನಲ್ ಪ್ರಕರಣಗಳಲ್ಲಿ ಸತತ ಮೂವತ್ತು ದಿನಗಳ ವರೆಗೆ ಬಂಧನಕ್ಕೆ ಒಳಗಾಗುವ ಪ್ರಧಾನಿ, ಮುಖ್ಯಮಂತ್ರಿಗಳು ಸೇರಿದಂತೆ ಕೇಂದ್ರ ಮತ್ತು ರಾಜ್ಯಗಳ ಸಚಿವರನ್ನು ಸಾಂವಿಧಾನಿಕ ಸ್ಥಾನದಿಂದ ಪದಚ್ಯುತಿ ಮಾಡುವ ಮಸೂದೆಯನ್ನು ಕಾಂಗ್ರೆಸ್ ಸೇರಿದಂತೆ ಇತರ ವಿರೋಧ ಪಕ್ಷಗಳು ವಿರೋಧಿಸಿವೆ. ಆದರೆ ಕಾಂಗ್ರೆಸ್

ಪ್ರಧಾನಿ ಮೋದಿ ಸರ್ಕಾರದ ಮಸೂದೆಗೆ ಬೆಂಬಲ ಸೂಚಿಸಿದ ಶಶಿ ತರೂರ್ Read More »

error: Content is protected !!
Scroll to Top