Uncategorized

ಮಾಸ್ಕ್‌ಮ್ಯಾನ್ ಬಂಧನ: ಗಿರೀಶ್ ಮಟ್ಟಣ್ಣನವರ್ ಹೇಳಿದ್ದೇನು?

ಧರ್ಮಸ್ಥಳ: ನೂರಾರು ಶವಗಳನ್ನು ಹೂತಿಡಲಾಗಿದೆ ಎಂಬ ಪ್ರಕರಣದ ಪ್ರಮುಖ ವ್ಯಕ್ತಿ ದೂರುದಾರ ‌ಮಾಸ್ಕ್‌ಮ್ಯಾನ್ ಚೆನ್ನಯ್ಯನ ಬಂಧನವನ್ನು ಗಿರೀಶ್ ಮಟ್ಟಣ್ಣನವರ್ ಸ್ವಾಗತಿಸಿದ್ದಾರೆ. ಚೆನ್ನಯ್ಯನ ಬಂಧನ ಉತ್ತಮ ಬೆಳವಣಿಗೆ. ಆತನನ್ನು ಬಂಧಿಸಿದಕೆ ಸಾಲದು. ಆತನ ಮಂಪರು ಪರೀಕ್ಷೆ ಸಹ ಮಾಡಬೇಕು ಎಂದು ಹೇಳಿದ್ದಾರೆ. ಈ ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ ಎಲ್ಲಾ ಷಡ್ಯಂತ್ರಗಳ ಉತ್ತರವನ್ನು SIT ಅಧಿಕಾರಿಗಳೇ ಕೊಡುತ್ತಾರೆ. ಇಲ್ಲಿ ನನ್ನ ಹೆಸರೂ ಸಹ ಬರಬಹುದು. SIT ಅಧಿಕಾರಿಗಳು ಕರೆದರೆ ನಾನು ಅವನ ಮತ್ತು ನನ್ನ ನಡುವೆ ಏನು ಸಂಬಂಧ ಇದೆ […]

ಮಾಸ್ಕ್‌ಮ್ಯಾನ್ ಬಂಧನ: ಗಿರೀಶ್ ಮಟ್ಟಣ್ಣನವರ್ ಹೇಳಿದ್ದೇನು? Read More »

ಧರ್ಮಸ್ಥಳದ ಬಗ್ಗೆ ಅಪಪ್ರಚಾರ: ವಿಚಾರಣೆಗೆ ಹಾಜರಾಗಲು ಸಮೀರ್‌ಗೆ ನೊಟೀಸ್ ನೀಡಿದ ಪೊಲೀಸರು

ಬಳ್ಳಾರಿ: ಧರ್ಮಸ್ಥಳಕ್ಕೆ ಅಪಚಾರ ಎಸಗಿದ ಪ್ರಕರಣದಲ್ಲಿ ಯೂಟ್ಯೂಬರ್ ಸಮೀರ್‌‌ಗೆ ನೊಟೀಸ್ ನೀಡಲಾಗಿದ್ದು, ಆತನ ಬಳ್ಳಾರಿಯಲ್ಲಿರುವ ಮನೆಗೆ ಪೊಲೀಸರು ನೊಟೀಸ್ ಹಚ್ಚಿ ಬಂದಿದ್ದಾರೆ. ಈ ನೊಟೀಸ್‌ನಲ್ಲಿ ಬೆಳ್ತಂಗಡಿ ಪೊಲೀಸರು ಸಮೀರ್‌ಗೆ ನಾಳೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಸಮೀರನ ಆಧಾರ್ ಕಾರ್ಡ್‌ನಲ್ಲಿ ಸಮೀರನ ವಿಳಾಸ ಬಳ್ಳಾರಿ ಎಂದು ನಮೂದಾಗಿದ್ದು, ಈ ಹಿನ್ನೆಲೆಯಲ್ಲಿ ಬಳ್ಳಾರಿ ಮತ್ತು ಬೆಂಗಳೂರು ಮನೆಗೆ ನೊಟೀಸ್ ನೀಡಿದ್ದಾರೆ.

ಧರ್ಮಸ್ಥಳದ ಬಗ್ಗೆ ಅಪಪ್ರಚಾರ: ವಿಚಾರಣೆಗೆ ಹಾಜರಾಗಲು ಸಮೀರ್‌ಗೆ ನೊಟೀಸ್ ನೀಡಿದ ಪೊಲೀಸರು Read More »

ತಿಮರೋಡಿಗೆ ಷರತ್ತುಬದ್ಧ ಜಾಮೀನು ಮಂಜೂರು

ಬೆಂಗಳೂರು: ಬಿಜೆಪಿ ನಾಯಕ ಬಿ. ಎಲ್. ಸಂತೋಷ್ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ಆರೋಪದಲ್ಲಿ ಪೊಲೀಸರಿಂದ ಬಂಧಿಸಲ್ಪಟ್ಟ ಮಹೇಶ್ ಶೆಟ್ಟಿ ತಿಮರೋಡಿಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ. ಬಿ.ಎಲ್. ಸಂತೋಷ್ ಅವರನ್ನು ಅವಹೇಳನ ಮಾಡಿದ ಆರೋಪದಲ್ಲಿ ‌ತಿಮರೋಡಿಯನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದರು. ಆ ಬಳಿಕ ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ಈಗ ಜಾಮೀನು ಅರ್ಜಿ ವಿಚಾರಣೆ ನಡೆಸಿ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ತಿಮರೋಡಿ ಅವರ ಆರೋಗ್ಯದ ಹಿನ್ನೆಲೆ ಅವರಿಗೆ

ತಿಮರೋಡಿಗೆ ಷರತ್ತುಬದ್ಧ ಜಾಮೀನು ಮಂಜೂರು Read More »

ಒಂದೊಂದೇ ಸತ್ಯಗಳು ಹೊರ ಬರುತ್ತಿವೆ: ಡಾ. ಡಿ. ವೀರೇಂದ್ರ ಹೆಗ್ಗಡೆ

ದೇಗುಲದ ಸೋಷಿಯಲ್ ಮೀಡಿಯಾದಲ್ಲಿ ‌ಶಿವ ರುದ್ರತಾಂಡವ ಚಿತ್ರ ಅಪ್ಲೋಡ್ ಧರ್ಮಸ್ಥಳ: ನೂರಾರು ಶವಗಳನ್ನು ಹೂಳಲಾಗಿದೆ ಎನ್ನುವ ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ SIT ದೂರುದಾರ ಮುಸುಕುಧಾರಿ ‌ಚೆನ್ನಯ್ಯನನ್ನೇ ಬಂಧಿಸಿದ್ದು, ಆತನಿಗೆ 10 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಪ್ರಕರಣದ ಬಗ್ಗೆ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಮಾತನಾಡಿದ್ದು, ಈ ಪ್ರಕರಣ SIT ತನಿಖೆಯಲ್ಲಿದ್ದು, ಹೆಚ್ಚೇನು ‌ಮಾತನಾಡುವುದಿಲ್ಲ. ಒಂದೊಂದೇ ಸತ್ಯಗಳು ಹೊರ ಬರುತ್ತಿದ್ದು, ಇದು ಸಂತಸ ನೀಡಿದೆ ಎಂದಿದ್ದಾರೆ. ಎಲ್ಲಾ ಆರೋಪಗಳು ಈಗ

ಒಂದೊಂದೇ ಸತ್ಯಗಳು ಹೊರ ಬರುತ್ತಿವೆ: ಡಾ. ಡಿ. ವೀರೇಂದ್ರ ಹೆಗ್ಗಡೆ Read More »

ತನಿಖೆ ಮುಗಿಯದೆ ಏನನ್ನೂ ಹೇಳಲಾಗದು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಜಿ. ಪರಮೇಶ್ವರ್ ಮಾತು

ಬೆಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ದೂರುದಾರ ಮುಸುಕುಧಾರಿ ಪೊಲೀಸ್ ಕಸ್ಟಡಿಯಲ್ಲಿದ್ದಾನೆ. ಈ ಸಂಬಂಧ ತನಿಖೆ ಪ್ರಗತಿಯಲ್ಲಿರುವ ಕಾರಣ ಯಾವುದೇ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ. ಉಡುಪಿಯಲ್ಲಿ ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, SIT ತನಿಖೆ ಆಂತ್ಯವಾಗುತ್ತದೆ ಎಂದು ಹೇಳಲಾಗದು. ಈ ಪ್ರಕರಣದ ಹಿಂದಿನ ಜಾಲವನ್ನು ಪತ್ತೆ ಮಾಡಲಾಗುವುದು. SIT ತನಿಖೆಯ ಅಂತಿಮ ವರದಿ ಬರುವವರೆಗೆ ಏನನ್ನೂ ಹೇಳಲಾಗದು ಎಂದು ತಿಳಿಸಿದ್ದಾರೆ. ಸುಜಾತ ಭಟ್ ಪ್ರಕರಣ

ತನಿಖೆ ಮುಗಿಯದೆ ಏನನ್ನೂ ಹೇಳಲಾಗದು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಜಿ. ಪರಮೇಶ್ವರ್ ಮಾತು Read More »

ತಿಮರೋಡಿ 2 ಗಂಟೆಗಳ ಕಾಲ ಪೊಲೀಸ್ ವಶಕ್ಕೆ: ನ್ಯಾಯಾಲಯದ ಆದೇಶ

ಉಡುಪಿ: ಬಿಜೆಪಿ ನಾಯಕ ಬಿ. ಎಲ್. ಸಂತೋಷ್ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಆರೋಪಿ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು 2 ಗಂಟೆಗಳ ಕಾಲ ಪೊಲೀಸ್ ವಶಕ್ಕೆ ನೀಡಿ ಉಡುಪಿಯ ಹೆಚ್ಚುವರಿ ಸಿವಿಲ್ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯ ಆದೇಶ ನೀಡಿದೆ. ತಿಮರೋಡಿಯನ್ನು ಪ್ರಕರಣದ ತನಿಖೆಗಾಗಿ ತಮ್ಮ ವಶಕ್ಕೆ ನೀಡುವಂತೆ ಬ್ರಹ್ಮಾವರದ ಪೊಲೀಸರು ಕೋರ್ಟ್‌ಗೆ ಮನವಿ ಮಾಡಿದ್ದರು. ಅದರಂತೆ ತಿಮರೋಡಿಯನ್ನು ‌ಒಂದು ಗಂಟೆಯ ಒಳಗಾಗಿ ನ್ಯಾಯಾಲಕ್ಕೆ ಹಾಜರುಪಡಿಸಬೇಕು ಎಂದು ನ್ಯಾಯಾಧೀಶರು ಸೂಚಿಸಿದರು. ಅದರಂತೆ 1.30

ತಿಮರೋಡಿ 2 ಗಂಟೆಗಳ ಕಾಲ ಪೊಲೀಸ್ ವಶಕ್ಕೆ: ನ್ಯಾಯಾಲಯದ ಆದೇಶ Read More »

RSS ಗುಣಗಾನ ‌ಮಾಡಿ ಮತ್ತೆ ಸುದ್ದಿಯಾದ ‌ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: ಈ ಹಿಂದೆ ಸದನದಲ್ಲಿ RSS ಗೀತೆ ಹಾಡಿ ಅಚ್ಚರಿಗೆ ‌ಕಾರಣವಾಗಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಈಗ RSS ಗುಣಗಾನ ‌ಮಾಡಿ ಮತ್ತೆ ಚರ್ಚೆಗೆ ಗ್ರಾಸರಾಗಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ಕೆಲವೊಮ್ಮೆ ಕೆಲವೊಂದು ಸಂಸ್ಥೆಗಳಲ್ಲಿ ಒಳ್ಳೆಯ ಗುಣಗಳಿರುತ್ತವೆ. ಅವುಗಳನ್ನು ನಾವು ಗಮನಿಸಬೇಕು ಅಲ್ಲವೇ. ನೇರವಾಗಿ ಮತ್ತು ದಿಟ್ಟವಾಗಿ ‌ಮಾತನಾಡುವುದು ನಮ್ಮ ಗುಣ. ಬೇರೆಯವರಲ್ಲಿನ ಒಳ್ಳೆಯ ಗುಣವನ್ನು ನಾವು ಗಮನಿಸಿದ್ದೇವೆ. ಅದನ್ನೇ RSS ವಿಷಯದಲ್ಲೂ ತಾವು ಮಾಡಿದ್ದಾಗಿ ಹೇಳಿದ್ದಾರೆ. ನಾನು ನನ್ನದೇ ರೀತಿಯಲ್ಲಿ ಪ್ರತಿಯೊಂದು ರಾಜಕೀಯ

RSS ಗುಣಗಾನ ‌ಮಾಡಿ ಮತ್ತೆ ಸುದ್ದಿಯಾದ ‌ಡಿಸಿಎಂ ಡಿ.ಕೆ. ಶಿವಕುಮಾರ್ Read More »

ಧರ್ಮಸ್ಥಳ ಪ್ರಕರಣದ ಮಾಸ್ಕ್‌ಮ್ಯಾನ್ ಮೊದಲ ಪತ್ನಿಯಿಂದ ‌ಸ್ಪೋಟಕ ಹೇಳಿಕೆ

ಮಾಸ್ಕ್‌ಮ್ಯಾನ್ ರಹಸ್ಯಕ್ಕೆ ಮತ್ತೊಂದು ಟ್ವಿಸ್ಟ್ ಮಂಡ್ಯ: ಧರ್ಮಸ್ಥಳ ಪ್ರಕರಣದ ಮಾಸ್ಕ್‌ಮ್ಯಾನ್‌ನ ಮೊದಲ ಪತ್ನಿ ಆತನ ಬಗ್ಗೆ ಹೇಳಿಕೆ ನೀಡಿದ್ದು, ಆಕೆಯ ಹೇಳಿಕೆ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಮಾಧ್ಯಮಗಳ ಜೊತೆ ಮಾತನಾಡಿದ ಮಾಸ್ಕ್‌ಮ್ಯಾನ್ ಪತ್ನಿ, ಆತ ಮಹಾ ಸುಳ್ಳುಗಾರ, ಮೋಸಗಾರ ಎಂದಿದ್ದಾರೆ. ನಾನು ಅವನ ಜೊತೆ 7 ವರ್ಷ ಸಂಸಾರ ಮಾಡಿದ್ದೆ. ನಮಗೆ ಒಂದು ಗಂಡು, ಒಂದು ಹೆಣ್ಣು ಮಕ್ಕಳಿದ್ದಾರೆ. ಅವನ ಬಳಿ ಒಂದೇ ಒಂದು ಒಳ್ಳೆಯ ಗುಣಗಳಿರಲಿಲ್ಲ. ನನಗೆ ಹೊಡೆಯುವುದು, ಬಡಿಯುವುದು ಮಾಡುತ್ತಿದ್ದ. ವಿಚ್ಚೇದನ ವೇಳೆ ಜೀವನಾಂಶ

ಧರ್ಮಸ್ಥಳ ಪ್ರಕರಣದ ಮಾಸ್ಕ್‌ಮ್ಯಾನ್ ಮೊದಲ ಪತ್ನಿಯಿಂದ ‌ಸ್ಪೋಟಕ ಹೇಳಿಕೆ Read More »

ಕಾಂಗ್ರೆಸ್ ನಾಯಕಿ ಕುಸುಮಾ ‌ಮನೆ ಮೇಲೆ ED ದಾಳಿ

ಬೆಂಗಳೂರು: ರಾಜರಾಜೇಶ್ವರಿ ನಗರದ ಕಾಂಗ್ರೆಸ್ ನಾಯಕಿ ಕುಸುಮಾ ಮನೆ ಮೇಲೆ ED ದಾಳಿ ನಡೆಸಿದೆ. ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಎಂಬವರ ಜೊತೆಗೆ ಹಣಕಾಸಿನ ವ್ಯವಹಾರ ಮಾಡಿದ್ದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ. ಇಂದು ಬೆಳಗ್ಗಿನಿಂದಲೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಇಂದು ED ಅಧಿಕಾರಿಗಳು ರಾಜ್ಯದ ವಿವಿಧ ಕಡೆಗಳಲ್ಲಿ ಮತ್ತು ಗೋವಾದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಕಾಂಗ್ರೆಸ್ ನಾಯಕಿ ಕುಸುಮಾ ‌ಮನೆ ಮೇಲೆ ED ದಾಳಿ Read More »

RSS ಗೀತೆ ಹಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: ಆರ್‌ಎಸ್‌ಎಸ್ ಗೀತೆ ‘ನಮಸ್ತೇ ಸದಾ ವತ್ಸಲೇ’ ಯನ್ನು ವಿಧಾನಸಭೆಯಲ್ಲಿ ಹಾಡುವ ಮೂಲಕ ಕಾಂಗ್ರೆಸ್ ನಾಯಕ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ವಿಧಾನ‌ಸೌಧದಲ್ಲಿ ಕೆಲ ಸಮಯದ ಹಿಂದೆ ನಡೆದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಕಾಲ್ತುಳಿತ ಪ್ರಕರಣದ ಚರ್ಚೆ ವೇಳೆ ಈ ಘಟನೆ ನಡೆದಿದೆ. RCB ಗೆಲುವಿನಲ್ಲಿ ಡಿ.ಕೆ. ಶಿವಕುಮಾರ್ ಪಾಲ್ಗೊಂಡ ಪ್ರಸ್ತಾಪ ಬಂದಾಗ ಉತ್ತರಿಸಿದ ಅವರು, ನಾನು ಕ್ರಿಕೆಟ್ ಅಭಿಮಾನಿ. ಕೆ.ಎಸ್.ಸಿ.ಎ. ಸದಸ್ಯ, ಕ್ರೀಡಾಂಗಣಕ್ಕೆ ಹೋಗಿ ಕಪ್‌ಗೂ ಮುತ್ತು ಕೊಟ್ಟು ಬಂದಿದ್ದೆ ಎಂದರು. ಹಾಗೆಯೇ

RSS ಗೀತೆ ಹಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ Read More »

error: Content is protected !!
Scroll to Top